ಪಂಚ ರಾಜ್ಯಗಳ ಚುನಾವಣೆಯ ಸ್ಪಷ್ಟ ಫಲಿತಾಂಶ ಇನ್ನೂ ಹೊರಬಿದ್ದಿಲ್ಲ. ಆದರೆ ಗೆಲುವು ಯಾರಿಗೆ  ಅನ್ನೋ ಚಿತ್ರಣ ಬಂದಾಗಿದೆ. ಬಂಗಾಳ ಮತ್ತೆ ಮಮತಾ ಪಾಲಾಗಿದ್ದರೆ, ಕೇರಳದಲ್ಲಿ ಪಿಣರಾಯಿ ದಾಖಲೆ ಬರೆದಿದ್ದಾರೆ. ಅಸ್ಸಾಂನಲ್ಲಿ ಬಿಜೆಪಿ ಅಧಿಕಾರ ಉಳಿಸಿಕೊಂಡಿದೆ. ಇನ್ನು ಆರ್‌ಸಿಬಿ ಬ್ಲೂ ಜರ್ಸಿಯಲ್ಲಿ ಕಣಕ್ಕಿಳಿಯುತ್ತಿದೆ. ಭಾರತ ಮತ್ತೆ ಲಾಕ್‌ಡೌನ್ ಆಗುತ್ತಾ? ಟೀಕಾಕಾರರ ವಿರುದ್ಧ ಸಿಡಿದೆದ್ದ ಕಂಗನಾ ಸೇರಿದಂತೆ ಮೇ.02ರ ಟಾಪ್ 10 ಸುದ್ದಿ ವಿವರ ಇಲ್ಲಿವೆ. 

ಸಂಭ್ರಮಾಚರಣೆಗೆ ತಕ್ಷಣ ಬ್ರೇಕ್ ಹಾಕಿ; ಚುನಾವಣಾ ಆಯೋಗ ಖಡಕ್ ವಾರ್ನಿಂಗ್!...

Add Asianetnews Kannada as a Preferred SourcegooglePreferred

ಪಂಚ ರಾಜ್ಯಗಳ ಚುನಾವಣೆ ಫಲಿತಾಂಶ ಬಹುತೇಕ ಹೊರಬಿದ್ದಿದೆ. ರಾಜಕೀಯ ಪಕ್ಷಗಳಲ್ಲಿ ಸೋಲು ಗೆಲುವಿನ ಲೆಕ್ಕಾಚಾರ ಆರಂಭವಾಗಿದ್ದರೆ, ಇತ್ತ ಕಾರ್ಯಕರ್ತರು ಸಂಭ್ರಮಾಚರಣೆಯಲ್ಲಿ ತೊಡಗಿದ್ದಾರೆ. ಇದೀಗ ಚುನಾವಣಾ ಆಯೋಗ ಖಡಕ್ ವಾರ್ನಿಂಗ್ ನೀಡಿದೆ.

ಪಶ್ಚಿಮ ಬಂಗಾಳದಲ್ಲಿ ಟಿಎಂಸಿ ವಿನ್: ಮತ ಗಳಿಕೆಯಲ್ಲಿ ಬಿಜೆಪಿ ನಂಬರ್ ಒನ್...

ಪಂಚರಾಜ್ಯ ಚುನಾವಣೆಯ ಫಲಿತಾಂಶ ಪ್ರಕಟಗೊಳ್ಳುತ್ತಿರುವ ವಿಚಾರವಾಗಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಪ್ರತಿಕ್ರಿಯೆ ನೀಡಿದ್ದಾರೆ.

ಅಸ್ಸಾಂ ವಿಧಾನಸಭಾ ಚುನಾವಣೆ; ಮತ್ತೆ ಅಧಿಕ್ಕಾರಕ್ಕೇರಲು ಸಜ್ಜಾದ ಬಿಜೆಪಿ ನೇತೃತ್ವದ NDA!...

ಭಾರಿ ಕುತೂಹಲ ಕೆರಳಿಸಿದ ಅಸ್ಸಾಂ ವಿಧಾನಸಭಾ ಚುನಾವಣಾ ಫಲಿತಾಂಶ ಬಹುತೇಕ ಹೊರಬಿದ್ದಿದೆ. ಅಸ್ಸಾಂ ಜನತೆ ಮತ್ತೆ ಬಿಜೆಪಿಯತ್ತ ಒಲವು ತೋರಿದ್ದಾರೆ. ಹೀಗಾಗಿ ಬಿಜೆಪಿ ಮೈತ್ರಿ ಕೂಟ NDA ಮತ್ತೆ ಅಧಿಕಾರಕ್ಕೇರಲು ಸಜ್ಜಾಗಿದೆ.

ದೇವರನಾಡಿನಲ್ಲಿ ಆಡಳಿತರೂಢ ಪಕ್ಷ ಮತ್ತೆ ಅಧಿಕಾರಕ್ಕೆ: ನಾಲ್ಕು ದಶಕದ ಇತಿಹಾಸ!...

ಕೇರಳ ಚುನಾವಣೆಯಲ್ಲಿ ಗೆಲುವಿನತ್ತ ದಾಪುಗಾಲಿಡುತ್ತಿದೆ ಆಡಳಿತಾರೂಢ ಎಲ್‌ಡಿಎಫ್‌| ಮುನ್ನಡೆ ಕಾಯ್ದುಕೊಂಡ ಪಿಣರಾಯಿ ವಿಜಯನ್| ನಾಲ್ಕು ದಶಕದ ಇತಿಹಾಸ

ಐಪಿಎಲ್ 2021: ಮುಂದಿನ ಪಂದ್ಯದಲ್ಲಿ ಬ್ಲೂ ಜೆರ್ಸಿ ತೊಟ್ಟು ಕಣಕ್ಕಿಳಿಯಲಿದೆ ಆರ್‌ಸಿಬಿ...

ಕೊರೋನಾ ವಿಚಾರವಾಗಿ ಸರ್ಕಾರವನ್ನು ಟೀಕಿಸುವವರ ವಿರುದ್ಧ ಕಂಗನಾ ಕಿಡಿ...

ಕೊರೋನಾಗಿಂತ ಹೆಚ್ಚಾಗಿ ನಟಿ ಕಂಗನಾ ರಣಾವತ್‌ ಅವರನ್ನು ಬೇಸರಪಡಿಸೋ ವಿಚಾರ ಏನು ಗೊತ್ತಾ ? ಇತ್ತೀಚೆಗೆ ಶೇರ್ ಮಾಡಿದ ವಿಡಿಯೋದಲ್ಲಿ ನಟಿ ವಿದೇಶಗಳನ್ನು ಭಾರತವನ್ನು ನೋಡುವ ರೀತಿಯ ಬಗ್ಗೆ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಿಲಯನ್ಸ್ ದೇಶದ ಅತಿದೊಡ್ಡ ಆಕ್ಸಿಜನ್ ತಯಾರಕ..ಒಂದೇ ಘಟಕ...

ರಿಲಯನ್ಸ್ ನಿಂದ ವೈದ್ಯಕೀಯ ಆಮ್ಲಜನಕ ಉತ್ಪಾದನೆ/ ದೇಶದಲ್ಲಿಯೇ ಅತಿದೊಡ್ಡ ಘಟಕ/ ನಾಘರಿಕರ ಪ್ರಾಣ ಉಳಿಸುವುದು ನಮ್ಮ ಆದ್ಯತೆ/ ತನ್ನ ಸಿಬ್ಬಂದಿಗೆ ಉಚಿತವಾಗಿ ಲಸಿಕೆ ನೀಡಲು ಮುಂದಾಗಿದ್ದ ಸಂಸ್ಥೆ

ಮುಸ್ಲಿಂ, ಮಟುವಾ, ಮಹಿಳೆ ಹಾಗೂ ಮಮತಾ: ಬಂಗಾಳದಲ್ಲಿ ಟಿಎಂಸಿ ಗೆಲುವಿನ ರಹಸ್ಯ!...

ಪಶ್ಚಿಮ ಬಂಗಾಳದಲ್ಲಿ ಮೂರನೇ ಅಅವಧಿಗೆ ಟಿಎಂಸಿ ಅಧಿಕಾರ| ಬಿಜೆಪಿಯೂ ಸೋತಿಲ್ಲ, ಗಳಿಸಿದ್ದೇ ಹೆಚ್ಚು| ಎಡಪಕ್ಷ, ಕಾಂಗ್ರೆಸ್‌ ಮೈತ್ರಿಗೆ ಬಿಗ್ ಶಾಕ್| ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಈ ಐದು ಎಂ ಫ್ಯಾಕ್ಟರ್ಸ್‌

ದೇಶಾದ್ಯಂತ ಮತ್ತೆ ಲಾಕ್‌ಡೌನ್‌ ಆಗುತ್ತಾ? ಕೇಂದ್ರ ಸಚಿವ ಜೋಶಿ ಹೇಳಿದ್ದು ಹೀಗೆ..?...

ಒಂದೂವರೆಯಿಂದ ಎರಡು ಸಾವಿರ ಜನರಿಗೆ ಚಿಕಿತ್ಸೆ ನೀಡುವ ವೈದ್ಯರು ಕಿಮ್ಸ್‌ನಲ್ಲಿದ್ದಾರೆ| ಕಿಮ್ಸ್‌ಗೆ 100 ಬೆಡ್, ಕಾಟ್, ಬೆಡ್ ಶೀಟ್, ತಲೆದಿಂಬು, 100 ಸಲಾಯಿನ್ ಸ್ಟ್ಯಾಂಡ್‌ಗಳನ್ನು ದಾನವಾಗಿ ನೀಡಿದ ಸ್ವರ್ಣ ಸಮೂಹ ಗ್ರೂಪ್‌| ದೇಶಪಾಂಡೆ ಫೌಂಡೇಶನ್, ಟಾಡಾ ಹಿಟಾಚಿ, ಟಾಟಾ ಮಾರ್ಕೊ ಪೋಲೊಗಳಿಂದ ಒಟ್ಟು 570 ಬೆಡ್‌ಗಳನ್ನು ಕಿಮ್ಸ್‌ಗೆ ದಾನವಾಗಿ ನೀಡಲಾಯಿತು: ಜೋಶಿ| 

ಮೋದಿ, ಅಮಿತ್ ಶಾ, ರೂಪಾನಿ ವಿರುದ್ಧ ಪೋಸ್ಟ್ ಹಾಕಿದ್ದವನ ಮೇಲೆ FIR...

ಸೋಶಿಯಲ್ ಮೀಡಿಯಾದಲ್ಲಿ ಅವಹೇಳನಕಾರಿ ಬರಹ/ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಶಾ ವಿರುದ್ಧ ಬರಹ/ ಪ್ರಕರಣ ದಾಖಲಿಸಿಕೊಂಡ ಗುಜರಾತ್ ಪೊಲೀಸರು/ ಸೋಶಿಯಲ್ ಮೀಡಿಯಾದಲ್ಲಿ ಬರೆಯುವ ಮುನ್ನ ಎಚ್ಚರ