ಬೆಂಗಳೂರಿನ(Bengaluru) ಲಕ್ಕಸಂದ್ರದಲ್ಲಿ ಮೂರು ಅಂತಸ್ತಿನ ಕಟ್ಟಡ ಕುಸಿದಿದೆ. ಮುನ್ನೆಚ್ಚರಿಕೆ ತೆಗೆದುಕೊಂಡ ಪರಿಣಾಮ ಯಾವುದೇ ಪ್ರಾಣ ಹಾನಿಯಾಗಿಲ್ಲ. ಹಳೆಯ ಕಟ್ಟಡ ಇದು ಎಂದು ಗೊತ್ತಿದ್ದರೂ ತೆರವು ಕೆಲಸ ಮಾತ್ರ ಮಾಡಿರಲಿಲ್ಲ. ಎರಡು ವರ್ಷದಿಂದಲೇ ಕಟ್ಟಡ ವಾಲಿಕೊಂಡಿತ್ತು. ಬಾಡಿಗೆ ಆಸೆಗೆ ಬಿದ್ದು ಮಾಲೀಕ ಬಾಡಿಗೆ ಕೊಟ್ಟಿದ್ದ ಎನ್ನಲಾಗಿದೆ. ಈ ಬಗ್ಗೆ BBMP ಅಧಿಕಾರಿಗಳು ಪರಿಶೀಲನೆ ನಡೆಸಿದ್ದು ಮಾಲೀಕನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
CRIME Sep 27, 2021, 6:53 PM IST
ಸೋಷಿಯಲ್ ಮೀಡಿಯಾ ಮೂಲಕ ಅಭಿಮಾನಿಗಳ ಬಳಿ ನೆರವು ಬೇಡುತ್ತಿರುವ ನಾಗಮಂಡಲ ನಟಿ ವಿಜಯಲಕ್ಷ್ಮಿಗೆ ಸಹಾಯ ಮಾಡಲು ಹುಚ್ಚ ವೆಂಕಟ್ ಮುಂದಾಗಿದ್ದಾರೆ. ತಮ್ಮ ತಂದೆ ಆಸ್ಪತ್ರೆಯಲ್ಲಿದ್ದರೂ, ಸಾಲ ಮಾಡಿ ಚಿಕಿತ್ಸೆ ನೀಡುತ್ತಿರುವ ವೆಂಕಟ್, ತಮ್ಮ ಈ ತಿಂಗಳು ಕೈಗೆ ಬರುವ ಬಾಡಿಗೆ ಹಣವನ್ನು ವಿಜಯಲಕ್ಷ್ಮಿಗೆ ನೀಡುವುದಾಗಿ ಹೇಳಿದ್ದಾರೆ. ಕಲಾವಿದೆ ಪರ ನಿಲ್ಲಬೇಕು ಅವರಿಗೆ ಸಹಾಯ ಮಾಡಿ ಎಂದು ಅಭಿಮಾನಿಗಳಲ್ಲಿ ಮನವಿ ಮಾಡಿಕೊಂಡಿದ್ದಾರೆ.
Sandalwood Sep 27, 2021, 5:19 PM IST
ಸೋಶಿಯಲ್ ಮೀಡಿಯಾ ಮೂಲಕ ಅಳಲು ತೋಡಿಕೊಳ್ಳುತ್ತಿದ್ದ ನಟಿ ವಿಜಯಲಕ್ಷ್ಮಿ ಹೊನ್ನಾವರದ ಬಾಡಿಗೆ ಮನೆಯಲ್ಲಿ ಇದ್ದರು. ತೀವ್ರ ಆರ್ಥಿಕ ಸಂಕಷ್ಟದಿಂದ ಬಳಲುತ್ತಿರುವ ಚಲನಚಿತ್ರ ನಟಿ ವಿಜಯಲಕ್ಷ್ಮಿ ಕಳೆದ 5-6 ದಿನಗಳಿಂದ ಹೊನ್ನಾವರದ ಕರ್ಕಿಯಲ್ಲಿ ಕುಟುಂಬ ಸಮೇತ ಬಾಡಿಗೆ ಮನೆಯಲ್ಲಿದ್ದವರು ಮನೆ ಖಾಲಿ ಮಾಡಿದ್ದಾರೆ. ತಮ್ಮ ಸಂಕಷ್ಟದ ಬಗ್ಗೆ ಆಗಾಗ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ಮಾಡಿ ಹರಿ ಬಿಡುತ್ತಿದ್ದ ವಿಜಯಲಕ್ಷ್ಮೀ ಕೋವಿಡ್ ಕಾರಣದಿಂದ ಅಸ್ಪತ್ರೆ ಸೇರಿದ್ದಾಗ ಆಸ್ಪತ್ರೆ ವೆಚ್ಚವನ್ನು ಕೂಡಾ ಭರಿಸಲಾಗದ ಸ್ಥಿತಿಯಲ್ಲಿದ್ದರು. ಈ ವೇಳೆ ಹೊನ್ನಾವರದ ಸಮಾಜ ಸೇವಕ ತುಕಾರಾಮ ನಾಯ್ಕ ಕರ್ಕಿ ಅವರ ಮಗಳು ಆಸ್ಪತ್ರೆ ಬಿಲ್ ಭರಿಸಿದ್ದರು . ಅಲ್ಲದೇ, ತಂದೆಯ ಮೂಲಕ ಹೊನ್ನಾವರದ ಕರ್ಕಿಯಲ್ಲಿ ಉಳಿದುಕೊಳ್ಳಲು ಮನೆಯ ವ್ಯವಸ್ಥೆ ಮಾಡಿಕೊಟ್ಟಿದ್ದರು.
Entertainment Sep 24, 2021, 10:06 PM IST
4 ಅಡಿ ಎತ್ತರದ ಮೂರ್ತಿಗಳನ್ನು ಕೂರಿಸುವಂತಿಲ್ಲ ಎಂದು ಸರ್ಕಾರ ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ. ಈಗಾಗಲೇ ದೊಡ್ಡ ಮೂರ್ತಿಗಳನ್ನು ತಯಾರಿಸಿರುವ ತಯಾರಕರು ಮೂರ್ತಿ ಸೇಲಾಗದೇ ಕಂಗಾಲಾಗಿದ್ದಾರೆ.
state Sep 8, 2021, 12:19 PM IST
ಅಮೆರಿಕದ ಕುಬೇರ ಕೋಟ್ಯಾಧಿಪತಿ ಎಲಾನ್ ಮಸ್ಕ್, ಪುಟ್ಟದೊಂದು ಟೆಮಟ್ ಹೌಸ್ನಲ್ಲಿ ಬದುಕುತ್ತಿದ್ದಾರೆ ಎನ್ನೋದು ಎಲ್ಲರೂ ಚಕಿತರಾಗುವಂಥ ವಿಷಯವೇ.
Fashion Aug 28, 2021, 4:46 PM IST
ಕಾಲ ತುಂಬಾ ಬದಲಾಗಿದೆ. ಯಾರನ್ನು ಹತ್ತಿರ ಸೇರಿಸಬೇಕು ಎಂದರೂ ಒಮ್ಮೆ ಯೋಚನೆ ಮಾಡಿ. ಅದಕ್ಕೆ ಕಾರಣ ಬೆಂಗಳೂರಿನ ವೃದ್ಧ ದಂಪತಿಯ ಕೊಲೆ ಪ್ರಕರಣ. ಮೆನ ಬಾಡಿಗೆ ಕೊಡುವ ಮಾಲೀಕರೇ ಎಚ್ಚರ. ಮನೆ ಬಾಡಿಗೆ ನೀಡುವ ಮುನ್ನ ಹತ್ತು ಬಾರಿ ಯೋಚನೆ ಮಾಡಬೇಕಾಗುತ್ತದೆ. ನಂಬಿಕೆಯಿಟ್ಟು ಮನೆ ಬಾಡಿಗೆಗೆ ಕೊಟ್ಟಿದ್ದ ವೃದ್ಧ ದಂಪತಿಯನ್ನು ಬಾಡಿಗೆದಾರರೇ ಹತ್ಯೆ ಮಾಡಿದ್ದರು. ವರಮಹಾಲಕ್ಷ್ಮೀ ಹಬ್ಬದ ದಿನವೇ ವೃದ್ಧ ದಂತಿ ಹೆಣವಾಗಿದ್ದರು. ಅಕ್ಕ ಪಕ್ಕದವರಿಗೆ ವಿಚಾರ ಗೊತ್ತಾಗಿದೆ. ಕುಮಾರಸ್ವಾಮಿ ಲೇಔಟ್ ಪೊಲೀಸರಿಗೆ ವಿಚಾರ ತಿಳಿಸಿದ್ದಾರೆ.
CRIME Aug 27, 2021, 5:34 PM IST
ಮಹಾನಗರ ಪಾಲಿಕೆ ಪ್ರಸಕ್ತ ಜಾರಿಗೊಳಿಸುತ್ತಿರುವ ಎಸ್.ಆರ್. ದರ ಆದಾರಿತ ಆಸ್ತಿ ತೆರಿಗೆ ಪದ್ದತಿ ನಾಗರಿಕರ ಆಕ್ರೋಶಕ್ಕೆ ಎಡೆ ಮಾಡಿದೆ. ಮೊದಲೇ, ಕೊರೋನಾ ಅಲೆಯಲ್ಲಿ ತಿಂಗಳುಗಟ್ಟಲೆ ವ್ಯಾಪರ ನಷ್ಟ ಅನುಭವಿಸಿದ ವ್ಯಾಪಾರಸ್ಥರು ಮಳಿಗೆ ಬಾಡಿಗೆ ಕಟ್ಟಲು ಹೈರಾಣಾಗಿದ್ದಾರೆ.
ಇದೀಗ .ಮಹಾನಗರ ಪಾಲಿಕೆ ತೆರಿಗೆಗೆ ಮನೆ ಮಾರಿಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿದೆ! ಶಿವಮೊಗ್ಗ ಮಹಾನಗರ ಪಾಲಿಕೆಯ ಸ್ವಯಂ ಘೋಷಿತ ಆಸ್ತಿ ತೆರಿಗೆ ದರವನ್ನು ಈ ವರ್ಷ ಹೆಚ್ಚಳ ಮಾಡಿರುವುದು ಜನತೆಯನ್ನು ಕಂಗಾಲು ಮಾಡಿದೆ. ಶ್ರೀಮಂತರು ತೆರಿಗೆ ಕಟ್ಟಬಹುದು. ಆದರೆ ಮದ್ಯಮ ವರ್ಗದ ಜನ ತೆರಿಗೆ ಭಾರವನ್ನು ಹೊರಲಾರದಷ್ಟು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೊರೋನಾ ಸಂಕಷ್ಟ ಕಾಲದಲ್ಲಿ ನಿವೇಶನದ ಎಸ್.ಆರ್ ದರಕ್ಕೆ ಅನುಗುಣವಾಗಿ ತೆರಿಗೆ ವಿಧಿಸಲು ಶಿವಮೊಗ್ಗ ಮಹಾನಗರ ಪಾಲಿಕೆ ಮುಂದಾಗಿದೆ. ತೆರಿಗೆಯನ್ನು ಅವೈಜ್ಞಾನಿಕವಾಗಿ ಹೆಚ್ಚಳ ಮಾಡಿರುವುದನ್ನು ವಿರೋಧಿಸಿ ಶಿವಮೊಗ್ಗದಲ್ಲಿ ನಾಗರೀಕ ಹಿತರಕ್ಷಣಾ ವೇದಿಕೆ ನೇತೃತ್ವದಲ್ಲಿ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸಿದೆ. ವಿವಿಧ ಬಡಾವಣೆಗಳ ಕಾಲೊನಿಗಳ ಸಂಘದ ನಿವಾಸಿಗಳು ಪ್ರತಿಭಟನೆಗೆ ಸಾಥ್ ನೀಡಿವೆ
Karnataka Districts Aug 27, 2021, 1:20 PM IST
* ಸಿನಿಮಾದಲ್ಲಿ ಅವಕಾಶವಿಲ್ಲದೆ ಬೆಂಜ್ ಕಾರು ಬಾಡಿಗೆಗೆ ಬಿಟ್ಟು ಡ್ರೈವರ್ ಆಗ ಹೊರಟಿದ್ದ ಸಾಹಸ ಸಿಂಹ
* ಭಾರತಿ ವಿಷ್ಣುವರ್ಧನ್ ಮನದಾಳದ ಮೆಲುಕು
* ಅಳಿಯ ಅನಿರುದ್್ಧ ನಿರ್ದೇಶನದಲ್ಲಿ ಪಂಚಭಾಷಾ ನಟಿ ಭಾರತಿ ಕುರಿತು ‘ಬಾಳೇ ಬಂಗಾರ’ ಸಾಕ್ಷ್ಯಚಿತ್ರ
* ಹಲವು ಕುತೂಹಲಕರ ಘಟನೆ ಬಿಚ್ಚಿಟ್ಟ ತಾರೆ
Sandalwood Aug 26, 2021, 9:23 AM IST
International Aug 3, 2021, 7:54 PM IST
Whats New Jul 29, 2021, 11:24 PM IST
ಗೊಬ್ಬರದ ಬೆಲೆಯೇರಿಕೆ ಬೆನ್ನಲ್ಲೇ ಇದೀಗ ಯಂತ್ರೋಪಕರಣಗಳ ಬಾಡಿಗೆ ದರ ಹೆಚ್ಚಳಗೊಂಡಿರುವುದು ರೈತರ ಪಾಲಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ. ಇದಕ್ಕೆಲ್ಲ ಕಾರಣವಾಗಿದ್ದು ಪೆಟ್ರೋಲ್, ಡೀಸೆಲ್ ದರ ಏರಿಕೆ!
Karnataka Districts Jul 11, 2021, 7:42 AM IST
ಮನೆಯನ್ನು ಬಾಡಿಗೆ ಕೊಟ್ಟಿದ್ದ ಕಿರಾತಕ ಮಾಲೀಕ ಮನೆ ಬಾಡಿಗೆ ಕೊಡುವುದು ಬೇಡ ಕಿಸ್ ಕೊಟ್ಟರೆ ಸಾಕು ಎಂದು ಮಹಿಳೆ ಹಿಂದೆ ಬಿದ್ದಿದ್ದು ಈಗ ಪೊಲೀಸರ ಅತಿಥಿಯಾಗಿದ್ದಾನೆ.
CRIME Jul 10, 2021, 6:52 PM IST
ಬೆಂಗಳೂರಿನಲ್ಲಿ ಬಾಡಿಗೆದಾರರಿಗೆ ಗುಡ್ನ್ಯೂಸ್..!ಕೇಂದ್ರದ ಬಾಡಿಗೆ ಕಾಯ್ದೆಯನ್ನು ರಾಜ್ಯದಲ್ಲೂ ಜಾರಿಗೆ ತರಲು ಸಿದ್ಧತೆ ನಡೆಸುತ್ತಿರುವುದಾಗಿ ಕಂದಾಯ ಸಚಿವ ಆರ್ ಅಶೋಕ್ ಹೇಳಿದ್ಧಾರೆ.
state Jul 9, 2021, 9:35 AM IST
ಇಷ್ಟದ ಪುಸ್ತಕ ಓದಲು ಒಂದೊಳ್ಳೆ ಪ್ಲಾಟ್ಫಾರ್ಮ್ ಜಸ್ಟ್ ಬುಕ್. ಇಲ್ಲಿ 15 ಲಕ್ಷಕ್ಕೂ ಅಧಿಕ ಪುಸ್ತಕಗಳು ಬಾಡಿಗೆಗೆ ದೊರಕುತ್ತವೆ. ಕೊರೋನಾ ಕಾಲದಲ್ಲಿ ಓದುವ ಪ್ರೀತಿ ಹೆಚ್ಚಿಸುವ ಇಂಥದ್ದೊಂದು ಪ್ರಯತ್ನದ ಹಿಂದಿರುವುದು ಸುರೇಶ್ ನರಸಿಂಹ ಹಾಗೂ ಅವರ ಪುಸ್ತಕ ಪ್ರೀತಿ.
Education Jul 5, 2021, 10:55 AM IST
ತಮ್ಮ ಅದ್ಭುತ ಪ್ರತಿಭೆಯಿಂದ ಬಾಲಿವುಡ್ನಲ್ಲಿ ಟ್ರೆಂಡ್ ಕ್ರಿಯೇಟ್ ಮಾಡಿದ್ದ ಸುಶಾಂತ್ ಸಿಂಗ್ ಕಳೆದ ವರ್ಷ ನೇಣಿಗೆ ಕೊರಳೊಡ್ಡಿದ್ದು ಎಲ್ಲರಿಗೂ ನೆನಪಿದೆ. ವಿಭಿನ್ನ ಹವ್ಯಾಸಗಳಿದ್ದ ಸುಶಾಂತ್ಗೆ ಬಾಹ್ಯಾಕಾಶಯಾನದ ಬಗ್ಗೆಯೂ ವಿಶೇಷ ಕುತೂಹಲವಿತ್ತು. ಓದಿನ ಗೀಳೂ ಇದ್ದ ನಟ ತಾವಿದ್ದ ಮನೆಗೆ ತಿಂಗಳಿಗೆ 4.5 ಲಕ್ಷ ರೂ. ಬಾಡಿಗೆ ಪಾವತಿಸುತ್ತಿದ್ದರು. ಇದೀಗ ಈ ಮನೆ ಖಾಲಿ ಇದ್ದು, ತಿಂಗಳಿಗೆ 4 ಲಕ್ಷ ರೂ.ಗೆ ಬಾಡಿಗೆಗೆ ನೀಡಲು ಮಾಲೀಕರು ಸಿದ್ಧರಿದ್ದಾರೆ. ಆದರೂ ಯಾರೂ ವಾಸಿಸಲು ಮುಂದೆ ಬರುತ್ತಿಲ್ಲವಂತೆ. ಹೇಗಿದೆ ನೋಡಿ ಸುಶಾಂತ್ ತಮ್ಮ ಕಡೆಯ ದಿನಗಳನ್ನು ಕಳೆದ ಮುಂಬಯಿಯ ಈ ಮನೆ?
Cine World Jun 17, 2021, 1:15 PM IST