ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಥಿಯೇಟರ್ಗೆ ಬಂದ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರ, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೆಂಜ್' ಬಾಕ್ಸ್ ಆಫೀಸ್ನಲ್ಲಿ ಧೂಳೆಬ್ಬಿಸುತ್ತಿದೆ. ಹಲವು ಸ್ಟಾರ್ಗಳು ಮೆಚ್ಚಿರುವ ಈ ಚಿತ್ರವನ್ನು ಇದೀಗ ನಾಗಾರ್ಜುನ ಅಕ್ಕಿನೇನಿ ಹೊಗಳಿದ್ದಾರೆ. ಆದಿತ್ಯ ಧರ್ ನಿರ್ದೇಶನದ ಈ ಸಿನಿಮಾ 'ನಂಬಲಾಗದ್ದು', ಇದು ನನ್ನ ತಲೆ ಕೆಡಿಸಿದೆ ಹಾಗೂ ಸಿನಿಮಾ ಮಾಡುವವರಿಗೆ ಸ್ಫೂರ್ತಿ ನೀಡುತ್ತದೆ ಎಂದಿದ್ದಾರೆ.
ಆದಿತ್ಯ ಧರ್ ನಿರ್ದೇಶನದ 'ಧುರಂಧರ್: ದಿ ರಿವೆಂಜ್' ಸಿನಿಮಾ ಥಿಯೇಟರ್ಗೆ ಬಂದ ದಿನದಿಂದಲೇ ಬಾಕ್ಸ್ ಆಫೀಸ್ನಲ್ಲಿ ಭರ್ಜರಿ ಕಲೆಕ್ಷನ್ ಮಾಡುತ್ತಿದೆ. ಮಾರ್ಚ್ 19 ರಂದು ಬಿಡುಗಡೆಯಾದ ಈ ಚಿತ್ರ, ಸದ್ಯ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ. ಪ್ರೇಕ್ಷಕರಿಂದಲೂ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ರಣವೀರ್ ಸಿಂಗ್ ಮುಖ್ಯಭೂಮಿಕೆಯಲ್ಲಿರುವ ಈ ಸಿನಿಮಾವನ್ನು ಈಗಾಗಲೇ ಮಹೇಶ್ ಬಾಬು, ರಾಮ್ ಚರಣ್, ಅಲ್ಲು ಅರ್ಜುನ್, ರಾಜ್ಕುಮಾರ್ ರಾವ್ ಮತ್ತು ಆಯುಷ್ಮಾನ್ ಖುರಾನಾರಂತಹ ಹಲವು ಸೆಲೆಬ್ರಿಟಿಗಳು ನೋಡಿ ಹೊಗಳಿದ್ದಾರೆ.
'ಧುರಂಧರ್: ದಿ ರಿವೆಂಜ್' ಚಿತ್ರಕ್ಕೆ ನಾಗಾರ್ಜುನ ಮೆಚ್ಚುಗೆ
ಈಗ, ತೆಲುಗು ಸೂಪರ್ಸ್ಟಾರ್ ನಾಗಾರ್ಜುನ ಅಕ್ಕಿನೇನಿ ಕೂಡ ತಮ್ಮ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಎಕ್ಸ್ನಲ್ಲಿ (ಹಿಂದಿನ ಟ್ವಿಟರ್) ಪೋಸ್ಟ್ ಮಾಡಿರುವ ಅವರು, ಈ ಸಿನಿಮಾ ತಮ್ಮ 'ತಲೆ ಕೆಡಿಸಿದೆ' (blew my mind) ಮತ್ತು ಅದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ ಎಂದು ಹೇಳಿದ್ದಾರೆ.
ಸಿನಿಮಾ ನೋಡಿದ ಅನುಭವವನ್ನು ಹಂಚಿಕೊಂಡ ನಾಗಾರ್ಜುನ, "#DhurandharTheRevenge ಎಂಬ ಅದ್ಭುತ ಸಿನಿಮಾ ನೋಡಿದೆ!!! ಎಂಥಾ ಅನುಭವ! ಇದು ನನ್ನ ತಲೆಯನ್ನು ಕೆಡಿಸಿಬಿಟ್ಟಿದೆ, ಇದರ ಬಗ್ಗೆ ಯೋಚಿಸುವುದನ್ನು ನಿಲ್ಲಿಸಲು ಸಾಧ್ಯವಾಗುತ್ತಿಲ್ಲ. ಸಿನಿಮಾ ಮೇಕಿಂಗ್ ಅನ್ನೇ ಬದಲಿಸುವ ಮತ್ತು ಸ್ಫೂರ್ತಿ ನೀಡುವ ಕೆಲವೇ ಕೆಲವು ಚಿತ್ರಗಳಲ್ಲಿ ಇದೂ ಒಂದು!" ಎಂದು ಬರೆದುಕೊಂಡಿದ್ದಾರೆ. ಅವರು ನಿರ್ದೇಶಕ ಆದಿತ್ಯ ಧರ್ ಮತ್ತು ಇಡೀ ತಂಡವನ್ನು ಶ್ಲಾಘಿಸಿದ್ದಾರೆ.
ನಿರ್ದೇಶಕರನ್ನು 'ಸ್ಫೂರ್ತಿದಾಯಕ' ಎಂದು ಕರೆದ ನಾಗಾರ್ಜುನ, ಚಿತ್ರದ ಯಶಸ್ಸಿಗೆ ಕಾರಣರಾದ ಪ್ರತಿಯೊಬ್ಬರಿಗೂ ಅಭಿನಂದನೆ ಸಲ್ಲಿಸಿದ್ದಾರೆ. "ಈ ಸ್ಫೂರ್ತಿದಾಯಕ ನಿರ್ದೇಶಕ @AdityaDharFilms ಮತ್ತು ಕ್ಯಾಮೆರಾ, ಸಂಗೀತ, ಸೌಂಡ್ ಡಿಸೈನ್, ಆಕ್ಷನ್, ಆರ್ಟ್ ಸೇರಿದಂತೆ ಇಡೀ ತಾಂತ್ರಿಕ ತಂಡಕ್ಕೆ ನನ್ನ ಹೃತ್ಪೂರ್ವಕ ಅಭಿನಂದನೆಗಳು. ಎಲ್ಲಾ ನಟರಿಗೂ ನನ್ನದೊಂದು ಬಿಗ್ ಶೌಟೌಟ್, ನೀವೆಲ್ಲರೂ ಅದ್ಭುತವಾಗಿ ನಟಿಸಿದ್ದೀರಿ" ಎಂದು ಎಕ್ಸ್ನಲ್ಲಿ ಬರೆದಿದ್ದಾರೆ.
'ಧುರಂಧರ್: ದಿ ರಿವೆಂಜ್' ಬಗ್ಗೆ
ಆದಿತ್ಯ ಧರ್ 'ಧುರಂಧರ್: ದಿ ರಿವೆಂಜ್' ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದು 2025ರಲ್ಲಿ ಬಂದ 'ಧುರಂಧರ್' ಚಿತ್ರದ ಸೀಕ್ವೆಲ್ ಆಗಿದೆ. ಈ ಚಿತ್ರದಲ್ಲಿ ರಣವೀರ್ ಸಿಂಗ್, ಅರ್ಜುನ್ ರಾಂಪಾಲ್, ಸಂಜಯ್ ದತ್, ಆರ್. ಮಾಧವನ್, ಸಾರಾ ಅರ್ಜುನ್, ರಾಕೇಶ್ ಬೇಡಿ, ಗೌರವ್ ಗೆರಾ, ಡ್ಯಾನಿಶ್ ಪಂಡೋರ್ ಮತ್ತು ಮಾನವ್ ಗೋಹಿಲ್ ಸೇರಿದಂತೆ ದೊಡ್ಡ ತಾರಾಬಳಗವೇ ಇದೆ.


