Director S Mahendar: ಕನ್ನಡದ ಅನೇಕ ಸಿನಿಮಾಗಳಿಗೆ ನಿರ್ದೇಶನ ಮಾಡಿರುವ ಎಸ್ ಮಹೇಂದರ್ ಅವರು ನಟ ಕೂಡ ಹೌದು, ಅವರು ಎರಡನೇ ಮದುವೆಯಾಗಿ, ಮಗ ಕೂಡ ಇದ್ದಾನೆ. ಈಗ ಎಸ್ ಮಹೇಂದರ್ ಅವರು ಎರಡನೇ ಪತ್ನಿ ಹಾಗೂ ಮಗಳು ಗೌರಿ ನಡುವಿನ ಸಂಬಂಧದ ಬಗ್ಗೆ ಮಾತನಾಡಿದ್ದಾರೆ.
- Home
- News
- State
- Karnataka News Live: 2ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್ ಮಹೇಂದರ್ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ
Karnataka News Live: 2ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್ ಮಹೇಂದರ್ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ

ಧಾರವಾಡ: ದೇಶಾದ್ಯಂತ ಸಂಚಲನ ಮೂಡಿಸಿದ್ದ ಹುಬ್ಬಳ್ಳಿಯ ನೇಹಾ ಹಿರೇಮಠ ಹ*ತ್ಯೆ ಪ್ರಕರಣದಲ್ಲಿ ಹೈಕೋರ್ಟ್ನಲ್ಲಿ ಜಾಮೀನು ಕೇಳಿದ್ದ ಆರೋಪಿ ಫಯಾಜ್ಗೆ ಮತ್ತೊಮ್ಮೆ ಹಿನ್ನಡೆಯಾಗಿದೆ. ಈಗಾಗಲೇ ಎರಡು ಬಾರಿ ಆರೋಪಿ ಫಯಾಜ್ ಜಾಮೀನು ನೀಡುವಂತೆ ಅರ್ಜಿ ಸಲ್ಲಿಸಿದ್ದ. ನ್ಯಾಯಾಲಯ ವಿಚಾರಣೆ ನಡೆಸಿ ಅರ್ಜಿ ತಿರಸ್ಕರಿಸಿತ್ತು. ಇದೀಗ 3ನೇ ಬಾರಿಯೂ ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ಪೀಠವು ತಿರಸ್ಕರಿಸಿದೆ. 2024ರ ಏ.18ರಂದು ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ಫಯಾಜ್ ನೇಹಾಳನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊ*ಲೆ ಮಾಡಿದ್ದ.
ಆರೋಪಿ ಫಯಾಜ್ ಸಲ್ಲಿಸಿದ್ದ ಜಾಮೀನು ಅರ್ಜಿ ವಜಾಗೊಂಡಿದ್ದು ನ್ಯಾಯಕ್ಕೆ ಸಂದ ಜಯ. ಸಂಪೂರ್ಣವಾಗಿ ನ್ಯಾಯಾಂಗ ಬಗ್ಗೆ ವಿಶ್ವಾಸವಿದೆ. ಆರೋಪಿ ನ್ಯಾಯಾಲಯದ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಇದರಿಂದಾಗಿ ವಿಚಾರಣೆಯಲ್ಲಿ ತುಸು ವಿಳಂಬವಾಗುತ್ತಿದೆ. ಇಷ್ಟಾಗಿಯೂ ನ್ಯಾಯ ನಮ್ಮ ಪರವಾಗಿದೆ ಎಂಬ ವಿಶ್ವಾಸವಿದೆ ಎಂದು ನೇಹಾ ಕುಟುಂಬದ ಪರ ನ್ಯಾಯವಾದಿ ರಾಘವೇಂದ್ರ ಮುತ್ತಗಿಕರ ಮಾಧ್ಯಮಗಳಿಗೆ ತಿಳಿಸಿದರು.
Karnataka News Live 17 February 20262ನೇ ಪತ್ನಿ, ಮೊದಲ ಪತ್ನಿ ಮಗಳು ಗೌರಿ ನಡುವಿನ ಸಂಬಂಧ ಹೇಗಿದೆ? ಎಸ್ ಮಹೇಂದರ್ ಮಾತು ಕೇಳಿದ್ರೆ ದಿಗ್ಬ್ರಮೆ ಆಗುತ್ತೆ
Karnataka News Live 17 February 2026ಏನಾಗ್ತಿದೆ ರಾಜ್ಯದಲ್ಲಿ? ಒಂದಲ್ಲ ಎರಡಲ್ಲ, ಮಂಡ್ಯ ಸೇರಿ 10 ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ!
ಮಂಡ್ಯ ನ್ಯಾಯಾಲಯಕ್ಕೆ ಇ-ಮೇಲ್ ಮೂಲಕ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ತೀವ್ರ ಆತಂಕ ಸೃಷ್ಟಿಯಾಗಿತ್ತು. ನ್ಯಾಯಾಧೀಶರು, ವಕೀಲರು ಸೇರಿದಂತೆ ಎಲ್ಲರನ್ನೂ ಹೊರಕಳುಹಿಸಿ, ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳದಿಂದ ತಪಾಸಣೆ ನಡೆಸಲಾಯಿತು. ತಪಾಸಣೆ ಬಳಿಕ ಇದೊಂದು ಹುಸಿ ಬೆದರಿಕೆ ಎಂದು ಖಚಿತಪಟ್ಟಿದ್ದು,
Karnataka News Live 17 February 2026ಚಿರಂಜೀವಿ ಜತೆ ರೊಮ್ಯಾನ್ಸ್ ಅನ್ನು ಎಂಜಾಯ್ ಮಾಡಲು ನನಗೆ ಆಗುತ್ತಿರಲಿಲ್ಲ ಎಂದ ನಟಿ! ಯಾರು ಆ ನಟಿ? ಏನದು ಘಟನೆ?
Karnataka News Live 17 February 2026ಬಾಂಗ್ಲಾ ಸರ್ಕಾರ ಕೆಡವಿದ ಜೆನ್-ಝೀಗಳೇನಾದರು ?
ಬಾಂಗ್ಲಾದೇಶದ ಸಾರ್ವತ್ರಿಕ ಚುನಾವಣೆಯ ಫಲಿತಾಂಶವನ್ನು ಒಂದು ಸಾಲಿನಲ್ಲಿ ಈ ರೀತಿ ವಿಶ್ಲೇಷಿಸಬಹುದು. ಅಲ್ಲಿ ಕಳೆದ ವಾರ ನಡೆದ ಚುನಾವಣೆಗೆ ಪ್ರಮುಖ ಕಾರಣವೇ- 2024ರ ಆಗಸ್ಟ್ನ ಜೆನ್-ಝೀ ಹೋರಾಟ.
Karnataka News Live 17 February 2026ಪದೇ ಪದೇ ಕಾರ್ತಿಕ್ ಮಹೇಶ್ ಜೊತೆ ಲವ್ ಗಾಸಿಪ್; ಕೊನೆಗೂ ಸತ್ಯ ಹೇಳಿದ Karna Serial ನಮ್ರತಾ ಗೌಡ
Actress Namratha Gowda Love Gossip: ಬಿಗ್ ಬಾಸ್ ಕನ್ನಡ ಸೀಸನ್ 10 ಸ್ಪರ್ಧಿಗಳಾದ ನಮ್ರತಾ ಗೌಡ ಹಾಗೂ ಕಾರ್ತಿಕ್ ಮಹೇಶ್ ಅವರು ಲವ್ನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಈಗ ಈ ಬಗ್ಗೆ ನಮ್ರತಾ ಗೌಡ ಅವರು ಸೋಶಿಯಲ್ ಮೀಡಿಯಾದಲ್ಲಿಯೇ ಪ್ರತಿಕ್ರಿಯೆ ನೀಡಿದ್ದಾರೆ.
Karnataka News Live 17 February 2026ಸುರಂಗ ಮಾರ್ಗ, ಫ್ಲೈಓವರ್ ಆಗುಂಬೆ ಘಾಟಿಗೆ ಮಹಾ ಯೋಜನೆ? ಬದಲಾಗಲಿದೆ ಮಲೆನಾಡಿನ ದಾರಿ
ಮಲೆನಾಡು-ಕರಾವಳಿ ಸಂಪರ್ಕದ ಕೊಂಡಿಯಾಗಿರುವ ಆಗುಂಬೆ ಘಾಟಿ ರಸ್ತೆಯನ್ನು ಸುರಂಗ ಅಥವಾ ಫ್ಲೈಓವರ್ ಮೂಲಕ ವಿಸ್ತರಿಸುವ ಯೋಜನೆ ಸಿದ್ಧವಾಗಿದೆ. ತೀರ್ಥಹಳ್ಳಿ ಪಟ್ಟಣದಲ್ಲಿ ಪ್ರಯಾಣಿಕರ ತಂಗುದಾಣ, ಬೈಪಾಸ್ ರಸ್ತೆ ಮತ್ತು ಹೆದ್ದಾರಿ ವಿಸ್ತರಣೆಯಂತಹ ಹಲವು ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಾಗಿದೆ.
Karnataka News Live 17 February 2026ನಟ ವಿಜಯ್ - ತ್ರಿಶಾ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಕೀಳು ಹೇಳಿಕೆ ವಿವಾದ, ವಿಷಾಧ
ಚುನಾವಣಾ ಹೊಸ್ತಿಲಿನಲ್ಲಿರುವ ತಮಿಳುನಾಡಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನೈನಾರ್ ನಾಗೇಂದ್ರನ್ ಟಿವಿಕೆ ಪಕ್ಷದ ಮುಖ್ಯಸ್ಥ ನಟ ವಿಜಯ್ ಮತ್ತು ನಟಿ ತ್ರಿಶಾ ಕೃಷ್ಣನ್ ಸಂಬಂಧದ ಬಗ್ಗೆ ಕೀಳು ಹೇಳಿಕೆ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ.
Karnataka News Live 17 February 2026KMF - ಗ್ರಾಹಕರೇ ಆತಂಕ ಬೇಡ; ನಂದಿನಿ ಹಾಲು ಸಂಪೂರ್ಣ ಸುರಕ್ಷಿತ, ತಪ್ಪು ಮಾಹಿತಿ ಹರಡಿದ್ರೆ ಕಾನೂನು ಕ್ರಮ ಎಚ್ಚರಿಕೆ
ಸಾಮಾಜಿಕ ಜಾಲತಾಣಗಳಲ್ಲಿ ನಂದಿನಿ ಉತ್ಪನ್ನಗಳ ಗುಣಮಟ್ಟದ ಕುರಿತು ಹರಡುತ್ತಿರುವ ವದಂತಿಗಳನ್ನು ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ತಳ್ಳಿಹಾಕಿದೆ. ನಂದಿನಿ ಹಾಲು ಮತ್ತು ಹಾಲಿನ ಉತ್ಪನ್ನಗಳು FSSAI ಮಾನದಂಡಗಳ ಅಡಿ ಸಂಪೂರ್ಣ ಸುರಕ್ಷಿತವಾಗಿದ್ದು, ಗ್ರಾಹಕರು ಆತಂಕ ಪಡುವ ಅಗತ್ಯವಿಲ್ಲ ಎಂದು ಸ್ಪಷ್ಟನೆ
Karnataka News Live 17 February 2026Bengaluru - ರಾಜಧಾನಿಗೆ ಬಂದ ಜಮ್ಕೋ - ಪರಿಣಿತ ಎಂಜಿನಿಯರಿಂಗ್ ಉದ್ಯೋಗಿಗಳಿಗೆ ಸುವರ್ಣವಕಾಶ
ವಿಮಾನ ಕ್ಯಾಬಿನ್ ಒಳಾಂಗಣ ಬಿಡಿಭಾಗ ತಯಾರಿಕಾ ಸಂಸ್ಥೆಯಾದ ಜಮ್ಕೋ, ಬೆಂಗಳೂರಿನಲ್ಲಿ ತನ್ನ ಉತ್ಪನ್ನ ಎಂಜಿನಿಯರಿಂಗ್ ಕೇಂದ್ರವನ್ನು ಸ್ಥಾಪಿಸಲು ಮುಂದಾಗಿದೆ. ಪರಿಣಿತ ಎಂಜಿನಿಯರಿಂಗ್ ಉದ್ಯೋಗಿಗಳು ಮತ್ತು ಉತ್ತಮ ವೈಮಾಂತರಿಕ್ಷ ವಾತಾವರಣದಿಂದಾಗಿ ಈ ಹೂಡಿಕೆಗೆ ಸಂಸ್ಥೆ ಆಸಕ್ತಿ ತೋರಿದೆ.
Karnataka News Live 17 February 2026Naa Ninna Bidalaare Serial ಅಂಬಿ ಪಾತ್ರಧಾರಿ ನೀತಾ ಅಶೋಕ್ಗೆ ಸರ್ಜರಿ; ಸದ್ಯ ಶೂಟಿಂಗ್ನಲ್ಲಿ ಭಾಗವಹಿಸಲ್ಲ!
Naa Ninna Bidalaare Kannada Serial Episode: ನಾ ನಿನ್ನ ಬಿಡಲಾರೆ ಧಾರಾವಾಹಿಯಲ್ಲಿ ಶೂಟಿಂಗ್ ಮಾಡುವಾಗ, ಅಂಬಿಕಾ ಪಾತ್ರಧಾರಿ ನೀತಾ ಅಶೋಕ್ ಅವರ ಕಾಲಿಗೆ ಗಾಯ ಆಗಿದೆ, ಹೀಗಾಗಿ ಸರ್ಜರಿ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
Karnataka News Live 17 February 2026ಅಮೆರಿಕದ ದೈತ್ಯ ಆ್ಯಂಥ್ರೋಪಿಕ್ಗೆ ಬೆಳಗಾವಿ ಸಂಸ್ಥೆಯ ಸವಾಲು; ಸಮನ್ಸ್ ನೀಡಿದ ನ್ಯಾಯಾಲಾಯ
ಬೆಳಗಾವಿ ಮೂಲದ ಅಂಥ್ರೋಪಿಕ್ ಸಾಫ್ಟ್ವೇರ್ ಪ್ರೈ.ಲಿ. ಕಂಪನಿಯು, ತನ್ನದೇ ಹೆಸರು ಬಳಸುತ್ತಿರುವ ಅಮೆರಿಕದ ಪ್ರಸಿದ್ಧ ಎಐ ಸಂಸ್ಥೆ ಅಂಥ್ರೋಪಿಕ್ ಪಿಬಿಸಿ ವಿರುದ್ಧ ಮೊಕದ್ದಮೆ ಹೂಡಿದೆ. ಭಾರತದಲ್ಲಿ 'ಅಂಥ್ರೋಪಿಕ್' ಹೆಸರಿನ ಮೇಲಿನ ಪ್ರಾಥಮಿಕ ಹಕ್ಕು ತಮಗೇ ಸೇರಿದೆ ಎಂದು ಹೇಳಿದೆ.
Karnataka News Live 17 February 2026ನೀವು ಗಮನಿಸಬೇಕಾದ ಹಣ ದಂಡ ಮಾಡುವ 9 ಬಗೆಗಳು
ಎರಿಕ್ ಸ್ಕಡರ್ ಎಂಬ ಆರ್ಥಿಕ ತಜ್ಞ, ‘ ನನ್ನ ಕ್ಲೈಂಟ್ಗಳಿಗೆ ಹಣ ಎಲ್ಲಿ ಖರ್ಚಾಗುತ್ತೆ ಅಂತ ನಾನು ತೋರಿಸಿದಾಗ; ಅಯ್ಯೋ, ಇದಕ್ಕೆಲ್ಲ ಇಷ್ಟು ಹಣ ಖರ್ಚು ಮಾಡ್ತಿದ್ದೀನಿ ಅಂತ ಗೊತ್ತೇ ಇರಲಿಲ್ಲ ಎಂದು ಉದ್ಗರಿಸುತ್ತಾರೆ. ಆದರೆ ಇಂಥಾ ಸೂಕ್ಷ್ಮ ಎಚ್ಚರ ನಾಳೆಗಳ ಟೆನ್ಶನ್ ಅನ್ನು ಅರ್ಧ ಕಡಿಮೆ ಮಾಡುತ್ತದೆ’
Karnataka News Live 17 February 2026ಅವನಿಗೆ ಐಶ್ವರ್ಯಾ, ಇವನಿಗೆ ರೇಣುಕಾ, ಮತ್ತೊಬ್ಬನಿಗೆ ಆರೋಹಿ - ಮೂರು ಹೆಸರಿನ ಧಾರವಾಡದ ಸುಂದ್ರಿ
Karnataka News Live 17 February 2026'ಬೇರೆಯವರಿಗೂ ಮಕ್ಕಳಿದ್ದಾರೆ..' - ಮಗಳ ಪರೀಕ್ಷೆಗಾಗಿ 20 ದಿನ ಬೇಲ್ ಕೋರಿದ್ದ ಪವಿತ್ರಾಗೌಡ ಅರ್ಜಿ ವಜಾ
ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ, ಮಗಳ ಪರೀಕ್ಷೆಯ ಕಾರಣ ನೀಡಿ ನಟಿ ಪವಿತ್ರಾ ಗೌಡ ಸಲ್ಲಿಸಿದ್ದ 20 ದಿನಗಳ ಮಧ್ಯಂತರ ಜಾಮೀನು ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ಪ್ರಕರಣದ ಇತರ ಆರೋಪಿಗಳಿಗೂ ಮಕ್ಕಳಿದ್ದಾರೆ ಎಂದು ಅಭಿಪ್ರಾಯಪಟ್ಟ ಕೋರ್ಟ್, ದರ್ಶನ್ ಸೇರಿ ಏಳು ಆರೋಪಿಗಳ ನ್ಯಾಯಾಂಗ ಬಂಧನ ವಿಸ್ತರಿಸಿದೆ.
Karnataka News Live 17 February 2026Bhagyalakshmi Serial - ಬಿಲ್ಡಿಂಗ್ನಿಂದ ಹಾರಿ ಆತ್ಮ*ಹತ್ಯೆ ಮಾಡ್ಕೊಂಡ ಶ್ರೇಷ್ಠ; ಪಾತ್ರ ಮುಗಿದೋಯ್ತಾ?
Bhagyalakshmi Kannada Serial Episode: ಭಾಗ್ಯಲಕ್ಷ್ಮೀ ಧಾರಾವಾಹಿಯಲ್ಲಿ ಕೊನೆಗೂ ತಾಂಡವ್ನನ್ನು ಭಾಗ್ಯ ಮನೆಯೊಳಗಡೆ ಕರೆದಳು. ಶ್ರೇಷ್ಠ ಇದನ್ನೆಲ್ಲ ತಡೆಯೋಕೆ ಎಷ್ಟೇ ಪ್ರಯತ್ನಪಟ್ಟರೂ ಕೂಡ ಆಗಲೇ ಇಲ್ಲ. ಈಗ ಶ್ರೇಷ್ಠ ತನ್ನನ್ನು ತಾನೇ ಮುಗಿಸಿಕೊಳ್ಳೋಕೆ ನೋಡುತ್ತಿದ್ದಾಳೆ.
Karnataka News Live 17 February 2026ಮಣ್ಣಾಗಿದ್ದ ಗೋಡೆಗಳಿಗೆ ಸ್ವಂತ ಹಣದಲ್ಲೇ ಬಣ್ಣ ತುಂಬಿದ ಕನಕಗಿರಿ ಸರ್ಕಾರಿ ಪ್ರೌಢಶಾಲಾ ವಿದ್ಯಾರ್ಥಿಗಳು!
ಕೊಪ್ಪಳ ಜಿಲ್ಲೆಯ ಕನಕಗಿರಿ ಕರ್ನಾಟಕ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿಗಳು ಸ್ವಂತ ಹಣವನ್ನು ಸಂಗ್ರಹಿಸಿ, ತಮ್ಮ ಶಾಲಾ ಕೊಠಡಿಗಳಿಗೆ ತಾವೇ ಬಣ್ಣ ಹಚ್ಚಿದ್ದಾರೆ. ಸಂಗ್ರಹವಾದ ಹಣವು ಕಾರ್ಮಿಕರ ಕೂಲಿಗೆ ಸಾಕಾಗದ ಕಾರಣ, 'ಶಾಲೆಗಾಗಿ ನಾವು' ಎಂಬ ಧ್ಯೇಯದಡಿ ವಿದ್ಯಾರ್ಥಿಗಳೇ ಬಣ್ಣ ಹಚ್ಚಿದ್ದಾರೆ.
Karnataka News Live 17 February 2026ಚಿಕ್ಕಮಗಳೂರಿನಲ್ಲಿ ಕೋಮು ಘರ್ಷಣೆ; ಇಡೀ ನಗರ ಬೂದಿ ಮುಚ್ಚಿದ ಕೆಂಡ - ರಾತ್ರೋರಾತ್ರಿ ನಡೆದಿದ್ದೇನು?
Karnataka News Live 17 February 2026ಉ.ಕೊರಿಯಾ - ಕಿಮ್ ಪಟ್ಟಕ್ಕಾಗಿ 13 ವರ್ಷದ ಪುತ್ರಿ, ಸಹೋದರಿ ನಡುವೆ ಜಟಾಪಟಿ
ಉತ್ತರ ಕೊರಿಯಾದ ಸರ್ವಾಧಿಕಾರಿ ಕಿಮ್ ಉಂಗ್ ಜಾನ್, ಉತ್ತರಾಧಿಕಾರಿ ಸ್ಥಾನಕ್ಕೆ, ಕಿಮ್ರ ಪುತ್ರಿ ಕಿಮ್ ಜು ಆಯೆ ಮತ್ತು ಸಹೋದರಿ ಕಿಮ್ ಯೋ-ಜಾಂಗ್ ನಡುವೆ ಕಲಹ ಆರಂಭವಾಗಿದೆ ಎಂದು ವರದಿಗಳು ತಿಳಿಸಿವೆ.
Karnataka News Live 17 February 2026BEL Missile Integration Unit ಬಿಇಎಲ್ನ ಹೈಟೆಕ್ ಕ್ಷಿಪಣಿ ಸಂಯೋಜನಾ ಸಂಕೀರ್ಣಕ್ಕೆ ರಾಜನಾಥ್ ಸಿಂಗ್ ಚಾಲನೆ
BEL Missile Integration Unit Bengaluru ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬೆಂಗಳೂರಿನ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ನಲ್ಲಿ ನೂತನ 'ಕ್ಷಿಪಣಿ ಸಂಯೋಜನಾ ಘಟಕ' ಉದ್ಘಾಟಿಸಿದರು. ಈ ಸಂದರ್ಭ, 'ಆಕಾಶ್' ಕ್ಷಿಪಣಿ ವ್ಯವಸ್ಥೆ 'ಫೈರ್ ಕಂಟ್ರೋಲ್ ರಾಡಾರ್' ಅನ್ನು ಅನಾವರಣಗೊಳಿಸಿದರು.
Karnataka News Live 17 February 2026ಸಿಬಿಎಸ್ಇ 10ನೇ ಕ್ಲಾಸ್ಗೆ 2 ಎಕ್ಸಾಂ - ಮೊದಲನೇ ಪರೀಕ್ಷೆ ಹಾಜರಿ ಕಡ್ಡಾಯ
ರಾಷ್ಟ್ರೀಯ ಶಿಕ್ಷಣ ನೀತಿಯಡಿ (ಎನ್ಇಪಿ) ಈ ವರ್ಷದಿಂದ 2 ಹಂತಗಳಲ್ಲಿ 10ನೇ ತರಗತಿಯ ಪರೀಕ್ಷೆ ನಡೆಸಲು ಆರಂಭಿಸಿರುವ ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ(ಸಿಬಿಎಸ್ಇ), ಅದಕ್ಕೆ ಸಂಬಂಧಿಸಿದ ನಿರ್ದೇಶನಗಳನ್ನು ಜಾರಿ ಮಾಡಿದೆ.