MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • Pavithra Bandhana Serial: ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?

Pavithra Bandhana Serial: ತಿಲಕ್‌ ಪಾತ್ರ ಮತ್ತೆ ಬರಲಿದೆಯಾ? ನಟ ಯಶಸ್‌ ಕೃಷ್ಣ ಹೇಳಿದ ಸತ್ಯ ಏನು?

Colors Kannada Pavithra Bandhana Serial: ಪವಿತ್ರ ಬಂಧನ ಧಾರಾವಾಹಿಯಲ್ಲಿ ತಮ್ಮಯ್ಯ ಎಂದೇ ಫೇಮಸ್‌ ಆಗಿರೋ ತಿಲಕ್‌ ದೇಶಮುಖ್‌ ಅಲಿಯಾಸ್‌ ಯಶಸ್‌ ಕೃಷ್ಣ ಅವರ ಪಾತ್ರ ಮುಕ್ತಾಯವಾಗಿದೆ. ಇದನ್ನು ವೀಕ್ಷಕರು ನೋಡಿ ಬೇಸರ ಮಾಡಿಕೊಂಡಿದ್ದರು. ಈ ಪಾತ್ರ ಮರಳಿ ಬರಲಿದೆಯಾ? 

1 Min read
Author : Padmashree Bhat
Published : Apr 02 2026, 10:59 PM IST
Share this Photo Gallery
  • FB
  • TW
  • Linkdin
  • Whatsapp
15
ತಿಲಕ್‌ ಪಾತ್ರ ಮುಕ್ತಾಯ!
Image Credit : instagram

ತಿಲಕ್‌ ಪಾತ್ರ ಮುಕ್ತಾಯ!

ಇನ್ನೇನು ಪವಿತ್ರಾ ಜೊತೆ ಮದುವೆ ಆಗಬೇಕಿದ್ದ ತಿಲಕ್ ಅಪಘಾತವೊಂದರಲ್ಲಿ ಸಾಯುತ್ತಾನೆ. ಮದುವೆ ದಿನವೇ ತಿಲಕ್‌ ಸಾಯುತ್ತಾನೆ. ಇದು ವೀಕ್ಷಕರಿಗೆ ಬೇಸರ ತಂದಿದೆ. ಈ ಪಾತ್ರ ಮತ್ತೆ ಮರಳಿ ಬರಬೇಕು ಎಂದು ವೀಕ್ಷಕರು ಹೇಳುತ್ತಿದ್ದಾರೆ. ಈ ಬಗ್ಗೆ ಯಶಸ್‌ ಕೃಷ್ಣ ಅವರು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ.

25
ಈ ವಿಷಯ ಮೊದಲೇ ಗೊತ್ತಿತ್ತು
Image Credit : instagram

ಈ ವಿಷಯ ಮೊದಲೇ ಗೊತ್ತಿತ್ತು

ಪವಿತ್ರ ಬಂಧನ ಧಾರಾವಾಹಿಯಲ್ಲಿ ಅಧಿಕೃತವಾಗಿ ನನ್ನ ಪಯಣ ಮುಗಿದಿದೆ. ಈ ಪಾತ್ರ ಇಷ್ಟೇ ದಿನ ಬರುತ್ತದೆ ಎಂದು ನನಗೆ ಮೊದಲೇ ಗೊತ್ತಿತ್ತು. ಇಷ್ಟು ಜನರು ಇಷ್ಟು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ, ಕನೆಕ್ಟ್‌ ಆಗುತ್ತಾರೆ ಎಂದು ಗೊತ್ತಿರಲಿಲ್ಲ ಎಂದು ಯಶಸ್‌ ಕೃಷ್ಣ ಹೇಳಿದ್ದಾರೆ.

Related Articles

Related image1
‌Bigg Boss ಶೋನಿಂದ ಹೊರಬಂದ 2 ವಾರಕ್ಕೆ, ಪವಿತ್ರ ಬಂಧನಕ್ಕೆ ಕಾಲಿಟ್ಟ ಸೂರಜ್‌ ಸಿಂಗ್; ಇದಪ್ಪಾ ಗುಡ್‌ನ್ಯೂಸ್!
Related image2
ಹಿಂದೂಗಳ ಪವಿತ್ರ ಗಂಗಾ ನದಿಯಲ್ಲಿ ಇಫ್ತಾರ್ ಕೂಟ; ಬಿರಿಯಾನಿ ತಿಂದು ಮೂಳೆ ನದಿಗೆ ಎಸೆದ 14 ಮುಸ್ಲಿಂ ಯುವಕರ ಬಂಧನ!
35
ತಿಲಕ್‌ ಪಾತ್ರ ಹೇಗಿದೆ?
Image Credit : instagram

ತಿಲಕ್‌ ಪಾತ್ರ ಹೇಗಿದೆ?

ತಿಲಕ್‌ ತುಂಬ ಲವ್‌ಲೀ ಹುಡುಗ, ಅಪ್ಪ-ಅಮ್ಮ ಸೇರಿದಂತೆ ಎಲ್ಲರಿಗೂ ಕನೆಕ್ಟ್‌ ಆಗಿದ್ದ ಹುಡುಗ. ನಮ್ಮ ಮನೆಯಲ್ಲಿ ಈ ರೀತಿ ಹುಡುಗ ಇರಬೇಕು, ಈ ರೀತಿ ಲವ್ವರ್‌ ಇರಬೇಕು ಎನ್ನುವ ಪಾತ್ರ ಇದಾಗಿದೆ ಎಂದಿದ್ದಾರೆ ಯಶಸ್.‌

45
ವೀಕ್ಷಕರು ಐಡಿಯಾ ಕೊಡ್ತಿದ್ದಾರೆ
Image Credit : instagram

ವೀಕ್ಷಕರು ಐಡಿಯಾ ಕೊಡ್ತಿದ್ದಾರೆ

ವೀಕ್ಷಕರೇ ಈಗ ನಿರ್ದೇಶಕರಾಗಿರುತ್ತಾರೆ, ಮುಂದೆ ತಿಲಕ್‌ನನ್ನು ಸೀರಿಯಲ್‌ಗೆ ಕರೆಸಿ ಎಂದು ಸ್ಕ್ರಿಪ್ಟ್‌ ಕೊಡುತ್ತಿದ್ದಾರೆ. ಅವಳಿ ಪಾತ್ರ ಇದ್ದು, ಅವನು ವಿದೇಶದಿಂದ ಮತ್ತೆ ಸೀರಿಯಲ್‌ಗೆ ಬರುವ ಹಾಗೆ, ದೆವ್ವ ಆಗುವ ಹಾಗೆ ಮಾಡಿ ಎಂದೆಲ್ಲ ಸೀರಿಯಲ್‌ ಡೈರೆಕ್ಟರ್‌ಗೆ ಐಡಿಯಾ ಕೊಡುತ್ತಿದ್ದಾರೆ. ಇದನ್ನೆಲ್ಲ ನಮ್ಮ ನಿರ್ದೇಶಕರು ತಗೊಳ್ಳಬೇಕು ಎಂದು ಯಶಸ್‌ ಕೃಷ್ಣ ಹೇಳಿದ್ದಾರೆ.

55
ಮೊದಲ ಪ್ರಯತ್ನದಲ್ಲೇ ಯಶಸ್ಸು
Image Credit : Asianet News

ಮೊದಲ ಪ್ರಯತ್ನದಲ್ಲೇ ಯಶಸ್ಸು

ಇಷ್ಟುದಿನಗಳ ಕಾಲ ರಂಗಭೂಮಿಯಲ್ಲಿ ಸಕ್ರಿಯವಾಗಿದ್ದ ಯಶಸ್‌ ಅವರು ಸೀರಿಯಲ್‌ನಲ್ಲಿ ನಟಿಸಿದ್ದರು. ಇದು ಅವರ ಮೊದಲ ಪ್ರಯತ್ನವಾಗಿತ್ತು. ತಿಲಕ್‌ ಪಾತ್ರಕ್ಕೆ ಅವರು 86ನೇ ವ್ಯಕ್ತಿಯಾಗಿ ಆಡಿಷನ್‌ ಕೊಟ್ಟು ಆಯ್ಕೆಯಾಗಿದ್ದರು. ಈಗ ಈ ಪಾತ್ರವನ್ನು ಎಲ್ಲರೂ ಮೆಚ್ಚಿಕೊಂಡಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PB
Padmashree Bhat
ಪದ್ಮಶ್ರೀ ಭಟ್. ವಿಜಯವಾಣಿ, ಒನ್ ಇಂಡಿಯಾ, ವಿಜಯ ಕರ್ನಾಟಕ ಸಂಸ್ಥೆಗಳಲ್ಲಿ ಕೆಲಸ ಮಾಡಿದ್ದು, ಒಟ್ಟು ಎಂಟು ವರ್ಷಗಳಿಗೂ ಅಧಿಕ ವೃತ್ತಿಜೀವನದ ಅನುಭವವಿದೆ.‌ ಸಿನಿಮಾ, ಟಿವಿ ಕ್ಷೇತ್ರದಲ್ಲಿ ಆಸಕ್ತಿ ಇದ್ದು, ಈಗಾಗಲೇ ಸಾಕಷ್ಟು ಸುಪ್ರಸಿದ್ಧ ತಾರೆಯರ, ಸಾಧಕರ ಸಂದರ್ಶನ ಮಾಡಿರುವೆ. ಅಷ್ಟೇ ಅಲ್ಲದೆ ಬ್ಯೂಟಿ, ಆರೋಗ್ಯ, ಧಾರ್ಮಿಕ ವಿಷಯಗಳನ್ನು ಬರೆಯೋದು ನಂಗಿಷ್ಟ. ಪುಸ್ತಕ ಓದುವುದು, ಇನ್ನುಳಿದಂತೆ ಇತರರ ಸಂದರ್ಶನ ಕೇಳೋದು, ಪ್ರವಾಸ ನನ್ನ ಹವ್ಯಾಸಗಳಲ್ಲೊಂದು. ಉತ್ತರ ಕನ್ನಡದ ಸಿರಸಿಯವಳು.
ಮನರಂಜನಾ ಸುದ್ದಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಸೀರಿಯಲ್ ಶೂಟಿಂಗ್

Latest Videos
Recommended Stories
Recommended image1
Amruthadhaare Serial: ಕರ್ಮ ಬಿಡ್ಲಿಲ್ಲ, JD ತಂತ್ರಕ್ಕೆ ತಿರುಗು ಮಂತ್ರ ಹಾಕಿದ ಮಲ್ಲಿ; ತತ್ತರಿಸಿ ಹೋದ KD
Recommended image2
ಅಮ್ಮನಾಗುವ ಮುನ್ನವೇ ಮತ್ತೊಂದು ಸಿಹಿ ಸುದ್ದಿ ಹಂಚಿಕೊಂಡ ಜೊತೆ ಜೊತೆಯಲಿ ಸೀರಿಯಲ್‌ ನಟಿ
Recommended image3
ಫಸ್ಟ್‌ ಮದುವೆ ಮುರೀತು, ಪಶ್ಚಾತ್ತಾಪ ಇಲ್ಲ, ಎಲ್ಲ ಹೀಲ್‌ ಆಗಿದೆ: ಭಾಗ್ಯಲಕ್ಷ್ಮೀ ಧಾರಾವಾಹಿ ನಟಿ ಪದ್ಮಜಾ ರಾವ್
Related Stories
Recommended image1
‌Bigg Boss ಶೋನಿಂದ ಹೊರಬಂದ 2 ವಾರಕ್ಕೆ, ಪವಿತ್ರ ಬಂಧನಕ್ಕೆ ಕಾಲಿಟ್ಟ ಸೂರಜ್‌ ಸಿಂಗ್; ಇದಪ್ಪಾ ಗುಡ್‌ನ್ಯೂಸ್!
Recommended image2
ಹಿಂದೂಗಳ ಪವಿತ್ರ ಗಂಗಾ ನದಿಯಲ್ಲಿ ಇಫ್ತಾರ್ ಕೂಟ; ಬಿರಿಯಾನಿ ತಿಂದು ಮೂಳೆ ನದಿಗೆ ಎಸೆದ 14 ಮುಸ್ಲಿಂ ಯುವಕರ ಬಂಧನ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved