ಕೊರೋನಾ ವೈರಸ್ ತಡೆಯಲು ಮಾಡಿದ ಲಾಕ್ಡೌನ್ನಿಂದಾಗಿ ಕಟ್ಟಡದ ಬಾಡಿಗೆ ಕಟ್ಟೋಕೂ ಅಸಾಧ್ಯ ಎನ್ನುವಂತಹ ಪರಿಸ್ಥಿತಿ ಸೃಷ್ಟಿಯಾಗಿದ್ದು, ಈಗ ಪ್ರೀ ಸ್ಕೂಲ್ಗಳನ್ನೂ ಮಾರಾಟಕ್ಕಿಡಲಾಗಿದೆ.
Karnataka Districts May 27, 2020, 9:25 PM IST
ಸುರತ್ಕಲ್ನ ಕಟ್ಟಡವೊಂದರಲ್ಲಿ ಆಹಾರ ಇಲ್ಲದೆ ಅತಂತ್ರ ಸ್ಥಿತಿಯಲ್ಲಿದ್ದ ವಲಸೆ ಕರ್ಮಿಕರಿಗೆ ಸಕಾಲದಲ್ಲಿ ತಲುಪಿದ ಕಿಟ್, ಬೆಳ್ತಂಡಿಯಲ್ಲಿ ಕ್ವಾರಂಟೈನ್ ಕೇಂದ್ರಕ್ಕೆ ನಿಗಾ ವ್ಯವಸ್ಥೆ, ಮೂಡುಬಿದಿರೆಯಲ್ಲಿ ಪರದಾಡುತ್ತಿದ್ದ ವ್ಯಕ್ತಿಗೆ ತಕ್ಷಣವೇ ಮೆಡಿಸಿನ್ ಪೂರೈಕೆ, ವೃದ್ಧಾಪ್ಯ ವೇತನಕ್ಕೆ ಕ್ರಮ. ಇದು ಲಾಕ್ಡೌನ್ ಅವಧಿಯಲ್ಲಿ ಜನತೆಯ ಕಷ್ಟಕಾರ್ಪಣ್ಯಗಳಿಗೆ ಹೀಗೂ ಸ್ಪಂದಿಸಲು ಸಾಧ್ಯವಿದೆ ಎಂಬುದನ್ನು ಮಂಗಳೂರು ಆಕಾಶವಾಣಿ ತೋರಿಸಿಕೊಟ್ಟಿದೆ.
Karnataka Districts May 27, 2020, 2:50 PM IST
ವಿಡಿಯೋ ಮಾಡಿಟ್ಟುಕೊಂಡು ನಗರಸಭೆ SDC ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಚಿತ್ರದುರ್ಗ ನಗರಸಭೆಯ ಹಿಂಭಾಗದ ನಿರ್ಮಾಣ ಹಂತದ ಕಟ್ಟಡದಲ್ಲಿ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
CRIME May 18, 2020, 4:19 PM IST
ಕೊರೊನಾ ಸಾವಿಗೆ ರಾಷ್ಟ್ರ ರಾಜಧಾನಿ ಬೆಚ್ಚಿ ಬಿದ್ದಿದೆ. ದೆಹಲಿಯಲ್ಲಿ 150 ಸಮೀಪಿಸುತ್ತಿದೆ ಸಾವಿನ ಸಂಖ್ಯೆ. ದೆಹಲಿಯಲ್ಲಿ 9333 ಜನರಿಗೆ ಕೊರೊನಾ ಪಾಸಿಟೀವ್ ಬಂದಿದೆ. ಆದರೂ ಆರ್ಥಿಕತೆಗೆ ಹಸಿರು ನಿಶಾನೆ ತೋರಲಿದೆ ದೆಹಲಿ. ಮಾರುಕಟ್ಟೆ, ಕಾಂಪ್ಲೆಕ್ಸ್ ತೆರೆಯಲು ಸರ್ಕಾರ ತೀರ್ಮಾನ ಮಾಡಿದೆ. ಬಸ್, ಸೈಕಲ್, ಆಟೋ, ಕ್ಯಾಬ್, ರಿಕ್ಷಾಗೂ ಗ್ರೀನ್ ಸಿಗ್ನಲ್ ಸಿಗಲಿದೆ. ಕಟ್ಟಡ ನಿರ್ಮಾಣ ಕಾಮಗಾರಿಗೂ ಅವಕಾಶ ನೀಡಿದೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ..!
ಕೊರೊನಾ ಸಾವಿಗೆ ಬೆಚ್ಚಿ ಬೀಳುತ್ತಿರುವ ರಾಷ್ಟ್ರ ರಾಜಧಾನಿ
India May 18, 2020, 12:25 PM IST
ಜಿಲ್ಲಾಡಳಿತ ಸಾಕಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಂಡಿದ್ದರೂ ಕೊರೋನಾ ಸೋಂಕು ಮತ್ತೆ ಪತ್ತೆಯಾಗಿರುವುದು ಸಾಕಷ್ಟು ಆತಂಕಕ್ಕೆ ಎಡೆ ಮಾಡಿಕೊಟ್ಟಿದೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.
Karnataka Districts May 13, 2020, 5:39 PM IST
ಲಾಕ್ಡೌನ್ ಹಿನ್ನೆಲೆಯಲ್ಲಿ ಸಿಮೆಂಟ್ ಉತ್ಪಾದನೆ ಮತ್ತು ಸಾಗಾಣಿಕೆಯಲ್ಲಿ ತೀವ್ರ ವ್ಯತ್ಯಯವಾಗಿರುವ ಹಿನ್ನೆಲೆಯಲ್ಲಿ ಬೆಲೆಯಲ್ಲಿ ತೀವ್ರ ಏರಿಕೆ ಕಂಡು ಬಂದಿದೆ.
Karnataka Districts May 11, 2020, 8:43 AM IST
ಜಿಲ್ಲೆಯಲ್ಲಿ ಪೊಲೀಸ್ ಅಧಿಕಾರಿಗಳ ನಡುವೆ ಮುಸುಕಿನ ಗುದ್ದಾಟ ನಡೆದಿದ್ದು, ಜನಪ್ರತಿನಿಧಿಗಳಿಗೂ ದೊಡ್ಡ ತಲೆನೋವಾಗಿದೆ. ಸರ್ಕಾರ ಸೇರಿದಂತೆ ಖಾಸಗಿಯಾಗಿಯೂ ಕಟ್ಟಡ ಕಾಮಗಾರಿಗೆ ಹಿಡಿ ಮರಳು ಸಿಗದಂತಾಗಿದೆ.
Karnataka Districts May 9, 2020, 8:04 AM IST
ಬಿಲ್ಡರ್ ಗಳ ಜತೆ ಸಿಎಂ ಬಿಎಸ್ ಯಡಿಯೂರಪ್ಪ ಸಭೆ ನಡೆಸಿ ಅನೇಕ ವಿಚಾರ ಚರ್ಚೆ ಮಾಡಿದ್ದಾರೆ. ವಲಸೆ ಕಾರ್ಮಿಕರ ವಿಚಾರದ ಬಗ್ಗೆಯೂ ಗಮನ ಹರಿಸಲಾಗಿದೆ. ಕಟ್ಟಡ ನಿರ್ಮಾಣ ಕಾರ್ಯಚಟುವಟಿಕೆ ಶೀಘ್ರ ಆರಂಭ ಮಾಡಲು ತೀರ್ಮಾನಕ್ಕೆ ಬರಲಾಗಿದೆ. ವಲಸೆ ಕಾರ್ಮಿಕರು ಬೆಂಗಳೂರು ತೊರೆಯಬಾರದು ಎಂದು ಸಿಎಂ ಮನವಿ ಮಾಡಿಕೊಂಡಿದ್ದಾರೆ.
Karnataka Districts May 5, 2020, 4:34 PM IST
ಇಲ್ಲಿಯ ತಾಲೂಕು ಕಚೇರಿಯ ಹಳೇ ಕಟ್ಟಡಕ್ಕೆ ಶನಿವಾರ ಬೆಳಗ್ಗೆ 9-30ರ ಸುಮಾರಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕಚೇರಿಯಲ್ಲಿದ್ದ ಕೆಲ ಹಳೇ ದಾಖಲೆಗಳು ಸುಟ್ಟು ಕರಕಲಾಗಿರುವ ಘಟನೆ ನಡೆದಿದೆ.
Karnataka Districts May 3, 2020, 10:12 AM IST
ಕೋವಿಡ್-19 ಸಾಂಕ್ರಾಮಿಕ ಸೋಂಕು ತಡೆಗಟ್ಟುವ ಸಲುವಾಗಿ ವಿಧಿಸಲಾಗಿದ್ದ ಲಾಕ್ಡೌನ್ ಆದೇಶದ ಹಿನ್ನಲೆಯಲ್ಲಿ ಬೇರೆ ಜಿಲ್ಲೆ, ವಿವಿಧ ರಾಜ್ಯಗಳಲ್ಲಿ ಸಿಲುಕಿಕೊಂಡಿರುವ ಕೃಷಿ ಮತ್ತು ಕಟ್ಟಡ ಕಾರ್ಮಿಕರನ್ನು ಅವರ ಸ್ವಂತ ಊರುಗಳಿಗೆ ತೆರಳಲು ಮತ್ತು ಕರೆಯಿಸಿಕೊಳ್ಳಲು ಕೆಲವು ನಿಬಂಧನೆಗಳೊಂದಿಗೆ ಸರ್ಕಾರವು ಅನುಮತಿ ನೀಡಿದೆ ಎಂದು ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ತಿಳಿಸಿದ್ದಾರೆ.
Karnataka Districts May 3, 2020, 8:11 AM IST
ವೈರಸ್ ಹರಡುವುದನ್ನು ನಿಯಂತ್ರಿಸುವ ಸಲುವಾಗಿ ದೇಶಾದ್ಯಂತ ಲಾಕ್ಡೌನ್ ಜಾರಿಯಲ್ಲಿರುವುದರಿಂದ ಸಂಕಷ್ಟಕ್ಕೆ ಒಳಗಾದ ಜನರಿಗೆ ಕೆಲವು ವ್ಯಕ್ತಿಗಳು ಹಾಗೂ ವಿವಿಧ ಸಂಘ - ಸಂಸ್ಥೆಗಳು ವಿವಿಧ ರೀತಿಯಲ್ಲಿ ನೆರವಾಗುತ್ತಿವೆ. ಅನ್ನ, ನೀರು, ಆಹಾರ ಸಾಮಗ್ರಿಗಳನ್ನು ಒದಗಿಸುತ್ತಿವೆ. ಈ ಗುಂಪಿಗೆ ಬಂಟ್ವಾಳ ತಾಲೂಕಿನ ಕಟ್ಟಡವೊಂದರ ಮಾಲಕ ಸೇರುತ್ತಾರೆ. ತನ್ನ ಕಟ್ಟದಲ್ಲಿರುವ ಎಲ್ಲಾ ಬಾಡಿಗೆದಾರರ ಒಂದು ತಿಂಗಳ ಬಾಡಿಗೆಯನ್ನು ಮನ್ನಾ ಮಾಡುವ ಮೂಲಕ ಇತರ ಕಟ್ಟಡ ಮಾಲಕರಿಗೆ ಮಾದರಿಯಾಗಿದ್ದಾರೆ.
Karnataka Districts Apr 30, 2020, 8:05 PM IST
ಕೋವಿಡ್ 19 ಲಾಕ್ಡೌನ್ ಹಿನ್ನೆಲೆ ಕಾರ್ಮಿಕರ ಸಂಕಷ್ಟಕ್ಕೆ ಸ್ಪಂದಿಸಲು ಸರ್ಕಾರ ಘೋಷಿಸಿರುವ ಎರಡು ಸಾವಿರ ರು. ನೆರವಿನ ಹಣವನ್ನು ತ್ವರಿತವಾಗಿ ನೋಂದಾಯಿತ ಅರ್ಹ ಎಲ್ಲ ಕಾರ್ಮಿಕರ ಖಾತೆಗೆ ಜಮಾ ಮಾಡಲು ಜಿಲ್ಲಾ ಕಾರ್ಮಿಕ ಅಧಿಕಾರಿಗಳಿಗೆ ಕರ್ನಾಟಕ ಸರ್ಕಾರದ ಸಾರ್ವಜನಿಕ ಜಮೀನುಗಳ ನಿಗಮದ ವ್ಯವಸ್ಥಾಪಕ ನಿರ್ದೇಶಕ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಮನೋಜ್ ಜೈನ್ ಸೂಚನೆ ನೀಡಿದ್ದಾರೆ.
Karnataka Districts Apr 29, 2020, 8:43 AM IST
ಸ್ವಲ್ಪ ಮಟ್ಟಿಗೆ ಲಾಕ್ಡೌನ್ ಸಡಿಲಿಕೆ ಮಾಡಿದ್ದರಿಂದ ದಿನಸಿ ಖರೀದಿಗೆ ಜನರು ಮಾರ್ಕೆಟ್ಗೆ ಇಳಿದ ಘಟನೆ ನಗರದಲ್ಲಿ ಇಂದು(ಸೋಮವಾರ) ನಡೆದಿದೆ. ಸಾರ್ವಜನಿಕ ಸೇವೆ, ಕಟ್ಟಡ ನಿರ್ಮಾಣಕ್ಕೆ ರಾಜ್ಯ ಸರ್ಕಾರ ಅನುಮತಿ ನೀಡಲಾಗಿದೆ. ಆದರೆ, ಜನರು ಮಾತ್ರ ಎಂದಿನಂತೆ ಸಾಮಾಜಿಕ ಅಂತರ ಕಾಯ್ದುಕೊಳ್ಳದೆ ವ್ಯಾಪಾರ ಮಾಡುವಲ್ಲಿ ಜನರು ಬ್ಯೂಸಿಯಾಗಿದ್ದಾರೆ.
Karnataka Districts Apr 27, 2020, 1:33 PM IST
ಕೆಂಗೇರಿ ಬಳಿ ಕಟ್ಟಡ ಕಾರ್ಮಿಕರಿಗೆ ಹಂಚಿರುವ ಆಹಾರ ಹಳಸಿದೆ ಅನ್ನೋ ಆರೋಪ ಕೇಳಿ ಬಂದಿದೆ. ಚೆಫ್ಟಾಕ್ ಕಂಪನಿ ಕಟ್ಟಡ ಕಾರ್ಮಿಕರಿಗೆ ಊಟ ಸರಬರಾಜು ಮಾಡುತ್ತಿದೆ. ಆದರೆ ನಿನ್ನೆಯ ಹಳಸಿದ ಆಹಾರವನ್ನೇ ನೀಡಲಾಗುತ್ತಿದೆ ಎಂದು ಕಾರ್ಮಿಕರು ಆರೋಪ ಮಾಡಿದ್ದಾರೆ. ಈ ಕುರಿತು ಚೆಫ್ಟಾಕ್ ಕಂಪನಿ ಹೇಳುವುದೇನು? ಇಲ್ಲಿದೆ .
Bengaluru-Urban Apr 26, 2020, 7:02 PM IST
ಆರ್ಥಿಕ ಪುನಶ್ಚೇತನ ದೃಷ್ಟಿಯಿಂದ ಕೇಂದ್ರ ಸರ್ಕಾರ ಲಾಕ್ಡೌನನ್ನು ಕೊಂಚ ಸಡಿಲಗೊಳಿಸಿದೆ. ಸ್ಥಗಿತಗೊಂಡಿದ್ದ ಕಾಮಗಾರಿಗಳು ಈಗ ಮರು ಚಾಲನೆ ಪಡೆದಿವೆ. ಲಾಕ್ಡೌನ್ ನಡುವೆ ಕಟ್ಟಡ ನಿರ್ಮಾಣ ಸಾಮಗ್ರಿಗಳು ಏಕಾಏಕಿ ಬೆಲೆ ಏರಿಕೆ ಕಂಡಿವೆ. ಅಷ್ಟೇ ಅಲ್ಲದೇ ಕೂಲಿ ಕಾರ್ಮಿಕರ ಕೊರತೆ ಉಂಟಾಗಿದ್ದು ಗಾರೆ ಕಾರ್ಮಿಕರ ಕೂಲಿ ಕೂಡಾ ಹೆಚ್ಚಳವಾಗಿದೆ. ಸಿಮೆಂಟ್ 380 ರಿಂದ 450 ರೂ ಹೆಚ್ಚಳವಾಗಿದೆ. ದಿನಗೂಲಿ 600 ರಿಂದ 850 ಕ್ಕೆ ಹೆಚ್ಚಳವಾಗಿದೆ. ಒಂದು ಕಡೆ ಲಾಕ್ಡೌನ್ ಬಿಸಿ ಇನ್ನೊಂದು ಕಡೆ ಬೆಲೆ ಏರಿಕೆ ಬಿಸಿ ತಟ್ಟಿದೆ.
state Apr 26, 2020, 12:02 PM IST