MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

Karna Serial: ನಿತ್ಯಾ, ನಿಧಿ ಎಂಟ್ರಿಯಿಂದ ನಯನತಾರಾಳ ಆತಂಕ, ಬಯಲಾಗುವುದೇ ಆ ಕರಾಳ ರಹಸ್ಯ?

ರಮೇಶ್‌ನ ಕುತಂತ್ರದಿಂದ ನಿಧಿ ಮತ್ತು ನಿತ್ಯಾ ಕರ್ಣನ ಮನೆ ಸೇರಿದ್ದು, ಇದರಿಂದ ತನ್ನೆಲ್ಲಾ ರಹಸ್ಯಗಳು ಬಯಲಾಗಬಹುದೆಂಬ ಆತಂಕದಲ್ಲಿ ನಯನತಾರಾ ಇದ್ದಾಳೆ. ಗಂಡನ ಸಂಚು ತಿಳಿದರೂ ಕರ್ಣನ ತಾಯಿ ಅಸಹಾಯಕಳಾಗಿದ್ದು, ಕರ್ಣ, ನಿತ್ಯಾ, ನಿಧಿಯ ಮುಂದಿನ ಜೀವನದ ಬಗ್ಗೆ ಕುತೂಹಲವಿದೆ.

2 Min read
Mahmad Rafik
Published : Oct 22 2025, 08:56 PM IST
Share this Photo Gallery
  • FB
  • TW
  • Linkdin
  • Whatsapp
15
ರಮೇಶ್‌ನ ಕುತಂತ್ರ
Image Credit : Zee Kannada

ರಮೇಶ್‌ನ ಕುತಂತ್ರ

ರಮೇಶ್‌ನ ಕುತಂತ್ರದಿಂದ ನಿತ್ಯಾ ಜೊತೆ ನಿಧಿ ಮತ್ತು ಶಾಂತಿ ಮೂವರು ಕರ್ಣನ ಮನೆ ಸೇರಿದ್ದಾರೆ. ಕೊಂಬೆ ಬೀಳಿಸು ಅಂದ್ರೆ ಇಡೀ ಮರವನ್ನೇ ನನ್ನ ಮೇಲೆ ಹಾಕುತ್ತಿದ್ದಾನೆ ಎಂದು ರಮೇಶ್‌ನ ತಂಗಿ ನಯನತಾರಾ ಕೋಪಗೊಂಡಿದ್ದಾಳೆ. ಒಂದೇ ಒಂದು ಸಣ್ಣ ತಪ್ಪಾದ್ರೂ ತಾನು ಬಚ್ಚಿಟ್ಟ ರಹಸ್ಯಗಳೆಲ್ಲಾ ಎಲ್ಲಿ ಬಯಲಾಗುತ್ತೆ ಎಂಬ ಆತಂಕ ನಯನತಾರಾಗೆ ಶುರುವಾಗಿದೆ.

25
ಕರ್ಣ
Image Credit : Zee Kannada

ಕರ್ಣ

ಕರ್ಣ ದೇವಸ್ಥಾನ ಅಂತ ನಂಬಿರುವ ಆಸ್ಪತ್ರೆಯನ್ನು ತನ್ನ ಸ್ವಾರ್ಥಕ್ಕಾಗಿ ನಯನತಾರ ಬಳಸಿಕೊಳ್ಳುತ್ತಿದ್ದಾಳೆ. ಈ ಹಿಂದಿನ ಸಂಚಿಕೆಯಲ್ಲಿ ನಿತ್ಯಾ ಮತ್ತು ನಿಧಿ ತಂದೆಯ ಸಾವಿನ ಹಿಂದೆಯೂ ನಯನತಾರಾಳ ಕುತಂತ್ರವಿದೆ ಎಂಬುದನ್ನು ತೋರಿಸಲಾಗಿತ್ತು. ರೌಡಿಗಳ ಮೂಲಕ ಸಾವಿನ ರಹಸ್ಯ ಬಯಲಾಗದಂತೆ ನಯನತಾರಾ ತಡೆದಿದ್ದಳು. ಇದೀಗ ತಾನು ಬಚ್ಚಿಟ್ಟ ಎಲ್ಲಾ ಸತ್ಯಗಳು ತನ್ನ ಸುತ್ತವೇ ಸುಳಿಯುತ್ತಿರೋದರಿಂದ ನಯನಾತಾರಾ ಭಯಗೊಂಡಿದ್ದಾಳೆ.

Related Articles

Related image1
Karna Serial: ಒಡೆದ ಹೃದಯಗಳ ಪಿಸುಮಾತಿಗೆ ಸಾಕ್ಷಿಯಾದ ಕರ್ಣ-ನಿಧಿ ಮೌನ, ಅಸಹಾಯಕಳಾಗಿ ನಿಂತ ನಿತ್ಯಾ
Related image2
Karna Serial: ನಾಲ್ಕು ಗೋಡೆಯಲ್ಲಿ ನಡೆದ ಗುಟ್ಟು ರಟ್ಟು, ನಿಟ್ಟುಸಿರು ಬಿಟ್ಟ ಪ್ರೇಕ್ಷಕರು
35
ಕರ್ಣನ ಹುಟ್ಟಿನ ರಹಸ್ಯ
Image Credit : Zee Kannada

ಕರ್ಣನ ಹುಟ್ಟಿನ ರಹಸ್ಯ

ರಮೇಶ್‌ನಿಗೆ ನಿಧಿ ಮತ್ತು ಶಾಂತಿ ತನ್ನ ಮನೆಯಲ್ಲಿಯೇ ಇರಬೇಕು. ಆದ್ರೆ ನಯನಾತಾರಾಗೆ ಇಬ್ಬರನ್ನು ಮನೆಯಿಂದ ಹೊರಗೆ ಹಾಕಬೇಕಿದೆ. ನಿತ್ಯಾ ಜೊತೆ ಮೂವರು ಮನೆಯಲ್ಲಿದ್ರೆ ರಹಸ್ಯಗಳು ಬಯಲಾಗಬಹುದು. ಹಾಗಾಗಿ ತಾನು ತುಂಬಾನೇ ಎಚ್ಚರಿಕೆಯಿಂದಿರಬೇಕು ಎಂದು ನಯನತಾರಾ ಪ್ಲಾನ್ ಮಾಡಿಕೊಂಡಿದ್ದಾಳೆ. ಕರ್ಣನ ಹುಟ್ಟಿನ ರಹಸ್ಯ ನಯನತಾರಾಳ ಒಡಲಿನಲ್ಲಿದೆ.

45
 ರಮೇಶ್‌ ಖುಷಿ
Image Credit : Zee Kannada

ರಮೇಶ್‌ ಖುಷಿ

ಕರ್ಣನ ಮನೆಗೆ ಬರುತ್ತಿದ್ದಂತೆ ನಿಧಿ ಪ್ರಜ್ಞೆ ಕಳೆದುಕೊಂಡಿದ್ದಾಳೆ. ನಿತ್ಯಾ-ಕರ್ಣನ ಜೊತೆಯಲ್ಲಿಯೇ ನಿಧಿಯ ಗೃಹಪ್ರವೇಶವಾಗಿದೆ. ತೇಜಸ್ ಯಾಕೆ ಹೀಗೆ ಮಾಡಿದೆ? ನಮ್ಮ ಪ್ರೀತಿಯ ಅರಮನೆ ಯಾಕೆ ಕೆಡವಿದೆ? ನನ್ನ ಮೇಲಿನ ನಂಬಿಕೆ ಈಗ ಶಾಂತಿಗಿಲ್ಲ ಎಂದು ನಿತ್ಯಾ ಕಣ್ಣೀರು ಹಾಕಿದ್ದಾಳೆ. ಮತ್ತೊಂದೆಡೆ ಈ ಎಲ್ಲಾ ದೃಶ್ಯ ನೋಡಿ ಮಗನೊಂದಿಗೆ ರಮೇಶ್‌ ಖುಷಿಯಾಗಿದ್ದಾನೆ.

ಇದನ್ನೂ ಓದಿ: Karna Serial: ಕರ್ಣ-ನಿಧಿ ಮದುವೆಯೂ ಆಗತ್ತೆ! ಬಹು ದೊಡ್ಡ ಸುಳಿವು ಸಿಕ್ಕೇಬಿಡ್ತು! ವೀಕ್ಷಕರು ಖುಷ್

55
ನಿಧಿಗೆ ಸಾಂತ್ವಾನ ಹೇಳಿದ ಕರ್ಣನ ತಾಯಿ
Image Credit : Zee Kannada

ನಿಧಿಗೆ ಸಾಂತ್ವಾನ ಹೇಳಿದ ಕರ್ಣನ ತಾಯಿ

ಎಲ್ಲಾ ಬೆಳವಣಿಗೆಯಿಂದ ಆಘಾತಕ್ಕೊಳಗಾಗಿರುವ ನಿಧಿಗೆ ಕರ್ಣನ ತಾಯಿ ಸಾಂತ್ವಾನ ಹೇಳಿದ್ದಾರೆ. ಎಲ್ಲವೂ ದೇವರ ಇಚ್ಛೆ ಎಂದಿರುವ ಕರ್ಣನ ತಾಯಿ ಅಸಹಾಯಕಳಾಗಿ ನಿಂತಿದ್ದಾಳೆ. ಇದೆಲ್ಲದರ ಹಿಂದೆ ಗಂಡ ರಮೇಶ್‌ನ ಸಂಚು ಇರೋ ವಿಷಯ ಗೊತ್ತಿದ್ರೂ ಏನು ಮಾಡಲಾಗದ ಸ್ಥಿತಿಯಲ್ಲಿದ್ದಾರೆ. ಮುಂದೆ ಕರ್ಣ, ನಿತ್ಯಾ ಮತ್ತು ನಿಧಿ ಜೀವನ ಹೇಗಿರುತ್ತೆ ಎಂಬುವುದು ಮುಂದಿನ ಸಂಚಿಕೆಗಳಲ್ಲಿ ತಿಳಿಯಲಿದೆ.

ಇದನ್ನೂ ಓದಿ: Karna Serial: ಕರ್ಣನ ಮದ್ವೆಯಾಗ್ತಿದ್ದಂತೆಯೇ ಅಳುತ್ತಲೇ ಧಗಧಗಿಸುವ ಬೆಂಕಿಯ ಒಳಹೊಕ್ಕ ನಿಧಿ!

About the Author

MR
Mahmad Rafik
ಮಹ್ಮದ್ ರಫಿಕ್ವಿಜಯಪುರದ ಬೇನಾಳ RC ಗ್ರಾಮದವನು. ಪಬ್ಲಿಕ್ ಟಿವಿ ಡಿಜಿಟಲ್, ನ್ಯೂಸ್ 18 ಕನ್ನಡ, ಇದೀಗ ಏಷ್ಯಾನೆಟ್ ಕನ್ನಡ ಸೇರಿ ಡಿಜಿಟಲ್ ಮಾಧ್ಯಮದಲ್ಲಿ 8 ವರ್ಷಗಳ ಅನುಭವ. ಎಂ.ಕಾಂ. ಓದಿ ಕೆಲಸ ಆರಂಭಿಸಿದ್ದು ಖಾಸಗಿ ಬ್ಯಾಂಕ್‌ವೊಂದರಲ್ಲಿ. ಆಕರ್ಷಿಸಿದ್ದು ಪತ್ರಿಕೋದ್ಯಮ. ಯಾವ ಟಾಪಿಕ್ ಕೊಟ್ಟರೂ ಬರೆಯಬಲ್ಲೆ. ಓಟಿಟಿ ಮೂವಿ ನೋಡೋದು ಇಷ್ಟ.
ಜೀ ಕನ್ನಡ
ಕರ್ಣ ಧಾರಾವಾಹಿ
ನಮ್ರತಾ ಗೌಡ
ಭವ್ಯಾ ಗೌಡ
ಕಿರಣ್ ರಾಜ್
ಮನರಂಜನಾ ಸುದ್ದಿ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved