LIVE NOW
Published : Jan 04, 2026, 06:53 AM ISTUpdated : Jan 04, 2026, 11:38 PM IST

Karnataka News Live: ಅಮೆರಿಕದ ಸೆರೆಯಲ್ಲಿದ್ರೂ ಗುರುವಿನ ಸ್ಮರಣೆ? ವೆನೆಜುವೆಲಾ ಅಧ್ಯಕ್ಷನ ಬದುಕನ್ನೇ ಬದಲಿಸಿದ ಆ ಭಾರತೀಯ ಸಂತ ಯಾರು?

ಸಾರಾಂಶ

ಬಳ್ಳಾರಿ SP ಪವನ್ ನಜ್ಜೂರ್ ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂಬ ಸುದ್ದಿಯೇ ಸುಳ್ಳಾಗಿದ್ದು ಅವರು ಸಂಪೂರ್ಣವಾಗಿ ಆರೋಗ್ಯದಿಂದ ಇದ್ದಾರೆ ಎಂದು ಗೃಹ ಸಚಿವ ಡಾ। ಜಿ.ಪರಮೇಶ್ವರ್‌ ಹೇಳಿದರು. ನನಗೆ ಗೊತ್ತಿರುವ ಹಾಗೆ ಅವರು ಆರಾಮಾಗಿದ್ದಾರೆ. ನಾನು ಅವರ ಜೊತೆ ಮಾತನಾಡಿಲ್ಲ. ಆದರೆ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ. ಅವರ ಪ್ರಕಾರ ಅಮಾನತು ಆಗಿರುವುದಕ್ಕೆ ಸಹಜವಾಗಿ ಸ್ವಲ್ಪ ಮಾನಸಿಕವಾಗಿ ಕುಗ್ಗಿದ್ದಾರಷ್ಟೇ ಎಂಬ ಮಾಹಿತಿಯಿದೆ. ಇದು ಸಹಜವಾಗಿ ನಡೆಯುವಂತದ್ದು. ಅದರಲ್ಲಿ ವಿಶೇಷ ಏನು ಇಲ್ಲ ಎಂದರು.

ಆತ್ಮ*ಹತ್ಯೆ ಯತ್ನ ವದಂತಿ:

ಈ ಮಧ್ಯೆ ಬಳ್ಳಾರಿ ಪೊಲೀಸ್ ವರಿಷ್ಠಾಧಿಕಾರಿ ಪವನ್ ನಜ್ಜೂರ್ ಅವರು ಅಮಾನತುಗೊಂಡ ಹಿನ್ನೆಲೆಯಲ್ಲಿ ಶಿರಾ ತಾಲೂಕು ಬರಗೂರಿನ ಸ್ನೇಹಿತರ ಫಾರಂ ಹೌಸ್‌ನಲ್ಲಿ ಮಾತ್ರೆ ಸೇವಿಸಿ ಆತ್ಮ*ಹತ್ಯೆಗೆ ಯತ್ನಿಸಿದ್ದರು ಎಂಬ ವದಂತಿ ಹಬ್ಬಿತ್ತು. ಆದರೆ ಪೊಲೀಸರು ಈ ವಿಷಯವನ್ನು ದೃಢಪಡಿಸಿಲ್ಲ. ಪವನ್ ನಜ್ಜೂರ್ ಅವರ ತಂದೆ ತುಮಕೂರಿನಲ್ಲಿ ಆಹಾರ ಇಲಾಖೆಯಲ್ಲಿ ಜಂಟಿ ನಿರ್ದೇಶಕರಾಗಿ ಕೆಲಸ ನಿರ್ವಹಿಸಿ ನಿವೃತ್ತಿಯಾಗಿದ್ದರು. ಹೀಗಾಗಿ ಅವರ ಕುಟುಂಬ ತುಮಕೂರಿನಲ್ಲಿ ನೆಲೆಸಿತ್ತು

11:38 PM (IST) Jan 04

ಅಮೆರಿಕದ ಸೆರೆಯಲ್ಲಿದ್ರೂ ಗುರುವಿನ ಸ್ಮರಣೆ? ವೆನೆಜುವೆಲಾ ಅಧ್ಯಕ್ಷನ ಬದುಕನ್ನೇ ಬದಲಿಸಿದ ಆ ಭಾರತೀಯ ಸಂತ ಯಾರು?

ಅಮೆರಿಕ ಸೇನೆಯಿಂದ ಬಂಧಿತರಾಗಿರುವ ವೆನೆಜುವೆಲಾ ಅಧ್ಯಕ್ಷ ನಿಕೋಲಸ್ ಮಡುರೊ ಅವರ ಬದುಕಿನ ಅಚ್ಚರಿಯ ಸಂಗತಿಯೊಂದು ಬೆಳಕಿಗೆ ಬಂದಿದೆ. ಬಸ್ ಡ್ರೈವರ್ ಆಗಿದ್ದ ಮಡುರೊ, ಆ.ಪ್ರ ಪುಟ್ಟಪರ್ತಿ ಸತ್ಯ ಸಾಯಿಬಾಬಾ ಅವರ ಕಟ್ಟಾ ಭಕ್ತರಾಗಿದ್ದರು ಮತ್ತು ತಮ್ಮ ಗುರುವಿನ ನಿಧನಕ್ಕೆ ರಾಷ್ಟ್ರೀಯ ಶೋಕಾಚರಣೆ ಘೋಷಿಸಿದ್ದರು.

Read Full Story

10:17 PM (IST) Jan 04

ಕುತೂಹಲದ ಲವ್​ಸ್ಟೋರಿ ಹೇಳಿದ ನಟಿ ದಿಶಾ - ಪೂರ್ಣ ಸಂದರ್ಶನದಲ್ಲಿ 8 ಕನ್ನಡ ಪದ ಬಳಕೆಗೆ ನೆಟ್ಟಿಗರ ಧನ್ಯವಾದ!

'ಲಕ್ಷ್ಮೀನಿವಾಸ' ಸೀರಿಯಲ್ ಖ್ಯಾತಿಯ ನಟಿ ದಿಶಾ ಮದನ್ ತಮ್ಮ ಲವ್ ಸ್ಟೋರಿ ಬಗ್ಗೆ ಮಾತನಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಶಶಾಂಕ್ ವಾಸುಕಿ ಗೋಪಾಲ್ ಜೊತೆ ಶುರುವಾದ ಪ್ರೀತಿ, ಸುಲಭವಾಗಿ ಮದುವೆಯಾದ ಕಥೆಯನ್ನು ಹಂಚಿಕೊಂಡಿದ್ದಾರೆ. 

Read Full Story

10:14 PM (IST) Jan 04

ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ, ಠಾಣೆ ಮುಂಭಾಗ ಜಮಾಯಿಸಿದ ಜನ

ಜೆಜೆ ನಗರದಲ್ಲಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ಕಲ್ಲೆಸೆತ, ಠಾಣೆ ಮುಂಭಾಗ ಜಮಾಯಿಸಿದ ಜನ, ಕಲ್ಲೆಸೆತ ಘಟನೆಯಲ್ಲಿ ಓಂ ಶಕ್ತಿ ಮಾಲಾಧಾರಿ ಮಗುವಿಗೆ ಗಾಯವಾಗಿದೆ. ಅನ್ಯಕೋಮಿನ ಗುಂಪಿನಿಂದ ಕಲ್ಲೆಸತವಾಗಿದೆ ಎಂಬ ಆರೋಪ ಕೇಳಿಬಂದದಿದೆ.

 

Read Full Story

09:07 PM (IST) Jan 04

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿ

ಕುಡಿದ ಮತ್ತಿನಲ್ಲಿ ಮಗನನ್ನೇ ಕಡಿದ ಅಪ್ಪ, ಕುಟುಂಬದ ರಂಪಾಟಕ್ಕೆ 29ರ ಯುವಕ ಬಲಿಯಾಗಿದ್ದಾನೆ. ಅಪ್ಪ ಮಗ ಪದೇ ಪದೇ ಜಗಳವಾಡುತ್ತಿದ್ದ ಕಾರಣ ಕುಟುಂಬ ಮೂರು ದಿಕ್ಕಾಗಿತ್ತು. ಒಬ್ಬನೇ ಮಗ ಇದೀಗ ದುರಂತ ಅಂತ್ಯಕಂಡಿದ್ದಾನೆ.

 

Read Full Story

08:05 PM (IST) Jan 04

ವೆನೆಜುವೆಲಾದಲ್ಲಿ 'ಮಡುರೊ' ಯುಗ ಅಂತ್ಯ - ಇಸ್ರೇಲ್ ಶತ್ರು ರಾಷ್ಟ್ರಗಳಿಗೆ ಶುರುವಾಯ್ತು ಕೌಂಟ್ ಡೌನ್!

ವೆನೆಜುವೆಲಾದ ಅಧ್ಯಕ್ಷ ನಿಕೋಲಸ್ ಮಡುರೊ ಅವರನ್ನು ಅಮೆರಿಕ ಸೇನೆ ಸೆರೆಹಿಡಿದಿದ್ದನ್ನು ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಶ್ಲಾಘಿಸಿದ್ದಾರೆ. ಈ ಕ್ರಮವು ಇರಾನ್‌ಗೆ ಬಲವಾದ ಎಚ್ಚರಿಕೆ ಎಂದು ಅವರು ಬಣ್ಣಿಸಿದ್ದಾರೆ.

Read Full Story

07:39 PM (IST) Jan 04

ರಾಜ್ಯದ ಕಾರ್ಮಿಕರ ದಾರಿತಪ್ಪಿಸುವ ಕೆಲಸ ಕಾಂಗ್ರೆಸ್ ಮಾಡುತ್ತಿದೆ - ಸಚಿವ ಜೋಶಿ

ಕೇಂದ್ರ ಸಚಿವ ಪ್ರಲ್ಹಾದ ಜೋಶಿಯವರು, ನರೇಗಾ ಯೋಜನೆ 'ವಿಬಿಜಿ ರಾಮ್ ಜಿ' ಎಂದು ಪರಿವರ್ತಿಸಿರುವುದರ ಬಗ್ಗೆ ರಾಜ್ಯ ಸರ್ಕಾರ ಸುಳ್ಳು ಹೇಳಿ ದಾರಿತಪ್ಪಿಸುತ್ತಿದೆ ಎಂದು ಆರೋಪಿಸಿದ್ದಾರೆ. ಈ ಹೊಸ ಯೋಜನೆಯಡಿ ಉದ್ಯೋಗದ ದಿನಗಳನ್ನು 100 ರಿಂದ 125ಕ್ಕೆ ಹೆಚ್ಚಿಸಲಾಗಿದೆ ಎಂದು ಸ್ಪಷ್ಟನೆ ನೀಡಿದ್ದಾರೆ.

Read Full Story

07:37 PM (IST) Jan 04

ವಿವಾಹ ಪೂರ್ವ ವೈದ್ಯಕೀಯ ಪರೀಕ್ಷೆ ಕಡ್ಡಾಯಗೊಳಿಸಿದ ಸರ್ಕಾರ; ಮದುವೆಗೂ ಮುನ್ನವೇ ಉರಿದಾಡೋರಿಗೆ ಬ್ರೇಕ್!

ಮದುವೆ ದೇಶದ ಒಳಗೆ ಅಥವಾ ಹೊರಗೆ ನಡೆದರೂ, ಅಥವಾ ವಧು-ವರರಲ್ಲಿ ಒಬ್ಬರು ವಿದೇಶಿಗರಾಗಿದ್ದರೂ, ಮದುವೆ ಒಪ್ಪಂದಕ್ಕೆ ಈ ವೈದ್ಯಕೀಯ ಪರೀಕ್ಷೆ ಮೂಲಭೂತ ನಿಯಮವಾಗಿರುತ್ತದೆ. ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಪರೀಕ್ಷೆಯನ್ನು ಮಾಡಿಸಿಕೊಳ್ಳಲು ವ್ಯವಸ್ಥೆಯನ್ನು ಮಾಡಿದೆ.

 

Read Full Story

07:15 PM (IST) Jan 04

ತನಿಖೆಯ ನೆಪದಲ್ಲಿ ಥೀಮ್ ಪಾರ್ಕ್ ಅನಾಥ - ಪರಶುರಾಮನಿಗೇ ಕನ್ನ ಹಾಕಿದ ಕಳ್ಳರು - ಕಾಂಗ್ರೆಸ್ ದ್ವೇಷಕ್ಕೆ ಪ್ರತಿಷ್ಠಿತ ಯೋಜನೆ ಬಲಿ?

ಕಾರ್ಕಳದ ವಿವಾದಿತ ಪರಶುರಾಮ ಥೀಮ್ ಪಾರ್ಕ್‌ನಲ್ಲಿ ಕಳ್ಳರು ಬೆಲೆಬಾಳುವ ತಾಮ್ರದ ಹೊದಿಕೆಗಳನ್ನು ಕದ್ದೊಯ್ದಿದ್ದಾರೆ. ನಿರ್ವಹಣೆಯಿಲ್ಲದೆ ಪಾಳುಬಿದ್ದಿರುವ ಈ ಯೋಜನೆಗೆ ಕಾಂಗ್ರೆಸ್ ಸರ್ಕಾರದ ದ್ವೇಷ ರಾಜಕಾರಣವೇ ಕಾರಣ ಎಂದು ಮಾಜಿ ಸಚಿವ ಸುನಿಲ್ ಕುಮಾರ್ ಆರೋಪಿಸಿದ್ದಾರೆ.
Read Full Story

07:10 PM (IST) Jan 04

ಬಾದಾಮಿ ದನದ ಕೊಟ್ಟಿಗೆಗೆ ಬೆಂಕಿಹಚ್ಚಿ ಪರಾರಿಯಾದ ದುಷ್ಕರ್ಮಿಗಳು; ರೈತ ಕುಬೇರನ ಎತ್ತಿನ ಸ್ಥಿತಿ ಗಂಭೀರ

ಬಾಗಲಕೋಟೆ ಜಿಲ್ಲೆಯ ಬಾದಾಮಿ ತಾಲೂಕಿನಲ್ಲಿ ದುಷ್ಕರ್ಮಿಗಳು ರೈತರೊಬ್ಬರ ದನದ ಕೊಟ್ಟಿಗೆಗೆ ಬೆಂಕಿ ಹಚ್ಚಿದ್ದಾರೆ. ಈ ಅಮಾನವೀಯ ಘಟನೆಯಲ್ಲಿ ಕೊಟ್ಟಿಗೆ, ಮೇವು ಸಂಪೂರ್ಣ ಸುಟ್ಟುಹೋಗಿದ್ದು, ಒಂದು ಎತ್ತು ಗಂಭೀರವಾಗಿ ಗಾಯಗೊಂಡಿದೆ.

Read Full Story

06:51 PM (IST) Jan 04

ಬೈಕ್ ಮತ್ತು ಟ್ರ್ಯಾಕ್ಟರ್ ನಡುವೆ ಭೀಕರ ಅಪಘಾತ; ಹಳಿಯಾಳ ಯುವಕ ಸ್ಥಳದಲ್ಲೇ ಸಾವು

ಉತ್ತರ ಕನ್ನಡ ಜಿಲ್ಲೆಯ ಹಳಿಯಾಳ ತಾಲೂಕಿನ ಕಾವಲವಾಡ ಬಳಿ ಟ್ರ್ಯಾಕ್ಟರ್ ಮತ್ತು ಬೈಕ್ ನಡುವೆ ನಡೆದ ಭೀಕರ ಅಪಘಾತದಲ್ಲಿ 28 ವರ್ಷದ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಟ್ರ್ಯಾಕ್ಟರ್ ಚಾಲಕನ ಅತಿ ವೇಗ ಮತ್ತು ನಿರ್ಲಕ್ಷ್ಯದ ಚಾಲನೆಯೇ ದುರ್ಘಟನೆಗೆ ಕಾರಣ ಎನ್ನಲಾಗಿದೆ.

Read Full Story

06:36 PM (IST) Jan 04

ಯಲ್ಲಾಪುರ ರಂಜಿತಾ ಕುಟುಂಬಕ್ಕೆ ವಿಜಯೇಂದ್ರ ಸಾಂತ್ವನ, ₹5 ಲಕ್ಷ ವೈಯಕ್ತಿಕ ಪರಿಹಾರ ವಿತರಣೆ

ಉತ್ತರ ಕನ್ನಡದಲ್ಲಿ ವಿವಾಹ ಪ್ರಸ್ತಾಪ ತಿರಸ್ಕರಿಸಿದ್ದಕ್ಕೆ ಹತ್ಯೆಯಾದ ಮಹಿಳೆ ರಂಜಿತಾ ಬನ್ಸೋಡೆ ಮನೆಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಭೇಟಿ ನೀಡಿ, 5 ಲಕ್ಷ ರೂ. ಪರಿಹಾರ ನೀಡಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದಿದೆ ಎಂದರು,.

Read Full Story

06:32 PM (IST) Jan 04

Theater Mafia - 'ದುಡ್ಡು-ಪವರ್ ಇದ್ದ ನನಗೇ ಯಾಮಾರಿಸಿದ್ರು' ಸ್ಯಾಂಡಲ್‌ವುಡ್‌ನಲ್ಲಿ 'ಥಿಯೇಟರ್ ಮಾಫಿಯಾ' ಬಗ್ಗೆ ಝೈದ್ ಖಾನ್ ಸ್ಫೋಟಕ ಹೇಳಿಕೆ!

ನಟ ಝೈದ್ ಖಾನ್ ಕನ್ನಡ ಚಿತ್ರರಂಗದಲ್ಲಿನ 'ಥಿಯೇಟರ್ ಮಾಫಿಯಾ' ಪೈರಸಿಗಿಂತಲೂ ಅಪಾಯಕಾರಿ ಎಂದು ಗಂಭೀರ ಆರೋಪ ಮಾಡಿದ್ದಾರೆ. ತಮ್ಮ ಮೊದಲ ಚಿತ್ರಕ್ಕೆ ಸ್ಕ್ರೀನ್‌ಗಳ ಸಂಖ್ಯೆ ಕಡಿಮೆ ಮಾಡಿದ್ದನ್ನು ಉಲ್ಲೇಖಿಸಿ, ಹಣ ಮತ್ತು ಪ್ರಭಾವವಿದ್ದ ತಮಗೇ ಅನ್ಯಾಯವಾದರೆ ಹೊಸಬರ ಗತಿಯೇನು ಎಂದು ಪ್ರಶ್ನಿಸಿದ್ದಾರೆ. 

Read Full Story

06:00 PM (IST) Jan 04

ಸಂಘಿಗಳ ಅಟ್ಟಹಾಸ ಮಿತಿಮೀರುತ್ತಿದೆ, ಸುಹಾಸ್ ಶೆಟ್ಟಿ ಟ್ರೀಟ್‌ಮೆಂಟ್ ಕೊಡಬೇಕು; 'muslim__leader' ಖಾತೆಯ ಪೋಸ್ಟ್!

ಮಂಗಳೂರಿನಲ್ಲಿ ಹಿಂದೂ ಸಂಘಟನೆ ಕಾರ್ಯಕರ್ತರಿಗೆ 'muslim__leader' ಎಂಬ ಇನ್‌ಸ್ಟಾಗ್ರಾಮ್ ಪುಟದಲ್ಲಿ ಕೊಲೆ ಬೆದರಿಕೆ ಹಾಕಲಾಗಿದೆ. ನೈತಿಕ ಪೊಲೀಸ್‌ಗಿರಿ ಘಟನೆಯನ್ನು ಮುಂದಿಟ್ಟುಕೊಂಡು ಕೋಮುದ್ವೇಷಕ್ಕೆ ಪ್ರಚೋದನೆ ನೀಡಿದ ಆರೋಪದ ಮೇಲೆ ಬಜಪೆ ಪೊಲೀಸರು ಸುಮೋಟೊ ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
Read Full Story

05:46 PM (IST) Jan 04

Z ಸೆಕ್ಯೂರಿಟಿ ಬೇಕಾದ್ರೆ ಇಟ್ಕೊಳ್ಳಿ, ನೂರು ಜನ ಪಾರ್ಟಿ ಕಾರ್ಯಕರ್ತರನ್ನೇ ನಿಯೋಜಿಸಲಿ, ಜನಾರ್ದನ ರೆಡ್ಡಿ ಭದ್ರತೆ ವಿಚಾರದಲ್ಲಿ ಡಿಕೆ ಶಿವಕುಮಾರ್ ವ್ಯಂಗ್ಯ

ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಬಳ್ಳಾರಿ ಕೊಲೆ ಪ್ರಕರಣದ ತನಿಖೆ, ಜನಾರ್ದನ ರೆಡ್ಡಿ ಭದ್ರತೆ, ವಾಲ್ಮೀಕಿ ಪ್ರತಿಮೆ ವಿವಾದದ ಕುರಿತು ಪ್ರತಿಕ್ರಿಯಿಸಿದ್ದಾರೆ. ರೆಡ್ಡಿ ಭದ್ರತೆ ಬಗ್ಗೆ ವ್ಯಂಗ್ಯವಾಡಿದ ಅವರು, ಬಳ್ಳಾರಿ ಪ್ರಕರಣದ ತನಿಖೆ ಅಂತಿಮ ತೀರ್ಮಾನ ಸಿಎಂ, ಗೃಹ ಸಚಿವರು ನೋಡ್ಕೊಳ್ತಾರೆ ಎಂದರು.

Read Full Story

05:22 PM (IST) Jan 04

ಅಪಘಾತದ ಶೂಟಿಂಗ್​ ವೇಳೆ ಅವಘಡ - ಸ್ವಲ್ಪದರಲ್ಲಿಯೇ ಪಾರಾದ ನಟಿ- ಶಾಕಿಂಗ್​ ವಿಡಿಯೋ ವೈರಲ್

ಸೀರಿಯಲ್ ಒಂದರ ಅಪಘಾತದ ದೃಶ್ಯದ ಚಿತ್ರೀಕರಣದ ವೇಳೆ ನಟಿಯೊಬ್ಬರು ಅಪಾಯಕ್ಕೆ ಸಿಲುಕಿದ್ದಾರೆ. ಸುರಕ್ಷತೆಗಾಗಿ ಹಗ್ಗ ಕಟ್ಟಿದ್ದರೂ, ಹಾರಿದ ರಭಸಕ್ಕೆ ನಟಿ ವಾಹನಕ್ಕೆ ಗುದ್ದಿ ಗಾಯಗೊಂಡಿದ್ದು, ಈ ಘಟನೆಯು ತೆರೆಯ ಹಿಂದೆ ಕಲಾವಿದರು ಎದುರಿಸುವ ಸವಾಲು ಮತ್ತು ಅಪಾಯಗಳನ್ನು ತೋರಿಸುತ್ತದೆ.
Read Full Story

05:13 PM (IST) Jan 04

ಕನ್ನಡ ಇಂಗ್ಲೀಷ್ ಎರಡರಲ್ಲೂ ಸೊಗಸಾದ ವೀಕ್ಷಕ ವಿವರಣೆ - ಸುಳ್ಯದ ಪೋರನ ಕ್ರಿಕೆಟ್ ಕಾಮೆಂಟರಿಗೆ ಮನಸೋತ ನೆಟ್ಟಿಗರು -

ದಕ್ಷಿಣ ಕನ್ನಡದ ಸುಳ್ಯದ 14 ವರ್ಷದ ಬಾಲಕ ಜಸ್ವಿತ್, ತನ್ನ ನಿರರ್ಗಳ ಕನ್ನಡ ಮತ್ತು ಇಂಗ್ಲಿಷ್ ಭಾಷಾ ಕ್ರಿಕೆಟ್ ಕಾಮೆಂಟರಿಯಿಂದ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದಾನೆ. ಸ್ಥಳೀಯ ಟೂರ್ನಿಯೊಂದರಲ್ಲಿ ಆತ ವೀಕ್ಷಕ ವಿವರಣೆ ನೀಡುತ್ತಿರುವ ವೀಡಿಯೋ ಎಲ್ಲೆಡೆ ಮೆಚ್ಚುಗೆಗೆ ಪಾತ್ರವಾಗಿದೆ.

Read Full Story

05:02 PM (IST) Jan 04

ಮುಖ್ಯಮಂತ್ರಿಗಳು ರಾಜ್ಯವನ್ನ ಯಶಸ್ವಿಯಾಗಿ ಅಭಿವೃದ್ಧಿ ಪಥದತ್ತ ಕೊಂಡೊಯ್ಯುತ್ತಿದ್ದಾರೆ - ಹೆಚ್‌ಸಿ ಮಹದೇವಪ್ಪ

ಸಚಿವ ಡಾ. ಹೆಚ್.ಸಿ. ಮಹದೇವಪ್ಪ ಅವರು, ಕಾಂಗ್ರೆಸ್ ಸರ್ಕಾರವು ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಐದು ವರ್ಷಗಳ ಪೂರ್ಣಾವಧಿ ಆಡಳಿತ ನಡೆಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಜೊತೆಗೆ, ಚಿಕ್ಕಲ್ಲೂರು ಸಿದ್ದಪ್ಪಾಜಿ ಕ್ಷೇತ್ರದ ಸಮಗ್ರ ಅಭಿವೃದ್ಧಿಗಾಗಿ ಪ್ರಾಧಿಕಾರ ರಚಿಸುವ ಬಗ್ಗೆಯೂ ಮಾಹಿತಿ ನೀಡಿದ್ದಾರೆ.

Read Full Story

04:48 PM (IST) Jan 04

ಬಳ್ಳಾರಿ ಈಗ 'ಗುಂಡು-ಗೂಂಡಾ'ಗಳ ರಿಪಬ್ಲಿಕ್ - 'ಜನಾರ್ದನ ರೆಡ್ಡಿ ಕೊಲೆಗೆ ಸಂಚು ನಡೆದಿದೆ' ಆರ್. ಅಶೋಕ ಆರೋಪ

ಬಳ್ಳಾರಿಯಲ್ಲಿ ನಡೆದ ಬ್ಯಾನರ್ ಗಲಭೆ ಮತ್ತು ಗುಂಡಿನ ಚಕಮಕಿಯು ಮಾಜಿ ಸಚಿವ ಜನಾರ್ದನ ರೆಡ್ಡಿ ಅವರನ್ನು ಮುಗಿಸಲು ನಡೆದ ಸಂಚು ಎಂದು ವಿಪಕ್ಷ ನಾಯಕ ಆರ್. ಅಶೋಕ ಗಂಭೀರವಾಗಿ ಆರೋಪಿಸಿದ್ದಾರೆ. ಸರ್ಕಾರದ ವೈಫಲ್ಯ, ಪೊಲೀಸ್ ಇಲಾಖೆಯ ದುರ್ಬಳಕೆ ಮತ್ತು ಎಸ್‌ಪಿ ಅಮಾನತನ್ನು ಖಂಡಿಸಿದರು.

Read Full Story

04:31 PM (IST) Jan 04

BBK 12 - ಎಷ್ಟೇ ಬಾರಿ ಕೇಳಿದ್ರೂ ಕೂಡ Kiccha Sudeep ಪ್ರಶ್ನೆಗೆ ಗಿಲ್ಲಿ ನಟ ಉತ್ತರಿಸಲಿಲ್ಲ - ಭಾರೀ ಮುಖಭಂಗ!

Bigg Boss Kannada Season 12 Episode Update: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಗಿಲ್ಲಿ ನಟ ಕ್ಯಾಪ್ಟನ್‌ ಆಗಿದ್ದರು. ಆಗ ಅವರು ಕಾವ್ಯ ಶೈವ ಪರವಾಗಿ ನಿರ್ಧಾರಗಳನ್ನು ತಗೊಂಡಿದ್ದಾರೆ. ಈಗ ಸ್ಪರ್ಧಿಗಳ ಆರೋಪ ನಿಜ ಎಂಬಂತಾಗಿದೆ. ಹಾಗಾದರೆ ಏನಾಯ್ತು?

 

Read Full Story

04:31 PM (IST) Jan 04

ಯಲ್ಲಾಪುರದ ರಂಜಿತಾಳ ಸಹೋದರ ರಫೀಕ್‌ನ ಆಪ್ತ ಗೆಳೆಯ; ಬೆಚ್ಚಿಬೀಳಿಸುವ ಮಾಹಿತಿ ಬಿಚ್ಚಿಟ್ಟ ಕುಟುಂಬ

ಯಲ್ಲಾಪುರದ ರಂಜಿತಾ ಬನ್ಸೋಡೆ ಕೊಲೆ ಪ್ರಕರಣದಲ್ಲಿ, ಆರೋಪಿ ರಫೀಕ್ ಮೃತಳ ಸಹೋದರನ ಆಪ್ತ ಸ್ನೇಹಿತ ಎಂಬುದು ಫೋಟೋಗಳಿಂದ ಬಹಿರಂಗವಾಗಿದೆ. ಪ್ರೀತಿ ನಿರಾಕರಿಸಿದ್ದಕ್ಕೆ ಕೊಲೆ ಮಾಡಿ, ನಂತರ ಆರೋಪಿ ಕಾಡಿನಲ್ಲಿ ನೇಣಿಗೆ ಶರಣಾಗಿದ್ದಾನೆ. ಈ ಘಟನೆಯು ಯಲ್ಲಾಪುರದಲ್ಲಿ ಉದ್ವಿಗ್ನತೆಗೆ ಕಾರಣವಾಗಿದೆ.
Read Full Story

04:14 PM (IST) Jan 04

ಸಂಚಲನ ಮೂಡಿಸಿದ್ದ Love Mocktail Movie Part 3 ರಿಲೀಸ್‌ ದಿನಾಂಕ ಘೋಷಿಸಿದ ಡಾರ್ಲಿಂಗ್‌ ಕೃಷ್ಣ

Love Mocktail Kannada Movie Release Date: ನಟನಾಗಿದ್ದ ಡಾರ್ಲಿಂಗ್ ಕೃಷ್ಣ ‘ಲವ್ ಮಾಕ್ಟೇಲ್ʼ ಸಿನಿಮಾ ನಿರ್ದೇಶನ ಮಾಡುವ ಮೂಲಕ ನಿರ್ದೇಶಕನಾಗಿ ಮೊದಲ ಹೆಜ್ಜೆಯಲ್ಲಿಯೇ ಗೆಲುವು ಕಂಡಿದ್ದರು. ಅದಾದ ನಂತರ ಬಂದಿದ್ದ ಸೀಕ್ವೆಲ್‌ ಕೂಡ ಬಂದಿತ್ತು.

 

Read Full Story

03:55 PM (IST) Jan 04

ಮಕ್ಕಳಾಗದಿದ್ದಾಗಲೂ ಜೊತೆಗಿದ್ರು, ಮಗು ಆದ್ಮೇಲೆ ದೂರವಾದ್ರು - ಖ್ಯಾತ ನಟಿಯ 14 ವರ್ಷದ ಮದುವೆ ಅಂತ್ಯ!

Celebrity Divorce India: ವರ್ಷಗಳ ಹಿಂದೆ ಕಿರುತೆರೆಯ ನಟಿ ಮಾಹಿ ವಿಜ್ ಮತ್ತು ನಿರೂಪಕ ಜೈ ಭಾನುಶಾಲಿ ವಿಚ್ಛೇದನ ಪಡೆಯಲು ನಿರ್ಧರಿಸಿದ್ದಾರೆ ಎನ್ನಲಾಗಿತ್ತು. ಇಬ್ಬರೂ ತಮ್ಮ 15 ವರ್ಷಗಳ ದಾಂಪತ್ಯವನ್ನು ಈಗ ಮುರಿದುಕೊಂಡಿದ್ದಾರೆ. ಈ ಜೋಡಿ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ.

 

Read Full Story

03:39 PM (IST) Jan 04

ನಿಧಿಗಾಗಿ 8 ತಿಂಗಳ ಮಗು ಬಲಿ ಕೊಡಲು ಯತ್ನ ಆರೋಪ - ಇಮ್ರಾನ್ ಕುಟುಂಬದಿಂದ ದತ್ತು ಪಡೆದ ಕಂದಮ್ಮನ ರಕ್ಷಣೆ!

ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ, ನಿಧಿಯ ಆಸೆಗಾಗಿ ದತ್ತು ಪಡೆದ ಎಂಟು ತಿಂಗಳ ಹಸುಗೂಸನ್ನು ಬಲಿ ಕೊಡಲು ಯತ್ನಿಸಿದ ಘಟನೆ ವರದಿಯಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

Read Full Story

03:28 PM (IST) Jan 04

BBK 12 - ‌ ಪಂಚಿಂಗ್‌ ಬ್ಯಾಗ್‌ ಕಿತ್ತೋಗೊವರೆಗೂ ಹೊಡೆದ ರಣಚಂಡಿ ರಕ್ಷಿತಾ ಶೆಟ್ಟಿ; ಕಿಚ್ಚ ಸುದೀಪ್‌ ಸೈಲೆಂಟ್

Bigg Boss Kannada Season 12: ವೀಕೆಂಡ್‌ ಎಪಿಸೋಡ್‌ನ ಸೂಪರ್‌ ಸಂಡೇ ವಿಥ್‌ ಸುದೀಪ ಶೋನಲ್ಲಿ ಏನು ಹೇಳಬೇಕೋ ಅದನ್ನು ಮುಖಕ್ಕೆ ಹೊಡೆದಂತೆ ಹೇಳಬೇಕು ಎಂದು ಕಿಚ್ಚ ಸುದೀಪ್‌ ಹೇಳಿದ್ದಾರೆ. ಆಗ ರಕ್ಷಿತಾ ಶೆಟ್ಟಿ, ಅಶ್ವಿನಿ ಗೌಡ, ರಾಶಿಕಾ ಶೆಟ್ಟಿ ಅವರು ಕೆರಳಿದ್ದಾರೆ. ಹಾಗಾದರೆ ಏನು ಕಾರಣ ಕೊಟ್ಟರು?

 

Read Full Story

03:11 PM (IST) Jan 04

ನನ್ನ ಬಳಿ ಎಲ್ಲಾ ದಾಖಲೆ ಇದೆ , ಅಕ್ರಮ ಒತ್ತುವರಿ ಪ್ರಕರಣ ಕುರಿತು ಯಶ್ ತಾಯಿ ಪುಷ್ಪಾ ತಿರುಗೇಟು

ನನ್ನ ಬಳಿ ಎಲ್ಲಾ ದಾಖಲೆ ಇದೆ , ಅಕ್ರಮ ಒತ್ತುವರಿ ಪ್ರಕರಣ ಕುರಿತು ಯಶ್ ತಾಯಿ ಪುಷ್ಪಾ ತಿರುಗೇಟು ನೀಡಿದ್ದಾರೆ. ಪುಷ್ಪಾ ಹಾಸನದಲ್ಲಿ ಅಕ್ರಮ ಜಾಗ ಒತ್ತುವರಿ ಮಾಡಿ ಕೌಂಪೌಂಡ್ ಕಟ್ಟಿದ್ದಾರೆ ಎಂದು ಆರೋಪಿಸಿ ಕೌಂಪೌಂಡ್ ಧ್ವಂಸಗೊಳಿಸಿದ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ.

Read Full Story

02:36 PM (IST) Jan 04

Bigg Boss ಮನೆಯಿಂದ ಕಾವ್ಯ ಶೈವರನ್ನು ಹೊರಗಡೆ ಕಳಿಸಿಲ್ಲ, ಅದೇ ನಂಗೆ ಆಶ್ಚರ್ಯ - Kiccha Sudeep

BBK 12: ಬಿಗ್‌ ಬಾಸ್‌ ಕನ್ನಡ ಸೀಸನ್‌ 12 ಶೋನಲ್ಲಿ ಪೇರೆಂಟ್ಸ್‌ ರೌಂಡ್‌ ಇತ್ತು. ಆಗ ಕಾವ್ಯ ಶೈವ ಮನೆಯವರು ಬಂದು ಮಾತನಾಡಿದ್ದು ದೊಡ್ಡ ಎಡವಟ್ಟಾಗಿತ್ತು. ಹೊರಗಡೆ ಏನಾಗ್ತಿದೆ ಎಂದು ಅವರು ಹೇಳಿದ್ದರು. ಈ ಬಗ್ಗೆ ಕಿಚ್ಚ ಸುದೀಪ್‌ ಅವರು ಮಾತನಾಡಿದ್ದಾರೆ.

 

Read Full Story

02:32 PM (IST) Jan 04

ಉಡುಪಿ ಕೃಷ್ಣನಿಗೆ ದೆಹಲಿ ಭಕ್ತನ 'ಹೊನ್ನಿನ ಕಾಣಿಕೆ' - ₹2 ಕೋಟಿ ಮೌಲ್ಯದ ಚಿನ್ನದ ಭಗವದ್ಗೀತೆ ಕೊಡುಗೆ

ದೆಹಲಿಯ ಭಕ್ತರೊಬ್ಬರು 2 ಕೋಟಿ ರೂ. ವೆಚ್ಚದಲ್ಲಿ ಸಿದ್ಧಪಡಿಸಿದ, 700 ಶ್ಲೋಕಗಳಿರುವ ಚಿನ್ನದ ಭಗವದ್ಗೀತೆಯನ್ನು ಉಡುಪಿ ಶ್ರೀಕೃಷ್ಣನಿಗೆ ಅರ್ಪಿಸಲಿದ್ದಾರೆ. ಪಲಿಮಾರು ಮಠದ ವಿಶ್ವಗೀತಾ ಪರ್ಯಾಯದ ಸಮಾರೋಪ ಅಂಗವಾಗಿ ಜನವರಿ 8 ರಂದು ಈ ಸ್ವರ್ಣ ಗೀತೆಯನ್ನು ಚಿನ್ನದ ರಥದಲ್ಲಿ ಮೆರವಣಿಗೆ ಮಾಡಿ ಸಮರ್ಪಿಸಲಾಗುವುದು.

Read Full Story

01:21 PM (IST) Jan 04

Bigg Bossನಲ್ಲಿ ಇವರೇ ಗೆಲ್ಲಬೇಕೆಂದು ನೀರಿಗೆ ಹಾರಿದ ಯುವ ಅಭಿಮಾನಿಗಳು! ಮುಂದೇನಾಯ್ತು ನೋಡಿ

ಬಿಗ್​ಬಾಸ್​ 12 ಫಿನಾಲೆ ಸಮೀಪಿಸುತ್ತಿದ್ದಂತೆ, ಸ್ಪರ್ಧಿಗಳ ಪರ ಪ್ರಚಾರ ಜೋರಾಗಿದೆ. ಈ ನಡುವೆ, ನಾಲ್ವರು ಯುವಕರು ತಮ್ಮ ನೆಚ್ಚಿನ ಸ್ಪರ್ಧಿಗಳಾದ ಅಶ್ವಿನಿ, ರಕ್ಷಿತಾ, ಕಾವ್ಯಾ ಮತ್ತು ಗಿಲ್ಲಿ ಗೆಲ್ಲಬೇಕೆಂದು ಕೊಳಕ್ಕೆ ಹಾರುವ ಮೂಲಕ ವಿಭಿನ್ನವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ.  

Read Full Story

01:12 PM (IST) Jan 04

ಭಜನೆ ವೇಳೆ ಖ್ಯಾತ ಕಿರುತೆರೆ ನಟಿಗೆ ಆವೇಶ; ಕಿರುಚೋದು, ಕೂಗೋದು ನೋಡಿ ದೇವಿ ಮೈಮೇಲೆ ಬಂದಳು ಎಂದ ವೀಕ್ಷಕರು!

ಭಕ್ತಿ ಪರವಶತೆಯಿದ್ದಾಗ ಒಬ್ಬೊಬ್ಬರಿಗೆ ಒಂದೊಂದು ರೀತಿಯ ಅನುಭವ ಆಗುವುದು. ಅಂತೆಯೇ ಕಿರುತೆರೆ ನಟಿಯೋರ್ವರಿಗೆ ಭಜನೆ ಕಾರ್ಯಕ್ರಮದಲ್ಲಿ ಭಾಗವಹಿಸಿದಾಗ ಆವೇಶ ಬಂದಿದೆ. ಈ ವಿಡಿಯೋ ಈಗ ಸಿಕ್ಕಾಪಟ್ಟೆ ವೈರಲ್‌ ಆಗ್ತಿದೆ.

Read Full Story

12:54 PM (IST) Jan 04

BBK 12 - ರಕ್ಷಿತಾಗೆ ಡ್ಯಾಮೇಜ್ ಆಗುವ ಮಾತು ಸುದೀಪ್ ಹೇಳಬಾರದಿತ್ತು - ಬಿಗ್‌ಬಾಸ್ ವೀಕ್ಷಕರಿಂದ ಬೇಸರ

ಬಿಗ್‌ಬಾಸ್ ಸೀಸನ್ 12ರ ಪ್ರೋಮೋದಲ್ಲಿ ನಿರೂಪಕ ಸುದೀಪ್, ಸ್ಪರ್ಧಿ ರಕ್ಷಿತಾ ಶೆಟ್ಟಿಗೆ ಒಂದು ಪದ ಬಳಸಿದ್ದಾರೆ. ಈ ಪದ ಬಳಕೆಯು ವೀಕ್ಷಕರಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದ್ದು, ಸೋಶಿಯಲ್ ಮೀಡಿಯಾದಲ್ಲಿ ಕೆಲವರು ಸುದೀಪ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Read Full Story

12:45 PM (IST) Jan 04

ಬಳ್ಳಾರಿ ಅಮಾನತ್ತಾದ ಎಸ್ಪಿ ಪವನ್ ನೆಜ್ಜೂರು ಆತ್ಮ*ಹತ್ಯೆ ಕೇಸ್-ಅಪ್ಪನ ಸ್ಪಷ್ಟನೆ; ಸಸ್ಪೆಂಡ್ ಮರುಪರಿಶೀಲನೆಗೆ ಮನವಿ!

ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಪವನ್ ನೆಜ್ಜೂರು ಆತ್ಮ*ಹತ್ಯೆ ಯತ್ನ ಮಾಡಿಲ್ಲವೆಂದು ಅವರ ತಂದೆ ಉದಯಶಂಕರ್ ನೆಜ್ಜೂರು ಸ್ಪಷ್ಟಪಡಿಸಿದ್ದಾರೆ. ಅಧಿಕಾರ ವಹಿಸಿಕೊಂಡ ಕೆಲವೇ ಗಂಟೆಗಳಲ್ಲಿ ನಡೆದ ಗಲಭೆ ಮತ್ತು ಅನಿರೀಕ್ಷಿತ ಅಮಾನತಿನಿಂದ ಮಾನಸಿಕ ಒತ್ತಡಕ್ಕೆ ಒಳಗಾಗಿದ್ದಾರೆ ಎಂದು ತಿಳಿಸಿದರು.

Read Full Story

12:34 PM (IST) Jan 04

Producer Pushpa Arunkumar ಹಾಸನ ಮನೆ ಕಾಂಪೌಂಡ್‌ ನಾಶ;‌ ಆರೋಪಕ್ಕೆ ಹೊಸ ಟ್ವಿಸ್ಟ್‌ ಕೊಟ್ಟ ಲಾಯರ್

Producer Pushpa Arunkumar: ಹಾಸನದಲ್ಲಿ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ, ವಿತರಕಿ ಪುಷ್ಪ ಅರುಣ್‌ಕುಮಾರ್‌ ಮನೆಯಿದೆ. ಆ ಮನೆ ಸಮೀಪವಿರುವ 5 ಗುಂಟೆ ಜಾಗವನ್ನು ಪುಷ್ಪ ಒತ್ತುವರಿ ಮಾಡಿಕೊಂಡು ಕಾಂಪೌಂಡ್‌ ಕಟ್ಟಿದ್ದಾರೆ ಎಂದು ಜೆಸಿಬಿ ತಂದು ಕೆಡವಲಾಗಿದೆ. ಈ ಬಗ್ಗೆ ಪುಷ್ಪ ವಕೀಲರು ಮಾತನಾಡಿದ್ದಾರೆ.

 

Read Full Story

12:18 PM (IST) Jan 04

ಭರತ್ ರೆಡ್ಡಿ ಆಪ್ತ ಸತೀಶ್ ರೆಡ್ಡಿ ಗನ್‌ಮ್ಯಾನ್ ಹಾರಿಸಿದ ಗುಂಡೇಟಿಗೆ ಕೈ ಕಾರ್ಯಕರ್ತ! ಪಂಜಾಬಿನ ಇಬ್ಬರ ಬಂಧನ

ಮಾಜಿ ಸಚಿವ ಜನಾರ್ದನ ರೆಡ್ಡಿ ನಿವಾಸದ ಎದುರು ನಡೆದ ಗುಂಡಿನ ಚಕಮಕಿ ಪ್ರಕರಣಕ್ಕೆ ಮಹತ್ವದ ತಿರುವು ಸಿಕ್ಕಿದೆ. ಸತೀಶ್ ರೆಡ್ಡಿ ಜೊತೆಗಿದ್ದ ಪಂಜಾಬ್ ಮೂಲದ ಇಬ್ಬರು ಗನ್‌ಮ್ಯಾನ್‌ಗಳೇ ಗುಂಡು ಹಾರಿಸಿದ್ದು, ಅವರನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

Read Full Story

12:08 PM (IST) Jan 04

ಬೆಂಗಳೂರು - ಬೀದಿಯಲ್ಲೇ ಗಂಡ ಹೆಂಡತಿ ಹೊಡೆದಾಟ - ಜಗಳದ ನಂತರ ಮಗುವನ್ನು ರಸ್ತೆಯಲ್ಲೇ ಬಿಟ್ಟು ದಂಪತಿ ಎಸ್ಕೇಪ್

ಬೆಂಗಳೂರಿನ ಮತ್ತಿಕೆರೆಯಲ್ಲಿ, ದಂಪತಿಯೊಬ್ಬರು ನಡುರಸ್ತೆಯಲ್ಲಿ ಜಗಳವಾಡಿ ತಮ್ಮ ಮಗುವನ್ನೇ ಬೀದಿಗೆ ಎಸೆದು ಹೋಗಿದ್ದಾರೆ. ಸಿಸಿ ಕ್ಯಾಮರಾದಲ್ಲಿ ಸೆರೆಯಾದ ಈ ಅಮಾನುಷ ಘಟನೆಯ ವಿಡಿಯೋ ವೈರಲ್ ಆಗಿದ್ದು, ಸ್ಥಳೀಯರು ಮಗುವನ್ನು ರಕ್ಷಿಸಿ, ಮರಳಿ ಬಂದ ಪೋಷಕರಿಗೆ ಅದನ್ನು ಹಿಂದಿರುಗಿಸಲು ನಿರಾಕರಿಸಿದ್ದಾರೆ.
Read Full Story

12:02 PM (IST) Jan 04

ಬ್ರೋ ನಾನು ಹೋಮ್‌ಲೆಸ್ ಆಗಿದ್ದೀನಿ; ಮಮ್ಮಿ ಬೈತಾರೆ ಅಂದಿದ್ದ ನ್ಯೂ ಇಯರ್‌ನ ವೈರಲ್ ಸರಕು ಬಾಯ್‌

ಹೊಸ ವರ್ಷದಂದು 'ಮಮ್ಮಿ ಬೈತಾರೆ ಬ್ರೋ' ಎಂದು ಹೇಳಿ ವೈರಲ್ ಆಗಿದ್ದ 'ಸರಕು ಬಾಯ್' ಯಶವಂತ್, ಇದೀಗ ತಾನು ಮನೆಯಿಂದ ಹೊರಬಿದ್ದಿರುವುದಾಗಿ ಹೇಳಿಕೊಂಡಿದ್ದಾರೆ. ವೈರಲ್ ವಿಡಿಯೋದಿಂದಾಗಿ ಅಮ್ಮ ಮನೆಯಿಂದ ಹೊರಹಾಕಿದ್ದಾರೆ ಎಂದು ಹೇಳಿದ್ದು, ಆತನ ಮುಂದಿನ ಪರಿಸ್ಥಿತಿ ಏನಾಯಿತು ಎಂಬುದನ್ನು ಈ ಲೇಖನ ವಿವರಿಸುತ್ತದೆ.
Read Full Story

11:50 AM (IST) Jan 04

Bigg Bossನಿಂದ ಗಿಲ್ಲಿ ನಟ ಆಚೆ ಬಂದಾಯ್ತು ಎನ್ನುತ್ತಾ ಭರ್ಜರಿ ಪಾರ್ಟಿ ಅರೇಂಜ್​ ಮಾಡಿದ ಡಾಗ್​ ಸತೀಶ್​!

ಬಿಗ್ ಬಾಸ್ ಖ್ಯಾತಿಯ ಡಾಗ್ ಸತೀಶ್ ತಮ್ಮ ವಿಚಿತ್ರ ಹೇಳಿಕೆಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದಾರೆ. ಇದೀಗ ತಮ್ಮ ಪ್ರತಿಸ್ಪರ್ಧಿ ಗಿಲ್ಲಿ ನಟ ಬಿಗ್ ಬಾಸ್‌ನಿಂದ ಹೊರಬಂದಿದ್ದಕ್ಕೆ ಗ್ರ್ಯಾಂಡ್ ಪಾರ್ಟಿ ಆಯೋಜಿಸಿ, ಕುಣಿದು ಕುಪ್ಪಳಿಸುತ್ತಿದ್ದಾರೆ.
Read Full Story

11:09 AM (IST) Jan 04

ಸ್ಯಾಂಡಲ್‌ವುಡ್ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್‌ ಹಾಕಿದ್ದ ಅಕ್ರಮ ಕಾಂಪೌಂಡ್ ತೆರವು

ಸ್ಯಾಂಡಲ್‌ವುಡ್‌ನ ಕೊತ್ತಲವಾಡಿ ಸಿನಿಮಾ ನಿರ್ಮಾಪಕಿ ಪುಷ್ಪಾ ಅರುಣ್‌ಕುಮಾರ್ ಅವರು ಹಾಸನದಲ್ಲಿ ಅಕ್ರಮವಾಗಿ ನಿರ್ಮಿಸಿದ್ದ ಕಾಂಪೌಂಡ್‌ನ್ನು ಭೂಮಾಲೀಕ ದೇವರಾಜು ತೆರವುಗೊಳಿಸಿದ್ದಾರೆ. ನ್ಯಾಯಾಲಯದಲ್ಲಿ ತಮ್ಮ ಪರವಾಗಿ ತೀರ್ಪು ಬಂದ ನಂತರ, ದೇವರಾಜು ಅವರು ಈ ಕ್ರಮ ಕೈಗೊಂಡಿದ್ದಾರೆ.
Read Full Story

11:06 AM (IST) Jan 04

ಹೊಸ ಜೀವನ ಶುರು ಮಾಡಿದ 'ಬಿಗ್‌ ಬಾಸ್‌' Niveditha Gowda; ಈಗ ಎಲ್ಲವೂ ಮೊದಲಿನಂತಿಲ್ಲ!

Actress Niveditha Gowda: ಬಿಗ್‌ ಬಾಸ್‌ ಕನ್ನಡ ಸೀಸನ್‌ 5 ಸ್ಪರ್ಧಿ ನಿವೇದಿತಾ ಗೌಡ ಅವರು ರಿಯಾಲಿಟಿ ಶೋ, ಸಿನಿಮಾದಲ್ಲಿ ನಟಿಸಿದ ಬಳಿಕ ಈಗ ಹೊಸ ಜೀವನ ಶುರು ಮಾಡುವ ನಿರ್ಧಾರ ಮಾಡಿದ್ದಾರೆ. ಹಾಗಿದ್ದರೆ ನಿವೇದಿತಾ ಗೌಡ ಏನು ನಿರ್ಧಾರ ಮಾಡಿದ್ದಾರೆ. ಏನದು?

Read Full Story

10:43 AM (IST) Jan 04

ಇಬ್ಬರು Bigg Boss ಸ್ಪರ್ಧಿಗಳಿಗೆ ರೆಡ್‌ ಕಾರ್ಡ್ ಕೊಟ್ಟು ಹೊರಹಾಕಿದ್ರು;‌ IPL ಗೆದ್ದಷ್ಟು ಸಂಭ್ರಮಿಸಿದ ವೀಕ್ಷಕರು

Bigg Boss: ಬಿಗ್‌ ಬಾಸ್‌ ಶೋನಲ್ಲಿ ಇಬ್ಬರು ಸ್ಪರ್ಧಿಗಳಿಗೆ ಏಕಕಾಲಕ್ಕೆ ರೆಡ್‌ ಕಾರ್ಡ್‌ ನೀಡಲಾಗಿದೆ. ಐಪಿಎಲ್‌ ಗೆದ್ದಷ್ಟು ವೀಕ್ಷಕರು ಖುಷಿಪಟ್ಟಿದ್ದಾರೆ. ಹಾಗಾದರೆ ಆ ರೆಡ್‌ ಕಾರ್ಡ್‌ ಅರ್ಥ ಏನು? ಇದು ಇತಿಹಾಸದಲ್ಲಿ ಮೊದಲ ಬಾರಿಗೆ ನಡೆದ ಘಟನೆ ಆಗಿದೆ.

 

Read Full Story

10:31 AM (IST) Jan 04

ಉಡುಪಿ ಪರ್ಯಾಯೋತ್ಸವಕ್ಕೆ ಮುಸ್ಲಿಮರ ಹೊರೆಕಾಣಿಕೆ - ಅನುಮತಿ ಇಲ್ಲವೆಂದ ಯಶ್ಪಾಲ್ ಸುವರ್ಣ

ಉಡುಪಿ ಪರ್ಯಾಯೋತ್ಸವಕ್ಕೆ ಮುಸ್ಲಿಂ ಸೌಹಾರ್ದ ಸಮಿತಿಯು ಹೊರೆಕಾಣಿಕೆ ನೀಡುವುದಾಗಿ ಪ್ರಕಟಿಸಿದೆ. ಆದರೆ, ಪರ್ಯಾಯ ಸ್ವಾಗತ ಸಮಿತಿ ಅಧ್ಯಕ್ಷ, ಶಾಸಕ ಯಶ್ಪಾಲ್ ಸುವರ್ಣ ಇದಕ್ಕೆ ಅನುಮತಿ ನೀಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

Read Full Story

More Trending News