MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Amruthadhaare: ಕಳೆದುಕೊಂಡ ಪ್ರೀತಿ ಪಡೆದುಕೊಳ್ಳಲು ಗೌತಮ್‌ಗೆ ಸಲಹೆ: ಈಗ ಮಜಾ ಬಂತು ಎಂದ ವೀಕ್ಷಕರು

Amruthadhaare: ಕಳೆದುಕೊಂಡ ಪ್ರೀತಿ ಪಡೆದುಕೊಳ್ಳಲು ಗೌತಮ್‌ಗೆ ಸಲಹೆ: ಈಗ ಮಜಾ ಬಂತು ಎಂದ ವೀಕ್ಷಕರು

ಗೌತಮ್‌ನಿಂದ ದೂರವಿರಲು ಬೆಂಗಳೂರಿಗೆ ಬಂದ ಭೂಮಿಕಾ, ಆತ ವಾಸವಿರುವ ವಠಾರದಲ್ಲೇ ಮನೆ ಮಾಡುತ್ತಾಳೆ. ಸಾಮಾನ್ಯನಂತೆ ಬದುಕುತ್ತಿರುವ ಗೌತಮ್‌ನನ್ನು ಕಂಡು ಆಘಾತಕ್ಕೊಳಗಾದ ಭೂಮಿಕಾ, ಆತನ ಮೌನ ಮತ್ತು ಮಿಂಚು ಎಂಬ ಹುಡುಗಿಯ ಆಗಮನದಿಂದ ಮತ್ತಷ್ಟು ಗೊಂದಲಕ್ಕೊಳಗಾಗಿದ್ದಾಳೆ.

2 Min read
Mahmad Rafik
Published : Oct 22 2025, 12:54 PM IST
Share this Photo Gallery
  • FB
  • TW
  • Linkdin
  • Whatsapp
15
ಅಮೃತಧಾರೆ Amruthadhaare Serial
Image Credit : Zee Kannada

ಅಮೃತಧಾರೆ Amruthadhaare Serial

ಭೂಮಿಕಾ ತನ್ನಿಂದ ದೂರವಾಗಿದ್ದೇಕೆ ಎಂಬುದರ ಬಗ್ಗೆ ಇದುವರೆಗೂ ಗೌತಮ್‌ಗೆ ಸ್ಪಷ್ಟತೆ ಇಲ್ಲ. ದಿವಾನ್ ಮನೆತನದಿಂದ ದೂರವಾದ ಭೂಮಿಕಾಳನ್ನು ಹುಡುಕಲು ಗೌತಮ್‌ಗೆ ಐದು ವರ್ಷ ಬೇಕಾಗಿತ್ತು. ಕುಶಾಲನಗರದಲ್ಲಿ ಭೂಮಿಕಾಳನ್ನು ಹುಡುಕಿದ ಗೌತಮ್‌ಗೆ ನಿರಾಸೆ ಎದುರಾಗಿತ್ತು. ತನ್ನಿಂದ ದೂರ ಹೋಗುವಂತೆ ಹೇಳಿದ್ಮೇಲೆ ಗೌತಮ್ ಸಹ ಕುಶಾಲನಗರದಿಂದ ಬೆಂಗಳೂರಿಗೆ ಬಂದಿದ್ದನು.

25
ಗೊಂದಲದಲ್ಲಿ ಸಿಲುಕಿದ ಭೂಮಿಕಾ
Image Credit : Zee Kannada

ಗೊಂದಲದಲ್ಲಿ ಸಿಲುಕಿದ ಭೂಮಿಕಾ

ಇತ್ತ ಕುಶಾಲನಗರದಲ್ಲಿದ್ರೆ ಮತ್ತೆ ಗೌತಮ್ ಬರಬಹುದು ಎಂದು ಭೂಮಿಕಾ ಬೆಂಗಳೂರಿಗೆ ಶಿಫ್ಟ್ ಆಗಿದ್ದಾಳೆ. ಮಲ್ಲಿ ಮತ್ತು ಕಾವೇರಿಯ ಪ್ಲಾನ್‌ನಿಂದ ಗೌತಮ್ ವಾಸವಾಗಿರುವ ವಠಾರದಲ್ಲಿಯೇ ಭೂಮಿಕಾಗೆ ಬಾಡಿಗೆ ಮನೆ ಸಿಕ್ಕಿದೆ. ನೂರಾರು ಕೋಟಿ ಒಡೆಯನನ್ನು ವಠಾರದಲ್ಲಿ ನೋಡಿ ಭೂಮಿಕಾ ಶಾಕ್ ಆಗಿದ್ದಾಳೆ. ಎಲ್ಲವನ್ನು ತೊರೆದು ಭೂಮಿಕಾಳ ಹಿಂದೆಯೇ ಗೌತಮ್ ಬಂದಿದ್ದನು. ಆದರೆ ಈ ವಿಷಯ ತಿಳಿಯದೇ ಭೂಮಿಕಾ ಗೊಂದಲದಲ್ಲಿದ್ದಾಳೆ.

Related Articles

Related image1
ಮಲ್ಲಿ ಕೋಳಿ ಜಗಳದಿಂದ ರೋಚಕ ತಿರುವು; ಅಮೃತಧಾರೆ ಈ ಟ್ವಿಸ್ಟ್ ನೋಡಿದ್ರೆ ಹಾರ್ಟ್‌ ಅಟ್ಯಾಕ್ ಫಿಕ್ಸ್!
Related image2
ಅಮೃತಧಾರೆ ಸೀರಿಯಲ್ ಮಲ್ಲಿ ಮದುವೆ; ಹುಡುಗನ ಬಗ್ಗೆ ಅನ್ವಿತಾ ಸಾಗರ್ ಮಾತು
35
ಭೂಮಿಕಾಗೆ ಗೊತ್ತಿಲ್ಲ ವಿಷಯ
Image Credit : Zee Kannada

ಭೂಮಿಕಾಗೆ ಗೊತ್ತಿಲ್ಲ ವಿಷಯ

ದಿವಾನ್ ಅರಮನೆಯಿಂದ ಹೊರ ಬಂದಿರುವ ಗೌತಮ್, ಸಾಮಾನ್ಯ ವ್ಯಕ್ತಿಯಾಗಿ ಬದುಕು ಕಟ್ಟಿಕೊಂಡಿದ್ದಾರೆ. ವಠಾರದಲ್ಲಿರುವ ಜನರಿಗೂ ಗೌತಮ್ ಓರ್ವ ಕಾರ್‌ ಡ್ರೈವರ್ ಅಂತಾ ಮಾತ್ರ ಗೊತ್ತಿದೆ. ಇಡೀ ಬೆಂಗಳೂರು ಖರೀದಿಸುವ ಶಕ್ತಿ ಇರೋ ಗೌತಮ್ ದಿವಾನ್ ವಠಾರದಲ್ಲಿ ಏನು ಮಾಡ್ತಿದ್ದೀರಿ ಎಂದು ಭೂಮಿಕಾ ಪ್ರಶ್ನೆ ಮಾಡಿದ್ದಾಳೆ. ಆದ್ರೆ ಭೂಮಿಕಾಳ ಯಾವುದೇ ಪ್ರಶ್ನೆಗೆ ಉತ್ತರ ನೀಡದೇ ಗೌತಮ್ ತೆರಳಿದ್ದಾನೆ. ತನ್ನನ್ನು ಹಿಂಬಾಲಿಸಿಕೊಂಡು ಬಂದಿರಬಹುದು ಎಂದು ಭೂಮಿಕಾ ತಪ್ಪಾಗಿ ಅರ್ಥೈಸಿಕೊಂಡಿದ್ದಾಳೆ.

45
ವೀಕ್ಷಕರಿಂದ ಗೌತಮ್‌ಗೆ ಸಲಹೆ
Image Credit : Zee Kannada

ವೀಕ್ಷಕರಿಂದ ಗೌತಮ್‌ಗೆ ಸಲಹೆ

ಇಂದಿನ ಪ್ರೋಮೋ ನೋಡಿದ ವೀಕ್ಷಕರು, ಭೂಮಿಕಾ ಪ್ರಶ್ನೆಗೆ ಉತ್ತರಿಸದ ಗೌತಮ್ ನಡೆಯನ್ನು ಮೆಚ್ಚಿಕೊಂಡಿದ್ದಾರೆ. ಕಳೆದುಕೊಂಡ ಭೂಮಿಕಾ ಪ್ರೀತಿ ನಿಮಗೆ ಸಿಗಬೇಕಾದ್ರೆ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಬೇಡಿ. ಆಗ ಕುತೂಹಲದಿಂದ ಭೂಮಿಕಾ ತಾನೇ ನಿಮ್ಮ ಹತ್ತಿರ ಬರ್ತಾರೆ ಎಂದು ಗೌತಮ್‌ಗೆ ಸಲಹೆ ನೀಡಿದ್ದಾರೆ.

ಇದನ್ನೂ ಓದಿ: BBK 12: ಕನ್ನಡ ಸರಿಯಾಗಿ ಬರಲ್ಲ ಎಂದು Rakshitha Shetty ಸುಳ್ಳು ಹೇಳ್ತಿದ್ದಾರಾ? ಅಶ್ವಿನಿ SN ಹೇಳಿದ್ದೇನು?

55
ಮಿಂಚು ಬಗ್ಗೆ ಭೂಮಿಕಾಗೆ ಕುತೂಹಲ
Image Credit : Zee Kannada

ಮಿಂಚು ಬಗ್ಗೆ ಭೂಮಿಕಾಗೆ ಕುತೂಹಲ

ಭೂಮಿಕಾ ಪ್ರಿನ್ಸಿಪಾಲ್ ಆಗಿರುವ ಶಾಲೆಗೆ ಮಿಂಚುಳನ್ನು ಸೇರಿಸಲು ಗೌತಮ್ ಬಂದಿದ್ದಾನೆ. ನನಗೆ ಅಪ್ಪ-ಅಮ್ಮಾ ಎಲ್ಲಾ ಗೌತಮ್ ಎಂದು ಮಿಂಚು ಹೇಳಿದ್ದಾಳೆ. ಹಾಗಾದ್ರೆ ಈ ಹುಡುಗಿ ಯಾರು ಎಂಬ ಕುತೂಹಲ ಭೂಮಿಕಾಳಲ್ಲಿ ಮೂಡಿದೆ. ಮುಂದೆ ಈ ಕಥೆ ಹೇಗೆ ಸಾಗುತ್ತೆ ಎಂದು ತಿಳಿಯಲು ವೀಕ್ಷಕರು ಕಾತುರರಾಗಿದ್ದಾರೆ.

ಇದನ್ನೂ ಓದಿ: Amruthdhaare Serial: ಜಯದೇವ್‌-ಶಕುಂತಲಾ ಸಮಾಧಿ ಕಟ್ಟಲು ಶಪಥ ಮಾಡಿದ್ದಾರು? ಮಾಡಿದ್ದುಣ್ಣೋ ಮಾರಾಯ ಅಷ್ಟೇ

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಅಮೃತಧಾರೆ
ಜೀ ಕನ್ನಡ
ಕನ್ನಡ ಧಾರಾವಾಹಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved