08:55 AM (IST) Jun 28

Karnataka News Live:Bloom Avenue Greening Project - ಬೆಂಗಳೂರು ರಸ್ತೇಲಿ ವರ್ಷವಿಡೀ ಅರಳಲಿವೆ ಬಣ್ಣದ ಹೂಗಳು!

Bloom Avenue Greening Project: ನಾಡಪ್ರಭು ಕೆಂಪೇಗೌಡ ಬಡಾವಣೆಯ ಮೇಜರ್‌ ಆರ್ಟಿರಿಯಲ್‌ ರಸ್ತೆಯು (MAR) ವರ್ಷದ 365 ದಿನವೂ ಹಳದಿ, ನೇರಳೆ, ಗುಲಾಬಿ ಸೇರಿ ವಿವಿಧ ಹೂವುಗಳಿಂದ ಕಂಗೊಳಿಸುವಂತೆ ಮಾಡಲು ಅನ್‌ಬಾಕ್ಸಿಂಗ್‌ ಬಿಎಲ್‌ಆರ್‌ ಸಂಸ್ಥೆ ‘ಬ್ಲೂಮ್‌ ಅವೆನ್ಯೂ’ ಪ್ರಾಜೆಕ್ಟ್‌.

Read Full Story
08:53 AM (IST) Jun 28

Karnataka News Live:ಬೈರಕುಪ್ಪ ಸೇತುವೆ - ಕರ್ನಾಟಕ-ಕೇರಳ ಸಂಪರ್ಕ, ದಶಕದ ಕನಸಿಗೆ ವಯನಾಡ್ ಸಂಸದೆ ಪ್ರಿಯಾಂಕಾ ಗಾಂಧಿ ಮರುಜೀವ!

ವಯನಾಡು ಸಂಸದೆ ಪ್ರಿಯಾಂಕಾ ಗಾಂಧಿ ಅವರು, ಕರ್ನಾಟಕ ಮತ್ತು ಕೇರಳವನ್ನು ಸಂಪರ್ಕಿಸುವ ಬೈರಕುಪ್ಪ ಸೇತುವೆ ಯೋಜನೆಯನ್ನು ತ್ವರಿತಗೊಳಿಸಲು ಪ್ರಯತ್ನಿಸುತ್ತಿದ್ದಾರೆ. ಬಂಡೀಪುರ ಅರಣ್ಯ ಮಾರ್ಗವನ್ನು ತಪ್ಪಿಸಿ, ಕಬಿನಿ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸುವ ಈ ಯೋಜನೆಯು 30 ವರ್ಷಗಳಿಂದ ನೆನೆಗುದಿಗೆ ಬಿದ್ದಿತ್ತು.
Read Full Story
08:15 AM (IST) Jun 28

Karnataka News Live:Illegal Foreign Migrants - ರಾಜ್ಯದಲ್ಲಿ 13,675 ಅಕ್ರಮ ವಿದೇಶಿ ವಲಸಿಗರ ಪತ್ತೆ - ಬೆಂಗಳೂರಲ್ಲೇ 10,650! ಗೃಹ ಸಚಿವರೇ ಕ್ರಮ ಯಾವಾಗ?

ರಾಜ್ಯದಲ್ಲಿ ಒಟ್ಟು 13,675 ಅಕ್ರಮ ವಿದೇಶಿ ವಲಸಿಗರು ಇರುವುದನ್ನು ಪತ್ತೆಹಚ್ಚಲಾಗಿದ್ದು, ಅವರಲ್ಲಿ 10,650 ಮಂದಿ ಬೆಂಗಳೂರಿನಲ್ಲೇ ನೆಲೆಸಿದ್ದಾರೆ. ಈ ಆತಂಕಕಾರಿ ಸಂಖ್ಯೆಯ ಹೊರತಾಗಿಯೂ, ಅವರನ್ನು ಗಡಿಪಾರು ಮಾಡಲು ಸರ್ಕಾರ ವಿಳಂಬ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಕಳವಳವನ್ನು ಮೂಡಿಸಿದೆ.
Read Full Story
08:05 AM (IST) Jun 28

Karnataka News Live:ಕಾಂಗ್ರೆಸ್ಸಿಗೆ ಹೆಚ್ಚು ಅಡ್ಡಮತ ಬಂದಿದ್ದು ಬೆಳಗಾವಿಯಿಂದ! 4-5 ಮತ ನಿರೀಕ್ಷಿಸಿದ್ದ ಕೈಗೆ ಸಿಕ್ಕಿದ್ದು ಭರ್ಜರಿ 11!

ವಿಧಾನಪರಿಷತ್‌ ಚುನಾವಣೆಯಲ್ಲಿ ನಿರೀಕ್ಷೆ ಮೀರಿ ಹೆಚ್ಚುವರಿ ಮತಗಳನ್ನು ಪಡೆದ ಕಾಂಗ್ರೆಸ್‌, ಈ ಮತಗಳ ಮೂಲವನ್ನು ಪತ್ತೆಹಚ್ಚಿದೆ. ಪಕ್ಷದ ಆಂತರಿಕ ಸಂಶೋಧನೆಯ ಪ್ರಕಾರ, ಬೆಳಗಾವಿ ಜಿಲ್ಲೆಯ ಕೆಲವು ಅತೃಪ್ತ ಬಿಜೆಪಿ ಶಾಸಕರು ಅಡ್ಡಮತದಾನ ಮಾಡಿರುವುದು ಈ ಅನಿರೀಕ್ಷಿತ ಗೆಲುವಿಗೆ ಕಾರಣವಾಗಿದೆ.
Read Full Story
07:48 AM (IST) Jun 28

Karnataka News Live:ಬಿಜೆಪಿ ಅಡ್ಡ ಮತದಾನ - ಸತ್ಯಶೋಧನಾ ಸಮಿತಿ ಮಧ್ಯಂತರ ವರದಿ ಸಲ್ಲಿಕೆ, ಬಿಜೆಪಿ 4 ಜೆಡಿಎಸ್ 8 ಶಾಸಕರ ಮೇಲೆ ಶಂಕೆ!

ವಿಧಾನ ಪರಿಷತ್ ಚುನಾವಣೆಯಲ್ಲಿನ ಅಡ್ಡ ಮತದಾನದ ಕುರಿತು ಬಿಜೆಪಿ ಸತ್ಯಶೋಧನಾ ಸಮಿತಿಯು ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ಮಧ್ಯಂತರ ವರದಿ ಸಲ್ಲಿಸಿದೆ. ವರದಿಯಲ್ಲಿ ಅನುಮಾನಾಸ್ಪದ ಶಾಸಕರ ಹೆಸರುಗಳನ್ನು ಗೌಪ್ಯವಾಗಿ ಉಲ್ಲೇಖಿಸಲಾಗಿದ್ದು, ಕಾಂಗ್ರೆಸ್ ಅನೈತಿಕ ಮಾರ್ಗದಿಂದ ಅಡ್ಡ ಮತದಾನ ಮಾಡಿಸಿದೆ ಎಂದು ಸಿ.ಟಿ.ರವಿ ಆರೋಪಿಸಿದ್ದಾರೆ.
Read Full Story