MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Karnataka Districts
  • ನಿಧಿಗಾಗಿ 8 ತಿಂಗಳ ಮಗು ಬಲಿ ಕೊಡಲು ಯತ್ನ ಆರೋಪ: ಇಮ್ರಾನ್ ಕುಟುಂಬದಿಂದ ದತ್ತು ಪಡೆದ ಕಂದಮ್ಮನ ರಕ್ಷಣೆ!

ನಿಧಿಗಾಗಿ 8 ತಿಂಗಳ ಮಗು ಬಲಿ ಕೊಡಲು ಯತ್ನ ಆರೋಪ: ಇಮ್ರಾನ್ ಕುಟುಂಬದಿಂದ ದತ್ತು ಪಡೆದ ಕಂದಮ್ಮನ ರಕ್ಷಣೆ!

ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ, ನಿಧಿಯ ಆಸೆಗಾಗಿ ದತ್ತು ಪಡೆದ ಎಂಟು ತಿಂಗಳ ಹಸುಗೂಸನ್ನು ಬಲಿ ಕೊಡಲು ಯತ್ನಿಸಿದ ಘಟನೆ ವರದಿಯಾಗಿದೆ. ಮಕ್ಕಳ ಸಹಾಯವಾಣಿಗೆ ಬಂದ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು, ಮಗುವನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ.

2 Min read
Author : Sathish Kumar KH
Published : Jan 04 2026, 03:39 PM IST
Share this Photo Gallery
  • FB
  • TW
  • Linkdin
  • Whatsapp
19
Image Credit : Asianet News

ಬೆಂಗಳೂರು ಗ್ರಾಮಾಂತರ (ಜ.04): ನಿಧಿಯ ಆಸೆಗಾಗಿ ದತ್ತು ಪಡೆದ ಎಂಟು ತಿಂಗಳ ಹಸುಗೂಸನ್ನು ಬಲಿ ಕೊಡಲು ಮುಂದಾಗಿದ್ದ ಎನ್ನಲಾದ ಭೀಕರ ಘಟನೆಯೊಂದು ಹೊಸಕೋಟೆ ತಾಲ್ಲೂಕಿನ ಸೂಲಿಬೆಲೆಯಲ್ಲಿ ಬೆಳಕಿಗೆ ಬಂದಿದೆ. ಸಕಾಲದಲ್ಲಿ ಕಾರ್ಯಾಚರಣೆ ನಡೆಸಿದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಅಧಿಕಾರಿಗಳು ಮಗುವನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

29
Image Credit : Asianet News

ಸೂಲಿಬೆಲೆಯ ಜನತಾ ಕಾಲೋನಿಯ ನಿವಾಸಿ ಸೈಯದ್ ಇಮ್ರಾನ್ ಎಂಬುವವರ ಮನೆಯಲ್ಲಿ ಈ ಭೀಕರ ಕೃತ್ಯಕ್ಕೆ ಸಿದ್ಧತೆ ನಡೆದಿತ್ತು ಎನ್ನಲಾಗಿದೆ. ಕಳೆದ ವರ್ಷ ಏಪ್ರಿಲ್‌ನಲ್ಲಿ ಸೈಯದ್ ಇಮ್ರಾನ್ ದಂಪತಿ ಕೋಲಾರ ಮೂಲದ ದಂಪತಿಯಿಂದ ಒಂದು ಲಕ್ಷ ರೂಪಾಯಿ ನೀಡಿ ಈ ಗಂಡು ಮಗುವನ್ನು ದತ್ತು ಪಡೆದಿದ್ದರು.

Related Articles

Related image1
ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಭಾಗ್ಯ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಂಟ್ರಿ, ಜಾಮೀನು ರದ್ದತಿ ಕ್ರಮ
Related image2
Now Playing
ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ
39
Image Credit : Asianet News

'ನಮಗೆ ಗಂಡು ಮಕ್ಕಳಿಲ್ಲ, ಮಗುವನ್ನು ಸ್ವಂತ ಮಗನಂತೆ ಸಾಕಿ ಸಲಹುತ್ತೇವೆ' ಎಂದು ನಂಬಿಸಿ, ಕಾನೂನುಬಾಹಿರವಾಗಿ ಹಣದ ವ್ಯವಹಾರ ನಡೆಸಿ ಮಗುವನ್ನು ಮನೆಗೆ ತಂದಿದ್ದರು. ಹಣ ನೀಡುವ ದೃಶ್ಯವನ್ನು ವಿಡಿಯೋ ಕೂಡ ಮಾಡಿಕೊಂಡಿದ್ದರು ಎಂದು ತಿಳಿದುಬಂದಿದೆ.

49
Image Credit : Asianet News

ನಿನ್ನೆ ಹುಣ್ಣಿಮೆಯ ವಿಶೇಷ ದಿನವಾಗಿದ್ದರಿಂದ, ನಿಧಿಯ ಆಸೆಗಾಗಿ ಮಗುವನ್ನು ಬಲಿ ಕೊಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮಕ್ಕಳ ಸಹಾಯವಾಣಿಗೆ (1098) ತಲುಪಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಜಿಲ್ಲಾ ಮಕ್ಕಳ ರಕ್ಷಣಾ ಘಟಕ ಮತ್ತು ಪೊಲೀಸರ ತಂಡ ಇಮ್ರಾನ್ ಮನೆಗೆ ಲಗ್ಗೆ ಇಟ್ಟಿತು.

59
Image Credit : Asianet News

ಅಧಿಕಾರಿಗಳು ಮನೆ ಪರಿಶೀಲಿಸಿದಾಗ ಕೋಣೆಯೊಂದರಲ್ಲಿ ಆಳವಾದ ಗುಂಡಿ ತೆಗೆದು ಪೂಜೆ ಮಾಡಿರುವುದು ಪತ್ತೆಯಾಗಿದೆ. ನಿಧಿಗಾಗಿ ನಡೆಸುವ ಮಾಟ-ಮಂತ್ರದ ಮಾದರಿಯಲ್ಲೇ ಈ ಪೂಜೆ ಇತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ.

69
Image Credit : Asianet News

ಅಧಿಕಾರಿಗಳು ಮಗುವನ್ನು ವಶಕ್ಕೆ ಪಡೆಯಲು ಮುಂದಾದಾಗ ಇಮ್ರಾನ್ ಕುಟುಂಬಸ್ಥರು ಭಾರಿ ಹೈಡ್ರಾಮಾ ಸೃಷ್ಟಿಸಿದರು. 'ಮನೆಯಲ್ಲಿ ಹಳೆಯ ಹುತ್ತವಿತ್ತು, ಅದನ್ನು ತೆಗೆಸಲು ಪೂಜೆ ಮಾಡಿದ್ದೇವೆ ಹೊರತು ಬಲಿ ಕೊಡಲು ಅಲ್ಲ. ನಮಗೆ ಆಗದವರು ಸುಳ್ಳು ದೂರು ನೀಡಿದ್ದಾರೆ' ಎಂದು ಕಣ್ಣೀರು ಹಾಕುತ್ತಾ ಅಧಿಕಾರಿಗಳನ್ನು ತಡೆಯಲು ಯತ್ನಿಸಿದರು.

79
Image Credit : Asianet News

'ನಮ್ಮ ತಂದೆಗೆ ಏನಾದರೂ ಆದರೆ ಪೊಲೀಸರೇ ಹೊಣೆ' ಎಂದು ಬೆದರಿಕೆ ಹಾಕುವ ಮೂಲಕ ಭಾವನಾತ್ಮಕವಾಗಿ ದಾರಿ ತಪ್ಪಿಸಲು ಯತ್ನಿಸಿದರು.

89
Image Credit : Asianet News

ಆದರೆ, ಮನೆಯೊಳಗೆ ಅನುಮಾನಾಸ್ಪದವಾಗಿ ಗುಂಡಿ ತೆಗೆದಿರುವುದು ಮತ್ತು ದತ್ತು ಪ್ರಕ್ರಿಯೆಯಲ್ಲಿನ ಕಾನೂನು ಬಾಹಿರ ಅಂಶಗಳನ್ನು ಗಮನಿಸಿದ ಅಧಿಕಾರಿಗಳು, 8 ತಿಂಗಳ ಮಗುವನ್ನು ವಶಕ್ಕೆ ಪಡೆದು ಶಿಶು ಕೇಂದ್ರಕ್ಕೆ ರವಾನಿಸಿದ್ದಾರೆ. ಮಕ್ಕಳ ರಕ್ಷಣಾ ಕಲ್ಯಾಣ ಸಮಿತಿಯು ಈ 'ಬಲಿ ಪೂಜೆ'ಯ ಆರೋಪದ ಬಗ್ಗೆ ಸಮಗ್ರ ತನಿಖೆ ಆರಂಭಿಸಿದೆ.

99
Image Credit : Asianet News

ಸೂಲಿಬೆಲೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದ್ದು, ಮಗುವನ್ನು ಮಾರಾಟ ಮಾಡಿದವರು ಮತ್ತು ಬಲಿ ಕೊಡಲು ಸಂಚು ರೂಪಿಸಿದವರ ವಿರುದ್ಧ ಕಠಿಣ ಕ್ರಮಕ್ಕೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಕರ್ನಾಟಕ ಸುದ್ದಿ
ಬೆಂಗಳೂರು
ಬೆಂಗಳೂರು ಗ್ರಾಮಾಂತರ
ಮಕ್ಕಳು

Latest Videos
Recommended Stories
Recommended image1
ಉಡುಪಿ ಕೃಷ್ಣನಿಗೆ ದೆಹಲಿ ಭಕ್ತನ 'ಹೊನ್ನಿನ ಕಾಣಿಕೆ': ₹2 ಕೋಟಿ ಮೌಲ್ಯದ ಚಿನ್ನದ ಭಗವದ್ಗೀತೆ ಕೊಡುಗೆ
Recommended image2
ಮಂಗಳೂರು: ಕಾಂಪೌಂಡ್ ಹಾರಿ ಮನೆ ಅಂಗಳಕ್ಕೆ ಬಂದು ಬಿದ್ದ ಕಾರು: ಚಾಲಕ ಪವಾಡದಂತೆ ಪಾರು: ವೀಡಿಯೋ
Recommended image3
ಬಳ್ಳಾರಿ ಅಮಾನತ್ತಾದ ಎಸ್ಪಿ ಪವನ್ ನೆಜ್ಜೂರು ಆತ್ಮ*ಹತ್ಯೆ ಕೇಸ್-ಅಪ್ಪನ ಸ್ಪಷ್ಟನೆ; ಸಸ್ಪೆಂಡ್ ಮರುಪರಿಶೀಲನೆಗೆ ಮನವಿ!
Related Stories
Recommended image1
ಪುತ್ತೂರು ಬಿಜೆಪಿ ಮುಖಂಡನ ಪುತ್ರನಿಂದ ಯುವತಿಗೆ ಮಗು ಭಾಗ್ಯ, ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಎಂಟ್ರಿ, ಜಾಮೀನು ರದ್ದತಿ ಕ್ರಮ
Recommended image2
Now Playing
ಅಮ್ಮನ ಪ್ರೇಮದಾಟಕ್ಕೆ ಮೂರು ವರ್ಷದ ಮಗು ಬಲಿ: ತನಿಖೆಯಲ್ಲಿ ಬಯಲಾಯ್ತು ಹೆತ್ತಮ್ಮನ ಕರಾಳ ಮುಖ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved