10:45 PM (IST) Apr 17

India Latest News Live 17 April 2026ನೂರಾರು ಮಹಿಳೆಯರ ಅನುಭವಿಸಿದ ಕಾಮಿ ಜ್ಯೋತಿಷಿ ಅಶೋಕ್‌ ಖರಾತ್‌ ಆಪ್ತ ಸಹಚರ ಆಕ್ಸಿಡೆಂಟ್‌ನಲ್ಲಿ ಸಾವು!

ಕಾಮಿ ಬಾಬಾ ಅಶೋಕ್ ಖರಾತ್ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದ, ಆತನ ಆಪ್ತ ಜಿತೇಂದ್ರ ಶೆಲ್ಕೆ ರಸ್ತೆ ಅಪಘಾತದಲ್ಲಿ ಪತ್ನಿ ಸಮೇತ ಸಾವನ್ನಪ್ಪಿದ್ದಾರೆ. ಛತ್ರಪತಿ ಸಂಭಾಜಿನಗರ-ಶಿರಡಿ ರಸ್ತೆಯಲ್ಲಿ ನಿಂತಿದ್ದ ಕಂಟೇನರ್‌ಗೆ ಇವರ ಕಾರು ಡಿಕ್ಕಿ ಹೊಡೆದಿದೆ.

Read Full Story
10:16 PM (IST) Apr 17

India Latest News Live 17 April 2026ಹೊಸ ಬೈಕ್ ಖರೀದಿಸುವ ಪ್ಲ್ಯಾನ್ ಇದೆಯೇ? ಶೋರೂಮ್‌ಗೆ ಹೋಗುವ ಮುನ್ನ ಈ 5 ವಿಷಯ ಮರೆಯಬೇಡಿ!

ಹೊಸ ಬೈಕ್ ಖರೀದಿಸುವುದು ಒಂದು ದೊಡ್ಡ ಹೂಡಿಕೆಯಾಗಿದ್ದು, ಕೇವಲ ವಿನ್ಯಾಸ ನೋಡಿ ನಿರ್ಧರಿಸುವುದು ತಪ್ಪು. ಖರೀದಿಯ ಮೊದಲು ಬಜೆಟ್, ಮೈಲೇಜ್, ನಿರ್ವಹಣಾ ವೆಚ್ಚ, ಮತ್ತು ಅಗತ್ಯ ಫೀಚರ್‌ಗಳನ್ನು ಪರಿಗಣಿಸುವುದು ಬಹಳ ಮುಖ್ಯ. 

Read Full Story
09:43 PM (IST) Apr 17

India Latest News Live 17 April 2026Chiyaan Vikram - ಡಬ್ಬಿಂಗ್ ಆರ್ಟಿಸ್ಟ್‌ನಿಂದ ಟಾಪ್ ಹೀರೋವರೆಗೆ... ನಟ ವಿಕ್ರಮ್ ಶಿಖರ ಮುಟ್ಟಿದ ಕಥೆ ಗೊತ್ತಾ?

ನಟ ವಿಕ್ರಮ್ ಇಂದು ತಮ್ಮ 60ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಅವರು ಸಿನಿಮಾದಲ್ಲಿ ಪಟ್ಟ ಕಷ್ಟಗಳು, ಅದರಿಂದ ಫೀನಿಕ್ಸ್ ಹಕ್ಕಿಯಂತೆ ಮತ್ತೆ ಮೇಲೆದ್ದು ಬಂದ ಕಥೆಯನ್ನು ಈ ಗ್ಯಾಲರಿಯಲ್ಲಿ ನೋಡೋಣ.

Read Full Story
09:27 PM (IST) Apr 17

India Latest News Live 17 April 2026ಕನ್ನಡಿಗ ರಾಕೇಶ್‌ ಗಾಂವ್ಕರ್‌ ಸ್ಥಾಪಿಸಿದ ಏರ್‌ ಟ್ಯಾಕ್ಸಿ ಸರಳಾ ಏವಿಯೇಷನ್‌ನಲ್ಲಿ ಪಾಲು ಖರೀದಿಸಿದ ಇಂಡಿಗೋ!

ಇಂಡಿಗೋ ಸಂಸ್ಥೆಯು ಬೆಂಗಳೂರು ಮೂಲದ ಏರ್-ಟ್ಯಾಕ್ಸಿ ಸ್ಟಾರ್ಟ್‌ಅಪ್ 'ಸರಳಾ ಏವಿಯೇಷನ್' ನಲ್ಲಿ 10 ಕೋಟಿ ರೂಪಾಯಿ ಹೂಡಿಕೆ ಮಾಡುವ ಮೂಲಕ ಏರ್-ಟ್ಯಾಕ್ಸಿ ಮಾರುಕಟ್ಟೆಗೆ ಪ್ರವೇಶಿಸಿದೆ. 'ಶೂನ್ಯ' ಹೆಸರಿನ eVTOL ವಿಮಾನಗಳನ್ನು ಅಭಿವೃದ್ಧಿ ಮಾಡುತ್ತಿದೆ.

Read Full Story
07:42 PM (IST) Apr 17

India Latest News Live 17 April 2026ತಪ್ಪು ಟ್ರೇನ್‌ನಿಂದ ಇಳಿಯೋದೆ ಬೆಟರ್ - ವಿಚ್ಛೇದನದ ಬಗ್ಗೆ ಮೌನ ಮುರಿದ ಬಿಂದಾಸ್ ನಟಿ ಹನ್ಸಿಕಾ!

ನಟಿ ಹನ್ಸಿಕಾ ಮೋಟ್ವಾನಿ, ಪತಿ ಸೊಹೈಲ್ ಖತೂರಿಯಾ ಜೊತೆಗಿನ ವಿಚ್ಛೇದನದ ಬಗ್ಗೆ ಇದೇ ಮೊದಲ ಬಾರಿಗೆ ಮಾತನಾಡಿದ್ದಾರೆ. ಈ ಕಷ್ಟದ ಸಮಯದಲ್ಲಿ ತಮ್ಮ ಕುಟುಂಬ ನೀಡಿದ ಬೆಂಬಲವನ್ನು ನೆನೆದಿದ್ದು, ತಾವೀಗ ಭಾವನಾತ್ಮಕವಾಗಿ ಉತ್ತಮ ಸ್ಥಿತಿಯಲ್ಲಿದ್ದೇನೆ ಎಂದು ಹೇಳಿಕೊಂಡಿದ್ದಾರೆ.

Read Full Story
07:42 PM (IST) Apr 17

India Latest News Live 17 April 2026Breaking - ವಿಪಕ್ಷಗಳಿಗೆ ಜಯ, ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಗೆ ಸೋಲು

ಮೋದಿ ಸರ್ಕಾರದ ಮಹತ್ವಾಕಾಂಕ್ಷೆಯ ಮಹಿಳಾ ಮೀಸಲಾತಿ ತಿದ್ದುಪಡಿ ಮಸೂದೆಯು ಲೋಕಸಭೆಯಲ್ಲಿ ಸೋಲು ಕಂಡಿದೆ. ಹೊಸ ಜನಗಣತಿ ಮತ್ತು ಕ್ಷೇತ್ರ ಪುನರ್ವಿಂಗಡಣೆ ಇಲ್ಲದೆ ತ್ವರಿತವಾಗಿ ಜಾರಿಗೊಳಿಸಲು ಯತ್ನಿಸಿದ ಈ ಮಸೂದೆಯು, ಅಗತ್ಯವಾದ ಮೂರನೇ ಎರಡರಷ್ಟು ಬಹುಮತವನ್ನು ಪಡೆಯಲು ವಿಫಲವಾಯಿತು.
Read Full Story
07:28 PM (IST) Apr 17

India Latest News Live 17 April 2026ಸಿನಿಮಾ ಫೋಟೋ - ಹೆಣ್ಣಿನ ಬಗ್ಗೆ ಕಾಂಗ್ರೆಸ್​ ವಕ್ತಾರೆ ಅಶ್ಲೀಲ ಭಾಷೆ- ಸಂಸತ್ತಿನಲ್ಲಿ ಗುಡುಗಿದ Kangana Ranaut

ಸಂಸದೆಯಾದ ಬಳಿಕ ಕಂಗನಾ ರಣಾವತ್, ತಮ್ಮ ಹಳೆಯ ಫೋಟೋ ಬಳಸಿ ಅಶ್ಲೀಲ ಕಮೆಂಟ್ ಮಾಡಿದ್ದ ಕಾಂಗ್ರೆಸ್ ವಕ್ತಾರರ ವಿರುದ್ಧ ಸಂಸತ್ತಿನಲ್ಲಿ ಗುಡುಗಿದ್ದಾರೆ. ನಟಿಯಾಗಿ ಪಾತ್ರಕ್ಕೆ ತಕ್ಕಂತೆ ಬಟ್ಟೆ ಧರಿಸುವುದು ನನ್ನ ಧರ್ಮ ಎಂದ ಅವರು, ಈ ಕೀಳು ಮನಸ್ಥಿತಿಯೇ ಕಾಂಗ್ರೆಸ್ ಸೋಲಿಗೆ ಕಾರಣ ಎಂದು ಹೇಳಿದ್ದಾರೆ.
Read Full Story
07:02 PM (IST) Apr 17

India Latest News Live 17 April 2026ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಚಿತ್ರಿಸಿ 'ವಿಷು' ಹಬ್ಬದ ವಿಶ್‌; ರೆಸ್ಟೋರೆಂಟ್‌ ಮಾಲೀಕ ಆರ್ಶದ್‌ ಅರೆಸ್ಟ್‌!

ಕೇರಳದಲ್ಲಿ ವಿಷು ಹಬ್ಬದ ಶುಭಾಶಯ ಪೋಸ್ಟರ್‌ನಲ್ಲಿ ಶ್ರೀಕೃಷ್ಣನ ಮುಂದೆ ಚಿಕನ್ ಮಂದಿ ಇರಿಸಿದ ಚಿತ್ರವು ತೀವ್ರ ವಿವಾದಕ್ಕೆ ಕಾರಣವಾಗಿದೆ. ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದ ಆರೋಪದ ಮೇಲೆ ರೆಸ್ಟೋರೆಂಟ್ ಮಾಲೀಕನನ್ನು ಬಂಧಿಸಲಾಗಿದೆ.

Read Full Story
06:21 PM (IST) Apr 17

India Latest News Live 17 April 2026Avengers - Doomsday - ಡಾಕ್ಟರ್ ಡೂಮ್ ಆದ ಐರನ್ ಮ್ಯಾನ್, ಕ್ಯಾಪ್ಟನ್ ಅಮೆರಿಕಾ ವಾಪಸ್ - ಧೂಳೆಬ್ಬಿಸಿದ ಟ್ರೇಲರ್!

'ಅವೆಂಜರ್ಸ್: ಡೂಮ್ಸ್‌ಡೇ' ಸಿನಿಮಾದ ಮೊದಲ ಟ್ರೇಲರ್ ಅನ್ನು ನಿರ್ಮಾಪಕರು ಬಿಡುಗಡೆ ಮಾಡಿದ್ದಾರೆ. ವೆರೈಟಿ ವರದಿ ಪ್ರಕಾರ, ಈ ಕಾರ್ಯಕ್ರಮದಲ್ಲಿ ರಾಬರ್ಟ್ ಡೌನಿ ಜೂನಿಯರ್ ಮತ್ತು ಕ್ರಿಸ್ ಇವಾನ್ಸ್ ಕೂಡ ಭಾಗವಹಿಸಿದ್ದರು.

Read Full Story
06:03 PM (IST) Apr 17

India Latest News Live 17 April 2026Street Fighter - ಹಾಲಿವುಡ್‌ಗೆ ಹಾರಿದ ವಿದ್ಯುತ್ ಜಮ್ವಾಲ್ - ಜೇಸನ್ ಮೊಮೊವಾ ಜೊತೆ ಭರ್ಜರಿ ಫೈಟಿಂಗ್

ಎಲ್ಲರೂ ಕಾತುರದಿಂದ ಕಾಯುತ್ತಿದ್ದ 'ಸ್ಟ್ರೀಟ್ ಫೈಟರ್' ಸಿನಿಮಾದ ಟ್ರೇಲರ್ ಕೊನೆಗೂ ಬಿಡುಗಡೆಯಾಗಿದೆ. ಈ ಸಿನಿಮಾದಲ್ಲಿ ಬಾಲಿವುಡ್ ನಟ ವಿದ್ಯುತ್ ಜಮ್ವಾಲ್ ಜೊತೆಗೆ ಹಾಲಿವುಡ್‌ನ ದೊಡ್ಡ ತಾರೆಯರು ನಟಿಸಿದ್ದಾರೆ.

Read Full Story
05:37 PM (IST) Apr 17

India Latest News Live 17 April 2026ಶ್ರೀರಾಮನ ಪಾತ್ರಕ್ಕೆ ರಣಬೀರ್‌ಗಿಂತ ಉತ್ತಮ ಆಯ್ಕೆ ಬೇರೊಂದಿಲ್ಲ - ನಿರ್ಮಾಪಕ ನಮಿತ್ ಮಲ್ಹೋತ್ರಾ

ನಿರ್ಮಾಪಕ ನಮಿತ್ ಮಲ್ಹೋತ್ರಾ ಅವರು ನಟ ರಣಬೀರ್ ಕಪೂರ್ ಜೊತೆಗಿನ ತಮ್ಮ ವೃತ್ತಿಪರ ಮತ್ತು ವೈಯಕ್ತಿಕ ಬಾಂಧವ್ಯವನ್ನು ನೆನಪಿಸಿಕೊಂಡಿದ್ದಾರೆ. 2026ರ TIME ಪಟ್ಟಿಯಲ್ಲಿ ರಣಬೀರ್ ಹೆಸರು ಬಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Read Full Story
05:25 PM (IST) Apr 17

India Latest News Live 17 April 2026ಚಿನ್ನಸ್ವಾಮಿ ಸ್ಟೇಡಿಯಂ ಕ್ಯಾಂಟೀನ್‌ನಲ್ಲಿ ದುಪ್ಪಟ್ಟು ಮೊತ್ತಕ್ಕೆ ಐಪಿಎಲ್ ಟಿಕೆಟ್ ಮಾರುತ್ತಿದ್ದ ಖದೀಮ ಅರೆಸ್ಟ್! KSCA ಸದಸ್ಯನ ಕೈವಾಡ ಶಂಕೆ?

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್ ಟಿಕೆಟ್‌ಗಳನ್ನು ಕಾಳಸಂತೆಯಲ್ಲಿ ದುಬಾರಿ ಬೆಲೆಗೆ ಮಾರಾಟ ಮಾಡುತ್ತಿದ್ದ ಕ್ಯಾಂಟೀನ್ ನೌಕರನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈತನಿಂದ 181 ಟಿಕೆಟ್‌ಗಳನ್ನು ವಶಪಡಿಸಿಕೊಳ್ಳಲಾಗಿದ್ದು, ಇದರ ಹಿಂದೆ ಕೆಎಸ್‌ಸಿಎ ಸದಸ್ಯರ ಕೈವಾಡವಿರುವ ಶಂಕೆ ವ್ಯಕ್ತವಾಗಿದೆ.
Read Full Story
05:21 PM (IST) Apr 17

India Latest News Live 17 April 2026ನನ್ನ ಹೆಸರು, ಧ್ವನಿ ದುರ್ಬಳಕೆ ಆಗ್ತಿದೆ - ಕೋರ್ಟ್ ಮೆಟ್ಟಿಲೇರಿದ ಅಲ್ಲು ಅರ್ಜುನ್, ನ್ಯಾಯಾಲಯದಿಂದಲೇ ಪ್ರಶ್ನೆ!

ನಟ ಅಲ್ಲು ಅರ್ಜುನ್ ತಮ್ಮ ವ್ಯಕ್ತಿತ್ವದ ಹಕ್ಕುಗಳನ್ನು (personality rights) ರಕ್ಷಣೆ ಕೋರಿ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅದರಲ್ಲೂ ವಿಶೇಷವಾಗಿ AI ಬಳಸಿ ದುರ್ಬಳಕೆ ಮಾಡಲಾಗುತ್ತಿದೆ ಎಂದು ಅರ್ಜಿಯಲ್ಲಿ ದೂರಿದ್ದಾರೆ.

Read Full Story
05:05 PM (IST) Apr 17

India Latest News Live 17 April 2026ಆಲಿಯಾ ಭಟ್ ಅಕ್ಕನ ಲೈಫ್‌ಗೆ ಎಂಟ್ರಿ ಕೊಟ್ಟ ಸನ್‌ಶೈನ್ - ಅಂತರಾಷ್ಟ್ರೀಯ ಈಜುಪಟುವಿನ ಜೊತೆ ನಿಶ್ಚಿತಾರ್ಥ!

ನಟಿ ಆಲಿಯಾ ಭಟ್ ಅವರ ಹಿರಿಯ ಸೋದರಿ ಶಾಹೀನ್ ಭಟ್, ತಮ್ಮ 37ನೇ ವಯಸ್ಸಿನಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ. ಮಾಜಿ ಅಂತಾರಾಷ್ಟ್ರೀಯ ಈಜುಪಟು ಹಾಗೂ ಫಿಟ್‌ನೆಸ್ ಟ್ರೈನರ್ ಆಗಿರುವ ಇಶಾನ್ ಮೆಹ್ರಾ ಅವರೊಂದಿಗೆ ಶಾಹೀನ್ ಎಂಗೇಜ್ ಆಗಿದ್ದಾರೆ.

Read Full Story
05:05 PM (IST) Apr 17

India Latest News Live 17 April 2026ಅತ್ತೆ ತೀರಿ ಹೋಗಿ ತಿಂಗಳಾಗಿಲ್ಲ, ಆಗಲೇ ಹಬ್ಬ ಬೇಕಿತ್ತಾ? ದರ್ಶನ್ ಹೀರೋಯಿನ್ ವಿರುದ್ಧ ನೆಟ್ಟಿಗರ ಟೀಕೆ

ದರ್ಶನ್ ಗಜ ಸಿನಿಮಾದ ನಟಿ ನವ್ಯಾ ನಾಯರ್. 2002ರಲ್ಲಿ ರಂಜಿತ್ ನಿರ್ದೇಶನದ 'ನಂದನಂ' ಚಿತ್ರದ ಮೂಲಕ ಸಿನಿರಂಗಕ್ಕೆ ಕಾಲಿಟ್ಟ ನವ್ಯಾ, ಹಲವಾರು ಹಿಟ್ ಚಿತ್ರಗಳಲ್ಲಿ ನಟಿಸಿದ್ದಾರೆ. 'ಪಾತಿರಾತ್ರಿ' ಅವರ ನಟನೆಯ ಕೊನೆಯ ಚಿತ್ರ.

Read Full Story
05:01 PM (IST) Apr 17

India Latest News Live 17 April 2026'ಸೀಕ್ರೆಟ್ ಪ್ರಿವ್ಯೂ' ಮೂಲಕ ಟಾಕ್ಸಿಕ್‌ ಗುಟ್ಟು ರಟ್ಟು; ಯಶ್ 'ದೊಡ್ಡವರಿಗಾಗಿ ಒಂದು ಕಾಲ್ಪನಿಕ ಕಥೆ' ಏನಿದೆ ಗೊತ್ತಾ?

ಸದ್ಯಕ್ಕೆ ಚಿತ್ರತಂಡ ಈ 9 ನಿಮಿಷದ ಪ್ರಿವ್ಯೂ ಅನ್ನು ಗೌಪ್ಯವಾಗಿಟ್ಟಿದ್ದರೂ, ಮುಂದಿನ ದಿನಗಳಲ್ಲಿ ಇದರ ಸಣ್ಣ ತುಣುಕನ್ನಾದರೂ ಅಭಿಮಾನಿಗಳಿಗಾಗಿ ರಿಲೀಸ್ ಮಾಡಬಹುದು ಎಂಬ ನಿರೀಕ್ಷೆ ಇದೆ. ಒಟ್ಟಿನಲ್ಲಿ, ಬರುವ ಜೂನ್ 4 ರಂದು 'ಟಾಕ್ಸಿಕ್' ಸಿನಿಮಾ ವಿಶ್ವಾದ್ಯಂತ ಧೂಳೆಬ್ಬಿಸಲು ಸಜ್ಜಾಗಿದೆ. ರಾಕಿಂಗ್ ಸ್ಟಾರ್ ಅಭಿಮಾನಿಗಳೇ, ನೀವು ಈ "ದೊಡ್ಡವರ ಕಾಲ್ಪನಿಕ ಕಥೆ" ನೋಡಲು ರೆಡಿಯಿದ್ದೀರಾ?

Read Full Story
04:47 PM (IST) Apr 17

India Latest News Live 17 April 2026ಸತತ ಸೋಲಿನ ಸುಳಿಯಲ್ಲಿರುವ ಮುಂಬೈ ಇಂಡಿಯನ್ಸ್‌ನಲ್ಲಿ ಎಲ್ಲವೂ ಸರಿಯಿಲ್ಲ! ಅನುಮಾನ ಇದ್ರೆ ಈ ವಿಡಿಯೋ ನೋಡಿ

ಐಪಿಎಲ್ 2026ರಲ್ಲಿ ಸತತ ನಾಲ್ಕನೇ ಸೋಲು ಕಂಡಿರುವ ಮುಂಬೈ ಇಂಡಿಯನ್ಸ್ ತಂಡದಲ್ಲಿ ಆಂತರಿಕ ಕಲಹ ಭುಗಿಲೆದ್ದಿದೆ. ಪಂಜಾಬ್ ವಿರುದ್ಧದ ಸೋಲಿನ ಬಳಿಕ ನಾಯಕ ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ನಡುವಿನ ವಾಗ್ವಾದದ ವಿಡಿಯೋ ವೈರಲ್ ಆಗಿದ್ದು, ತಂಡದಲ್ಲಿ ದೊಡ್ಡ ಬದಲಾವಣೆಗಳಾಗುವ ಸುಳಿವನ್ನು ಪಾಂಡ್ಯ ನೀಡಿದ್ದಾರೆ. ಈ ಸೋಲಿನಿಂದಾಗಿ ಮುಂಬೈ ಅಂಕಪಟ್ಟಿಯಲ್ಲಿ ಒಂಬತ್ತನೇ ಸ್ಥಾನಕ್ಕೆ ಕುಸಿದಿದೆ.
Read Full Story
04:38 PM (IST) Apr 17

India Latest News Live 17 April 2026'ವಿಷ ಸರ್ಪ, ಸಾಯಿಸಿ' ಎಂದ ಖರ್ಗೆಯ ಕೈಹಿಡಿದು ನಡೆಸಿದ ಸಚಿವ ಜೆ.ಪಿ.ನಡ್ಡಾ - Video Viral

ಆರ್‌ಎಸ್‌ಎಸ್-ಬಿಜೆಪಿಯನ್ನು ವಿಷಪೂರಿತ ಹಾವಿಗೆ ಹೋಲಿಸಿ ವಿವಾದ ಸೃಷ್ಟಿಸಿದ್ದ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ರಾಜ್ಯಸಭೆಯಲ್ಲಿ ಬಿಜೆಪಿ ಸಚಿವ ಜೆ.ಪಿ. ನಡ್ಡಾ ಸಹಾಯ ಮಾಡಿದ್ದಾರೆ. ಮೆಟ್ಟಿಲು ಇಳಿಯಲು ಕಷ್ಟಪಡುತ್ತಿದ್ದ ಖರ್ಗೆಯವರ ಕೈ ಹಿಡಿದು ನಡ್ಡಾ ನಡೆಸಿಕೊಂಡು ಬಂದಿದ್ದು, ಈ ವಿಡಿಯೋ ರಾಜಕೀಯ ಮತ್ತು ವೈಯಕ್ತಿಕ ಸಂಬಂಧಗಳ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story
04:27 PM (IST) Apr 17

India Latest News Live 17 April 2026"ಟ್ರೀಟ್‌ಮೆಂಟ್‌ಗೇ ಟೈಮ್ ಇಲ್ಲ, ಇನ್ನು ಡೇಟಿಂಗ್?".. ಆ ನಟನ ಜೊತೆಗೆ 'ಏನೂ' ಇಲ್ಲ ಎಂದ ಮೃಣಾಲ್ ಠಾಕೂರ್!

'ಸನ್ ಆಫ್ ಸರ್ದಾರ್ 2' ಪ್ರೀಮಿಯರ್‌ನಲ್ಲಿ ಧನುಷ್ ಮತ್ತು ಮೃಣಾಲ್ ಭೇಟಿಯಾದ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲ, ಧನುಷ್ ಅವರ 'ತೇರೆ ಇಷ್ಕ್ ಮೇ' ಚಿತ್ರದ ಪಾರ್ಟಿಯಲ್ಲೂ ಮೃಣಾಲ್ ಮಿಂಚಿದ್ದರು. ಇದರಿಂದ 'ಅವರಿಬ್ಬರ ನಡುವೆ ಏನೋ ನಡೆಯುತ್ತಿದೆ" ಎಂದು ಸುದ್ದಿ ಹಬ್ಬಿತ್ತು.

Read Full Story
04:08 PM (IST) Apr 17

India Latest News Live 17 April 2026Breaking - ವೈದ್ಯಕೀಯ ದಾಖಲೆ ತೋರಿಸಿ ಬ್ಯಾನ್‌ನಿಂದ ಬಚಾವ್‌ ಆದ ರಾಜಸ್ಥಾನ ರಾಯಲ್ಸ್‌ ಮ್ಯಾನೇಜರ್‌, ಬಿಸಿಸಿಐನಿಂದ ಭಾರೀ ದಂಡ

ರಾಜಸ್ಥಾನ ರಾಯಲ್ಸ್ ತಂಡದ ಮ್ಯಾನೇಜರ್ ರೋಮಿ ಭಿಂದರ್ ಅವರು ಐಪಿಎಲ್ ಪಂದ್ಯದ ವೇಳೆ ಡಗ್‌ಔಟ್‌ನಲ್ಲಿ ನಿಯಮಬಾಹಿರವಾಗಿ ಮೊಬೈಲ್ ಫೋನ್ ಬಳಸಿದ್ದಕ್ಕಾಗಿ ಬಿಸಿಸಿಐ ದಂಡ ವಿಧಿಸಿದೆ. ಅವರ ಗಂಭೀರ ಆರೋಗ್ಯ ಸಮಸ್ಯೆಯನ್ನು ಪರಿಗಣಿಸಿ ನಿಷೇಧದಂತಹ ಕಠಿಣ ಶಿಕ್ಷೆಯ ಬದಲು ದಂಡ ವಿಧಿಸಿ ಎಚ್ಚರಿಕೆ ನೀಡಲಾಗಿದೆ.

Read Full Story