MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಅನ್ಕೊಂಡಿದ್ದು ಒಂದು, ಆಗಿದ್ದು ಇನ್ನೊಂದು: ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ರಮೇಶ್‌ಗೆ ಆಯ್ತು ಭ್ರಮನಿರಸನ

ಅನ್ಕೊಂಡಿದ್ದು ಒಂದು, ಆಗಿದ್ದು ಇನ್ನೊಂದು: ಪ್ಲಾನ್ ಫ್ಲಾಪ್ ಆಗಿದ್ದಕ್ಕೆ ರಮೇಶ್‌ಗೆ ಆಯ್ತು ಭ್ರಮನಿರಸನ

ಕರ್ಣನ ಸಂತೋಷವನ್ನು ಕಸಿದುಕೊಳ್ಳಲು ರಮೇಶ್ ಮಾಡಿದ ಪ್ಲಾನ್ ವಿಫಲವಾಗಿದೆ. ಪತ್ನಿ ನಿಧಿ ಮತ್ತು ಅನಿರೀಕ್ಷಿತವಾಗಿ ತಾಳಿ ಕಟ್ಟಿದ ನಿತ್ಯಾ ಇಬ್ಬರೂ ಒಂದೇ ಸೂರಿನಡಿ ಬಂದರೂ, ಕರ್ಣನ ಮುಖದಲ್ಲಿನ ನಗು ಮಾಸಿಲ್ಲ. 

2 Min read
Mahmad Rafik
Published : Oct 22 2025, 09:43 PM IST
Share this Photo Gallery
  • FB
  • TW
  • Linkdin
  • Whatsapp
15
 ಕರ್ಣನ ಮುಖದಲ್ಲಿನ ನಗು
Image Credit : Zee Kannada

ಕರ್ಣನ ಮುಖದಲ್ಲಿನ ನಗು

ಎಡಗಡೆ ಹೆಂಡ್ತಿ, ಬಲಗಡೆ ಪ್ರೇಯಸಿ ನಿಂತ್ರೆ ಕರ್ಣನ ಮುಖದಲ್ಲಿನ ನಗು ಶಾಶ್ವತವಾಗಿ ನಿಂತು ಹೋಗುತ್ತೆ ಎಂದು ರಮೇಶ್ ಪ್ಲಾನ್ ಮಾಡಿದ್ದ. ಈ ಪ್ಲಾನ್ ಪ್ರಕಾರ, ನಿಧಿ ಮನೆಗೆ ಬೆಂಕಿ ಹಾಕಿ ಎಲ್ಲರೂ ತನ್ನ ಮನೆಗೆ ಬರುವಂತೆ ಮಾಡಿದ್ದಾನೆ. ಆರಂಭದಲ್ಲಿ ನಿಧಿ ಮತ್ತು ಶಾಂತಿ ಒಪ್ಪಿರಲ್ಲ. ಕರ್ಣನ ಅಜ್ಜಿಯ ಬಲವಂತಕ್ಕೆ ಎಲ್ಲರೂ ಬರುತ್ತಾರೆ.

25
ಅಚ್ಚರಿ ಬೆಳವಣಿಗೆಗೆ ರಮೇಶ್ ಕಾರಣ
Image Credit : Zee Kannada

ಅಚ್ಚರಿ ಬೆಳವಣಿಗೆಗೆ ರಮೇಶ್ ಕಾರಣ

ಮದುವೆ ಮನೆಯಲ್ಲಾದ ಅಚ್ಚರಿ ಬೆಳವಣಿಗೆಗೆ ರಮೇಶ್ ಕಾರಣವಾದ್ರೂ, ಆತನಿಗೂ ತಿಳಿಯದ ಹಲವು ರಹಸ್ಯಗಳು ನಿತ್ಯಾ ಮತ್ತು ಕರ್ಣನ ನಡುವೆಯೇ ಉಳಿದುಕೊಂಡಿವೆ. ನಿತ್ಯಾ ಕೊರಳಲ್ಲಿ ತಾಳಿ ನೋಡಿದ ಅಜ್ಜಿಯರು ಕರ್ಣನೇ ಕಟ್ಟಿದ್ದಾನೆ ಎಂದು ತಿಳಿದುಕೊಂಡು, ಮುಂದಿನ ಮದುವೆ ಶಾಸ್ತ್ರಗಳನ್ನು ಮಾಡಿಸಿದ್ದಾರೆ. ಪ್ರಿಯಕರನ್ನು ಕಳೆದುಕೊಂಡು ಆಘಾತಕ್ಕೊಳಗಾಗಿರುವ ನಿಧಿ, ತುಂಬಾ ತಾಳ್ಮೆಯಿಂದ ನಡೆದುಕೊಂಡಿದ್ದಾಳೆ.

Related Articles

Related image1
ನಿತ್ಯಾಳನ್ನು ಮದುವೆಯಾಗದೆ ಓಡಿದ್ದ ತೇಜಸ್‌ ಸಿಕ್ಕಿಬಿದ್ದಾಯ್ತು; ರೊಚ್ಚಿಗೆದ್ದ Karna Serial ಪ್ರೇಕ್ಷಕರು
Related image2
Karna Serial: ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿತ್ಯಾ
35
ಸಂಕಷ್ಟದಲ್ಲಿ ನಯನತಾರಾ
Image Credit : Zee Kannada

ಸಂಕಷ್ಟದಲ್ಲಿ ನಯನತಾರಾ

ರಮೇಶ್‌ ತನ್ನ ಎಲ್ಲಾ ಪ್ಲಾನ್‌ಗಳು ಸಕ್ಸಸ್ ಅಗಿರುವ ಖುಷಿಯಲ್ಲಿದ್ರೆ, ಅಣ್ಣನ ಕುತಂತ್ರ ಆಟದಿಂದ ನಯನತಾರಾ ಸಂಕಷ್ಟದಲ್ಲಿ ಸಿಲುಕಿದ್ದಾಳೆ. ಕರ್ಣನ ಹುಟ್ಟು, ನಿಧಿ-ನಿತ್ಯಾ ಪೋಷಕರ ಸಾವಿನ ರಹಸ್ಯ ಒಂದಕ್ಕೊಂದು ಥಳಕು ಹಾಕಿಕೊಂಡಿದೆ. ಈ ಎರಡು ವಿಷಯಗಳ ಹಿಂದೆ ನಯನತಾರಾಳ ಕೈವಾಡವಿದ್ದು, ಒಂದೇ ಒಂದು ಸಣ್ಣ ತಪ್ಪಾದ್ರೂ ತನ್ನ ಮೇಲೆ ಪ್ರಭಾವ ಬೀರಲಿದೆ ಎಂಬ ಆತಂಕದಲ್ಲಿದ್ದಾಳೆ.

45
ರಮೇಶ್‌ಗೆ ಭ್ರಮನಿರಸನ
Image Credit : Zee Kannada

ರಮೇಶ್‌ಗೆ ಭ್ರಮನಿರಸನ

ನಿತ್ಯಾ, ನಿಧಿ ಮತ್ತು ಶಾಂತಿ ಮೂವರು ಮನೆಗೆ ಬಂದಾಯ್ತು. ಅನಿರೀಕ್ಷಿತ ಮದುವೆ ಸೇರಿದಂತೆ ನಡೆದ ಎಲ್ಲಾ ಘಟನೆಗಳಿಂದ ಕರ್ಣನ ಮುಖದಲ್ಲಿ ನಗು ಇರಲ್ಲ, ಆತ ಶೋಕದಲ್ಲಿರುತ್ತಾನೆ ಎಂದುಕೊಂಡಿದ್ದ ರಮೇಶ್‌ಗೆ ಭ್ರಮನಿರಸನ ಆಗಿದೆ. ಎಂದಿನಂತೆ ಬೆಳಗ್ಗೆ ಬೇಗ ಎದ್ದಿರುವ ಕರ್ಣ ತನ್ನ ದೈನಂದಿನ ಕೆಲಸಗಳಲ್ಲಿ ತೊಡಗಿಕೊಂಡಿದ್ದಾನೆ. ಇದನ್ನು ನೋಡಿ ರಮೇಶ್ ಮತ್ತು ಸಂಜಯ್ ಶಾಕ್ ಆಗಿದ್ದಾರೆ.

ಇದನ್ನೂ ಓದಿ: Amruthadhaare: ಕಳೆದುಕೊಂಡ ಪ್ರೀತಿ ಪಡೆದುಕೊಳ್ಳಲು ಗೌತಮ್‌ಗೆ ಸಲಹೆ: ಈಗ ಮಜಾ ಬಂತು ಎಂದ ವೀಕ್ಷಕರು

55
ಕರ್ಣನ ನಗು
Image Credit : zee kannada

ಕರ್ಣನ ನಗು

ರಮೇಶ್ ಅಂದುಕೊಂಡಿದ್ದೇ ಒಂದು, ಆಗಿದ್ದು ಮತ್ತೊಂದು. ಕರ್ಣನ ನಗುವನ್ನು ಯಾರಿಂದಲೂ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ವೀಕ್ಷಕರು ಹೇಳುತ್ತಿದ್ದಾರೆ. ಬಿಸಿ ಬಿಸಿ ಕಾಫಿ ಮಾಡಿ ನಿಧಿ ಮತ್ತು ರಮೇಶ್‌ಗೆ ನೀಡಿದ್ದಾನೆ. ನೋವು ತರುವಂತಹ ಘಟನೆಗಳನ್ನು ಮರೆಯಬೇಕು ಎಂದು ಕರ್ಣ ಹೇಳಿದ್ದಾನೆ.

ಇದನ್ನೂ ಓದಿ: Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಕರ್ಣ ಧಾರಾವಾಹಿ
ಜೀ ಕನ್ನಡ
ಕನ್ನಡ ಧಾರಾವಾಹಿ
ನಮ್ರತಾ ಗೌಡ
ಭವ್ಯಾ ಗೌಡ
ಕಿರಣ್ ರಾಜ್
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved