ಕವಣಾಪುರ ಬಸವಣ್ಣನನ್ನು ಮನೆಗೆ ಕರೆಸಿದ ನಟ ಶಶಿಕುಮಾರ್; ಪವಾಡಗಳು ಒಂದೆರಡಲ್ಲ.....
ಪವಾಡ ಬಸವಣ್ಣನನ್ನು ನಿವಾಸಕ್ಕೆ ಕರೆಸಿಕೊಂಡ ನಟ ಶಶಿಕುಮಾರ್. ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಯ್ತು ಫೋಟೋಗಳು....

ಕನ್ನಡ ಚಿತ್ರರಂಗದ ಅದ್ಭುತ ನಟ, ಹಿರಿಯ ಕಲಾವಿದ ಶಶಿಕುಮಾರ್ ತಮ್ಮ ನಿವಾಸಕ್ಕೆ ಕವಣಾಪುರ ಬಸವಣ್ಣನನ್ನು ಕರೆಸಿಕೊಂಡು ವಿಶೇಷ ಪೂಜೆ ಸಲ್ಲಿಸಿದ್ದಾರೆ.
ಶಶಿಕುಮಾರ್ ಅವರ ಮನೆಯಲ್ಲಿ ನಡೆದ ಕವಣಾಪುರ ಬಸವಣ್ಣನ ಪಾದ ಪೂಜೆ ಸೇವೆಯ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ನಾಯಕನಟ ಎಂಬ ಹಮ್ಮು ಬಿಮ್ಮು ಇಲ್ಲದ ಸರಳ ಸಜ್ಜನಿಕೆಯ ವ್ಯಕ್ತಿತ್ವ ಎಲ್ಲದಕ್ಕೂ ಮಿಗಿಲಾದ ಭಕ್ತಿಯು ರಸಕ್ಕೆ ಜೀವನ ತುಂಬುವ ಕರುಣಾಮಯಿ ಎಂದು ಬಸಪ್ಪ ಪೇಜ್ನಲ್ಲಿ ಬರೆದುಕೊಳ್ಳಲಾಗಿದೆ.
ವಿಶೇಷ ವಾಹನದಲ್ಲಿ ಬಸವಣ್ಣನನ್ನು ನಿವಾಸಕ್ಕೆ ಕರೆಸಿಕೊಂಡು ಮನೆಯೊಳಗೆ ಬರ ಮಾಡಿಕೊಂಡು ಆನಂತರ ದೇವರ ಮನೆ ಮುಂದೆ ವಿಶ್ರಾಂತಿಗೆ ವ್ಯವಸ್ಥೆ ಮಾಡಲಾಗಿತ್ತು.
ಬಸಪ್ಪ ಕೊಡುವ ಸೂಚನೆಗಳು ಒಂದೆರಡಲ್ಲ ಬಸಪ್ಪಣ್ಣ ಅಪ್ಪಣೆ ಪಡೆದು ಕೆಲಸ ಮಾಡಿದರೆ ಒಳ್ಳೆಯದು ಎಂದು ಅನೇಕರು ತಾವು ನೋಡಿರುವ ಪವಾಡಗಳನ್ನು ಹಂಚಿಕೊಂಡಿದ್ದಾರೆ.
ಶಶಿಕುಮಾರ್ ಅವರ ಪುತ್ರ ಅಕ್ಷಿತ್ ಕೂಡ ಕನ್ನಡ ಚಿತ್ರರಂಗದಲ್ಲಿ ಒಂದೆರಡು ಸಿನಿಮಾಗಳನ್ನು ಮಾಡಿದ್ದಾರೆ. ತಂದೆಯ ಹೆಸರು ಉಳಿಸಬೇಕು ಎಂದು ಅದ್ಭುತವಾಗಿರುವ ಕಥೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ.
ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್ಡೇಟ್ಸ್, ತೆರೆಮರೆಯ ಕಥೆಗಳು, OTT ರಿಲೀಸ್ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.