10:59 PM (IST) Apr 02

Karnataka News Live 2 April 2026Pavithra Bandhana Serial - ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?

Colors Kannada Pavithra Bandhana Serial: ಪವಿತ್ರ ಬಂಧನ ಧಾರಾವಾಹಿಯಲ್ಲಿ ತಮ್ಮಯ್ಯ ಎಂದೇ ಫೇಮಸ್‌ ಆಗಿರೋ ತಿಲಕ್‌ ದೇಶಮುಖ್‌ ಅಲಿಯಾಸ್‌ ಯಶಸ್‌ ಕೃಷ್ಣ ಅವರ ಪಾತ್ರ ಮುಕ್ತಾಯವಾಗಿದೆ. ಇದನ್ನು ವೀಕ್ಷಕರು ನೋಡಿ ಬೇಸರ ಮಾಡಿಕೊಂಡಿದ್ದರು. ಈ ಪಾತ್ರ ಮರಳಿ ಬರಲಿದೆಯಾ?

Read Full Story
10:35 PM (IST) Apr 02

Karnataka News Live 2 April 2026Amruthadhaare Serial - ಕರ್ಮ ಬಿಡ್ಲಿಲ್ಲ, JD ತಂತ್ರಕ್ಕೆ ತಿರುಗು ಮಂತ್ರ ಹಾಕಿದ ಮಲ್ಲಿ; ತತ್ತರಿಸಿ ಹೋದ KD

Amruthadhaare Kannada Serial Update: ಅಮೃತಧಾರೆ ಧಾರಾವಾಹಿಯಲ್ಲಿ ಮಲ್ಲಿ ಜೀವನ ಹಾಳು ಮಾಡಬೇಕು ಎಂದುಕೊಂಡಿದ್ದ ಜಯದೇವ್‌ಗೆ ಸಖತ್‌ ಟ್ವಿಸ್ಟ್‌ ಸಿಕ್ಕಿದೆ. ಈ KD ಜೇಡಿಯೇ ನಲುಗುವಂಥ ಸುದ್ದಿ ಸಿಕ್ಕಿದೆ. ಅಷ್ಟೇ ಅಲ್ಲದೆ ಅವನಿಗೆ ಒಂದಲ್ಲ, ಎರಡು ಆಘಾತಕಾರಿ ಸುದ್ದಿ ಸಿಕ್ಕಿದೆ.

Read Full Story
09:22 PM (IST) Apr 02

Karnataka News Live 2 April 2026ಗ್ಯಾರಂಟಿ ಯೋಜನೆಯಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ - ಸಚಿವ ಬೈರತಿ ಸುರೇಶ್

ಸಿದ್ದರಾಮಯ್ಯ ಅವರು ರಾಜ್ಯರ ಜನತೆಗೆ ಹಲವು ಭಾಗ್ಯಗಳ ಮೂಲಕ ಕಳೆದ ಮೂರು ವರ್ಷಗಳಿಂದ ಪಂಚ ಗ್ಯಾರಂಟಿ ಯೋಜನೆಗಳಿಂದ ಲಕ್ಷಾಂತರ ಬಡ ಕುಟುಂಬಗಳಿಗೆ ಆರ್ಥಿಕ ಭದ್ರತೆ ನೀಡಿದ್ದಾರೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

Read Full Story
09:14 PM (IST) Apr 02

Karnataka News Live 2 April 2026ಚಾಮರಾಜನಗರ - ಪ್ರೀತಿಗೆ ಮನೆಯವರ ವಿರೋಧ; ಒಂದೇ ಹಗ್ಗಕ್ಕೆ ಕೊರಳೊಡ್ಡಿದ ಆದಿವಾಸಿ ಯುವ ಪ್ರೇಮಿಗಳು!

ಚಾಮರಾಜನಗರದ ಪೊನ್ನಾಚ್ಚಿ ಗ್ರಾಮದಲ್ಲಿ, ಪೋಷಕರ ವಿರೋಧ ಮತ್ತು ಪೊಲೀಸ್ ದೂರಿನ ಭೀತಿಯಿಂದ ಆದಿವಾಸಿ ಪ್ರೇಮಿಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ, ಇದು ಆತ್ಮಹತ್ಯೆಯಲ್ಲ, ಕೊಲೆ ಎಂದು ಯುವತಿಯ ಕುಟುಂಬಸ್ಥರು ಆರೋಪಿಸಿದ್ದು, ಸಾವಿನ ಸುತ್ತ ಅನುಮಾನಗಳು ದಟ್ಟವಾಗಿವೆ.
Read Full Story
08:46 PM (IST) Apr 02

Karnataka News Live 2 April 2026ವಿದ್ಯಾರ್ಥಿಗಳಲ್ಲಿನ ಮೊಬೈಲ್‌ ವ್ಯಸನ ನಿವಾರಣೆಗೆ ಮಾರ್ಗಸೂಚಿ - ಸಚಿವ ದಿನೇಶ್ ಗುಂಡೂರಾವ್

ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಅಂಶವುಳ್ಳ ಕರಡು ನೀತಿ ರೂಪಿಸಿದ್ದು, ಸಾರ್ವಜನಿಕರ ಅಭಿಪ್ರಾಯ ಕ್ರೋಢೀಕರಿಸಿ ಅಂತಿಮ ನೀತಿ ಪ್ರಕಟಿಸುತ್ತೇವೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.

Read Full Story
08:34 PM (IST) Apr 02

Karnataka News Live 2 April 2026ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು ಮುಚ್ಚಲು ಸರ್ಕಾರ ಸಂಚು - ಆರ್‌.ಅಶೋಕ್‌ ಕಿಡಿ

ಕರ್ನಾಟಕ ರೇಷ್ಮೆ ಕೈಗಾರಿಕಾ ನಿಗಮವನ್ನು (ಕೆಎಸ್‌ಐಸಿ) ಹಂತ ಹಂತವಾಗಿ ಮುಚ್ಚಲು ರಾಜ್ಯ ಸರ್ಕಾರ ಚಕ್ರವ್ಯೂಹ ರಚಿಸಿದಂತೆ ಕಾಣುತ್ತಿದೆ ಎಂದು ವಿಧಾನಸಭೆ ವಿಪಕ್ಷ ನಾಯಕ ಆರ್‌.ಅಶೋಕ್‌ ಕಿಡಿಕಾರಿದ್ದಾರೆ.

Read Full Story
08:27 PM (IST) Apr 02

Karnataka News Live 2 April 2026Super Hit Movies - ಟಾಪ್‌ ಡೈರೆಕ್ಟರ್‌ಗಳ ಸೂಪರ್‌ ಹಿಟ್‌ ಸಿನಿಮಾಗಳಿವು; ಧೂಳೆಬ್ಬಿಸಿರೋ ಕಲೆಕ್ಷನ್‌ ದಾಖಲೆ

Tollywood Directors: ರಾಜಮೌಳಿ, ತ್ರಿವಿಕ್ರಮ್, ಸುಕುಮಾರ್ ಅವರಂತಹ ಟಾಪ್ ಡೈರೆಕ್ಟರ್‌ಗಳ ವೃತ್ತಿಜೀವನದ ಬೆಸ್ಟ್ ಸಿನಿಮಾಗಳ ಬಗ್ಗೆ ಈ ಸ್ಟೋರಿಯಲ್ಲಿದೆ. ಈ ಚಿತ್ರಗಳನ್ನು ಮೀರಿಸುವಂತಹ ಸಿನಿಮಾಗಳನ್ನು ಇವರು ಮತ್ತೆ ನಿರ್ದೇಶಿಸಬಲ್ಲರೇ ಎಂಬ ಚರ್ಚೆ ಅಭಿಮಾನಿಗಳಲ್ಲಿ ಜೋರಾಗಿದೆ.

Read Full Story
08:20 PM (IST) Apr 02

Karnataka News Live 2 April 2026ಬಾಲಯ್ಯಗೆ ತಾಯಿಯಾಗುವ ಪಾತ್ರವನ್ನು ಸೌಂದರ್ಯ ರಿಜೆಕ್ಟ್ ಮಾಡಿದ್ದೇಕೆ? ಕಾಸ್ಟಿಂಗ್ ಟ್ವಿಸ್ಟ್ ರಿವೀಲ್

ನಂದಮೂರಿ ಬಾಲಕೃಷ್ಣ ಇಂದಿಗೂ ಸ್ಟಾರ್ ಹೀರೋ ಆಗಿ ಸತತ ಸಿನಿಮಾಗಳನ್ನು ಮಾಡುತ್ತಿದ್ದಾರೆ. ಅವರ ವೃತ್ತಿಜೀವನದಲ್ಲಿ ದ್ವಿಪಾತ್ರಗಳಲ್ಲಿ ನಟಿಸಿದ ಹಲವು ಚಿತ್ರಗಳಿವೆ. 'ಚೆನ್ನಕೇಶವ ರೆಡ್ಡಿ' ಕೂಡಾ ಅಂತಹದ್ದೇ ಒಂದು ಸಿನಿಮಾ.

Read Full Story
08:12 PM (IST) Apr 02

Karnataka News Live 2 April 2026'Now It’s Us Three..' ಮದುವೆಯಾದ ಒಂದೇ ತಿಂಗಳಿಗೆ ನಾವು ಮೂವರಾಗ್ತಿದ್ದೇವೆ ಎಂದ ನಟಿ ರಶ್ಮಿಕಾ ಮಂದಣ್ಣ!

Actress Rashmika Mandanna: ನಟಿ ರಶ್ಮಿಕಾ ಮಂದಣ್ಣ ಹಾಗೂ ವಿಜಯ್‌ ದೇವರಕೊಂಡ ಅವರು ಇತ್ತೀಚೆಗೆ ಮದುವೆ ಆಗಿದ್ದಾರೆ. ಈಗ ಅವರು “ನಾವು ಈಗ ಇಬ್ಬರಲ್ಲ, ಮೂವರು” ಎಂದು ಅವರು ಹೇಳಿದ್ದಾರೆ. ಈ ಹೇಳಿಕೆ ಈಗ ಭಾರೀ ವೈರಲ್‌ ಆಗ್ತಿದೆ. ಹಾಗಾದರೆ ಸತ್ಯ ಏನು?

Read Full Story
06:53 PM (IST) Apr 02

Karnataka News Live 2 April 2026Rishab Shetty ಏಕಾಏಕಿ ಎಲ್ರನ್ನೂ ಅನ್​ಫಾಲೋ ಮಾಡಿದ್ಯಾಕೆ? ಪ್ರಮೋದ್​ ಶೆಟ್ರಿಂದ ಬಂತು ಸ್ಪಷ್ಟನೆ

ಕಾಂತಾರ ಖ್ಯಾತಿಯ ರಿಷಬ್ ಶೆಟ್ಟಿಅವರು ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪತ್ನಿ, ಫಿಲ್ಮ್ಸ್ ಮತ್ತು ಫೌಂಡೇಷನ್ ಖಾತೆಗಳನ್ನು ಹೊರತುಪಡಿಸಿ ಎಲ್ಲರನ್ನೂ ಅನ್‌ಫಾಲೋ ಮಾಡಿರುವುದು ಚರ್ಚೆಗೆ ಕಾರಣವಾಗಿದೆ. ಈ ಬಗ್ಗೆ ಅವರ ಆಪ್ತಮಿತ್ರ ಪ್ರಮೋದ್ ಶೆಟ್ಟಿ ಪ್ರತಿಕ್ರಿಯಿಸಿದ್ದಾರೆ.

Read Full Story
06:32 PM (IST) Apr 02

Karnataka News Live 2 April 2026AA22xA6 - ದೀಪಿಕಾ-ಅಲ್ಲು ಅರ್ಜುನ್ ಸಿನಿಮಾ ಬಂಪರ್ ಹಿಟ್ - 'ಧುರಂಧರ್' ಸ್ಟಾರ್ ರಣವೀರ್ ಕೊಟ್ಟೇಬಿಟ್ರು ಹಿಂಟ್

ಈ ಪ್ರಾಜೆಕ್ಟ್‌ ಅನ್ನು ದೊಡ್ಡ ಬಜೆಟ್ ಮತ್ತು ಭವ್ಯವಾದ ಸೆಟ್‌ಗಳೊಂದಿಗೆ ನಿರ್ಮಿಸಲಾಗುತ್ತಿದೆ ಎಂದು ಹೇಳಲಾಗುತ್ತಿದೆ. ಈ ಚಿತ್ರವನ್ನು ಈ ಹಿಂದೆ ಹಲವು ಬ್ಲಾಕ್‌ಬಸ್ಟರ್ ಚಿತ್ರಗಳನ್ನು ನೀಡಿರುವ ಅಟ್ಲಿ ನಿರ್ದೇಶಿಸುತ್ತಿದ್ದಾರೆ.

Read Full Story
05:15 PM (IST) Apr 02

Karnataka News Live 2 April 2026ಅಮ್ಮನಾದ ಜೊತೆ ಜೊತೆಯಲಿ ಸೀರಿಯಲ್‌ ಸ್ಟಾರ್‌ - ಮುದ್ದಾದ ಹೆಣ್ಣು ಮಗುವಿಗೆ ಜನ್ಮ ನೀಡಿದ ನಟಿ!

'ಜೊತೆ ಜೊತೆಯಲಿ' ಖ್ಯಾತಿಯ ನಟಿ ಮಾನಸ ಮನೋಹರ್ ಮತ್ತು ಅವರ ಪತಿ, ಫುಟ್‌ಬಾಲ್ ಆಟಗಾರ ಪ್ರೀತಂ ಚಂದ್ರ ಅವರು ತಮ್ಮ ಮೊದಲ ಮಗುವನ್ನು ಬರಮಾಡಿಕೊಂಡಿದ್ದಾರೆ. ಮಾರ್ಚ್ 20, 2026 ರಂದು ಹೆಣ್ಣು ಮಗುವಿಗೆ ಜನ್ಮ ನೀಡಿದ ಈ ಸಿಹಿ ಸುದ್ದಿಯನ್ನು ನಟಿ ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ.

Read Full Story
04:48 PM (IST) Apr 02

Karnataka News Live 2 April 2026'ಮದರ್ ಪ್ರಾಮಿಸ್‌' ಮಾಡಿ 'ಫಾದರ್‌ ಆಫ್‌ ಆಲ್‌ ಪ್ರಾಮಿಸಸ್‌' ಎಂದ ಡಾಲಿ ಧನಂಜಯ - ಕಾರಣವೇನು?

ಡಾಲಿ ಧನಂಜಯ ನಟನೆ, ನಿರ್ಮಾಣದ ಹೊಸ ಸಿನಿಮಾ ಹೆಸರು ‘ಮದರ್ ಪ್ರಾಮಿಸ್’. ಈ ಚಿತ್ರದ ಟ್ಯಾಗ್‌ಲೈನ್‌ ‘ಫಾದರ್‌ ಆಫ್‌ ಆಲ್‌ ಪ್ರಾಮಿಸಸ್‌’. ವಿಶೇಷ ಎಂದರೆ ಈ ಸಿನಿಮಾ ಮೂಲಕ ನಟ ಪೂರ್ಣಚಂದ್ರ ಮೈಸೂರು ಅವರು ನಿರ್ದೇಶಕನಾಗುತ್ತಿದ್ದಾರೆ.

Read Full Story
04:28 PM (IST) Apr 02

Karnataka News Live 2 April 2026ದೊಡ್ಡ ಹೊಟೆಲ್ ಅದಕ್ಕಿಂತ ಸೂಪರ್ ಹೆಸರು ನೋಡಿ ಆರ್ಡರ್ ಮಾಡಿದ ಬೆಂಗಳೂರಿಗನಿಗೆ ಕೊಟ್ಟಿದ್ದು ಇದು

ದೊಡ್ಡ ಹೊಟೆಲ್ ಅದಕ್ಕಿಂತ ಸೂಪರ್ ಹೆಸರು ನೋಡಿ ಆರ್ಡರ್ ಮಾಡಿದ ಬೆಂಗಳೂರಿಗನಿಗೆ ಕೊಟ್ಟಿದ್ದು ಇದು, ಬೆಂಗಳೂರಿನ ಪ್ರತಿಷ್ಠಿತ ರೆಸ್ಟೋರೆಂಟ್‌ನಲ್ಲಿ ಹೇಳಿದ ತಿಂಡಿ ಬಂದಾಗ ಅಚ್ಚರಿಯಾಗಿತ್ತು.

Read Full Story
04:21 PM (IST) Apr 02

Karnataka News Live 2 April 2026ಕೆಸಿ ಜನರಲ್ ಆಸ್ಪತ್ರೆಯಲ್ಲಿ ಸ್ಮಾರ್ಟ್ ಎಐ ಡಯಾಲಿಸಿಸ್ ವ್ಯವಸ್ಥೆ - ಸಚಿವ ದಿನೇಶ್ ಗುಂಡೂರಾವ್

ಕೃತಕ ಬುದ್ಧಿಮತ್ತೆ ಆಧಾರಿತ ಮೇಲ್ವಿಚಾರಣಾ ವ್ಯವಸ್ಥೆಯ ಪರಿಚಯದಿಂದ ಚಿಕಿತ್ಸಾ ಗುಣಮಟ್ಟ ಮತ್ತು ರೋಗಿ ಸುರಕ್ಷತೆ ಮತ್ತಷ್ಟು ಬಲವಾಗಲಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದ್ದಾರೆ.

Read Full Story
04:01 PM (IST) Apr 02

Karnataka News Live 2 April 2026ಫಸ್ಟ್‌ ಮದುವೆ ಮುರೀತು, ಪಶ್ಚಾತ್ತಾಪ ಇಲ್ಲ, ಎಲ್ಲ ಹೀಲ್‌ ಆಗಿದೆ - ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಪದ್ಮಜಾ ರಾವ್

Actress Padmaja Rao: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕುಸುಮಾ ಪಾತ್ರದಿಂದ ಜನರ ಮನಸ್ಸು ಗೆದ್ದಿರುವ ನಟಿ ಪದ್ಮಜಾ ರಾವ್‌ ಅವರು ರ್ಯಾಪಿಡ್‌ ರಶ್ಮಿ ಯುಟ್ಯೂಬ್‌ ಚಾನೆಲ್‌ಗೆ ನೀಡಿದ ಸಂದರ್ಶನದಲ್ಲಿ ಮೊದಲ ಮದುವೆ ಬಗ್ಗೆ ಮಾತನಾಡಿದ್ದಾರೆ. ಹಾಗಾದರೆ ಮೊದಲ ಮದುವೆ ಯಾಕೆ ಮುರಿಯಿತು?

Read Full Story
03:56 PM (IST) Apr 02

Karnataka News Live 2 April 2026ಉತ್ತರ ಕನ್ನಡದ ರೈತನ ತೋಟದ ವಿಸ್ಮಯ - ಒಂದೇ ಹಣ್ಣಿಗೆ 60 ಚಿಕ್ಕ ಚಿಕ್ಕ ಕಾಯಿಗಳು!

ಉತ್ತರ ಕನ್ನಡದ ಶೇವಾಳಿ ಗ್ರಾಮದ ರೈತರೊಬ್ಬರ ತೋಟದಲ್ಲಿ ಒಂದು ಅನಾನಸ್ ಗಿಡದಲ್ಲಿ 60ಕ್ಕೂ ಹೆಚ್ಚು ಚಿಕ್ಕ ಚಿಕ್ಕ ಅನಾನಸ್‌ಗಳು ಬೆಳೆದು ಅಚ್ಚರಿ ಮೂಡಿಸಿವೆ. ಇದು ಥೈಲ್ಯಾಂಡ್ ಮೂಲದ ಅಪರೂಪದ 'ಮೆಡುಸಾ ಅನಾನಸ್' ತಳಿಯಾಗಿರಬಹುದು ಎಂದು ಶಂಕಿಸಲಾಗಿದ್ದು, ಇದನ್ನು ಅಲಂಕಾರಿಕ ಉದ್ದೇಶಗಳಿಗಾಗಿ ಹೆಚ್ಚಾಗಿ ಬೆಳೆಯಲಾಗುತ್ತದೆ.
Read Full Story
03:39 PM (IST) Apr 02

Karnataka News Live 2 April 2026ನಾಸ್ತಿಕನಾದರೂ ತಾಯಿಯ ಆಸೆಗೆ ಅಗೌರವ ತೋರಲ್ಲ - ಟ್ರೋಲಿಗರ ಬಾಯಿ ಮುಚ್ಚಿಸಿದ ನಟ ಪ್ರಕಾಶ್ ರಾಜ್

ನಟ ಪ್ರಕಾಶ್ ರಾಜ್ ಅವರ ತಾಯಿ ಸ್ವರ್ಣಲತಾ ನಿಧನರಾದರು. ನಾಸ್ತಿಕರಾದ ಪ್ರಕಾಶ್ ರಾಜ್, ತಾಯಿಯ ಅಂತ್ಯಕ್ರಿಯೆಯನ್ನು ಅವರ ನಂಬಿಕೆಯಂತೆ ಕ್ರಿಶ್ಚಿಯನ್ ಸಂಪ್ರದಾಯದಲ್ಲಿ ನಡೆಸಿದ್ದಕ್ಕೆ ಟ್ರೋಲ್‌ಗೆ ಒಳಗಾದರು.

Read Full Story
02:59 PM (IST) Apr 02

Karnataka News Live 2 April 2026ಹುಬ್ಬಳ್ಳಿ-ಹೈದರಾಬಾದ್‌ಗೆ ಮಧ್ಯೆ ರಾಜರಥ ಎಸಿ ಸ್ಲೀಪರ್ ಬಸ್ ಆರಂಭ, ಸಮಯ, ಟಿಕೆಟ್ ದರ ಸಂಪೂರ್ಣ ಮಾಹಿತಿ ಇಲ್ಲಿದೆ

ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯು (NWKRTC) ಹುಬ್ಬಳ್ಳಿ ಮತ್ತು ಹೈದರಾಬಾದ್ ನಡುವೆ ಹೊಸ ರಾಜರಥ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆರಂಭಿಸಿದೆ. ಈ ಬಸ್ ಗದಗ, ಕೊಪ್ಪಳ, ರಾಯಚೂರು ಮಾರ್ಗವಾಗಿ ಸಂಚರಿಸಲಿದ್ದು, ಪ್ರಯಾಣಿಕರಿಗೆ ಆರಾಮದಾಯಕ ಪ್ರಯಾಣದ ಅನುಭವ ನೀಡಲಿದೆ. ಮುಂಗಡ ಟಿಕೆಟ್ ಬುಕ್ಕಿಂಗ್ ಹಾಗೂ ವಿಶೇಷ ರಿಯಾಯಿತಿಗಳು ಲಭ್ಯವಿವೆ.
Read Full Story
02:40 PM (IST) Apr 02

Karnataka News Live 2 April 2026ನವ ಮಂಗಳೂರು ಬಂದರು ಪ್ರಾಧಿಕಾರದಿಂದ ಉನ್ನತ ಹುದ್ದೆಗೆ ಅರ್ಜಿ ಆಹ್ವಾನ, 2 ಲಕ್ಷಕ್ಕೂ ಅಧಿಕ ವೇತನ!

ನವ ಮಂಗಳೂರು ಬಂದರು ಪ್ರಾಧಿಕಾರವು (NMPA) ಸೀನಿಯರ್ ಡೆಪ್ಯೂಟಿ ಟ್ರಾಫಿಕ್ ಮ್ಯಾನೇಜರ್ ಹುದ್ದೆಗಳ ಭರ್ತಿಗೆ ನೇಮಕಾತಿ ಪ್ರಕಟಿಸಿದೆ. ಪದವಿ ಪೂರ್ಣಗೊಳಿಸಿದ ಅರ್ಹ ಅಭ್ಯರ್ಥಿಗಳು ಈ ಉನ್ನತ ವೇತನದ ಸರ್ಕಾರಿ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಆಯ್ಕೆಯಾದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ನೇಮಕ ಮಾಡಿಕೊಂಡು ಮಂಗಳೂರಿನಲ್ಲಿ ಉದ್ಯೋಗ ನೀಡಲಾಗುತ್ತದೆ.
Read Full Story