09:35 PM (IST) Jul 18

India latest news liveಬೃಹತ್ ಕಂಪೆನಿ ಆರಂಭಿಸೋ ಉದ್ದೇಶದಿಂದ ಖುದ್ದು ತಾನೇ ಗೇಟ್‌ ಕೀಪರ್‌ ಆದ ಐಐಟಿ-ಐಐಎಂ ಪದವೀಧರ!

ಐಐಟಿ-ಕಾನ್ಪುರ್ ಮತ್ತು ಐಐಎಂ-ಅಹಮದಾಬಾದ್ ಪದವೀಧರರಾದ ಅಭಿಷೇಕ್ ಕುಮಾರ್, ಗೋಲ್ಡ್‌ಮನ್ ಸ್ಯಾಚ್ಸ್‌ನಲ್ಲಿ ಉಪಾಧ್ಯಕ್ಷ ಹುದ್ದೆಯನ್ನು ತ್ಯಜಿಸಿ ಭದ್ರತಾ ಸಿಬ್ಬಂದಿಯಾಗಿ ಕೆಲಸ ಮಾಡಿದರು. ಈ ಅನುಭವದಿಂದ ಅವರು ಮೈಗೇಟ್ ಎಂಬ ಭದ್ರತೆ ಮತ್ತು ಸಮುದಾಯ ನಿರ್ವಹಣಾ ಆಪ್ ಅನ್ನು ಅಭಿವೃದ್ಧಿಪಡಿಸಿದರು.
Read Full Story
09:13 PM (IST) Jul 18

India latest news liveದೇಶ ಸೇವೆಗೆ ಸಿದ್ದಗೊಳ್ತಿದೆ ಮಣಿಪುರದ ಸ್ಥಳೀಯ ಹಾವೊಫಾ ಶ್ವಾನ - ಶೀಘ್ರದಲ್ಲೇ ಅಸ್ಸಾಂ ರೈಫಲ್ಸ್‌ಗೆ ಸೇರ್ಪಡೆ

ಮಣಿಪುರದ ಸ್ಥಳೀಯ ಹಾವೊಫಾ ಶ್ವಾನವೀಗ ದೇಶ ಸೇವೆಗೆ ಸಿದ್ಧಗೊಳ್ಳುತ್ತಿದ್ದು, ಅಸ್ಸಾಂ ರೈಫಲ್ಸ್ ವಿಭಾಗವನ್ನು ಸೇರಲಿದೆ. ಹಾವೊಫಾ ತಳಿಯ ಶ್ವಾನವು ಮಣಿಪುರ ತಂಗ್ಖುಲ್ ಪ್ರದೇಶದ ದೇಶಿಯ ತಳಿಯ ಶ್ವಾನವಾಗಿದೆ.

Read Full Story
07:41 PM (IST) Jul 18

India latest news liveಓನ್ಲಿ ಲ್ಯಾಂಬೋರ್ಘಿನಿ ಟಾರ್ಗೆಟ್ - ಐಷಾರಾಮಿ ಕಾರನ್ನೇ ಅಟ್ಟಿಸುವ ಶ್ವಾನ ವೀಡಿಯೋ ಭಾರಿ ವೈರಲ್

ಶ್ವಾನವೊಂದು ಐಷಾರಾಮಿ ಲ್ಯಾಂಬೋರ್ಘಿನಿ ಕಾರನ್ನೇ ಅಡ್ಡಗಟ್ಟಿ ಓಡಿಸಿದ್ದು, ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ.

Read Full Story
07:02 PM (IST) Jul 18

India latest news liveಭಾರತೀಯ ರೈಲ್ವೆ ಇಲಾಖೆ ಹೊಸ ಪ್ರಯತ್ನ; ಮೊದಲು ಬಾರಿಗೆ ಹೈದರಾಬಾದ್ ಸುತ್ತಲೂ ಹೊಸ ರಿಂಗ್ ರೈಲು ಯೋಜನೆ!

ಹೈದರಾಬಾದ್ ಸುತ್ತ ಮತ್ತೊಂದು ಓಆರ್‌ಆರ್‌ ಬರ್ತಿದೆ... ಆದೆರೆ ಇದು ಔಟರ್ ರಿಂಗ್ ರೋಡ್ ಅಲ್ಲ, ಔಟರ್ ರಿಂಗ್ ರೈಲು. ಇದು ಭಾರತದಲ್ಲಿಯೇ ಮೊದಲ ಪ್ರಾಜೆಕ್ಟ್ ಆಗಿದೆ. ಹಾಗಾದರೆ, ಏನಿದು ಪ್ರಾಜೆಕ್ಟ್? ಇದರಿಂದ ಆಗೋ ಲಾಭಗಳೇನು? ಇಲ್ಲಿ ತಿಳ್ಕೊಳ್ಳೋಣ.

Read Full Story
05:52 PM (IST) Jul 18

India latest news live16 ವರ್ಷದ ಹೋರಾಟ ಅಂತ್ಯ, ಸೇಂದಿ ಮದ್ಯದ ಪ್ರಮಾಣ ಮಿತಿ ಏರಿಸಲಿರುವ ಕೇರಳ!

ಕೇರಳ ಸರ್ಕಾರವು ತೆಂಗಿನಕಾಯಿಯಿಂದ ತಯಾರಿಸಿದ ಸೇಂದಿಯಲ್ಲಿನ ಆಲ್ಕೋಹಾಲ್ ಅಂಶವನ್ನು 8.98%ಕ್ಕೆ ಹೆಚ್ಚಿಸಿದೆ. ಈ ನಿರ್ಧಾರವು 16 ವರ್ಷಗಳ ಕಾನೂನು ಹೋರಾಟದ ನಂತರ ಬಂದಿದ್ದು, ಸಾಂಪ್ರದಾಯಿಕ ಸೇಂದಿ ಉದ್ಯಮಕ್ಕೆ ಉತ್ತೇಜನ ನೀಡುವ ನಿರೀಕ್ಷೆಯಿದೆ.
Read Full Story
04:55 PM (IST) Jul 18

India latest news liveಕಣ್ಣು ತೆರೆಸಿದ ಕ್ಲೌಡ್ ಪ್ಲೇ - ಪತಿ ಪರಸಂಗ ಗೊತ್ತಾಗ್ತಿದಂಗೆ ಹೆಸರಿನ ಮುಂದಿದ್ದ ಗಂಡನ ಹೆಸರು ಡಿಲೀಟ್

ಕ್ಲೌಡ್ ಪ್ಲೇ ಕನ್ಸರ್ಟ್‌ನ ಕಿಸ್ ಕ್ಯಾಮ್‌ನಲ್ಲಿ ಸಿಇಒ ಆಂಡಿ ಬೈರಾನ್ ತನ್ನ ಸಹೋದ್ಯೋಗಿಯೊಂದಿಗೆ ಸೆರೆಯಾಗಿದ್ದು, ಪತ್ನಿ ಮೇಗನ್ ಕೆರ್ರಿಗನ್ ಗಂಡನ ಹೆಸರನ್ನು ತೆಗೆದುಹಾಕಿದ್ದಾರೆ. ಈ ಘಟನೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಅನೈತಿಕ ಸಂಬಂಧದ ಬಗ್ಗೆ ಚರ್ಚೆ ಹುಟ್ಟುಹಾಕಿದೆ.
Read Full Story
04:53 PM (IST) Jul 18

India latest news liveತಾರಕ್ ಕೈಬಿಟ್ಟ ಅಷ್ಟೂ ಚಿತ್ರಗಳು ಸೂಪರ್‌ ಹಿಟ್‌, ಬೇರೆಯವರಿಗೆ ಯಶಸ್ಸು ತಂದುಕೊಟ್ಟ ಚಿತ್ರಗಳಿವು!

ಟಾಲಿವುಡ್ ನಟ ಎನ್.ಟಿ.ಆರ್ ತಿರಸ್ಕರಿಸಿದ ಎಂಟು ಚಿತ್ರಗಳು ಬಾಕ್ಸ್ ಆಫೀಸ್‌ನಲ್ಲಿ ಭರ್ಜರಿ ಯಶಸ್ಸು ಕಂಡವು. ಕಿಕ್, ಆರ್ಯ, ಪಟಾಸ್, ರುದ್ರಮದೇವಿ ಸೇರಿದಂತೆ ಹಲವು ಚಿತ್ರಗಳು ಈ ಪಟ್ಟಿಯಲ್ಲಿವೆ. ಈ ಚಿತ್ರಗಳ ಯಶಸ್ಸಿನ ಹಿಂದಿನ ಕಾರಣವೇನು?
Read Full Story
04:23 PM (IST) Jul 18

India latest news liveಮೆಗಾಸ್ಟಾರ್ ಚಿರಂಜೀವಿ ರಾಜಕೀಯ ಪಟ್ಟು ಬಿಚ್ಚಿಟ್ಟ ಲೆಜೆಂಡ್ ನಟನ ಮಗಳು ಶಾರದಾ!

ತೆಲುಗು ಖ್ಯಾತ ನಟ ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಪುತ್ರಿ ಶಾರದಾ, ಚಿರಂಜೀವಿ ಅವರ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿವೆ. ತಮ್ಮ ಊರಿಗೆ ಚಿರಂಜೀವಿ ಮಾಡಿದ ಸಹಾಯ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ. ಏನದು ಸಹಾಯ ಅಂತ ತಿಳ್ಕೊಳ್ಳೋಣ.

Read Full Story
04:17 PM (IST) Jul 18

India latest news liveಆಪರೇಷನ್‌ ಸಿಂದೂರ್‌ ಡ್ಯಾಮೇಜ್‌ನಿಂದ ಇನ್ನೂ ಚೇತರಿಸಿಕೊಳ್ಳದ ಪಾಕ್‌, ಏರ್‌ಬೇಸ್‌ ಇನ್ನೂ 20 ದಿನ ಕ್ಲೋಸ್‌!

ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತೀಯ ವಾಯುಪಡೆಯು ಪಾಕ್‌ನ ವಾಯುನೆಲೆಯ ಮೇಲೆ ನಡೆಸಿದ ನಿಖರವಾದ ದಾಳಿ ಎಷ್ಟು ಪರಿಣಾಮ ಬೀರಿದೆ ಎಂದರೆ, ಅಲ್ಲಿನ ಏಕೈಕ ರನ್‌ವೇಯ ಮಧ್ಯದಲ್ಲಿ ಸುಮಾರು 19 ಅಡಿ ಅಗಲದ (43 ಅಡಿ ವ್ಯಾಸ) ಬೃಹತ್ ಕುಳಿಯನ್ನು ಸೃಷ್ಟಿಸಿದೆ. ಅಂದಿನಿಂದ ಈವರೆಗೂ ಈ ಏರ್‌ಬೇಸ್‌ ನಿರುಪಯುಕ್ತವಾಗಿದೆ.

Read Full Story
03:34 PM (IST) Jul 18

India latest news liveಅದಾನಿ ವಿಲ್ಮಾರ್‌ನ ಶೇ. 20ರಷ್ಟು ಷೇರನ್ನು 7150 ಕೋಟಿಗೆ ಮಾರಲಿರುವ ಅದಾನಿ ಗ್ರೂಪ್‌!

ಅದಾನಿ ವಿಲ್ಮಾರ್‌ ಲಿಮಿಟೆಡ್‌ ತನ್ನ ಅಗ್ರಿ ಬ್ಯುಸಿನೆಸ್‌ನ 20% ಪಾಲನ್ನು ವಿಲ್ಮಾರ್ ಇಂಟರ್‌ನ್ಯಾಷನಲ್‌ಗೆ ₹7,150 ಕೋಟಿಗೆ ಮಾರಾಟ ಮಾಡಿದೆ. ಈ ಮಾರಾಟವು ಅದಾನಿ ಗ್ರೂಪ್‌ನ ಪ್ರಮುಖ ಮೂಲಸೌಕರ್ಯ ವ್ಯವಹಾರಗಳ ಮೇಲೆ ಕೇಂದ್ರೀಕರಿಸುವ ಯೋಜನೆಯ ಭಾಗವಾಗಿದೆ.
Read Full Story
03:18 PM (IST) Jul 18

India latest news liveಡ್ಯುರೇಬಲ್ಸ್‌ ಉದ್ಯಮಕ್ಕೆ ಇಳಿದ ರಿಲಯನ್ಸ್ ರಿಟೇಲ್‌, ಕೆಲ್ವಿನೇಟರ್ ಖರೀದಿಸಿದ ಇಶಾ ಅಂಬಾನಿ!

ರಿಲಯನ್ಸ್ ರಿಟೇಲ್, ಕೆಲ್ವಿನೇಟರ್ ಅನ್ನು ಸ್ವಾಧೀನಪಡಿಸಿಕೊಂಡಿದೆ. ಈ ಮೂಲಕ ಬಾಳಿಕೆ ಬರುವ ವಸ್ತುಗಳ ಮಾರುಕಟ್ಟೆಯಲ್ಲಿ ತನ್ನ ಹಿಡಿತ ವಿಸ್ತರಿಸಲು ಮುಂದಾಗಿದೆ. ಕೆಲ್ವಿನೇಟರ್‌ನ ವಿಶ್ವಾಸಾರ್ಹತೆ ಮತ್ತು ತಂತ್ರಜ್ಞಾನವನ್ನು ರಿಲಯನ್ಸ್‌ ತನ್ನ ಚಿಲ್ಲರೆ ಜಾಲದೊಂದಿಗೆ ಸಂಯೋಜಿಸಲಿದೆ.
Read Full Story
02:19 PM (IST) Jul 18

India latest news liveರೈಲಿನಲ್ಲಿ ದೂರು ನೀಡಿದ್ದಕ್ಕೆ ದೂರಿನಲ್ಲಿದ್ದ ಪಿಎನ್‌ಆರ್ ನಂಬರ್ ನೋಡಿ ಬಂದು ಥಳಿತ

ದೂರು ನೀಡಿದ ರೈಲ್ವೆ ಪ್ರಯಾಣಿಕರ ಮೇಲೆ ಕೆಟರಿಂಗ್ ಸಿಬ್ಬಂದಿ ಪ್ರಯಾಣಿಕರ ಪಿಎನ್‌ಆರ್ ನಂಬರ್ ನೋಡಿಬಂದು ಹಲ್ಲೆ ಮಾಡಿದಂತಹ ಆಘಾತಕಾರಿ ಘಟನೆ ರೈಲೊಂದರಲ್ಲಿ ನಡೆದಿದ್ದು, ಇದರ ವೀಡಿಯೋ ಈಗ ಭಾರಿ ವೈರಲ್ ಆಗಿದೆ.

Read Full Story
01:50 PM (IST) Jul 18

India latest news liveಕೋಲ್ಡ್‌ ಪ್ಲೇ ಕಾನ್ಸರ್ಟ್‌ನಲ್ಲಿ ಬಹಿರಂಗವಾಯ್ತು ಟೆಕ್‌ ಸಿಇಒ ಅನೈತಿಕ ಸಂಬಂಧ, ಯಾರೀಕೆ ಕ್ರಿಸ್ಟೀನ್ ಕ್ಯಾಬೋಟ್‌?

ಕೋಲ್ಡ್‌ ಪ್ಲೇ ಕಾನ್ಸರ್ಟ್‌ನ ಕಿಸ್ ಕ್ಯಾಮ್ ಶೋನಲ್ಲಿ ಆಸ್ಟ್ರೋನಾಮರ್‌ ಕಂಪನಿ ಸಿಇಒ ಬೈರಾನ್‌ ಮತ್ತು ಅವರ ಸಹೋದ್ಯೋಗಿ ಕ್ರಿಸ್ಟಿನ್ ಕ್ಯಾಬೋಟ್‌ ಅವರ ಸಂಬಂಧದ ವಿಡಿಯೋ ವೈರಲ್‌ ಆಗಿದೆ.

Read Full Story
01:12 PM (IST) Jul 18

India latest news liveHR ಜೊತೆ ಪ್ರಖ್ಯಾತ ಐಟಿ ಕಂಪನಿ ಸಿಇಒ Andy Byron ಲವ್ವಿ ಡವ್ವಿ ಜಗಜ್ಜಾಹಿರು ಮಾಡಿದ ಕೋಲ್ಡ್‌ ಪ್ಲೇ ಸಂಗೀತ ಕಚೇರಿ!

ಕೋಲ್ಡ್‌ ಪ್ಲೇ ಮ್ಯೂಸಿಕ್‌ ಬ್ಯಾಂಡ್‌ನ ಕ್ರಿಸ್‌ ಮಾರ್ಟಿನ್‌ ಅಚಾನಕ್‌ ಆಗಿ ಆಸ್ಟ್ರೋನಾಮರ್‌ ಕಂಪನಿಯ ಸಿಇಒ ಆಂಡಿ ಬೈರಾನ್‌ ಅದೇ ಕಂಪನಿಯ ಎಚ್‌ಆರ್‌ ಜೊತೆಗಿನ ರಿಲೇಷನ್‌ಷಿಪ್‌ಅನ್ನು ದೈತ್ಯ ಪರದೆಯ ಮೇಲೆ ಬಹಿರಂಗ ಮಾಡಿದ್ದಾರೆ.

Read Full Story
01:06 PM (IST) Jul 18

India latest news liveಬೈಕ್‌ಗೆ ಅಡ್ಡ ಬಂದ ನಾಯಿಯನ್ನು ಉಳಿಸಲು ಹೋಗಿ 17 ವರ್ಷದ ಹುಡುಗ ಸಾವು

ಬೈಕ್‌ಗೆ ಅಡ್ಡ ಬಂದ ಬೀದಿನಾಯಿಯ ಜೀವ ಉಳಿಸಲು ಹೋಗಿ 17 ವರ್ಷದ ತರುಣ ಸಾವನ್ನಪ್ಪಿದ್ದ ಮನಕಲುಕುವ ಘಟನೆ ಛತ್ತೀಸ್‌ಗಢದ ಬಿಲಾಯಿಯಲ್ಲಿ ನಡೆದಿದ್ದು, ಘಟನೆಯ ವೀಡಿಯೋ ಸ್ಥಳೀಯ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದ್ದು, ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

Read Full Story
12:02 PM (IST) Jul 18

India latest news liveನಿಮಿಷಾ ಪ್ರಿಯಾ ರಕ್ಷಣೆಗೆ ಮಧ್ಯಸ್ಥಿಕೆಗಾಗಿ ಯೆಮೆನ್‌ಗೆ ಹೋಗಬಯಸುವವರು ಕೇಂದ್ರವನ್ನು ಸಂಪರ್ಕಿಸಿ; ಸುಪ್ರೀಂ ಕೋರ್ಟ್!

ಯೆಮನ್‌ನಲ್ಲಿರುವ ನಿಮಿಷಾ ಪ್ರಿಯಾಳ ಬಿಡುಗಡೆಗೆ ಮಧ್ಯಸ್ಥಿಕೆ ವಹಿಸಲು ಬಯಸುವವರು ಕೇಂದ್ರ ಸರ್ಕಾರವನ್ನು ಸಂಪರ್ಕಿಸಬೇಕೆಂದು ಸುಪ್ರೀಂ ಕೋರ್ಟ್ ಸೂಚಿಸಿದೆ. ಮರಣದಂಡನೆಯನ್ನು ಮುಂದೂಡಲಾಗಿದ್ದು, ಕೇಂದ್ರ ಸರ್ಕಾರವು ಸಾಧ್ಯವಿರುವ ಎಲ್ಲ ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ತಿಳಿಸಿದೆ.
Read Full Story
11:58 AM (IST) Jul 18

India latest news liveಸೈಕಲ್ಲಾಷ್ಟು ಉದ್ದ ಇಲ್ಲ 8 ಚಕ್ರಗಳ ಟ್ರಕ್ ಓಡಿಸಿದ ಬಾಲಕ - ವೀಡಿಯೋ ಭಯಾನಕ

ಮಧ್ಯಪ್ರದೇಶದಲ್ಲಿ ಪುಟ್ಟ ಬಾಲಕನೊಬ್ಬ ಟ್ರಕ್ ಓಡಿಸುತ್ತಿರುವ ವಿಡಿಯೋ ವೈರಲ್ ಆಗಿದೆ. ತಂದೆಯೇ ಮಗನಿಗೆ ಟ್ರಕ್ ಓಡಿಸಲು ಕೊಟ್ಟಿದ್ದು, ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸರು ಕೇಸ್ ದಾಖಲಿಸಿದ್ದಾರೆ.
Read Full Story
08:57 AM (IST) Jul 18

India latest news liveಗರ್ಭದಲ್ಲೇ ಮಗು ಸಾವು ಎಂದ ಸರ್ಕಾರಿ ವೈದ್ಯರು - ಗಂಟೆಗಳ ಬಳಿಕ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ತಾಯಿ

ಮಧ್ಯಪ್ರದೇಶದ ಸರ್ಕಾರಿ ಆಸ್ಪತ್ರೆಯಲ್ಲಿ ಮಗು ಗರ್ಭದಲ್ಲೇ ಮೃತಪಟ್ಟಿದೆ ಗರ್ಭಪಾತ ಮಾಡಿ ಎಂದು ಘೋಷಿಸಿದ ಬಳಿಕ ಮಹಿಳೆಯೊಬ್ಬರು ಖಾಸಗಿ ಆಸ್ಪತ್ರೆಯಲ್ಲಿ ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಅಪರೂಪದ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. 

Read Full Story
08:48 AM (IST) Jul 18

India latest news liveಕೇತಗಾನಹಳ್ಳಿ ಒತ್ತುವರಿ ಕೇಸ್‌ - ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿಗೆ ಬಿಗ್ ರಿಲೀಫ್

ಬಿಡದಿ ಬಳಿಯ ಕೇತಗಾನಹಳ್ಳಿಯಲ್ಲಿ ಜಮೀನು ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ವಿರುದ್ಧದ ನ್ಯಾಯಾಂಗ ನಿಂದನೆ ವಿಚಾರಣೆಗೆ ಸುಪ್ರೀಂಕೋರ್ಟ್ ತಡೆ ನೀಡಿದೆ.

Read Full Story