ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ, ಕಿಚಕ್ ಹಾಗೂ ಡೈನಿಂಗ್ ಹಾಲ್ ಬಳಿ ಈ ಘಟನೆ ನಡೆದಿದೆ. 50ಕ್ಕೂ ಹೆಚ್ಚು ಮಂದಿ ಇರುವ ಪಿಜಿಯಲ್ಲಿ ಈ ಘಟನೆ ಸಂಭವಿಸಿದ್ದು, ಮತ್ತೆ ಸುರಕ್ಷತಾ ಪ್ರಶ್ನೆ ಎದ್ದಿದೆ.
- Home
- News
- State
- Karnataka News Live: ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ
Karnataka News Live: ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ

ಮಂಡ್ಯ: 2028ಕ್ಕೆ ರಾಜ್ಯದಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವ ಮೂಲಕ ಕ್ರಾಂತಿ ಎಬ್ಬಿಸುತ್ತದೆ. ಅಲ್ಲಿಯವರೆಗೂ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಹೇಳಿದರು. ನವೆಂಬರ್ ಕ್ರಾಂತಿ ಆಗಲಿಲ್ಲ. ಸಂಕ್ರಾಂತಿ ಕ್ರಾಂತಿಯೂ ಇಲ್ಲ, ಯುಗಾದಿಗೂ ಕ್ರಾಂತಿ ಇಲ್ಲ. 2028ಕ್ಕೆ ನಾವೇ ಅಧಿಕಾರಕ್ಕೆ ಬಂದು ಕ್ರಾಂತಿ ಮಾಡುತ್ತೇವೆ. ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ಎಐಸಿಸಿ ವರಿಷ್ಠ ರಾಹುಲ್ ಗಾಂಧಿ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಒಟ್ಟಾಗಿ ಕುಳಿತು ತೀರ್ಮಾನ ಮಾಡುತ್ತಾರೆ. ಯಾರ ಬಳಿಯೂ ಅನಿಸಿಕೆಗಳನ್ನು ಕೇಳುವುದಿಲ್ಲ. ಪಕ್ಷದ ನಿರ್ಧಾರಕ್ಕೆ ನಾವು ಸಂಪೂರ್ಣ ಬದ್ಧರಾಗಿರುತ್ತೇವೆ ಎಂದು ಅವರು ಪುನರುಚ್ಚರಿಸಿದರು.
Karnataka News Live 29 December 2025 ಬೆಂಗಳೂರಿನ ಪಿಜಿ ಕಟ್ಟದಲ್ಲಿ ಸಿಲಿಂಡರ್ ಸ್ಫೋಟ, ಎಂಜಿನೀಯರ್ ಸಾವು, ಮೂವರಿಗೆ ಗಾಯ
Karnataka News Live 29 December 2025 ನಟಿ ದುರಂತ ಅಂತ್ಯ ಪ್ರಕರಣ, ಡೆತ್ ನೋಟ್ನಲ್ಲಿ ಮದುವೆ ಸೇರಿ ಮಹತ್ವದ ವಿಚಾರ ಪ್ರಸ್ತಾಪ
ನಟಿ ದುರಂತ ಅಂತ್ಯ ಪ್ರಕರಣ, ಡೆತ್ ನೋಟ್ನಲ್ಲಿ ಮದುವೆ ಸೇರಿ ಮಹತ್ವದ ವಿಚಾರ ಪ್ರಸ್ತಾಪ ಮಾಡಲಾಗಿದೆ. ಪೊಲೀಸರು ಕೈಸೇರಿರುವ ಡೆತ್ ನೋಟ್ ನಂದಿನ ಸಾವಿನ ಹಿಂದಿನ ಕಾರಣಗಳನ್ನು ಹೇಳುತ್ತಿದೆ. ನಟನೆ, ಬ್ಯೂಟಿ ಮೂಲಕ ಗಮನಸೆಳೆದ ನಟಿ ಸಾವಿನ ಹಿಂದಿನ ರಹಸ್ಯ.
Karnataka News Live 29 December 2025 ದಕ್ಷಿಣ ಭಾರತದ ಉದಯೋನ್ಮುಖ ನಟಿ ಕೊಟ್ಟೂರಿನ ನಂದಿನಿ ಆತ್ಮ*ಹತ್ಯೆ; ಸರ್ಕಾರಿ ನೌಕರಿ ಬೇಡವೆಂದು ಸಾವಿನ ನಿರ್ಧಾರ?
ಕನ್ನಡ ಹಾಗೂ ತಮಿಳು ಕಿರುತೆರೆ ನಟಿ ನಂದಿನಿ, ಬೆಂಗಳೂರಿನ ಪಿಜಿಯೊಂದರಲ್ಲಿ ನೇಣು ಬಿಗಿದುಕೊಂಡು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕೌಟುಂಬಿಕ ಒತ್ತಡ ಮತ್ತು ವೃತ್ತಿಜೀವನದ ಸಮಸ್ಯೆಗಳಿಂದ ನೊಂದು ಈ ನಿರ್ಧಾರ ಕೈಗೊಂಡಿದ್ದಾರೆ ಎಂದು ಶಂಕಿಸಲಾಗಿದೆ. ಪೊಲೀಸರು ಡೆತ್ನೋಟ್ ಆಧರಿಸಿ ತನಿಖೆ ನಡೆಸುತ್ತಿದ್ದಾರೆ.
Karnataka News Live 29 December 2025 ನ್ಯಾಯವೂ ಹೊರಗುತ್ತಿಗೆ? - ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!
ನ್ಯಾಯವೂ ಹೊರಗುತ್ತಿಗೆ? ಬೆಂಗಳೂರಿನ ಕಾನೂನು ಕೆಲಸ ಮಾಡಿದ ಮಹಾರಾಷ್ಟ್ರ ಪೊಲೀಸರು!ಮಹಾರಾಷ್ಟ್ರ ಪೊಲೀಸರ ಕಾರ್ಯಾಚರಣೆ ಬೆಂಗಳೂರಿನ ಪೊಲೀಸ್ ಪ್ರಕ್ರಿಯೆಯಲ್ಲಿನ ಹುಳುಕುಗಳನ್ನು ಪ್ರದರ್ಶಿಸಿದೆ. ಸಾರ್ವಜನಿಕರ ವಿಶ್ವಾಸವನ್ನು ಕುಂದಿಸಿ, ಯುವಕರನ್ನು ಅಪಾಯದ ಅಂಚಿಗೆ ತಳ್ಳಿದೆ.
Karnataka News Live 29 December 2025 ಕೋಗಿಲು ಅಕ್ರಮ ನಿವಾಸಿಗಳಿಗೆ ಸಿಹಿ ಸುದ್ದಿ ನೀಡಿದ ಸಿಎಂ ಸಿದ್ದರಾಮಯ್ಯ - ನೈಜ ಫಲಾನುಭವಿಗಳಿಗೆ ಪರ್ಯಾಯ ವ್ಯವಸ್ಥೆ!
ಯಲಹಂಕದ ಕೋಗಿಲು ಬಡಾವಣೆಯಲ್ಲಿ ಸರ್ಕಾರಿ ಜಾಗದಲ್ಲಿದ್ದ 167 ಅಕ್ರಮ ಶೆಡ್ಗಳನ್ನು ತೆರವುಗೊಳಿಸಲಾಗಿದೆ. ಈ ಕಾರ್ಯಾಚರಣೆಯಿಂದ ನಿರಾಶ್ರಿತರಾದ ನೈಜ ಸಂತ್ರಸ್ತರಿಗೆ ಪರ್ಯಾಯ ವಸತಿ ಕಲ್ಪಿಸುವುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
Karnataka News Live 29 December 2025 ಹೊಸ ವರ್ಷಕ್ಕೆ ನಮ್ಮ ಮೆಟ್ರೋ ಸೇವೆ ರಾತ್ರಿ 2ರವರೆಗೆ ವಿಸ್ತರಣೆ; ಆದ್ರೆ ಎಂ.ಜಿ. ರೋಡ್ ನಿಲ್ದಾಣ 10ಕ್ಕೆ ಕ್ಲೋಸ್!
Karnataka News Live 29 December 2025 ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್- ನಾದಿಯಾ, ಕತೆ ಸುಳಿವು ನೀಡಿದ ರಾಕಿಂಗ್ ಸ್ಟಾರ್ ಯಶ್
ಟಾಕ್ಸಿಕ್ ಸಿನಿಮಾದಲ್ಲಿ ಎಲಿಜಬೆತ್- ನಾದಿಯಾ, ಬುಹು ನಿರೀಕ್ಷಿತ ಟಾಕ್ಸಿಕ್ ಸಿನಿಮಾದ ಎರಡು ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ಇದೇ ವೇಳೆ ಸಿನಿಮಾ ಕತೆಯ ಸಣ್ಣ ಸುಳಿವನ್ನು ನೀಡಿದ್ದಾರೆ. ಟಾಕ್ಸಿಕ್ ಸಿನಿಮಾ ಕುರಿತು ಯಶ್ ನೀಡಿದ ಅಪ್ಡೇಟ್ ಏನು?
Karnataka News Live 29 December 2025 ಸೀರಿಯಲ್ನಲ್ಲಿ ಸಾಯುವ ದೃಶ್ಯ ಮಾಡಿ, ರಿಯಲ್ ಆಗಿ ಆತ್ಮ*ಹತ್ಯೆ ಮಾಡ್ಕೊಂಡ ಕನ್ನಡ ನಟಿ ನಂದಿನಿ
kannada actress nandini cm death: ಸೀರಿಯಲ್ನಲ್ಲಿ ಸಾಯುವ ದೃಶ್ಯವಿತ್ತು, ರಿಯಲ್ ಆಗಿಯೂ ಕನ್ನಡ ನಟಿ ನಂದಿನಿ ಅವರು ಆತ್ಮ*ಹತ್ಯೆ ಮಾಡಿಕೊಂಡಿದ್ದಾರೆ. ಕೊಟ್ಟೂರು ಮೂಲದ ನಟಿ ನಂದಿನಿ ಅವರು ಅಸು ನೀಗಿದ್ದಾರೆ.
Karnataka News Live 29 December 2025 'ನಮ್ಮಮ್ಮ ರೆಡಿಯಾಗವ್ರೇನೋ..' ಮೇಕಪ್ ಟೈಮ್ನಲ್ಲೂ ನೆನೆದಿದ್ದ ಸೂರಜ್, ಅದ್ದೂರಿತನಕ್ಕೆ ಸಾಕ್ಷಿಯಾಗಿತ್ತು ಗಾನವಿ ಮದುವೆ!
Suraj-Ganavi Case: Viral Wedding Video Shows Suraj Recalling His Mother During Makeup ನವವಿವಾಹಿತರಾದ ಗಾನವಿ ಮತ್ತು ಸೂರಜ್ ಆ*ತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಸೂರಜ್ ಅವರ ಮದುವೆಯ ಮೇಕಪ್ ವಿಡಿಯೋವೊಂದು ವೈರಲ್ ಆಗಿದೆ.
Karnataka News Live 29 December 2025 ದೊಡ್ಡವರ ಫ್ರೂಟಿ, ಹೊಸವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ರಮ್ ಪ್ಯಾಕಿಂಗ್ಗೆ ಮನಸೋತ ಮದ್ಯಪ್ರಿಯರು
ದೊಡ್ಡವರ ಫ್ರೂಟಿ, ಫ್ರೂಟಿ ಜ್ಯೂಸ್ ಬಗ್ಗೆ ಎಲ್ಲರಿಗೂ ಗೊತ್ತೆ ಇದೆ. ಆದರೆ ದೊಡ್ಡವರ ಫ್ರೂಟಿ ಜ್ಯೂಸ್ ನೋಡಿದ್ದೀರಾ? ಹೊಸವರ್ಷ ಸಂಭ್ರಮಾಚರಣೆ ಬೆನ್ನಲ್ಲೇ ಇದೀಗ ದೊಡ್ಡವ ಫ್ರೂಟಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ವೈರಲ್ ಆಗುತ್ತಿದೆ.
Karnataka News Live 29 December 2025 Bigg Boss ಗೆಲ್ಲಲು ಯಾರೂ ಅರ್ಹರೇ ಅಲ್ಲ - ಶಾಕಿಂಗ್ ಸ್ಟೇಟ್ಮೆಂಟ್ ಕೊಟ್ಟ ಮಾಳು ಹೇಳಿದ್ದೇನು?
Karnataka News Live 29 December 2025 ಪ್ಲೀಸ್, ದೆವ್ವಕ್ಕೆ ಬೇರೆ ಸೀರೆ ಕೊಡಿಸ್ರಪ್ಪಾ? ಹರಿದ ಸೀರೆ ತೋರಿಸಿ ನೋವು ತೋಡಿಕೊಂಡ Naa Ninna Bidalaare ಅಂಬಿಕಾ
'ನಾ ನಿನ್ನ ಬಿಡಲಾರೆ' ಧಾರಾವಾಹಿಯಲ್ಲಿ ದೆವ್ವದ ಪಾತ್ರಧಾರಿ ನೀತಾ ಅಶೋಕ್, ತಮ್ಮ ಪಾತ್ರದ ಹರಿದ ಸೀರೆಯ ಫೋಟೋ ಹಂಚಿಕೊಂಡು ತಮಾಷೆ ಮಾಡಿದ್ದಾರೆ. 'ವಿಕ್ರಾಂತ್ ರೋಣ' ಚಿತ್ರದ ಪನ್ನಾ ಪಾತ್ರದ ಮೂಲಕವೂ ಖ್ಯಾತಿ ಗಳಿಸಿದ್ದಾರೆ ನೀತಾ
Karnataka News Live 29 December 2025 ರೇಖಾ ಜೊತೆ 'ನವಾಬ್ ಸುಲ್ತಾನ್' ಮಲಗಿದ್ದ ದೃಶ್ಯ ನೋಡಲು ಇಡೀ ಊರು ಸೇರಿಬಿಟ್ಟಿತ್ತು..! ಫೈನಲೀ ಹಾಗಾಯ್ತು...
ಏನೇ ಪ್ರಯತ್ನಿಸಿದರೂ ಜನಸಂದಣಿ ನಿಯಂತ್ರಣಕ್ಕೆ ಬರದಿದ್ದಾಗ, ಭದ್ರತಾ ದೃಷ್ಟಿಯಿಂದ ಗುಂಡು ಹಾರಿಸಬೇಕಾಯ್ತು. ಕೆಲವು ಜನರು ಬಂದೂಕುಗಳೊಂದಿಗೆ ಕಾಣಿಸಿಕೊಂಡಿದ್ದರಿಂದ, ವಾತಾವರಣ ತಿಳಿಯಾಗುವ ಬದಲು ಇನ್ನಷ್ಟು ಭಯಾನಕವಾಯಿತು. ಜನರು ಭಯಭೀತರಾಗಿ ಹೋಗುವ ಬದಲು ಅಲ್ಲೇ ಕಲ್ಲಿನಂತೆ ನಿಂತೇಬಿಟ್ಟರು. ಮುಂದೇನಾಯ್ತು?
Karnataka News Live 29 December 2025 ಬೆಂಗಳೂರು - ಮಗಳನ್ನ ಮದುವೆ ಮಾಡಿಕೊಡದ ತಾಯಿಗೆ ಬೆಂಕಿ ಹಚ್ಚಿದ್ದ ಕಿರಾತಕ ತಮಿಳುನಾಡಿನಲ್ಲಿ ಅರೆಸ್ಟ್!
Karnataka News Live 29 December 2025 ಹೊಸ ವರ್ಷದ ಸಂಭ್ರಮಕ್ಕೆ ಬ್ರೇಕ್; ಚಿಕ್ಕಮಗಳೂರಿನ 22 ಪ್ರವಾಸಿ ತಾಣಗಳಿಗೆ ಪ್ರವೇಶ ನಿಷೇಧಿಸಿದ ಜಿಲ್ಲಾಡಳಿತ!
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ, ಚಿಕ್ಕಮಗಳೂರು ಜಿಲ್ಲಾಡಳಿತವು ಮುಳ್ಳಯ್ಯನಗಿರಿ, ಕೆಮ್ಮಣ್ಣುಗುಂಡಿ ಸೇರಿದಂತೆ 22 ಪ್ರಮುಖ ಪ್ರವಾಸಿ ತಾಣಗಳಿಗೆ ಪ್ರವೇಶನಿರ್ಬಂಧಿಸಿದೆ. ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಡಿಸೆಂಬರ್ 31ರ ಸಂಜೆಯಿಂದ ಜನವರಿ 1ರ ಬೆಳಗ್ಗೆಯವರೆಗೆ ಆದೇಶ ಜಾರಿಯಲ್ಲಿರುತ್ತದೆ.
Karnataka News Live 29 December 2025 Bigg Boss ಕಾವ್ಯಾಗೆ ಧರ್ಮ ಸಂಕಟ- ಆ ಮಾತು ಕೇಳಿದ್ರೆ ಹೊರ ಬರೋದು ಗ್ಯಾರೆಂಟಿ! ಸೂರಜ್ ಸಿಂಗ್ ಹೇಳಿದ್ದೇನು?
ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆದ ಸೂರಜ್ ಸಿಂಗ್, ಕಾವ್ಯಾ ಶೈವ ಅವರ ಆಟದ ಬಗ್ಗೆ ಮಾತನಾಡಿದ್ದಾರೆ. ತಮ್ಮ ಆಟವನ್ನು ಬದಲಿಸಿಕೊಂಡರೆ, ಅದು ಅವರ ಬಿಗ್ಬಾಸ್ ಪಯಣಕ್ಕೆ ಕಷ್ಟವಾಗಲಿದೆ ಎಂದು ಸೂರಜ್ ಎಚ್ಚರಿಸಿದ್ದಾರೆ. ಏನದು?
Karnataka News Live 29 December 2025 Bigg Boss ವಿನ್ ಆಗೋರು ಇವರೇ, ಆದ್ರೆ ಆಗಬೇಕಾಗಿದ್ದು ಅವರು- ಸೂರಜ್ ಸಿಂಗ್ ಹೇಳಿದ ಆ ಹೆಸರು ಯಾವುದು?
ಬಿಗ್ಬಾಸ್ ಮನೆಯಿಂದ ಎಲಿಮಿನೇಟ್ ಆಗಿರುವ ಸೂರಜ್ ಸಿಂಗ್, ತಮ್ಮ ಪಯಣದ ಅನುಭವ ಹಂಚಿಕೊಂಡಿದ್ದಾರೆ. ಈ ಬಾರಿ ವಿನ್ನರ್ ಆಗುವುದು ಅವರೇ ಖಚಿತ ಎಂದಿರುವ ಅವರು, ಆದರೆ ತಮ್ಮ ಪ್ರಕಾರ ಬೇರೆಯವರ ಹೆಸರನ್ನು ತೆಗೆದುಕೊಂಡಿದ್ದಾರೆ. ಅವರು ಹೇಳಿದ್ದು ಯಾರ ಹೆಸರನ್ನು?
Karnataka News Live 29 December 2025 BBK 12 - ನಾಮಿನೇಷನ್ನಲ್ಲಿ ಕಾವ್ಯಾ ಹಿಂದೆ ಹೋಗಿ ತನ್ನ ಗುಂಡಿ ತಾನೇ ತೋಡಿಕೊಂಡ್ರಾ ಗಿಲ್ಲಿ ನಟ?
ಈ ವಾರದ ಕ್ಯಾಪ್ಟನ್ ಗಿಲ್ಲಿ ನಟ, ನಾಮಿನೇಷನ್ ಪ್ರಕ್ರಿಯೆಯಲ್ಲಿ ಪಕ್ಷಪಾತ ಮಾಡಿದ್ದಾರೆ ಎಂಬ ಆರೋಪ ಎದುರಿಸುತ್ತಿದ್ದಾರೆ. ಅವರ ನಿರ್ಧಾರಕ್ಕೆ ಅಶ್ವಿನಿ ಗೌಡ ವ್ಯಂಗ್ಯವಾಗಿ ಚಪ್ಪಾಳೆ ತಟ್ಟಿದ್ದು, ಗಿಲ್ಲಿ ನಟ ತಮ್ಮ ನಿರ್ಧಾರವನ್ನು ಸಮರ್ಥಿಸಿಕೊಂಡಿದ್ದಾರೆ.
Karnataka News Live 29 December 2025 ಕೆನರಾ ಬ್ಯಾಂಕ್ ಗ್ರಾಹಕರಿಗೆ ₹3 ಕೋಟಿ ಪಂಗನಾಮ; ಗ್ರಾಹಕರ ಹೆಸರಲ್ಲಿ ಸಾಲ ಪಡೆದು ಮ್ಯಾನೇಜರ್ ಎಸ್ಕೇಪ್!
ಬೆಂಗಳೂರಿನ ಮಲ್ಲೇಶ್ವರದ ಕೆನರಾ ಬ್ಯಾಂಕ್ನ ಸೀನಿಯರ್ ಮ್ಯಾನೇಜರ್, 21 ಗ್ರಾಹಕರಿಗೆ ನಂಬಿಕೆ ದ್ರೋಹ ಬಗೆದು ಅವರ ಹೆಸರಿನಲ್ಲಿ 3 ಕೋಟಿ ರೂ.ಗೂ ಅಧಿಕ ಸಾಲ ಪಡೆದು ವಂಚಿಸಿದ್ದಾನೆ. ಗ್ರಾಹಕರ ಸಹಿಗಳನ್ನು ದುರುಪಯೋಗಪಡಿಸಿಕೊಂಡು, ಯಾವುದೇ ಚಿನ್ನ ಅಡವಿಡದೆ ಹಣ ಪಡೆದು ಆರೋಪಿ ಪರಾರಿಯಾಗಿದ್ದಾರೆ.