MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

Lakshmi Nivasa: ಮನೆಬಿಟ್ಟ ಜಾಹ್ನವಿ- ಉಲ್ಟಾ ಹೊಡೆದ ವೀಕ್ಷಕರು; ಅಯ್ಯೋ ಪಾಪ ಅಂತಿದ್ದೋರೇ ಡಿವೋರ್ಸ್​ ಕೊಡಿಸಲು ಮುಂದಾದ್ರು!

'ಲಕ್ಷ್ಮೀ ನಿವಾಸ'ದಲ್ಲಿ ವಿಶ್ವನ ಮನೆಯಿಂದ ಹೊರಬಿದ್ದ ಜಾಹ್ನವಿಗೆ ಸಂಕಷ್ಟ ಎದುರಾಗಿದೆ. ಮಾರುವೇಷದಲ್ಲಿ ಬಂದ ಸೈಕೋ ಪತಿ ಜಯಂತ್ ಆಕೆಯನ್ನು ಹುಡುಕಿದ್ದು, ಅಚ್ಚರಿಯ ಬೆಳವಣಿಗೆಯಲ್ಲಿ, ಇಷ್ಟು ದಿನ ಜಾಹ್ನವಿಯ ಪರ ಇದ್ದ ವೀಕ್ಷಕರು ಇದೀಗ ಆಕೆಯ ವಿರುದ್ಧ ತಿರುಗಿಬಿದ್ದು ಜಯಂತ್ ಪರ ಮಾತನಾಡುತ್ತಿದ್ದಾರೆ.

1 Min read
Suchethana D
Published : Dec 02 2025, 10:32 PM IST
Share this Photo Gallery
  • FB
  • TW
  • Linkdin
  • Whatsapp
17
ಮನೆಬಿಟ್ಟ ಜಾಹ್ನವಿ
Image Credit : Instagram

ಮನೆಬಿಟ್ಟ ಜಾಹ್ನವಿ

ಲಕ್ಷ್ಮೀ ನಿವಾಸ (Lakshmi Nivasa)ದಲ್ಲಿ ಚಿನ್ನುಮರಿ ಜಾಹ್ನವಿ ಕಥೆ ಮತ್ತಲ್ಲಿಗೇ ಬಂದು ನಿಂತಿದೆ. ಇಷ್ಟು ದಿನ ಆಶ್ರಯ ಪಡೆದ ವಿಶ್ವನ ದೊಡ್ಡಮನೆಯಿಂದ ಆಕೆಗೆ ಗೇಟ್​ಪಾಸ್​ ಸಿಕ್ಕಿದೆ. ಆಕೆಯ ಬಗ್ಗೆ ವಿಶ್ವನ ಅಮ್ಮ ಮತ್ತು ತನುಗೆ ಸಂಶಯ ಬಂದಿದ್ದರಿಂದ ಜಾಹ್ನವಿಯ ಕುಟುಂಬದ ಬಗ್ಗೆ ಪ್ರಶ್ನೆ ಮಾಡುತ್ತಲೇ ಜಾಹ್ನವಿ ಮನೆಬಿಟ್ಟು ಬಂದಿದ್ದಾಳೆ.

27
ವೀಕ್ಷಕರ ಬೇಸರ
Image Credit : Instagram

ವೀಕ್ಷಕರ ಬೇಸರ

ವಿಶ್ವನ ಅಮ್ಮ ಉಡಿ ತುಂಬಿ ಕಳಿಸಿದ್ದಾಳೆ. ದುಡ್ಡು ಕೊಡಲು ಬಂದಾಗ ಅದನ್ನು ಜಾಹ್ನವಿ ತೆಗೆದುಕೊಳ್ಳಲಿಲ್ಲ. ಇಷ್ಟು ದಿನ ಚೆನ್ನಾಗಿ ಕೆಲಸ ಮಾಡಿದ ಜಾಹ್ನವಿಯನ್ನು ಈ ರೀತಿಯಾಗಿ ನಡುಬೀದಿಯಲ್ಲಿ ಕೈಬಿಟ್ಟಿರುವ ಬಗ್ಗೆ ವಿಶ್ವನ ಅಮ್ಮನ ಬಗ್ಗೆ ವೀಕ್ಷಕರು ತುಂಬಾ ಬೇಸರ ಹೊರಹಾಕುತ್ತಿದ್ದಾರೆ. ಅದೇ ವೇಳೆ ವಿಶ್ವನದ್ದೂ ಅತಿಯಾಗಿದ್ದರಿಂದ ತನು ಕೂಡ ಹೀಗೆ ಮಾಡಬೇಕಾಯಿತು ಎನ್ನುತ್ತಿದ್ದಾರೆ.

Related Articles

Related image1
Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು!
Related image2
Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?
37
ವಿಶ್ವನ ಮನೆಗೆ ಬಂದ ಸೈಕೋ
Image Credit : Instagram

ವಿಶ್ವನ ಮನೆಗೆ ಬಂದ ಸೈಕೋ

ಅದೇ ಇನ್ನೊಂದೆಡೆ, ವೇಷ ಬದಲಿಸಿಕೊಂಡಿರುವ ಸೈಕೋ ಜಯಂತ್​ ಇದೀಗ ನೇರವಾಗಿ ವಿಶ್ವನ ಮನೆಗೇ ಬಂದಿದ್ದಾನೆ. ಜಾಹ್ನವಿ ಅಲ್ಲಿಯೇ ಇದ್ದಾಳೆ ಎನ್ನುವ ಸಂದೇಹ ಅವನಿಗೆ ಮೊದಲಿನಿಂದಲೂ ಇತ್ತು. ಆದ ಕಾರಣ ಆಕೆಯನ್ನು ಹುಡುಕಿ ಬಂದಿದ್ದಾನೆ.

47
ಮುಂದೇನು ಎನ್ನುವ ಚಿಂತೆ
Image Credit : Facebook

ಮುಂದೇನು ಎನ್ನುವ ಚಿಂತೆ

ಜಾಹ್ನವಿ ದಿಕ್ಕು ದೆಸೆಯಿಲ್ಲದೇ ಹೊರಕ್ಕೆ ಬಂದು ಮುಂದೇನು ಎನ್ನುವುದು ತಿಳಿಯುತ್ತಿಲ್ಲ. ಇದೇ ವೇಳೆ ವೇಷ ಬದಲಿಸಿಕೊಂಡಿರುವ ಜಯಂತ್​ ಜಾಹ್ನವಿಯನ್ನು ನೋಡಿದ್ದಾನೆ!

57
ಮಾರುವೇಷ
Image Credit : Instagram

ಮಾರುವೇಷ

ಜಾಹ್ನವಿಯನ್ನು ನೋಡಿ ಆತನಿಗೆ ಸಹಜವಾಗಿ ಖುಷಿಯಾಗಿರುತ್ತದೆ. ಯಾರು ಕೂಡ ಗುರುತು ಹಿಡಿಯದ ರೀತಿಯಲ್ಲಿ ವೇಷ ಬದಲಿಸಿಕೊಂಡಿರುವ ಜಯಂತ್​ನನ್ನು ಖಂಡಿತವಾಗಿಯೂ ಜಾಹ್ನವಿ ಗುರುತಿಸಲಾರಳು.

67
ಉಲ್ಟಾ ಹೊಡೆದ ವೀಕ್ಷಕರು
Image Credit : Facebook

ಉಲ್ಟಾ ಹೊಡೆದ ವೀಕ್ಷಕರು

ಮಾರುವೇಷದಲ್ಲಿ ಬಂದಿರೋ ಜಯಂತ್​ ಮುಂದಿನ ನಡೆ ಏನು ಎನ್ನುವ ಕುತೂಹಲ ಇದ್ದೇ ಇದೆ. ಇದೇ ವೇಳೆ, ನೆಟ್ಟಿಗರು ಮಾತ್ರ ಜಾಹ್ನವಿ ವಿರುದ್ಧವಾಗಿದ್ದಾರೆ. ಇಂಥ ಹೆಂಡ್ತಿ ನಿನಗೆ ಬೇಡಪ್ಪಾ, ಅವಳು ಸರಿಯಿಲ್ಲ, ಅವಳಿಗೆ ಡಿವೋರ್ಸ್​ ಕೊಡು ಎಂದು ಹೇಳುತ್ತಿದ್ದಾರೆ. ಇಷ್ಟು ದಿನ ಇಂಥ ಸೈಕೋ ಗಂಡನನ್ನು ಕಟ್ಟಿಕೊಂಡಿರೋ ಜಾಹ್ನವಿ ಬಗ್ಗೆ ಕರುಣೆ ತೋರಿಸ್ತಿದ್ದೋರು ಈಗ ಉಲ್ಟಾ ಹೊಡೆದಿದ್ದಾರೆ!

77
ವಿಚಿತ್ರವಾದರೂ ಸತ್ಯ!
Image Credit : Facebook

ವಿಚಿತ್ರವಾದರೂ ಸತ್ಯ!

ಜಯಂತ್​ ಹೆಂಡತಿಗಾಗಿ ಪರದಾಡುತ್ತಿರುವುದನ್ನು ನೋಡಲಾಗದೇ ವೀಕ್ಷಕರು ಈಗ ಸೈಕೋ ಜಯಂತ್​ ಪರವಾಗಿದ್ದು, ಜಾಹ್ನವಿಯ ವಿರೋಧ ಆಗಿರುವುದು ಮಾತ್ರ ವಿಚಿತ್ರವಾದರೂ ಸತ್ಯ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ಲಕ್ಷ್ಮೀ ನಿವಾಸ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ಟಿವಿ ಶೋ
ಮನರಂಜನಾ ಸುದ್ದಿ

Latest Videos
Recommended Stories
Recommended image1
Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು!
Recommended image2
Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?
Recommended image3
ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?
Related Stories
Recommended image1
Bigg Boss 12ರ ವಿನ್ನರ್​ ಬಗ್ಗೆ ಅಚ್ಚರಿಯ ಹೇಳಿಕೆ ಕೊಟ್ಟ ಜಾಹ್ನವಿ: ಯಾರೂ ಊಹಿಸದ ಟ್ವಿಸ್ಟ್​ ಇದು!
Recommended image2
Amruthadhaare: ಆಗಬಾರದ್ದೇ ಆಗೋಯ್ತು! ದೇವಾಲಯದಲ್ಲಿ ಜೈದೇವನ ಎದುರೇ ಭೂಮಿ-ಮಲ್ಲಿ: ಮುಂದೇನಾಯ್ತು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved