MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಸವಿರುಚಿ ನಿರೂಪಣೆಗೆ ಗುಡ್ ಬೈ ಹೇಳಿದ ಜಾಹ್ನವಿ… ಇನ್ಮುಂದೆ ಲಾಯರ್ ಜಗದೀಶ್ ನಿರೂಪಣೆ ಮಾಡ್ತಾರ?!

ಸವಿರುಚಿ ನಿರೂಪಣೆಗೆ ಗುಡ್ ಬೈ ಹೇಳಿದ ಜಾಹ್ನವಿ… ಇನ್ಮುಂದೆ ಲಾಯರ್ ಜಗದೀಶ್ ನಿರೂಪಣೆ ಮಾಡ್ತಾರ?!

ಬಿಗ್ ಬಾಸ್ ಸೀಸನ್ 11 ರ ಸ್ಪರ್ಧಿಯಾಗಿ ಭಾರಿ ಜನಪ್ರಿಯತೆ ಗಳಿಸಿದ ಲಾಯರ್ ಜಗದೀಶ್ ಇನ್ನು ಮುಂದೆ ಕಲರ್ಸ್ ಕನ್ನಡ ವಾಹಿನಿಯ ಸವಿರುಚಿ ಕಾರ್ಯಕ್ರಮ ನಿರೂಪಣೆ ಮಾಡಲಿದ್ದಾರ? ಹಾಗೊಂದು ಚರ್ಚೆ ಶುರುವಾಗಿದೆ.  

2 Min read
Author : Pavna Das
| Updated : Oct 25 2024, 12:01 PM IST
Share this Photo Gallery
  • FB
  • TW
  • Linkdin
  • Whatsapp
17

ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಜನಪ್ರಿಯ ಶೋಗಳಲ್ಲಿ ಒಂದು ಸವಿರುಚಿ ಕಾರ್ಯಕ್ರಮ. ಆಂಕರ್ ಜಾಹ್ನವಿ (Anchor Jhanvi) ನಿರೂಪಣೆಯಲ್ಲಿ ಹಾಗೂ ಚಂದ್ರು ಜೊತೆ, ವಿಶೇಷ ಅತಿಥಿಗಳು ಆಗಮಿಸಿ, ತಿಂಡಿ ತಯಾರಿಸುತ್ತಿದ್ದಂತ ಈ ಅಡುಗೆ ಕಾರ್ಯಕ್ರಮ ಜನರಿಗೆ ಸಖತ್ ಇಷ್ಟವಾಗಿತ್ತು. 

27

ಇದೀಗ ನಿರೂಪಕಿ ಜಾಹ್ನವಿ ಸವಿರುಚಿ ಕಾರ್ಯಕ್ರಮದಿಂದ ಹೊರ ಬಂದಿದ್ದಾರೆ ಎನ್ನುವ ಸುದ್ದಿಯೂ ಇದೆ. ಅಷ್ಟೇ ಅಲ್ಲ ಜಾಹ್ನವಿ ಅವರ ಕೊನೆಯ ಎಪಿಸೋಡ್ ನಲ್ಲಿ ಬಿಗ್ ಬಾಸ್ ಸೀಸನ್ 11 ರಲ್ಲಿ (Bigg Boss Season 11) ಎವಿಕ್ಟೆಡ್ ಆದ ಲಾಯರ್ ಜಗದೀಶ್ ಕಾಣಿಸಿಕೊಂಡಿದ್ದಾರೆ. ಹಾಗಾಗಿ ಜನರಿಗೆ ಈಗ ಹೊಸ ಸಂಶಯವೊಂದು ಮೂಡಿದೆ. 
 

37

ಬಿಗ್ ಬಾಸ್ ಸೀಸನ್ 11 ರಲ್ಲಿ ಜಗದೀಶ್ (Lawyer Jagadish) ಇದ್ದಷ್ಟು ದಿನ ಸಖತ್ ಮನರಂಜನೆ ನೀಡಿದ್ದರು. ಪ್ರತಿ ಪ್ರೊಮೋದಲ್ಲೂ ಜಗದೀಶ್ ಅವರೇ ಹೈಲೈಟ್ ಆಗಿದ್ದರು. ಜಗಳ ಮಾಡೊದಕ್ಕೂ ಸೈ, ಮನರಂಜನೆ ನೀಡೋದಕ್ಕೂ ಸೈ ಎನ್ನುವಂತೆ ತುಂಬಾನೆ ಕಟೆಂಟ್ ಗಳನ್ನ ನೀಡುತ್ತಿದ್ದದ್ದು ಜಗದೀಶ್. ಜೊತೆಗೆ ಬಿಗ್ ಬಾಸ್ ಗೆ ಅವಾಜ್ ಹಾಕಿ ಸಹ ಸದ್ದು ಮಾಡಿದ್ದರು. 
 

47

ಲಾಯರ್ ಜಗದೀಶ್ ಬಿಗ್ ಬಾಸ್ ಮನೆಯಲ್ಲಿ ಇದ್ದಿದ್ದು 2 ವಾರಗಳು ಅಷ್ಟೇ ಆದರೆ ಕರ್ನಾಟಕದಾದ್ಯಂತ ಇವರು ಭಾರಿ ಜನಪ್ರಿಯತೆ ಪಡೆದಿದ್ದಾರೆ. ಮೊದಲಿಗೆ ಇವರನ್ನ ಯಾರಪ್ಪ ಬಿಗ್ ಬಾಸ್ ಗೆ ಕರೆಸಿದ್ದು ಒಂದು ಸಲ ಹೊರ ಹಾಕಿ ಎನ್ನುತ್ತಿದ್ದವರೆಲ್ಲಾ, ಜಗದೀಶ್ ಗೆ ಫ್ಯಾನ್ಸ್ ಆಗ್ಬಿಟ್ಟಿದ್ದಾರೆ. ಹಾಗಾಗಿ ಮತ್ತೆ ಜಗದೀಶ್ ಅವರನ್ನ ಬಿಗ್ ಬಾಸ್ ಮನೆಗೆ ಕರೆಯಿರಿ ಎಂದು ಹೇಳುತ್ತಿದ್ದಾರೆ. 
 

57

ಜಗದೀಶ್ ಇಲ್ಲದೇ ಮನೆ ಕೂಡ ತುಂಬಾನೆ ಖಾಲಿ ಖಾಲಿ ಅನಿಸ್ತಿದೆ, ಜಗ್ಗು ಇದ್ರೆನೆ ಬಿಗ್ ಬಾಸ್ ಮನೆಯಲ್ಲಿ ಜಾಲಿ. ಆದಷ್ಟು ಬೇಗ ಜಗದೀಶರನ್ನು ಮನೆಗೆ ಕಳುಹಿಸಿ, ಇಲ್ಲಾಂದ್ರೆ ಬಿಗ್ ಬಾಸ್ ನೋಡೋದಕ್ಕೂ ಸಾಧ್ಯ ಇಲ್ಲ. ಜಗದೀಶ್ ಇಲ್ಲದೇ ಬಿಗ್ ಬಾಸ್ ನೋಡೋದನ್ನ ಬಿಟ್ಟಿದ್ದೀವಿ, ಜಗದೀಶ್ ಬಿಗ್ ಬಾಸ್ ನ ನಿಜವಾದ ವಿನ್ನರ್ ಎನ್ನುವಷ್ಟರ ಮಟ್ಟಿಗೆ, ಜನಕ್ಕೆ ಇಷ್ಟವಾಗಿದ್ದರು. 
 

67

ಇದೀಗ ಸವಿರುಚಿ ಕಾರ್ಯಕ್ರಮದಲ್ಲೂ ಕರ್ನಾಟಕದ ಹೊಸ ಕ್ರಶ್ (Karnataka Crush) ಜಗದೀಶ್ ಕಾಣಿಸಿಕೊಂಡಿದ್ದಾರೆ. ಜೊತೆಗೆ ತಮ್ಮ ಕೈಚಳಕವನ್ನ ತೋರಿಸಿ, ತಮ್ಮ ಮಾತಿನ ಮೂಲಕ ಮತ್ತೆ ಮೋಡಿ ಮಾಡಿದ್ದಾರೆ. ಇದರ ಮಧ್ಯೆ ಜನರು ನಿರೂಪಕಿ ಜಾಹ್ನವಿ ಜಾಗವನ್ನು ಇನ್ನು ಮುಂದೆ ಜಗದೀಶ್ ಅವರು ತುಂಬಲಿದ್ದಾರೆ. ಸವಿರುಚಿಯ ನಿರೂಪಣೆ ಜಗದೀಶ್ ಮಾಡಲಿದ್ದಾರೆ ಎನ್ನುತ್ತಿದ್ದಾರೆ. 
 

77

ಇದು ಎಷ್ಟರಮಟ್ಟಿಗೆ ನಿಜವೋ? ಸುಳ್ಳೊ ಗೊತ್ತಿಲ್ಲ. ಆದರೆ, ಜಗದೀಶ್ ಅಡುಗೆ ಕಾರ್ಯಾಕ್ರಮ ನಡೆಸಿಕೊಟ್ಟರೆ ಹೇಗಿರಬಹುದು ಎಂದು ಎಲ್ಲರೂ ಯೋಚನೆ ಮಾಡುವಂತಾಗಿದೆ. ಅಷ್ಟೇ ಅಲ್ಲ ಇನ್ನೂ ಕೆಲವರು, ಈ ಕಾರ್ಯಕ್ರಮಕ್ಕೆ ಅವರು ನಿರೂಪಕರಾಗೋದು ಬೇಡ ಜಗದೀಶ್ ಅವರು ಬಿಗ್ ಬಾಸ್ ಗೆ ಮತ್ತೆ ಹೋಗಬೇಕು, ಅವ್ರನ್ನ ಅಲ್ಲಿಯೇ ನೋಡೋದಕ್ಕೆ ಚೆಂದ ಎಂದಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ಕಲರ್ಸ್ ಕನ್ನಡ

Latest Videos
Recommended Stories
Recommended image1
Puttakkana Makkalu ‘ಅಂತಿಮ ಅಧ್ಯಾಯ’... ಗಂಭೀರ ಸ್ಥಿತಿಯಲ್ಲಿ ಕಂಠಿ-ಸ್ನೇಹಾ !
Recommended image2
'ರಂಜಾನ್‌ ತಿಂಗಳಲ್ಲಿ ಪೊಂಗಾಲ ಆಚರಣೆ? ಮತಾಂತರ ಆಗಬಾರದೇಕೆ?: ನೆಟ್ಟಿಗರ ಟೀಕೆಗೆ ಕಿರುತೆರೆ ನಟಿಯ ಖಡಕ್‌ ಉತ್ತರ
Recommended image3
'ನನ್ನ ಪ್ರಾರ್ಥನೆ ಈಡೇರಲೇ ಇಲ್ಲ' ಎಂದ Naa Ninna Bidalaare ಅಂಬಿಕಾ ಶೂಟಿಂಗ್​ನ ಅವಘಡ ಹೀಗೆ ವಿವರಿಸಿದ್ರು
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved