ಹೇಗ್: ಸದ್ಯ ನೆದರ್ಲೆಂಡ್ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಲ್ಲಿನ ಸರ್ಕಾರ 11ನೇ ಶತಮಾನದ ಚೋಳರ ಕಾಲದ ಅನ್ನೈಮಂಗಲಂ ತಾಮ್ರದ ಫಲಕಗಳನ್ನು ಹಸ್ತಾಂತರಿಸಿದೆ.
ನೆದರ್ಲೆಂಡ್ಸ್ನಲ್ಲಿ ಲೈಡೆನ್ ಫಲಕಗಳು ಎಂದು ಕರೆಯಲ್ಪಡುವ ಅನ್ನೈಮಂಗಲಂ ಅನ್ನು ಭಾರತಕ್ಕೆ ಮರಳಿ ತರಲು 2012ರಿಂದಲೂ ಸರ್ಕಾರ ಪ್ರಯತ್ನಿಸುತ್ತಲೇ ಇತ್ತು. ಕೊನೆಗೂ ಫಲಪ್ರದವಾಗಿದೆ. ರಾಜೇಂದ್ರ ಚೋಳ I ಕಾಲದ ಈ ತಾಮ್ರ ಫಲಕದಲ್ಲಿನ ಕೆತ್ತನೆಗಳು ತಮಿಳು ಭಾಷೆಯಲ್ಲಿದೆ. ಇದು 21 ದೊಡ್ಡ ಫಲಕ ಮತ್ತು 3 ಸಣ್ಣ ಫಲಕಗಳನ್ನು ಹೊಂದಿದ್ದು, 30 ಕೇಜಿ ತೂಕ ಹೊಂದಿದ್ದು ಉಂಗುರದಿಂದ ಬಂಧಿಸಲ್ಪಟ್ಟಿದೆ.
ನೆದರ್ಲೆಂಡ್ಸ್ ತಲುಪಿದ್ದು ಹೇಗೆ?
ತಮಿಳುನಾಡಿನ ನಾಗಪಟ್ಟಣಂ ಡಚ್ ಈಸ್ಟ್ ಇಂಡಿಯಾ ಕಂಪನಿಯ ನಿಯಂತ್ರಣದಲ್ಲಿದ್ದಾಗ ಡಚ್ ಅಧಿಕಾರಿ ಫ್ಲೋರೆಂಟಿಯಸ್ ಕ್ಯಾಂಪರ್ ಎಂಬಾತ 1703-1712ರ ಅವಧಿಯಲ್ಲಿ ಈ ಶಾಸನಗಳನ್ನು ವಶಪಡಿಸಿಕೊಂಡಿದ್ದ. ಆ ಬಳಿಕ ಕಾಲಾಂತರದಲ್ಲಿ ಅದು ಲೈಡೆನ್ ವಿವಿ ಸೇರಿತ್ತು. ಅಲ್ಲಿ ನಿಬಂಧನೆಗಳೊಂದಿಗೆ ವೀಕ್ಷಣೆಗೆ ಅವಕಾಶ ಕಲ್ಪಿಸಿತ್ತು.
08:47 AM (IST) May 17
08:37 AM (IST) May 17
ಮೇ.26ಕ್ಕೆ ಮುಂಗಾರು ಕೇರಳ ಪ್ರವೇಶ ಮಾಡಲಿದೆ. ಈ ಬಾರಿ ಮಳೆ ಪ್ರಮಾಣ ಕೊಂಚ ಕಡಿಮೆಯಾಗಲಿದೆ. ಇದರ ಜೊತೆಗೆ ಹವಾಮಾನ ಇಲಾಖೆ ಮಹತ್ವದ ಎಚ್ಚರಿಕೆ ನೀಡಿದೆ. ದೇಶದ ಕೆಲ ಭಾಗದಲ್ಲಿ ವಿಪರೀತ ಬಿಸಿ ಗಾಳಿ ಜನರನ್ನು ಕಂಗಾಲು ಮಾಡಲಿದೆ ಎಂದಿದೆ.
08:37 AM (IST) May 17
08:25 AM (IST) May 17
08:00 AM (IST) May 17