MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Raksha Bandhan Wishes
Yash Toxic 2 Days Collections
MLA Vinay Kulkarni
BJP Leaders Meet Siddaramaiah
Nepal Floods Death Toll
Teachers Suspended RSS Pathsanchalan
CM DK Shivakumar
Koppal Urban Development Authority
Toxic Movie Analysis
Nepal-tibet Floods
New Financial Rules September
  • Home
  • News
  • India News
  • ವಿಜಯ್‌ಗೆ ಸೆಡ್ಡು ಹೊಡೆಯಲು ರಾಜಕೀಯಕ್ಕೆ ಜಯಲಲಿತಾ ಮಾನಸಪುತ್ರ, ಖ್ಯಾತ ನಟನ ಎಂಟ್ರಿ?

ವಿಜಯ್‌ಗೆ ಸೆಡ್ಡು ಹೊಡೆಯಲು ರಾಜಕೀಯಕ್ಕೆ ಜಯಲಲಿತಾ ಮಾನಸಪುತ್ರ, ಖ್ಯಾತ ನಟನ ಎಂಟ್ರಿ?

ತಮಿಳುನಾಡಿನಲ್ಲಿ ದಳಪತಿ ವಿಜಯ್ ಮುಖ್ಯಮಂತ್ರಿಯಾಗುತ್ತಿದ್ದಂತೆ, ಸಿನಿಮಾದಲ್ಲಿ ಅವರ ಕಡು ಪ್ರತಿಸ್ಪರ್ಧಿ ನಟರೊಬ್ಬರು ರಾಜಕೀಯಕ್ಕೆ ಬರುತ್ತಾರೆ ಎಂಬ ಊಹಾಪೋಹಗಳು ಶುರುವಾಗಿವೆ. ಈ ನಟ ಜಯಲಲಿತಾ ಮಾನಸಪುತ್ರ ಎಂದೇ ಖ್ಯಾತರಾಗಿದ್ದಾರೆ.

2 Min read
Author : Mahmad Rafik
Published : May 17 2026, 11:35 AM IST
Share this Photo Gallery
  • FB
  • TW
  • Linkdin
  • Whatsapp
18
ದಳಪತಿಗೆ పోటీగా ತಲಾ.. ರಾಜಕೀಯದಲ್ಲಿ ಹೊಸ ಫೈಟ್?
Image Credit : Social Media

ದಳಪತಿಗೆ పోటీగా ತಲಾ.. ರಾಜಕೀಯದಲ್ಲಿ ಹೊಸ ಫೈಟ್?

ದಳಪತಿ ವಿಜಯ್ ತಮಿಳುನಾಡು ರಾಜಕೀಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿದ್ದಾರೆ. ಯಾರೂ ಊಹಿಸದ ರೀತಿಯಲ್ಲಿ ಪಕ್ಷ ಕಟ್ಟಿ, ಎರಡೇ ವರ್ಷದಲ್ಲಿ ಅಧಿಕಾರ ಹಿಡಿದು ಮುಖ್ಯಮಂತ್ರಿಯಾಗಿದ್ದಾರೆ. ಈಗ ಸಿನಿಮಾದಲ್ಲಿ ಅವರ ಬದ್ಧ ವೈರಿ ಎನಿಸಿಕೊಂಡಿರುವ ತಲಾ ಅಜಿತ್ ರಾಜಕೀಯಕ್ಕೆ ಎಂಟ್ರಿ ಕೊಡ್ತಾರೆ ಅನ್ನೋ ಮಾತುಗಳು ಜೋರಾಗಿವೆ. ಅಜಿತ್ ನಿಜವಾಗಿಯೂ ರಾಜಕೀಯಕ್ಕೆ ಬರ್ತಾರಾ? ಬಂದರೆ ಯಾವ ಪಕ್ಷದಿಂದ? ಅಥವಾ ಸ್ವಂತ ಪಕ್ಷ ಕಟ್ಟುತ್ತಾರಾ?
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
28
ಆಶಾಕಿರಣದಂತೆ ಕಂಡ ಅಜಿತ್..
Image Credit : Asianet News

ಆಶಾಕಿರಣದಂತೆ ಕಂಡ ಅಜಿತ್..

ತಮಿಳುನಾಡಿನಾದ್ಯಂತ ಈಗ ವಿಜಯ್ ಹೆಸರು ಮೊಳಗುತ್ತಿದೆ. ಅವರು ಅಧಿಕಾರ ಹಿಡಿದಿದ್ದು ಅಲ್ಲಿನ ಹಲವು ದೊಡ್ಡ ನಾಯಕರಿಗೆ ನುಂಗಲಾರದ ತುತ್ತಾಗಿದೆ. ಮೊನ್ನೆವರೆಗೂ ಡಿಎಂಕೆ ಮತ್ತು ಎಐಎಡಿಎಂಕೆ ನಡುವೆ ಸ್ಪರ್ಧೆ ಇತ್ತು. ವಿಜಯ್ ಬಂದರೂ ಏನೂ ಮಾಡಲು ಸಾಧ್ಯವಿಲ್ಲ ಎಂದು ಈ ಎರಡೂ ಪಕ್ಷಗಳು ಭಾವಿಸಿದ್ದವು. ಆದರೆ, ದಶಕಗಳಿಂದ ಬೇರೂರಿದ್ದ ಈ ಎರಡು ದ್ರಾವಿಡ ಪಕ್ಷಗಳಿಗೆ ಶಾಕ್ ಕೊಟ್ಟು ದಳಪತಿ ಸಿಎಂ ಆದರು. 

ಈಗ ವಿಜಯ್‌ಗೆ ಹೇಗೆ ಚೆಕ್ ಇಡಬೇಕು ಎಂದು ಡಿಎಂಕೆ ಮತ್ತು ಎಐಎಡಿಎಂಕೆ ಪ್ಲ್ಯಾನ್ ಮಾಡುತ್ತಿವೆ. ಇದೇ ಹೊತ್ತಲ್ಲಿ ಎಐಎಡಿಎಂಕೆಗೆ ಒಂದು ಆಶಾಕಿರಣ ಕಂಡಿದೆ.

Related Articles

Related image1
CM Vijay Gift to Trisha: ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!
Related image2
ತಮಿಳುನಾಡು ಸರ್ಕಾರದ ನೂತನ ಸಚಿವರ ಖಾತೆ ಹಂಚಿಕೆ ಮಾಡಿದ ಸಿಎಂ ವಿಜಯ್‌, ಬಲಿಷ್ಠ ಖಾತೆ ತನ್ನಲ್ಲೇ ಇರಿಸಿಕೊಂಡ ದಳಪತಿ!
38
ದ್ರಾವಿಡ ರಾಜಕೀಯದಲ್ಲಿ ಸುನಾಮಿ, ಹೊಸ ತಲೆಮಾರಿನ ಯುದ್ಧ!
Image Credit : Asianet News

ದ್ರಾವಿಡ ರಾಜಕೀಯದಲ್ಲಿ ಸುನಾಮಿ, ಹೊಸ ತಲೆಮಾರಿನ ಯುದ್ಧ!

ವಿಜಯ್ ಸಿಎಂ ಆಗಲು ಬೇಕಾದಷ್ಟು ಶಾಸಕರು ಇಲ್ಲದ ಕಾರಣ, ಕಾಂಗ್ರೆಸ್ ಮತ್ತು ಎಡಪಕ್ಷಗಳ ಬೆಂಬಲದಿಂದ ಸಿಎಂ ಆಗಿದ್ದಾರೆ. ಇತ್ತ ಎಐಎಡಿಎಂಕೆ ಬಂಡಾಯ ಶಾಸಕರು ಕೂಡ ವಿಜಯ್‌ಗೆ ಬೆಂಬಲ ನೀಡಿದ್ದಾರೆ. ಇದರಿಂದ ಎಐಎಡಿಎಂಕೆ ನಾಯಕರು ವಿಜಯ್ ಮೇಲೆ ಸಿಕ್ಕಾಪಟ್ಟೆ ಕೋಪಗೊಂಡಿದ್ದಾರೆ. 

ವಿಜಯ್‌ಗೆ ಚೆಕ್ ಇಡಲು ಅವರು ದೊಡ್ಡ ಪ್ಲ್ಯಾನ್ ಮಾಡಿದ್ದಾರಂತೆ. ಆ ಪ್ಲ್ಯಾನ್ ಬೇರಾರೂ ಅಲ್ಲ, ಒಂದು ಕಾಲದಲ್ಲಿ ಅಮ್ಮ ಜಯಲಲಿತಾ ಅವರ ಮಾನಸಪುತ್ರ ಎಂದು ಹೆಸರು ಪಡೆದಿದ್ದ ತಲಾ ಅಜಿತ್.

48
ಎಐಎಡಿಎಂಕೆ ನಾಯಕರ ಮಾಸ್ಟರ್ ಪ್ಲ್ಯಾನ್..?
Image Credit : Asianet News

ಎಐಎಡಿಎಂಕೆ ನಾಯಕರ ಮಾಸ್ಟರ್ ಪ್ಲ್ಯಾನ್..?

ದಳಪತಿ ವಿಜಯ್ ಮುಂದಿನ ಐದು ವರ್ಷ ತಮಿಳುನಾಡನ್ನು ಆಳಲಿದ್ದಾರೆ. ಇದು ಹಲವು ರಾಜಕಾರಣಿಗಳ ನಿದ್ದೆಗೆಡಿಸಿದೆ. ಅದರಲ್ಲೂ, ಜಯಲಲಿತಾ ಕಟ್ಟಿದ ಎಐಎಡಿಎಂಕೆ ಪಕ್ಷ ಹೀನಾಯವಾಗಿ ಸೋತಿದೆ. ಈಗ ಪಕ್ಷವನ್ನು ಮತ್ತೆ ಮೇಲೆತ್ತಲು ಎಐಎಡಿಎಂಕೆ ಪಕ್ಕಾ ಪ್ಲ್ಯಾನ್‌ನಲ್ಲಿದೆ. 

ಅದೇ 'ತಲಾ ಅಜಿತ್' ಅಸ್ತ್ರ. ಮೂರನೇ ಸ್ಥಾನಕ್ಕೆ ಕುಸಿದಿರುವ ಎಐಎಡಿಎಂಕೆ ಪಕ್ಷಕ್ಕೆ ಹೊಸ ನಾಯಕತ್ವ ಬರಲಿದೆ ಎನ್ನಲಾಗುತ್ತಿದೆ. ಪಕ್ಷವನ್ನು ಉಳಿಸಿಕೊಳ್ಳಲು ಅಮ್ಮನ ಮಾನಸಪುತ್ರ ತಲಾ ಅಜಿತ್ ಅವರನ್ನು ಕಣಕ್ಕಿಳಿಸಲು ಎಐಎಡಿಎಂಕೆ ನಾಯಕರು ಪ್ಲ್ಯಾನ್ ಮಾಡುತ್ತಿದ್ದಾರೆ ಎಂಬ ಸುದ್ದಿ ಹಬ್ಬಿದೆ.

58
ವಿಜಯ್‌ಗೆ ಸ್ಪರ್ಧೆ ನೀಡುವ ಬಲಿಷ್ಠ ನಾಯಕ ಯಾರು?
Image Credit : our own

ವಿಜಯ್‌ಗೆ ಸ್ಪರ್ಧೆ ನೀಡುವ ಬಲಿಷ್ಠ ನಾಯಕ ಯಾರು?

ಸದ್ಯ ತಮಿಳುನಾಡಿನಲ್ಲಿ ವಿಜಯ್ ಅವರ 'ತಮಿಳಗ ವೆಟ್ರಿ ಕಳಗಂ' ಪಕ್ಷಕ್ಕೆ ಪ್ರಬಲ ಸ್ಪರ್ಧೆ ನೀಡಲು ಅಮ್ಮನಂತಹ ಬಲಿಷ್ಠ ನಾಯಕತ್ವ ಬೇಕು. ವಿಜಯ್ ತಮ್ಮ ಸರ್ಕಾರಕ್ಕೆ ಜಯಲಲಿತಾ ಕೋಟೆಯಲ್ಲಿದ್ದ ಪ್ರಮುಖ ನಾಯಕರನ್ನೆಲ್ಲಾ ಸೆಳೆದುಕೊಂಡಿದ್ದಾರೆ. ಎಂಜಿಆರ್ ಕಟ್ಟಿ, ಜಯಲಲಿತಾ ಬೆಳೆಸಿದ ಎಐಎಡಿಎಂಕೆ ಈಗ ಸಂಕಷ್ಟದಲ್ಲಿದೆ. ಹಾಗಾಗಿಯೇ ಅಮ್ಮನ ನಂತರ ಆ ಸ್ಥಾನ ತುಂಬಬಲ್ಲ ನಾಯಕನಾಗಿ ಜನರು ಅಜಿತ್ ಕಡೆ ನೋಡುತ್ತಿದ್ದಾರೆ.
68
ಎಲ್ಲರ ಚಿತ್ತ ಅಜಿತ್ ಕಡೆಗೆ..
Image Credit : our own

ಎಲ್ಲರ ಚಿತ್ತ ಅಜಿತ್ ಕಡೆಗೆ..

ವಿಜಯ್ ಮತ್ತು ಅಜಿತ್ ನಡುವಿನ ಸಿನಿಮಾ ಪೈಪೋಟಿ ಎಲ್ಲರಿಗೂ ಗೊತ್ತಿದೆ. ಇಬ್ಬರ ಸಿನಿಮಾಗಳ ನಡುವಿನ ಸ್ಪರ್ಧೆ ರಾಜಕೀಯವನ್ನೂ ಮೀರಿಸುತ್ತಿತ್ತು. ಸಿನಿಮಾದಲ್ಲೇ ಇಷ್ಟು ಪೈಪೋಟಿ ಇದ್ದರೆ, ರಾಜಕೀಯದಲ್ಲಿ ಇಬ್ಬರೂ ಎದುರಾದರೆ ಹೇಗಿರಬಹುದು ಎಂದು ಊಹಿಸಿಕೊಳ್ಳಬಹುದು. ವಿಜಯ್‌ಗೆ ಸಮನಾದ ಇಮೇಜ್ ಇರುವ ಸ್ಟಾರ್ ಅನ್ನು ತರಬೇಕೆಂಬುದು ಎಐಎಡಿಎಂಕೆ ಪ್ಲ್ಯಾನ್. 

ಸಿನಿಮಾ ಗ್ಲಾಮರ್ ರಾಜಕೀಯದಲ್ಲಿ ಎಷ್ಟು ಕೆಲಸ ಮಾಡುತ್ತದೆ ಎಂಬುದು ಈ ಚುನಾವಣೆಯಲ್ಲಿ ಸಾಬೀತಾಗಿದೆ. ಹಾಗಾಗಿಯೇ ಎಲ್ಲರ ಕಣ್ಣು ಅಜಿತ್ ಮೇಲೆ ಬಿದ್ದಿದೆ. ಇದಕ್ಕೆ ಇನ್ನೊಂದು ಕಾರಣವೂ ಇದೆ, ಅಜಿತ್ ಎಂದರೆ ಜಯಲಲಿತಾ ಅವರಿಗೆ ಬಹಳ ಇಷ್ಟ.

78
ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದ ಅಜಿತ್!
Image Credit : our own

ಅಭಿಮಾನಿಗಳ ಆಸೆಗೆ ತಣ್ಣೀರೆರಚಿದ್ದ ಅಜಿತ್!

ನಿಜ ಹೇಳಬೇಕೆಂದರೆ, ತಲಾ ಅಜಿತ್ ರಾಜಕೀಯಕ್ಕೆ ಬರಬೇಕೆಂಬುದು ಜಯಲಲಿತಾ ಮತ್ತು ಅಜಿತ್ ಅಭಿಮಾನಿಗಳ ಆಸೆಯಾಗಿತ್ತು. ಅಮ್ಮನ ನಂತರ ಅವರೇ ನಾಯಕ ಎಂಬ ಮಾತುಗಳೂ ಆಗ ಕೇಳಿಬಂದಿದ್ದವು. ಆದರೆ ಅಜಿತ್ ಯಾವುದಕ್ಕೂ ತಲೆಬಾಗಲಿಲ್ಲ. ತಮ್ಮ ಅಭಿಮಾನಿ ಸಂಘಗಳನ್ನೇ ರದ್ದುಗೊಳಿಸಿ ರಾಜಕೀಯದಿಂದ ದೂರ ಉಳಿದಿದ್ದರು. ಒಂದು ವೇಳೆ ಅಜಿತ್ ಅಮ್ಮನ ಪಕ್ಷಕ್ಕೆ ಬಂದರೆ, ತಮಿಳುನಾಡು ರಾಜಕೀಯ ಬೆಂಕಿಯ ಕುಂಡವಾಗುವುದು ಖಚಿತ.
88
ನಾಯಕತ್ವ ಅಮ್ಮನ ಮಾನಸಪುತ್ರನಿಗೇನಾ?
Image Credit : Asianet News

ನಾಯಕತ್ವ ಅಮ್ಮನ ಮಾನಸಪುತ್ರನಿಗೇನಾ?

ಎಂಜಿಆರ್‌ನಿಂದ ಹಿಡಿದು ಇಂದಿನ ವಿಜಯ್‌ವರೆಗೂ ತಮಿಳುನಾಡನ್ನು ಆಳಿದವರಲ್ಲಿ ಹೆಚ್ಚಿನವರು ಸಿನಿಮಾ ರಂಗದಿಂದ ಬಂದವರೇ. ಹಾಗಾಗಿಯೇ ಈಗ ವಿಜಯ್‌ಗೆ ಸರಿಸಾಟಿಯಾಗಿ ನಿಲ್ಲಬಲ್ಲ ನಾಯಕ ನಟ ಅಜಿತ್ ಮಾತ್ರ ಎಂದು ಪಕ್ಷದ ನಾಯಕರು ಭಾವಿಸುತ್ತಿದ್ದಾರೆ. ಅಜಿತ್ ಕೇವಲ ಸಿನಿಮಾ ಹೀರೋ ಅಲ್ಲ, ತಮಿಳರಿಗೆ ಅವರು ರಿಯಲ್ ಲೈಫ್ ಹೀರೋ ಕೂಡ. ಯುವಜನರಲ್ಲಿ ಅವರಿಗೆ ಕ್ರೇಜ್ ಇದೆ. ಮುಂಬರುವ ದಿನಗಳಲ್ಲಿ ಅಮ್ಮನ ಸ್ಥಾನದಲ್ಲಿ ಅಜಿತ್ ಕುಳಿತರೂ ಆಶ್ಚರ್ಯವಿಲ್ಲ. ಅಜಿತ್ ಎಂಟ್ರಿ ಕೊಟ್ಟರೆ ತಮಿಳುನಾಡು ರಾಜಕೀಯ ಮತ್ತಷ್ಟು ರಂಗೇರುವುದು ಗ್ಯಾರಂಟಿ.

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ತಮಿಳುನಾಡು
ದಳಪತಿ ವಿಜಯ್
ಅಜಿತ್ ಕುಮಾರ್
ತಮಿಳಗ ವೆಟ್ರಿ ಕಳಗಂ

Latest Videos
Recommended Stories
Recommended image1
ಶೀಘ್ರವೇ ಆಗಸಕ್ಕೆ ಚಿಮ್ಮಲಿದೆ ಇಸ್ರೋದ GSLV-F17 ರಾಕೆಟ್, ಬಾಹ್ಯಾಕಾಶದಲ್ಲಿದ್ದು ಭಾರತ ಕಾಯಲಿದೆ EOS-5!
Recommended image2
2027ರಲ್ಲಿ ದೇಶೀಯ ಹೋಟೆಲ್ ಉದ್ಯಮಕ್ಕೆ ಭಾರಿ ಸುಗ್ಗಿ ಕಾಲ, ಲೀಲಾ, ತಾಜ್, ಐಟಿಸಿ ಆದಾಯದಲ್ಲಿ ಭಾರಿ ಜಿಗಿತ!
Recommended image3
'ಬಿಗ್ ಬಾಸ್' ಶೋನ ನಿಜವಾದ ಓನರ್ ಇವರೇ ನೋಡಿ.. ಪ್ರತೀ ಸೀಸನ್‌ಗೆ ಗಳಿಸುವ ಹಣ ಎಷ್ಟು ಗೊತ್ತಾ?
Related Stories
Recommended image1
CM Vijay Gift to Trisha: ಒಲವಿನ ಗೆಳತಿಗೆ ಭಾರೀ ಉಡುಗೊರೆ ಕೊಟ್ಟ ಸಿಎಂ ವಿಜಯ್; ದಳಪತಿ ದರ್ಬಾರ್‌ಗೆ ಹೌಹಾರಿದ ತಮಿಳುನಾಡು!
Recommended image2
ತಮಿಳುನಾಡು ಸರ್ಕಾರದ ನೂತನ ಸಚಿವರ ಖಾತೆ ಹಂಚಿಕೆ ಮಾಡಿದ ಸಿಎಂ ವಿಜಯ್‌, ಬಲಿಷ್ಠ ಖಾತೆ ತನ್ನಲ್ಲೇ ಇರಿಸಿಕೊಂಡ ದಳಪತಿ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved