ಓವಲ್ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ಗೆಲುವಿಗೆ ಕೇವಲ 35 ರನ್ ಸಾಕು. ಭಾರತಕ್ಕೆ 4 ವಿಕೆಟ್ ಅವಶ್ಯಕತೆ ಇದೆ. ಆದರೆ ಇಂಗ್ಲೆಂಡ್ ತಂಡ ಇಂದು ಸರಿಯಾಗಿ ನಿದ್ದೆ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಎದುರಾಗಿದೆ.
- Home
- News
- State
- Karnatata Latest News Live: ಓವಲ್ ಟೆಸ್ಟ್ 4ನೇ ದಿನದಾಟ ಅಂತ್ಯ, ಗೆಲುವಿಗೆ 35 ರನ್ ಸಾಕಿದ್ದರೂ ಇಂಗ್ಲೆಂಡ್ಗೆ ನಿದ್ದೆಯಿಲ್ಲ
Karnatata Latest News Live: ಓವಲ್ ಟೆಸ್ಟ್ 4ನೇ ದಿನದಾಟ ಅಂತ್ಯ, ಗೆಲುವಿಗೆ 35 ರನ್ ಸಾಕಿದ್ದರೂ ಇಂಗ್ಲೆಂಡ್ಗೆ ನಿದ್ದೆಯಿಲ್ಲ

ಬೆಳ್ತಂಗಡಿ: ಧರ್ಮಸ್ಥಳ ಗ್ರಾಮದಲ್ಲಿ ಅನಧಿಕೃತವಾಗಿ ನೂರಾರು ಶವಗಳನ್ನು ಹೂಳಲಾಗಿದೆ ಎಂಬ ಆರೋಪಕ್ಕೆ ಸಂಬಂಧಿಸಿದಂತೆ ಅನಾಮಿಕ ದೂರುದಾರ ಗುರುತಿಸಿರುವ 9 ಮತ್ತು 10ನೇ ಸಂಖ್ಯೆಯ ಜಾಗದಲ್ಲಿ ಶನಿವಾರ ಉತ್ಪನನ ನಡೆಸಿದ್ದು, ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಭಾನುವಾರ, ರಜೆಯ ದಿನವಾಗಿದ್ದು, ಕಾರ್ಯಾಚರಣೆ ನಡೆಯುವುದು ಅನುಮಾನವಾಗಿದೆ. ಉತ್ಪನನ ಕಾರ್ಯಾಚರಣೆಯ 5ನೇ ದಿನವಾದ ಶನಿವಾರ, ಬೆಳಗ್ಗೆ 11.4 5ರ ಸುಮಾರಿಗೆ ಅನಾಮಿಕ ತೋರಿಸಿದ 9ನೇ ಪಾಯಿಂಟ್ನಲ್ಲಿ ಅಗೆತ ನಡೆಸಲಾಯಿತು. ಗ್ರಾಮದ ನೇತ್ರಾವತಿ ಸ್ಥಾನಘಟ್ಟದ ಸನಿಹ, ರಾಜ್ಯ ಹೆದ್ದಾ ರಿಯ ಪಕ್ಕದಲ್ಲೇ ಈ ಜಾಗವಿದೆ. ಮತ್ತೊಂದೆಡೆ ನೂರಾರು ಶವ ಹೂತ ಆರೋಪದ ತನಿಖೆ ನಡೆಸುತ್ತಿವ ವಿಶೇಷ ತನಿಖಾ ತಂಡದ ಓರ್ವ ಅಧಿಕಾರಿ ದೂರುದಾರನಿಗೆ ಬೆದರಿಕೆ ಹಾಕಿದ ಆರೋಪ ಕೇಳಿ ಬಂದಿದೆ. ಈ ಕುರಿತು ದೂರುದಾರನ ಪರ ವಕೀಲರು ಎಸ್ಐಟಿ ಮುಖ್ಯಸ್ಥರಿಗೆ ದೂರು ನೀಡಿದ್ದಾರೆ. ಇನ್ಸ್ಪೆಕ್ಟರ್ ಹಂತದ ಅಧಿಕಾರಿ ದೂರು ವಾಪಸ್ ಪಡೆಯುವಂತೆ ಒತ್ತಡ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
Karnatata Latest News Live 2nd Agust 2025 ಓವಲ್ ಟೆಸ್ಟ್ 4ನೇ ದಿನದಾಟ ಅಂತ್ಯ, ಗೆಲುವಿಗೆ 35 ರನ್ ಸಾಕಿದ್ದರೂ ಇಂಗ್ಲೆಂಡ್ಗೆ ನಿದ್ದೆಯಿಲ್ಲ
Karnatata Latest News Live 2nd Agust 2025 ಬೆಂಗಳೂರು-ಕೋಲ್ಕತಾ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ, ಹಾರಾಟ ನಡುವೆ ತಾಂತ್ರಿಕ ದೋಷ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ಧಾಣದಿಂದ ಟೇಕ್ ಆಫ್ ಆದ ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡು ಆತಂಕ ಸೃಷ್ಟಿಯಾದ ಘಟನೆ ನಡೆದಿದೆ. ಆಂಧ್ರ ಪ್ರದೇಶ ಗಡಿಯಲ್ಲಿ ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದೆ.
Karnatata Latest News Live 2nd Agust 2025 ಕೊನೆಗೂ ವಿರಾಟ್ ಕೊಹ್ಲಿ ಜೊತೆಗಿನ ಡೇಟಿಂಗ್ ಅಸಲಿ ಕತೆ ಬಿಚ್ಚಿಟ್ಟ ತಮನ್ನಾ ಭಾಟಿಯಾ
ತಮನ್ನ ಭಾಟಿಯಾ ಡೇಟಿಂಗ್ ವಿಚಾರದಲ್ಲಿ ಪ್ರಮುಖವಾಗಿ ಕ್ರಿಕೆಟಿಗ ವಿರಾಟ್ ಕೊಹ್ಲಿ ಹೆಸರು ಕೇಳಿಬಂದಿತ್ತು. ಈ ಕುರಿತು ತಮನ್ನ ಭಾಟಿಯಾ ಇದೇ ಮೊದಲ ಬಾರಿ ಮಾತನಾಡಿದ್ದಾರೆ. ನಿಜಕ್ಕೂ ಕೊಹ್ಲಿ ಜೊತೆ ಡೇಟಿಂಗ್ ಮಾಡಿದ್ರಾ ತಮನ್ನಾ?
Karnatata Latest News Live 2nd Agust 2025 ಐಫೋನ್ ಬೇಡಿಕೆಯಿಂದ ಭಾರತದಲ್ಲಿ ಆ್ಯಪಲ್ ಸ್ಟೋರ್ ವಿಸ್ತರಣೆ, ಬೆಂಗಳೂರಿಗೆ ಬರುತ್ತಾ ಮಳಿಗೆ?
ಭಾರತದಲ್ಲಿ ಐಫೋನ್ ಮಾರಾಟ ಹೆಚ್ಚಾಗಿದೆ. ಹೀಗಾಗಿ ಆ್ಯಪಲ್ ತನ್ನ ಸ್ಟೋರ್ ವಿಸ್ತರಿಸಲು ಮುಂದಾಗಿದೆ. ಸದ್ಯ ಭಾರತದ ಯಾವ ನಗರದಲ್ಲಿ ಆ್ಯಪಲ್ ಸ್ಟೋರ್ ಆರಂಭಗೊಳ್ಳುತ್ತಿದೆ.
Karnatata Latest News Live 2nd Agust 2025 ಎಸ್ಮಾ ಎಚ್ಚರಿಕೆ ಲೆಕ್ಕಿಸದೆ ಮುಷ್ಕರಕ್ಕೆ ಮುಂದಾದ ಸಾರಿಗೆ ನೌಕರರು, ಆಗಸ್ಟ್ 5ರಂದು ಸಾರ್ವಜನಿಕ ಸೇವೆ ಸ್ತಬ್ಧ!
ರಾಜ್ಯ ಸಾರಿಗೆ ನೌಕರರು ಆಗಸ್ಟ್ 5 ರಿಂದ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲು ಸಜ್ಜಾಗಿದ್ದಾರೆ. ವೇತನ ಹೆಚ್ಚಳ, ಬಾಕಿ ಅರಿಯರ್ಸ್ ಪಾವತಿ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿಟ್ಟಿದ್ದು, ಸರ್ಕಾರದ ಎಸ್ಮಾ ಎಚ್ಚರಿಕೆಯನ್ನೂ ಲೆಕ್ಕಿಸದೆ ಮುಷ್ಕರಕ್ಕೆ ಮುಂದಾಗಿದ್ದಾರೆ.
Karnatata Latest News Live 2nd Agust 2025 2020ರಲ್ಲಿ ನಾಪತ್ತೆಯಾದ ಸಿಂಧೂ ಕೇಸ್ಗೆ ಮರುಜೀವ, ಕಣ್ಣೀರಿಟ್ಟು ಮನವಿ ಮಾಡಿದ ತಾಯಿ
ಐದು ವರ್ಷಗಳಿಂದ ಮಗಳು ಸಿಂಧು ಮನೆಗೆ ಹಿಂದಿರುತ್ತಾಳೆ ಎಂದು ದಾರಿ ಕಾಯುತ್ತಿರುವ ತಾಯಿ ಇದೀಗ ಪೊಲೀಸರ ಬಳಿಕ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ನನ್ನ ಮಗಳಿಗೆ ಏನಾಯ್ತು ಅನ್ನೋದಾದರು ಹೇಳಿ ಎಂದು ಕೈಮುಗಿದು ಬೇಡಿಕೊಂಡಿದ್ದಾರೆ. ಏನಿದು ಸಿಂಧೂ ಪ್ರಕರಣ?
Karnatata Latest News Live 2nd Agust 2025 ಉದ್ಯೋಗ ಕಳಕೊಂಡವನಿಂದ ಕಬ್ಬನ್ ಪಾರ್ಕ್ನಲ್ಲಿ ಬ್ಲೈಂಡ್ ಡೇಟ್, ವಿವಾದಿತ ಶೋಗೆ ಫುಲ್ ಸ್ಟಾಪ್ ಇಟ್ಟ ಪೊಲೀಸರು
Karnatata Latest News Live 2nd Agust 2025 ಕೆಆರ್ಎಸ್ ಟಿಪ್ಪುವಿನ ಕೊಡುಗೆಯಲ್ಲ, ನಾಲ್ವಡಿಯವರ ಕನಸಿಗೆ ತಾಯಿ, ಪತ್ನಿ ಚಿನ್ನ ಅಡವಿಟ್ಟು ದುಡ್ಡು ಹೊಂದಿಸಿದರು!
ಕೆಆರ್ಎಸ್ ಅಣೆಕಟ್ಟು ನಿರ್ಮಾಣದಲ್ಲಿ ಟಿಪ್ಪು ಸುಲ್ತಾನನ ಪಾತ್ರವಿಲ್ಲ ಎಂದು ಇತಿಹಾಸಕಾರ ತಲಕಾಡು ಚಿಕ್ಕರಂಗೇಗೌಡ ಸ್ಪಷ್ಟಪಡಿಸಿದ್ದಾರೆ. ನಿಜವಾದ ಕೊಡುಗೆ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರದ್ದು ಎಂದು ಅವರು ಹೇಳಿದ್ದಾರೆ. ಸಚಿವ ಮಹದೇವಪ್ಪನವರ ಹೇಳಿಕೆಯನ್ನು ಅವರು ಖಂಡಿಸಿದ್ದಾರೆ.
Karnatata Latest News Live 2nd Agust 2025 26 ಐಫೋನ್ ದೇಹಕ್ಕೆ ಅಂಟಿಸಿ ಕಳ್ಳಸಾಗಾಣೆಗೆ ಯತ್ನಿಸಿದ ಯುವತಿಗೆ ಹೃದಯಾಘಾತ, ತಜ್ಞರ ಎಚ್ಚರಿಕೆ
20 ವರ್ಷದ ಯುವತಿ ಬಸ್ನಲ್ಲಿ ಪ್ರಯಾಣ ಮಾಡುತ್ತಿದ್ದಂತೆ ಹೃದಯಾಘಾತದಿಂದ ಮೃತಪಟ್ಟಿದ್ದಾಳೆ. ತಕ್ಷಣ ಈಕೆಯನ್ನು ಆಸ್ಪತ್ರೆ ದಾಖಲಿಸಲಾಗಿದೆ. ತನ್ನ ದೇಹದಲ್ಲಿ 26 ಐಫೋನ್ ಅಂಟಿಸಿ ಕಳ್ಳಾಸಾಗಾಣೆ ಮಾಡುತ್ತಿದ್ದ ವೇಳೆ ಈ ಘಟನೆ ಸಂಭವಿಸಿದೆ.
Karnatata Latest News Live 2nd Agust 2025 KRSಗೆ ಟಿಪ್ಪುವಿನಿಂದ ಅಡಿಗಲ್ಲೆಂದು ಸಚಿವ ಮಹದೇವಪ್ಪ ವಿವಾದ, ಮೈಸೂರು ಸಂಸದ ಯದುವೀರ್ ತೀವ್ರ ಆಕ್ರೋಶ
Karnatata Latest News Live 2nd Agust 2025 ಬೆಂಗಳೂರಿಗೆ ಆರೆಂಜ್ ಅಲರ್ಟ್, 10 ನಿಮಿಷ ಮಳೆಯಲ್ಲಿ ಕರೆಯಂತಾದ ಕೆಆರ್ ಮಾರ್ಕೆಟ್
ಬೆಂಗಳೂರಿಗೆ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಮುಂದಿನ ಮೂರು ಗಂಟೆ ಆರೆಂಜ್ ಅಲರ್ಟ ಘೋಷಿಸಲಾಗಿದೆ. ಈಗಾಗಲೇ ನಗರದ ಹಲವೆಡೆ ಭಾರಿ ಮಳೆಯಾಗಿ ಹಲವು ರಸ್ತೆಗಳು ಜಲಾವೃತಗೊಂಡಿದೆ.
Karnatata Latest News Live 2nd Agust 2025 KRSಗೆ ಅಡಿಗಲ್ಲು ಹಾಕಿದ್ದು ಟಿಪ್ಪು, ನಾಲ್ವಡಿ ಒಡೆಯರ್ ಪುಣ್ಯಸ್ಮರಣೆ ದಿನ ಸಚಿವ ಮಹಾದೇವಪ್ಪ ವಿವಾದ
ಸಚಿವ ಮಹಾದೇವಪ್ಪ ಮತ್ತೆ ಟಿಪ್ಪು ವಿವಾದ ಕೆದಕಿ ಇದೀಗ ಹಲವರ ಆಕ್ರೋಶಕ್ಕೆ ಗುರಿಯಾಗಿದ್ದಾರೆ. ಆಕಡೆ ಅಲ್ಲಾಹು ಅಕ್ಬರ್, ಈಕಡೆ ಗಂಟೆ ಟನ್ ಟನ್ ಮೂಲಕ ಟಿಪ್ಪು ಸರ್ವಧರ್ಮ ಸಹಿಷ್ಣುವಾಗಿದ್ದರು. ಕೆಆರ್ಎಸ್ ಡ್ಯಾಂಗೆ ಅಡಿಗಲ್ಲು ಹಾಕಿದ್ದೇ ಟಿಪ್ಪು ಎಂದು ಸಚಿವ ಮಹಾದೇವಪ್ಪ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
Karnatata Latest News Live 2nd Agust 2025 ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ, 480 ಪುಟಗಳ ತೀರ್ಪಿನಲ್ಲಿ ಸಂಸ್ಕೃತ ಶ್ಲೋಕ ಉಲ್ಲೇಖ, ಏನಿದರ ಮಹತ್ವ?
ಹಾಸನದ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರಿಗೆ ಅತ್ಯಾ1ಚಾರ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ನ್ಯಾಯಾಲಯದ ತೀರ್ಪಿನಲ್ಲಿ ಮಹಿಳೆಯರನ್ನು ಪೂಜಿಸುವ ಬಗ್ಗೆ ಸಂಸ್ಕೃತ ಶ್ಲೋಕವನ್ನು ಉಲ್ಲೇಖಿಸಲಾಗಿದೆ. ಈ ಪ್ರಕರಣವು 2024 ರಲ್ಲಿ ಬೆಳಕಿಗೆ ಬಂದಿತ್ತು.
Karnatata Latest News Live 2nd Agust 2025 ಐಸಿಯುನಲ್ಲಿರುವ ರಾಜ್ಯ ಕಾಂಗ್ರೆಸ್ ಸರ್ಕಾರ - ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ
ಪಂಚ ಗ್ಯಾರಂಟಿಗಳ ಮೇಲೆ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರ್ಕಾರ ರಾಜ್ಯದ ಅಭಿವೃದ್ಧಿ ವಿಷಯದಲ್ಲಿ ಶೂನ್ಯವಾಗಿದ್ದು ಪ್ರಸ್ತುತ ಸರ್ಕಾರ ಐಸಿಯುನಲ್ಲಿದೆ ಎಂದು ಮಾಜಿ ಸಚಿವ ಎಂ.ಪಿ.ರೇಣುಕಾಚಾರ್ಯ ಹೇಳಿದರು.
Karnatata Latest News Live 2nd Agust 2025 ಡೀಮ್ಡ್ ಫಾರೆಸ್ಟ್ ಸರ್ವೇ ಶೀಘ್ರ ಪೂರ್ಣಗೊಳಿಸಿ - ಕೃಷಿ ಸಚಿವ ಚಲುವರಾಯಸ್ವಾಮಿ
ಕಂದಾಯ ಇಲಾಖೆ ಮತ್ತು ಅರಣ್ಯ ಇಲಾಖೆ ನಡುವೆ ದೊಡ್ಡ ತಲೆನೋವಾಗಿರುವ ಡೀಮ್ಡ್ ಫಾರೆಸ್ಟ್ ಸರ್ವೇಯನ್ನು ಶೀಘ್ರ ಪೂರ್ಣಗೊಳಿಸುವಂತೆ ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಸೂಚನೆ ನೀಡಿದರು.
Karnatata Latest News Live 2nd Agust 2025 ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲ - ಸಂಸದ ಜಗದೀಶ್ ಶೆಟ್ಟರ್
ಲೋಕಸಭಾ ಅಧಿವೇಶನದಲ್ಲಿ ಕಾಂಗ್ರೆಸ್ ಶಿಸ್ತು ಪಾಲನೆ ಮಾಡುತ್ತಿಲ್ಲ. ಪ್ರತಿಪಕ್ಷವಾಗಿ ಕೆಲಸ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ ಎಂದು ಸಂಸದ, ಮಾಜಿ ಸಿಎಂ ಜಗದೀಶ್ ಶೆಟ್ಟರ್ ಆರೋಪಿಸಿದರು.
Karnatata Latest News Live 2nd Agust 2025 ನಟ ದರ್ಶನ್ ರೀತಿ ಫಯಾಝ್ಗೂ ಜಾಮೀನು ಕೊಡಿ, ನೇಹಾ ಹಿರೇಮಠ ಕೊಲೆ ಆರೋಪಿ ಪರ ವಕೀಲರ ವಾದ
ರೇಣುಕಾಸ್ವಾಮಿ ಪ್ರಕರಣದಲ್ಲಿ ನಟ ದರ್ಶನ್ಗೆ ಜಾಮೀನು ನೀಡಿದ ರೀತಿ, ನೇಹಾ ಹಿರೇಮಠ ಪ್ರಕರಣದಲ್ಲಿ ಕೊಲೆ ಆರೋಪಿ ಫಯಾಝ್ಗೆ ಜಾಮೀನು ನೀಡಬೇಕು ಎಂದು ಆರೋಪಿ ವಕೀಲರು ವಾದ ಮಂಡಿಸಿದ್ದಾರೆ ಎಂದು ನೇಹಾ ತಂದೆ ಆಕ್ರೋಶ ಹೊರಹಾಕಿದ್ದಾರೆ. ನಾಳೆ ಜಾಮೀನು ಆದೇಶ ಹೊರಬೀಳಲಿದೆ.
Karnatata Latest News Live 2nd Agust 2025 ಆಗಸ್ಟ್ 10 ರಂದು ಬೆಂಗಳೂರಿಗೆ ಪಿಎಂ ಮೋದಿ, ಮೆಟ್ರೋ ಹಳದಿ ಮಾರ್ಗ ಉದ್ಘಾಟನೆ
Karnatata Latest News Live 2nd Agust 2025 ಏಳು ವರ್ಷಗಳಲ್ಲಿ ದೇಶದಲ್ಲಿ 4 ಲಕ್ಷ ಕೋಟಿ ಹಣ ರೈತರ ಖಾತೆಗೆ ಜಮೆ - ಪ್ರಲ್ಹಾದ್ ಜೋಶಿ
ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆ ಪೈಕಿ ಕಳೆದ ಏಳು ವರ್ಷಗಳಲ್ಲಿ ₹4 ಲಕ್ಷ ಕೋಟಿ ಹಣ ರೈತರಿಗೆ ಸಂದಾಯವಾಗಿದೆ. ಧಾರವಾಡ ಲೋಕಸಭಾ ಕ್ಷೇತ್ರದಲ್ಲಿ ₹538 ಕೋಟಿ ರೈತರ ಖಾತೆಗೆ ಜಮಾ ಆಗಿದೆ ಎಂದು ಪ್ರಲ್ಹಾದ್ ಜೋಶಿ ಮಾಹಿತಿ ನೀಡಿದರು.
Karnatata Latest News Live 2nd Agust 2025 ತಿಂಗಳಾದ್ರೂ ಮಗು ನೋಡಲು ಬರಲಿಲ್ಲ - ಮಗು ಕೊಟ್ಟ ಬಿಜೆಪಿ ಮುಖಂಡನ ಪುತ್ರನಿಗಾಗಿ ಕಾಯ್ತಿರೋ ಯುವತಿ!
ಮದುವೆಯಾಗುವುದಾಗಿ ನಂಬಿಸಿ ಮಗು ಕೊಟ್ಟು ಜೈಲು ಸೇರಿರೋ ಬಿಜೆಪಿ ಮುಖಂಡನ 20 ವರ್ಷದ ಪುತ್ರನಿಗಾಗಿ ಯುವತಿ ಕಣ್ಣೀರು ಹಾಕುತ್ತಿದ್ದಾಳೆ. ಅವಳು ಹೇಳಿದ್ದೇನು ಕೇಳಿ...