Asianet Suvarna News Asianet Suvarna News

ರೇಣುಕಾಸ್ವಾಮಿ ಕೊಲೆ ಕೇಸ್‌: ದರ್ಶನ್‌ಗೆ ಮತ್ತೊಂದು ಸಂಕಟ, ಬೇಲ್‌ ಸಿಗೋದು ಡೌಟು

IT ವಿಚಾರಣೆ ಬೇಲ್‌ಗೆ ತೊಡಕಾಗುವ ಅತಂಕ ಎದುರಾಗಿದೆ. IT ವಿಚಾರಣೆ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ಮೇಲೆ SPP ಬೆಲ್‌ಗೆ ತಡೆ ತರೋ ಸಾಧ್ಯತೆ ಇದೆ. ಬೇಲ್ ಅರ್ಜಿ ವಿಚಾರಣೆ ವೇಳೆಯೂ ದರ್ಶನ್ ಪರ ವಕೀಲರು ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ದರ್ಶನ್‌ ಬಹಳ ಟೆನ್ಷನ್‌ನಲ್ಲಿದ್ದಾರೆ.  

Renukaswamy Murder Case Accused Actor Darshan Likely not Get Bail grg
Author
First Published Sep 28, 2024, 10:11 AM IST | Last Updated Sep 28, 2024, 10:11 AM IST

ಬಳ್ಳಾರಿ(ಸೆ.28):  ಬೇಲ್ ಸಿಗುವ ಹುಮ್ಮಸಿನಲ್ಲಿರೋ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ನಟ್‌ ದರ್ಶನ್‌ಗೆ ಮತ್ತೆ ನಿರಾಸೆಯಾಗಿದೆ. ಹೀಗಾಗಿ ನಿನ್ನೆಯಿಂದ ದರ್ಶನ್ ಜೈಲಿನಲ್ಲಿ ಟೆನ್ಷನ್‌ನಲ್ಲಿದ್ದಾರಂತೆ.  ದರ್ಶನ್ ಸೋಮವಾರ ಬೇಲ್ ಸಿಗುವ ನಿರೀಕ್ಷೆಯಲಿದ್ದಾರೆ. 

IT ವಿಚಾರಣೆ ಬೇಲ್‌ಗೆ ತೊಡಕಾಗುವ ಅತಂಕ ಎದುರಾಗಿದೆ. IT ವಿಚಾರಣೆ ಕೆಲ ಅಂಶಗಳು, ಕೊಲೆ ಬಳಿಕ ಹಣ ವಹಿವಾಟು ಮೇಲೆ SPP ಬೆಲ್‌ಗೆ ತಡೆ ತರೋ ಸಾಧ್ಯತೆ ಇದೆ. ಬೇಲ್ ಅರ್ಜಿ ವಿಚಾರಣೆ ವೇಳೆಯೂ ದರ್ಶನ್ ಪರ ವಕೀಲರು ಸಮಯಾವಕಾಶ ಕೇಳಿದ್ದಾರೆ. ಹೀಗಾಗಿ ದರ್ಶನ್‌ ಬಹಳ ಟೆನ್ಷನ್‌ನಲ್ಲಿದ್ದಾರೆ.  

ರೇಣುಕಾಸ್ವಾಮಿ ಹತ್ಯೆ ಪ್ರಕರಣ: ಪವಿತ್ರಾ ಚಪ್ಪಲೀಲಿ ಹೊಡೆದಿದ್ದಾಳೆ, ಕೊಲೆ ಮಾಡಿಲ್ಲ, ವಕೀಲ

ಪ್ರಕರಣದ A-1 ಆರೋಪಿ‌ ಪವಿತ್ರಗೌಡ ಜಾರಿಕೊಳ್ಳುವ ತಂತ್ರ ಇದೀಗ ದರ್ಶನ್‌ಗೆ ಮತ್ತಷ್ಟು ಉರುಳಾಗುವ ಸಾಧ್ಯತೆ ಇದೆ. ಕೊಲೆ ನಡೆದ ಸ್ಥಳದಲ್ಲಿ ಪವಿತ್ರಾಗೌಡ ಇಲ್ಲ ಅಂತಾ ವಕೀಲರು ವಾದ ಮಂಡಿಸಿದ್ದಾರೆ. 

IT , ಪವಿತ್ರಾಗೌಡ ಅವರ ನಿಲವು ನೋಡಿಕೊಂಡು ದರ್ಶನ್ ಕಾನೂನು ಹೋರಾಟ ಮುಂದುವರೆಯುವ ಸಾಧ್ಯತೆ ಇದೆ. IT ವಿಚಾರಣೆ, ಪವಿತ್ರಾಗೌಡ ಜಾಮೀನಿನ ಅಂಶಗಳನ್ನ ಮುಂದಿಟ್ಟುಕೊಂಡು ವಕೀಲರು ದರ್ಶನ್ ಜೊತೆಗೆ ಚರ್ಚೆ ನಡೆಸಿದ್ದಾರೆ. ಪ್ರಿಸಿನ್ ಕಾಲ್ ಸಿಸ್ಟಮ್ ಮೂಲಕ ಮಾತನಾಡಲಿದ್ದಾರೆ ಎಂದು ತಿಳಿದು ಬಂದಿದೆ

Latest Videos
Follow Us:
Download App:
  • android
  • ios