- Home
- News
- India News
- India Latest News Live: ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಹೊರಟೋಯ್ತು! ಚಿನ್ನ ದಿಢೀರ್ ಕುಸಿತಕ್ಕೆ ಕಾರಣ ಯುದ್ಧವಲ್ಲ! ಮತ್ತೇನು?
India Latest News Live: ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಹೊರಟೋಯ್ತು! ಚಿನ್ನ ದಿಢೀರ್ ಕುಸಿತಕ್ಕೆ ಕಾರಣ ಯುದ್ಧವಲ್ಲ! ಮತ್ತೇನು?

ವಾಷಿಂಗ್ಟನ್: ಮಧ್ಯಪ್ರಾಚ್ಯ 22ನೇ ದಿನಕ್ಕೆ ಕಾಲಿಡುತ್ತಿದ್ದಂತೆಯೇ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯ ತೀವ್ರತೆ ಕಡಿಮೆ ಮಾಡುವ ಸುಳಿವು ನೀಡಿದ್ದಾರೆ. ಈ ಸಂಘರ್ಷದಲ್ಲಿ ನಮ್ಮ ಗುರಿಸಾಧನೆಯ ತೀರಾ ಸನಿಹದಲ್ಲಿದ್ದೇವೆ ಎಂದಿರುವ ಅವರು, ಹೊರ್ಮುಜ್ ಜಲಸಂಧಿಯಲ್ಲಿ ವಾಣಿಜ್ಯ ಹಡಗುಗಳ ಸಂಚಾರಕ್ಕೆ ರಕ್ಷಣೆ ಒದಗಿಸುವ ಜವಾಬ್ದಾರಿಯನ್ನು ಇತರೆ ದೇಶಗಳೂ ವಹಿಸಿಕೊಳ್ಳಬೇಕು ಎಂದು ಆಗ್ರಹಿಸಿದ್ದಾರೆ.
ಈ ಕುರಿತು ತಮ್ಮ ಸಾಮಾಜಿಕ ಜಾಲತಾಣ ಟ್ರುಥ್ ಸೋಶಿಯಲ್ನಲ್ಲಿ ಪೋಸ್ಟ್ ಹಾಕಿರುವ ಅವರು, ಹಲವು ವಾರಗಳ ತೀವ್ರ ಕದನದ ಬಳಿಕ ಇದೀಗ ಅಮೆರಿಕವು ಇರಾನ್ ಮೇಲಿನ ಮಿಲಿಟರಿ ಕಾರ್ಯಾಚರಣೆಯ ತೀವ್ರತೆಯನ್ನು ಕಡಿಮೆಗೊಳಿಸುವ ಕುರಿತು ಪರಿಶೀಲನೆ ನಡೆಸುತ್ತಿದೆ. ಇರಾನ್ನ ಕ್ಷಿಪಣಿ ಸಾಮರ್ಥ್ಯ ಕುಗ್ಗಿಸಲಾಗಿದೆ, ರಕ್ಷಣಾ ಕೈಗಾರಿಕಾ ನೆಲೆ ನಾಶ ಮಾಡಲಾಗಿದೆ ಮತ್ತು ನೌಕೆ ಮತ್ತು ವಾಯುುಪಡೆಯ ಸಾಮರ್ಥ್ಯವನ್ನು ಧ್ವಂಸ ಮಾಡುವ ಪ್ರಮುಖ ಗುರಿಸಾಧನೆ ಮಾಡಲಾಗಿದೆ ಎಂದು ಹೇಳಿದ್ದಾರೆ. ಇದರ ಜತೆಗೆ, ಇರಾನ್ ಯಾವತ್ತಿಗೂ ಅಣ್ವಸ್ತ್ರ ಅಭಿವೃದ್ಧಿಪಡಿಸದಂತೆ ನೋಡಿಕೊಳ್ಳಲಾಗುವುದು ಎಂದು ಪುನರುಚ್ಚರಿಸಿದ್ದಾರೆ.
ಈ ನಡುವೆ, ನಾವು ನಮ್ಮ ಮಧ್ಯಪ್ರಾಚ್ಯದ ಮಿತ್ರರಾಷ್ಟ್ರಗಳಾದ ಇಸ್ರೇಲ್, ಸೌದಿಅರೇಬಿಯಾ, ಕತಾರ್ ಮತ್ತು ಯುಎಇ, ಬಹರೈನ್, ಕುವೈಟ್ ಮತ್ತು ಇತರೆ ರಾಷ್ಟ್ರಗಳನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.
India Latest News Live 23 March 2026 ಸುರಕ್ಷಿತ ಹೂಡಿಕೆ ಎಂಬ ನಂಬಿಕೆ ಹೊರಟೋಯ್ತು! ಚಿನ್ನ ದಿಢೀರ್ ಕುಸಿತಕ್ಕೆ ಕಾರಣ ಯುದ್ಧವಲ್ಲ! ಮತ್ತೇನು?
India Latest News Live 23 March 2026 Dhurandhar 2 ನೋಡಿ ತಲೆ ಕೆಟ್ಟುಹೋಯ್ತು - ರಣವೀರ್ ಸಿನಿಮಾ ನೋಡಿ ನಾಗಾರ್ಜುನ ಹೀಗಾ ಹೇಳೋದು!
ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಥಿಯೇಟರ್ಗೆ ಬಂದ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರ, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
India Latest News Live 23 March 2026 20 ಬಾರಿ ಬೇಯಿಸಿದರೂ ಬೇಯದ ತಲೆಮಾಂಸ - ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದವನಿಗೆ ನ್ಯಾಯ ನೀಡಿದ ಪೊಲೀಸರು
ಯುಗಾದಿ ಹಬ್ಬಕ್ಕೆ ಖರೀದಿಸಿದ ಮೇಕೆಯ ತಲೆ ಮಾಂಸವು 20 ಬಾರಿ ಬೇಯಿಸಿದರೂ ಬೆಂದಿಲ್ಲವೆಂದು ವ್ಯಕ್ತಿಯೊಬ್ಬರು ಮಾಂಸದ ಪಾತ್ರೆಯೊಂದಿಗೆ ಠಾಣೆಗೆ ಬಂದು ಪೊಲೀಸರಿಗೆ ದೂರು ನೀಡಿದ ವಿಚಿತ್ರ ಘಟನೆಯೊಂದು ನಡೆದಿದೆ.
India Latest News Live 23 March 2026 ಪಾಕಿಗಳ ನಿದ್ದೆಗೆಡಿಸಿದ ದುರಂಧರ್-2! ಕನಸಲ್ಲೂ ಭಾರತದ ರಾ ಏಜೆಂಟ್ಸ್- ಈ ವಿಡಿಯೋ ನೋಡಿ
India Latest News Live 23 March 2026 Dhurandhar 2 - ಬ್ಯಾನ್ ಮಾಡಿದ್ರೂ ಡೋಂಟ್ ಕೇರ್! ಪಾಕ್ನಲ್ಲಿ 'ಧುರಂಧರ್ 2' ಪೈರಸಿ ಹಾವಳಿ, ಕೋಟಿ ಕೋಟಿ ನಷ್ಟ!
ಸಿನಿಮಾ ಮಂದಿಗೆ ಪೈರಸಿ ಅನ್ನೋದು ಯಾವಾಗ್ಲೂ ದೊಡ್ಡ ತಲೆನೋವು. ಅದರಲ್ಲೂ ಈಗಿನ ಟೆಕ್ನಾಲಜಿ ಯುಗದಲ್ಲಿ, ಪೈರಸಿ ಕಾಪಿಗಳನ್ನು ತಡೆಯೋದು ದೊಡ್ಡ ಸವಾಲಿನ ಕೆಲಸ. ಅವು ಹರಡುವುದನ್ನು ತಡೆಯುವುದು ಬಹುತೇಕ ಅಸಾಧ್ಯ.
India Latest News Live 23 March 2026 ಭಾರತೀಯರು ಹೆಚ್ಚು ಆಸಕ್ತಿ ಹೊಂದಿರುವ ದುಬೈ ರಿಯಲ್ ಎಸ್ಟೇಟ್ ಸಾಮ್ರಾಜ್ಯ ತೀವ್ರ ಹೊಡೆತ, 1ತಿಂಗಳಲ್ಲಿ ಶೇ.44 ಕುಸಿತ!
India Latest News Live 23 March 2026 Skin Tanning - ಬಿಸಿಲಿಗೆ ಕಪ್ಪಾದ ಚರ್ಮಕ್ಕೆ ಗುಡ್ ಬೈ ಹೇಳಿ! ದುಬಾರಿ ಕ್ರೀಮ್ ಬೇಡ, ಈ 5 ಮನೆಮದ್ದು ಸಾಕು
ಬೇಸಿಗೆ ಶುರುವಾಯ್ತು ಅಂದ್ರೆ ಸಾಕು, ಸ್ಕಿನ್ ಕಪ್ಪಾಗೋ ಚಿಂತೆ ಶುರು. ಸುಡು ಬಿಸಿಲು ಚರ್ಮವನ್ನು ಟ್ಯಾನ್ ಮಾಡುತ್ತೆ. ಮೊದಲೇ ಸ್ವಲ್ಪ ಕೇರ್ ಮಾಡಿದ್ರೆ, ಸ್ಕಿನ್ ಡ್ಯಾಮೇಜ್ ಆಗೋದನ್ನು ತಪ್ಪಿಸಬಹುದು. ಇವು ಚರ್ಮಕ್ಕೆ ತಂಪು ನೀಡಿ, ಹೊಳಪು ಕೊಡುತ್ತವೆ.
India Latest News Live 23 March 2026 ಇರಾನ್ ಈ ಒಂದು ಅಪಾಯಕ ಹೆಜ್ಜೆ ಇಟ್ಟರೆ ಇಡೀ ವಿಶ್ವವೇ ಸ್ತಬ್ಧ! ಇಂಟರ್ನೆಟ್ ಇಲ್ಲದೇ ಜಗತ್ತು ಅಲ್ಲೋಲ ಕಲ್ಲೋಲ
India Latest News Live 23 March 2026 ಈ ಜಾಗದಲ್ಲಿ ಕಿಸ್ ಕೊಡೋ ಮುನ್ನ ಎಚ್ಚರ! ಗೆಳತಿ ಕೊಟ್ಟ ಮುತ್ತಿನಿಂದ ರಕ್ತ ಹೆಪ್ಪುಗಟ್ಟಿ ಯುವಕನ ಸಾವು- ಆಗಿದ್ದೇನು
India Latest News Live 23 March 2026 3 ದಿನಗಳಲ್ಲಿ 500 ಕೋಟಿ - ಬಾಕ್ಸಾಫೀಸ್ನಲ್ಲಿ ಹೊಸ ಇತಿಹಾಸ ಬರೆದ 'ಧುರಂಧರ್ 2'
ರಿಲೀಸ್ ಆದ ಮೂರೇ ದಿನದಲ್ಲಿ ವಿಶ್ವಮಟ್ಟದಲ್ಲಿ 500 ಕೋಟಿ ರು. ಕ್ಲಬ್ ಸೇರುವ ಮೂಲಕ ಧುರಂಧರ್ 2 ಹೊಸ ದಾಖಲೆ ಬರೆದಿದೆ. ಸದ್ಯಕ್ಕೀಗ ಸಿನಿಮಾದ ಒಟ್ಟು ಗಳಿಕೆ 505 ಕೋಟಿ ರು.ಗೂ ಅಧಿಕ ಎಂದು ಅಂದಾಜಿಸಲಾಗಿದೆ.
India Latest News Live 23 March 2026 ಯುಎಸ್ ಏರ್ಪೋರ್ಟ್ ಭದ್ರತಾ ಅಧಿಕಾರಿಗಳಿಗೆ ಸ್ಯಾಲರಿ ನೀಡೋದಾಗಿ ಎಲಾನ್ ಮಸ್ಕ್ ಹೇಳಿದ್ದೇಕೆ? ಟ್ರಂಪ್ ಸರ್ಕಾರಕ್ಕೆ ಏನಾಗಿದೆ?
ಇರಾನ್ ಯುದ್ಧಕ್ಕೆ ಶತಕೋಟಿ ಡಾಲರ್ ವ್ಯಯಿಸುತ್ತಿರುವ ಅಮೆರಿಕಾ ತನ್ನ ದೇಶದಲ್ಲಿ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿಗೆ ಫೆಬ್ರವರಿಯಿಂದ ವೇತನ ನೀಡಿಲ್ಲ. ಈ ಬಿಕ್ಕಟ್ಟಿನ ವೇಳೆ ಉದ್ಯಮಿ ಎಲಾನ್ ಮಸ್ಕ್ ಸಂಬಳ ನೀಡಲು ಮುಂದಾಗಿದ್ದು, ಇದಕ್ಕೆ ಪ್ರತಿಯಾಗಿ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದೇನು
India Latest News Live 23 March 2026 ತಮಿಳುನಾಡಿನಲ್ಲಿ ಎನ್ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ
ತಮಿಳುನಾಡಿನಲ್ಲಿ ಎನ್ಡಿಎ ಸೀಟು ಹಂಚಿಕೆ ಫೈನಲ್, 234 ಸ್ಥಾನ ಪೈಕಿ ಬಿಜೆಪಿಗೆ ಸಿಕ್ಕಿದ್ದು 27 ಸೀಟು ಮಾತ್ರ, ಎಐಎಡಿಎಂಕೆ ಭಾರಿ ಮೇಲುಗೈ ಸಾಧಿಸಿದೆ. ಚುನಾವಣಾ ಆರಂಭಕ್ಕೂ ಮೊದಲೇ ಬಿಜೆಪಿ ಕಾರ್ಯಕರ್ತರು ನಿರಾಸೆ ಅನುಭವಿಸಿದ್ದಾರೆ.
India Latest News Live 23 March 2026 ಹೋರ್ಮುಜ್ ಸಂಕಷ್ಟ - ಒಡೆಯಲು ಕಬ್ಬಿಣದ ಕಡಲೆಯಾದ ಇರಾನಿನ ವಿದ್ಯುತ್ ಜಾಲ
ದೊಡ್ಡದಾದ ವಿದ್ಯುತ್ ಘಟಕಗಳನ್ನು ನಾಶಪಡಿಸುವುದು ಸುಲಭವಲ್ಲ. ದಮಾವಂದ್ ನಂತಹ ವಿದ್ಯುತ್ ಘಟಕ ಬಹಳಷ್ಟು ತಂಪಾಗಿಸುವ ಟವರ್ಗಳನ್ನು ಹೊಂದಿದ್ದು, 494 ಎಕರೆಗೂ ಹೆಚ್ಚಿನ ಪ್ರದೇಶದಲ್ಲಿ ವ್ಯಾಪಿಸಿವೆ.
India Latest News Live 23 March 2026 ಧುರಂಧರ್-2 - ಜಗತ್ತನ್ನೇ ಗೆದ್ದ ರಣವೀರ್ಗೆ ಸಿಗ್ಲಿಲ್ಲ ಪತ್ನಿಯ ಮೆಚ್ಚುಗೆ..! ಹೆಂಡತಿ ಲೆಫ್ಟ್, ಗಂಡ ರೈಟ್..!
India Latest News Live 23 March 2026 ವಿಮಾನದಲ್ಲಿ ಶವದೊಂದಿಗೆ 13 ಗಂಟೆಗಳ ಪ್ರಯಾಣ ಮಾಡಿದ 331 ಪ್ರಯಾಣಿಕರು - ಆಗಿದ್ದೇನು?
ವಿಮಾನ ಟೇಕಾಫ್ ಆದ ಒಂದು ಗಂಟೆಯ ನಂತರ ಮಹಿಳೆಯೊಬ್ಬರು ವಿಮಾನದಲ್ಲೇ ಸಾವನ್ನಪ್ಪಿದ್ದಾರೆ. ಆದರೆ ಈ ಸಮಯದಲ್ಲಿ ವಿಮಾನ ತುರ್ತು ಲ್ಯಾಂಡಿಂಗ್ ಮಾಡದೇ ಪಯಣ ಮುಂದುವರೆಸಿದ ಕಾರಣ ವಿಮಾನದ ಪ್ರಯಾಣಿಕರು ಬರೋಬ್ಬರಿ 13 ಗಂಟೆಗಳ ಕಾಲ ವಿಮಾನದಲ್ಲಿ ಶವದೊಂದಿಗೆ ಸಂಚರಿಸುವಂತಾಗಿದೆ.
India Latest News Live 23 March 2026 ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ
ಇರಾನ್ ಯುದ್ಧದಲ್ಲಿ ಕಂಗಾಲದ ಪಾಕಿಸ್ತಾನ, ಪೆಟ್ರೋಲ್ ಬೆಲೆ ಶೇಕಡಾ 200ರಷ್ಟು ಹೆಚ್ಚಳ, ಭಾರತದಲ್ಲಿ 2 ರೂಪಾಯಿ ಏರಿಕೆ ಮಾಡಲಾಗಿದೆ. ಆದರೆ ಪಾಕಿಸ್ತಾನದಲ್ಲಿ ಬರೋಬ್ಬರಿ 200 ಪರ್ಸೆಂಟ್ ಏರಿಕೆಯಾಗಿದೆ.
India Latest News Live 23 March 2026 ಮಧ್ಯಾಹ್ನದ ವೇಳೆಗೆ ಪಾತಾಳಕ್ಕಿಳಿದ ಬಂಗಾರದ ಬೆಲೆ! ಈಗ ಒಂದು ಗ್ರಾಮ್ಗೆ ಒಂದು ಸಾವಿರ ರುಪಾಯಿ ಕುಸಿತ!
ಬೆಂಗಳೂರು: ಚಿನ್ನ ಖರೀದಿಸಲು ಕಾಯುತ್ತಿದ್ದ ಆಭರಣ ಪ್ರಿಯರಿಗೆ ಸೋಮವಾರ ಭರ್ಜರಿ ಸಿಹಿಸುದ್ದಿ ಸಿಕ್ಕಿದೆ. ಸತತವಾಗಿ ಇಳಿಕೆ ಹಾದಿ ಕಂಡಿರುವ ಚಿನ್ನದ ಬೆಲೆ ಇಂದು ಮಧ್ಯಾಹ್ನದ ವೇಳೆಗೆ ಒಂದು ಗ್ರಾಮ್ಗೆ ಒಂದು ಸಾವಿರ ರುಪಾಯಿ ಇಳಿಕೆಯಾಗಿದೆ. ಈ ಕುರಿತಾದ ಅಪ್ಡೇಟ್ಸ್ ಇಲ್ಲಿದೆ ನೋಡಿ.
India Latest News Live 23 March 2026 ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್
ಅಪಘಾತದಲ್ಲಿ ಮಹಿಳೆ ಸಾವು, ಕಾರು ಗುದ್ದಿದ ಆರೋಪಿಯ ಜಾಮೀನು ಎತ್ತಿಹಿಡಿದ ಸುಪ್ರೀಂ ಕೋರ್ಟ್, ಇತ್ತ ಮಹಿಳೆಯ ಕುಟುಂಬಸ್ಥರು ಕಣ್ಣೀರಿನಲ್ಲಿ ಕೈತೊಳೆಯುತ್ತಿದ್ದಾರೆ. ಇತರ 7 ಗಾಯಗೊಂಡ ವ್ಯಕ್ತಿಗಳ ಕುಟುಂಬಸ್ಥರು ಆಕ್ರೋಶ ಹೊರಹಾಕಿದ್ದಾರೆ.
India Latest News Live 23 March 2026 ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಇಂಜೆಕ್ಷನ್ ಕೊಟ್ಟು 4 ತಿಂಗಳು ರೇ*ಪ್! ಡಾ.ಖಾನ್ ಅರೆಸ್ಟ್
ಚಿಕಿತ್ಸೆಗೆ ಬಂದ ಯುವತಿಗೆ ಅರಿವಳಿಕೆ ಚುಚ್ಚುಮದ್ದು ನೀಡಿ ನಾಲ್ಕು ತಿಂಗಳ ಕಾಲ ಅತ್ಯಾ*ಚಾರ ಎಸಗಿದ ವೈದ್ಯನನ್ನು ಬಂಧಿಸಲಾಗಿದೆ. ಆರೋಪಿ, ಯುವತಿಯ ಅಶ್ಲೀಲ ಫೋಟೋಗಳನ್ನು ಬಳಸಿ ಬ್ಲ್ಯಾಕ್ಮೇಲ್ ಮಾಡುತ್ತಿದ್ದನು ಮತ್ತು ರೆಸಾರ್ಟ್ನಲ್ಲಿ ಸಿಕ್ಕಿಬಿದ್ದಿದ್ದಾನೆ.
India Latest News Live 23 March 2026 ಚಾಂಪಿಯನ್ಸ್ ಅಷ್ಟೇ ಅಲ್ಲ, ಐಪಿಎಲ್ನ ಅತ್ಯಂತ ಶ್ರೀಮಂತ ತಂಡವೂ ನಮ್ಮ ಆರ್ಸಿಬಿಯೇ! ಬ್ರ್ಯಾಂಡ್ ವ್ಯಾಲ್ಯೂದಲ್ಲಿ CSKಗೆ ಎಷ್ಟನೇ ಸ್ಥಾನ?
ಬೆಂಗಳೂರು: 19ನೇ ಸೀಸನ್ ಐಪಿಎಲ್ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಹೀಗಿರುವಾಗಲೇ ಆರ್ಸಿಬಿ ತಂಡವು ಬ್ರ್ಯಾಂಡ್ ವ್ಯಾಲ್ಯೂ ವಿಚಾರದಲ್ಲಿ ಐದು ಬಾರಿಯ ಚಾಂಪಿಯನ್ಗಳಾದ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಹಿಂದಿಕ್ಕಿ ನಂ.1 ಸ್ಥಾನಕ್ಕೆ ಲಗ್ಗೆಯಿಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ.