Asianet Suvarna News Asianet Suvarna News

ಲಾಕ್‌ಡೌನ್ ಆತಂಕಕ್ಕೆ BSY ಉತ್ತರ, ಸೇನಾ ದಾಳಿಗೆ ಬೆದರಿದ ಪಾಕ್ ಸರ್ಕಾರ; ಏ.15ರ ಟಾಪ್ 10 ಸುದ್ದಿ!

ಒಂದೊಂದೆ ರಾಜ್ಯಗಳು ಸೆಮಿ ಲಾಕ್‌ಡೌನ್ ಹೇರುತ್ತಿರುವ ಬೆನ್ನಲ್ಲೇ ಕರ್ನಾಟಕದಲ್ಲಿ ಲಾಕ್‌ಡೌನ್ ಇಲ್ಲ ಎಂದು ಸಿಎಂ ಸ್ಪಷ್ಟಪಡಿಸಿದ್ದಾರೆ. ಪಾಕಿಸ್ತಾನ ಕಿರಿಕಿರಿ ಮುಂದುವರಿಸಿದರೆ ಮೋದಿ ಸರ್ಕಾರ ಸೇನಾ ದಾಳಿ ನಡೆಸುವ ಸಾಧ್ಯತೆ ಹೆಚ್ಚು ಎಂಬ ವರದಿಗೆ ಇಮ್ರಾನ್ ಖಾನ್ ಬೆದರಿದ್ದಾರೆ. ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಮಾಡಲಾಗಿದೆ. ಕ್ಲಾಸಿಕ್‌ ಲುಕ್‌ನಲ್ಲಿ ಗೋಲ್ಡನ್ ಸ್ಟಾರ್ ಗಣೇಶ್, ಯಶಸ್ಸಿನ ಸೀಕ್ರೆಟ್ ಬಿಚ್ಚಿಟ್ಟ ಆರ್‌ಸಿಬಿ ಸ್ಪಿನ್ನರ್ ಸೇರಿದಂತೆ ಏಪ್ರಿಲ್ 15ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

Karnataka Coronavirus to India vs Pakistan report top  10 news of April 15 ckm
Author
Bengaluru, First Published Apr 15, 2021, 5:48 PM IST

ಕುಂಭಮೇಳದಲ್ಲಿ ಸ್ಪೆಷಲ್ ಪೋಲಿಸ್ ಆಫೀಸರ್‌ಗಳಾಗಿ RSS ಕಾರ್ಯಕರ್ತರು!...

Karnataka Coronavirus to India vs Pakistan report top  10 news of April 15 ckm

 ಕುಂಭಮೇಳದಲ್ಲಿ ಸ್ಪೆ ಷಲ್ ಪೋಲಿಸ್ ಆಫೀಸರ್‌ಗಳಾಗಿ 1500ಕ್ಕೂ ಹೆಚ್ಚು ಆರೆಸ್ಸಸ್ ಕಾರ್ಯಕರ್ತರು ಸೇವೆ ಸಲ್ಲಿಸುತ್ತಿದ್ದಾರೆ. ಆಡಳಿತ ನಿರ್ವಹಣೆ ಸೇರಿದಂತೆ ಹಲವು ಕೆಲಸಗಳಲ್ಲಿ ಪೋಲಿಸರಿಗೆ ಸಹಾಯ ಮಾಡುತ್ತಿದ್ದಾರೆ. ಕುಂಭ ಮೇಳದಲ್ಲಿ  ಸೇವೆ ಸಲ್ಲಿಸುತ್ತಿರುವ ಎಲ್ಲ ಕಾರ್ಯಕರ್ತರಿಗೂ ಗುರುತಿನ ಚೀಟಿ ಜೊತೆಗೆ ಜಾಕೆಟ್ ಮತ್ತು ಕ್ಯಾಪ್ ನೀಡಲಾಗಿದೆ

ದೆಹಲಿಯಲ್ಲಿ ವೀಕೆಂಡ್ ಕರ್ಫ್ಯೂ, ಯುಪಿಯಲ್ಲಿ ನೈಟ್ ಕರ್ಫ್ಯೂ; ಕೊರೋನಾಗೆ ತತ್ತರಿಸುತ್ತಿದೆ ಭಾರತ!...

Karnataka Coronavirus to India vs Pakistan report top  10 news of April 15 ckm

ಕೊರೋನಾ ವೈರಸ್‌ಗೆ ಇಡೀ ದೇಶವೇ ತತ್ತರಿಸಿದೆ. ಒಂದೊಂದೆ ರಾಜ್ಯದಲ್ಲಿ ಸೆಮಿ ಲಾಕ್‌ಡೌನ್, ಕರ್ಫ್ಯೂ ಜಾರಿಗೊಳ್ಳುತ್ತಿದೆ. ಮತ್ತೆ ಕಳೆದ ವರ್ಷ ಅನುಭವಿಸಿದ ಕಠಿಣ ನಿರ್ಧಾರಗಳು ಮರಳುತ್ತಿದೆ. ಇದೀಗ ದೆಹಲಿಯಲ್ಲಿ ಸೆಮಿ ಲಾಕ್‌ಡೌನ್, ಉತ್ತರ ಪ್ರದೇಶದಲ್ಲಿ ಕರ್ಫ್ಯೂ ಜಾರಿಯಾಗಿದೆ. 

ಪಾಕ್‌ ಕಿರಿಕ್‌ಗೆ ಮೋದಿ ಸೇನಾ ಪ್ರತಿದಾಳಿ ಸಾಧ್ಯತೆ ಹೆಚ್ಚು!...

Karnataka Coronavirus to India vs Pakistan report top  10 news of April 15 ckm

ಒಂದು ವೇಳೆ ಪಾಕಿಸ್ತಾನ ಸೇನೆ ಗಡಿಯಲ್ಲಿ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ಭಾರತವನ್ನು ಪ್ರಚೋದಿಸುವ ಕೆಲಸ ಮಾಡಿದರೆ ಪ್ರಸಕ್ತ ಆಡಳಿತ ನಡೆಸುತ್ತಿರುವ ಮೋದಿ ಸರ್ಕಾರವು ಮಿಲಿಟರಿ ಶಕ್ತಿಯ ಮೂಲಕವೇ ಪ್ರತಿಕಾರ ತೀರಿಸಿಕೊಳ್ಳುವ ಸಾಧ್ಯತೆ, ಈ ಹಿಂದಿನ ಯಾವುದೇ ಸರ್ಕಾರದ ಅವಧಿಗಿಂತ ಹೆಚ್ಚಿದೆ ಎಂದು ವರದಿಯೊಂದು ಹೇಳಿದೆ.

ಲಸಿಕೆ ಪಡೆದವರಿಗೂ ಏಕೆ ಸೋಂಕು: ಅನುಮಾನಕ್ಕೆ ಸಿಕ್ತು ಸ್ಪಷ್ಟ ಉತ್ತರ!...

Karnataka Coronavirus to India vs Pakistan report top  10 news of April 15 ckm

ಕೊರೋನಾ 2 ಡೋಸ್‌ ಲಸಿಕೆ ಪಡೆದವರಿಗೂ ಸೋಂಕು ಹಬ್ಬುವುದು ಏಕೆ ಎಂಬ ಪ್ರಶ್ನೆ ಮತ್ತು ಅನುಮಾನಗಳಿಗೆ ಭಾರತೀಯ ಔಷಧ ಸಂಶೋಧನಾ ಮಂಡಳಿ (ಐಸಿಎಂಆರ್‌) ಮುಖ್ಯಸ್ಥ ಬಲರಾಂ ಭಾರ್ಗವ ಸ್ಪಷ್ಟಉತ್ತರ ನೀಡಿದ್ದಾರೆ.

ರಾಜ್ಯದಲ್ಲಿ ಲಾಕ್ಡೌನ್‌ ಇಲ್ಲ, ವೀಕೆಂಡಲ್ಲೂ ಇಲ್ಲ: ಯಡಿಯೂರಪ್ಪ!...

Karnataka Coronavirus to India vs Pakistan report top  10 news of April 15 ckm

ಕೋವಿಡ್‌ ನಿಯಂತ್ರಣಕ್ಕೆ ಅಗತ್ಯಬಿದ್ದರೆ ಮತ್ತಷ್ಟುಕಠಿಣ ಕ್ರಮಗಳನ್ನು ಕೈಗೊಳ್ಳಲಾಗುತ್ತದೆಯೇ ಹೊರತು ಮತ್ತೆ ರಾಜ್ಯದಲ್ಲಿ ಲಾಕ್‌ಡೌನ್‌ ಜಾರಿಗೊಳಿಸುವ ಯಾವುದೇ ಪ್ರಸ್ತಾಪ ಸರ್ಕಾರದ ಮುಂದಿಲ್ಲ ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ಅಲ್ಲದೆ, ರಾಜ್ಯದಲ್ಲಿ ವಾರಾಂತ್ಯ ಲಾಕ್‌ಡೌನ್‌ ಜಾರಿ ಬಗ್ಗೆಯೂ ಚಿಂತನೆ ಇಲ್ಲ ಎಂದೂ ಅವರು ತಿಳಿಸಿದ್ದಾರೆ.

ಒಂದೇ ಓವರ್‌ನಲ್ಲಿ 3 ವಿಕೆಟ್‌: ಯಶಸ್ಸಿನ ಸೀಕ್ರೇಟ್‌ ಬಿಚ್ಚಿಟ್ಟ ಶಹಬಾಜ್‌ ಅಹಮದ್...

Karnataka Coronavirus to India vs Pakistan report top  10 news of April 15 ckm

ಸನ್‌ರೈಸರ್ಸ್‌ ಹೈದರಾಬಾದ್‌ ವಿರುದ್ದ ಒಂದೇ ಓವರ್‌ನಲ್ಲಿ 3 ವಿಕೆಟ್‌ ಕಬಳಿಸಿ ಗೇಮ್‌ ಚೇಂಜರ್ ಎನಿಸಿಕೊಂಡ ಶಹಬಾಜ್‌ ಅಹಮದ್ ತಮ್ಮ ಯಶಸ್ಸಿನ ಸೀಕ್ರೇಟ್‌ ಬಿಚ್ಚಿಟ್ಟಿದ್ದಾರೆ. 

ಗೋಲ್ಡನ್‌ ಸ್ಟಾರ್‌ ಗಣೇಶ್‌ ಮತ್ತೊಮ್ಮೆ ಕ್ಲಾಸಿಕ್‌ ಲುಕ್‌ನಲ್ಲಿ...

Karnataka Coronavirus to India vs Pakistan report top  10 news of April 15 ckm

 ‘ತ್ರಿಬಲ್‌ ರೈಡಿಂಗ್‌’ ಚಿತ್ರದ ಫಸ್ಟ್‌ ಲುಕ್ ಬಿಡುಗಡೆಯಾಗಿದೆ‌. ಯುಗಾದಿ ಹಬ್ಬದ ಅಂಗವಾಗಿ ಚಿತ್ರದ ಪೋಸ್ಟರ್‌ ಬಿಡುಗಡೆ ಆಗಿದ್ದು, ಕೈಯಲ್ಲಿ ಗಾಲ್ಫ್ ಸ್ಟಿಕ್‌ ಹಿಡಿದ ಗಣೇಶ್‌ ಸ್ಲೈಲಿಶ್‌ ಆಗಿ ಕಾಣಿಸಿಕೊಂಡಿದ್ದಾರೆ.

ಜೂ.1ರಿಂದ ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಜಾರಿ: ಕೇಂದ್ರದ ಸ್ಪಷ್ಟನೆ...

Karnataka Coronavirus to India vs Pakistan report top  10 news of April 15 ckm

ಚಿನ್ನಾಭರಣಗಳು ಮತ್ತು ಕಲಾಕೃತಿಗಳಿಗೆ ಹಾಲ್‌ ಮಾರ್ಕ್ ಮುದ್ರೆ ಬಳಕೆ| ಜೂ.1ರಿಂದ ಚಿನ್ನಾಭರಣಕ್ಕೆ ಹಾಲ್‌ಮಾರ್ಕ್ ಕಡ್ಡಾಯ ಜಾರಿ: ಕೇಂದ್ರದ ಸ್ಪಷ್ಟನೆ

ಕರ್ನಾಟಕದಲ್ಲೂ ಮಹಾರಾಷ್ಟ್ರ ಮಾದರಿಯ ಜನತಾ ಕರ್ಫ್ಯೂ?...

Karnataka Coronavirus to India vs Pakistan report top  10 news of April 15 ckm

ರಾತ್ರಿ 8  ಗಂಟೆಗೆ ಬಾಗಿಲು ಬಂದ್. ಮಹಾರಾ‍ಷ್ಟ್ರ ಮಿನಿ ಲಾಕ್‌ಡೌನ್. ಜನತಾ ಕರ್ಫ್ಯೂ ಫುಲ್‌ ಟಫ್‌ ಆಗಲಿದೆ. ಆದ್ರೆ ಇದು ಲಾಕ್‌ಡೌನ್ ಅಲ್ಲ, ಆದ್ರೆ ಲಾಕ್‌ಡೌನ್‌ನಂತಹ ಕಠಿಣ ಕ್ರಮಗಳು ಜಾರಿ. ಹಾಗಾದ್ರೆ ಮಹಾರಾ‍ಷ್ಟ್ರ ಕರ್ಫ್ಯೂ ಮಾಡೆಲ್ ಕರ್ನಾಟಕಕ್ಕೂ ಬರುತ್ತಾ? ರಾತ್ರಿ ಎಂಟಕ್ಕೇ ಬಂದ್ ಆಗುತ್ತಾ ಎಲ್ಲಾ ವ್ಯವಸ್ಥೆ? 

'ಭಾರತಕ್ಕೆ ಸ್ಮೃತಿ ಇರಾನಿಯಂತಹ ಲೀಡರ್ ಬೇಕು, ಜಯಾ ಬಚ್ಚನ್‌ರಂತವರಲ್ಲ!'...

Karnataka Coronavirus to India vs Pakistan report top  10 news of April 15 ckm

ಸೆಲ್ಫೀ ಕ್ಲಿಕ್ಕಿಸಲು ಬಂದ ಅಭಿಮಾನಿಯನ್ನು ದೂಡಿದ್ದ ಜಯಾ ಬಚ್ಚನ್| ಜಯಾ ಬಚ್ಚನ್‌ ನಡೆಯಿಂದ ಅಭಿಮಾನಿಗಳಿಗೆ ಬೇಸರ| ವೈರಲ್ ಆಯ್ತು ಸ್ಮೃತಿ ಇರಾನಿಯ ಸರಳತೆಯ ವಿಡಿಯೋ

Follow Us:
Download App:
  • android
  • ios