11:56 PM (IST) Aug 09

Karnataka News Live 9th August:'ಅನಾಮಿಕ ಯಾರು? ಅವನ ಹಿನ್ನೆಲೆ ಏನು?..' ಧರ್ಮಸ್ಥಳ ಪುಣ್ಯಕ್ಷೇತ್ರಕ್ಕೆ ಕುಂದುತರಲು ಯತ್ನ; ಸಂಸದ ಕಾಗೇರಿ ಆಕ್ರೋಶ

ಧರ್ಮಸ್ಥಳದ ಘನತೆಗೆ ಕುಂದು ತರುವ ಪ್ರಯತ್ನ ನಡೆಯುತ್ತಿದೆ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಅನಾಮಿಕ ವ್ಯಕ್ತಿಯ ಆರೋಪಗಳ ಹಿಂದಿರುವವರನ್ನು ಬಹಿರಂಗಪಡಿಸಬೇಕೆಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. 

Read Full Story
10:49 PM (IST) Aug 09

Karnataka News Live 9th August:ಭಾರತ ವಿಮಾನಕ್ಕೆ ವಾಯುಪ್ರದೇಶ ನಿರಾಕರಿಸಿ 2 ತಿಂಗಳಲ್ಲಿ 127 ಕೋಟಿ ರೂ ಕಳೆದುಕೊಂಡ ಪಾಕಿಸ್ತಾನ

ಪೆಹಲ್ಗಾಂ ಉಗ್ರ ದಾಳಿಯಿಂದ ಭಾರತ ಕಟ್ಟು ನಿಟ್ಟಿನ ಕ್ರಮ ಕೈಗೊಂಡಾಗ ಪಾಕಿಸ್ತಾನ ಪ್ರತಿಯಾಗಿ ಭಾರತದ ವಿಮಾನಗಳಿಗೆ ವಾಯುಪ್ರದೇಶ ನಿರಾಕರಿಸಿತ್ತು. ಇದರಿಂದ ಪಾಕಿಸ್ತಾನ ಕೇವಲ 2 ತಿಂಗಳಲ್ಲಿ 127 ಕೋಟಿ ರೂಪಾಯಿ ನಷ್ಟ ಅನುಭವಿಸಿದೆ.

Read Full Story
10:20 PM (IST) Aug 09

Karnataka News Live 9th August:ಚಿಕ್ಕಮಗಳೂರು - ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವನೆ; 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥ!

ಚಿಕ್ಕಮಗಳೂರು ತಾಲೂಕಿನ ಆಲ್ದೂರು ಪಟ್ಟಣದ ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಲುಷಿತ ಆಹಾರ ಸೇವಿಸಿ 25ಕ್ಕೂ ಹೆಚ್ಚು ಮಕ್ಕಳು ಅಸ್ವಸ್ಥರಾಗಿದ್ದಾರೆ. ಚಿಕಿತ್ಸೆ ನಂತರ ಮಕ್ಕಳು ಚೇತರಿಸಿಕೊಂಡಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಶಾಲಾ ಸಿಬ್ಬಂದಿ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಪೋಷಕರು ಆಗ್ರಹಿಸಿದ್ದಾರೆ.
Read Full Story
10:03 PM (IST) Aug 09

Karnataka News Live 9th August:ಡೋನಾಲ್ಡ್ ಟ್ರಂಪ್‌ಗೆ ಎದುರಾಯ್ತು ಹೊಸ ಸಂಕಷ್ಟ, ಅಮೆರಿಕದಲ್ಲಿ ಕೋವಿಡ್ ವೈರಸ್ ಸ್ಫೋಟ

ಅಮೆರಿಕ ಅಧ್ಯಕ್ಷ ಡೋನಾಲ್ಡ್ ಟ್ರಂಪ್ ಭಾರತದ ಮೇಲೆ ದುಬಾರಿ ತೆರಿಗೆ ವಿಧಿಸಿದ ಬೆನ್ನಲ್ಲೇ ಹೊಸ ಸಂಕಷ್ಟ ಎದುರಾಗಿದೆ. ಅಮೆರಿಕದಲ್ಲಿ ಕೋವಿಡ್ 19 ವೈರಸ್ ಸ್ಫೋಟಗೊಂಡಿದೆ. ಈ ಕುರಿತು ಯುಎಸ್ ಸಿಡಿಸಿ ಮಾಹಿತಿ ನೀಡಿದೆ.

Read Full Story
09:22 PM (IST) Aug 09

Karnataka News Live 9th August:ಕೇವಲ 11 ಸಾವಿರಕ್ಕೆ ಬುಕ್ ಮಾಡಿ ಹೊಸ ನಿಸ್ಸಾನ್ ಮ್ಯಾಗ್ನೈಟ್ ಕುರೊ ಸ್ಪೆಷಲ್ ಎಡಿಶನ್ ಕಾರು

ನಿಸ್ಸಾನ್ ಬ್ರ್ಯಾಂಡ್‌ನ ಅತೀ ಕಡಿಮೆ ಬೆಲೆಯ, ಗರಿಷ್ಠು ಸುರಕ್ಷತೆಯ ಬೇಡಿಕೆಯ ಕಾರು ಮ್ಯಾಗ್ನೈಟ್ ಇದೀಗ ಸ್ಪಷಲ್ ಎಡಿಶನ್ ರೂಪದಲ್ಲಿ ಬಿಡುಗಡೆಯಾಗಿದೆ. ಕುರೊ ಸ್ಪೆಷಲ್ ಎಡಿಶನ್ ಮ್ಯಾಗ್ನೈಟ್ ಕಾರು ಕೇವಲ 11,000 ರೂಗೆ ಬುಕಿಂಗ್ ಮಾಡಿಕೊಳ್ಳಬಹುದು.

Read Full Story
09:05 PM (IST) Aug 09

Karnataka News Live 9th August:ರಾತ್ರಿ ಊಟದ ನಂತರ ಹೊಟ್ಟೆಮೇಲೆ ಮಲಗ್ತೀರಾ? ಈ 6 ಅಪಾಯಗಳು ತಪ್ಪಿದ್ದಲ್ಲ, ಕೆಟ್ಟ ಅಭ್ಯಾಸ ಇಂದಿನಿಂದಲೇ ಬಿಟ್ಟುಬಿಡಿ!

ಹೊಟ್ಟೆಯ ಮೇಲೆ ಮಲಗುವುದರಿಂದ ಬೆನ್ನುನೋವು, ಉಸಿರಾಟದ ತೊಂದರೆ, ಜೀರ್ಣಕಾರಿ ಸಮಸ್ಯೆಗಳು, ಚರ್ಮದ ಸಮಸ್ಯೆಗಳು, ಗರ್ಭಿಣಿಯರಿಗೆ ಅಪಾಯ ಮತ್ತು ನರಗಳ ತೊಂದರೆಗಳು ಸೇರಿದಂತೆ ಹಲವಾರು ಆರೋಗ್ಯ ಸಮಸ್ಯೆಗಳು ಉಂಟಾಗಬಹುದು. ಬದಿಯಲ್ಲಿ ಅಥವಾ ಬೆನ್ನಿನ ಮೇಲೆ ಮಲಗುವುದು ಆರೋಗ್ಯಕರ ನಿದ್ರೆಗೆ ಸಹಾಯಕ.
Read Full Story
08:54 PM (IST) Aug 09

Karnataka News Live 9th August:ಇಂಗ್ಲೆಂಡ್ ಸರಣಿಯಲ್ಲಿ ಮಿಂಚಿದ ಅಕಾಶ್ ದೀಪ್ ಹೊಸ ಕಾರು ಖರೀದಿ, ಇದರ ಬೆಲೆ ಎಷ್ಟು?

ಇಂಗ್ಲೆಂಡ್ ಸರಣಿಯಲ್ಲಿ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿ ಮಿಂಚಿದ ಅಕಾಶ್ ದೀಪ್ ಇದೀಗ ಹೊಚ್ಚ ಹೊಸ ಕಾರು ಖರೀದಿಸಿದ್ದಾರೆ. ಈ ಸಂಭ್ರಮವನ್ನು ಹಂಚಿಕೊಂಡಿದ್ದಾರೆ. ಈ ಕಾರು ಯಾವುದು? ಇದರ ಬೆಲೆ ಎಷ್ಟು?

Read Full Story
07:48 PM (IST) Aug 09

Karnataka News Live 9th August:ದೆಹಲಿಯಲ್ಲಿ ನಡೆಯಲಿರುವ ಸ್ವಾತಂತ್ರ್ಯೋತ್ಸವಕ್ಕೆ ಸಿದ್ದಾಪುರದ ದಂಪತಿ!

ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲೂಕಿನ ದಂಪತಿಗೆ 78ನೇ ಸ್ವಾತಂತ್ರ್ಯೋತ್ಸವದಲ್ಲಿ ಭಾಗವಹಿಸಲು ದೆಹಲಿಗೆ ಆಹ್ವಾನ. ಸಂಜೀವಿನಿ ಯೋಜನೆಯಡಿ ಚಿತ್ತಾರ ಕಲೆ ಪ್ರದರ್ಶಿಸಿದ್ದಕ್ಕೆ ಈ ಗೌರವ. ರಾಷ್ಟ್ರಪತಿಗಳ ಭೇಟಿಗೆ ಅವಕಾಶ.
Read Full Story
07:46 PM (IST) Aug 09

Karnataka News Live 9th August:ಕಡಿಮೆ ಆದಾಯದಲ್ಲಿ ಕಾರು ಖರೀದಿ ಕನನಸು ನನಸಾಗಿಸುವುದು ಹೇಗೆ? ಇಲ್ಲಿದೆ ಸುಲಭ ಮಾರ್ಗ

ಕಾರು ಖರೀದಿಸಬೇಕು, ಕಾರಿನಲ್ಲಿ ಓಡಾಡಬೇಕು ಅನ್ನೋದು ಬಹುತೇಕರ ಆಸೆ. ಕಾಸಿಲ್ವಮ್ಮ, ಕಾರು ಹೇಗೆ ಖರೀದಿ ಎಂದು ಚಿಂತೆ ಮಾಡಬೇಕಿಲ್ಲ. ಈ 10 ಮಾರ್ಗದ ಮೂಲಕ ಹಣ ಉಳಿತಾಯ ಮಾಡಿ ಎಲ್ಲರೂ ಕಾರು ಖರೀದಿಸಲು ಸಾಧ್ಯವಿದೆ.

Read Full Story
06:54 PM (IST) Aug 09

Karnataka News Live 9th August:ಧರ್ಮಸ್ಥಳದ ರತ್ನಗಿರಿ ಬೆಟ್ಟದ ಎರಡೂ ಕಡೆ ಸಿಗಲಿಲ್ಲ ಅಸ್ಥಿಪಂಜರ, ಇಂದಿನ ಕಾರ್ಯಾಚರಣೆ ಅಂತ್ಯ

ಧರ್ಮಸ್ಥಳದ ರತ್ನಗಿರಿ ಬೆಟ್ಟದ ಕಾರ್ಯಾಚರಣೆ ಅಂತ್ಯಗೊಂಡಿದೆ. 16 ಹಾಗೂ 16ಎ ಸ್ಥಳದಲ್ಲಿ ಯಾವುದೇ ಕಳೇಬರ ಪತ್ತೆಯಾಗಿಲ್ಲ. ಇಂದಿನ ಕಾರ್ಯಚಾರಣೆ ಹೈಲೈಟ್ಸ್ ಏನು?

Read Full Story
06:40 PM (IST) Aug 09

Karnataka News Live 9th August:ಟ್ರೇಡಿಂಗ್ ಇನ್‌ಸ್ಟಾಗ್ರಾಮ್ ರೀಲ್ಸ್ ನೋಡಿ ₹63.30 ಲಕ್ಷ ಕಳೆದುಕೊಂಡ ಧಾರವಾಡ ವ್ಯಕ್ತಿ!

ಹೂಡಿಕೆ ಆಮಿಷವೊಡ್ಡಿ ₹63.30 ಲಕ್ಷ ವಂಚಿಸಿದ ಘಟನೆ ಹುಬ್ಬಳ್ಳಿಯಲ್ಲಿ ಬೆಳಕಿಗೆ ಬಂದಿದೆ. ಇನ್‌ಸ್ಟಾಗ್ರಾಮ್ ರೀಲ್ಸ್ ಮೂಲಕ ಬಲೆಗೆ ಬಿದ್ದ ವ್ಯಕ್ತಿಯಿಂದ ಹಂತ ಹಂತವಾಗಿ ಹಣ ಪಡೆದು ವಂಚಿಸಲಾಗಿದೆ. ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರೆದಿದೆ.
Read Full Story
06:25 PM (IST) Aug 09

Karnataka News Live 9th August:ಧರ್ಮಸ್ಥಳದಲ್ಲಿ ಕಳೇಬರ ಸಿಗದಿದ್ದರೆ ಭೀಮನ ಲೋಪವಲ್ಲ ಎಂದ ವಕೀಲ, 16ನೇ ಸ್ಥಳದ ಶೋಧ ಅಂತ್ಯ

ಧರ್ಮಸ್ಥಳ ರತ್ನಗಿರಿ ಬೆಟ್ಟದ 16ರ ಶೋಧ ಕಾರ್ಯ ಅಂತ್ಯಗೊಂಡಿದೆ. ಯಾವುದೇ ಕಳೇಬರ ಪತ್ತೆಯಾಗಿಲ್ಲ. ಆದರೆ ಸುಜಾತ್ ಭಟ್ ಪರ ವಕೀಲ ಹೊಸ ಆಕ್ಷೇಪ ತೆಗೆದಿದ್ದಾರೆ. ಸಾಕ್ಷಿ ಸಿಗಬಾರದು ಎಂದು ಒಳಸಂಚು ನಡೆದಿದೆ ಎಂದು ವಕೀಲ ಆರೋಪಿಸಿದ್ದಾರೆ. ವಕೀಲರ ಆರೋಪವೇನು?

Read Full Story
05:50 PM (IST) Aug 09

Karnataka News Live 9th August:ವೀಕೆಂಡ್ ಅಂತಾ ನಂದಿ ಬೆಟ್ಟಕ್ಕೆ ಹೋಗೋರು ಗಮನಿಸಿ, ನಾಳೆ ಪ್ರವಾಸಿಗರಿಗೆ ನಿರ್ಬಂಧ, ಇಲ್ಲಿದೆ ವಿವರ

ಆಗಸ್ಟ್ 10 ರಂದು ನಂದಿ ಬೆಟ್ಟದಲ್ಲಿ ‘ನಂದಿ ಹಿಲ್ಸ್ ಮಾನ್ಸೂನ್ ರನ್’ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಬೆಳಿಗ್ಗೆ 4 ರಿಂದ ಮಧ್ಯಾಹ್ನ 1 ರವರೆಗೆ ಖಾಸಗಿ ವಾಹನಗಳ ಸಂಚಾರ ಮತ್ತು ಪ್ರವಾಸಿಗರ ಪ್ರವೇಶವನ್ನು ನಿಷೇಧಿಸಲಾಗಿದೆ. 

Read Full Story
05:40 PM (IST) Aug 09

Karnataka News Live 9th August:ಆನ್‌ಲೈನ್ ವಂಚನೆ - ಡಿಜಿಟಲ್ ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

ಪ್ರತಿ ದಿನ ಆನ್‌ಲೈನ್ ವಂಚನೆಗಳಿಂದ ಹಣ ಮಾತ್ರವಲ್ಲ, ಮಾನಸಿಕ ಹಿಂಸೆ, ಕಿರುಕುಳ ಅನುಭವಿಸುತ್ತಿರುವ ಘಟನೆಗಳು ಹೆಚ್ಚಾಗುತ್ತಿದೆ. ಸೈಬರ್ ಅಪರಾಧಗಳ ಸಂಖ್ಯೆ ದುಪ್ಪಟ್ಟಾಗಿದೆ. ಈ ಆನ್‌ಲೈನ್ ವಂಚನೆ, ಡಿಜಿಟಲ್ ಮೋಸಗಳಿಂದ ನಿಮ್ಮನ್ನು ರಕ್ಷಿಸಿಕೊಳ್ಳುವುದು ಹೇಗೆ?

Read Full Story
05:40 PM (IST) Aug 09

Karnataka News Live 9th August:ವಿಷ್ಣು ಸ್ಮಾರಕ ತೆರವಿಗೆ ಅನಿರುದ್ಧ್ ಅಸಮಾಧಾನ, ವಿಷ್ಣುವರ್ಧನ್ ಹೆಸರಲ್ಲಿ ಫಿಲ್ಮ್ ಇನ್ಸ್ಟಿಟ್ಯೂಟ್

ವಿಷ್ಣುವರ್ಧನ್ ಸ್ಮಾರಕ ತೆರವು ವಿಚಾರವಾಗಿ ಅನಿರುದ್ಧ ಜಟ್ಕರ್ ಬೇಸರ ವ್ಯಕ್ತಪಡಿಸಿದ್ದಾರೆ. ಅಭಿಮಾನಿಗಳನ್ನು ಒಗ್ಗೂಡಿಸಿ ಹೋರಾಟಕ್ಕೆ ಕರೆ ನೀಡಿದ್ದಾರೆ. ಕುಟುಂಬದ ವಿರುದ್ಧ ಮಾತನಾಡುವವರನ್ನು ವಿರೋಧಿಸುವುದಾಗಿ ಹೇಳಿದ್ದಾರೆ.
Read Full Story
05:31 PM (IST) Aug 09

Karnataka News Live 9th August:ಬಾಲಕೃಷ್ಣ ಸಮಾಧಿ ಒಡೆದ್ರಂತೆ, ಈಗ ವಿಷ್ಣುವರ್ಧನ್‌ ಸಮಾಧಿ ನೆಲಸಮ, ಭೂಮಿ ವ್ಯವಹಾರ ದೊಡ್ಡದಾಯ್ತಾ? Kiccha Sudeep

Dr Vishnuvardhan Memorial: ಡಾ ವಿಷ್ಣುವರ್ಧನ್‌ ಸಮಾಧಿ ವಿಚಾರವಾಗಿ ನಟ ಕಿಚ್ಚ ಸುದೀಪ್‌ ಮಾತನಾಡಿದ್ದಾರೆ. ಈ ಘಟನೆಯನ್ನು ಖಂಡಿಸಿದ್ದಲ್ಲದೆ, ನಾನು ಕೋರ್ಟ್‌ಗೆ ಬರಲು ರೆಡಿಯಿದ್ದೇನೆ ಎಂದಿದ್ದಾರೆ. 

Read Full Story
05:29 PM (IST) Aug 09

Karnataka News Live 9th August:ವಿವಾಹ ವಾರ್ಷಿಕೋತ್ಸವಕ್ಕೆ ಹಾವಿನ ಖಾದ್ಯ ಸವಿದ ಸಸ್ಯಾಹಾರಿ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ?

ಸಸ್ಯಾಹಾರಿಗಳಾಗಿರುವ ಅನುಷ್ಕಾ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರು ತಮ್ಮ ವಿವಾಹ ವಾರ್ಷಿಕೋತ್ಸವದ ಸಂದರ್ಭದಲ್ಲಿ ಹಾವಿನ ಖಾದ್ಯ ಸವಿದಿದ್ದಾರೆ. ಅಸಲಿಗೆ ಏನಿದು?

Read Full Story
05:26 PM (IST) Aug 09

Karnataka News Live 9th August:Kumudvathi rejuvenation - ಆರ್ಟ್ ಆಫ್ ಲಿವಿಂಗ್ & ಟಾರಸ್ ಟಾರಸ್ ಪರಿಶ್ರಮದಿಂದ ಮಹಿಮಾಪುರ ಗುಡ್ಡೆ ಈಗ ಹಸಿರು ಕಾಡು!

ಆರ್ಟ್ ಆಫ್ ಲಿವಿಂಗ್ ಮತ್ತು ಟಾರಸ್ ಟಾರಸ್ ಪವರ್‌ಟ್ರಾನಿಕ್ಸ್ ಸಂಸ್ಥೆಗಳು ಕುಮುದ್ವತಿ ನದಿ ಪುನಶ್ಚೇತನಕ್ಕಾಗಿ 800 ಸಸಿಗಳನ್ನು ನೆಟ್ಟಿವೆ. ಈ ಯೋಜನೆಯು ನೀಲಗಿರಿ ಮರಗಳಿಂದ ಆವೃತವಾಗಿದ್ದ ಮಹಿಮಾಪುರ ಗುಡ್ಡವನ್ನು ಸ್ಥಳೀಯ ಕಾಡಾಗಿ ಪರಿವರ್ತಿಸಿದೆ.
Read Full Story
05:05 PM (IST) Aug 09

Karnataka News Live 9th August:ಮಾಡಬಾರದನ್ನ ಮಾಡಿ, ವೋಟರ್ ಲಿಸ್ಟ್ ಬದಲಾವಣೆ ಪ್ರಧಾನಿಯಾಗಿದ್ದಾರೆ, ಮೋದಿ ವಿರುದ್ಧ ರಾಜಣ್ಣ ಕಿಡಿ

ಹಾಸನ ಜಿಲ್ಲಾ ಉಸ್ತುವಾರಿ ಸಚಿವ ಸ್ಥಾನ ಬದಲಾವಣೆ ವಿಚಾರದಲ್ಲಿ ಮುಖ್ಯಮಂತ್ರಿಗಳದ್ದೇ ಅಂತಿಮ ತೀರ್ಮಾನ ಎಂದು ಸಹಕಾರ ಸಚಿವ ಕೆ.ಎನ್. ರಾಜಣ್ಣ ತಿಳಿಸಿದ್ದಾರೆ. 

Read Full Story
04:42 PM (IST) Aug 09

Karnataka News Live 9th August:ವಿಜಯ ರಾಘವೇಂದ್ರ ಪುತ್ರ ಸಿನಿಮಾಕ್ಕೆ ಎಂಟ್ರಿ ಕೊಡ್ತಿದ್ದಾನಾ? ನಟನಿಂದ ಬಂತು ಹೀಗೊಂದು ಪ್ರತಿಕ್ರಿಯೆ

ನಟ ವಿಜಯ ರಾಘವೇಂದ್ರ ಅವರ ಪುತ್ರ ಶೌರ್ಯ ಸ್ಯಾಂಡಲ್​ವುಡ್​​ಗೆ ಎಂಟ್ರಿ ಕೊಡ್ತಾ ಇದ್ದಾನಾ? ಈ ಕುರಿತು ನಟ ಹೇಳಿದ್ದೇನು?

Read Full Story