ಅಯೋಧ್ಯೆ ಮಾತ್ರವಲ್ಲದೆ ಹಲವು ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಇನ್ನೂ ಕೆಲ ಮಹತ್ವದ ವಿಚಾರಗಳ ಬಗ್ಗೆ ಸುಪ್ರೀಂಕೋರ್ಟ್ ಇದೇ ನವೆಂಬರ್ 17 ರ ಒಳಗೆ ತೀರ್ಪು ಪ್ರಕಟಿಸಲಿದೆ. 2019 ರ ನವೆಂಬರ್ ತಿಂಗಳು ಬಹುಶಃ ಐತಿಹಾಸಿಕ ಮಾಸವಾಗಲಿದೆ.
India Nov 11, 2019, 5:05 PM IST
ಅಯೋಧ್ಯೆ ತೀರ್ಪು ಸರ್ವಾನುಮತದ್ದಾಗಿತ್ತು. ಆದರೆ ಇತರ ನ್ಯಾಯಾಧೀಶರ ಅನುಮೋದನೆಯೊಂದಿಗೆ ಇದನ್ನು ಬರೆದವರು ನ್ಯಾ| ಡಿ.ವೈ. ಚಂದ್ರಚೂಡ ಒಬ್ಬರೇ ಎಂದು ವಿಶ್ಲೇಷಿಸಲಾಗಿದೆ.
India Nov 11, 2019, 1:20 PM IST
ಶತಮಾನಗಳ ಹಳೆಯ ರಾಮ ಜನ್ಮ ಭೂಮಿ-ಬಾಬ್ರಿ ಮಸೀದಿ ಪ್ರಕರಣದ ತೀರ್ಪು ನೀಡಿದ ಐವರು ನ್ಯಾಯಮೂರ್ತಿಗಳ ಭದ್ರತೆಯನ್ನು ಮುಂಜಾಗ್ರತಾ ಕ್ರಮವಾಗಿ ಹೆಚ್ಚಿಸಲಾಗಿದೆಎಂದು ಅಧಿಕಾರಿಗಳು ತಿಳಿಸಿದ್ದಾರೆ.
India Nov 11, 2019, 12:31 PM IST
ಅಯೋಧ್ಯೆ ವಿವಾದದ ಕುರಿತ ಸರ್ವೋಚ್ಚ ನ್ಯಾಯಾಲಯದ ತೀರ್ಪಿಗೆ ಸಂಬಂಧಿಸಿದಂತೆ ಕಾಂಗ್ರೆಸ್ ಮುಖವಾಣಿ ಪತ್ರಿಕೆ ‘ನ್ಯಾಷನಲ್ ಹೆರಾಲ್ಡ್’ ಪ್ರಕಟಿಸಿದ ಲೇಖನವೊಂದು ವಿವಾದಕ್ಕೆ ಕಾರಣವಾಗಿದೆ.
India Nov 11, 2019, 10:41 AM IST
ರಾಮಜನ್ಮಭೂಮಿ-ಬಾಬ್ರಿ ಮಸೀದಿ ವಿವಾದದ ತೀರ್ಪು ನೀಡಿದ ಸುಪ್ರೀಂ ಕೋರ್ಟ್, ‘ಬಾಬ್ರಿ ಮಸೀದಿ ಧ್ವಂಸದ ಪರಿಹಾರಾರ್ಥವಾಗಿ, ಪ್ರತ್ಯೇಕ ಮಸೀದಿ ಕಟ್ಟಲು 5 ಎಕರೆ ಜಾಗವನ್ನು ಅಯೋಧ್ಯೆಯ ಪ್ರಮುಖ ಸ್ಥಳದಲ್ಲಿ ಸುನ್ನಿ ವಕ್ಫ್ ಮಂಡಳಿಗೆ ನೀಡಬೇಕು’ ಎಂದು ಮೊನ್ನೆ ಆದೇಶಿಸಿತ್ತು. ಆದರೆ ಈ ಜಮೀನು ರಾಮಜನ್ಮಭೂಮಿ ಸನಿಹ ದೊರಕುವ ಸಾಧ್ಯತೆ ಇಲ್ಲ. ಸರಯೂ ನದಿಯ ಆಚೆ, ಅಂದರೆ ಜನ್ಮಭೂಮಿಯಿಂದ 15 ಕಿ.ಮೀ. ದೂರದಲ್ಲಿ ಜಮೀನು ಲಭ್ಯತೆ ಸಾಧ್ಯವಿದೆ ಎಂದು ತಿಳಿದುಬಂದಿದೆ.
India Nov 11, 2019, 8:44 AM IST
ಪಾಕಿಸ್ತಾನ ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಅಲ್ಪಸಂಖ್ಯಾತ ಸಮುದಾಯಕ್ಕೆ ಮಾಡಿದ ಮೋಸ ಎಂದು ಸುಪ್ರೀಂಕೋರ್ಟ್ ಅಯೋಧ್ಯೆ ತೀರ್ಪನ್ನು ಬಣ್ಣಿಸಿದೆ. ಪಾಕಿಸ್ತಾನದ ನಡೆಯನ್ನು ತೀವ್ರವಾಗಿ ಖಂಡಿಸಿರುವ ಭಾರತ, ನಮ್ಮ ಆಂತರಿಕ ವಿಷಯದಲ್ಲಿ ಪಾಕಿಸ್ತಾನ ಮೂಗು ತೂರಿಸುವ ಅವಶ್ಯಕತೆಯಿಲ್ಲ ಎಂದು ಸ್ಪಷ್ಟಪಡಿಸಿದೆ.
News Nov 10, 2019, 3:09 PM IST
ಅಯೋಧ್ಯೆಯ ರಾಮಮಂದಿರ ರಾಷ್ಟ್ರ ಮಂದಿರ ಆಗಬೇಕು ಎಂದು ಸಚಿವ ಶ್ರೀರಾಮುಲು ಹೇಳಿದ್ದಾರೆ. ರಾಯಚೂರು ಜಿಲ್ಲೆಯ ಲಿಂಗಸೂಗೂರಿನಲ್ಲಿ ಮಾತನಾಡಿದ ಸಚಿವ ಶ್ರೀರಾಮುಲು ಶನಿವಾರ ಬಂದ ಅಯೋಧ್ಯೆ ತೀರ್ಪು ಯಾರದೋ ಒಬ್ಬರ ಗೆಲುವು ಅಲ್ಲ, ಭಾರತದ ಗೆಲುವು ಎಂದಿದ್ದಾರೆ.
Raichur Nov 10, 2019, 2:38 PM IST
ರಾಮ ಮಂದಿರ ವಿಚಾರದಲ್ಲಿ ಸುಪ್ರೀಂಕೋರ್ಟ್ ಸರ್ವ ಸಮ್ಮತ ತೀರ್ಪು ನೀಡಿದೆ. ಕೋರ್ಟ್ ತೀರ್ಪನ್ನು ಎಲ್ಲರೂ ಒಪ್ಪಿದ್ದಾರೆ. ತೀರ್ಪಿನಿಂದ ಎರಡು ಕೋಮುಗಳ ಮಧ್ಯದ ಆತಂಕ ದೂರವಾಗಿದೆ. ಪೊಲೀಸ್ ಇಲಾಖೆ ಹಾಗೂ ಸಾರ್ವಜನಿಕರಗೆ ಧನ್ಯವಾದಗಳು ಎಂದು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ.
Dharwad Nov 10, 2019, 2:24 PM IST
ಅಯೋಧ್ಯೆ -ಬಾಬರಿ ಮಸೀದಿ ಭೂವಿವಾದಕ್ಕೆ ಸಂಬಂಧಿಸಿಂತೆ ನಿನ್ನೆ(ನ.09) ಸುಪ್ರೀಂಕೋರ್ಟ್ ತೀರ್ಪು ಪ್ರಕಟಿಸಿದ್ದು, ವಿವಾದಿತ ಸ್ಥಳದಲ್ಲಿ ಮಂದಿರ ನಿರ್ಮಾಣಕ್ಕೆ ಅನುಮತಿ ನೀಡಿದೆ. ಇಡೀ ವಿಶ್ವದ ಗಮನ ಸೆಳೆದಿದ್ದ ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪಿನ ಕುರಿತು ನಾಡಿನ ಎಲ್ಲಾ ಪ್ರಮುಖ ದಿನಪತ್ರಿಕೆಗಳು ಮುಖಪುಟದ ಲೇಖನ ಪ್ರಟಿಸಿವೆ. ವಿವಿಧ ದಿನಪತ್ರಿಕೆಗಳು ಹೇಗೆ ಅಯೋಧ್ಯೆ ತೀರ್ಪನ್ನು ಹೇಗೆ ವಿಶ್ಲೇಷಿಸಿವೆ ಎಂಬುದನ್ನು ಇಲ್ಲಿ ಕಾಣಿ.
state Nov 10, 2019, 1:31 PM IST
ಅಯೋಧ್ಯೆ ತೀರ್ಪು ಮಡಿಕೇರಿಯ ಕಟುಂಬವೊಂದಕ್ಕೆ ಸಂತಸದ ಜೊತೆ ಸಾಂತ್ವನವನ್ನೂ ನೀಡಿದೆ. ಅಯೋಧ್ಯೆ ವಿವಾದದ ಸಂದರ್ಭ ತಮ್ಮನನ್ನು ಕಳೆದುಕೊಂಡ ಮಡಿಕೇರಿಯ ವ್ಯಕ್ತಿಯೊಬ್ಬರು ತೀರ್ಪು ಪ್ರಕಟವಾದ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ್ದಾರೆ.
Kodagu Nov 10, 2019, 12:53 PM IST
ಕುಂದಾಪುರ ವರ್ಷದ ಹಿಂದೆ ಇಲ್ಲಿನ ಬೀಜಾಡಿ-ಗೋಪಾಡಿಯ ಶ್ರೀ ರಾಮ ಭಜನಾ ಮಂದಿರದ ಅಮೃತ ಮಹೋತ್ಸವದ ಅಂಗವಾಗಿ ನಡೆದ ಶ್ರೀರಾಮ ತಾರಕಮಂತ್ರ ಕೋಟಿ ಲೇಖನ ಮಹಾಯಜ್ಞದಂದು ರಾಮಮಂದಿರ ನಿರ್ಮಾಣ ಸಂಕಲ್ಪ ಮಾಡಲಾಗಿದ್ದು, ಶನಿವಾರಕ್ಕೆ ಒಂದು ವರ್ಷ ಕಳೆದಿದೆ. ಶನಿವಾರವೇ ಅಯೋಧ್ಯೆ ತೀರ್ಪು ಪ್ರಕಟವಾಗಿದ್ದು ವಿಶೇಷ.
Udupi Nov 10, 2019, 12:24 PM IST
ಸಾಮಾಜಿಕ ಜಾಲತಾಣಗಳ ಮೇಲೆ ಪೊಲೀಸರು ಕೂಡ ಹದ್ದಿನ ಕಣ್ಣಿಟ್ಟು, ಅಡ್ಮಿನ್ಗಳಿಗೆ ಎಚ್ಚರಿಕೆ ನೀಡಿದ್ದರಿಂದ ಬಹುತೇಕ ವ್ಯಾಟ್ಸ್ಆ್ಯಪ್ ಗ್ರೂಪ್ಗಳ ಅಡ್ಮಿನ್ಗಳು ‘ಅಡ್ಮಿನ್ಸ್ ಓನ್ಲಿ ’ ಆಯ್ಕೆ ಸಕ್ರಿಯಗೊಳಿಸಿದ್ದರು. ತೀರ್ಪು ಯಾರ ಪರ ಬಂದರೂ, ನಾಗರಿಕರು ಸಂಯಮ ಕಾಪಾಡಿಕೊಳ್ಳಬೇಕು, ದೇಶದ ನ್ಯಾಯಾಲಯವನ್ನು ಗೌರವಿಸಬೇಕು ಎಂದು ಧಾರ್ಮಿಕ ನಾಯಕರು ಕರೆ ಕೊಟ್ಟರುವ ವಿಡಿಯೋಗಳು, ಪೋಸ್ಟರ್ಗಳು ಸ್ಟೇಟಸ್ಗಳಿಗೆ ಹಾಕಿಕೊಳ್ಳುವ ಮೂಲಕ ನೆಟ್ಟಿಗರು ಸಂಯಮ ಕಾಪಾಡಿಕೊಂಡಿದ್ದು ವಿಶೇಷವಾಗಿತ್ತು.
India Nov 10, 2019, 12:02 PM IST
ಅಯೋಧ್ಯೆ ತೀರ್ಪು ಏನಿರುತ್ತದೆ ಎಂಬುದು ಯಾರಿಗೂ ತಿಳಿದಿರಲಿಲ್ಲ. ಊಹನೆ ಇತ್ತೇನೋ ಅಷ್ಟೇ. ಕೊಪ್ಪಳದ ಶಂಶುದ್ದೀನ್ ಮಾತ್ರ ಎರಡು ವರ್ಷ ಹಿಂದೆಯೇ ರಾಮ ಮಂದಿರ ನಿರ್ಮಾಣಕ್ಕೆಂದು ಒಂದು ಚೀಲ ಸಿಮೆಂಟ್ ಕೊಟ್ಟಿದ್ದಾರೆ.
Koppal Nov 10, 2019, 11:58 AM IST
ಅಯೋಧ್ಯೆ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ಮಹತ್ವ, ನ್ಯಾಯ ಸಮ್ಮತ ಮತ್ತು ಪ್ರಾಯೋಗಿಕವಾದ ತೀರ್ಪು ನೀಡಿದೆ ಎಂದು ರಾಜ್ಯದ ಮಾಜಿ ಅಡ್ವೋಕೇಟ್ ಜನರಲ್ ಹಾಗೂ ಹಿರಿಯ ವಕೀಲ ಬಿ.ವಿ.ಆಚಾರ್ಯ ಅಭಿಪ್ರಾಯಪಟ್ಟಿದ್ದಾರೆ. ಸುಪ್ರೀಂ ಕೋರ್ಟ್ ತೀರ್ಪಿನ ಬಗ್ಗೆ ತಮ್ಮ ಅನಿಸಿಕೆಯನ್ನು ಹಂಚಿಕೊಂಡ ಅವರು, ಅದ್ಭುತವಾದ ತೀರ್ಪು ನೀಡಿರುವುದಕ್ಕೆ ಸುಪ್ರೀಂ ಕೋರ್ಟ್ನ್ನು ಅಭಿನಂದನೆ ಸಲ್ಲಿಸಬೇಕಾಗುತ್ತದೆ ಎಂದು ಶ್ಲಾಘಿಸಿದ್ದಾರೆ.
Bengaluru-Urban Nov 10, 2019, 11:37 AM IST
ಅಯೋಧ್ಯೆ ತೀರ್ಪಿನ ಬಗ್ಗೆ ಭಾರತ ಮಾತ್ರವಲ್ಲ, ಇಡೀ ವಿಶ್ವವೇ ಕಾತರದಿಂದ ಕಾಯುತ್ತಿತ್ತು. ಪಾಕಿಸ್ತಾನದ ಡಾನ್ ಸೇರಿ ವಿವಿಧ ಮಾಧ್ಯಮಗಳಲ್ಲಿ ಅಯೋಧ್ಯೆ ಕುರಿತ ಸುಪ್ರೀಂ ಆದೇಶದ ಸುದ್ದಿಗಳು ಹೊರ ಹೊಮ್ಮಿದ್ದು ಹೀಗೆ!
International Nov 10, 2019, 11:35 AM IST