08:31 AM (IST) Apr 20

Karnataka News Live 20 April 2026Bengaluru ಕೆಂಪೇಗೌಡ ಟೌನ್‌ ಪ್ಲಾನಿಂಗ್‌ ನಿರ್ಮಾಣಕ್ಕೆ 50 ಕೋಟಿ - ರಾಜ್ಯ ಸರ್ಕಾರ ಸೂಚನೆ

ರಾಜ್ಯ ಸರ್ಕಾರ ಬೆಂಗಳೂರಿನ ಐದು ನಗರ ಪಾಲಿಕೆಗಳ 2026-27ನೇ ಸಾಲಿನ ಬಜೆಟ್‌ಗೆ ಕೆಲವು ಮಾರ್ಪಾಡುಗಳೊಂದಿಗೆ ಅನುಮೋದನೆ ನೀಡಿದೆ. ಈ ಆದೇಶದ ಅನ್ವಯ ಕೆಂಪೇಗೌಡ ಇನ್ಸ್‌ಟಿಟ್ಯೂಟ್ ಆಫ್ ಟೌನ್ ಪ್ಲಾನಿಂಗ್‌ ನಿರ್ಮಾಣಕ್ಕೆ 50 ಕೋಟಿ ರೂ. ಸೇರಿದಂತೆ ವಿವಿಧ ಕೆಂಪೇಗೌಡ ಯೋಜನೆಗಳಿಗೆ ಅನುದಾನ ಮೀಸಲಿಡಲು ಸೂಚಿಸಲಾಗಿದೆ.

Read Full Story
08:13 AM (IST) Apr 20

Karnataka News Live 20 April 2026ಒಟಿ, ಒರಿಜಿನಲ್‌ ಚಾಯ್ಸ್‌, ಹಯ್ವಾರ್ಡ್ಸ್, ರಾಜಾ ವಿಸ್ಕಿ ಬೆಲೆಯಲ್ಲಿ ಭಾರೀ ಏರಿಕೆ ಮಾಡಿದ ರಾಜ್ಯ ಸರ್ಕಾರ

ರಾಜ್ಯ ಸರ್ಕಾರವು ಹೊಸ ತೆರಿಗೆ ವ್ಯವಸ್ಥೆಯನ್ನು ಜಾರಿಗೊಳಿಸುತ್ತಿದ್ದು, ಇದರಿಂದ ಮದ್ಯದ ದರಗಳು ಗಣನೀಯವಾಗಿ ಏರಿಕೆಯಾಗಲಿವೆ. ವಿಶೇಷವಾಗಿ, ಜನಸಾಮಾನ್ಯರು ಹೆಚ್ಚಾಗಿ ಸೇವಿಸುವ 'ಎಕಾನಮಿ' ಬ್ರ್ಯಾಂಡ್‌ಗಳ ಬೆಲೆಗಳು ಹೆಚ್ಚಾಗಲಿದೆ.

Read Full Story
08:13 AM (IST) Apr 20

Karnataka News Live 20 April 2026Hubballi KMCRI - ರಾಜ್ಯದ ಮೊದಲ ಜೀವಾಮೃತ ಬ್ಯಾಂಕ್‌ಗೆ 7147 ಮಾತೆಯರ ಎದೆಹಾಲು ದಾನ!

ಹುಬ್ಬಳ್ಳಿಯ KMCRI ಆಸ್ಪತ್ರೆಯಲ್ಲಿರುವ ರಾಜ್ಯದ ಮೊದಲ "ಜೀವಾಮೃತ ಬ್ಯಾಂಕ್‌" ಎರಡು ವರ್ಷಗಳಲ್ಲಿ 7147 ತಾಯಂದಿರಿಂದ 1,530 ಲೀಟರ್ ಎದೆಹಾಲು ಸಂಗ್ರಹಿಸಿದೆ. ಈ ಮಹತ್ವದ ಕಾರ್ಯದಿಂದಾಗಿ, ತಾಯಿಯ ಹಾಲಿನ ಕೊರತೆಯಿದ್ದ 2,599 ಶಿಶುಗಳಿಗೆ ಪೌಷ್ಟಿಕಾಂಶ ನೀಡಿ ಅವುಗಳ ಆರೋಗ್ಯ ರಕ್ಷಣೆಯಲ್ಲಿ ಯಶಸ್ವಿಯಾಗಿದೆ.

Read Full Story
07:57 AM (IST) Apr 20

Karnataka News Live 20 April 2026ಪತಿಯ ಲಾಕರ್‌ನಿಂದ 23 ಲಕ್ಷ ಮೌಲ್ಯದ ಚಿನ್ನ ಕದ್ದ ಪತ್ನಿ! ಕಾಪುವಿನಲ್ಲೊಂದು ವಿಚಿತ್ರ ಕಳ್ಳತನ

ಉಡುಪಿಯ ಉಚ್ಚಿಲದಲ್ಲಿ, ಪತಿಯೊಬ್ಬರು ತಮ್ಮ ಪತ್ನಿಯೇ ಬ್ಯಾಂಕ್ ಲಾಕರ್ ಕೀ ಕದ್ದು ಲಕ್ಷಾಂತರ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ ಎಂದು ಆರೋಪಿಸಿದ್ದಾರೆ. ಪತ್ನಿ ನಕಲಿ ಕೀ ತಯಾರಿಸಿ ಈ ಕೃತ್ಯ ಎಸಗಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.

Read Full Story
07:34 AM (IST) Apr 20

Karnataka News Live 20 April 2026ಬೆಂಗಳೂರು ಕಸಕ್ಕೆ ಹೊಸ ಸೂತ್ರ - ಇನ್ಮುಂದೆ 4 ವಿಧದ ವಿಂಗಡಣೆ ಕಡ್ಡಾಯ; BSWLML ಸೂಚನೆ

ಬೆಂಗಳೂರು ಘನ ತ್ಯಾಜ್ಯ ನಿರ್ವಹಣಾ ಸಂಸ್ಥೆಯು (ಬಿಎಸ್‌ಡಬ್ಲ್ಯುಎಂಎಲ್‌) ನಗರದಲ್ಲಿ ತ್ಯಾಜ್ಯವನ್ನು ನಾಲ್ಕು ವಿಧಗಳಾಗಿ ವಿಂಗಡಿಸುವುದನ್ನು ಕಡ್ಡಾಯಗೊಳಿಸಿದೆ. ತ್ಯಾಜ್ಯ ನಿರ್ವಹಣಾ ವ್ಯವಸ್ಥೆಯಲ್ಲಿ ಪಾರದರ್ಶಕತೆ ಕಾಯ್ದುಕೊಳ್ಳಲು ಹಾಗೂ ಮೇಲ್ವಿಚಾರಣೆ ಚುರುಕುಗೊಳಿಸಲು ಹೊಸ ಕೇಂದ್ರೀಕೃತ ಆನ್‌ಲೈನ್ ಪೋರ್ಟಲ್ ಅನ್ನು ಶೀಘ್ರದಲ್ಲೇ ಪ್ರಾರಂಭಿಸಲಾಗುವುದು.

Read Full Story
07:32 AM (IST) Apr 20

Karnataka News Live 20 April 2026ಎಲ್ಲದಕ್ಕೂ ಉತ್ತರಿಸಲಿದೆ ಕಾಲ - ಡಿಕೆಶಿ ಮತ್ತೆ ಮಾರ್ಮಿಕ ಮಾತು

ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಲಕ್ಷ್ಮೇಶ್ವರದ ಮುಕ್ತಿಮಂದಿರಕ್ಕೆ ಭೇಟಿ ನೀಡಿ, ಮುಖ್ಯಮಂತ್ರಿ ಹುದ್ದೆಯ ಕುರಿತ ಪ್ರಶ್ನೆಗೆ 'ಕಾಲವೇ ಎಲ್ಲಕ್ಕೂ ಉತ್ತರ ಕೊಡಲಿದೆ' ಎಂದು ಮಾರ್ಮಿಕವಾಗಿ ಪ್ರತಿಕ್ರಿಯಿಸಿದ್ದಾರೆ. 

Read Full Story
07:21 AM (IST) Apr 20

Karnataka News Live 20 April 2026ದೇವರು ನಮ್ಮ ಪ್ರತಿ ನಡವಳಿಕೆ ಗಮನಿಸುತ್ತಿರುತ್ತಾನೆ - ಮುಖ್ಯಮಂತ್ರಿ ಸಿದ್ದರಾಮಯ್ಯ

ರಾಣಿಬೆನ್ನೂರಿನ ನಿಟ್ಟೂರ ಗ್ರಾಮದ ಬೀರಲಿಂಗೇಶ್ವರ ದೇವಸ್ಥಾನದ ಸುವರ್ಣ ಮಹೋತ್ಸವದಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಶುದ್ಧ ಭಕ್ತಿ ಮತ್ತು ಮಾನವೀಯತೆಯಿಂದ ದೇವರನ್ನು ಒಲಿಸಿಕೊಳ್ಳಬಹುದು ಎಂದರು. 

Read Full Story
07:08 AM (IST) Apr 20

Karnataka News Live 20 April 2026ದೂರು ಕೊಟ್ಟವಳ ವರಿಸಲು ವ್ಯಕ್ತಿಗೆ ಪೊಲೀಸ್‌ ಬೆದರಿಕೆ, ಹೈಕೋರ್ಟ್‌ ಕೆಂಡಾಮಂಡಲ

ಮದುವೆಯಾಗುವುದಾಗಿ ಭರವಸೆ ನೀಡಿ ವಂಚಿಸಿದ ಆರೋಪದ ಪ್ರಕರಣದಲ್ಲಿ, ತನಿಖೆಗೆ ಹೈಕೋರ್ಟ್ ತಡೆಯಾಜ್ಞೆ ನೀಡಿದರೂ ಆರೋಪಿಗೆ ಕಿರುಕುಳ ನೀಡಿದ ದೂರುದಾರೆ ಮತ್ತು ಪೊಲೀಸ್ ಅಧಿಕಾರಿಗೆ ನ್ಯಾಯಾಲಯವು ತೀವ್ರ ಎಚ್ಚರಿಕೆ ನೀಡಿದೆ. ಕಿರುಕುಳ ಮುಂದುವರಿದರೆ ಇಬ್ಬರನ್ನೂ ಬಂಧಿಸಲು ಆದೇಶಿಸಬೇಕಾಗುತ್ತದೆ ಎಂದಿದೆ.

Read Full Story