MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Gowri Ganesha Habba Wishes
Bengaluru Tunnel Road Project
BRICS Summit 2026
India-Russia Relations
Vijay Mallya
ED Investigation Satish Jarkiholi
Mangaluru Railway Zone
Devanahalli Land Dispute
Bigg Boss Kannada 13
Ganesh Festival Restrictions
Karnataka Guarantee Schemes
Karnataka Apex Bank Election
Prajwal Revanna Case
  • Home
  • Astrology
  • Festivals
  • ದೇವರಿಗೆ ಇಡುವ ನೈವೇದ್ಯ ಆರತಿ ಬಳಿಕ ತೆಗೆಯಬೇಕಾ? ರಾತ್ರಿಯಿಡಿ ಇಡಬೇಕಾ, ಶಾಸ್ತ್ರ ಹೇಳುವುದೇನು?

ದೇವರಿಗೆ ಇಡುವ ನೈವೇದ್ಯ ಆರತಿ ಬಳಿಕ ತೆಗೆಯಬೇಕಾ? ರಾತ್ರಿಯಿಡಿ ಇಡಬೇಕಾ, ಶಾಸ್ತ್ರ ಹೇಳುವುದೇನು?

ದೇವರಿಗೆ ನೈವೇದ್ಯ ಇಟ್ಟು ಪೂಜೆ ಮಾಡಲಾಗುತ್ತದೆ. ಆರತಿ ಬಳಿಕ ಈ ನೈವೇದ್ಯವನ್ನು ತೆಗೆಯಬೇಕಾ ಅಥವಾ ರಾತ್ರಿಯಿಡಿ ಇಡಬೇಕಾ? ಪ್ರಸಾದವಾಗಿ ಹಂಚಲು ಶಾಸ್ತ್ರಗಳು ಹೇಳುವುದೇನು? ಗೊಂದಲಗಳಿಗೆ ಇಲ್ಲಿದೆ ಉತ್ತರ.

2 Min read
Author : Chethan Kumar
Published : Sep 12 2026, 06:18 PM IST
Share this Photo Gallery
  • FB
  • TW
  • Linkdin
  • Whatsapp
15
ಆರತಿ ಬಳಿಕ ನೈವೇದ್ಯ ಯಾವಾಗ ತೆಗೆಯಬೇಕು
Image Credit : Meta AI

ಆರತಿ ಬಳಿಕ ನೈವೇದ್ಯ ಯಾವಾಗ ತೆಗೆಯಬೇಕು

ಗಣೇಶ ಹಬ್ಬದ ಸಂಭ್ರಮ ಮನೆ ಮಾಡಿದೆ. ಪ್ರತಿ ಗಲ್ಲಿ ಗಲ್ಲಿಯಲ್ಲಿ ಗಣೇಶನ ಕೂರಿಸಲಾಗುತ್ತದೆ. ಮನೆ ಮನೆಗಳಲ್ಲೂ ಗಣೇಶನ ಕೂರಿಸಿ ಬಳಿ ವಿಸರ್ಜನೆಗಳು ನಡೆಯುತ್ತದೆ. ಗಣೇಶ ಹಬ್ಬ, ದೀಪಾವಳಿ, ನವರಾತ್ರಿ ಸೇರಿದಂತೆ ಸಾಲು ಸಾಲು ಹಬ್ಬಗಳು ಆಗಮಿಸುತ್ತಿದೆ. ಪ್ರತಿ ಹಬ್ಬ, ಪೂಜೆ ಸಂದರ್ಭದಲ್ಲಿ ಕೆಲವರಿಗೆ ಗೊಂದಲಗಳು ಸೃಷ್ಟಿಯಾಗುತ್ತದೆ. ಮನೆಯಲ್ಲಿ ಪೂಜೆಯನ್ನು ಮನೆಯ ಸದಸ್ಯರೇ ಮಾಡುತ್ತಾರೆ. ಈ ವೇಳೆ ತಮಗೆ ಗೊತ್ತಿರುವ, ಕುಟುಂಬಗಳು, ಹಿರಿಯರು ಪಾಲಿಸಿದ ಸಂಪ್ರದಾಯ ಮುಂದುವರಿಸುತ್ತಾರೆ. ಹಲವು ಬಾರಿ ಇಲ್ಲೇ ಗೊಂದಲಗಳು ಸೃಷ್ಟಿಯಾಗುತ್ತಿದೆ. ಈ ಪೈಕಿ ದೇವರಿಗೆ ನೈವೇದ್ಯ ಅರ್ಪಿಸಿದ ಬಳಿಕ ಯಾವಾಗ ತೆಗೆಯಬೇಕು, ಆರತಿ ಆದ ಬಳಿಕ, ಆರತಿ ಆದ 10 ನಿಮಿಷ ಅಥವಾ ರಾತ್ರಿಯಿಡಿ ಇಡಬೇಕಾ ಅನ್ನೋ ಗೊಂದಲ ಸಹಜ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
25
ಮನೆಯ ಪೂಜೆ ಸಮಯ
Image Credit : Gemini

ಮನೆಯ ಪೂಜೆ ಸಮಯ

ಪ್ರತಿ ಹಬ್ಬ ಅಥವಾ ಮನೆಯ ವಿಶೇಷ ಪೂಜೆ ಸಂದರ್ಭದಲ್ಲಿ ಮನೆಯ ಸದಸ್ಯರು ಉತ್ತಮ ಘಳಿಗೆಯಲ್ಲಿ ಮಾಡುತ್ತಾರೆ. ಅಥವಾ ತಾವು ಪಾಲಿಸಿಕೊಂಡು ಬಂದ ಸಂಪ್ರದಾಯದ ಪ್ರಕಾರ ಮಾಡುತ್ತಾರೆ. ಇಲ್ಲಿ ನಿರ್ದಿಷ್ಟ ಸಮಯ, ಕಾಲಮಿತಿ ಇರುವುದಿಲ್ಲ. ದೇವರಿಗೆ ನೈವೇದ್ಯ ಅರ್ಪಿಸಿ ಪೂಜೆ, ಆರತಿ ಬಳಿಕ ತೆಗೆಯುತ್ತಾರೆ. ಪ್ರಸಾದವಾಗಿ ಹಂಚುತ್ತಾರೆ. ಇದು ಬಹುತೇಕರ ಮನೆಯ ಪದ್ಧತಿ.

Related Articles

Related image1
ಗಣೇಶ ಚತುರ್ಥಿಯಂದು ಇಲಿ ಕಾಣಿಸಿಕೊಂಡರೆ ಏನರ್ಥ? ಗಣಪತಿಯ ವಾಹನ ನೀಡುವ ವಿಶೇಷ ಸಂಕೇತವಿದು!
Related image2
Astrology: ಮಂಗಳನ ನೀಚ ದೃಷ್ಟಿ: 3 ರಾಶಿಗೆ ಕಾದಿದೆ ಮಹಾ ಕಂಟಕ, ಇಲ್ಲಿದೆ ಪರಿಹಾರ!
35
ಶಾಸ್ತ್ರಗಳಲ್ಲಿ ಹೇಳಿರುವುದೇನು
Image Credit : Gemini

ಶಾಸ್ತ್ರಗಳಲ್ಲಿ ಹೇಳಿರುವುದೇನು

ಶಾಸ್ತ್ರಗಳಲ್ಲಿ ನೀವು ಭಕ್ತಿಯಿಂದ, ಪ್ರೀತಿಯಿಂದ ಅರ್ಪಿಸುವ ಯಾವುದೇ ವಸ್ತು ದೇವರಿಗೆ ನೈವೇದ್ಯ. ಇದನ್ನು ದೇವರಿಗೆ ಅರ್ಪಿಸಿ, ಪೂಜೆ ಸಲ್ಲಿಸಿದ ಬಳಿಕ ತೆಗೆಯಬಹುದು. ನೀವು ಪ್ರೀತಿಯಿಂದ ಅರ್ಪಿಸುವ ವಸ್ತುವನ್ನು ದೇವರು ಸಂಪ್ರೀತನಾಗಿ ಸ್ವೀಕರಿಸುವುದೇ ನೈವೇದ್ಯ. ಭಗವದ್ಗೀತೆಯ ಶ್ಲೋಕದಲ್ಲಿ ಈ ಕುರಿತು ಸ್ಪಷ್ಟನೆ ಇದೆ.

ಪತ್ರಂ ಪುಷ್ಪಂ ಫಲಂ ತೋಯಂ ಯೋ ಮೇ ಭಕ್ತ್ಯಾ ಪ್ರಯಚ್ಛತಿ

ಶ್ಲೋಕದಲ್ಲಿರುವಂತೆ ಎಲೆ, ಹೂವು, ಹಣ್ಣು, ನೀರು ಸೇರಿದಂತೆ ಭಕ್ತನು ಭಕ್ತಿಪೂರ್ವಕವಾಗಿ ಅರ್ಪಿಸುವ ಯಾವುದೇ ವಸ್ತು ನೈವೇದ್ಯವಾಗುತ್ತದೆ. ಈ ಮೂಲಕ ಶ್ಲೋಕ ಸ್ಪಷ್ಟವಾಗಿ ನಿಮ್ಮ ಭಕ್ತಿ ಪ್ರಧಾನ ಎಂದು ಹೇಳುತ್ತದೆ.

45
ಶ್ರೀಮದ್ ಭಾಗವತ ಪುರಾಣ ಹೇಳುವುದೇನು
Image Credit : Gemini AI

ಶ್ರೀಮದ್ ಭಾಗವತ ಪುರಾಣ ಹೇಳುವುದೇನು

ಶ್ರೀಮದ್ ಭಾಗವತ ಪುರಾಣದಲ್ಲಿ ನೈವೇದ್ಯ ಅರ್ಪಣೆ ಕುರಿತ ಉಲ್ಲೇಖವಿದೆ. ದೇವರ ವಿಗ್ರಹ ಪೂಜೆ ವೇಳೆ 11ನೇ ಸ್ಕಂದದ 27ನೇ ಅಧ್ಯಾಯದಲ್ಲಿ ಹಾಲು, ತುಪ್ಪ, ಮೊಸರು, ಬೆಲ್ಲ, ಮೋದಕ ಅರ್ಪಿಸುವ ಕುರಿತು ಉಲ್ಲೇಖಿಸಲಾಗಿದೆ. ಭಗವದ್ಗೀತೆಯ 3ನೇ ಅಧ್ಯಾಯದಲ್ಲಿ ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಬಳಿಕ ಪ್ರಸಾದ ರೂಪದಲ್ಲಿ ಹಂಚುವ ಕುರಿತು ಉಲ್ಲೇಖವಿದೆ. ನೀವು ನೈವೇದ್ಯವನ್ನು ದೇವರಿಗೆ ಅರ್ಪಿಸಿ ಬಳಿಕ ಪೂಜೆ ನಡೆಯುತ್ತದೆ. ಆರತಿ ಬಳಿಕ ಅಥವಾ ಪೂಜೆ ಬಳಿಕ ಇದೇ ನೈವೇದ್ಯವನ್ನು ತೆಗೆದು ಎಲ್ಲರಿಗೂ ಪ್ರಸಾದವಾಗಿ ಹಂಚಬೇಕು. ಇದುರಿಂದ ಪೂಜಾ ಫಲ ಹೆಚ್ಚುತ್ತದೆ ಎಂಬ ಉಲ್ಲೇಖಗಳಿವೆ.

55
ರಾತ್ರಿಯಿಡಿ ಇಡುವುದು ಉತ್ತಮವಲ್ಲ
Image Credit : Asianet News

ರಾತ್ರಿಯಿಡಿ ಇಡುವುದು ಉತ್ತಮವಲ್ಲ

ನೈವೇದ್ಯಗಳನ್ನು ರಾತ್ರಿಯಿಡಿ ಇಡುವ ಪದ್ಧತಿ ಉತ್ತಮವಲ್ಲ. ದೇವರಿಗೆ ಅರ್ಪಿಸಿದ ನೈವೇದ್ಯವನ್ನು ಭಕ್ತರಿಗೆ ಪ್ರಸಾದ ರೂಪದಲ್ಲಿ ಹಂಚಿದರೆ ಫಲ ಹೆಚ್ಚು. ಇನ್ನು ಹಾಲು, ತುಪ್ಪ ಸೇರಿದಂತೆ ಹಲವು ವಸ್ತುಗಳು, ಅಥವಾ ಅದರಿಂದ ಮಾಡಿದ ನೈವೇದ್ಯಗಳು ರಾತ್ರಿಯಿಡಿ ಇಟ್ಟರೆ ಹಾಳಾಗುತ್ತದೆ. ಮರುದಿನ ಚೆಲ್ಲಬೇಕಾಗುತ್ತದೆ. ದೇವರ ನೈವೇದ್ಯವನ್ನು ಯಾವ ಭಕ್ತನೂ ಸೇವಿಸದೆ ಚೆಲ್ಲುವುದು ಉತ್ತಮವಲ್ಲ. ಇನ್ನು ರೆಫ್ರಿಜರೇಟರ್‌ನಲ್ಲಿ ಇಟ್ಟು ಮರು ದಿನ ಬಳಕೆ ಮಾಡುವುದು ಉತ್ತಮ ಪದ್ಧತಿಯಲ್ಲ. ಹೀಗಾಗಿ ಪೂಜೆ ಬಳಿಕ ನೈವೇದ್ಯ ಪ್ರಸಾದ ರೂಪದಲ್ಲಿ ಹಂಚುವುದು ಉತ್ತಮ.

About the Author

CK
Chethan Kumar
ಎಲೆಕ್ಟ್ರಾನಿಕ್, ಡಿಜಿಟಲ್ ಮಾಧ್ಯಮ ಸೇರಿ ಪತ್ರಿಕೋದ್ಯಮದಲ್ಲಿ 13 ವರ್ಷಗಳ ಅನುಭವ. ಊರು ಧರ್ಮಸ್ಥಳ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದಿದ್ದು ಉಜಿರೆ ಎಸ್‌ಡಿಎಂನಲ್ಲಿ. ಟಿವಿ9, ಸ್ಟಾರ್ ಸ್ಪೋರ್ಟ್ಸ್‌ನಲ್ಲಿ ಕಾರ್ಯ ನಿರ್ವಹಿಸಿದ ಅನುಭವವಿದೆ. ರಾಷ್ಟ್ರೀಯ, ಅಂತಾರಾಷ್ಟ್ರೀಯ, ಜಿಯೋ ಪಾಲಿಟಿಕ್ಸ್, ಆಟೋ, ಟೆಕ್, ಸ್ಪೋರ್ಟ್ಸ್..ಏನೇ ಕೊಟ್ಟರೂ ಬರೆಯೋದು ನನ್ನ ಶಕ್ತಿ.
ಜ್ಯೋತಿಷ್ಯ
ಹಬ್ಬ
ಗಣೇಶ ಚತುರ್ಥಿ

Latest Videos
Recommended Stories
Recommended image1
ಗಣೇಶ ಚತುರ್ಥಿಯಂದು ಇಲಿ ಕಾಣಿಸಿಕೊಂಡರೆ ಏನರ್ಥ? ಗಣಪತಿಯ ವಾಹನ ನೀಡುವ ವಿಶೇಷ ಸಂಕೇತವಿದು!
Recommended image2
Gowri Ganesha Festival Wishes in Kannada: ಬಂಧು-ಮಿತ್ರರೊಂದಿಗೆ ಹಂಚಿಕೊಳ್ಳಲು ಸುಂದರ ಶುಭಾಶಯಗಳ ಸಂಗ್ರಹ ಇಲ್ಲಿದೆ
Recommended image3
Astrology: ಮಂಗಳನ ನೀಚ ದೃಷ್ಟಿ: 3 ರಾಶಿಗೆ ಕಾದಿದೆ ಮಹಾ ಕಂಟಕ, ಇಲ್ಲಿದೆ ಪರಿಹಾರ!
Related Stories
Recommended image1
ಗಣೇಶ ಚತುರ್ಥಿಯಂದು ಇಲಿ ಕಾಣಿಸಿಕೊಂಡರೆ ಏನರ್ಥ? ಗಣಪತಿಯ ವಾಹನ ನೀಡುವ ವಿಶೇಷ ಸಂಕೇತವಿದು!
Recommended image2
Astrology: ಮಂಗಳನ ನೀಚ ದೃಷ್ಟಿ: 3 ರಾಶಿಗೆ ಕಾದಿದೆ ಮಹಾ ಕಂಟಕ, ಇಲ್ಲಿದೆ ಪರಿಹಾರ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved