07:29 AM (IST) Feb 07

Karnataka News Live 7 February 2026ಬಿಹಾರದಲ್ಲಿ ತುಮಕೂರಿನ ಒಂದೇ ಕುಟುಂಬದ ನಾಲ್ವರ ಸಾವು

ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಒಂದೇ ಕುಟುಂಬದ ನಾಲ್ವರು ಶುಕ್ರವಾರ ಬಿಹಾರದ ನಾಲಂದಾ ಜಿಲ್ಲೆಯ ರಾಜಗೀರ್‌ನ ಧರ್ಮಶಾಲೆಯೊಂದರಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

Read Full Story
07:28 AM (IST) Feb 07

Karnataka News Live 7 February 2026Bengaluru ಬೀದಿ ಸ್ವಚ್ಛತೆಗೆ ಬಂತು ಯಾಂತ್ರಿಕ ಸ್ಪರ್ಶ; ₹10 ಲಕ್ಷ ವೆಚ್ಚದಲ್ಲಿ ವಿವಿಧ ವಸ್ತುಗಳ ಖರೀದಿ

ನಗರದ ಉತ್ತರ ನಗರ ಪಾಲಿಕೆ ವ್ಯಾಪ್ತಿಯಲ್ಲಿ ರಸ್ತೆ ಸ್ವಚ್ಛತೆಯನ್ನು ಉನ್ನತೀಕರಿಸಲು ಮತ್ತು ಪೌರಕಾರ್ಮಿಕರ ಕೆಲಸವನ್ನು ಸರಳಗೊಳಿಸಲು ಯಾಂತ್ರಿಕೃತ ಯಂತ್ರಗಳ ಪ್ರಾಯೋಗಿಕ ಬಳಕೆಗೆ ಚಾಲನೆ ನೀಡಲಾಗಿದೆ.

Read Full Story
07:19 AM (IST) Feb 07

Karnataka News Live 7 February 2026ಮೆಟ್ರೋ ದರ ಏರಿಸಿದ್ದು ನಾವಲ್ಲ, ಕೇಂದ್ರ - ಸಿಎಂ ಸಿದ್ದರಾಮಯ್ಯ

ಮೆಟ್ರೋ ಪ್ರಯಾಣ ದರ ಏರಿಕೆ ಮಾಡಿರುವುದು ಕೇಂದ್ರ ಸರ್ಕಾರ ಸ್ಥಾಪಿಸಿರುವ ದರ ನಿಗದಿ ಸಮಿತಿ. ಇದನ್ನು ಮರೆಮಾಚಿ ಜನರನ್ನು ತಪ್ಪು ದಾರಿಗೆ ಎಳೆಯುತ್ತಿರುವ ಬಿಜೆಪಿ ನಾಯಕರು ಇನ್ನಾದರೂ ಸ್ವಾರ್ಥ ರಾಜಕೀಯ ನಾಟಕ ನಿಲ್ಲಿಸಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

Read Full Story
07:07 AM (IST) Feb 07

Karnataka News Live 7 February 2026Bengaluru - ಬಯಸಿದಂತೆ ಬಯಲು - ಬೆಂಗಳೂರಿನ ಬರೋಬ್ಬರಿ 194 ಸ್ಥಳಗಳ ಅಭಿವೃದ್ಧಿಗೆ ಮುಂದಾದ GBA

ಜಿಬಿಎ 'ಬಯಸಿದಂತೆ ಬಯಲು' ಉಪಕ್ರಮದ ಅಡಿಯಲ್ಲಿ ಬೆಂಗಳೂರಿನಲ್ಲಿ ಬಳಕೆಯಾಗದ 194 ಸಾರ್ವಜನಿಕ ಸ್ಥಳಗಳನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ನಾಗರಿಕರು, ಸಂಘಸಂಸ್ಥೆಗಳು ಹಾಗೂ ಸರ್ಕಾರದ ಸಹಯೋಗದೊಂದಿಗೆ ಈ ಸ್ಥಳಗಳನ್ನು ಆಕರ್ಷಕ ತಾಣಗಳಾಗಿ ಪರಿವರ್ತಿಸಿ, ನಗರದ ಸೌಂದರ್ಯವನ್ನು ಹೆಚ್ಚಿಸುವ ಗುರಿ ಹೊಂದಲಾಗಿದೆ.
Read Full Story
07:04 AM (IST) Feb 07

Karnataka News Live 7 February 2026Bengaluru Karaga fund misuse ಮಾಜಿ ಅಧ್ಯಕ್ಷನಿಂದಲೇ ಕರಗದ ಹಣ ದುರ್ಬಳಕೆ?!

ಬೆಂಗಳೂರು ಕರಗ ಮಹೋತ್ಸವಕ್ಕಾಗಿ ಸರ್ಕಾರದಿಂದ ನೀಡಿದ ಅನುದಾನವನ್ನು ಧರ್ಮರಾಯಸ್ವಾಮಿ ದೇವಸ್ಥಾನದ ವ್ಯವಸ್ಥಾಪಕ ಸಮಿತಿಯ ಮಾಜಿ ಅಧ್ಯಕ್ಷರು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಜಿಲ್ಲಾಧಿಕಾರಿಗಳ ಸಮಿತಿಯು ಸಲ್ಲಿಸಿದ ವರದಿಯಲ್ಲಿ, ನಿಯಮಗಳನ್ನು ಉಲ್ಲಂಘಿಸಿ ಹಣಕಾಸು ವಹಿವಾಟು ಬಯಲು.

Read Full Story
07:01 AM (IST) Feb 07

Karnataka News Live 7 February 2026ರೈಲ್ವೆಯಿಂದ ಮತ್ತೆ ಕನ್ನಡಕ್ಕೆ ಅನ್ಯಾಯ

ರೈಲ್ವೆ ಇಲಾಖೆಯ ಪರೀಕ್ಷೆಗಳನ್ನು ಕನ್ನಡದಲ್ಲೂ ಬರೆಯಲು ಅವಕಾಶ ಕೊಡಬೇಕೆಂಬ ನೀತಿ ಇದ್ದರೂ, ಸ್ಟೇಷನ್‌ ಮಾಸ್ಟರ್‌ ಹುದ್ದೆಗಳ ಮುಂಬಡ್ತಿ ಪರೀಕ್ಷೆಯಿಂದ ಕನ್ನಡವನ್ನು ಕೈಬಿಟ್ಟು ಕನ್ನಡಿಗರ ಆಕ್ರೋಶಕ್ಕೆ ಗುರಿಯಾಗಿರುವ ರೈಲ್ವೆ ಇಲಾಖೆ ಮತ್ತೆ ತನ್ನ ಚಾಳಿಯನ್ನು ಮುಂದುವರಿಸಿದೆ.

Read Full Story
06:55 AM (IST) Feb 07

Karnataka News Live 7 February 2026ಶಬರಿಮಲೆ ಚಿನ್ನಕನ್ನ - ಕಾಂತಾರ ನಟಗೆ ಇ.ಡಿ. ಸಮನ್ಸ್‌

ಶಬರಿಮಲೆ ದ್ವಾರಪಾಲಕ ಮೂರ್ತಿ ಮತ್ತು ಗರ್ಭಗುಡಿ ದ್ವಾರದ ಚಿನ್ನ ಕಣ್ಮರೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂತಾರ ಚಿತ್ರದ ಖ್ಯಾತಿಯ ಜಯರಾಂ ಅವರಿಗೆ ಜಾರಿ ನಿರ್ದೇಶನಾಲಯ (ಇ.ಡಿ) ನೋಟಿಸ್‌ ನೀಡಿದೆ.

Read Full Story