MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?

ಅಣ್ಣ ಸಂತೋಷ್‌ನ ದುರಾಸೆಗೆ ಕ್ಯಾಕರಿಸಿ ಉಗಿದ ಭಾವನಾ: ಇದಪ್ಪಾ ಸ್ವಾಭಿಮಾನದ ತಿರುಗೇಟು?

ದುರಾಸೆಯ ಅಣ್ಣ ಸಂತೋಷ್‌ನಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಅಣ್ಣನ ಮನೆಯಲ್ಲಿ ಆಶ್ರಯ ಪಡೆದಿದ್ದ ಭಾವನಾಗೆ, ಸಂತೋಷ್ ಬಾಡಿಗೆ ಕೇಳುವ ಮೂಲಕ ಮತ್ತಷ್ಟು ಆಘಾತ ನೀಡಿದ್ದಾನೆ. ಇದರಿಂದ ನೊಂದ ಭಾವನಾ ಅಣ್ಣನ ಮನೆ ಬಿಟ್ಟು ಹೋಗಲು ನಿರ್ಧರಿಸಿದ್ದಾಳೆ.

2 Min read
Mahmad Rafik
Published : Dec 02 2025, 09:06 PM IST
Share this Photo Gallery
  • FB
  • TW
  • Linkdin
  • Whatsapp
15
ಅಣ್ಣ ಸಂತೋಷ್‌ನ ದುರಾಸೆ
Image Credit : Zee Kannada FB

ಅಣ್ಣ ಸಂತೋಷ್‌ನ ದುರಾಸೆ

ಅಣ್ಣ ಸಂತೋಷ್‌ನ ದುರಾಸೆ ಮತ್ತು ಅತ್ತೆ-ಮಾವ, ಓರಗಿತ್ತಿಯ ಕುತಂತ್ರದಿಂದಾಗಿ ಭಾವನಾ ಸಂಸಾರದಲ್ಲಿ ಬಿರುಕು ಮೂಡಿದೆ. ಭಾವನಾ ಸದ್ಯ ಅಣ್ಣನ ಮನೆಯಲ್ಲಿದ್ದು, ಯಾವ ಮೋಸವೂ ತಿಳಿಯದೇ ಒಂಟಿಯಾಗಿ ಕಣ್ಣೀರು ಹಾಕುತ್ತಿದ್ದಾರೆ. ತಂಗಿಯ ಸಂಸಾರ ಹಾಳು ಮಾಡಿರುವ ಸಂತೋಷ್, ಇದೀಗ ಆಕೆಯ ಮಾವನಿಂದ ಹಣ ಕೀಳುತ್ತಿದ್ದಾನೆ. ಇತ್ತ ಕೆಲಸಕ್ಕೆ ಸೇರಿರುವ ಭಾವನಾಳ ಸಂಬಳದ ಮೇಲೆಯೂ ಸಂತೋಷ್ ಕಣ್ಣು ಹಾಕಿದ್ದಾನೆ.

25
ಜವರೇಗೌಡನಿಂದಲೂ ಹಣ ಪಡೆದ ಸಂತೋಷ್
Image Credit : Zee Kannada FB

ಜವರೇಗೌಡನಿಂದಲೂ ಹಣ ಪಡೆದ ಸಂತೋಷ್

ಜವರೇಗೌಡನಿಂದ ಸಂತೋಷ್ 90 ಸಾವಿರ ರೂಪಾಯಿ ಹಣ ಪಡೆದುಕೊಳ್ಳುತ್ತಿರೋದನ್ನು ಮರಿಗೌಡರು ನೋಡಿದ್ದಾರೆ. ಇವರಿಬ್ಬರ ಸಂಚಿನಿಂದ ಸಿದ್ದೇಗೌಡ-ಭಾವನಾ ಸಂಸಾರ ಹಾಳಾಗ್ತಿದೆ ಎಂಬ ರಹಸ್ಯ ಬಯಲಾಗಿದೆ. ಜವರೇಗೌಡರಿಂದ ಹಣ ಪಡೆದ ಸಂತೋಷ್, ತಂಗಿ ಭಾವನಾಳ ಬಳಿ ತಿಂಗಳಿಗೆ ಇಂತಿಷ್ಟು ದುಡ್ಡು ನೀಡುವಂತೆ ಕೇಳಿದ್ದಾನೆ.

Related Articles

Related image1
Lakshmi Nivasa: ವಿಶ್ವನ ಅಮ್ಮಂಗೂ ಬಂತು ಡೌಟು- ಚಿನ್ನುಮರಿಯ ಖೇಲ್​ ಕಥಮ್​? ಸೈಕೋ ಗಂಡನೇ ಗತಿ?
Related image2
Lakshmi Nivasa: ಜಯಂತ್ ಈಗ ಮಾಸ್ಕ್​ಮ್ಯಾನ್​! ಚಿನ್ನುಮರಿ ಕಥೆ ಫಿನಿಷ್​? ವಿಶ್ವನ ಪ್ರಾಣಕ್ಕೂ ಕಂಟಕ
35
ತಂಗಿಗೆ ಬಾಡಿಗೆ ಕೇಳಿದ ಸಂತೋಷ್
Image Credit : Zee Kannada FB

ತಂಗಿಗೆ ಬಾಡಿಗೆ ಕೇಳಿದ ಸಂತೋಷ್

ನಿನಗೆ ಪ್ರೈವೇಸಿ ಬೇಕಾಗಬಹುದು, ಹಾಗಾಗಿ ಮೇಲಿರುವ ರೂಮ್‌ಗೆ ಶಿಫ್ಟ್ ಆಗು. ನಿನಗೆ ಬೇಕಾಗಿರುವ ಎಲ್ಲಾ ಸೌಲಭ್ಯ ಕಲ್ಪಿಸಿ ಕೊಡುತ್ತೇನೆ. ಈ ಏರಿಯಾದಲ್ಲಿ ಬಾಡಿಗೆ 10 ಸಾವಿರ ರೂಪಾಯಿ ಇದೆ. ನೀನು ನನ್ನ ತಂಗಿ ಅಲ್ಲವಾ ಐದರಿಂದ ಆರು ಸಾವಿರ ರೂಪಾಯಿ ಕೊಟ್ಟರೆ ಸಾಕು. ವಿದ್ಯುತ್, ವಾಟರ್ ಬಿಲ್ ಸೇರಿದ್ರೆ ತಿಂಗಳಿಗೆ 7 ಸಾವಿರ ರೂಪಾಯಿ ಕೊಡುವಂತೆ ಸಂತೋಷ್ ಕೇಳುತ್ತಾನೆ.

45
ಸಂತೋಷ್‌ಗೆ ಉಗಿದ ಭಾವನಾ
Image Credit : Zee Kannada FB

ಸಂತೋಷ್‌ಗೆ ಉಗಿದ ಭಾವನಾ

ಬಾಡಿಗೆ ಮನೆಯಲ್ಲಿರಬೇಕಾದ್ರೆ ಎಲ್ಲಾದ್ರು ಇರಬಹುದು. ಸ್ವಂತ ಅಣ್ಣನ ಮನೆಯಲ್ಲಿ ಬಾಡಿಗೆ ಇರೋದು ಬೇಕಿಲ್ಲ. ನನ್ನನ್ನು ಕರೆದುಕೊಂಡು ಬಂದಾಗ ನೀನು ಬದಲಾಗಿದ್ದೀಯಾ? ಪ್ರೀತಿ ಮತ್ತು ಸಂಬಂಧಗಳಿಗೆ ಬೆಲೆ ಕೊಡ್ತಿದ್ದೀಯಾ ಅಂತ ಅಂದುಕೊಂಡಿದ್ದೆ. ಆದ್ರೆ ಈ ಪ್ರೀತಿ ಹಿಂದೆ ಹಣವಿರೋದು ಗೊತ್ತಿರಲಿಲ್ಲ. ನಿನ್ನ ಖಾಲಿ ಇರೋ ಮನೆಗೆ ಬಾಡಿಗೆದಾರರನ್ನು ಕರೆದುಕೊಂಡು ಬಂದಿದ್ದೀಯಾ ಎಂದು ಸಂತೋಷ್‌ಗೆ ಭಾವನಾ ಉಗಿದಿದ್ದಾಳೆ.

ಇದನ್ನೂ ಓದಿ: ಡೀವೋರ್ಸ್ ಕೊಡಿಸಲು ನೀಲು ಹೊಸ ಪ್ಲಾನ್; ಹಿರಿಯ ನಟಿ ಸೀರಿಯಲ್‌ ಬಿಟ್ಟಿದ್ದಕ್ಕೆ ಲಿಂಕ್‌ ಮಾಡಿದ ವೀಕ್ಷಕರು

55
ಮನೆಯಿಂದ ಹೊರಟ ಭಾವನಾ
Image Credit : Zee Kannada FB

ಮನೆಯಿಂದ ಹೊರಟ ಭಾವನಾ

ಸಂಬಳ ಆಗುತ್ತಿದ್ದಂತೆ ಮನೆ ಖರ್ಚಿಗೆ ಒಂದಿಷ್ಟು ಹಣ ಕೊಡುತ್ತಿದ್ದೆ. ನೊಂದಿರುವ ತಂಗಿ ಬಳಿ ಹೀಗೆಲ್ಲಾ ಕೇಳಿದ್ರೆ ನನಗೆ ಎಷ್ಟು ನೋವು ಆಗುತ್ತೆ ಅಂತ ಯೋಚಿಸಬೇಕಲ್ಲವಾ? ಇದು ನಿನ್ನ ಸ್ವಾರ್ಥ ಅಲ್ಲವಾ ಎಂದು ಭಾವನಾ ಪ್ರಶ್ನೆ ಮಾಡಿದ್ದಾಳೆ. ಅಣ್ಣನ ಮನೆಯಲ್ಲಿಯೇ ಬಾಡಿಕೆ ಕೊಟ್ಟು ಇರುವಷ್ಟು ಗತಿ ನನಗೆ ಬಂದಿಲ್ಲ. ಬಾಡಿಗೆ ಮನೆಯಲ್ಲಿರಬೇಕಾದ್ರೆ ಎಲ್ಲಾದ್ರು ಇರಬಹುದು, ನಾನು ಇವತ್ತೇ ಮನೆಬಿಟ್ಟು ಹೋಗ್ತೀನಿ ಎಂದು ಭಾವನಾ ಹೇಳಿದ್ದಾಳೆ.

ಇದನ್ನೂ ಓದಿ: ಚಿನ್ನುಮರಿ ಹುಡುಕಲು ವೇಷ ಬದಲಿಸಿದ ಸೈಕೋ ಜಯಂತ್; ವಿಶ್ವನ ಮನೆಯಲ್ಲಿ ಸಿಕ್ಕಿಬಿದ್ದ ಜಾಹ್ನವಿ!

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಲಕ್ಷ್ಮೀ ನಿವಾಸ ಧಾರಾವಾಹಿ
ಕನ್ನಡ ಧಾರಾವಾಹಿ
ಜೀ ಕನ್ನಡ
ಮನರಂಜನಾ ಸುದ್ದಿ

Latest Videos
Recommended Stories
Recommended image1
ಅಮೃತಧಾರೆ: ಡೈರೆಕ್ಟ್ರೇ ಇನ್ಮೇಲಾದ್ರೂ ಭಾಗ್ಯಮ್ಮಂಗೆ ಡೈಲಾಗ್‌ ಕೊಡಿ! ಪ್ರತಿಭಾವಂತ ಕಲಾವಿದೆ ಪರ ನಿಂತ ವೀಕ್ಷಕರು
Recommended image2
BBK 12: ವೈಷ್ಣವಿಯಿಂದ ಹಿಡಿದು ಶಿಶಿರ್ ವರೆಗೆ ಎಲ್ಲರ ಬಾಯಲ್ಲೂ ಗಿಲ್ಲಿ, ಯಮುನಾ ಮನಸ್ಸು ಗೆದ್ದ ಸ್ಪರ್ಧಿ ಯಾರು?
Recommended image3
Brahmagantu Serial Update: ರೂಪ ಎದುರು ಬಯಲಾಯ್ತು ದೀಪಾ ಗುಟ್ಟು… ತೆರೆದುಕೊಳ್ಳಲಿದೆ ದೊಡ್ಡ ಟ್ವಿಸ್ಟ್
Related Stories
Recommended image1
Lakshmi Nivasa: ವಿಶ್ವನ ಅಮ್ಮಂಗೂ ಬಂತು ಡೌಟು- ಚಿನ್ನುಮರಿಯ ಖೇಲ್​ ಕಥಮ್​? ಸೈಕೋ ಗಂಡನೇ ಗತಿ?
Recommended image2
Lakshmi Nivasa: ಜಯಂತ್ ಈಗ ಮಾಸ್ಕ್​ಮ್ಯಾನ್​! ಚಿನ್ನುಮರಿ ಕಥೆ ಫಿನಿಷ್​? ವಿಶ್ವನ ಪ್ರಾಣಕ್ಕೂ ಕಂಟಕ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved