LIVE NOW
Published : Jul 13, 2026, 07:37 AM ISTUpdated : Jul 13, 2026, 10:55 AM IST

National News Live: ವಿಂಬಲ್ಡನ್‌ನಲ್ಲಿ ಈ ಸಲವೂ ಯಾನ್ನಿಕ್‌ ಸಿನ್ನರ್‌ ವಿನ್ನರ್!

ಸಾರಾಂಶ

ನವದೆಹಲಿ (ಜು.13): ಉತ್ತರಾಖಂಡದ ಪ್ರಸಿದ್ದಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ), ಅಕ್ರಮ ನಡೆದಿ ರುವುದು ನಿಜ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿ ಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್‌ಟೇನ್‌ಮೆಂಟ್‌ನ ಸುದ್ದಿಗಳ ವಿವರಗಳ ಲೈವ್‌ ಬ್ಲಾಗ್‌..

Jannik Sinner

10:55 AM (IST) Jul 13

ವಿಂಬಲ್ಡನ್‌ನಲ್ಲಿ ಈ ಸಲವೂ ಯಾನ್ನಿಕ್‌ ಸಿನ್ನರ್‌ ವಿನ್ನರ್!

ವಿಶ್ವದ ನಂ.1 ಆಟಗಾರ ಯಾನ್ನಿಕ್‌ ಸಿನ್ನರ್‌, ಜರ್ಮನಿಯ ಅಲೆಕ್ಸಾಂಡರ್‌ ಜ್ವೆರೆವ್‌ರನ್ನು ಮಣಿಸಿ ಸತತ ಎರಡನೇ ಬಾರಿಗೆ ವಿಂಬಲ್ಡನ್‌ ಗ್ರ್ಯಾನ್‌ಸ್ಲಾಂ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ. ಈ ರೋಚಕ ಗೆಲುವಿನೊಂದಿಗೆ, ಸಿನ್ನರ್‌ ತಮ್ಮ ವೃತ್ತಿಜೀವನದ ಐದನೇ ಗ್ರ್ಯಾನ್‌ಸ್ಲಾಂ ಕಿರೀಟವನ್ನು ಮುಡಿಗೇರಿಸಿಕೊಂಡರು.
Read Full Story

10:43 AM (IST) Jul 13

ರಾಜ್ಯಕ್ಕೆ ಶಿವಮೊಗ್ಗ ‘ಮಹಾರಾಜ’; ಬೆಂಗಳೂರು ಪರ ಸಮಿತ್ ದ್ರಾವಿಡ್ ಹೋರಾಟ ವ್ಯರ್ಥ

ಕೆಎಸ್‌ಸಿಎ ಮಹಾರಾಜ ಟ್ರೋಫಿ ಟಿ20 ಟೂರ್ನಿಯ ಫೈನಲ್‌ನಲ್ಲಿ ಶಿವಮೊಗ್ಗ ಯೋಧಾಸ್‌ ತಂಡವು ಬೆಂಗಳೂರು ಬ್ಲಾಸ್ಟರ್ಸ್‌ ವಿರುದ್ಧ 4 ವಿಕೆಟ್‌ಗಳ ರೋಚಕ ಜಯ ಸಾಧಿಸಿ ಚಾಂಪಿಯನ್‌ ಪಟ್ಟಕ್ಕೇರಿತು. ನಾಯಕ ಲವ್‌ನಿತ್‌ ಸಿಸೋಡಿಯಾ ಅವರ ಸ್ಫೋಟಕ 87 ರನ್‌ಗಳ ನೆರವಿನಿಂದ ಶಿವಮೊಗ್ಗ ಗೆಲುವಿನ ನಗೆ ಬೀರಿದರೆ, ಬೆಂಗಳೂರು ಪರ ಸಮಿತ್ ದ್ರಾವಿಡ್ ಅವರ ಆಲ್‌ರೌಂಡ್ ಪ್ರದರ್ಶನ ವ್ಯರ್ಥವಾಯಿತು.
Read Full Story

10:35 AM (IST) Jul 13

35 ವರ್ಷದ ಹಿಂದೆ ಪಡೆದ ₹1000ಕ್ಕೆ ಬಡ್ಡಿ ಸೇರಿಸಿ ಈಗ ₹35,000 ಪಾವತಿ

35 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿ ಲಚ್ಚಣ್ಣನಿಂದ 1000 ರೂ. ಸಾಲ ಪಡೆದಿದ್ದ ಇಸ್ಮಾಯಿಲ್, ಸಂಪರ್ಕ ಕಳೆದುಕೊಂಡರೂ ಅವರನ್ನು ಮರೆತಿರಲಿಲ್ಲ. ಇತ್ತೀಚೆಗೆ, ಕೇವಲ ಅಲ್ಪ ಮಾಹಿತಿಯಿಂದ ಲಚ್ಚಣ್ಣನ ವಿಳಾಸ ಪತ್ತೆಹಚ್ಚಿ, ಅವರ ಕುಟುಂಬಕ್ಕೆ ಬಡ್ಡಿ ಸಮೇತ 25,000 ರೂ. ಮರಳಿಸಿದ್ದಾರೆ.

Read Full Story

10:20 AM (IST) Jul 13

ಇಸ್ರೋದಿಂದ ಗಗನಯಾನದ 3 ಸಿದ್ಧತಾ ಪರೀಕ್ಷೆ ಯಶಸ್ವಿ

ಇಸ್ರೋ ತನ್ನ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗಾಗಿ ಕ್ರೂ ಮಾಡ್ಯೂಲ್‌ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.

Read Full Story

10:13 AM (IST) Jul 13

FIFA World Cup 2026 - ವಿಶ್ವಚಾಂಪಿಯನ್‌ ಅರ್ಜೆಂಟೀನಾ ಸೆಮಿಫೈನಲ್‌ಗೆ

ಹಾಲಿ ಚಾಂಪಿಯನ್‌ ಅರ್ಜೆಂಟೀನಾ, ಸ್ವಿಜರ್‌ಲೆಂಡ್‌ ವಿರುದ್ಧದ ಫಿಫಾ ವಿಶ್ವಕಪ್ ಕ್ವಾರ್ಟರ್‌ ಫೈನಲ್ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಜಯಗಳಿಸಿ ಸೆಮಿಫೈನಲ್‌ ಪ್ರವೇಶಿಸಿದೆ. ನಿಗದಿತ ಅವಧಿಯಲ್ಲಿ 1-1 ಗೋಲುಗಳಿಂದ ಸಮಬಲಗೊಂಡ ಪಂದ್ಯವು ಹೆಚ್ಚುವರಿ ಅವಧಿಗೆ ಸಾಗಿತು, ಅಲ್ಲಿ ಜೂಲಿಯನ್‌ ಆಲ್ವರೆಜ್‌ ಮತ್ತು ಲಾಟರೊ ಮಾರ್ಟಿನೆಜ್‌ ಗೋಲು ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.
Read Full Story

10:05 AM (IST) Jul 13

ಮನೆಯಲ್ಲಿ ಹಿಂದು, ಹೊರಗೆ ಜಾತ್ಯಾತೀತ; ಧರ್ಮ ಪ್ರದರ್ಶನದ ಅಗತ್ಯ ನನಗಿಲ್ಲ ಎಂದ ಅಣ್ಣಾಮಲೈ

ಇತ್ತೀಚೆಗೆ ಬಿಜೆಪಿ ತೊರೆದ ಕೆ. ಅಣ್ಣಾಮಲೈ, ನಿಜವಾದ ಹಿಂದೂ ತಾರತಮ್ಯ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಪೊಲ್ಲಾಚಿಯಲ್ಲಿ ನಡೆದ ಸಮಾವೇಶದಲ್ಲಿ, ಯುವಕರ ಮೂಲಕ ರಾಜಕೀಯ ಬದಲಾವಣೆ ತಂದು ಅಧಿಕಾರಕ್ಕೇರುವ ಪರೋಕ್ಷ ಆಶಯವನ್ನು ಅವರು ವ್ಯಕ್ತಪಡಿಸಿದ್ದಾರೆ.
Read Full Story

09:48 AM (IST) Jul 13

ದಾಖಲೆಗಾಗಿ 6 ವರ್ಷದ ಮೊಮ್ಮಗಳಿಗೆ ಕಾರ್‌ ಕೊಟ್ಟ ಪೊಲೀಸ್‌, ಭಾರೀ ಜನಾಕ್ರೋಶ!

ಗಿನ್ನೆಸ್‌ ದಾಖಲೆ ನಿರ್ಮಿಸುವ ಉದ್ದೇಶದಿಂದ ಹೈದರಾಬಾದ್‌ನ ಪೊಲೀಸ್ ಉಪ-ನಿರೀಕ್ಷಕರೊಬ್ಬರು ತಮ್ಮ 6 ವರ್ಷದ ಮೊಮ್ಮಗಳಿಗೆ ವಾಹನದಟ್ಟಣೆಯ ರಸ್ತೆಯಲ್ಲಿ ಕಾರು ಚಲಾಯಿಸಲು ಬಿಟ್ಟಿದ್ದಾರೆ. ಈ ಹುಚ್ಚಾಟಕ್ಕಾಗಿ ಅವರ ವಿರುದ್ಧ ಇತರರ ಜೀವಕ್ಕೆ ಅಪಾಯವನ್ನುಂಟುಮಾಡಿದ ಆರೋಪದ ಮೇಲೆ ಪ್ರಕರಣ ದಾಖಲಿಸಲಾಗಿದೆ.
Read Full Story

09:33 AM (IST) Jul 13

ಲಾರ್ಡ್ಸ್‌ನಲ್ಲಿ ಗೆಲುವಿನ ಹೊಸ್ತಿಲಲ್ಲಿ ಭಾರತ ಮಹಿಳಾ ತಂಡ; ಯಸ್ತಿಕಾ ಭಾಟಿಯಾ ಚೊಚ್ಚಲ ಶತಕ

ಪ್ರತಿಷ್ಠಿತ ಲಾರ್ಡ್ಸ್ ಕ್ರೀಡಾಂಗಣದಲ್ಲಿ ನಡೆದ ಐತಿಹಾಸಿಕ ಟೆಸ್ಟ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಇಂಗ್ಲೆಂಡ್‌ಗೆ 457 ರನ್‌ಗಳ ಬೃಹತ್ ಗುರಿ ನೀಡಿದೆ. ಯಸ್ತಿಕಾ ಭಾಟಿಯಾ ಅವರ ಚೊಚ್ಚಲ ಶತಕದ ನೆರವಿನಿಂದ ಭಾರತ ಬೃಹತ್ ಮೊತ್ತ ಕಲೆಹಾಕಿತು. ಈ ಗುರಿ ಬೆನ್ನತ್ತಿದ ಇಂಗ್ಲೆಂಡ್ ತಂಡವು ದಿನದಾಟದಂತ್ಯಕ್ಕೆ 6 ವಿಕೆಟ್ ಕಳೆದುಕೊಂಡು ಸೋಲಿನ ಸುಳಿಯಲ್ಲಿದೆ.
Read Full Story

09:25 AM (IST) Jul 13

ಕ್ಷಿಪಣಿ ನಿರ್ಮಾಣಕ್ಕೆ ಶೀಘ್ರ ಖಾಸಗಿ ಕಂಪನಿಗಳಿಗೂ ಅವಕಾಶ?

ಭಾರತ ಸರ್ಕಾರವು ತನ್ನ ರಕ್ಷಣಾ ಉತ್ಪಾದನಾ ನೀತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ.

Read Full Story

08:43 AM (IST) Jul 13

ರಾಹುಲ್ ದ್ರಾವಿಡ್‌ಗೆ ಇಂಗ್ಲೆಂಡ್ ಕ್ರಿಕೆಟ್ ಬಿಗ್ ಆಫರ್.. ಟೆಸ್ಟ್ ಕ್ರಿಕೆಟ್ ಉಳಿಸಲು ಕನ್ನಡಿಗನ ಆಸರೆ ಬಯಸಿದ ECB

ಕನ್ನಡಿಗ ರಾಹುಲ್ ದ್ರಾವಿಡ್‌ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಿಸಲು ಇಸಿಬಿ ಬಯಸಿದ್ದು, ಅದಕ್ಕೆ ದ್ರಾವಿಡ್ ಅವರ ಸಮ್ಮತಿಗಾಗಿ ಕಾಯ್ತಿದೆ ಎಂದು ವರದಿಯಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.

Read Full Story

08:02 AM (IST) Jul 13

ಅಮೆರಿಕ-ಇರಾನ್‌ ನಡುವೆ ಮತ್ತೊಂದು ಸುತ್ತಿನ ಭೀಕರ ಕದನ, ಹೋರ್ಮುಜ್‌ ಮತ್ತೆ ಬಂದ್‌

ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ಜಲಸಂಧಿಯನ್ನು ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್‌ನ 140 ನೆಲೆಗಳ ಮೇಲೆ ದಾಳಿ ನಡೆಸಿದ್ದು, ನಂತರ ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್‌ ದಾಳಿ ನಡೆಸಿದೆ.

Read Full Story

07:47 AM (IST) Jul 13

ಬದರೀನಾಥ ದೇಗುಲದಲ್ಲೂ ಹುಂಡಿ ಕಳವು ನಿಜ - ಎಸ್‌ಐಟಿ

ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.

Read Full Story

07:38 AM (IST) Jul 13

Operation entebbe: ಎಂಟೆದೆಯ ಎಂಟೆಬ್ಬೆಗೆ ಈಗ 50! ಇಡೀ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಇಸ್ರೇಲ್‌ ಕಾರ್ಯಾಚರಣೆ!

1976ರಲ್ಲಿ ಪ್ಯಾಲೆಸ್ತೀನ್‌ ಮತ್ತು ಜರ್ಮನ್‌ ಉಗ್ರರು ಏರ್‌ ಫ್ರಾನ್ಸ್‌ ವಿಮಾನವನ್ನು ಅಪಹರಿಸಿ, ಇಸ್ರೇಲಿ ಪ್ರಯಾಣಿಕರನ್ನು ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳಾಗಿರಿಸಿಸಿದರು ಇಸ್ರೇಲ್‌ ಸೇನೆ 'ಆಪರೇಷನ್‌ ಎಂಟೆಬ್ಬೆ' ಎಂಬ ರಣರೋಚಕ ಕಾರ್ಯಾಚರಣೆ ನಡೆಸಿ, ಎಲ್ಲಾ ಸವಾಲುಗಳನ್ನು ರಕ್ಷಿಸಿದ ರಣರೋಚಕ ಕತೆಯಿದು.

 

Read Full Story

More Trending News