11:07 PM (IST) Jul 23

India News Live 23rd July: ನಾನು ರಾಹುಲ್ ಗಾಂಧಿ ಹಿಂದೆ ಹಿಂದೆಯೇ ಓಡಲಾರೆ - ಅಮೇಥಿ ಸೋಲಿನ ಬಗ್ಗೆ ಸ್ಮೃತಿ ಇರಾನಿ ಅಚ್ಚರಿ ಹೇಳಿಕೆ

BJP Leader Smriti Irani interview: ಸ್ಮೃತಿ ಇರಾನಿ ಅವರು ಅಮೇಥಿ ಕ್ಷೇತ್ರದ ಅನುಭವ, ರಾಹುಲ್ ಗಾಂಧಿ ವಿರುದ್ಧದ ಸ್ಪರ್ಧೆ ಹಾಗೂ ಸೋಲು-ಗೆಲುವಿನ ಕುರಿತು ಮಾತನಾಡಿದ್ದಾರೆ. ಅಮೇಥಿಯಲ್ಲಿ ಮಾಡಿದ ಅಭಿವೃದ್ಧಿ ಕಾರ್ಯಗಳನ್ನು ವಿವರಿಸಿದ್ದಾರೆ.

Read Full Story
10:19 PM (IST) Jul 23

India News Live 23rd July: 'ಇದು ನನ್ನ ಭಾರತವಲ್ಲ, ಇದನ್ನ ನಾನು ಸ್ವೀಕರಿಸೋಲ್ಲ..' ನ್ಯಾಷನಲ್ ಕಾನ್ಫರೆನ್ಸ್ ಮುಖ್ಯಸ್ಥ ಫಾರೂಕ್ ಅಬ್ದುಲ್ಲಾ ಸ್ಫೋಟಕ ಹೇಳಿಕೆ!

ಫಾರೂಕ್ ಅಬ್ದುಲ್ಲಾ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಭಾರತದಲ್ಲಿ ಎಲ್ಲ ಧರ್ಮ, ಭಾಷೆ, ಪ್ರದೇಶದ ಜನರು ಪರಸ್ಪರ ಪ್ರೀತಿಸುವಂತಾಗಬೇಕು ಎಂದು ಹೇಳಿದ್ದಾರೆ. ಕಾಶ್ಮೀರದಿಂದ 370ನೇ ವಿಧಿಯನ್ನು ರದ್ದುಗೊಳಿಸಿದ ಕ್ರಮವನ್ನು ಟೀಕಿಸಿದ್ದಾರೆ.
Read Full Story
07:37 PM (IST) Jul 23

India News Live 23rd July: ತುರ್ತು ಕೋಟಾ ನಿಯಮಗಳಲ್ಲಿ ಪರಿಷ್ಕರಣೆ, ಹೊಸ ನಿಯಮ ಪ್ರಕಟಿಸಿದ ರೈಲ್ವೆ ಇಲಾಖೆ

ಭಾರತೀಯ ರೈಲ್ವೆ ತುರ್ತು ಕೋಟಾ (EQ) ನಿಯಮಗಳನ್ನು ಪರಿಷ್ಕರಿಸಿದೆ. ಇನ್ನು ಮುಂದೆ, EQ ಟಿಕೆಟ್‌ಗಳಿಗೆ ಕನಿಷ್ಠ ಒಂದು ದಿನ ಮುಂಚಿತವಾಗಿ ಅರ್ಜಿ ಸಲ್ಲಿಸಬೇಕು. ಹೊಸ ಟಿಕೆಟ್ ಬುಕಿಂಗ್ ವ್ಯವಸ್ಥೆ ಮತ್ತು ತತ್ಕಾಲ್ ಬದಲಾವಣೆಗಳ ಬಗ್ಗೆಯೂ ಮಾಹಿತಿ ಲಭ್ಯವಿದೆ.
Read Full Story
07:21 PM (IST) Jul 23

India News Live 23rd July: ಯೆಮೆನ್‌ನಲ್ಲಿ ನಿಮಿಷಾ ಪ್ರಿಯಾ ಬಿಡುಗಡೆ ಸುದ್ದಿ ಸುಳ್ಳು ಎಂದ ಭಾರತ ಸರ್ಕಾರ

ಯೆಮೆನ್‌ನಲ್ಲಿ ಮರಣದಂಡನೆಗೆ ಗುರಿಯಾಗಿರುವ ನಿಮಿಷಾ ಪ್ರಿಯಾ ಬಿಡುಗಡೆಯಾಗಿದ್ದಾರೆ ಎಂಬ ವದಂತಿಗಳನ್ನು ಭಾರತ ಸರ್ಕಾರ ತಳ್ಳಿಹಾಕಿದೆ. ಬಿಡುಗಡೆ ಪ್ರಯತ್ನಗಳು ಮುಂದುವರೆದಿವೆ, ಆದರೆ ಖಚಿತ ಮಾಹಿತಿಯಿಲ್ಲ ಎಂದು ವಿದೇಶಾಂಗ ಇಲಾಖೆ ತಿಳಿಸಿದೆ.
Read Full Story
07:13 PM (IST) Jul 23

India News Live 23rd July: Google pay- PhonePe ಜನರಿಗೆ ಫ್ರೀ ಆಗಿದ್ರೂ ಗಳಿಸ್ತಿದೆ 5 ಸಾವಿರ ಕೋಟಿ! ಇಂಟರೆಸ್ಟಿಂಗ್​ ವಿಷ್ಯ ಇಲ್ಲಿದೆ...

ಗೂಗಲ್​ ಪೇ- ಫೋನ್​ ಪೇ ಸೇವೆ ಉಚಿತವಾಗಿದ್ದರೂ ಮಾಸಿಕ ಐದು ಸಾವಿರ ಕೋಟಿ ರೂಪಾಯಿಗೂ ಅಧಿಕ ಲಾಭ ಮಾಡುತ್ತಿವೆ ಎನ್ನುವುದು ಗೊತ್ತಾ? ಅದ್ಹೇಗೆ ನೋಡಿ... ಕುತೂಹಲದ ವಿಷ್ಯ ಇಲ್ಲಿದೆ...

Read Full Story
06:57 PM (IST) Jul 23

India News Live 23rd July: ಶೋಲಾ ಕಾಡಲ್ಲಿ ನಿದ್ದೆಗೆ ಜಾರಿದ ಆನೆ ಹಿಂಡು - ಮರಿಗೆ ಸ್ನಾನ ಮಾಡಿಸಿದ ತಾಯಾನೆ - ವನ್ಯಲೋಕದ ಅದ್ಭುತ ವೀಡಿಯೋ

ತಾಯಿ ಆನೆಯೊಂದು ತನ್ನ ಮರಿಗೆ ಸ್ನಾನ ಮಾಡಿಸುತ್ತಿರುವ ಮುದ್ದಾದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.ಹಾಗೆಯೇ ಶೋಲಾ ಕಾಡಿನಲ್ಲಿ ಆನೆಗಳ ಹಿಂಡು ನಿದ್ದೆ ಮಾಡುವ ಇನ್ನೊಂದು ವಿಡಿಯೋ ಕೂಡ ವೈರಲ್ ಆಗಿದೆ.

Read Full Story
06:55 PM (IST) Jul 23

India News Live 23rd July: ದೆಹಲಿಯಲ್ಲಿ 2450 ಕೊಲೆಗಳು! ರಾಜ್ಯಸಭೆಗೆ ವರದಿ ಕೊಟ್ಟ ಕೇಂದ್ರ ಸರ್ಕಾರ

ಕಳೆದ ಐದು ವರ್ಷಗಳಲ್ಲಿ ದೆಹಲಿಯಲ್ಲಿ 2,450 ಕೊಲೆ ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಸರ್ಕಾರ ರಾಜ್ಯಸಭೆಗೆ ತಿಳಿಸಿದೆ. 2022 ರಲ್ಲಿ ಅತಿ ಹೆಚ್ಚು ಕೊಲೆಗಳು (509) ನಡೆದಿವೆ.
Read Full Story
06:12 PM (IST) Jul 23

India News Live 23rd July: ಅದ್ಭುತ ಪುನರ್ಮಿಲನ - ಒಂದೇ ಶಾಲೆಯ ಬೆಂಚ್‌ಮೇಟ್‌ಗಳು ಈಗ ಸೇನೆಯ ಉನ್ನತ ಹುದ್ದೆಯಲ್ಲಿರುವವರು

ಒಂದೇ ಶಾಲೆಯಲ್ಲಿ ಕಲಿತ ನಾಲ್ವರು ಸ್ನೇಹಿತರು ದಶಕಗಳ ನಂತರ ಸೇನೆಯ ವಿವಿದ ಉನ್ನತ ಹುದ್ದೆಯ ಅಧಿಕಾರಿಗಳಾಗಿ ತಮ್ಮ ಶಾಲೆಗೆ ಭೇಟಿ ನೀಡಿದರು. ಒಂದೇ ಬೆಂಚಿನಲ್ಲಿ ಕುಳಿತು ಪಾಠ ಕೇಳಿದ ಈ ಸ್ನೇಹಿತರು ಈಗ ದೇಶ ಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ.

Read Full Story
03:57 PM (IST) Jul 23

India News Live 23rd July: ಡಾನ್ಸ್ ಮಾಡಿ ಫಾರಿನ್ ಕ್ಲೈಂಟ್‌ ಸ್ವಾಗತಿಸಿದ ಉದ್ಯೋಗಿಗಳು - ಅಧುನಿಕ ಗುಲಾಮಗಿರಿ ಎಂದ ನೆಟ್ಟಿಗರು

ತಮ್ಮ ಸಂಸ್ಥೆಯ ವಿದೇಶಿ ಗ್ರಾಹಕನನ್ನು ಸಂಸ್ಥೆಯ ಉದ್ಯೋಗಿಗಳು ಬಿಂದಾಸ್ ಆಗಿ ಡಾನ್ಸ್ ಮಾಡುವ ಮೂಲಕ ಸ್ವಾಗತಿಸಿದ್ದು, ಈ ಘಟನೆಗೆ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.

Read Full Story
03:39 PM (IST) Jul 23

India News Live 23rd July: 1654 ಕೋಟಿ ವಿದೇಶಿ ನೇರ ಹೂಡಿಕೆ ಉಲ್ಲಂಘನೆ, ಬೆಂಗಳೂರಿನ Myntra ವಿರುದ್ಧ ED ದೂರು!

ED ಪ್ರಕಾರ, ಮಿಂತ್ರಾ ಮತ್ತು ಅದರ ಸಂಬಂಧಿತ ಘಟಕಗಳು 'ಸಗಟು ನಗದು ಮತ್ತು ಸಾಗಣೆ' ವ್ಯವಹಾರಗಳಾಗಿ ಕಾರ್ಯನಿರ್ವಹಿಸುವುದಾಗಿ ಸುಳ್ಳು ಹೇಳಿಕೊಂಡು ಮಲ್ಟಿ-ಬ್ರಾಂಡ್ ಚಿಲ್ಲರೆ ವ್ಯಾಪಾರ (MBRT) ಚಟುವಟಿಕೆಗಳನ್ನು ನಡೆಸಿವೆ.

Read Full Story
03:24 PM (IST) Jul 23

India News Live 23rd July: ಪ್ರತಿ ತಿಂಗಳು 5 ಸಾವಿರ SIP ಮಾಡಿದರೆ, 10, 20, 30 ವರ್ಷಗಳಲ್ಲಿ ವ್ಯಕ್ತಿ ಗಳಿಸುವ ಹಣವೆಷ್ಟು?

₹5,000 monthly SIP over 10, 20, and 30 year ಕೇವಲ ₹5,000 ಮಾಸಿಕ SIP ನಿಂದ ನಿವೃತ್ತಿಯ ವೇಳೆಗೆ ₹1 ಕೋಟಿಗೂ ಹೆಚ್ಚು ಹಣ ಗಳಿಸಬಹುದು. ದೀರ್ಘಾವಧಿಯ ಹೂಡಿಕೆ ಮತ್ತು ಸರಿಯಾದ ನಿಧಿ ಆಯ್ಕೆ ಮೂಲಕ ಇದು ಸಾಧ್ಯ. ಈ ಲೇಖನದಲ್ಲಿ SIP ಹೂಡಿಕೆಯ ಬಗ್ಗೆ ತಿಳಿದುಕೊಳ್ಳಿ.

Read Full Story
02:54 PM (IST) Jul 23

India News Live 23rd July: ಬೀಚ್‌ನಲ್ಲಾಯ್ತು ದೊಡ್ಡ ಎಡವಟ್ಟು - ವೀಡಿಯೋಗೆ ಬಂದ ಕಾಮೆಂಟ್ ನೋಡಿ ಮತ್ತಷ್ಟು ಆಘಾತ

ಒಳ್ಳೆ ನೀರು ಯಾವುದು ಕೆಟ್ಟ ನೀರು ಯಾವುದು ಎಂದು ಮೇಲ್ನೋಟಕ್ಕೆ ಎಂಥ ದಡ್ಡರಿಗಾದರೂ ತಿಳಿಯುತ್ತೆ. ಆದರೆ ಇಲ್ಲೊಬ್ಬರು ಇನ್‌ಫ್ಲುಯೆನ್ಸರ್ ತಿಳಿಯದೇ ಬೀಚ್‌ನಲ್ಲಿ ಕೊಳಕು ನೀರಿನಲ್ಲಿ ಸ್ನಾನ ಮಾಡಿ ಈಗ ಬಾಯ್ಬಾಯಿ ಬಡ್ಕೊಂಡಿದ್ದಾಳೆ.

Read Full Story
01:33 PM (IST) Jul 23

India News Live 23rd July: ಬ್ಯಾಂಕ್‌ಗಳಲ್ಲಿ ನೇಮಕಾತಿ ಗಣನೀಯ ಕುಸಿತ, ಉನ್ನತ ಬ್ಯಾಂಕುಗಳ ವ್ಯವಹಾರ ಇಳಿಕೆಯಾಯ್ತಾ?

HDFC, SBI ಮತ್ತು Axis ಬ್ಯಾಂಕ್ ಸೇರಿದಂತೆ ಪ್ರಮುಖ ಬ್ಯಾಂಕುಗಳಲ್ಲಿ FY25ರಲ್ಲಿ ನೇಮಕಾತಿ ಗಣನೀಯವಾಗಿ ಕುಸಿತ ಕಂಡಿದೆ. ನಿಧಾನಗತಿಯ ಬೆಳವಣಿಗೆ, ಕಡಿಮೆಯಾದ ವಿಸ್ತರಣೆ ಮತ್ತು ಸುಧಾರಿತ ಕ್ಷೀಣತೆ ಮುಂತಾದ ಅಂಶಗಳು ಇದಕ್ಕೆ ಕಾರಣ ಎನ್ನಲಾಗಿದೆ. 

Read Full Story
01:27 PM (IST) Jul 23

India News Live 23rd July: ಫೇಕ್‌ ಬ್ಯಾಂಕ್‌, ಫೇಕ್‌ ಆಫೀಸರ್‌ ನೋಡಿದ್ದಾಯ್ತು, ನಕಲಿ ರಾಯಭಾರ ಕಚೇರಿಯನ್ನೇ ತೆರೆದ ಉತ್ತರ ಪ್ರದೇಶದ ವ್ಯಕ್ತಿ!

ಗಾಜಿಯಾಬಾದ್‌ನ ಹರ್ಷವರ್ಧನ್ ಜೈನ್ ನಕಲಿ ರಾಯಭಾರ ಕಚೇರಿ ನಡೆಸುತ್ತಿದ್ದರು, ನಕಲಿ ರಾಜತಾಂತ್ರಿಕ ಪ್ಲೇಟ್‌ಗಳನ್ನು ಬಳಸುತ್ತಿದ್ದರು ಮತ್ತು ವಿದೇಶಿ ಉದ್ಯೋಗಗಳನ್ನು ನೀಡುವುದಾಗಿ ಹವಾಲಾ ದಂಧೆ ನಡೆಸುತ್ತಿದ್ದರು ಎಂದು ಯುಪಿ ಎಸ್‌ಟಿಎಫ್‌ ಹೇಳಿದೆ.

Read Full Story
01:12 PM (IST) Jul 23

India News Live 23rd July: ತಾಯಿ ಮಗಳ ಕೊಲೆಗೆ ರೋಚಕ ಟ್ವಿಸ್ಟ್ - ಲಿಪ್‌ಸ್ಟಿಕ್ ಬಳಸಿ ಗೋಡೆ ಮೇಲೆ ಲಿವ್ ಇನ್ ಪಾರ್ಟನರ್ ಬರೆದಿದ್ದೇನು?

ವಿದಿಶಾದಲ್ಲಿ ಲೀವಿಂಗ್ ಪಾರ್ಟನರ್ ತನ್ನ ಸಂಗಾತಿ ಮತ್ತು ಮಗಳನ್ನು ಕೊಂದು ಗೋಡೆಯ ಮೇಲೆ ಲಿಪ್‌ಸ್ಟಿಕ್‌ನಿಂದ ಕೊಲೆಯ ಕಾರಣ ಬರೆದಿದ್ದಾನೆ. ರಾತ್ರಿಯಿಡಿ ಶವಗಳೊಂದಿಗೆ ಕಳೆದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. 

Read Full Story
01:04 PM (IST) Jul 23

India News Live 23rd July: ಲಾಭದ ಹಾದಿ ಹಿಡಿದ BSNL; 197 ಅನ್‌ಲಿಮಿಟೆಡ್ ಪ್ಲಾನ್ ವ್ಯಾಲಿಡಿಟಿ ಕಡಿತ! ಇನ್ನೂ ಹಲವು ಬದಲಾವಣೆ!

ಬಿಎಸ್ಎನ್ಎಲ್ ತನ್ನ 197 ರೂ. ಪ್ರಿಪೇಯ್ಡ್ ಪ್ಲಾನ್‌ನ ವ್ಯಾಲಿಡಿಟಿ ಮತ್ತು ಸೌಲಭ್ಯಗಳನ್ನು ಕಡಿತಗೊಳಿಸಿದೆ. 70 ದಿನಗಳ ವ್ಯಾಲಿಡಿಟಿಯನ್ನು 54 ದಿನಗಳಿಗೆ ಇಳಿಸಲಾಗಿದೆ ಮತ್ತು ಅನ್‌ಲಿಮಿಟೆಡ್ ಕರೆಗಳನ್ನು ಸೀಮಿತಗೊಳಿಸಲಾಗಿದೆ. ಡೇಟಾ ಮತ್ತು ಎಸ್‌ಎಂಎಸ್ ಸೌಲಭ್ಯಗಳಲ್ಲೂ ಬದಲಾವಣೆಗಳಾಗಿವೆ.
Read Full Story
12:35 PM (IST) Jul 23

India News Live 23rd July: Grossery Compare App - ಜನಸಾಮಾನ್ಯರಿಗೆ ಗುಡ್​ ನ್ಯೂಸ್!​ ಇನ್ಮುಂದೆ ದಿನಸಿ ಖರ್ಚಲ್ಲಿ ಮಹಾ ಉಳಿತಾಯ- ಡಿಟೇಲ್ಸ್​ ಇಲ್ಲಿದೆ..

ಮನೆಯಲ್ಲಿಯೇ ಕುಳಿತು ದಿನಸಿ ಸಾಮಗ್ರಿಗಳನ್ನು ತರಿಸಿಕೊಳ್ಳುವುದು ನಿಮಗೆ ಇದಾಗಲೇ ಗೊತ್ತು. ಆದರೆ ತಲೆಬಿಸಿ ಇಲ್ಲದೇ ದಿನಸಿ ಸಾಮಗ್ರಿಗಳಲ್ಲಿಯೂ ಉಳಿತಾಯ ಮಾಡಲು ನೆರವಾಗಲಿದೆ ಈ ಹೊಸ ಆ್ಯಪ್​. ಇಲ್ಲಿದೆ ಡಿಟೇಲ್ಸ್​...

Read Full Story
12:12 PM (IST) Jul 23

India News Live 23rd July: ಭಾರತೀಯ ಉದ್ಯೋಗಿಯ ಹಗರಣ ಬಯಲಿಗೆಳೆದ ಎರಡೇ ದಿನಕ್ಕೆ ಸಿಂಗಾಪುರದ ಮಹಿಳೆ ಸಾವು

ಭಾರತೀಯ ಉದ್ಯೋಗಿಯ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ ಎರಡೇ ದಿನಕ್ಕೆ ಸಿಂಗಾಪುರ ಮಹಿಳೆ ಸಾವನ್ನಪ್ಪಿದ್ದು, ಅಲ್ಲಿನ ವ್ಯಾಪಾರಿ ವಲಯದಲ್ಲಿ ಈ ಸಾವು ಭಯ ಮೂಡಿಸಿದೆ.

Read Full Story
11:23 AM (IST) Jul 23

India News Live 23rd July: ಛೀ ಇವನೆಂಥಾ ಗಂಡ - ಹೆಂಡ್ತಿ ಸ್ನಾನದ ವೀಡಿಯೋ ಮಾಡಿ ಕಾರಿನ ಇಎಂಐ ಕಟ್ಟುವಂತೆ ಬ್ಲಾಕ್‌ಮೇಲ್

ಆಕೆಗೆ ತಾಳಿ ಕಟ್ಟಿ ಕರೆತಂದವನ್ನೇ ಯಾರೂ ಮಾಡಲೇಬಾರದ್ದಂತಹ ಪೈಶಾಚಿಕ ಕೃತ್ಯವನ್ನು ಮಾಡಿದರೆ ಅಳುವುದಾದರೂ ಯಾರ ಬಳಿ, ಇಂತಹದ್ದೊಂದು ಸಂದಿಗ್ಧ ಸ್ಥಿತಿಗೆ ಸಿಕ್ಕ ಹೆಣ್ಣೊಬ್ಬಳು ಕಡೆಗೂ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಹಾಗಿದ್ದರೆ ಗಂಡ ಮಾಡಿದ್ದೇನು ಇಲ್ಲಿದೆ ನೋಡಿ ಡಿಟೇಲ್ ಸ್ಟೋರಿ...

Read Full Story
09:54 AM (IST) Jul 23

India News Live 23rd July: ಜಗದೀಪ್‌ ಧನ್‌ಕರ್‌ ರಾಜೀನಾಮೆಗೆ ಮೋದಿ ಸರ್ಕಾರ ಒತ್ತಡ ಹಾಕಿದ್ದೇಕೆ? ಇಲ್ಲಿದೆ ಇನ್‌ಸೈಡ್‌ ಸ್ಟೋರಿ

ಉಪರಾಷ್ಟ್ರಪತಿ ಜಗದೀಪ್ ಧನ್‌ಕರ್‌ ಅವರ ದಿಢೀರ್ ರಾಜೀನಾಮೆ ರಾಜಕೀಯ ಚರ್ಚೆಗೆ ಗ್ರಾಸವಾಗಿದೆ. ಕೇಂದ್ರ ಸರ್ಕಾರದ ಬಗ್ಗೆ ಅಸಮಾಧಾನ, ಜಾಟ್ ಸಮುದಾಯದ ಬಗ್ಗೆ ಅನ್ಯಾಯದ ಆರೋಪ, ನ್ಯಾಯಮೂರ್ತಿ ವರ್ಮಾ ವಿರುದ್ಧದ ಅರ್ಜಿ ಸ್ವೀಕಾರ ಸೇರಿದಂತೆ ಹಲವು ಕಾರಣಗಳಿವೆ ಎನ್ನಲಾಗಿದೆ.
Read Full Story