11:21 PM (IST) Apr 05

India Latest News Live 5 April 2026ಚಿನ್ನಸ್ವಾಮಿಯಲ್ಲಿ ಆರ್‌ಸಿಬಿ ಅಬ್ಬರಕ್ಕೆ ಚೆನ್ನೈ ಅಪ್ಪಚ್ಚಿ! ಈ ಸೀಸನ್ ಐಪಿಎಲ್‌ನಲ್ಲಿ ಸಿಎಸ್‌ಕೆಗೆ ಹ್ಯಾಟ್ರಿಕ್ ಸೋಲು!

ಟಿಮ್ ಡೇವಿಡ್, ದೇವದತ್ ಪಡಿಕ್ಕಲ್ ಮತ್ತು ರಜತ್ ಪಾಟೀದಾರ್ ಅವರ ಸ್ಪೋಟಕ ಬ್ಯಾಟಿಂಗ್ ನೆರವಿನಿಂದ ಆರ್‌ಸಿಬಿ 250 ರನ್‌ಗಳ ಬೃಹತ್ ಮೊತ್ತ ಕಲೆಹಾಕಿತು. ಇದಕ್ಕೆ ಉತ್ತರವಾಗಿ, ಚೆನ್ನೈ ಸೂಪರ್ ಕಿಂಗ್ಸ್ 207 ರನ್‌ಗಳಿಗೆ ಸರ್ವಪತನ ಕಂಡು 43 ರನ್‌ಗಳ ಸೋಲನುಭವಿಸಿತು. ಈ ಗೆಲುವಿನೊಂದಿಗೆ ಆರ್‌ಸಿಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದರೆ, ಸತತ ಮೂರನೇ ಸೋಲು ಕಂಡ ಸಿಎಸ್‌ಕೆ ಕೊನೆಯ ಸ್ಥಾನಕ್ಕೆ ಕುಸಿಯಿತು.
Read Full Story
10:47 PM (IST) Apr 05

India Latest News Live 5 April 2026ಪಾರ್ಟಿಗಳಲ್ಲಿ ಒಂದೆರಡು ಗಂಟೆ ಕುಣಿದು ಕೋಟಿ ಕೋಟಿ ಗಳಿಸ್ತಾರೆ ಈ ಸ್ಟಾರ್​ ನಟರು - ಇವರ ಸಂಭಾವನೆ ಹೀಗಿದೆ

ಸ್ಟಾರ್ ನಟರು ಕೇವಲ ಸಿನಿಮಾಗಳಿಂದ ಮಾತ್ರವಲ್ಲದೆ, ಮದುವೆ, ಹುಟ್ಟುಹಬ್ಬದಂತಹ ಖಾಸಗಿ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿ ಕೋಟಿಗಟ್ಟಲೆ ಹಣ ಗಳಿಸುತ್ತಾರೆ. ಈ ಲೇಖನದಲ್ಲಿ ಶಾರುಖ್ ಖಾನ್, ಕತ್ರಿನಾ ಕೈಫ್, ಸಲ್ಮಾನ್ ಖಾನ್ ರಂತಹ ಪ್ರಮುಖ ತಾರೆಯರು ಪಡೆಯುವ ಸಂಭಾವನೆಯ ಅಂದಾಜು ವಿವರಗಳಿವೆ.
Read Full Story
10:13 PM (IST) Apr 05

India Latest News Live 5 April 2026ಸಿಎಸ್‌ಕೆ ಬೌಲರ್‌ಗಳನ್ನು ಅಟ್ಟಾಡಿಸಿ ಹೊಡೆದ ಆರ್‌ಸಿಬಿ! ಈ ಸೀಸನ್‌ನಲ್ಲಿ ಹೊಸ ದಾಖಲೆ ನಿರ್ಮಾಣ

ಬೆಂಗಳೂರು: 19ನೇ ಸೀಸನ್‌ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಬದ್ದ ಎದುರಾಳಿ ಚೆನ್ನೈ ಸೂಪರ್ ಕಿಂಗ್ಸ್ ಎದುರು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಬೃಹತ್ ಮೊತ್ತ ಕಲೆಹಾಕಿದೆ. ಈ ಮೂಲಕ ಆರ್‌ಸಿಬಿ ಅಪರೂಪದ ದಾಖಲೆ ಬರೆದಿದೆ.

Read Full Story
09:23 PM (IST) Apr 05

India Latest News Live 5 April 2026ಪದೇ ಪದೇ ತಪ್ಪು ವ್ಯಕ್ತಿನೇ ಯಾಕೆ ಆಯ್ಕೆ ಮಾಡ್ತೀರಾ? ಆ ಗುಟ್ಟು ಬಿಚ್ಚಿಟ್ಟ ಮನಃಶಾಸ್ತ್ರ!

ಪದೇ ಪದೇ ಸಂಬಂಧಗಳು ಮುರಿದು ಬೀಳಲು ನಿಮ್ಮ ಕೆಟ್ಟ ಟೈಮ್ ಕಾರಣವಲ್ಲ, ಬದಲಿಗೆ ನಿಮ್ಮ ಬಾಲ್ಯದ ಅನುಭವಗಳು ಮತ್ತು ಮನಸ್ಥಿತಿ ಕಾರಣವಾಗಿರುತ್ತದೆ. ನಮ್ಮ ಮನಸ್ಸು ತನಗೆ ಪರಿಚಿತವಿರುವ ಭಾವನೆಗಳನ್ನೇ ಹುಡುಕುವುದರಿಂದ, ಬಾಲ್ಯದ ನಕಾರಾತ್ಮಕ ವಾತಾವರಣವೇ ಮತ್ತೆ ಮತ್ತೆ ಕೆಟ್ಟ ಸಂಬಂಧಗಳಿಗೆ ನಮ್ಮನ್ನು ಸೆಳೆಯುತ್ತದೆ. ಈ ವಿಷವರ್ತುಲದಿಂದ ಹೊರಬರಲು ಆತ್ಮವಿಶ್ಲೇಷಣೆ ಮತ್ತು ಸ್ವಯಂ-ಪ್ರೀತಿ ಮುಖ್ಯ.
Read Full Story
09:10 PM (IST) Apr 05

India Latest News Live 5 April 2026ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್

ಜಲಸಂಧಿ ಓಪನ್‌ಗೆ ಡೆಡ್‌ಲೈನ್, ಅಮೆರಿಕ ಅಧ್ಯಕ್ಷ ಪದವಿಗೆ ಅಪಮಾನಕರ ಪದ ಬಳಕೆ ಮಾಡಿದ ಟ್ರಂಪ್ ಒಂದೇ ದಿನದ ಗಡುವು ನೀಡಿದ್ದು, ಅವಾಚ್ಯ ಶಬ್ದಗಳಿಂದ ಇರಾನ್ ನಿಂದಿಸಿದ್ದಾರೆ. ಟ್ರಂಪ್ ಕೊಟ್ಟ ವಾರ್ನಿಂಗ್ ಏನು? 

Read Full Story
07:50 PM (IST) Apr 05

India Latest News Live 5 April 2026ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್

ವರ್ಷದ ಮೊದಲೇ ರಾಘವ್ ಚಡ್ಡಾಗೆ ಆಪ್‌ನಿಂದ ಕೊಕ್ ಭವಿಷ್ಯ ನುಡಿದಿದ್ದ ಕುಮಾರ್ ವಿಶ್ವಾಸ್, ವಿಡಿಯೋ ವೈರಲ್ ಆಗಿದೆ. ಆಪ್ ಮುಂದಿನ ಟಾರ್ಗೆಟ್ ರಾಘವ್ ಚಡ್ಡಾ, ನೋಡುತ್ತಾ ಇರೀ ಆಪ್‌ನಿಂದ ಹೊರಬರುವ ಪರಿಸ್ಥಿತಿ ಎದುರಾಗಲಿದೆ ಎಂದು ಭವಿಷ್ಯ ನುಡಿದಿದ್ದರು.

Read Full Story
07:12 PM (IST) Apr 05

India Latest News Live 5 April 2026ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ

ಚುನಾವಣಾ ಪ್ರಚಾರ ಮುಗಿಸಿ ಮರಳುವಾದ ಬಿಜೆಪಿ ಮಹಿಳಾ ಅಭ್ಯರ್ಥಿ ಕಾರು ಅಪಘಾತ, ತೆಲೆಗೆ ಗಾಯ, ಕಾರು ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ. ಗಾಯಗೊಂಡಿರುವ ಅಭ್ಯರ್ಥಿಯನ್ನು ಆಸ್ಪತ್ರೆ ದಾಖಲಿಸಲಾಗಿದೆ.

Read Full Story
07:10 PM (IST) Apr 05

India Latest News Live 5 April 2026ಪೆನ್​ ಒಳಗೆ ಸಂಪೂರ್ಣ ಸಿಲೇಬಸ್​ ಕಾಪಿ - ಪರೀಕ್ಷೆಯಲ್ಲಿ ಸಿಕ್ಕಬಿದ್ದ ಭಾವಿ ಲಾಯರ್!​ ಟ್ಯಾಲೆಂಟ್​ಗೆ​ ಪೊಲೀಸರೂ ಸುಸ್ತು

 ಕಾನೂನು ವಿದ್ಯಾರ್ಥಿಯೊಬ್ಬ ಪರೀಕ್ಷೆಯಲ್ಲಿ ನಕಲು ಮಾಡಲು ವಿನೂತನ ಉಪಾಯ ಬಳಸಿದ್ದಾನೆ. ಆತ ತನ್ನೆಲ್ಲಾ ಪೆನ್ನುಗಳ ಮೇಲೆ ಸೂಜಿಯಿಂದ ಇಡೀ ಪಠ್ಯಕ್ರಮವನ್ನು ಕೆತ್ತಿ, ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದಾನೆ. ಈ ಪೆನ್ನುಗಳ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರು ಆತನ ಬುದ್ಧಿವಂತಿಕೆಗೆ ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

Read Full Story
06:18 PM (IST) Apr 05

India Latest News Live 5 April 2026ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ

ಅಕ್ಕಿಯಿಂದ ಸ್ಮಾರ್ಟ್‌ ಮೆಟಿರಿಯಲ್ ಅಭಿವೃದ್ಧಿಪಡಿಸಿದ ವಿಜ್ಞಾನಿಗಳ ತಂಡ, ದುಪ್ಪಟ್ಟಾಗಲಿದೆ ಬೇಡಿಕೆ, ಏನಿದು ಸ್ಮಾರ್ಟ್ ಮೆಟಿರಿಯಲ್ ಇದರ ಉಪಯೋಗವೇನು? ಇನ್ನು ಅಕ್ಕಿ ಬೇಡಿಕೆ ದುಪ್ಪಟ್ಟಾಗುವ ಸಾಧ್ಯತೆ ಇದೆ.

Read Full Story
05:49 PM (IST) Apr 05

India Latest News Live 5 April 2026ದಿವ್ಯಾ ಭಾರತಿ ಅಲ್ಪಾಯುಷಿ ಎಂಬುದು ಮೊದಲೇ ಗೊತ್ತಿತ್ತು.. ಹಾಗೇ, ಆಕೆ ಮರುಜನ್ಮ ಪಡೆಯುವುದೂ ನಿಜ; ಆದರೆ..!

ಕೇವಲ 19ನೇ ವಯಸ್ಸಿನಲ್ಲಿ ಇಡೀ ಚಿತ್ರರಂಗವೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ನಟಿ ದಿವ್ಯಾ ಭಾರತಿ, ಅಷ್ಟೇ ವೇಗವಾಗಿ ಇಹಲೋಕ ತ್ಯಜಿಸಿದ್ದು ಇಂದಿಗೂ ಒಂದು ನಿಗೂಢ. ಅವರ ಪುಣ್ಯತಿಥಿಯ ಈ ಸಂದರ್ಭದಲ್ಲಿ, ದಿವ್ಯಾ ಅವರ ಸೋದರಸಂಬಂಧಿ ಮತ್ತು ನಟಿ ಕೈನಾತ್ ಅರೋರಾ ಕೆಲವು ಕಹಿಸತ್ಯಗಳನ್ನು ಹಂಚಿಕೊಂಡಿದ್ದಾರೆ. 

Read Full Story
05:27 PM (IST) Apr 05

India Latest News Live 5 April 2026ಸಿಎಸ್‌ಕೆ ಎದುರು ಅಪರೂಪದ ದಾಖಲೆ ಬರೆಯಲು ವಿರಾಟ್ ಕೊಹ್ಲಿಗೆ ಬೇಕಿದೆ ಜಸ್ಟ್ 14 ರನ್!

ಇಂದು ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆಯಲಿರುವ ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವಿನ ಐಪಿಎಲ್ ಪಂದ್ಯದಲ್ಲಿ, ವಿರಾಟ್ ಕೊಹ್ಲಿ ಕೇವಲ 14 ರನ್ ಗಳಿಸಿದರೆ ಒಂದೇ ತಂಡದ ವಿರುದ್ಧ ಅತಿ ಹೆಚ್ಚು ರನ್ ಗಳಿಸಿದ ತಮ್ಮದೇ ದಾಖಲೆಯನ್ನು ಮುರಿಯಲಿದ್ದಾರೆ. ಗಾಯದ ಕಾರಣ ಧೋನಿ ಈ ಪಂದ್ಯದಲ್ಲಿ ಆಡುತ್ತಿಲ್ಲವಾದ್ದರಿಂದ, ಸಂಕಷ್ಟದಲ್ಲಿರುವ ಚೆನ್ನೈ ತಂಡದ ವಿರುದ್ಧ ಆರ್‌ಸಿಬಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರುವ ಅವಕಾಶ ಹೊಂದಿದೆ.

Read Full Story
04:31 PM (IST) Apr 05

India Latest News Live 5 April 2026ಶಾಕಿಂಗ್ ಸುದ್ದಿ - ಧುರಂಧರ್ ಚಿತ್ರಕ್ಕಿಂತ ಮೊದಲು 'ಡಿಸ್ಕೋ ಡ್ಯಾನ್ಸರ್' ಈ ದಾಖಲೆ ಮಾಡಿತ್ತಾ? ಅದು ಹೇಗೆ ನೋಡಿ..!

ತಂತ್ರಜ್ಞಾನ ಮತ್ತು ಮಾರ್ಕೆಟಿಂಗ್ ಇಲ್ಲದ ಕಾಲದಲ್ಲೇ ಮಿಥುನ್ ಚಕ್ರವರ್ತಿ ಅವರು ಸೃಷ್ಟಿಸಿದ ದಾಖಲೆಗಳು ಇಂದಿಗೂ ಸ್ಫೂರ್ತಿದಾಯಕ. 'ಡಿಸ್ಕೋ ಡ್ಯಾನ್ಸರ್' ಭಾರತೀಯ ಸಿನಿಮಾವನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಿದರೆ, 'ಧುರಂಧರ್' ನಂತಹ ಸಿನಿಮಾಗಳು ಆ ಮಾರುಕಟ್ಟೆಯನ್ನು ವಿಸ್ತರಿಸುತ್ತಿವೆ. ಏನೇ ಆದರೂ ಧುರಂಧರ್ ಸಿನಿಮಾ ಮೆಚ್ಚತಕ್ಕದ್ದು. 

Read Full Story
04:19 PM (IST) Apr 05

India Latest News Live 5 April 2026ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ

ಪ್ರೀತ್ಸೆ ಎಂದು ದಲಿತ ಅಪ್ರಾಪ್ತೆ ಹಿಂದೆ ಬಿದ್ದ ಕಿರಾತಕ, ನಿರಾಕರಿಸಿದ ಹುಡುಗಿ ಹಾಡಹಗಲೇ ಹತ್ಯೆ, ಅಕ್ಕ ಹಾಗೂ ತಮ್ಮನ ಜೊತೆ ಮೊಬೈಲ್ ಶಾಪ್‌ಗೆ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಅಟ್ಟಾಡಿಸಿಕೊಂಡು ಅಪ್ರಾಪ್ತೆಯನ್ನು ಹತ್ಯೆ ಮಾಡಲಾಗಿದೆ.

Read Full Story
03:51 PM (IST) Apr 05

India Latest News Live 5 April 2026ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ

ಜಾಗತಿಕ ಮಾನದಂಡ GMT ಬದಲು ಮಹಾಕಾಲ್ ಸ್ಟಾಂಡರ್ಟ್ ಟೈಮ್ (MST) ಪ್ರಸ್ತಾವನೆ ಇಟ್ಟ ಭಾರತ, ಜಾಗತಿಕ ಮಟ್ಟದಲ್ಲಿ ಸಮಯ ಹೇಳುವಾಗ ಜಿಎಂಟಿ ಎಂದು ಬಳಸಲಾಗುತ್ತದೆ. ಇದು ಬ್ರಿಟಿಷರು ಆಡಳಿತದಲ್ಲಿ ಕೊಟ್ಟ ಹೆಸರು, ಆದರೆ ಇನ್ನು ಜಾಗತಿಕವಾಗಿ ಮಹಾಕಾಲ್ ಸ್ಟಾಂಡರ್ಟ್ ಟೈಮ್ ಅಂಗೀಕರಿಸಲು ಪ್ರಸ್ತಾವನೆ ಇಡಲಾಗಿದೆ.

Read Full Story
03:03 PM (IST) Apr 05

India Latest News Live 5 April 2026ಇಂದಿನ ಆರ್‌ಸಿಬಿ-ಸಿಎಸ್‌ಕೆ ನಡುವಿನ ಮ್ಯಾಚ್ ಗೆಲ್ಲೋದು ಯಾರು? ಅಚ್ಚರಿ ಭವಿಷ್ಯ ನುಡಿದ ರವಿಚಂದ್ರನ್ ಅಶ್ವಿನ್

ಬೆಂಗಳೂರು: ಐಪಿಎಲ್ 2026ರ ಬಹುನಿರೀಕ್ಷಿತ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ನಡುವಿನ ಪಂದ್ಯಕ್ಕೂ ಮುನ್ನ, ಟೀಂ ಇಂಡಿಯಾದ ಅನುಭವಿ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ತಮ್ಮ ಭವಿಷ್ಯ ನುಡಿದಿದ್ದಾರೆ.

Read Full Story
03:02 PM (IST) Apr 05

India Latest News Live 5 April 2026ಅಮೆರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಸೇನಾ ರಕ್ಷಣಾ ಕಾರ್ಯಾಚರಣೆ, ಇರಾನ್ ನುಗ್ಗಿದ ಫೈಟರ್ ಜೆಟ್

ಅಮೆರಿಕ ಇತಿಹಾಸದಲ್ಲೇ ಅತ್ಯಂತ ಸವಾಲಿನ ಸೇನಾ ರಕ್ಷಣಾ ಕಾರ್ಯಾಚರಣೆ, ಇರಾನ್ ನುಗ್ಗಿದ ಫೈಟರ್ ಜೆಟ್, ಇರಾನ್ ಹಾಗೂ ಅಮೆರಿಕ ಯುದ್ಧ ತೀವ್ರ ಸ್ವರೂಪ ಪಡೆದುಕೊಂಡಿದೆ. ಅಮೆರಿಕ ಫೈಟೆರ್ ಜೆಟ್ ಪತನದ ಬಳಿಕ ಮಹತ್ವದ ಘಟನೆ ನಡೆದಿದೆ.

Read Full Story
02:06 PM (IST) Apr 05

India Latest News Live 5 April 2026ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಭವಿಷ್ಯದ ಬಗ್ಗೆ ಅಚ್ಚರಿಯ ಮಾತುಗಳನ್ನಾಡಿದ ಯುವರಾಜ್ ಸಿಂಗ್!

2027ರ ಏಕದಿನ ವಿಶ್ವಕಪ್‌ನಲ್ಲಿ ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಅವರ ಪಾಲ್ಗೊಳ್ಳುವಿಕೆಯ ಬಗ್ಗೆ ಟೀಂ ಮ್ಯಾನೇಜ್‌ಮೆಂಟ್ ಸ್ಪಷ್ಟ ನಿರ್ಧಾರ ತೆಗೆದುಕೊಳ್ಳಬೇಕು ಎಂದು ಮಾಜಿ ಆಟಗಾರ ಯುವರಾಜ್ ಸಿಂಗ್ ಒತ್ತಾಯಿಸಿದ್ದಾರೆ. ಈ ಇಬ್ಬರು ದಿಗ್ಗಜ ಆಟಗಾರರೊಂದಿಗೆ ಪಾರದರ್ಶಕ ಮಾತುಕತೆ ನಡೆಸಿ, ಅವರ ಭವಿಷ್ಯದ ಬಗ್ಗೆ ಗೊಂದಲವಿಲ್ಲದಂತೆ ನೋಡಿಕೊಳ್ಳಬೇಕು ಎಂದು ಯುವಿ ಸಲಹೆ ನೀಡಿದ್ದಾರೆ.
Read Full Story
01:42 PM (IST) Apr 05

India Latest News Live 5 April 2026ಪತ್ನಿ ರಶ್ಮಿಕಾ ಹುಟ್ಟುಹಬ್ಬಕ್ಕೆ ''ಐ ಲವ್ ಯೂ ಜಯಮ್ಮ' ಎಂದು ವಿಶ್ ಮಾಡಿದ ಪತಿ ವಿಜಯ್; ಇದೇನ್ ಮ್ಯಾಟರ್ ನೋಡಿ!

ವೈಯಕ್ತಿಕ ಜೀವನದಲ್ಲಿ ವಿಜಯ್ ದೇವರಕೊಂಡ ಅವರ ಕೈಹಿಡಿದು ಸುಖವಾಗಿರುವ ರಶ್ಮಿಕಾ, ವೃತ್ತಿಜೀವನದಲ್ಲೂ ಯಶಸ್ಸಿನ ಉತ್ತುಂಗದಲ್ಲಿದ್ದಾರೆ. ಕೊಡಗಿನಿಂದ ಶುರುವಾದ ಈ ಸುಂದರಿಯ ಪಯಣ ಇಂದು ಇಡೀ ಭಾರತ ಮೆಚ್ಚುವ ಮಟ್ಟಕ್ಕೆ ಬೆಳೆದಿರುವುದು ನಿಜಕ್ಕೂ ಹೆಮ್ಮೆಯ ವಿಷಯ. ಹ್ಯಾಪಿ ಬರ್ತ್‌ಡೇ ರಶ್ಮಿಕಾ ಮಂದಣ್ಣ!

Read Full Story
12:55 PM (IST) Apr 05

India Latest News Live 5 April 2026ಸ್ಟೇಟಸ್‌ಗಾಗಿ ಹೊಸ ಕಾರ್ ತಗೋತಿದ್ದೀರಾ? ವಾರೆನ್ ಬಫೆಟ್ ಪ್ರಕಾರ ಈ 5 ತಪ್ಪುಗಳನ್ನು ಮಾತ್ರ ಮಾಡ್ಬೇಡಿ!

ಶ್ರೀಮಂತರಾಗಬೇಕು ಅನ್ನೋ ಆಸೆ ಎಲ್ಲರಿಗೂ ಇರುತ್ತೆ. ಆದರೆ, ಅದಕ್ಕಾಗಿ ಕೆಲವು ನಿಯಮಗಳನ್ನು ಪಾಲಿಸಬೇಕು ಮತ್ತು ಕೆಲವು ತಪ್ಪುಗಳನ್ನು ಮಾಡಬಾರದು. ವಿಶ್ವದ ಖ್ಯಾತ ಹೂಡಿಕೆದಾರ ವಾರೆನ್ ಬಫೆಟ್ ಹೇಳುವ ಪ್ರಕಾರ, ಶ್ರೀಮಂತರಾಗಲು ಈ ತಪ್ಪುಗಳನ್ನು ಮಾಡಲೇಬಾರದು.
Read Full Story
11:15 AM (IST) Apr 05

India Latest News Live 5 April 2026'ದಯವಿಟ್ಟು ಕ್ಷಮಿಸಿ..' - ಧೋನಿ, ಕಪಿಲ್‌ ದೇವ್‌ಗೆ ಬಹಿರಂಗವಾಗಿ ಕ್ಷಮೆ ಕೇಳಿದ ಯುವರಾಜ್‌ ಸಿಂಗ್!

ನವದೆಹಲಿ: ಭಾರತಕ್ಕೆ ವಿಶ್ವಕಪ್ ಗೆದ್ದುಕೊಟ್ಟ ನಾಯಕರಾದ ಕಪಿಲ್ ದೇವ್ ಹಾಗೂ ಎಂ ಎಸ್ ಧೋನಿ ಮೇಲೆ ಪದೇ ಪದೇ ಬಹಿರಂಗವಾಗಿ ಕಿಡಿಕಾರುತ್ತಿರುವ ತಮ್ಮ ತಂದೆಯ ಹೇಳಿಕೆಯ ಬಗ್ಗೆ ಯುವರಾಜ್ ಸಿಂಗ್ ಪಾಡ್‌ಕಾಸ್ಟ್‌ವೊಂದರಲ್ಲಿ ಬಹಿರಂಗವಾಗಿಯೇ ಕ್ಷಮೆಯಾಚಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

Read Full Story