ನವದೆಹಲಿ (ಜು.13): ಉತ್ತರಾಖಂಡದ ಪ್ರಸಿದ್ದಬದರೀನಾಥ ದೇವಾಲಯದಲ್ಲೂ ಹುಂಡಿ ಕಳವು ನಡೆದಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸಿರುವ ವಿಶೇಷ ತನಿಖಾ ತಂಡ (ಎಸ್ ಐಟಿ), ಅಕ್ರಮ ನಡೆದಿ ರುವುದು ನಿಜ ಎಂದು ಬಹಿರಂಗಪಡಿಸಿದೆ. ಇದಕ್ಕೆ ಸಂಬಂಧಿಸಿದ 18 ಪುಟಗಳ ವರದಿ ಯನ್ನು ಬದರೀನಾಥ-ಕೇದಾರನಾಥ ದೇವಾಲಯ ಸಮಿತಿ (ಬಿಕೆಟಿಸಿ) ಸಿಇಒಗೆ ಸಲ್ಲಿಸಿದೆ. ಉತ್ತರಾಖಂಡ ಸರ್ಕಾರವು ಬಿಕೆಟಿಸಿಯ ಸಿಇಒಗೆ ತನಿಖಾ ವರದಿಯಲ್ಲಿ ಹೆಸರಿಸಲಾದ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳುವಂತೆ ನಿರ್ದೇಶಿಸಿದೆ. ಅದರೊಂದಿಗೆ ಇಂದಿನ ರಾಷ್ಟ್ರೀಯ, ರಾಜಕೀಯ, ಚುನಾವಣೆ, ವಾಣಿಜ್ಯ, ಟೆಕ್ನಾಲಜಿ ಹಾಗೂ ಎಂಟರ್ಟೇನ್ಮೆಂಟ್ನ ಸುದ್ದಿಗಳ ವಿವರಗಳ ಲೈವ್ ಬ್ಲಾಗ್..

11:39 PM (IST) Jul 13
Maa Inti Bangaram OTT: ಸಮಂತಾ ಪ್ರಮುಖ ಪಾತ್ರದಲ್ಲಿ ನಟಿಸಿರುವ 'ಮಾ ಇಂಟಿ ಬಂಗಾರಂ' ಚಿತ್ರ ಬಾಕ್ಸಾಫೀಸ್ನಲ್ಲಿ ಸೂಪರ್ ಹಿಟ್ ಆಗಿದೆ. ಈ ಸಿನಿಮಾ ವಿಶ್ವಾದ್ಯಂತ 100 ಕೋಟಿ ರೂಪಾಯಿ ಗಳಿಕೆಯ ಮೈಲಿಗಲ್ಲು ತಲುಪಿದೆ.
10:56 PM (IST) Jul 13
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೊರ್ಮುಜ್ ಜಲಸಂಧಿ ಮೂಲಕ ಸಾಗುವ ಹಡಗುಗಳ ಮೇಲೆ ಶೇ. 20ರಷ್ಟು ಭದ್ರತಾ ಶುಲ್ಕ ವಿಧಿಸುವುದಾಗಿ ಘೋಷಿಸಿದ್ದಾರೆ. ಇರಾನ್ಗೆ ಪಾಠ ಕಲಿಸುವ ಈ ಕ್ರಮದಿಂದ ಭಾರತದಲ್ಲಿ ಎಲ್ಪಿಜಿ ಸಿಲಿಂಡರ್ಗಳ ಬೆಲೆ ಏರಿಕೆಯಾಗುವ ಆತಂಕ ಎದುರಾಗಿದೆ.
10:43 PM (IST) Jul 13
ಆರೋಪಿ ರೋಹಿತ್ ಚಂದೆಲ್ ನಿವಾಸದ ಮೇಲೆ ದಾಳಿ ನಡೆಸಿ, ಪೊಲೀಸರು ಜುಲೈ 10ರ ಶುಕ್ರವಾರದಂದು ವಶಕ್ಕೆ ಪಡೆದಿದ್ದಾರೆ. ಆರೋಪಿ ವಿರುದ್ಧ ಪೋಕ್ಸೋ ಕಾಯ್ದೆ ಸೇರಿದಂತೆ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 78 ಮತ್ತು 115(2) ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ.
09:55 PM (IST) Jul 13
ಖತಾರ್ ದೇಶದ ಮಾಜಿ ಅಮೀರ್ ಶೇಖ್ ಹಮದ್ ಬಿನ್ ಖಲೀಫಾ ಅಲ್-ಥಾನಿ ಅವರ ನಿಧನದ ಹಿನ್ನೆಲೆಯಲ್ಲಿ, ಗೌರವಸೂಚಕವಾಗಿ ಭಾರತ ಒಂದು ದಿನ ರಾಷ್ಟ್ರೀಯ ಶೋಕಾಚರಣೆ ನಡೆಸಿದೆ. ಎಲ್ಲಾ ಸರ್ಕಾರಿ ಹಾಗೂ ಪ್ರಮುಖ ಕಟ್ಟಡಗಳ ಮೇಲೆ ಧ್ವಜವನ್ನು ಅರ್ಧಮಟ್ಟಕ್ಕೆ ಹಾರಿಸಲಾಗಿದೆ.
09:13 PM (IST) Jul 13
ನಟ ಧನುಷ್ ಅವರ ಬಹುನಿರೀಕ್ಷಿತ 'ತಮಿಳ್ ಮುರುಗನ್' ಸಿನಿಮಾದ ಫಸ್ಟ್ ಲುಕ್ ರಿಲೀಸ್ ಆಗಿದೆ. ಇದು ನಿರ್ದೇಶಕ ವೆಟ್ರಿಮಾರನ್ ಜೊತೆಗಿನ ಧನುಷ್ ಅವರ ಐದನೇ ಸಿನಿಮಾ. ಪೋಸ್ಟರ್ನಲ್ಲಿ ಧನುಷ್ ಆನೆ ಮೇಲೆ ಕುಳಿತು, ಕೈಯಲ್ಲಿ ಭರ್ಜಿ ಹಿಡಿದು, ದೊಡ್ಡ ಸೈನ್ಯದ ಮುಂದೆ ನಿಂತಿದ್ದಾರೆ.
09:08 PM (IST) Jul 13
ಭಾರತ ಮಹಿಳಾ ತಂಡ ಲಾರ್ಡ್ಸ್ ಟೆಸ್ಟ್ ಗೆದ್ದುಇತಿಹಾಸ ರಚಿಸಿದೆ. ವಿಶೇಷ ಅಂದರೆ ನಾಲ್ಕನೇ ದಿನ ಸಚಿನ್ ತೆಂಡೂಲ್ಕರ್ ಮಹಿಳಾ ತಂಡಕ್ಕೆ ಪೆಪ್ ಟಾಕ್ ನೀಡಿದ್ದರು. ಅದೇ ದಿನ ಮಹಿಳೆಯರು ಟೆಸ್ಟ್ ಗೆದ್ದು ಇತಿಹಾಸ ರಚಿಸಿದ್ದಾರೆ.
08:46 PM (IST) Jul 13
ದೀಪಿಕಾ ಪಡುಕೋಣೆ ಅವರ ಮೊದಲ ಬಾಯ್ಫ್ರೆಂಡ್ ಎನ್ನಲಾದ ಮುಝಮ್ಮಿಲ್ ಇಬ್ರಾಹಿಂ, ಹಲವು ವರ್ಷಗಳ ನಂತರ ತಮ್ಮ ಸಂಬಂಧದ ಬಗ್ಗೆ ಮಾತನಾಡಿದ್ದಾರೆ. ಸಂಬಂಧ ಶುರುವಾಗಿದ್ದು ಹೇಗೆ ಮತ್ತು ಬ್ರೇಕಪ್ ಮಾಡಿದ್ದು ಯಾರು ಎಂಬ ಬಗ್ಗೆ ಅಚ್ಚರಿಯ ಮಾಹಿತಿ ಬಿಚ್ಚಿಟ್ಟಿದ್ದಾರೆ.
08:35 PM (IST) Jul 13
ಬಿಲಾಸಪುರದಲ್ಲಿ ರೈಲು ಅಪಘಾತ ಸಂಭವಿಸಿದೆ. ಮೂರು ಬೋಗಿಗಳು ಹಳಿ ತಪ್ಪಿದ ಪರಿಣಾಮ ಇತರ ರೈಲು ಸಂಚಾರ ವಿಳಂಬವಾಗಿದೆ. ಈ ಮಾರ್ಗದಲ್ಲಿ ಚಲಿಸಬೇಕಿದ್ದ ಹಲವು ಪ್ರಯಾಣಿಕರ ರೈಲುಗಳನ್ನು ತಾತ್ಕಾಲಿಕ ಸ್ಥಗಿತಗೊಳಿಸಲಾಗಿದೆ.
07:35 PM (IST) Jul 13
ದೆಹಲಿ ಗಲಭೆ ವೇಳೆ ಇಂಟಲಿಜೆನ್ಸ್ ಅಧಿಕಾರಿ ಅಂಕಿತ್ ಶರ್ಮಾ ಹತ್ಯೆ ಪ್ರಕರಣದ ತೀರ್ಪು ಹೊರಬಿದ್ದಿದೆ. ಆಪ್ ಮಾಜಿ ನಾಯಕ ತಾಹೀರ್ ಹುಸೇನ್ ದೋಷಿ ಎಂದು ಕೋರ್ಟ್ ತೀರ್ಪು ನೀಡಿದೆ. ಇದೇ ಪ್ರಕರಣದಲ್ಲಿ ಜಾವೇದ್ ಸೇರಿದಂತೆ ನಾಲ್ವರು ದೋಷಿ ಎಂದಿದೆ.
07:23 PM (IST) Jul 13
2010ರಲ್ಲಿ ಆಸ್ಟ್ರಿಯಾದ ಉದ್ಯಮಿ ಪೀಟರ್ ಹಾಗ್ ಕೈ ಹಿಡಿದಾಗ ಸೆಲಿನಾ ಬದುಕು ಹೂವಿನ ಹಾಸಿಗೆಯಂತೆ ಕಾಣುತ್ತಿತ್ತು. ಮೂವರು ಗಂಡು ಮಕ್ಕಳೊಂದಿಗೆ ಸಂಸಾರ ಸುಂದರವಾಗಿದೆ ಎಂದೇ ಎಲ್ಲರೂ ಭಾವಿಸಿದ್ದರು. ಆದರೆ, ಆ ಸುಂದರ ದಾಂಪತ್ಯದ ಪರದೆಯ ಹಿಂದೆ 'ನರಕ' ಸದೃಶ್ಯ ಅನುಭವ ಏನಿತ್ತು? ಈ ಸ್ಟೋರಿ ನೋಡಿ..
07:18 PM (IST) Jul 13
ಬಾಲಿವುಡ್ನ ಸ್ಟಾರ್ ಜೋಡಿ ದೀಪಿಕಾ ಪಡುಕೋಣೆ ಮತ್ತು ರಣವೀರ್ ಸಿಂಗ್ ಮತ್ತೆ ಸುದ್ದಿಯಲ್ಲಿದ್ದಾರೆ. ಎರಡನೇ ಮಗುವಿನ ನಿರೀಕ್ಷೆಯಲ್ಲಿರುವ ದೀಪಿಕಾ, ಸದ್ಯ ಗರ್ಭಾವಸ್ಥೆಯ ಮೂರನೇ ಹಂತದಲ್ಲಿದ್ದಾರೆ (third trimester).
06:58 PM (IST) Jul 13
06:21 PM (IST) Jul 13
ಇ20 ಪೆಟ್ರೋಲ್ ದೇಶಾದ್ಯಂತ ಭಾರಿ ವಿವಾದಕ್ಕೆ ಕಾರಣವಾಗಿದೆ. ಇದರ ನಡುವೆ ಯೂಟ್ಯೂಬರ್ ತನ್ನ ಬೆಂಜ್ ಕಾರಿನ ಮೈಲೇಜ್ ಕುಸಿತವಾಗಿದ್ದು ಮಾತ್ರವಲ್ಲ ಎಂಜಿನ್ ಕೂಡ ಶೀಗ್ರದಲ್ಲೇ ಹಾಳಾಗಲಿದೆ ಎಂದು ಆರೋಪಿಸಿದ ವಿಡಿಯೋಗೆ ಖುದ್ದು ಮರ್ಸಿಡೀಸ್ ಬೆಂಜ್ ಉತ್ತರ ನೀಡಿದೆ.
06:03 PM (IST) Jul 13
04:53 PM (IST) Jul 13
ಕಡು ಬಡತನದ ಕುಟುಂಬ. 7ನೇ ತರಗತಿ ಬಾಲಕಿ ಶೂ ಹರಿದಿತ್ತು. ಹೊಸ ಶೂ ಖರೀದಿಸಲು ಸ್ಕಾಲರ್ಶಿಪ್ ಹಣ ಡ್ರಾ ಮಾಡಲು ಅಣ್ಣನ ಜೊತೆ ಎಟಿಎಂ ಬಳಿ ತೆರಳಿದ್ದಾಳೆ. ಆದರೆ ಸ್ಕಾಲರ್ಶಿಪ್ ಚೆಕ್ ಮಾಡಿದಾಗ ಅಚ್ಚರಿ ಕಾದಿದೆ. ಕಾರಣ ಖಾತೆಯಲ್ಲಿದ್ದಿದ್ದು ಬರೋಬ್ಬರಿ 759 ಕೋಟಿ ರೂಪಾಯಿ.
02:29 PM (IST) Jul 13
02:19 PM (IST) Jul 13
ತಮಿಳುನಾಡಿನ ಪುದುಕ್ಕೊಟ್ಟೈ ಕರಾವಳಿಯಲ್ಲಿ, ಮೀನುಗಾರನೊಬ್ಬ ತನ್ನ ಬಲೆಗೆ ಸಿಕ್ಕ ಅಪರೂಪದ ಕಡಲ ಹಸುವನ್ನು (ಡುಗಾಂಗ್) ಪ್ರೀತಿಯಿಂದ ಮರಳಿ ಸಮುದ್ರಕ್ಕೆ ಬಿಟ್ಟಿದ್ದಾನೆ. ಈ ಮಾನವೀಯ ಘಟನೆಯು, ವನ್ಯಜೀವಿ ಸಂರಕ್ಷಣಾ ಇಲಾಖೆಯು ವರ್ಷಗಳಿಂದ ನಡೆಸಿದ ಜಾಗೃತಿ ಕಾರ್ಯಕ್ರಮಗಳ ಯಶಸ್ಸಿಗೆ ಸಾಕ್ಷಿಯಾಗಿದೆ.
01:32 PM (IST) Jul 13
2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.
12:59 PM (IST) Jul 13
ತಮಿಳುನಾಡಿನಲ್ಲಿ ಹಸು ಮತ್ತು ಕರುಗಳ ಹತ್ಯೆಯನ್ನು ಸಂಪೂರ್ಣವಾಗಿ ನಿಷೇಧಿಸಿದ್ದ ಮದ್ರಾಸ್ ಹೈಕೋರ್ಟ್ ಆದೇಶಕ್ಕೆ ಸುಪ್ರೀಂ ಕೋರ್ಟ್ ಮಧ್ಯಂತರ ತಡೆ ನೀಡಿದೆ. ಹೈಕೋರ್ಟ್ ಆದೇಶವು ಚಾಲ್ತಿಯಲ್ಲಿರುವ 'ತಮಿಳುನಾಡು ಪ್ರಾಣಿ ಸಂರಕ್ಷಣಾ ಕಾಯ್ದೆ 1958'ಕ್ಕೆ ವಿರುದ್ಧವಾಗಿದೆ ಎಂದಿದೆ.
12:51 PM (IST) Jul 13
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, 75 ವರ್ಷಕ್ಕಿಂತ ಮುಂಚೆ ಪ್ರತಿ 10 ಭಾರತೀಯರಲ್ಲಿ ಒಬ್ಬರು ಕ್ಯಾನ್ಸರ್ಗೆ ತುತ್ತಾಗುವ ಸಾಧ್ಯತೆಯಿತ್ತು. ಬದಲಾಗುತ್ತಿರುವ ಜೀವನಶೈಲಿ ಮತ್ತು ತಡವಾದ ರೋಗನಿರ್ಣಯದಿಂದಾಗಿ 2050ರ ವೇಳೆಗೆ ವಾರ್ಷಿಕವಾಗಿ 2.8 ದಶಲಕ್ಷ ಹೊಸ ಪ್ರಕರಣಗಳು ದಾಖಲಾಗುವ ಸಾಧ್ಯತೆ ಇದೆ.
12:27 PM (IST) Jul 13
12:24 PM (IST) Jul 13
ಪೊಲೀಸರು ಖಾಸಗಿ ವೀರ್ಯ ಬ್ಯಾಂಕ್ ಮೇಲೆ ದಾಳಿ ನಡೆಸಿ, ಭಿಕ್ಷುಕರಿಗೆ ಬಿರಿಯಾನಿ ಮತ್ತು ಹಣದ ಆಮಿಷವೊಡ್ಡಿ ವೀರ್ಯ ಸಂಗ್ರಹಿಸುತ್ತಿದ್ದ ಜಾಲವನ್ನು ಬಯಲಿಗೆಳೆದಿದ್ದಾರೆ. ಈ ಅಕ್ರಮವು ಬಾಡಿಗೆ ತಾಯ್ತನ ಮತ್ತು ಮಕ್ಕಳ ಕಳ್ಳಸಾಗಾಣಿಕೆಯ ದೊಡ್ಡ ದಂಧೆಯ ಭಾಗವಾಗಿದ್ದು, ಆರೋಗ್ಯ ಕ್ಷೇತ್ರದಲ್ಲಿನ ಅನೈತಿಕ ಶೋಷಣೆಯನ್ನು ಇದು ಎತ್ತಿ ತೋರಿಸುತ್ತದೆ.
12:10 PM (IST) Jul 13
ವಿವಾದಗಳು ನಡೆಯುತ್ತಿದ್ದರೂ, ಆರ್ಯ ತಮ್ಮ ಚಲನಚಿತ್ರದ ಯೋಜನೆ ಹಾಗೂ ಕೆಲಸಗಳಲ್ಲಿ ನಿರತರಾಗಿದ್ದಾರೆ. ಸಂತೋಷ್ ಶ್ರೀವತ್ಸನ್ ನಿರ್ದೇಶನದ ಮತ್ತು ಅವರ ಹೋಮ್ ಬ್ಯಾನರ್ ಅಡಿಯಲ್ಲಿ ಸಹ-ನಿರ್ಮಿಸಿದ 'ಸೀ ಯು' ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಅನ್ನು ನಟ ಇತ್ತೀಚೆಗೆ ಅನಾವರಣಗೊಳಿಸಿದರು.
11:43 AM (IST) Jul 13
ಬೆಂಗಳೂರು: ಕಳೆದ ಮೂರು ದಿನಗಳಿಂದ ಚಿನ್ನದ ಬೆಲೆಯು ಇಳಿಮುಖ ಮಾಡಿದೆ. ಇದು ಸಾಮಾನ್ಯ ಹಾಗೂ ಮಧ್ಯಮ ವರ್ಗದ ಆಭರಣ ಪ್ರಿಯರ ಮುಖದಲ್ಲಿ ಮಂದಹಾಸ ಮೂಡುವಂತೆ ಮಾಡಿದೆ. ಅಷ್ಟಕ್ಕೂ ಜೂನ್ 13ರಂದು ಬೆಂಗಳೂರಿನಲ್ಲಿ ಚಿನ್ನ ಹಾಗೂ ಬೆಳ್ಳಿ ಬೆಲೆ ಎಷ್ಟಿದೆ? ನೋಡೋಣ ಬನ್ನಿ.
11:42 AM (IST) Jul 13
ದೇಶದ ಮೊದಲ ಬುಲೆಟ್ ಟ್ರೈನ್ ಯೋಜನೆಗಾಗಿ NHSRCL 237 ಟೆಕ್ನಿಷಿಯನ್ ಹುದ್ದೆಗಳಿಗೆ ನೇಮಕಾತಿ ಅಧಿಸೂಚನೆ ಹೊರಡಿಸಿದೆ. ಐಟಿಐ ಅಥವಾ ಡಿಪ್ಲೊಮಾ ಪೂರ್ಣಗೊಳಿಸಿದ, ಸಂಬಂಧಿತ ಕ್ಷೇತ್ರದಲ್ಲಿ ಕನಿಷ್ಠ 2 ವರ್ಷಗಳ ಅನುಭವ ಹೊಂದಿರುವ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.
11:24 AM (IST) Jul 13
ನಟ ಆಮಿರ್ ಖಾನ್ ಅವರ ಮೂರನೇ ಮದುವೆಯು ರಾಜಕೀಯ ವಿವಾದಕ್ಕೆ ಕಾರಣವಾಗಿದೆ. ಇದನ್ನು 'ಲವ್ ಜಿಹಾದ್' ಎಂದು ಕರೆದ ಬಿಜೆಪಿ ನಾಯಕ ನಿತೇಶ್ ರಾಣೆಗೆ, ಎಐಎಂಐಎಂ ನಾಯಕ ವಾರಿಸ್ ಪಠಾಣ್ ತಿರುಗೇಟು. ಆಮಿರ್ ಕುಟುಂಬಕ್ಕಿಲ್ಲದ ಸಮಸ್ಯೆ ನಿಮಗೇಕೆ, ಬೇಕಿದ್ದರೆ ನೀವು ನಾಲ್ಕು ಮದುವೆಯಾಗಿ ಎಂದು ಪಠಾಣ್ ವ್ಯಂಗ್ಯ
11:13 AM (IST) Jul 13
10:55 AM (IST) Jul 13
10:43 AM (IST) Jul 13
10:35 AM (IST) Jul 13
35 ವರ್ಷಗಳ ಹಿಂದೆ ಸೌದಿ ಅರೇಬಿಯಾದಲ್ಲಿ ಸಹೋದ್ಯೋಗಿ ಲಚ್ಚಣ್ಣನಿಂದ 1000 ರೂ. ಸಾಲ ಪಡೆದಿದ್ದ ಇಸ್ಮಾಯಿಲ್, ಸಂಪರ್ಕ ಕಳೆದುಕೊಂಡರೂ ಅವರನ್ನು ಮರೆತಿರಲಿಲ್ಲ. ಇತ್ತೀಚೆಗೆ, ಕೇವಲ ಅಲ್ಪ ಮಾಹಿತಿಯಿಂದ ಲಚ್ಚಣ್ಣನ ವಿಳಾಸ ಪತ್ತೆಹಚ್ಚಿ, ಅವರ ಕುಟುಂಬಕ್ಕೆ ಬಡ್ಡಿ ಸಮೇತ 25,000 ರೂ. ಮರಳಿಸಿದ್ದಾರೆ.
10:20 AM (IST) Jul 13
ಇಸ್ರೋ ತನ್ನ ಮಹತ್ವಾಕಾಂಕ್ಷಿ ‘ಗಗನಯಾನ’ ಯೋಜನೆಗಾಗಿ ಕ್ರೂ ಮಾಡ್ಯೂಲ್ನ ಮೂರು ಪ್ರಮುಖ ಪರೀಕ್ಷೆಗಳನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ. ಈ ಪರೀಕ್ಷೆಗಳು ಬಾಹ್ಯಾಕಾಶದಿಂದ ಮರಳುವಾಗ ಮಾಡ್ಯೂಲ್ ನೀರಿನಲ್ಲಿ ತೇಲುವ ಪರೀಕ್ಷೆಯನ್ನು ಒಳಗೊಂಡಿದೆ.
10:13 AM (IST) Jul 13
10:05 AM (IST) Jul 13
09:48 AM (IST) Jul 13
09:33 AM (IST) Jul 13
09:25 AM (IST) Jul 13
ಭಾರತ ಸರ್ಕಾರವು ತನ್ನ ರಕ್ಷಣಾ ಉತ್ಪಾದನಾ ನೀತಿಯಲ್ಲಿ ಮಹತ್ವದ ಬದಲಾವಣೆ ತರುತ್ತಿದ್ದು, ಖಾಸಗಿ ಕಂಪನಿಗಳಿಗೂ ಕ್ಷಿಪಣಿಗಳನ್ನು ನಿರ್ಮಿಸಲು ಮತ್ತು ಅಭಿವೃದ್ಧಿಪಡಿಸಲು ಅವಕಾಶ ನೀಡಲು ಸಿದ್ಧತೆ ನಡೆಸಿದೆ.
08:43 AM (IST) Jul 13
ಕನ್ನಡಿಗ ರಾಹುಲ್ ದ್ರಾವಿಡ್ಗೆ ಬೇಡಿಕೆ ಹೆಚ್ಚಾಗಿದೆ. ಇಂಗ್ಲೆಂಡ್ ಟೆಸ್ಟ್ ತಂಡಕ್ಕೆ ಕೋಚ್ ಆಗಿ ನೇಮಿಸಲು ಇಸಿಬಿ ಬಯಸಿದ್ದು, ಅದಕ್ಕೆ ದ್ರಾವಿಡ್ ಅವರ ಸಮ್ಮತಿಗಾಗಿ ಕಾಯ್ತಿದೆ ಎಂದು ವರದಿಯಾಗಿದೆ. ಈ ಕುರಿತ ಒಂದು ವರದಿ ಇಲ್ಲಿದೆ.
08:02 AM (IST) Jul 13
ಹೋರ್ಮುಜ್ ಜಲಸಂಧಿಯಲ್ಲಿ ಭಾರತೀಯ ಸಿಬ್ಬಂದಿ ಇದ್ದ ಹಡಗಿನ ಮೇಲೆ ಇರಾನ್ ದಾಳಿ ಮಾಡಿ ಜಲಸಂಧಿಯನ್ನು ಮುಚ್ಚಿದೆ. ಇದಕ್ಕೆ ಪ್ರತಿಯಾಗಿ ಅಮೆರಿಕ ಇರಾನ್ನ 140 ನೆಲೆಗಳ ಮೇಲೆ ದಾಳಿ ನಡೆಸಿದ್ದು, ನಂತರ ಇರಾನ್ ಅಮೆರಿಕದ ಮಿತ್ರರಾಷ್ಟ್ರಗಳ ಮೇಲೆ ಕ್ಷಿಪಣಿ ಮತ್ತು ಡ್ರೋನ್ ದಾಳಿ ನಡೆಸಿದೆ.
07:47 AM (IST) Jul 13
ಉತ್ತರಾಖಂಡದ ಬದರೀನಾಥ ದೇವಾಲಯದಲ್ಲಿ ನಡೆದಿದೆ ಎನ್ನಲಾದ ಹುಂಡಿ ಕಳವು ಪ್ರಕರಣವನ್ನು ವಿಶೇಷ ತನಿಖಾ ತಂಡ (SIT) ದೃಢಪಡಿಸಿದೆ. ತನಿಖಾ ವರದಿಯನ್ನು ದೇವಾಲಯ ಸಮಿತಿಗೆ ಸಲ್ಲಿಸಲಾಗಿದ್ದು, ಆರೋಪಿ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಸರ್ಕಾರ ಸೂಚಿಸಿದೆ.
07:38 AM (IST) Jul 13
1976ರಲ್ಲಿ ಪ್ಯಾಲೆಸ್ತೀನ್ ಮತ್ತು ಜರ್ಮನ್ ಉಗ್ರರು ಏರ್ ಫ್ರಾನ್ಸ್ ವಿಮಾನವನ್ನು ಅಪಹರಿಸಿ, ಇಸ್ರೇಲಿ ಪ್ರಯಾಣಿಕರನ್ನು ಉಗಾಂಡದ ಎಂಟೆಬ್ಬೆಯಲ್ಲಿ ಒತ್ತೆಯಾಳಾಗಿರಿಸಿಸಿದರು ಇಸ್ರೇಲ್ ಸೇನೆ 'ಆಪರೇಷನ್ ಎಂಟೆಬ್ಬೆ' ಎಂಬ ರಣರೋಚಕ ಕಾರ್ಯಾಚರಣೆ ನಡೆಸಿ, ಎಲ್ಲಾ ಸವಾಲುಗಳನ್ನು ರಕ್ಷಿಸಿದ ರಣರೋಚಕ ಕತೆಯಿದು.