- Home
- Astrology
- Vaastu
- ಹೆಚ್ಚು ಖರ್ಚಿಲ್ಲದ ಒಂದು ಪರಿಣಾಮಕಾರಿ ಉಪಾಯ ಸೂಚಿಸಿದ ವಾಸ್ತು ಶಾಸ್ತ್ರ.. ಬಾತ್ರೂಂನಲ್ಲಿ ಉಪ್ಪು ಇಡ್ಬೇಕಂತೆ
ಹೆಚ್ಚು ಖರ್ಚಿಲ್ಲದ ಒಂದು ಪರಿಣಾಮಕಾರಿ ಉಪಾಯ ಸೂಚಿಸಿದ ವಾಸ್ತು ಶಾಸ್ತ್ರ.. ಬಾತ್ರೂಂನಲ್ಲಿ ಉಪ್ಪು ಇಡ್ಬೇಕಂತೆ
Vastu tips for wealth: ನಾವು ಎಷ್ಟೇ ಕಷ್ಟಪಟ್ಟರೂ ಹಣ ಕೈಯಲ್ಲಿ ಉಳಿಯುವುದಿಲ್ಲ ಅಥವಾ ಪದೇ ಪದೇ ಅನಾರೋಗ್ಯ ಕಾಡುತ್ತಿರುತ್ತದೆ. ಇದಕ್ಕೆ ಮನೆಯ ವಾಸ್ತು ದೋಷವೂ ಕಾರಣವಿರಬಹುದು. ವಿಶೇಷವಾಗಿ ನಾವು ನಿರ್ಲಕ್ಷಿಸುವ ಬಾತ್ರೂಂ ವಾಸ್ತು ನಮ್ಮ ಆರ್ಥಿಕ ಸ್ಥಿತಿಯ ಮೇಲೆ ದೊಡ್ಡ ಪರಿಣಾಮ ಬೀರುತ್ತದೆ.
ವಾಸ್ತು ತಜ್ಞರು ಹೇಳುವುದೇನು?
ವಾಸ್ತು ತಜ್ಞರು ಹೇಳುವುದೇನು?
ಮನೆ ಕಟ್ಟುವಾಗ ನಾವು ವಾಸ್ತು ಸಲಹೆಗಳನ್ನು ತಪ್ಪದೇ ಪಾಲಿಸುತ್ತೇವೆ. ಸಿಂಹದ್ವಾರ, ಮಲಗುವ ಕೋಣೆ, ಅಡುಗೆ ಮನೆ, ಸ್ನಾನದ ಗೃಹ.. ಹೀಗೆ ಪ್ರತಿಯೊಂದನ್ನು ವಾಸ್ತು ಪ್ರಕಾರವೇ ನಿರ್ಮಿಸಿಕೊಳ್ಳುತ್ತೇವೆ. ಆದರೂ ಕೂಡ ಕೆಲವು ಸಂದರ್ಭಗಳಲ್ಲಿ ಮನೆಯಲ್ಲಿ ನಕಾರಾತ್ಮಕ ವಾತಾವರಣ ಉಂಟಾಗಿ ಆರ್ಥಿಕ ಸಂಕಷ್ಟಗಳು ಎದುರಾಗುತ್ತವೆ. ಇಂತಹ ಪರಿಸ್ಥಿತಿಯಲ್ಲಿ ನಿಮ್ಮ ಮನೆಯ ಬಾತ್ರೂಂನಲ್ಲಿ ಈ ಒಂದು ವಸ್ತುವನ್ನು ಇಟ್ಟರೆ ಸಾಕು, ಹಣದ ಸಮಸ್ಯೆಗಳು ದೂರವಾಗಿ ಆದಾಯ ಹೆಚ್ಚಾಗುತ್ತದೆ ಎಂದು ವಾಸ್ತು ತಜ್ಞರು ಹೇಳುತ್ತಾರೆ. ಅದು ಏನೆಂದು ನೋಡೋಣ…
ಒಂದು ಗಾಜಿನ ಬೌಲ್ನಲ್ಲಿ ಹಾಕಿಡಿ
ಒಂದು ಗಾಜಿನ ಬೌಲ್ನಲ್ಲಿ ಹಾಕಿಡಿ
ಅನೇಕರು ಮನೆಯ ಇತರ ಕೋಣೆಗಳಿಗೆ ನೀಡುವ ಪ್ರಾಮುಖ್ಯತೆಯನ್ನು ಬಾತ್ರೂಂ ವಾಸ್ತುವಿಗೆ ನೀಡುವುದಿಲ್ಲ. ಇದರ ಪರಿಣಾಮವಾಗಿ ಆರ್ಥಿಕ ಮತ್ತು ಆರೋಗ್ಯ ಸಂಬಂಧಿತ ಸಮಸ್ಯೆಗಳು ಕಾಡಬಹುದು ಎಂದು ವಾಸ್ತು ಪಂಡಿತರು ಎಚ್ಚರಿಸುತ್ತಾರೆ. ಇದಕ್ಕೆ ಪರಿಹಾರವಾಗಿ ವಾಸ್ತು ಶಾಸ್ತ್ರವು ಹೆಚ್ಚು ಖರ್ಚಿಲ್ಲದ ಒಂದು ಪರಿಣಾಮಕಾರಿ ಉಪಾಯವನ್ನು ಸೂಚಿಸಿದೆ. ಬಾತ್ರೂಂನಲ್ಲಿ 'ಉಪ್ಪು' ಇಡುವುದರಿಂದ ನಕಾರಾತ್ಮಕ ಶಕ್ತಿ ದೂರವಾಗಿ ಮನೆಯಲ್ಲಿ ಸಕಾರಾತ್ಮಕ ವಾತಾವರಣ ನೆಲೆಸುತ್ತದೆ. ಇದರಿಂದ ಆರ್ಥಿಕ ಕಷ್ಟಗಳು ದೂರವಾಗಿ ಉಳಿತಾಯ ಹೆಚ್ಚಾಗುತ್ತದೆ. ಒಂದು ಗಾಜಿನ ಬೌಲ್ನಲ್ಲಿ ಸಮುದ್ರದ ಉಪ್ಪನ್ನು (ಕಲ್ಲುಪ್ಪು) ಹಾಕಿ ಬಾತ್ರೂಂನಲ್ಲಿ ಇಡಬೇಕು.
ಈಶಾನ್ಯ ಮೂಲೆಯಲ್ಲಿ ಅಥವಾ ಮುಖ್ಯ ದ್ವಾರದಲ್ಲಿಡಿ
ಈಶಾನ್ಯ ಮೂಲೆಯಲ್ಲಿ ಅಥವಾ ಮುಖ್ಯ ದ್ವಾರದಲ್ಲಿಡಿ
ಸಾಮಾನ್ಯವಾಗಿ ನಾವು ಮಲಗುವ ಕೋಣೆ, ಅಡುಗೆ ಮನೆಯ ವಾಸ್ತುವಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ. ಡ್ರೆಸ್ಸಿಂಗ್ ಟೇಬಲ್, ಬೀರು, ಮಂಚ ಹೀಗೆ ಪ್ರತಿಯೊಂದನ್ನು ವಾಸ್ತುವಿನ ಪ್ರಕಾರ ಜೋಡಿಸುತ್ತೇವೆ. ಪೂಜಾ ಕೋಣೆಯನ್ನು ಸರಿಯಾದ ದಿಕ್ಕಿನಲ್ಲಿ ಇಡುತ್ತೇವೆ. ಆದರೆ ಬಾತ್ರೂಂ ವಿಚಾರದಲ್ಲಿ ನಿರ್ಲಕ್ಷ್ಯ ತೋರುತ್ತೇವೆ. ಸ್ನಾನದ ಗೃಹವನ್ನೂ ಪವಿತ್ರವಾಗಿ ಭಾವಿಸಬೇಕು, ಇಲ್ಲದಿದ್ದರೆ ಅದು ಅನೇಕ ವಾಸ್ತು ದೋಷಗಳಿಗೆ ಕಾರಣವಾಗುತ್ತದೆ.
ಇದಕ್ಕೆ ಪರಿಹಾರವಾಗಿ ಬಾತ್ರೂಂನ ಒಂದು ಮೂಲೆಯಲ್ಲಿ ಗಾಜಿನ ಬೌಲ್ನಲ್ಲಿ ಸ್ವಲ್ಪ ಉಪ್ಪು ಇಡುವುದರಿಂದ ನಕಾರಾತ್ಮಕ ಶಕ್ತಿ ಮತ್ತು ದೃಷ್ಟಿದೋಷ ನಿವಾರಣೆಯಾಗುತ್ತದೆ. ಇದು ರಾಹು ಮತ್ತು ಕೇತುಗಳ ನಕಾರಾತ್ಮಕ ಪ್ರಭಾವವನ್ನು ಕಡಿಮೆ ಮಾಡುತ್ತದೆ. ಗಾಳಿಯಲ್ಲಿನ ಅಥವಾ ಪರಿಸರದಲ್ಲಿನ ಕೆಟ್ಟ ಶಕ್ತಿಯನ್ನು ಹೀರಿಕೊಂಡು ಸಕಾರಾತ್ಮಕ ಕಂಪನಗಳನ್ನು (Positive Vibrations) ನೀಡುತ್ತದೆ. ಈಶಾನ್ಯ ಮೂಲೆಯಲ್ಲಿ ಅಥವಾ ಮುಖ್ಯ ದ್ವಾರದ ಎದುರು ಉಪ್ಪನ್ನು ಇಡುವುದರಿಂದ ದೋಷಗಳು ಗಣನೀಯವಾಗಿ ಕಡಿಮೆಯಾಗುತ್ತವೆ ಎಂದು ಪಂಡಿತರು ಸಲಹೆ ನೀಡುತ್ತಾರೆ.
ಹೀಗೆ ಮಾಡಿ
ಹೀಗೆ ಮಾಡಿ
ಕಲ್ಲುಪ್ಪು ಅಥವಾ ಮನೆಯಲ್ಲಿ ಬಳಸುವ ಸಾಧಾರಣ ಉಪ್ಪನ್ನು ಗಾಜಿನ ಬೌಲ್ಗೆ ಹಾಕಿ ಬಾತ್ರೂಂನ ಒಂದು ಮೂಲೆಯಲ್ಲಿ ಇಡಿ. ವಾರಕ್ಕೊಮ್ಮೆ ಅಥವಾ ಹದಿನೈದು ದಿನಕ್ಕೊಮ್ಮೆ ಹಳೆಯ ಉಪ್ಪನ್ನು ಬದಲಿಸಿ ಹೊಸ ಉಪ್ಪನ್ನು ಹಾಕಿ. ಹೀಗೆ ಮಾಡುವುದರಿಂದ ಶೀಘ್ರದಲ್ಲೇ ಧನಾತ್ಮಕ ಫಲಿತಾಂಶಗಳನ್ನು ಕಾಣಬಹುದು.
(ಗಮನಿಸಿ: ಈ ಮಾಹಿತಿಯು ಧಾರ್ಮಿಕ ಮತ್ತು ವಾಸ್ತು ನಂಬಿಕೆಗಳ ಮೇಲೆ ಆಧಾರಿತವಾಗಿದೆ. ಫಲಿತಾಂಶಗಳು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ.)

