Asianet Suvarna News Asianet Suvarna News

ಟೈಮ್‌ ಲೂಪ್‌ ಕಥೆಯನ್ನು ಸರಳವಾಗಿ ಹೇಳುವ ಶಾಲಿವಾಹನ ಶಕೆ: ನಿರ್ದೇಶಕ ಗಿರೀಶ್‌

‘ಟೈಮ್‌ ಲೂಪ್‌ ಚಿತ್ರಗಳು ಸಿಟಿಯ ಜಾಣರಿಗೆ ಮಾತ್ರ ಎಂಬ ಪೂರ್ವಾಗ್ರಹ ನಮ್ಮಲ್ಲಿದೆ. ಅದನ್ನು ಅಳಿಸುವ ಪ್ರಯತ್ನ ಚಿತ್ರದಲ್ಲಾಗಿದೆ. ನನ್ನೂರು ಯಡಿಯೂರಿನ ಮಳವಳ್ಳಿ. ಆ ಊರಿಗೆ ಕಾಲ್ಪನಿಕ ಹೆಸರು ಕೊಟ್ಟು ಚಿರತೆ ಪ್ರಸಂಗವನ್ನೂ ತಂದು ಶಂಖವನ್ನು ಸಾಂಕೇತಿಕವಾಗಿ ಬಳಸಿ ವಿಭಿನ್ನವಾಗಿ ಟೈಮ್‌ ಲೂಪ್‌ ಸ್ಟೋರಿ ಹೇಳಿದ್ದೇವೆ’ ಎಂದೂ ಗಿರೀಶ್‌ ವಿವರ ನೀಡಿದ್ದಾರೆ.

Shalivahana Shake tells a simple time loop story Says Director Girish gvd
Author
First Published Sep 7, 2024, 5:12 PM IST | Last Updated Sep 7, 2024, 5:12 PM IST

‘ಟೈಮ್‌ ಲೂಪ್‌ ಕಥೆಯನ್ನು ನಮ್ಮ ಹಳ್ಳಿ ಮಂದಿಗೂ ಅರ್ಥವಾಗುವಂತೆ ಸರಳವಾಗಿ ಸೊಗಸಾಗಿ ನಿರೂಪಿಸುತ್ತಿದ್ದೇವೆ. ಭಾರತೀಯ ಪುರಾಣ ಮತ್ತು ಕ್ವಾಂಟಮ್ ಥಿಯರಿಯನ್ನು ಬೆಸೆದು ಮಾಡಿರುವ ಸಿನಿಮಾವಿದು’ ಎಂದು ‘ಶಾಲಿವಾಹನ ಶಕೆ’ ಸಿನಿಮಾ ನಿರ್ದೇಶಕ ಗಿರೀಶ್‌ ಹೇಳಿದ್ದಾರೆ. ಇತ್ತೀಚೆಗೆ ಈ ಸಿನಿಮಾದ ಟ್ರೇಲರ್‌ ಬಿಡುಗಡೆ ನಡೆಯಿತು. ಸೆ.13ಕ್ಕೆ ಈ ಸಿನಿಮಾ ತೆರೆಗೆ ಬರಲಿದೆ.

‘ಟೈಮ್‌ ಲೂಪ್‌ ಚಿತ್ರಗಳು ಸಿಟಿಯ ಜಾಣರಿಗೆ ಮಾತ್ರ ಎಂಬ ಪೂರ್ವಾಗ್ರಹ ನಮ್ಮಲ್ಲಿದೆ. ಅದನ್ನು ಅಳಿಸುವ ಪ್ರಯತ್ನ ಚಿತ್ರದಲ್ಲಾಗಿದೆ. ನನ್ನೂರು ಯಡಿಯೂರಿನ ಮಳವಳ್ಳಿ. ಆ ಊರಿಗೆ ಕಾಲ್ಪನಿಕ ಹೆಸರು ಕೊಟ್ಟು ಚಿರತೆ ಪ್ರಸಂಗವನ್ನೂ ತಂದು ಶಂಖವನ್ನು ಸಾಂಕೇತಿಕವಾಗಿ ಬಳಸಿ ವಿಭಿನ್ನವಾಗಿ ಟೈಮ್‌ ಲೂಪ್‌ ಸ್ಟೋರಿ ಹೇಳಿದ್ದೇವೆ’ ಎಂದೂ ಗಿರೀಶ್‌ ವಿವರ ನೀಡಿದ್ದಾರೆ.

ನಿರ್ಮಾಪಕ ಶೈಲೇಶ್‌ ಕುಮಾರ್‌ ರಂಗಭೂಮಿ ಹಿನ್ನೆಲೆಯ ತನ್ನ ಬಹು ಕಾಲದ ಕನಸು ಈ ಸಿನಿಮಾ ಮೂಲಕ ನನಸಾಗುತ್ತಿರುವುದಕ್ಕೆ ಹರ್ಷ ವ್ಯಕ್ತಪಡಿಸಿ, ‘ನಾಲ್ಕೈದು ದಿನದ ಘಟನಾವಳಿಗಳಲ್ಲೇ ಟೈಮ್‌ ಲೂಪ್‌ ಕಾನ್ಸೆಪ್ಟ್‌ ಕಥೆ ಹೇಳಲಾಗಿದೆ’ ಎಂದರು. ನಾಯಕಿ ಸುಪ್ರೀತಾ ಸತ್ಯನಾರಾಯಣನ್‌ ಕಾಲೇಜ್‌ ಹುಡುಗಿ ಪಾತ್ರದಲ್ಲಿ ನಟಿಸಿದ್ದಾರೆ. ಈ ಸಿನಿಮಾದ ಫ್ರೆಶ್‌ ಕಥೆಯನ್ನು ಅವರು ಮೆಚ್ಚಿಕೊಂಡರು. ನಟ ಸುಂದರ್‌ ದರಬೇಸಿ ಪಾತ್ರವನ್ನು ಮಾಡುತ್ತಿರುವುದಾಗಿ ತಿಳಿಸಿದರು. ಅವರು ಈ ಸಿನಿಮಾ ಕಾಸ್ಟ್ಯೂಮ್‌ನಲ್ಲಿದ್ದಾಗ ಒಂದಿಷ್ಟು ಜನ ಹೆಂಗಸರು ಇವರ ಬಳಿ ಬಂದು ಮಕ್ಕಳಿಗೆ ತಾಯ್ತ ಕಟ್ಟಿಸಿಕೊಂಡು ಹೋದರಂತೆ.

ಟಾಕ್ಸಿಕ್ ಅಡ್ಡದಿಂದ ಬಂತು ಮತ್ತೊಂದು ಸೂಪರ್ ಸರ್​ಪ್ರೈಸ್: ಯಶ್ ಜೊತೆ ನಾನಿದ್ದೇನೆ ಎಂದ ಟಿಟೌನ್ ಲೇಡಿ ಸೂಪರ್ ಸ್ಟಾರ್!

ಈ ಹಿಂದೆ ‘ಒಂದು ಕಥೆ ಹೇಳ್ಲಾ’ ಎಂಬ ಸಿನಿಮಾ ನಿರ್ದೇಶಿಸಿದ್ದ ಗಿರೀಶ್ ಹೊಸ ಸಿನಿಮಾ ‘ಶಾಲಿವಾಹನ ಶಕೆ’. ಶೂಟಿಂಗ್‌, ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿಕೊಂಡು ಸದ್ಯ ರಿಲೀಸ್‌ಗೆ ರೆಡಿಯಾಗಿದೆ. ರಂಗಕರ್ಮಿ ಶೈಲೇಶ್‌ ಕುಮಾರ್‌ ಈ ಚಿತ್ರದ ನಿರ್ಮಾಪಕರು. ಸಿನಿಮಾ ಬಗ್ಗೆ ನಿರ್ದೇಶಕ ಗಿರೀಶ್‌, ‘ಇದು ಒಂದು ದಿನದಲ್ಲಿ ನಡೆಯುವ ಕಥೆ. ಜೀವನದ ಕೆಲವು ಘಟನೆಗಳನ್ನು ಸರಿಮಾಡಿಕೊಳ್ಳುವ ಅವಕಾಶ ಸಿಕ್ಕರೆ ಬದುಕು ಹೇಗಾಗಬಹುದು ಎನ್ನುವುದನ್ನು ಈ ಸಿನಿಮಾ ಮೂಲಕ ತೋರಿಸುತ್ತೇವೆ. ಹಳ್ಳಿ ಸೊಗಡಿನಲ್ಲಿ ಈ ಕಥೆ ನಿರೂಪಿಸುವುದು ವಿಶೇಷ’ ಎಂದಿದ್ದಾರೆ.

Latest Videos
Follow Us:
Download App:
  • android
  • ios