ನಾನು ನೀಲಿ ಡ್ರಂ ಆಗಲಾರೆ, ಪತ್ನಿಗಾಗಿ ಮಿಡಿದ ಪತಿಯ ಹೃದಯದಿಂದ ಪೊಲೀಸರು ಕಂಗಾಲು, ವಿಚಿತ್ರ ಬೇಡಿಕೆಯೊಂದನ್ನು ಪೊಲೀಸರ ಮುಂದೆ ಇಟ್ಟಿದ್ದಾನೆ. ಪೊಲೀಸರಿಗೆ ಈ ಬೇಡಿಕೆಯನ್ನು ತಳ್ಳಿ ಹಾಕುವಂತಿಲ್ಲ, ಕಾರಣ ಈತ ಮೊದಲೇ ನೀಲಿ ಡ್ರಂ ಕತೆ ಹೇಳಿದ್ದಾನೆ.
- Home
- News
- India News
- India Latest News Live: ನಾನು ನೀಲಿ ಡ್ರಂ ಆಗಲಾರೆ, ಪತ್ನಿಗಾಗಿ ಮಿಡಿದ ಪತಿಯ ಹೃದಯದಿಂದ ಪೊಲೀಸರು ಕಂಗಾಲು
India Latest News Live: ನಾನು ನೀಲಿ ಡ್ರಂ ಆಗಲಾರೆ, ಪತ್ನಿಗಾಗಿ ಮಿಡಿದ ಪತಿಯ ಹೃದಯದಿಂದ ಪೊಲೀಸರು ಕಂಗಾಲು

ಪಾಲ್ಘರ್: ಪಶು ವಿಮಾ ಪರಿಹಾರ ವಿಳಂಬ ಖಂಡಿಸಿ ರೈತನೊಬ್ಬ ತನ್ನ ಮೃತ ಎಮ್ಮೆಯ ಕಳೇಬರ ಇರಿಸಿ ಬ್ಯಾಂಕ್ ಮುಂದೆ ಪ್ರತಿಭಟಿಸಿದ ಪ್ರಸಂಗ ಮಹಾ ರಾಷ್ಟ್ರದ ಪಾಲ್ಘರ್ ಜಿಲ್ಲೆಯಲ್ಲಿ ನಡೆದಿದೆ. ಇಲ್ಲಿನ ತಕ್ಷಾಡ ಗ್ರಾಮದ ನವಸು ದಿಘಾ ಎಂಬ ರೈತ, 2022ರಲ್ಲಿ ಬ್ಯಾಂಕಿನಿಂದ 12 ಲಕ್ಷ ರು. ಸಾಲ ಪಡೆದು 10 ಎಮ್ಮೆ ಖರೀದಿಸಿದ್ದ ಹಾಗೂ ವಿಮೆ ಮಾಡಿಸಿದ್ದ. ಕಳೆದ 3 ವರ್ಷ ಗಳಲ್ಲಿ ಸಾವನ್ನಪ್ಪಿದ್ದ 2 ಎಮ್ಮೆಗಳಿಗೆ ವಿಮೆ ಹಣವೇ ಬಂದಿರಲಿಲ್ಲ. ಇದರಿಂದ ಆಕ್ರೋಶಗೊಂಡು ಸತ್ತಿದ್ದ ಎಮ್ಮೆ ತೆಗೆದುಕೊಂಡು ಬಂದ ಆತ ಬ್ಯಾಂಕ್ ಎದುರು ಪ್ರತಿಭಟಿಸಿದ್ದಾನೆ. ಆಗ ಬೆಚ್ಚಿದ ಬ್ಯಾಂಕು, 1 ತಿಂಗಳಲ್ಲಿ ವಿಮೆ ಹಣ ನೀಡುವ ಲಿಖಿತ ಭರವಸೆ ನೀಡಿದೆ.
India Latest News Live 3 November 2025ನಾನು ನೀಲಿ ಡ್ರಂ ಆಗಲಾರೆ, ಪತ್ನಿಗಾಗಿ ಮಿಡಿದ ಪತಿಯ ಹೃದಯದಿಂದ ಪೊಲೀಸರು ಕಂಗಾಲು
India Latest News Live 3 November 2025'ಫೋನ್ ಚಾರ್ಜರ್ ಮಿಸ್ ಆಯ್ತು..' ಸೋಶಿಯಲ್ ಮೀಡಿಯಾದಲ್ಲಿ ಎಐ ಮಹಾಭಾರತ್ ಫುಲ್ ಟ್ರೋಲ್!
AI Mahabharat Series Massively Trolled on Social Media ಜಿಯೋ ಹಾಟ್ಸ್ಟಾರ್ನ ಎಐ ವೆಬ್ ಸಿರೀಸ್, 'ಮಹಾಭಾರತ್ ಏಕ್ ಧರ್ಮಯುದ್ಧ್' ಸೋಶಿಯಲ್ ಮೀಡಿಯಾದಲ್ಲಿ ನಗೆಪಾಟಲಿಗೆ ಈಡಾಗಿದೆ.
India Latest News Live 3 November 2025ಕೋಟಿಯೊಡೆಯ ಬೀಡಿ ಸಾಮ್ರಾಜ್ಯದ ಮಾಲೀಕನ ದುರಂತ ಅಂತ್ಯ - ಕುಡಿದ ಮತ್ತಿನಲ್ಲಿ ತಂದೆಗೆ ಗುಂಡಿಕ್ಕಿದ ಮಗ
Dinesh Beedi owner death: ಪ್ರಸಿದ್ಧ ದಿನೇಶ್ ಬೀಡಿ ಸ್ಥಾಪಕ, ಉದ್ಯಮಿ ಸುರೇಶ್ ಚಂದ್ ಅಗರ್ವಾಲ್ ಅವರನ್ನು ಅವರ ಮಗ ನರೇಶ್ ಗುಂಡಿಕ್ಕಿ ಹತ್ಯೆ ಮಾಡಿ ಬಳಿಕ ತಾನು ಸಾವಿಗೆ ಶರಣಾಗಿದ್ದಾನೆ. ಮದ್ಯಪಾನದ ವಿಚಾರವಾಗಿ ತಂದೆ ಆಕ್ಷೇಪಿಸಿದ್ದೇ ಈ ದುರಂತಕ್ಕೆ ಕಾರಣ ಎಂದು ತಿಳಿದು ಬಂದಿದೆ.
India Latest News Live 3 November 2025ಪುರುಷರ ಒಳ ಉಡುಪು ಕದ್ದು ಅಮೆರಿಕದಲ್ಲಿ ಸಿಕ್ಕಿಬಿದ್ದ ಭಾರತೀಯ ಮಹಿಳೆ! ಕಾರಣ ಕೇಳಿ ಅಯ್ಯೋ ಪಾಪ ಎಂದ ನೆಟ್ಟಿಗರು
India Latest News Live 3 November 2025ಹಾರಾಟದ ನಡುವೆ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ
ಹಾರಾಟದ ನಡುವೆ ಕಾಣಿಸಿಕೊಂಡ ತಾಂತ್ರಿಕ ಸಮಸ್ಯೆ, ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದೆ. ಸ್ಯಾನ್ಫ್ರಾನ್ಸಿಸ್ಕೋದಿಂದ ಹೊರಟ ವಿಮಾನ ದೆಹಲಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಸಮಸ್ಯೆಯಂದ ಮಂಗೋಲಿಯಾದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಆಗಿದೆ.
India Latest News Live 3 November 2025'ಚಕ್ ದೇ ಇಂಡಿಯಾ ಸೀಕ್ವಲ್ಗೆ ಅದ್ಭುತ ಕಥೆ..' ಅಮೋಲ್ ಮಜುಂದಾರ್ನಲ್ಲಿ ಕಬೀರ್ ಖಾನ್ ಕಥೆ ಕಂಡ ಕ್ರಿಕೆಟ್ ಫ್ಯಾನ್ಸ್!
Fans Hail Amol Muzumdar as Real-Life Kabir Khan After Women's World Cup Triumph ದೇಶೀಯ ಕ್ರಿಕೆಟ್ನಲ್ಲಿ ಮಿಂಚಿದರೂ ಭಾರತ ತಂಡದಲ್ಲಿ ಅವಕಾಶ ವಂಚಿತರಾಗಿದ್ದ ಅಮೋಲ್ ಮಜುಂದಾರ್, ಇದೀಗ ಕೋಚ್ ಆಗಿ ಭಾರತ ಮಹಿಳಾ ತಂಡಕ್ಕೆ ಚೊಚ್ಚಲ ವಿಶ್ವಕಪ್ ಗೆಲ್ಲಿಸಿಕೊಟ್ಟಿದ್ದಾರೆ.
India Latest News Live 3 November 2025ರಣಜಿ ಟ್ರೋಫಿ - ಕರ್ನಾಟಕದ ಬಿಗಿಹಿಡಿತ, ಸೋಲಿನ ಸುಳಿಯಲ್ಲಿ ಕೇರಳ
ರಣಜಿ ಟ್ರೋಫಿ ಪಂದ್ಯದಲ್ಲಿ ಕರ್ನಾಟಕದ 586 ರನ್ಗಳ ಬೃಹತ್ ಮೊತ್ತಕ್ಕೆ ಉತ್ತರವಾಗಿ, ಕೇರಳ ತನ್ನ ಮೊದಲ ಇನಿಂಗ್ಸ್ನಲ್ಲಿ 238 ರನ್ಗಳಿಗೆ ಆಲೌಟ್ ಆಗಿ ಫಾಲೋ-ಆನ್ಗೆ ಸಿಲುಕಿದೆ. ಬಾಬಾ ಅಪರಾಜಿತ್ (88) ಅವರ ಏಕಾಂಗಿ ಹೋರಾಟದ ಹೊರತಾಗಿಯೂ, ವಿದ್ವತ್ ಕಾವೇರಪ್ಪ ಅವರ ಮಾರಕ ಬೌಲಿಂಗ್ಗೆ ಕೇರಳ ತತ್ತರಿಸಿತು.
India Latest News Live 3 November 2025ಭ್ರಷ್ಟಾಚಾರ ವಿರೋಧಿ ಭಾಷಣ - ಗಂಟೆಯ ನಂತರ 80000 ಲಂಚದ ಜೊತೆ ಸಿಕ್ಕಿಬಿದ್ದ ACB DSP
ರಾಜಸ್ಥಾನದ ಎಸಿಬಿ ಡಿಸಿಪಿ ಭೈರುಲಾಲ್ ಮೀನಾ, ಅಂತಾರಾಷ್ಟ್ರೀಯ ಭ್ರಷ್ಟಾಚಾರ ವಿರೋಧಿ ದಿನದಂದೇ ಭ್ರಷ್ಟಾಚಾರದ ವಿರುದ್ಧ ಭಾಷಣ ಮಾಡಿದ್ದರು. ಆದರೆ, ಭಾಷಣ ಮುಗಿದ ಒಂದು ಗಂಟೆಯಲ್ಲೇ ₹80,000 ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದರು.
India Latest News Live 3 November 2025ಈ ಬಾರಿಯ ಮಹಿಳಾ ವಿಶ್ವಕಪ್ನಲ್ಲಿ ಗರಿಷ್ಠ ವಿಕೆಟ್, ಗರಿಷ್ಠ ರನ್ ಬಾರಿಸಿದ ಟಾಪ್-5 ಪ್ಲೇಯರ್ಸ್!
ಮಹಿಳಾ ಏಕದಿನ ವಿಶ್ವಕಪ್ನಲ್ಲಿ, ಭಾರತದ ಆಲ್ರೌಂಡರ್ ದೀಪ್ತಿ ಶರ್ಮಾ ತಮ್ಮ ಆಲ್ರೌಂಡ್ ಪ್ರದರ್ಶನಕ್ಕಾಗಿ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು. ಅವರು 22 ವಿಕೆಟ್ಗಳೊಂದಿಗೆ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿಹೊರಹೊಮ್ಮಿದ್ದಾರೆ.
India Latest News Live 3 November 2025ಕುಡಿದ ಮತ್ತಲ್ಲಿ ಅಡ್ಡಾದಿಡ್ಡಿಯಾಗಿ ಡಂಪರ್ ಚಲಾಯಿಸಿದ ಡ್ರೈವರ್, ರಸ್ತೆಯಲ್ಲೇ ಹೆಣವಾದ 19 ಮಂದಿ!
Drunken Dumper Drivers Deadly Rampage in Jaipur Kills 19 ರಾಜಸ್ಥಾನದ ಜೈಪುರದಲ್ಲಿ ಕುಡಿದ ಡಂಪರ್ ಚಾಲಕನೊಬ್ಬ ನಿಯಂತ್ರಣ ತಪ್ಪಿ ಸರಣಿ ಅಪಘಾತಕ್ಕೆ ಕಾರಣನಾಗಿದ್ದಾನೆ. ಈ ಭೀಕರ ದುರಂತದಲ್ಲಿ 19 ಜನರು ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ.
India Latest News Live 3 November 2025ಅಯ್ಯಪ್ಪ ಮಾಲೆ ಧರಿಸಿ ಬಂದ ಬಾಲಕನಿಗೆ ಪ್ರವೇಶ ನಿರಾಕರಿಸಿದ ಖಾಸಗಿ ಶಾಲೆ
boy rejected entrance in school: ಶಬರಿಮಲೆ ಯಾತ್ರೆಗಾಗಿ ಅಯ್ಯಪ್ಪ ಮಾಲೆ ಧರಿಸಿದ್ದ 5ನೇ ತರಗತಿ ವಿದ್ಯಾರ್ಥಿಗೆ ಆಂಧ್ರಪ್ರದೇಶದ ಖಾಸಗಿ ಶಾಲೆಯೊಂದು ಪ್ರವೇಶ ನಿರಾಕರಿಸಿದೆ. ಈ ಘಟನೆಯು ವ್ಯಾಪಕ ಪ್ರತಿಭಟನೆಗೆ ಕಾರಣವಾದ ನಂತರ, ಶಾಲೆಯು ಕ್ಷಮೆಯಾಚಿಸಿ ವಿದ್ಯಾರ್ಥಿಗೆ ಹಾಜರಾಗಲು ಅನುಮತಿ ನೀಡಿತು.
India Latest News Live 3 November 2025ವೊಡಾಫೋನ್-ಐಡಿಯಾ ಕಂಪನಿಯಲ್ಲಿ 50 ಸಾವಿರ ಕೋಟಿ ಹೂಡಿಕೆ ಮಾಡಲಿರುವ ಅಮೆರಿಕದ ಕಂಪನಿ!
US Firm Tillman Global Eyes $4-$6 Billion (₹52,000 Cr) Investment in Vodafone Idea ಅಮೆರಿಕದ ಟಿಲ್ಮನ್ ಗ್ಲೋಬಲ್ ಹೋಲ್ಡಿಂಗ್ಸ್ (ಟಿಜಿಹೆಚ್) ಸಂಸ್ಥೆಯು ವೊಡಾಫೋನ್-ಐಡಿಯಾ (ವಿ) ಕಂಪನಿಯಲ್ಲಿ ₹35,000-52,000 ಕೋಟಿ ಹೂಡಿಕೆ ಮಾಡಲು ಮಾತುಕತೆ ನಡೆಸುತ್ತಿದೆ.
India Latest News Live 3 November 2025ಒಂದೂ ಇಂಟರ್ನ್ಯಾಷನಲ್ ಮ್ಯಾಚ್ ಆಡದೇ ವಿಶ್ವಕಪ್ ಗೆಲ್ಲಿಸಿದ ಕೋಚ್! ಯಾರು ಈ ಮುಜುಂದಾರ್?
ಅಮೋಲ್ ಮುಜುಂದಾರ್: ಈ ಕೋಚ್ಗೆ ಒಂದೂ ಅಂತಾರಾಷ್ಟ್ರೀಯ ಮ್ಯಾಚ್ ಆಡಿದ ಅನುಭವವಿಲ್ಲ. ಟೀಮ್ ಇಂಡಿಯಾವನ್ನು ಪ್ರತಿನಿಧಿಬೇಕೆಂದು ಕನಸು ಕಂಡಿದ್ದರು. ಆದರೆ ಆ ಕನಸು ನನಸಾಗಲಿಲ್ಲ. ಆದರೀಗ ವಿಶ್ವಕಪ್ ಗೆದ್ದಿದ್ದಾರೆ.
India Latest News Live 3 November 2025ಏರ್ ಇಂಡಿಯಾ ದುರಂತದಲ್ಲಿ ಬುದುಕುಳಿದ ಏಕೈಕ ಲಕ್ಕಿ ಮ್ಯಾನ್ ಈಗಿನ ಪರಿಸ್ಥಿತಿ ಯಾರಿಗೂ ಬೇಡ
ಏರ್ ಇಂಡಿಯಾ ದುರಂತದಲ್ಲಿ ಬುದುಕುಳಿದ ಏಕೈಕ ಲಕ್ಕಿ ಮ್ಯಾನ್ ಈಗಿನ ಪರಿಸ್ಥಿತಿ ಯಾರಿಗೂ ಬೇಡ, 241 ಪ್ರಯಾಣಿಕರ ಬಲಿ ಪಡೆದ ಅಹಮ್ಮದಾಬಾದ್ ದುರಂತದಲ್ಲಿ ಅಚ್ಚರಿ ಎಂಬಂತೆ ವಿಶ್ವಾಸ್ ಕುಮಾರ್ ಬದುಕುಳಿದಿದ್ದರು. ವಿಶ್ವಾಸ್ ಕುಮಾರ್ ಈಗಿನ ಪರಿಸ್ಥಿತಿ ಹೇಗಿದೆ?
India Latest News Live 3 November 2025ಮದ್ವೆ ಆದ ಪ್ರಿಯತಮೆ ಮೇಲೆ ಕಣ್ಣಿಡಲು ಆಕೆಯ ಮನೆ ಹಿಂದೆಯೇ ಸಿಸಿಟಿವಿ ಫಿಕ್ಸ್ ಮಾಡಿದ ಹುಚ್ಚುಪ್ರೇಮಿ
CCTV installed for stalking: ಮಾಜಿ ಪ್ರಿಯತಮೆಯ ಚಲನವಲನಗಳ ಮೇಲೆ ಕಣ್ಣಿಡಲು ಯುವಕನೊಬ್ಬ ಆಕೆಯ ಮನೆ ಹಿಂದೆ ಸಿಸಿಟಿವಿ ಅಳವಡಿಸಿದ ವಿಚಿತ್ರ ಘಟನೆ ನಡೆದಿದೆ. ಸಂಬಂಧವನ್ನು ಮುರಿದುಕೊಂಡಿದ್ದಕ್ಕೆ ಆಕೆಗೆ ಕಿರುಕುಳ ನೀಡುತ್ತಿದ್ದ ಈತನ ಕೃತ್ಯವನ್ನು ದಂಪತಿ ಪತ್ತೆಹಚ್ಚಿ, ಪೊಲೀಸರಿಗೆ ದೂರು ನೀಡಿದ್ದಾರೆ.
India Latest News Live 3 November 2025ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಅಖಿಲೇಶ್ ಯಾದವ್ - ಮಹಾತ್ಮ ಗಾಂಧಿ ಹೇಳಿದ ಮೂರು ಮಂಗಗಳು ಎಂದ ಯೋಗಿ ಆದಿತ್ಯನಾಥ್!
Yogi Adityanath Calls Rahul, Akhilesh, Tejashwi 'Three Monkeys of INDIA Alliance ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಇಂಡಿಯಾ ಮೈತ್ರಿಕೂಟದ ನಾಯಕರಾದ ರಾಹುಲ್ ಗಾಂಧಿ, ತೇಜಸ್ವಿ ಯಾದವ್ ಮತ್ತು ಅಖಿಲೇಶ್ ಯಾದವ್ ಅವರನ್ನು 'ಮೂರು ಮಂಗಗಳು' ಎಂದು ಕರೆದಿದ್ದಾರೆ.
India Latest News Live 3 November 2025ವಿಶ್ವಕಪ್ ಟ್ರೋಫಿ ಬಿಗಿದಪ್ಪಿ ಫೋಸ್ ಕೊಟ್ಟ ಜಮಿಮಾ, ಮಂಧನಾ! ಅಭಿಮಾನಿಗಳ ಮನಗೆದ್ದ ಫೋಟೋವಿದು
ಹರ್ಮನ್ಪ್ರೀತ್ ಕೌರ್ ನೇತೃತ್ವದ ಭಾರತ ಮಹಿಳಾ ಕ್ರಿಕೆಟ್ ತಂಡವು ಫೈನಲ್ನಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್ಗಳಿಂದ ಸೋಲಿಸಿ ಚೊಚ್ಚಲ ಐಸಿಸಿ ಏಕದಿನ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.
India Latest News Live 3 November 2025ಮಾರ್ಕ್ ಜುಕರ್ಬರ್ಗ್ ದಾಖಲೆ ಮುರಿದು ಬರೀ 22 ವರ್ಷಕ್ಕೆ ಕೋಟ್ಯಧಿಪತಿಗಳಾದ ಭಾರತೀಯ ಮೂಲದ ಸ್ಕೂಲ್ ಫ್ರೆಂಡ್ಸ್!
Indian-Origin School Friends Become Youngest Self-Made Billionaires at 22 22 ವರ್ಷದ ಮೂವರು ಸ್ನೇಹಿತರಾದ ಬ್ರೆಂಡನ್ ಫೂಡಿ, ಆದರ್ಶ್ ಹಿರೇಮಠ್ ಹಾಗೂ ಸೂರ್ಯ ಮಿಧಾ, ತಮ್ಮ 'ಮರ್ಕಾರ್' ಎಐ ಸ್ಟಾರ್ಟ್ಅಪ್ ಮೂಲಕ ವಿಶ್ವದ ಅತ್ಯಂತ ಕಿರಿಯ ಸ್ವ-ನಿರ್ಮಿತ ಕೋಟ್ಯಧಿಪತಿಗಳಾಗಿದ್ದಾರೆ.
India Latest News Live 3 November 2025ನಾಲ್ಕು ಸೆಕೆಂಡ್ ಹೀಗೆ ಕಾಣಿಸಿಕೊಂಡು ಚಿತ್ರರಂಗವನ್ನೇ ಶೇಕ್ ಮಾಡಿದ್ದ ಐಶ್ವರ್ಯ ರೈ - ಆ ವಿಡಿಯೋ ವೈರಲ್
ನಟಿ ಐಶ್ವರ್ಯ ರೈ ಅವರು ಮಿಸ್ ಇಂಡಿಯಾ ಆಗುವ ಮುನ್ನ, ಆಮೀರ್ ಖಾನ್ ಜೊತೆಗಿನ ತಂಪು ಪಾನೀಯದ ಜಾಹೀರಾತಿನಲ್ಲಿ ಕೇವಲ ನಾಲ್ಕು ಸೆಕೆಂಡುಗಳ ಕಾಲ ಕಾಣಿಸಿಕೊಂಡಿದ್ದರು. 'ಸಂಜು' ಎಂಬ ಪಾತ್ರದಲ್ಲಿ ಕಾಣಿಸಿಕೊಂಡ ಆಕೆ ರಾತ್ರೋರಾತ್ರಿ ಫೇಮಸ್ ಆದರು. ಆ ವಿಡಿಯೋದಲ್ಲಿ ಏನಿದೆ?
India Latest News Live 3 November 2025ಮದುವೆಗೂ ಮೊದಲು 10 ಅಸಾಮಾನ್ಯ ಬೇಡಿಕೆ ಇಟ್ಟ ವರ - ನೋ ನೋ ಎಂದ ಹೆಣ್ಣು ಮಕ್ಕಳು
ಸಾಮಾಜಿಕ ಜಾಲತಾಣದಲ್ಲಿ ವರನೊಬ್ಬ ವಿವಾಹಕ್ಕೆ 10 ಬೇಡಿಕೆ ಇಟ್ಟಿದ್ದು ವೈರಲ್ ಆಗಿವೆ. ಪ್ರೀ-ವೆಡ್ಡಿಂಗ್ ಶೂಟ್ ಇಲ್ಲ, ವಧು ಸೀರೆಯುಡಬೇಕು ಹೀಗೆ 10 ಬೇಡಿಕೆಗಳನ್ನು ಆತ ಮುಂದಿಟ್ಟಿದ್ದಾನೆ. ಆದರೆ ಆತನ ಬೇಡಿಕೆಗಳನ್ನು ಹೆಣ್ಣು ಮಕ್ಕಳು ನಿರಾಕರಿಸಿದ್ದಾರೆ. ಆದರೆ ಕೆಲ ಪುರುಷರು ಸ್ವಾಗತಿಸಿದ್ದಾರೆ.