MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!

S Janaki: ದಕ್ಷಿಣ ಭಾರತದ ಹಿನ್ನೆಲೆ ಗಾಯನ ಕ್ಷೇತ್ರಕ್ಕೆ ಅನ್ಯಾಯ, ಸಿಡಿದೆದ್ದ ಎಸ್ ಜಾನಕಿ; ಮುಂದೆ ಆಗಿದ್ದು ಇತಿಹಾಸ!

2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. ಆ ಮೂಲಕ ಈ ಮೇರು ಗಾಯಕಿ ಇತಿಹಾಸ ಸೃಷ್ಟಿಸಿದ್ದಾರೆ.

2 Min read
Author : Shriram Bhat
Published : Jul 13 2026, 01:32 PM IST
Share this Photo Gallery
  • FB
  • TW
  • Linkdin
  • Whatsapp
16
Image Credit : Asianet News

ಮೊನ್ನೆ, ಅಂದರೆ 11 ಜುಲೈ 2026ರಂದು ಭಾರತದ, ಅದರಲ್ಲೂ ಮುಖ್ಯವಾಗಿ ದಕ್ಷಿಣ ಭಾರತದ ಖ್ಯಾತ ಹಿನ್ನೆಲೆ ಗಾಯಕಿ ಎಸ್ ಜಾನಕಿ (S Janaki) ನಿಧರಾಗಿದ್ದು ಗೊತ್ತೇ ಇದೆ. ಈ ಗಂಧರ್ವ ಗಾಯಕಿಯ ಬಗ್ಗೆ ಭಾರತೀಯರಿಗೆ ಹೆಚ್ಚಾಗಿ ಹೇಳುವ ಅಗತ್ಯವೇನಿಲ್ಲ. 4 ರಾಷ್ಟ್ರೀಯ ಪ್ರಶಸ್ತಿ, 30 ರಾಜ್ಯ ಪ್ರಶಸ್ತಿ, ಹಲವಾರು ನಂದಿ ಪ್ರಶಸ್ತಿ ಜೊತೆಗೆ ಬಹಳಷ್ಟು ಸಂಘ-ಸಂಸ್ಥೆಗಳಿಂದ ಲೆಕ್ಕವಿಡಲಾಗದಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದಿರುವ ಎಸ್ ಜಾನಕಿಯವರಿಗೆ ಅಸಂಖ್ಯಾತ ಅಭಿಮಾನಿಗಳು ಇದ್ದಾರೆ. ಇಂಥ ಮೇರು ಗಾಯಕಿ ಎಸ್‌ ಜಾನಕಿಯವರು, ಚಿತ್ರರಂಗದಲ್ಲಿ ಹಾಗೂ ರಾಷ್ಟ್ರ ಮಟ್ಟದಲ್ಲಿ ಹಿನ್ನೆಲೆ ಗಾಯಕ-ಗಾಯಕಿಯರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆಯೂ ಮಾತನ್ನಾಡಿದ್ದರು. ಈ ವಿಷಯ ಹಲವರಿಗೆ ಗೊತ್ತಿಲ್ಲ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
Image Credit : Asianet News

2013ರಲ್ಲಿ ಗಣರಾಜ್ಯೋತ್ಸವದ ಹಿಂದಿನ ದಿನ ಗಾಯಕಿ ಎಸ್ ಜಾನಕಿಯವರಿಗೆ 'ಪದ್ಮಭೂಷಣ' ಪ್ರಶಸ್ತಿಯನ್ನು ಘೋಷಿಸಲಾಯ್ತು. ಆದರೆ, ಗಾಯಕಿ ಎಸ್ ಜಾನಕಿಯವರು ಅದನ್ನು ನಿರಾಕರಿಸಿ, ಪ್ರಶಸ್ತಿ ಸ್ವೀಕರಿಸಲು ದೆಹಲಿ ಸಮಾರಂಭಕ್ಕೆ ಹೋಗಲೇ ಇಲ್ಲ. '50 ವರ್ಷಗಳ ನನ್ನ ಸಂಗೀತದ ಸೇವೆಗೆ ಈಗ ಪ್ರಶಸ್ತಿ ಕೋಡುವುದು ತುಂಬಾ ತಡವಾಯ್ತು. ಅದಕ್ಕೆ ಕಾರಣ ನಾವು ಹಿಂದಿಯಲ್ಲಿ ಹಾಡಿಲ್ಲ, ದಕ್ಷಿಣ ಭಾರತದ ಭಾಷೆಗಳಲ್ಲಿ ಹಾಡಿರೋದು' ಎಂದು ಎಸ್ ಜಾನಕಿಯವರು ಆ ಬಗ್ಗೆ ಅವರು ನೀಡಿದ್ದ ಹೇಳಿಕೆ ಹಲವರ ಮೆಚ್ಚುಗೆ ಗಳಿಸಿತ್ತು. ಜೊತೆಗೆ, ಎಸ್ ಜಾನಕಿಯವರು ಕೊಟ್ಟ ಕಾರಣ ಹಾಗೂ ಮಾಡಿದ್ದ ನಿರಾಕರಣೆಗೆ ಬಹಳಷ್ಟು ಜನರು ಸಮ್ಮತಿ ಸೂಚಿಸಿದ್ದು ಮಾತ್ರವಲ್ಲ, ಅವರ ದೃಢ ನಿರ್ಧಾರಕ್ಕೆ ಬೆನ್ನೆಲುಬಾಗಿ ನಿಂತಿದ್ದರು.

Related Articles

Related image1
Actor Arya Case: ತಮಿಳು ನಟ ಆರ್ಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಾಖಲು!
Related image2
S Janaki: ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು
36
Image Credit : Asianet News

ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ ಅವರು ಕನ್ನಡದ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೇಳುವ ಮೂಲಕ ಸಹಮತ ಸೂಚಿಸಿದ್ದರು. ಜೊತೆಗೆ, ಆ ದಕ್ಷಿಣ ಭಾರತ-ಉತ್ತರ ಭಾರತದ ಕಲಾವಿದರ ನಡುವಿನ ತಾರತಮ್ಯದ ನೋವು ತಾವೂ ಸೇರಿದಂತೆ, ದಕ್ಷಿಣ ಭಾರತದ ಎಲ್ಲ ಕಲಾವಿದರೂ ಅನುಭವಿಸುತ್ತಿದ್ದಾರೆ ಎಂದಿದ್ದರು. ಜೊತೆಗೆ, ಎಸ್ ಜಾನಕಿಯವರ ದಿಟ್ಟ ನಿರ್ಧಾರ ಹಾಗೂ ಪ್ರಶಸ್ತಿಯನ್ನು ನಿರಾಕರಿಸಿದ್ದನ್ನು ಶ್ಲಾಘಿಸುವ ಅರ್ಥದಲ್ಲಿ ಮಾತನ್ನಾಡಿದ್ದರು.

46
Image Credit : Asianet News

ಈ ಬಗ್ಗೆ ದಕ್ಷಿಣ ಭಾರತದ ಖ್ಯಾತ ಗಾಯಕ ಎಸ್‌ಪಿ ಬಾಲಸುಬ್ರಹ್ಮಣ್ಯಂ 'ಎದೆ ತುಂಬಿ ಹಾಡುವೆನು' ಕಾರ್ಯಕ್ರಮದಲ್ಲಿ ಹೀಗೆ ಹೇಳಿದ್ದರು-

'ಭಾರತದ ಸರ್ಕಾರ ಎಸ್ ಜಾನಕಿಯವರ ಪ್ರತಿಭೆಗೆ ತಕ್ಕ ಪ್ರಶಸ್ತಿ-ಪುರಸ್ಕಾರಗಳನ್ನು ನೀಡಲಿಲ್ಲ. ನಮ್ಮವರಿಗೆ ಅಂದರೆ ದಕ್ಷಿಣ ಭಾರತದ ಸಂಸದರಿಗೆ ಲಾಬಿ ಮಾಡಲು ಬರುವುದಿಲ್ಲ' ಎಂದು ನೇರವಾಗಿಯೇ ಹೇಳಿದ್ದರು.

56
Image Credit : Asianet News

ಸುಮಾರು 48000 ಕ್ಕೂ ಹೆಚ್ಚು ಹಾಡುಗಳನ್ನು ಕನ್ನಡ, ತಮಿಳು, ಮಲಯಾಳಂ, ತೆಲುಗು ಭಾಷೆಯಲ್ಲಿ ಹಾಡಿದ್ದರೂ ಇವರು "ಭಾರತದ ನೈಟಿಂಗೆಲ್" ಆಗಲಿಲ್ಲ. ಏಕೆಂದರೆ ಭಾರತದ ಸರ್ಕಾರದ ಪ್ರಕಾರ ಇವರು ಹಿಂದಿಯಲ್ಲಿ ಅಷ್ಟಾಗಿ ಹಾಡಲಿಲ್ಲ. ಇದೂ ಒಂದು ಕಾರಣ ಎಂಬುದೇ ದುರಂತ. ಏಕೆಂದರೆ ರಾಷ್ಟ್ರೀಯ ಮಟ್ಟದಲ್ಲಿ ಸಂಗೀತಕ್ಕೆ, ಕಲೆಗೆ ಯಾವುದೇ ಬೇಧಭಾವ ಇರುವುದಿಲ್ಲ, ಇರಬಾರದು. ಭಾರತದ ಸರ್ಕಾರವು ಇಂತಹ ಮಲತಾಯಿಯ ಧೋರಣೆಯನ್ನು ಬಿಡುವವರೆಗೂ ಕಲೆಯಲ್ಲಿ ಸಾಧಿಸಿದವರಿಗೆ ಸಮನಾದ ಪ್ರಾಮುಖ್ಯತೆ ಸಿಗುವುದಿಲ್ಲ' ಎಂದಿದ್ದರು.

66
Image Credit : Asianet News

ಇದು 'ನ್ಯಾಷನಲ್ ಅವಾರ್ಡ್' ಅಂದರೆ 'ಪದ್ಮ' ಕೆಟಗರಿಯ ಹಾಗೂ ಭಾರತ ರತ್ನ, ದಾದಾ ಸಾಹೇಬ್ ಪ್ರಶಸ್ತಿಗಳು ಮುಂತಾದವುಗಳ ವಿಷಯಕ್ಕೆ ಎಸ್ ಜಾನಕಿಯವರು ಹೇಳಿದ್ದ ಮಾತು ಹಾಗೂ ಮಾಡಿದ್ದ ಗಟ್ಟಿ ನಿರ್ಧಾರ. ಪ್ರಶಸ್ತಿ ಬಂದಿದ್ದರೂ ಅದನ್ನೂ ಸ್ವೀಕರಿಸದೇ ಅದಕ್ಕೆ ಸೂಕ್ತ ಕಾರಣ ಕೊಟ್ಟು ನಿರಾಕರಿಸಿದ್ದು ಎಸ್ ಜಾನಕಿಯವರ ಬಗ್ಗೆ 'ದಕ್ಷಿಣ ಭಾರತೀಯರ' ಪ್ರೀತಿ ಆದರ ಹೆಚ್ಚಾಗಲು ಕಾರಣವಾಯಿತು, ಜೊತೆಗೆ, ಹಿಂದಿ ಭಾಷಿಗರು ಹಾಗೂ ದಕ್ಷಿಣ ಭಾರತೀಯರ ಕಲಾವಿದರ ನಡುವೆ ಭಾರತದ ಸರ್ಕಾರ ತೋರುತ್ತಿದ್ದ ತಾರತಮ್ಮು ಇಡೀ ಜಗತ್ತಿಗೆ ಅರ್ಥವಾಗಲು ಕಾರಣವಾಯಿತು. ಎಸ್ ಜಾನಕಿಯವರ ಕಾರಣಕ್ಕೆ ಈ ಸಂಗತಿ ಇತಿಹಾಸದ ಪುಟದಲ್ಲಿ ಅಚ್ಚಳಿಯದೇ ದಾಖಲಾಗಿದೆ.

ಇಂದು ಎಸ್ ಜಾನಕಿಯವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲ. ಆದರೆ ಅವರ ಸ್ವರ ಮಾಧುರ್ಯ ಹಾಗೂ ಹಾಡಿರುವ ಗೀತೆಗಳು ಈ ಜಗತ್ತು ಇರುವವರೆಗೂ ಅಜರಾಮರ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SB
Shriram Bhat
ಏಷ್ಯಾನೆಟ್ ಸುವರ್ಣನ್ಯೂಸ್.ಕಾಮ್‌ನಲ್ಲಿ ಉಪ ಸಂಪಾದಕ. ಸಿನಿಮಾ, ಲೈಫ್‌ಸ್ಟೈಲ್, ರಾಜಕೀಯ ಸುದ್ದಿಗಳ ಬಗ್ಗೆ ಹೆಚ್ಚಿನ ಗಮನ ನೀಡುತ್ತಿದ್ದೇನೆ. ಇಂಡಿಯನ್ ಎಕ್ಸ್‌ಪ್ರೆಸ್‌, ಒನ್‌ ಇಂಡಿಯಾ ಕನ್ನಡ ಹಾಗೂ ವಿಜಯ ಕರ್ನಾಟಕ ವೆಬ್‌ನಲ್ಲಿ ಕೆಲಸ ಮಾಡಿದ ಅನುಭವವಿದೆ. ಕಳೆದ 15 ವರ್ಷಗಳಿಂದ ನಿರಂತರ ಬರವಣಿಗೆ ಉದ್ಯೋಗದಲ್ಲಿದ್ದೇನೆ. ಸುದ್ದಿ ಮಾಧ್ಯಮವಲ್ಲದೇ ಮನರಂಜನಾ ಮಾಧ್ಯಮದಲ್ಲೂ ಕೆಲಸ ಮಾಡಿದ್ದೇನೆ. ಉತ್ತರ ಕನ್ನಡ ಜಿಲ್ಲೆ ಶಿರಸಿ ಹುಟ್ಟೂರು. ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡದಿಂದ ಕಲಾ ವಿಭಾಗದಲ್ಲಿ ಪದವಿ ಪಡೆದಿದ್ದೇನೆ. ಸಾಮಾಜಿಕ ಕಳಕಳಿಗೆ ಹೆಚ್ಚಿನ ಆದ್ಯತೆ, ಮಾನವೀಯತೆಗೆ ಮೊದಲ ಪ್ರಾಶಸ್ತ್ಯ.
ಮನರಂಜನಾ ಸುದ್ದಿ
ವೈರಲ್ ಸುದ್ದಿ
ಎಸ್. ಜಾನಕಿ

Latest Videos
Recommended Stories
Recommended image1
Actor Arya Case: ತಮಿಳು ನಟ ಆರ್ಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಾಖಲು!
Recommended image2
'ಬಾಹುಬಲಿ' ಶಿವಗಾಮಿ ಈಗ ಮುಖ್ಯಮಂತ್ರಿ: ರಾಜಕೀಯ ಥ್ರಿಲ್ಲರ್‌ನಲ್ಲಿ 'ಕ್ವೀನ್' ಆದ ರಮ್ಯಾ ಕೃಷ್ಣನ್
Recommended image3
ರಣವೀರ್ ಸಿಂಗ್ ಅಲ್ಲ, ಈ ನಟನ ಜೊತೆ ಆದಿತ್ಯ ಧರ್ ಸಿನಿಮಾ: ಯಾರು ಆ ಹೊಸ 'ಧುರಂಧರ್'?
Related Stories
Recommended image1
Actor Arya Case: ತಮಿಳು ನಟ ಆರ್ಯ ವಿರುದ್ಧ ಕೋಟ್ಯಾಂತರ ರೂಪಾಯಿ ವಂಚನೆ ಪ್ರಕರಣ ದಾಖಲು!
Recommended image2
S Janaki: ಅಜ್ಜಿ ಎಸ್ ಜಾನಕಿಗೆ ಮೊಮ್ಮಗಳು ಅಪ್ಸರಾ ಹೇಳಿದ ಕೊನೆಯ ವಿದಾಯ ನೋಡಿ ಕಣ್ಣೀರಿಟ್ಟ ಅಭಿಮಾನಿಗಳು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved