MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Travel
  • ಮಿನಿ ಸ್ವಿಟ್ಜರ್ಲೆಂಡ್ ಪಹಲ್ಗಾಮ್‌ನ ಬೈಸರನ್ ಅನ್ನೇ ಉಗ್ರರು ಟಾರ್ಗೆಟ್‌ ಮಾಡಿದ್ಯಾಕೆ?

ಮಿನಿ ಸ್ವಿಟ್ಜರ್ಲೆಂಡ್ ಪಹಲ್ಗಾಮ್‌ನ ಬೈಸರನ್ ಅನ್ನೇ ಉಗ್ರರು ಟಾರ್ಗೆಟ್‌ ಮಾಡಿದ್ಯಾಕೆ?

ಕಾಶ್ಮೀರದ ಪಹಲ್ಗಾಮ್ ಬಳಿಯಿರುವ ಬೈಸರನ್ ಕಣಿವೆಯಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ತನ್ನ ಸುಂದರವಾದ ಭೂದೃಶ್ಯಗಳು, ಹಚ್ಚ ಹಸಿರಿನ ಹುಲ್ಲುಗಾವಲುಗಳು ಮತ್ತು ಸಾಹಸ ಚಟುವಟಿಕೆಗಳಿಗೆ ಹೆಸರುವಾಸಿಯಾಗಿದೆ. ಹಿಮಾಲಯದ ತಪ್ಪಲಿನಲ್ಲಿರುವ ಈ ಕಣಿವೆಯು ಪ್ರಕೃತಿ ಪ್ರಿಯರಿಗೆ ಮತ್ತು ಚಾರಣಿಗರಿಗೆ ಸ್ವರ್ಗವಾಗಿದೆ. ಬೈಸರನ್ ಕಣಿವೆಗೆ ಹೇಗೆ ಹೋಗುವುದು, ಯಾವಾಗ ಭೇಟಿ ನೀಡುವುದು  ಎಂಬುದನ್ನು ತಿಳಿದುಕೊಳ್ಳಿ.

3 Min read
Author : Gowthami K
| Updated : Apr 24 2025, 10:48 AM IST
Share this Photo Gallery
  • FB
  • TW
  • Linkdin
  • Whatsapp
110

 ಉತ್ತರ ಭಾರತದ ಕಾಶ್ಮೀರ ಪ್ರದೇಶದ ಪಹಲ್ಗಾಮ್ ಗ್ರಾಮದಲ್ಲಿರುವ ಬೈಸರನ್  ಪ್ರದೇಶಲ್ಲಿ ಪ್ರವಾಸಿಗರ ಮೇಲೆ ನಡೆದ ಉಗ್ರರ ದಾಳಿ ದೇಶವನ್ನೇ ಬೆಚ್ಚಿಬೀಳಿಸಿದೆ. 26 ಪ್ರವಾಸಿಗರನ್ನು ಉಗ್ರರು ಬಲಿ ತೆಗೆದುಕೊಂಡಿದ್ದು, ಬೈಸರನ್  ಪ್ರದೇಶ ಎಷ್ಟು ಕಠಿಣವಾದ ಮತ್ತು ಕಡಿದಾದ ಕಣಿವೆ ಪ್ರದೇಶ. ಕುದುರೆ ಅಥವಾ ವ್ಯಕ್ತಿ ಮಾತ್ರ ನಡೆದುಕೊಂಡು ಹೋಗಲು ಸಾಧ್ಯವಿರುವ ಕಾರಣಕ್ಕೆ ಕಾರ್ಯಾಚರಣೆ ನಡೆಸಲು ತಡವಾಗುತ್ತಿದೆ. ಈಗ ಶಾಲೆಗಳಿಗೆ ರಜೆ ಇರುವುದರಿಂದ ಬಹುತೇಕರು ಕುಟುಂಬ ಸಮೇತ ಪ್ರವಾಸ ಕೈಗೊಂಡಿದ್ದರು.

ಪಹಲ್ಗಾಮ್ ಉಗ್ರರ ದಾಳಿ: ಕನ್ನಡಿಗ ಸೇರಿ 24ಕ್ಕೂ ಹೆಚ್ಚು ಬಲಿ, ರಕ್ತಸಿಕ್ತ ಚಿತ್ರಣ!

210

 ಪಹ್ಲಾಗಮ್‌ನಿಂದ ಕೇವಲ 5 ಕಿಮೀ ದೂರದಲ್ಲಿರುವ ಅತ್ಯಂತ ಸುಂದರವಾದ ಮತ್ತು ಪ್ರಶಾಂತವಾದ ಸ್ಥಳಗಳಲ್ಲಿ  ಒಂದು  ಬೈಸರನ್   ಕಣಿವೆ. ಭಾರತದ ಸ್ವಿಟ್ಜರ್ಲೆಂಡ್ ಅಥವಾ ಮಿನಿ-ಸ್ವಿಟ್ಜರ್ಲೆಂಡ್ ಎಂದೂ ಕರೆಯಲ್ಪಡುವ ಬೈಸರನ್ ಕಣಿವೆಯು ಅದರ ತೆರೆದ ಕಣಿವೆ, ಎತ್ತರದ ಫರ್ ಮರಗಳು ಮತ್ತು ಮಂಜಿನಿಂದ ಸುತ್ತುವರೆಯುವ ಪ್ರಸಿದ್ಧಿ ಪಡೆದಿದೆ. ಸುಂದರವಾದ ಆಲ್ಪೈನ್ ಸರೋವರಗಳನ್ನು ಹೊಂದಿದೆ.  ಗಾಢವಾದ ಮತ್ತು ಉದ್ದವಾದ ಹುಲ್ಲುಗಾವಲುಗಳನ್ನು ಹೊಂದಿರುವ ಈ ಪ್ರದೇಶವು ಸುತ್ತುವರೆದಿರುವುದರಿಂದ ಮಿನಿ ಸ್ವಿಟ್ಜರ್ಲೆಂಡ್  ಎಂದು ಕರೆಯುತ್ತಾರೆ.

ಪಹಲ್ಗಾಮ್‌ನಲ್ಲಿ 25 ಪ್ರವಾಸಿಗರ ನರಮೇಧ, ದಾಳಿಯ ಹೊಣೆ ಹೊತ್ತುಕೊಂಡ The Resistance Front

310

ಹಚ್ಚ ಹಸಿರಿನ ಹುಲ್ಲುಗಾವಲುಗಳು, ವಿಹಂಗಮ ನೋಟಗಳು ಮತ್ತು ಕುದುರೆ ಸವಾರಿಯಂತಹ ಸಾಹಸ ಚಟುವಟಿಕೆಗಳನ್ನು ಹೊಂದಿರುವ ಅದ್ಭುತ ತಾಣವಾಗಿರುವುದರಿಂದ ಪ್ರಕೃತಿ ಪ್ರಿಯರು ಪ್ರವಾಸಿಗರು ಹೆಚ್ಚು ಇಲ್ಲಿಗೆ ಭೇಟಿ ನೀಡುತ್ತಿರುತ್ತಾರೆ. ಇದು ಎತ್ತರದ ಪೈನ್ ಮರಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳಿಂದ ಆವೃತವಾಗಿದೆ. ಇದು ಪಾದಯಾತ್ರಿಕರಿಗೆ ಜನಪ್ರಿಯ ತಾಣ. ಟುಲಿಯನ್ ಸರೋವರದವರೆಗೆ ಮತ್ತಷ್ಟು ಪ್ರಯಾಣಿಸಲು ಬಯಸುವ ಟ್ರೆಕ್ಕಿಂಗ್ ಉತ್ಸಾಹಿಗಳಿಗೆ ಬೈಸರನ್ ಒಂದು ಸೂಕ್ತವಾದ ಕ್ಯಾಂಪಿಂಗ್ ತಾಣವಾಗಿದೆ. 
 

410

ಹಿಂದೂಗಳಿಗೆ ಪ್ರಮುಖ ಸ್ಥಳ: ಹಿಂದೂಗಳಿಗೆ ಇದೊಂದು ಪ್ರಮುಖ ಸ್ಥಳ ಎನ್ನಬಹುದು. ಪವಿತ್ರ ಅಮರನಾಥ ಯಾತ್ರೆಗೆ ಹೋಗುವ ಮಾರ್ಗವು  ಇದರ ಸುತ್ತಮುತ್ತಲಿನ ಪರಿಸರಕ್ಕೆ ಬರುತ್ತದೆ. ಈ ಧಾರ್ಮಿಕ ಯಾತ್ರೆಯಲ್ಲಿ ಭಾಗವಹಿಸಲು ಪ್ರತಿ ವರ್ಷ ಸಾವಿರಾರು ಜನರು ಬರುತ್ತಾರೆ.  ಇದೇ ಸ್ಥಳದಲ್ಲಿ ಕ್ಯಾಂಪಿಂಗ್ ಹಾಕಲಾಗುತ್ತದೆ. ಪಹಲ್ಗಾಮ್, ಅರು ಕಣಿವೆ ಮತ್ತು ಬೇತಾಬ್ ಕಣಿವೆ ಮತ್ತು ಶೇಷನಾಗ ಸರೋವರ ಸಾಕಷ್ಟು ಹತ್ತಿರದಲ್ಲಿದೆ.
 

510

ಪ್ರಯಾಣಿಸುವುದು ಹೇಗೆ?
ಬೈಸರನ್ ಕಣಿವೆ ಸಮುದ್ರ ಮಟ್ಟದಿಂದ ಸುಮಾರು 2,400 ಮೀಟರ್ (7,874 ಅಡಿ) ಎತ್ತರದಲ್ಲಿದೆ. ಪಹಲ್ಗಾಮ್ ಶ್ರೀನಗರದ ಆಗ್ನೇಯಕ್ಕೆ ಸುಮಾರು 90 ಕಿಲೋಮೀಟರ್ (56 ಮೈಲುಗಳು) ದೂರದಲ್ಲಿದೆ . ಈ ಪ್ರದೇಶದ ಅತಿ ಎತ್ತರದ ಶಿಖರಕ್ಕೆ ಕೊಲಹೋಯ್ ಪರ್ವತ  ಎನ್ನುತ್ತಾರೆ. ಇಲ್ಲಿಂದ ಎತ್ತರದ ಹಿಮಾಲಯ ಪರ್ವತಗಳ ವಿಹಂಗಮ ನೋಟವನ್ನು ಕಣ್ತುಂಬಿಕೊಳ್ಳಬಹುದು.

 

610

ಬೈಸರನ್ ಕಣಿವೆಗೆ ಹೋಗಲು ಹತ್ತಿರದ ಪಟ್ಟಣ ಪಹಲ್ಗಾಮ್  ಇಲ್ಲಿಂದ ಕೇವಲ 5 ಕಿಲೋಮೀಟರ್ ದೂರದಲ್ಲಿದೆ. ರಸ್ತೆಯ ಮೂಲಕ ಹೋಗುವುದಾದರೆ 1 ರಿಂದ 2 ಗಂಟೆಗಳವರೆಗೆ ತೆಗೆದುಕೊಳ್ಳಬಹುದು.  ಕಣಿವೆ ಮೇಲಕ್ಕೆ  ಹೋಗುವುದು  ಕಷ್ಟವಾಗುವುದರಿಂದ ಕುದುರೆ ಸವಾರಿ ಅಥವಾ ಸಣ್ಣ ಚಾರಣ ಮೂಲಕ ಕಷ್ಟಪಟ್ಟುಕೊಂಡು ಹೋಗಬೇಕು. ಚಾರಣ -2ರಿಂದ 3 ಗಂಟೆ ತೆಗೆದುಕೊಳ್ಳುತ್ತದೆ.  ಬೈಸರನ್ ಕಣಿವೆಯ ಸೌಂದರ್ಯವನ್ನು ನೋಡಲು ಕುದುರೆ ಸವಾರಿ ಅತ್ಯುತ್ತಮ ಮಾರ್ಗವಾಗಿದೆ.
 

710

ವಿಮಾನದ ಮೂಲಕ ಹೋಗುವುದಾದರೆ ಬೈಸರನ್ ಕಣಿವೆಗೆ ಹತ್ತಿರದ ವಿಮಾನ ನಿಲ್ದಾಣವೆಂದರೆ ಶೇಖ್ ಉಲ್-ಆಲಮ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ  ಇದು ಶ್ರೀನಗರದಲ್ಲಿದೆ, ಇದು ಪಹಲ್ಗಮ್ ನಿಂದ ಸುಮಾರು 95 ಕಿಲೋಮೀಟರ್ ದೂರದಲ್ಲಿದೆ.  ರೈಲಿನ ಮೂಲಕ ಹೋಗುವುದಾದರೆ ಅನಂತನಾಗ್ ಹತ್ತಿರದ ರೈಲು ನಿಲ್ದಾಣ. ಇದು ಪಹಲ್ಗಾಮ್ ನಿಂದ 45 ಕಿ.ಮೀ ದೂರದಲ್ಲಿದೆ. ನೀವು ಜಮ್ಮು ಅಥವಾ ದೆಹಲಿಯ ಪ್ರಮುಖ ನಗರಗಳಿಂದ ರೈಲಿನ ಮೂಲಕ ಅನಂತನಾಗ್ ಗೆ ಬಂದು ನಂತರ ಟ್ಯಾಕ್ಸಿ ಅಥವಾ ಬಸ್ ಮೂಲಕ ಪಹಲ್ಗಾಮ್ ಗೆ ಹೋಗಿ ಅಲ್ಲಿಂದ ನಿಮ್ಮ ಪಯಾಣ ಮುಂದುವರೆಸಬಹುದು.

810
baisaran valley

baisaran valley

ಬೈಸರನ್ ಕಣಿವೆಯು ಪ್ರತಿಯೊಂದು ಋತುವಿನಲ್ಲಿಯೂ ವಿಭಿನ್ನ ಅನುಭವಗಳನ್ನು ನೀಡುತ್ತದೆ. 
ವಸಂತಕಾಲ (ಮಾರ್ಚ್ ನಿಂದ ಮೇ): ಎಲ್ಲೆಡೆ ಹಸಿರು ತುಂಬಿ ಮಧ್ಯಮ ಮತ್ತು ಬೆಚ್ಚನೆಯ ತಾಪಮಾನವಿರುತ್ತದೆ. ಕಣಿವೆಯಲ್ಲಿ ಸುಂದರವಾದ ಹೂವುಳು ಅರಳಿರುತ್ತವೆ. ಹಿಮ ಕರಗಲು ಪ್ರಾರಂಭವಾಗುತ್ತದೆ.

ಬೇಸಿಗೆ ( ಜೂನ್ ನಿಂದ ಆಗಸ್ಟ್): ಬೇಸಿಗೆಯು ಬೈಸರನ್ ಕಣಿವೆಗೆ ಭೇಟಿ ನೀಡಲು ಉತ್ತಮ ಸಮಯ ಸೌಮ್ಯವಾದ ತಾಪಮಾನ ಮತ್ತು ಹೆಚ್ಚಿನ ಭೂಭಾಗ ಹಚ್ಚ ಹಸಿರಿನಿಂದ ಕೂಡಿರುತ್ತದೆ. ಕಣಿವೆಯು ಹುಲ್ಲು ಮತ್ತು ಕಾಡು ಹೂವುಗಳಿಂದ ಆವೃತವಾಗಿರುತ್ತದೆ. ತಂಪಾದ ಗಾಳಿಯು ಬಯಲು ಪ್ರದೇಶದ ಸುಡುವ ಬೇಸಿಗೆಯ ಶಾಖವನ್ನು ಕಡಿಮೆ ಮಾಡುತ್ತದೆ.

910

ಶರತ್ಕಾಲ (ಸೆಪ್ಟೆಂಬರ್ ನಿಂದ ನವೆಂಬರ್): ಶರತ್ಕಾಲದಲ್ಲಿ ಬೈಸರನ್ ಕಣಿವೆಯ ತಾಪಮಾನವು ಹೆಚ್ಚು ತಂಪಾಗಿರುತ್ತದೆ ಮತ್ತು ಅದರ ಸಮೃದ್ಧ ಎಲೆಗಳ ಬಣ್ಣ ಬದಲಾಗಿರುತ್ತದೆ. ಕಣಿವೆಯ ಮರಗಳು ಕಿತ್ತಳೆ, ಕೆಂಪು ಮತ್ತು ಹಳದಿ ಬಣ್ಣಗಳಲ್ಲಿ ಬದಲಾಗುತ್ತವೆ. 

ಚಳಿಗಾಲ (ಡಿಸೆಂಬರ್ ನಿಂದ ಫೆಬ್ರವರಿ): ಇಡೀ ಕಣಿವೆಯು ತನ್ನ ದಪ್ಪನೆಯ ಪದರಗಳಲ್ಲಿ ಹಿಮದಿಂದ ಆವೃತವಾಗಿರುತ್ತದೆ. ಆಗ ಅದ್ಭುತ ನೋಟಗಳು ಕಾಣ ಸಿಗುತ್ತವೆ. ಸ್ಕೀಯಿಂಗ್, ಸ್ನೋಬೋರ್ಡಿಂಗ್ ಮತ್ತು ಸ್ಲೆಡ್ಜಿಂಗ್ ಮಾಡುವವರು ಹೆಚ್ಚು ಕಾಣ ಸಿಗುತ್ತಾರೆ.

1010

ಬೈಸರನ್ ಕಣಿವೆಯಲ್ಲಿಯೇ ಯಾವುದೇ ಹೋಟೆಲ್‌ಗಳಿಲ್ಲ. ಪಹಲ್ಗಾಮ್‌ನಲ್ಲಿ ತಂಗುವುದು ಉತ್ತಮ ಆಯ್ಕೆಯಾಗಿದೆ. ನಿಮಗೆ ಬೇಕಾದ ಆಯ್ಕೆಯ ಹೋಂ ಸ್ಟೇ, ಅತಿಥಿ ಗೃಹ, ಲಾಡ್ಜ್‌ಗಳು ಲಭ್ಯವಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಭಾರತ ಸುದ್ದಿ
ಪಹಲ್ಗಾಮ್ ಭಯೋತ್ಪಾದಕ ದಾಳಿ
ಪ್ರವಾಸೋದ್ಯಮ
ಪ್ರವಾಸ
ಪಹಲ್ಗಾಮ್

Latest Videos
Recommended Stories
Recommended image1
Masan Holi: ಕಾಶಿಯಲ್ಲಿ ನಡೆಯುತ್ತೆ ಚಿತಾ ಭಸ್ಮದ ಹೋಳಿ… ಈ ಸ್ಮಶಾನ ಹೋಳಿಯ ರಹಸ್ಯ ಏನು?
Recommended image2
ಇದು 'ಭಾರತದ ಪುಟ್ಟ ಇಂಗ್ಲೆಂಡ್', ಬೆಂಗಳೂರಿನಿಂದ ಕೆಲವೇ ಗಂಟೆಗಳ ದೂರದಲ್ಲಿದೆ
Recommended image3
ಅಯ್ಯಯ್ಯೋ! ಬೆಂಗಳೂರು ಹೋಟೆಲ್‌ನಲ್ಲಿ ನನ್ ಚಿನ್ನದ ಸರ ಕದ್ದವ್ರೇ ಎಂದ ಯುವತಿ; ಅಸಲಿ ಸತ್ಯ ಬಿಚ್ಚಿಟ್ಟ ಸಿಬ್ಬಂದಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved