11:37 PM (IST) Dec 02

Karnataka News Live 2 December 2025Karna Serial - ಮುಚ್ಚಿಟ್ಟ ಪ್ರೀತಿಯ ಸತ್ಯ ನಿತ್ಯಾ ಮುಂದೆ ರಿವೀಲ್​ ಮಾಡುವಷ್ಟರಲ್ಲಿಯೇ ಆಗಬಾರದ್ದು ಆಗೋಯ್ತು!

ನಿತ್ಯಾ ಗರ್ಭಿಣಿ ಎಂಬ ಸತ್ಯವನ್ನು ವೈದ್ಯೆಯಾದ ನಿಧಿ ಪತ್ತೆಹಚ್ಚಲು ಯತ್ನಿಸುತ್ತಾಳೆ. ಇವರಿಬ್ಬರ ನಡುವೆ ಸಿಲುಕಿರುವ ಕರ್ಣ, ನಿತ್ಯಾಳಿಗೆ ತನ್ನ ಜೀವನದ ಸತ್ಯವನ್ನು ಹೇಳಲು ನಿರ್ಧರಿಸುತ್ತಾನೆ, ಆದರೆ ಅವನು ಸತ್ಯ ಹೇಳುವಷ್ಟರಲ್ಲಿ ನಿತ್ಯಾ ಮಲಗಿರುವುದರಿಂದ ಅವನ ಪ್ರಯತ್ನ ವಿಫಲವಾಗುತ್ತದೆ.
Read Full Story
10:49 PM (IST) Dec 02

Karnataka News Live 2 December 2025ಬೆಳೆದ ಬೆಳೆಗಳ ಕಾವಲಿಗೆ ನಿಂತ ಸನ್ನಿ ಸುಂದರಿ, ಯಾದಗಿರಿ ರೈತರ ಪ್ರಯೋಗ ಫುಲ್‌ ಸಕ್ಸಸ್‌!

ಆಂಧ್ರಪ್ರದೇಶ ಮತ್ತು ಕರ್ನಾಟಕದ ರೈತರು ತಮ್ಮ ಉತ್ತಮ ಫಸಲನ್ನು ಕೆಟ್ಟ ದೃಷ್ಟಿಯಿಂದ ರಕ್ಷಿಸಲು ಒಂದು ವಿಶಿಷ್ಟ ಉಪಾಯ ಕಂಡುಕೊಂಡಿದ್ದಾರೆ. ಅವರು ತಮ್ಮ ಹೊಲಗಳಲ್ಲಿ ಬಾಲಿವುಡ್ ನಟಿ ಸನ್ನಿ ಲಿಯೋನ್ ಅವರ ಪೋಸ್ಟರ್‌ಗಳನ್ನು ಹಾಕುತ್ತಿದ್ದಾರೆ.

Read Full Story
10:32 PM (IST) Dec 02

Karnataka News Live 2 December 2025Lakshmi Nivasa - ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

'ಲಕ್ಷ್ಮೀ ನಿವಾಸ'ದಲ್ಲಿ ವಿಶ್ವನ ಮನೆಯಿಂದ ಹೊರಬಿದ್ದ ಜಾಹ್ನವಿಗೆ ಸಂಕಷ್ಟ ಎದುರಾಗಿದೆ. ಮಾರುವೇಷದಲ್ಲಿ ಬಂದ ಸೈಕೋ ಪತಿ ಜಯಂತ್ ಆಕೆಯನ್ನು ಹುಡುಕಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ, ಇಷ್ಟು ದಿನ ಜಾಹ್ನವಿಯ ಪರ ಇದ್ದ ವೀಕ್ಷಕರು ಇದೀಗ ಆಕೆಯ ವಿರುದ್ಧ ತಿರುಗಿಬಿದ್ದು ಜಯಂತ್ ಪರ ಮಾತನಾಡುತ್ತಿದ್ದಾರೆ.
Read Full Story
09:35 PM (IST) Dec 02

Karnataka News Live 2 December 2025Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ - ಯಾರೂ ಊಹಿಸದ ಟ್ವಿಸ್ಟ್​ ಇದು!

'ಬಿಗ್ ಬಾಸ್ ಕನ್ನಡ ಸೀಸನ್ 12' ರಿಂದ ಎಲಿಮಿನೇಟ್ ಆದ ಜಾಹ್ನವಿ, ಟಾಪ್ 5 ಸ್ಪರ್ಧಿಗಳ ಬಗ್ಗೆ ಅಚ್ಚರಿಯ ಹೇಳಿಕೆ ನೀಡಿದ್ದಾರೆ. ಅಶ್ವಿನಿ ಗೌಡ ಗೆಲ್ಲಬೇಕೆಂಬುದು ತಮ್ಮ ಆಸೆಯಾದರೂ, ಗೆಲ್ಲುವುದೇ ಬೇರೆಯವರು ಎನ್ನುವ ಮೂಲಕ ಅವರ ಹೆಸರು ರಿವೀಲ್​ ಮಾಡಿದ್ದಾರೆ! 

Read Full Story
09:12 PM (IST) Dec 02

Karnataka News Live 2 December 2025Amruthadhaare - ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ - ಮುಂದೇನಾಯ್ತು?

ದೇವಸ್ಥಾನದಲ್ಲಿ ಭೂಮಿಕಾಳ ಸೀರೆಗೆ ಬೆಂಕಿ ಹೊತ್ತಿಕೊಂಡಾಗ ಆಘಾತದಿಂದ ಭಾಗ್ಯಮ್ಮನಿಗೆ ದನಿ ಮರಳಿ ಬರುತ್ತದೆ. ಮತ್ತೊಂದೆಡೆ, ಮಲ್ಲಿಯನ್ನು ಹುಡುಕುತ್ತಿರುವ ಜೈದೇವನು, ಆಕೆ ತನ್ನ ಕಣ್ಣೆದುರೇ ಹಾದು ಹೋದರೂ ಕುಡಿದ ನಶೆಯಲ್ಲಿದ್ದ ರಿಂದ ಕಾಣಿಸಿಲ್ಲ, ಆದರೆ ಭಾಗ್ಯಮ್ಮ ಕಣ್ಣಿಗೆ ಬೀಳ್ತಾಳೆ. ಮುಂದೇನು?

Read Full Story
09:06 PM (IST) Dec 02

Karnataka News Live 2 December 2025ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ - ಇದಪ್ಪಾ ಸ್ವಾಭಿಮಾನದ ತಿರುಗೇಟು?

ದುರಾಸೆಯ ಅಣ್ಣ ಸಂತೋಷ್‌ನಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಅಣ್ಣನ ಮನೆಯಲ್ಲಿ ಆಶ್ರಯ ಪಡೆದಿದ್ದ ಭಾವನಾಗೆ, ಸಂತೋಷ್ ಬಾಡಿಗೆ ಕೇಳುವ ಮೂಲಕ ಮತ್ತಷ್ಟು ಆಘಾತ ನೀಡಿದ್ದಾನೆ. ಇದರಿಂದ ನೊಂದ ಭಾವನಾ ಅಣ್ಣನ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ.
Read Full Story
08:43 PM (IST) Dec 02

Karnataka News Live 2 December 2025Devil ಚಿತ್ರದಿಂದ ದರ್ಶನ್‌ ಅಕ್ಕನ ಮಗನನ್ನು ಉದ್ದೇಶಪೂರ್ವಕವಾಗಿ ಹೊರಕ್ಕೆ ಇಟ್ವಿ - ಆ ಸತ್ಯದ ಬಗ್ಗೆ ನಿರ್ದೇಶಕ ರಿವೀಲ್​

ರೇಣುಕಾಸ್ವಾಮಿ ಕೇಸ್‌ನಲ್ಲಿ ನಟ ದರ್ಶನ್ ಜೈಲಿನಲ್ಲಿರುವಾಗಲೇ ಅವರ 'ಡೆವಿಲ್' ಚಿತ್ರದ ಬಿಡುಗಡೆ ದಿನಾಂಕ ಘೋಷಣೆಯಾಗಿದೆ. ಈ ಚಿತ್ರದಿಂದ ದರ್ಶನ್ ಅಕ್ಕನ ಮಗ ಚಂದು ಅವರನ್ನು ಹೊರಗಿಟ್ಟಿರುವ ಕಾರಣವನ್ನು ನಿರ್ದೇಶಕ ಪ್ರಕಾಶ್ ಸ್ಪಷ್ಟಪಡಿಸಿದ್ದಾರೆ. ಅವರು ಹೇಳಿದ್ದೇನು? 

Read Full Story
08:40 PM (IST) Dec 02

Karnataka News Live 2 December 2025ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್‌ನಿಂದ ತೆರಳಬೇಕಿದ್ದ 22 ವಿಮಾನ ಹಾರಾಟ ಸ್ಥಗಿತ

ಬೆಂಗಳೂರು ಕೆಂಪೇಗೌಡ ಏರ್ಪೋರ್ಟ್‌ನಿಂದ ತೆರಳಬೇಕಿದ್ದ 22 ವಿಮಾನ ಹಾರಾಟ ಸ್ಥಗಿತ, ಏರ್ ಬಸ್ ವಿಮಾನಗಳಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ವಿವಿದೆಡೆ ತೆರಳಬೇಕಿದ್ದ ಪ್ರಯಾಣಿಕರು ಪರದಾಡುವಂತಾಗಿದೆ.

Read Full Story
08:12 PM (IST) Dec 02

Karnataka News Live 2 December 2025ರಸ್ತೆ ಗುಂಡಿ ಸಮಸ್ಯೆಗೆ ಡ್ರೈನೆಜ್‌ ಲೇಯರ್‌ ತಂತ್ರಜ್ಞಾನ ಬಳಕೆ, ಹೊಸ ತಂತ್ರಜ್ಞಾನದ ಉಪಯೋಗವೇನು?

ಅತಿಯಾದ ಮಳೆಯಿಂದಾಗಿ ಕಾರ್ಕಳ ತಾಲೂಕಿನಲ್ಲಿ ಹದಗೆಟ್ಟ ರಸ್ತೆಗಳನ್ನು ದುರಸ್ತಿಗೊಳಿಸಲು ಲೋಕೋಪಯೋಗಿ ಇಲಾಖೆಯು 'ಡ್ರೈನೆಜ್ ಲೇಯರ್' ಎಂಬ ಹೊಸ ತಂತ್ರಜ್ಞಾನ ಅಳವಡಿಸಿಕೊಂಡಿದೆ. ಈ ವಿಧಾನವು ರಸ್ತೆಯ ಕೆಳಗೆ ನೀರು ನಿಲ್ಲುವುದನ್ನು ತಡೆದು, ಡಾಂಬರು ಪದರದ ಬಾಳಿಕೆಯನ್ನು ಹೆಚ್ಚಿಸುತ್ತದೆ.

Read Full Story
08:07 PM (IST) Dec 02

Karnataka News Live 2 December 2025ಹೋಟೆಲ್‌ ರಾಜ್‌ಕಮಲ್‌ ಕೆಡವಿ ಕೊಳಗೇರಿ ನಿವಾಸಿಗೆ ವಸತಿ ಕಲ್ಪಿಸಿ, ಸಿದ್ದರಾಮಯ್ಯಗೆ ಶಾಂತಿ ಕಾರ್ಯಕರ್ತ ಇಪಿ ಮೆನನ್‌ ಮನವಿ

ಶಾಂತಿ ಕಾರ್ಯಕರ್ತ ಇಪಿ ಮೆನನ್‌, ಬೆಂಗಳೂರಿನ ಶಿವಾನಂದ ಸರ್ಕಲ್ ಬಳಿಯ ಪಾಳುಬಿದ್ದ ಹೋಟೆಲ್‌ ರಾಜ್‌ಕಮಲ್‌ ಜಾಗವನ್ನು ನಿರಾಶ್ರಿತರಿಗೆ ವಸತಿ ಕಲ್ಪಿಸಲು ಬಳಸುವಂತೆ ಸಿಎಂ ಸಿದ್ದರಾಮಯ್ಯಗೆ ಪತ್ರ ಬರೆದಿದ್ದಾರೆ. ಈ ಮೂಲಕ ಬೆಂಗಳೂರನ್ನು ಕೊಳಚೆ ಮುಕ್ತ ನಗರವನ್ನಾಗಿ ಮಾಡುವಂತೆ ಅವರು ಮನವಿ ಮಾಡಿದ್ದಾರೆ.
Read Full Story
07:58 PM (IST) Dec 02

Karnataka News Live 2 December 2025ಪುತ್ತೂರಿಗೆ ಮೆಡಿಕಲ್ ಕಾಲೇಜು ಅಧಿಕೃತ ಆದೇಶ, ದೇವಸ್ಥಾನ, ಮಸೀದಿ, ಚರ್ಚ್‌ಗಳಲ್ಲಿ ಶಾಸಕ ಅಶೋಕ್ ರೈ ವಿಶೇಷ ಪ್ರಾರ್ಥನೆ

ಶಾಸಕ ಅಶೋಕ್ ಕುಮಾರ್ ರೈ ಅವರ ಪ್ರಯತ್ನದ ಫಲವಾಗಿ, ಪುತ್ತೂರಿನಲ್ಲಿ ವೈದ್ಯಕೀಯ ಶಿಕ್ಷಣ ಇಲಾಖೆಯಡಿ 300 ಹಾಸಿಗೆಗಳ ಹೊಸ ಆಸ್ಪತ್ರೆ ನಿರ್ಮಾಣಕ್ಕೆ ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ. ಬನ್ನೂರಿನಲ್ಲಿ ನಿರ್ಮಾಣವಾಗಲಿರುವ ಈ ಬೃಹತ್ ಮೆಡಿಕಲ್ ಕಾಲೇಜು ಯೋಜನೆಯು ಸಾವಿರಾರು ಉದ್ಯೋಗ ಸೃಷ್ಟಿಸುವ ನಿರೀಕ್ಷೆಯಿದೆ.
Read Full Story
07:17 PM (IST) Dec 02

Karnataka News Live 2 December 2025ಖಾಸಗಿ ಶಾಲೆಗಳಿಗೆ ಸೆಡ್ಡು, ಮುಂದಿನ ವರ್ಷದಿಂದ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆ ಕಾರ್ಯಾರಂಭ

ಏಷ್ಯನ್‌ ಅಭಿವೃದ್ಧಿ ಬ್ಯಾಂಕ್ ಮತ್ತು ಕೆಕೆಆರ್‌ಡಿಬಿ ನೆರವಿನೊಂದಿಗೆ ರಾಜ್ಯಾದ್ಯಂತ 700 ಕೆಪಿಎಸ್ ಶಾಲೆಗಳನ್ನು ಆರಂಭಿಸಲಿದೆ. ಈ ಮೂಲಕ, ಸರ್ಕಾರಿ ಶಾಲೆಗಳಲ್ಲಿ ಕುಸಿಯುತ್ತಿರುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಿಸಲು ಎಲ್‌ಕೆಜಿಯಿಂದ 12ನೇ ತರಗತಿವರೆಗೆ ಆಂಗ್ಲ ಮಾಧ್ಯಮ ಶಿಕ್ಷಣ ನೀಡಲು ಉದ್ದೇಶಿಸಲಾಗಿದೆ.

Read Full Story
06:46 PM (IST) Dec 02

Karnataka News Live 2 December 2025ಬೆಳಗಾವಿ ಎಟಿಎಂ ಯಂತ್ರ ಕದ್ದೊಯ್ದರೂ ಕಳ್ಳರ ಕೈಗೆ ಸಿಗಲಿಲ್ಲ ಹಣ! ಲಾಕರ್ ತೆಗೆಲಾಗದೇ ಬೀಸಾಡಿ ಹೋದ ಗ್ಯಾಂಗ್!

ಬೆಳಗಾವಿಯಲ್ಲಿ, ಕಳ್ಳರು ತಳ್ಳುಗಾಡಿ ಬಳಸಿ ಇಂಡಿಕ್ಯಾಶ್ ಎಟಿಎಂ ಯಂತ್ರವನ್ನೇ ಕದ್ದೊಯ್ದಿದ್ದಾರೆ. ಆದರೆ, ಗ್ಯಾಸ್ ಕಟ್ಟರ್‌ನಿಂದಲೂ ಅದನ್ನು ತೆರೆಯಲು ವಿಫಲರಾಗಿ, ಹಣ ದೋಚಲಾಗದೆ ಯಂತ್ರವನ್ನು ರಸ್ತೆಬದಿ ಎಸೆದು ಪರಾರಿಯಾಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
Read Full Story
06:43 PM (IST) Dec 02

Karnataka News Live 2 December 2025ಕ್ಯಾನ್ಸರ್ ಶಸ್ತ್ರಚಿಕಿತ್ಸೆಯಲ್ಲಿ ಹೊಸ ಮೈಲಿಗಲ್ಲಿನತ್ತ ಮಿಮ್ಸ್ ಹೆಜ್ಜೆ, ನೈಜ ಸಮಯದಲ್ಲಿ ಗುರುತಿಸುವ ಸಂಶೋಧನೆ ಆರಂಭ!

ಮಂಡ್ಯ ಮಿಮ್ಸ್ ಕ್ಯಾನ್ಸರ್ ಶಸ್ತ್ರಚಿಕಿತ್ಸೆಯ ವೇಳೆ ಉಳಿಯುವ ಕ್ಯಾನ್ಸರ್ ಅವಶೇಷವನ್ನು ನೈಜ ಸಮಯದಲ್ಲಿ ಗುರುತಿಸುವ ಸಂಶೋಧನೆ ಆರಂಭಿಸಿವೆ. ಈ ತಂತ್ರಜ್ಞಾನವು ಎಐ ಮತ್ತು ಫ್ಲೊರೆಸನ್ಸ್ ಇಮೇಜಿಂಗ್ ಬಳಸಿ ಶಸ್ತ್ರಚಿಕಿತ್ಸೆಯ ನಿಖರತೆಯನ್ನು ಹೆಚ್ಚಿಸಿ, ಚಿಕಿತ್ಸಾ ವೆಚ್ಚವನ್ನು ಕಡಿಮೆ ಮಾಡುವ ಗುರಿ ಹೊಂದಿದೆ.

Read Full Story
06:17 PM (IST) Dec 02

Karnataka News Live 2 December 2025ಬೆಂಗಳೂರು ಏರ್‌ಪೋರ್ಟ್, ಶಾಪಿಂಗ್ ಮಾಲ್‌ಗಳಿಗೆ 'ಜೈಷ್-ಇ-ಮೊಹಮ್ಮದ್' ಹೆಸರಲ್ಲಿ ಬಾಂಬ್ ಬೆದರಿಕೆ ಇ-ಮೇಲ್

ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ 'ಜೈಷ್-ಇ-ಮೊಹಮ್ಮದ್' ಹೆಸರಿನಲ್ಲಿ ಬಾಂಬ್ ಬೆದರಿಕೆ ಇ-ಮೇಲ್ ಬಂದಿದೆ. ಈ ಸಂದೇಶದಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣ ಮತ್ತು ಪ್ರಮುಖ ಮಾಲ್‌ಗಳನ್ನು ಗುರಿಯಾಗಿಸಲಾಗಿತ್ತು. 

Read Full Story
06:06 PM (IST) Dec 02

Karnataka News Live 2 December 2025ಪುತ್ತೂರಿನಲ್ಲಿ ಮತ್ತೆ ಬಿಜೆಪಿ vs ಪುತ್ತಿಲ ಪರಿವಾರದ ಜಟಾಪಟಿ! ಮಹಾಲಿಂಗೇಶ್ವರನ ಮೊರೆ ಹೋದ ಬಿಜೆಪಿ ಉಪಾಧ್ಯಕ್ಷ!

ಪುತ್ತೂರಿನಲ್ಲಿ ಬಿಜೆಪಿ ಮತ್ತು ಪುತ್ತಿಲ ಪರಿವಾರದ ನಡುವಿನ ಸಂಘರ್ಷ ತಾರಕಕ್ಕೇರಿದೆ. ಶ್ರೀನಿವಾಸ ಕಲ್ಯಾಣೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ ಪ್ರಸನ್ನ ಕುಮಾರ್ ಮಾರ್ತ ಅವರನ್ನು ಪುತ್ತಿಲ ಪರಿವಾರದ ಕಾರ್ಯಕರ್ತರು ತಡೆದು ಅವಮಾನಿಸಿದ್ದಾರೆ ಎಂದು ಆರೋಪಿಸಲಾಗಿದೆ. 

Read Full Story
05:11 PM (IST) Dec 02

Karnataka News Live 2 December 2025Clove tea Benefits - ಟೀಗೆ ಲವಂಗ ಬೆರೆಸಿ ಕುಡಿದ್ರೆ ಪ್ರಯೋಜನ ನೂರಾರು, ಅಷ್ಟಕ್ಕೂ ಇದನ್ನು ತಯಾರಿಸೋದು ಹೇಗೆ?

ಲವಂಗ ಆರೋಗ್ಯಕ್ಕೆ ಬಹಳ ಒಳ್ಳೆಯದು. ಅದು ಸಾಕಷ್ಟು ಔಷಧಿ ಗುಣವನ್ನು ಹೊಂದಿದೆ. ಚಳಿಗಾಲದಲ್ಲಿ ಲವಂಗದ ಟೀ ಕುಡಿದ್ರೆ ರೋಗನಿರೋಧಕ ಶಕ್ತಿ ಹೆಚ್ಚಾಗೋದಲ್ದೆ ಮತ್ತೇನೆಲ್ಲ ಲಾಭವಿದೆ, ಅದನ್ನು ತಯಾರಿಸೋದು ಹೇಗೆ ಎಂಬ ಮಾಹಿತಿ ಇಲ್ಲಿದೆ.

Read Full Story
04:48 PM (IST) Dec 02

Karnataka News Live 2 December 2025ಮಲೆನಾಡಲ್ಲಿ ಮತ್ತೆ ಆತಂಕ - ಸಮಯಕ್ಕೂ ಮೊದಲೇ ಕಾಣಿಸಿಕೊಂಡ ಕೆಎಫ್‌ಡಿ ಸೋಂಕು, 50 ವರ್ಷದ ಮಹಿಳೆಯಲ್ಲಿ ದೃಢ!

ಶಿವಮೊಗ್ಗ ಜಿಲ್ಲೆಯ ಮಲೆನಾಡು ಪ್ರದೇಶದಲ್ಲಿ ಮಂಗನ ಕಾಯಿಲೆ (ಕೆಎಫ್‌ಡಿ) ಅಸಾಮಾನ್ಯವಾಗಿ ನವೆಂಬರ್ ತಿಂಗಳಲ್ಲೇ ಕಾಣಿಸಿಕೊಂಡಿದೆ. ಹೊಸನಗರ ತಾಲೂಕಿನ ಮಹಿಳೆಯೊಬ್ಬರಲ್ಲಿ ಸೋಂಕು ದೃಢಪಟ್ಟಿದ್ದು, ಆರೋಗ್ಯ ಇಲಾಖೆಯು ಮುನ್ನೆಚ್ಚರಿಕಾ ಕ್ರಮಗಳನ್ನು ತೀವ್ರಗೊಳಿಸಿ, ಗ್ರಾಮಗಳಲ್ಲಿ ಜಾಗೃತಿ ಮೂಡಿಸುತ್ತಿದೆ.
Read Full Story
04:29 PM (IST) Dec 02

Karnataka News Live 2 December 2025ದರ್ಶನ್‌ನನ್ನು ಲಾಕಪ್ ಡೆತ್ ಮಾಡಿ, ಹಣ ಕೊಡಲುಬಂದ ಪೊಲೀಸರು; ನ್ಯಾಯಾಂಗ ತನಿಖೆಗೆ ಪತ್ನಿ ಅಶ್ವಿನಿ ಆಗ್ರಹ!

ಬೆಂಗಳೂರಿನ ರೌಡಿಶೀಟರ್ ದರ್ಶನ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದು, ತಮ್ಮ ಪತಿಯ ಸಾವಿಗೆ ವಿವೇಕನಗರ ಪೊಲೀಸರ ಅನಧಿಕೃತ ಕಸ್ಟಡಿ ಮತ್ತು ಹಲ್ಲೆಯೇ ಕಾರಣ ಎಂದು ಪತ್ನಿ ಅಶ್ವಿನಿ ಆರೋಪಿಸಿದ್ದಾರೆ. ಸಿಐಡಿ ತನಿಖೆಯ ಮೇಲೆ ನಂಬಿಕೆಯಿಲ್ಲದ ಅವರು, ಪ್ರಕರಣದ ನ್ಯಾಯಾಂಗ ತನಿಖೆಗೆ ಆಗ್ರಹಿಸಿದ್ದಾರೆ.
Read Full Story
04:14 PM (IST) Dec 02

Karnataka News Live 2 December 2025ಫೇಕ್‌ ಬೆಸ್ಕಾಂ ಅಪ್ಲಿಕೇಶನ್‌ ಡೌನ್‌ಲೋಡ್‌ ಮಾಡಿ 14.60 ಲಕ್ಷ ಕಳೆದುಕೊಂಡ ಬೆಂಗಳೂರು ಮಹಿಳೆ!

ಬೆಂಗಳೂರಿನ ವಿದ್ಯಾರಣ್ಯಪುರದ 60 ವರ್ಷದ ಮಹಿಳೆಯೊಬ್ಬರು, ಬೆಸ್ಕಾಮ್ ಅಧಿಕಾರಿ ಎಂದು ಹೇಳಿಕೊಂಡ ಸೈಬರ್ ವಂಚಕನ ಮಾತನ್ನು ನಂಬಿ ನಕಲಿ ಆ್ಯಪ್ ಡೌನ್‌ಲೋಡ್ ಮಾಡಿದ್ದಾರೆ. ಬಿಲ್ ಅಪ್‌ಡೇಟ್‌ಗಾಗಿ 12 ರೂ. ಪಾವತಿಸಲು ಹೋಗಿ,14.60 ಲಕ್ಷ ರೂ. ಕಳೆದುಕೊಂಡಿದ್ದಾರೆ.

Read Full Story