ಹೇಗ್: ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.
ನೆದರ್ಲೆಂಡ್ಸ್ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ. ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ. ಇದು 21 ದೊಡ್ಡ ಫಲಕ ಮತ್ತು 3 ಸಣ್ಣ ಫಲಕಗಳನ್ನು ಹೊಂದಿದ್ದು, 30 ಕೇಜಿ ತೂಕ ಹೊಂದಿದ್ದು ಉಂಗುರದಿಂದ ಬಂಧಿಸಲ್ಪಟ್ಟಿದೆ.
ನೆದರ್ಲೆಂಡ್ಸ್ ತಲುಪಿದ್ದು ಹೇಗೆ?
ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಆ ಬಳಿಕ ಕಾಲಾಂತರದಲ್ಲಿ ಅದು ಲೈಡೆನ್ ವಿವಿ ಸೇರಿತ್ತು. ಅಲ್ಲಿ ನಿಬಂಧನೆಗಳೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.
10:56 PM (IST) May 17
ಯುಜುವೇಂದ್ರ ಚಾಹಲ್ ಜೊತೆಗಿನ ವದಂತಿಗಳ ಬಗ್ಗೆ ಆರ್ಜೆ ಮಹ್ವಶ್ ಮೌನ ಮುರಿದಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ ಅನ್ಫಾಲೋ ಮಾಡಿದ್ದು ಸ್ನೇಹಿತರ ನಡುವಿನ ಸಣ್ಣ ಜಗಳವಷ್ಟೇ ಎಂದಿರುವ ಅವರು, ಚಾಹಲ್ ಅವರ ಕಷ್ಟದ ಸಮಯದಲ್ಲಿ ತಾನು ಕೇವಲ ಉತ್ತಮ ಸ್ನೇಹಿತೆಯಾಗಿ ಬೆಂಬಲ ನೀಡಿದ್ದೆ ಎಂದು ಸ್ಪಷ್ಟಪಡಿಸಿದ್ದಾರೆ.
10:25 PM (IST) May 17
09:24 PM (IST) May 17
08:47 PM (IST) May 17
ಸಾಮಾನ್ಯವಾಗಿ ತಮ್ಮ ಕೆರಿಯರ್ನ ಕೆಟ್ಟ ಸಿನಿಮಾ ಯಾವುದು ಎಂದು ಕೇಳಿದರೆ ಎಲ್ಲರೂ ಫ್ಲಾಪ್ ಸಿನಿಮಾದ ಹೆಸರು ಹೇಳುತ್ತಾರೆ. ಆದರೆ ನಯನತಾರಾ ಒಂದು ಬ್ಲಾಕ್ಬಸ್ಟರ್ ಚಿತ್ರವನ್ನೇ ತಮ್ಮ ಕೆರಿಯರ್ನ ಅತ್ಯಂತ ಕೆಟ್ಟ ಸಿನಿಮಾ ಎಂದಿದ್ದಾರೆ.
08:28 PM (IST) May 17
ಮಧ್ಯಪ್ರದೇಶದ ರತ್ಲಾಮ್ ಬಳಿ ಚಲಿಸುತ್ತಿದ್ದ ರಾಜಧಾನಿ ಎಕ್ಸ್ಪ್ರೆಸ್ ರೈಲಿನಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ. ರೈಲ್ವೆ ಸಿಬ್ಬಂದಿಯ ಸಮಯಪ್ರಜ್ಞೆಯಿಂದಾಗಿ, ಬೋಗಿಯಲ್ಲಿದ್ದ ಎಲ್ಲಾ 68 ಪ್ರಯಾಣಿಕರನ್ನು 15 ನಿಮಿಷಗಳಲ್ಲಿ ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.
08:15 PM (IST) May 17
ಇಡೀ ಪ್ರದೇಶದಲ್ಲಿ ಹಿಮ ಮತ್ತು ಐಸ್ನ ಒಂದು ದೊಡ್ಡ ಗೋಡೆಯೇ ನಿರ್ಮಾಣವಾಯಿತು. ಆಕಾಶ ಇದ್ದಕ್ಕಿದ್ದಂತೆ ಕತ್ತಲಾದಂತೆ ಭಾಸವಾಯಿತು. ದಟ್ಟವಾದ ಹಿಮದ ಮೋಡಗಳು ಇಡೀ ಪ್ರದೇಶವನ್ನು ಆವರಿಸಿದವು. ಕೆಲವೇ ಕ್ಷಣಗಳಲ್ಲಿ ದೃಷ್ಟಿ ಸಂಪೂರ್ಣವಾಗಿ ಮಂಜಾಯಿತು. ಇದರ ಬೆನ್ನಲ್ಲೇ, ಪರ್ವತಾರೋಹಿಗಳ ಕ್ಯಾಂಪ್ ಮೇಲೆ ಹಿಮಪಾತ ರಭಸದಿಂದ ಅಪ್ಪಳಿಸಿತು.
08:15 PM (IST) May 17
ಮೆಗಾ ಪವರ್ ಸ್ಟಾರ್ ರಾಮ್ ಚರಣ್ ಬಗ್ಗೆ ಖ್ಯಾತ ನಿರ್ದೇಶಕರೊಬ್ಬರು ಕೀಳಾಗಿ ಮಾತನಾಡಿದ್ದರು. 'ಮಗಧೀರ' ಚಿತ್ರದ ಯಶಸ್ಸಿನ ಕ್ರೆಡಿಟ್ ಚರಣ್ಗೆ ಸಲ್ಲುವುದಿಲ್ಲ ಎಂದಿದ್ದರು. ಈ ಮಾತಿಗೆ ಖಡಕ್ ಉತ್ತರ ಕೊಟ್ಟ ರಾಜಮೌಳಿ ಹೇಳಿದ್ದೇನು? ಇಲ್ಲಿದೆ ವಿವರ.
08:11 PM (IST) May 17
ಐಪಿಎಲ್ 2026ರ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 23 ರನ್ಗಳ ಜಯ ಸಾಧಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪ್ಲೇಆಫ್ಗೆ ಅರ್ಹತೆ ಪಡೆದ ಮೊದಲ ತಂಡವಾಯಿತು. ವೆಂಕಟೇಶ್ ಅಯ್ಯರ್, ವಿರಾಟ್ ಕೊಹ್ಲಿ ಮತ್ತು ದೇವದತ್ ಪಡಿಕ್ಕಲ್ ಅವರ ಉತ್ತಮ ಬ್ಯಾಟಿಂಗ್ನಿಂದ ಆರ್ಸಿಬಿ 222 ರನ್ಗಳ ಬೃಹತ್ ಮೊತ್ತ ಕಲೆಹಾಕಿತು.
08:02 PM (IST) May 17
3 ದಿನಗಳ ಚೀನಾ ಪ್ರವಾಸ ಮುಗಿಸಿದ ಡೊನಾಲ್ಡ್ ಟ್ರಂಪ್ ಅವರ ತಂಡ, ಭದ್ರತಾ ಮತ್ತು ಹ್ಯಾಕಿಂಗ್ ಭೀತಿಯಿಂದಾಗಿ ತಮಗೆ ನೀಡಿದ್ದ ಮೊಬೈಲ್ ಸೇರಿದಂತೆ ಎಲ್ಲಾ ಚೀನಿ ವಸ್ತುಗಳನ್ನು ಕಸದಬುಟ್ಟಿಗೆ ಎಸೆದಿದೆ. ಇದೇ ವೇಳೆ, ನಿರ್ಬಂಧವಿದ್ದ ಅಮೆರಿಕದ ಸಚಿವ ಮಾರ್ಕೋ ರುಬಿಯೊ ಅವರ ಹೆಸರನ್ನು ಬದಲಿಸಿ ಪ್ರವೇಶ ನೀಡಲಾಗಿದೆ.
07:49 PM (IST) May 17
ತಮಿಳು ಚಿತ್ರರಂಗದಲ್ಲಿ ಕಡಿಮೆ ಸಮಯದಲ್ಲಿಯೇ ಬಹುತೇಕ ಎಲ್ಲಾ ಟಾಪ್ ನಟರೊಂದಿಗೆ ನಟಿಸಿದ್ದ ನಟಿಯೊಬ್ಬರು, ಇಂದು 10 ಸಾವಿರ ಕೋಟಿ ರೂಪಾಯಿ ಆಸ್ತಿಗೆ ಒಡತಿಯಾಗಿದ್ದಾರೆ. ಚಿಕ್ಕ ವಯಸ್ಸಿನಲ್ಲೇ ಚಿತ್ರರಂಗಕ್ಕೆ ಈ ನಟಿ ಕಾಲಿಟ್ಟರು.
07:38 PM (IST) May 17
ನಟಿ ತ್ರಿಷಾ ಕೃಷ್ಣನ್ ಕಾಲಿಟ್ಟಲ್ಲೆಲ್ಲಾ ಗೆಲವು ಎಂಬ ಮಾತು ಕೇಳಿ ಬರುತ್ತಿದೆ. ಇತ್ತೀಚೆಗೆ ದಳಪತಿ ವಿಜಯ್ ಅವರು ತಮಿಳುನಾಡಿನ ಅಸೆಂಬ್ಲಿ ಚುನಾವಣೆಯಲ್ಲಿ ಗೆಲವು ಸಾಧಿಸಿ ಮುಖ್ಯಮಂತ್ರಿ ಆಗಿದ್ದರ ಹಿಂದೆ ತ್ರಿಷಾ ಕಾಲ್ಗುಣ ಇದೆ ಎನ್ನಲಾಗುತ್ತದೆ. ಜೊತೆಗೆ, ಈಗ ತ್ರಿಷಾ ಜೊತೆ ಸೂರ್ಯ ನಟಿಸಿದ ಸಿನಿಮಾ ‘ಕರುಪ್ಪು’ ಸೂಪರ್ ಹಿಟ್ ಆಗಿದೆ.
07:15 PM (IST) May 17
ನಟಿ ಮೀರಾ ವಾಸುದೇವನ್ ಅವರು ತಮ್ಮ ಬಾಲ್ಯದಲ್ಲಿ ಎದುರಿಸಿದ ಲೈಂಗಿಕ ದೌರ್ಜನ್ಯದ ಬಗ್ಗೆ ಸಂದರ್ಶನವೊಂದರಲ್ಲಿ ಮನಬಿಚ್ಚಿ ಮಾತನಾಡಿದ್ದಾರೆ. ಏಳನೇ ವಯಸ್ಸಿನಲ್ಲಿ ಟ್ಯೂಷನ್ ಟೀಚರ್ನಿಂದ ಶುರುವಾದ ಈ ದೌರ್ಜನ್ಯ ಹದಿನೇಳನೇ ವಯಸ್ಸಿನವರೆಗೂ ಮುಂದುವರಿದಿತ್ತು ಎಂದು ಮೀರಾ ಹೇಳಿದ್ದಾರೆ.
06:47 PM (IST) May 17
ಸಬ್ ಟಿವಿಯ ಜನಪ್ರಿಯ ಶೋ 'ಪುಷ್ಪಾ ಇಂಪಾಸಿಬಲ್' ದಿನಕ್ಕೊಂದು ಹೊಸ ತಿರುವುಗಳೊಂದಿಗೆ ಸದ್ದು ಮಾಡುತ್ತಿದೆ. ಸದ್ಯ ಶೋನಲ್ಲಿ ಮನ್ವಾ ತ್ರಿವೇದಿ ಪಾತ್ರ ಎಲ್ಲರ ಗಮನ ಸೆಳೆಯುತ್ತಿದೆ. ಈ ಪಾತ್ರ ಮಾಡುತ್ತಿರುವ ನಟಿ ಯಾರು, ಅವರ ಹಿನ್ನೆಲೆ ಏನು? ಇಲ್ಲಿದೆ ವಿವರ.
06:18 PM (IST) May 17
ಸಲ್ಮಾನ್ ಖಾನ್ ಕೇವಲ ತಮ್ಮ ಸಿನಿಮಾಗಳಿಂದ ಮಾತ್ರವಲ್ಲ, ತಮ್ಮ ಅದ್ಭುತ ಫಿಸಿಕ್ ಮತ್ತು ಆಕ್ಷನ್ ಸ್ಟೈಲ್ಗೂ ಫೇಮಸ್ ಆಗಿದ್ದರು. ಹೃತಿಕ್ ರೋಷನ್ ಸೇರಿದಂತೆ ಹಲವು ನಟರಿಗೆ ಅವರು ಫಿಟ್ನೆಸ್ ಟ್ರೈನಿಂಗ್ ಕೂಡ ಕೊಟ್ಟಿದ್ದರು.
06:04 PM (IST) May 17
ಕ್ಯಾಮೆರಾ ಕೆಲಸವಂತೂ ಅದ್ಭುತವಾಗಿದ್ದು, ಕತ್ತಲೆಯಲ್ಲೇ ನಡೆಯುವ ದೃಶ್ಯಗಳನ್ನು ಅತ್ಯಂತ ರೋಚಕವಾಗಿ ಸೆರೆಹಿಡಿಯಲಾಗಿದೆ. ಯಾವುದೇ ದೊಡ್ಡ ತಾರಾಗಣವಿಲ್ಲದೆ, ಅದ್ದೂರಿ ಸೆಟ್ಗಳಿಲ್ಲದೆ ಕೇವಲ ಒಂದು ಮನೆಯೊಳಗೆ ಇಷ್ಟೊಂದು ಅದ್ಭುತವಾಗಿ ಸಿನಿಮಾ ಮಾಡಬಹುದು ಎಂಬುದಕ್ಕೆ ಈ ಸಿನಿಮಾ ಸಾಕ್ಷಿ..!
05:55 PM (IST) May 17
ನಟ ಸಿದ್ಧಾರ್ಥ್, ತಮ್ಮ ಪತ್ನಿ ಅದಿತಿ ರಾವ್ ಹೈದರಿ ಅವರ ಕಾನ್ 2026 ರೆಡ್ ಕಾರ್ಪೆಟ್ ಲುಕ್ಗೆ 'W.O.W.' ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ನಟಿ ಧರಿಸಿದ್ದ ಕಸ್ಟಮ್ ಲೈಮ್-ಗ್ರೀನ್ ಟೋನಿ ವಾರ್ಡ್ ಕೌಚರ್ ಗೌನ್, ತನ್ನ ವಿಶಿಷ್ಟ ವಿನ್ಯಾಸ..
05:37 PM (IST) May 17
ಖ್ಯಾತ ತಮಿಳು ನಿರ್ದೇಶಕ ಅಟ್ಲಿ ಕುಮಾರ್ ಮತ್ತು ಅವರ ಪತ್ನಿ ಪ್ರಿಯಾ ಮೋಹನ್ ತಮ್ಮ ಮುದ್ದಿನ ಮಗಳಿಗೆ 'ಮಿಯೂ' ಎಂದು ಹೆಸರಿಟ್ಟಿದ್ದಾರೆ. ಈ ಖುಷಿಯ ವಿಚಾರವನ್ನು ಅವರು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.
05:14 PM (IST) May 17
ಜಯಂ ರವಿ ಅವರ ಭಾವನಾತ್ಮಕ ಅಳಲು ಮತ್ತು ಆರತಿ ಅವರ 'ಸಿಂಹಿಣಿ'ಯಂತಹ ಎಚ್ಚರಿಕೆ ಈಗ ದೊಡ್ಡ ಚರ್ಚೆಗೆ ಕಾರಣವಾಗಿದೆ. ಒಂದು ಕಾಲದ ಈ ಸುಂದರ ಜೋಡಿ ಈಗ ಪರಸ್ಪರ ವೈರಿಗಳಂತೆ ನಿಂತಿರುವುದು ಸಿನಿ ಪ್ರೇಮಿಗಳಿಗೆ ನೋವು ತಂದಿದೆ. ಈ 'ದಾಂಪತ್ಯ ದಹನ' ಎಲ್ಲಿಗೆ ಹೋಗಿ ನಿಲ್ಲುತ್ತದೆಯೋ ಕಾದು ನೋಡಬೇಕಿದೆ.
05:12 PM (IST) May 17
ಅಟ್ಲಿ ನಿರ್ದೇಶನದ, ಅಲ್ಲು ಅರ್ಜುನ್ ನಟನೆಯ 'ರಾಕ' ಸಿನಿಮಾದ ನಿರ್ಮಾಪಕರು ಒಂದು ಹೊಸ ಹೆಜ್ಜೆ ಇಟ್ಟಿದ್ದಾರೆ. 'ಪುಷ್ಪ' ಸಿನಿಮಾದ ಡೈಲಾಗ್, ಡ್ಯಾನ್ಸ್ ಎಲ್ಲೆಡೆ ಬಳಕೆಯಾದಂತೆ ಆಗಬಾರದೆಂದು ಈ ನಿರ್ಧಾರ ಕೈಗೊಂಡಿದ್ದಾರೆ.
04:55 PM (IST) May 17
ವರದಕ್ಷಿಣೆ ಕಿರುಕುಳ ಮತ್ತು ಹಲ್ಲೆಯ ಆರೋಪದ ನಂತರ ಮಧ್ಯಪ್ರದೇಶದ ಮನೆಯಲ್ಲಿ ಶವವಾಗಿ ಪತ್ತೆಯಾದ ತ್ವಿಶಾ ಶರ್ಮಾ ಸಾವಿನ ತನಿಖೆಗೆ ಎಸ್ಐಟಿ ರಚಿಸಲಾಗಿದೆ. ಆಕೆಯ ಪತಿ ವಕೀಲ ಸಮರ್ಥ್ ಸಿಂಗ್ ಮತ್ತು ಮಾವನ ವಿರುದ್ಧ ವರದಕ್ಷಿಣೆ ಕಿರುಕಳ ಸೇರಿದಂತೆ ಕೆ ಪ್ರಕರಣ ದಾಖಲಾಗಿದೆ,
04:26 PM (IST) May 17
ಪ್ರವಾಸಿ ತಾಣ ದೇವಸ್ಥಾನ ಸೇರಿದಂತೆ ಪ್ರಮುಖ ತಾಣಗಳ ಭೇಟಿ, ಸಂದರ್ಶನಕ್ಕಾಗಿ ಭಾರತೀಯ ರೈಲ್ವೇ ಹೊಸ ಭಾರತ ನೇಪಾಳ ಗೌರವ್ ರೈಲು ಘೋಷಣೆ ಮಾಡಿದೆ. ರೈಲು ಟಿಕೆಟ್ ದರ, ಮಾರ್ಗ, ಸಮಯದ ವಿವರ ಇಲ್ಲಿದೆ.
04:22 PM (IST) May 17
ನಟ ರವಿ ಮೋಹನ್ ತನ್ನನ್ನು 'ಇಡ್ಲಿ ನಟಿ' ಎಂದು ಕರೆದು ಮಾಡಿದ ಆರೋಪಗಳಿಗೆ ನಟಿ ಖುಷ್ಬೂ ಸೋಷಿಯಲ್ ಮೀಡಿಯಾದಲ್ಲಿ ತಿರುಗೇಟು ನೀಡಿದ್ದಾರೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಚರ್ಚೆ ಜೋರಾಗಿದೆ.
03:24 PM (IST) May 17
ಟ್ವಿಟರ್ ಮತ್ತು ಇನ್ಸ್ಟಾಗ್ರಾಂನಲ್ಲಿ ಊರ್ವಶಿ ವಿರುದ್ಧ ಕಮೆಂಟ್ಗಳ ಸುರಿಮಳೆಯೇ ಆಗುತ್ತಿದೆ. "ಇದೊಂದು ಕೇವಲ ಪಬ್ಲಿಸಿಟಿ ಸ್ಟಂಟ್, ಗಮನ ಸೆಳೆಯಲು ಇವರು ಹೀಗೆ ಮಾಡುತ್ತಾರೆ" ಎಂದು ಒಬ್ಬರು ಬರೆದರೆ, ಮತ್ತೊಬ್ಬರು "ನಿಮ್ಮ ಸ್ವಂತಿಕೆ ಎಲ್ಲಿ ಹೋಯಿತು?" ಎಂದು ಪ್ರಶ್ನಿಸಿದ್ದಾರೆ.
03:14 PM (IST) May 17
ಪಂಜಾಬ್ ವಿರುದ್ದದ ಮಹತ್ವದ ಪಂದ್ಯದಲ್ಲಿ ಆರ್ಸಿಬಿಯಲ್ಲಿ ಭಾರಿ ಬದಲಾವಣೆಯಾಗಿದೆ. ನಾಯಕ ರಜತ್ ಪಾಟೀದಾರ್ ಅಲಭ್ಯರಾಗಿದ್ದಾರೆ. ಹೀಗಾಗಿ ಇಂದು ತಂಡವನ್ನು ಜಿತೇಶ್ ಶರ್ಮಾ ತಂಡ ಮುನ್ನಡೆಸುತ್ತಿದ್ದಾರೆ.
03:09 PM (IST) May 17
ಸದ್ಯಕ್ಕೆ ಈ ವಿವಾದದ ಬಗ್ಗೆ ಅನುರಾಗ್ ಕಶ್ಯಪ್ ಆಗಲಿ ಅಥವಾ ಅವರ ತಂಡವಾಗಲಿ ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ. ಕಾನೂನು ಹೋರಾಟದ ಮೂಲಕ ಈ ಸಂಕಷ್ಟದಿಂದ ಅವರು ಹೇಗೆ ಪಾರಾಗುತ್ತಾರೆ ಎಂಬುದನ್ನು ಕಾದು ನೋಡಬೇಕಿದೆ. ಒಟ್ಟಿನಲ್ಲಿ, ಈ ನಿರ್ದೇಶಕನಿಗೆ ಈಗ ಗುಜರಾತ್ ನ್ಯಾಯಾಲಯ 'ಬಿಗ್ ಶಾಕ್' ನೀಡಿರುವುದಂತೂ ನಿಜ!
01:38 PM (IST) May 17
ಕನ್ನಡ, ತಮಿಳು, ತೆಲುಗು ಸೇರಿದಂತೆ ಬಹುಭಾಷೆಗಳಲ್ಲಿ ಸ್ಟಾರ್ ನಟಿಯಾಗಿ ಮಿಂಚಿದ್ದ ರಂಭಾ ಮತ್ತು ವಿಜಯ್ ಜೋಡಿ ಬೆಳ್ಳಿತೆರೆಯ ಮೇಲೆ ಮೋಡಿ ಮಾಡಿದ್ದ ಕಾಲವೊಂದಿತ್ತು. ಇವರಿಬ್ಬರ ಕೆಮಿಸ್ಟ್ರಿಗೆ ಫ್ಯಾನ್ಸ್ ಫಿದಾ ಆಗಿದ್ದರು. ವಿಜಯ್ ಸಿಎಂ ಆಗಿದ್ದಕ್ಕೆ ರಂಭಾ ಏನ್ ಪೋಸ್ಟ್ ಮಾಡಿದ್ದಾರೆ ನೋಡಿ..
01:29 PM (IST) May 17
ಕೇಂದ್ರದಲ್ಲಿ ಅಧಿಕಾರದಲ್ಲಿರುವುದರ ಜೊತೆಗೆ 22 ರಾಜ್ಯಗಳಲ್ಲಿ ಬಿಜೆಪಿ ಸರ್ಕಾರ ರಚಿಸಿದೆ. ಕಡಿಮೆ ಸಮಯದಲ್ಲಿ ನಮ್ಮ ಪಕ್ಷ ದೇಶದ ಪ್ರಬಲ ರಾಜಕೀಯ ಶಕ್ತಿಯಾಗಿ ಬೆಳೆದಿದೆ ಎಂದು ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್ ಹೇಳಿದ್ದಾರೆ. 'ರಾಷ್ಟ್ರ ಮೊದಲು' ಎಂಬುದು ನಮ್ಮ ಸಿದ್ಧಾಂತ ಎಂದರು.
12:47 PM (IST) May 17
Actor rajinikanth on Thalapathy Vijay: ವಿಧಾನಸಭಾ ಚುನಾವಣೆ ಫಲಿತಾಂಶದ ನಂತರ ನಾನು ಡಿಎಂಕೆ ಮತ್ತು ಎಡಿಎಂಕೆ ಮೈತ್ರಿಗಾಗಿ ಮಾತುಕತೆ ನಡೆಸಿದ್ದೇನೆ ಎಂದು ಹಬ್ಬಿರುವ ಸುದ್ದಿ ಸುಳ್ಳು ಎಂದು ನಟ ರಜನಿಕಾಂತ್ ಸ್ಪಷ್ಟನೆ ನೀಡಿದ್ದಾರೆ. ಈ ಬಗ್ಗೆ ಇನ್ನಷ್ಟು ಮಾಹಿತಿ ಇಲ್ಲಿದೆ.
12:25 PM (IST) May 17
ಬೆಲೆ ಏರಿಕೆ ಸಮಸ್ಯೆ ತೀವ್ರಗೊಳ್ಳುತ್ತಿದ್ದಂತೆ ಆರೋಗ್ಯ ಆತಂಕ ಹೆಚ್ಚಾಗಿದೆ. ಕಾಂಗೋದಲ್ಲಿ ಎಬೋಲಾ ವೈರಸ್ ಸ್ಫೋಟಗೊಂಡಿದ್ದು, ವಿಶ್ವ ಆರೋಗ್ಯ ಸಂಸ್ಥೆ ತುರ್ತು ಪರಿಸ್ಥಿತಿ ಘೋಷಿಸಿದೆ.
12:22 PM (IST) May 17
12:16 PM (IST) May 17
ನಟಿ ದಿಶಾ ಪಟಾಣಿ ಹಾಗು ಮೌನಿ ರಾಯ್ ಬಾಲಿವುಡ್ ಬೆಸ್ಟ್ ಫ್ರೆಂಡ್ಸ್ ..ಇಬ್ಬರ ಜೀವನಲ್ಲಿ ಯಾರ್ ಬರಲಿ ಹೋಗಲಿ, ಇವರಿಬ್ಬರು ಮಾತ್ರ ಒಬ್ಬರನ್ನೊಬ್ಬರು ಬಿಟ್ಟಿರಲಾರರು. ಒಟ್ಟಿಗೆ ಊಟ, ಆಟ ಪಾಠ ಅನ್ನೋ ಹಾಗೆ ಇವಾಗ್ಲೂ ಮೌನಿ ರಾಯ್ ನೆರಳಂತೆ ಇರ್ತಾರೆ ದಿಶಾ ಪಟಾನಿ.. ಇದೇನು BFF ಸ್ನೇಹಿತೆಯರ ಕಥೆ ನೋಡಿ..
11:56 AM (IST) May 17
11:35 AM (IST) May 17
ತಮಿಳುನಾಡಿನಲ್ಲಿ ದಳಪತಿ ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆ, ಸಿನಿಮಾದಲ್ಲಿ ಅವರ ಕಡು ಪ್ರತಿಸ್ಪರ್ಧಿ ನಟರೊಬ್ಬರು ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಶುರುವಾಗಿವೆ. ಈ ನಟ ಜಯಲಲಿತಾ ಮಾನಸಪುತ್ರ ಎಂದೇ ಖ್ಯಾತರಾಗಿದ್ದಾರೆ.
11:20 AM (IST) May 17
ಪ್ರಧಾನಿ ಮೋದಿ ಅವರ ಇಂಧನ ಉಳಿತಾಯದ ಸಲಹೆಯನ್ನು ಪಾಲಿಸಿದ ಆಸ್ಟ್ರೇಲಿಯಾದ ಕಾನ್ಸುಲ್ ಜನರಲ್ ಪಾಲ್ ಮರ್ಫಿ, ನಾಗ್ಪುರ ಮೆಟ್ರೋದಲ್ಲಿ ಪ್ರಯಾಣಿಸಿದ್ದಾರೆ. ಇದೊಂದು 'ವಿಶ್ವದರ್ಜೆಯ' ಅನುಭವ ಎಂದ ಎಂದಿದ್ದಾರೆ. ಮತ್ತು ಯುಪಿಐ ಪಾವತಿ ವ್ಯವಸ್ಥೆ ಹಾಡಿ ಹೊಗಳಿದ್ದಾರೆ. ಅವರ ಈ ಪೋಸ್ಟ್ ವೈರಲ್ ಆಗಿದೆ.
09:41 AM (IST) May 17
ಸಿಎಸ್ಕೆ ಅಭಿಮಾನಿಗಳು ಇದೀಗ ಆರ್ಸಿಬಿ ತಂಡ ಗೆಲ್ಲಲು ಪ್ರಾರ್ಥಿಸುತ್ತಿದ್ದಾರೆ. ಇಂದು ನಡೆಯಲಿರುವ ಆರ್ಸಿಬಿ ಹಾಗೂ ಪಂಜಾಬ್ ನಡುವಿನ ಪಂದ್ಯದ ಫಲಿತಾಂಶ ಮೇಲೆ ಸಿಎಸ್ಕೆ ತಂಡದ ಪ್ಲೇಆಫ್ ಅವಕಾಶ, ಎಲಿಮಿನೇಶನ್ ನಿರ್ಧಾರವಾಗಲಿದೆ.
08:47 AM (IST) May 17
08:37 AM (IST) May 17
ಮೇ.26ಕ್ಕೆ ಮುಂಗಾರು ಕೇರಳ ಪ್ರವೇಶ ಮಾಡಲಿದೆ. ಈ ಬಾರಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಲಿದೆ. ಇದರ ಜೊತೆಗೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ದೇಶದ ಕೆಲ ಭಾಗದಲ್ಲಿ ವಿಪರೀತ ಬಿಸಿ ಗಾಳಿ ಜನರನ್ನು ಕಂಗಾಲು ಮಾಡಲಿದೆ ಎಂದಿದೆ.
08:37 AM (IST) May 17
08:25 AM (IST) May 17
08:00 AM (IST) May 17