MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ಮೆಗಾಸ್ಟಾರ್ ಚಿರಂಜೀವಿ ರಾಜಕೀಯ ಪಟ್ಟು ಬಿಚ್ಚಿಟ್ಟ ಲೆಜೆಂಡ್ ನಟನ ಮಗಳು ಶಾರದಾ!

ಮೆಗಾಸ್ಟಾರ್ ಚಿರಂಜೀವಿ ರಾಜಕೀಯ ಪಟ್ಟು ಬಿಚ್ಚಿಟ್ಟ ಲೆಜೆಂಡ್ ನಟನ ಮಗಳು ಶಾರದಾ!

ತೆಲುಗು ಖ್ಯಾತ ನಟ ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಪುತ್ರಿ ಶಾರದಾ, ಚಿರಂಜೀವಿ ಅವರ ಬಗ್ಗೆ ಹೇಳಿದ ಮಾತುಗಳು ವೈರಲ್ ಆಗಿವೆ. ತಮ್ಮ ಊರಿಗೆ ಚಿರಂಜೀವಿ ಮಾಡಿದ ಸಹಾಯ ಶತಮಾನಗಳವರೆಗೆ ನೆನಪಿನಲ್ಲಿ ಉಳಿಯುತ್ತದೆ ಎಂದಿದ್ದಾರೆ. ಏನದು ಸಹಾಯ ಅಂತ ತಿಳ್ಕೊಳ್ಳೋಣ.

1 Min read
Sathish Kumar KH
Published : Jul 18 2025, 04:23 PM IST
Share this Photo Gallery
  • FB
  • TW
  • Linkdin
  • Whatsapp
15
Image Credit : Instagram/Chiranjeevi

ನಟ ಚಿರಂಜೀವಿ ಸಿನಿಮಾ ಜೊತೆಗೆ ಸಮಾಜ ಸೇವೆಯಲ್ಲೂ ಮುಂದಿದ್ದಾರೆ. ಬ್ಲಡ್ ಬ್ಯಾಂಕ್, ನೇತ್ರದಾನ ಇತ್ಯಾದಿಗಳಲ್ಲಿ ತೊಡಗಿಸಿಕೊಂಡಿದ್ದಾರೆ. ತಮಗಿಂತ ಹಿರಿನ ನಟರ ಬಗ್ಗೆ ಅಪಾರ ಗೌರವ ಇಟ್ಟುಕೊಂಡಿದ್ದಾರೆ. ತೆಲುಗು ಚಿತ್ರರಂಗದಲ್ಲಿ ಗುಮ್ಮಡಿ ವೆಂಕಟೇಶ್ವರ ರಾವ್ ಅವರೂ ಒಬ್ಬ ಲೆಜೆಂಡ್ ನಟರಾಗಿದ್ದರು.

25
Image Credit : Youtube/TeluguOne

ಎನ್.ಟಿ.ಆರ್, ಎ.ಎನ್.ಆರ್ ಕಾಲದಿಂದ ಹಿಡಿದು ಚಿರಂಜೀವಿ, ಬಾಲಯ್ಯ, ನಾಗಾರ್ಜುನರವರೆಗೆ ಎಲ್ಲರ ಜೊತೆಗೂ ಗುಮ್ಮಡಿ ವೆಂಕಟರಾವ್ ಅವರು ನಟಿಸಿದ್ದಾರೆ. ಪೌರಾಣಿಕ ಪಾತ್ರಗಳಲ್ಲೂ ಮಿಂಚಿದ್ದಾರೆ. ಗುಮ್ಮಡಿ ಅವರಿಗೆ 5 ಜನ ಪುತ್ರಿಯರು, ಇಬ್ಬರು ಪುತ್ರರಿದ್ದಾರೆ.

Related Articles

Related image1
ನಾಗಾರ್ಜುನಗೆ ಮಿಸ್‌ ಆದ ಸಿನಿಮಾದಿಂದ ಚಿರಂಜೀವಿ ಬ್ಲಾಕ್‌ಬಸ್ಟರ್‌ ಹೊಡೆದ್ರು: ಯಾವುದು ಆ ಚಿತ್ರ!
Related image2
ನೀನು ಸೂಪರ್ ಆಕ್ಟರ್, ಹೀಗೆ ಜೀವನ ಹಾಳು ಮಾಡ್ಕೋಬೇಡ: ಕೋಟಗೆ ಎಚ್ಚರಿಕೆ ಕೊಟ್ಟಿದ್ರು ಚಿರಂಜೀವಿ
35
Image Credit : Instagram/Chiranjeevi

ಗುಮ್ಮಡಿ ವೆಂಕಟೇಶ್ವರ ರಾವ್ ಅವರ ಮಗಳು, ಗುಮ್ಮಡಿ ಶಾರದಾ ಒಂದು ಸಂದರ್ಶನದಲ್ಲಿ ಚಿರಂಜೀವಿ ಜೊತೆಗಿನ ಒಡನಾಟ, ಊರಿಗೆ ಮಾಡಿದ ಸಹಾಯದ ಬಗ್ಗೆ ಹೇಳಿದ್ದಾರೆ. ನಮ್ಮೂರ ಗುಡಿ ಶಿಥಿಲವಾಗಿತ್ತು. ಅಜ್ಜಿ, ಮುತ್ತಜ್ಜ ಕಟ್ಟಿಸಿದ ಗುಡಿ ಅದು. ರಸ್ತೆಗಿಂತ ಪೂರ್ಣವಾಗಿ ತಗ್ಗು ಗುಂಡಿಯಲ್ಲಿ ಸಿಲುಕಿಕೊಂಡಿತ್ತು. ಈ ದೇವಸ್ಥಾನದೊಳಗೆ ಮಳೆ ನೀರು ನುಗ್ಗುತ್ತಿತ್ತು. ಅದನ್ನ ರಿಪೇರಿ ಮಾಡೋಕೆ ಅಮ್ಮ, ಅಪ್ಪ ಪ್ರಯತ್ನಿಸಿದ್ದರು.

45
Image Credit : chiranjeevi instagram

ಇನ್ನು ನಮ್ಮ ಹಿರಿಯರು ಕಟ್ಟಿಸಿದ ದೇವಸ್ಥಾನ ರಿಪೇರಿ ಮಾಡಬೇಕು ಎನ್ನುವುದು ನಮ್ಮಮ್ಮನ  ಕೊನೆ ಆಸೆಯಾಗಿತ್ತು. ಆದರೆ ಅದು ಈಡೇರಲಿಲ್ಲ. ಅಪ್ಪನಿಂದಲೂ ಅದನ್ನು ದುರಸ್ತಿ ಮಾಡಲು ಆಗಲಿಲ್ಲ. ನಾನು ಚಿರಂಜೀವಿ ಸರ್‌ ಅವರನ್ನ ಭೇಟಿ ಮಾಡಿ ಗುಡಿಯ ಬಗ್ಗೆ ಹೇಳಿದೆ. ಅವರು ಆಗ ರಾಜಕೀಯದಿಂದ ದೂರ ಆಗಿದ್ದರು. ಆದರೂ ಅರ್ಧ ಗಂಟೆಯಲ್ಲಿ ಗುಡಿಯ ಫೈಲ್ ಮೂವ್ ಮಾಡಿ ಫಂಡ್ಸ್ ಬರುವಂತೆ ಮಾಡಿದ್ದರು.

55
Image Credit : chiranjeevi instagram

ನಟ ಚಿರಂಜೀವಿ ಅವರು ಸ್ವತಃ ಫೋನ್ ಮಾಡಿ, ದೇವಸ್ಥಾನ ಜೀರ್ಣೋದ್ಧಾರ ಫೈಲ್ ಅನುಮೋದನೆ ಕೊಡಿಸಿದ ಬಳಿಕ ಅನುದಾನವೂ ಬಂದಿತು. ಇದೀಗ ನಮ್ಮೂರಿಗೆ ನೂರು ವರ್ಷವಾದರೂ ನೆನಪು ಮಾಸಿ ಹೋಗದ ಹಾಗೆ ದೊಡ್ಡದಾಗಿ ಗುಡಿ ಕಟ್ಟಿದರು. ಒಂದು ಗುಡಿಗೆ 100 ವರ್ಷ ಆಯಸ್ಸು ಅಂತಾರೆ. ಹಾಗಾಗಿ ಚಿರಂಜೀವಿ ಸರ್ ಮಾಡಿದ ಸಹಾಯ ಮರೆಯೋಕೆ ಆಗಲ್ಲ ಅಂತ ಗುಮ್ಮಡಿ ಶಾರದಾ ಹೇಳಿದ್ದಾರೆ.

About the Author

SK
Sathish Kumar KH
ವಿಜಯನಗರ ಜಿಲ್ಲೆ ಕಂದಗಲ್‌ಪುರ ಗ್ರಾಮದವನು ಮೂಲತಃ ಶಿಕ್ಷಕ. ಆದರೆ, ಆಕರ್ಷಿಸಿದ್ದು ಪತ್ರಿಕೋದ್ಯಮ. ಎಂಟು ವರ್ಷಗಳಿಂದ ಪ್ರಜಾವಾಣಿ, ವಿಜಯವಾಣಿ ನಂತರ ಇದೀಗ ಏಷ್ಯಾನೆಟ್ ಕನ್ನಡದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಕರ್ನಾಟಕ ರಾಜಕಾರಣ ನೆಚ್ಚಿನ ಕ್ಷೇತ್ರ. ಡಿಜಿಟಲ್ ಮಾಧ್ಯಮಕ್ಕನುಗುಣವಾಗಿ ಶಿಕ್ಷಣ, ಆರೋಗ್ಯ, ಸಿನಿಮಾ ಸುದ್ದಿಗಳನ್ನೂ ಬರೆಯುತ್ತೇನೆ. ಕ್ರಿಕೆಟ್, ಕೃಷಿ ಇಷ್ಟ. ಓದು ನೆಚ್ಚಿನ ಹವ್ಯಾಸ.
ಚಿರಂಜೀವಿ
ಟಾಲಿವುಡ್
ದೇವಸ್ಥಾನ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved