MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • TV Talk
  • ಬಿಗ್‌ಬಾಸ್‌ ಕನ್ನಡ 11: ಹುಡುಗ ಕೊಟ್ಟ ಉಂಗುರ ಕಳೆದುಕೊಂಡ ಚೈತ್ರಾ, ಕೊರಗಜ್ಜನ ಮೊರೆ ಬಳಿಕ ಸಿಕ್ಕಿದ್ದೇಗೆ?

ಬಿಗ್‌ಬಾಸ್‌ ಕನ್ನಡ 11: ಹುಡುಗ ಕೊಟ್ಟ ಉಂಗುರ ಕಳೆದುಕೊಂಡ ಚೈತ್ರಾ, ಕೊರಗಜ್ಜನ ಮೊರೆ ಬಳಿಕ ಸಿಕ್ಕಿದ್ದೇಗೆ?

ಬಿಗ್‌ಬಾಸ್‌ ಕನ್ನಡ 11ರಲ್ಲಿ ಚೈತ್ರಾ ಕುಂದಾಪುರ ಅವರ ಉಂಗುರ ಕಳೆದುಹೋಗಿ, ಬಿಗ್‌ಬಾಸ್‌ ಹುಡುಕಿಕೊಟ್ಟ ಘಟನೆ ನಡೆಯಿತು. ಜೊತೆಗೆ ಜೋಡಿ ಟಾಸ್ಕ್‌ಗಳಲ್ಲಿ ಚೈತ್ರಾ ಅವರು ಶಿಶಿರ್‌ಗೆ ಮೋಸ ಮಾಡಿದ್ದು, ಐಶ್ವರ್ಯಾ ಧರ್ಮ ಜೊತೆ ಆಡಲು ನಿರಾಕರಿಸಿದ್ದು ಹಾಗೂ ಇತರೆ ಜೋಡಿಗಳ ಬದಲಾವಣೆಗಳ ಬಗ್ಗೆ ಈ ಸಾರಾಂಶ ಒಳಗೊಂಡಿದೆ.

2 Min read
Gowthami K
Published : Nov 14 2024, 12:14 AM IST| Updated : Nov 14 2024, 12:15 AM IST
Share this Photo Gallery
  • FB
  • TW
  • Linkdin
  • Whatsapp
17

ಬಿಗ್‌ಬಾಸ್‌ ಕನ್ನಡ 11 ನಲ್ಲಿ ಈ ವಾರ ಜೋಡಿ ಟಾಸ್ಕ್‌ ಗಳು ನಡೆಯುತ್ತಿದೆ. 45ನೇ ದಿನ ಮನೆಯಲ್ಲಿ ಮಣ್ಣಿನ ಮಕ್ಕಳು ಟಾಸ್ಕ್‌ ಕೊಟ್ಟಿದ್ದರು. ಈ ಟಾಸ್ಕ್ ನಲ್ಲಿ ಚೈತ್ರಾ ಕುಂದಾಪುರ ಅವರು ತಮ್ಮ ಹುಡುಗ ಕೊಟ್ಟ ಉಂಗುರವನ್ನು ಕಳೆದುಕೊಂಡರು.ಮನೆಯವರೆಲ್ಲ ಹುಡುಕಿದರೂ ಉಂಗುರ ಸಿಗಲಿಲ್ಲ. ಹೀಗಾಗಿ ಚೈತ್ರಾ ಕ್ಯಾಮಾರ ಮುಂದೆ ಬಂದು ತುಂಬಾ ಇಂಪಾರ್ಟೆಂಟ್ ಉಂಗುರು ದಯವಿಟ್ಟು ಹುಡುಕಿಸಿಕೊಡಿ ಎಂದು ಮನವಿ ಮಾಡಿಕೊಂಡರು.


 
 

27

ಟಾಸ್ಕ್‌ ಬಳಿಕ ಬಿಗ್‌ಬಾಸ್‌ ಉಂಗುರವನ್ನು ಹುಡುಕಿ ಕೊಟ್ಟರು. ಆಗ ಚೈತ್ರಾ ಸ್ವಾಮಿ ಕೊರಗಜ್ಜ ಎಂದು ಕೈಮುಗಿದರು. ಬಿಗ್‌ಬಾಸ್‌ ಗೂ ಧನ್ಯವಾದ ಹೇಳಿದರು. ತುಳುನಾಡಿನಲ್ಲಿ ಕೊರಗಜ್ಜ ದೈವ ಒಂದು ಕಾರ್ಣಿಕ ಶಕ್ತಿ. ಕಷ್ಟದ ಕಾಲದಲ್ಲಿ ಕೈ ಹಿಡಿದು ನಡೆಸುತ್ತಾನೆ ಎಂಬ ನಂಬಿಕೆ ದೈವಾರಾಧಕರದ್ದು, ಉಂಗುರ ಮಿಸ್ ಆಗಿದೆ ಎಂಬುದು ಗೊತ್ತಾದ ತಕ್ಷಣ ಸಿಕ್ಕಾಪಟ್ಟೆ ಚಡಪಡಿಸಿದರು.  ಕೊರಗಜ್ಜನ ಪ್ರಾರ್ಥನೆ ಮಾಡಿದರು. ಬಳಿಕ ಉಂಗುರ ಸಿಕ್ಕ ಖುಷಿಯಲ್ಲಿ ಚೈತ್ರಾ ಅವರು ಕುಣಿದಾಡಿದರು. 

37

ಇದು ಚೈತ್ರಾ ಪಾಲಿಗೆ ತುಂಬ ಮಹತ್ವದ ಉಂಗುರ. ಅವರ ಹುಡುಗ ಕೊಟ್ಟಿದ್ದಾರೆ ಎಂದು ಉಂಗುರ ಕಾಣೆಯಾದಾಗ ಹುಡುಕುತ್ತಿದ್ದ ಯಾವುದೋ ಸ್ಪರ್ಧಿ ಈ ಮಾತನ್ನು ಹೇಳುತ್ತಿರುವುದು ಕೇಳಿಸಿದೆ. ಹೀಗಾಗಿ ಉಂಗುರ ಮಣ್ಣಿನಲ್ಲಿ ಕಳೆದುಹೋದಾಗ ಚೈತ್ರಾ ಗಲಬಿಲಿಗೊಂಡರು. 

47

ಇನ್ನೊಂದು ಕಡೆ ಶಿಶಿರ್ ಮತ್ತು ಚೈತ್ರಾ ನಡುವೆ ಬಿರುಕು ಮೂಡಿದೆ. ಆಟದ ಮಧ್ಯೆ ಬಿಗ್‌ಬಾಸ್ ಆಫರ್ ಒಪ್ಪಿದ ಚೈತ್ರಾ  ಶಿಶಿರ್ ಅವರನ್ನು ಬಿಟ್ಟು ತ್ರಿವಿಕ್ರಮ್  ಜೊತೆಗೆ ಸೇರುವ ಪ್ಲಾನ್ ಮಾಡಿದರು. ನಾಮಿನೇಷನ್​ ವಿಚಾರ ಬಂದಾಗ ಶಿಶಿರ್ ಅವರು ತ್ಯಾಗ ಮಾಡಿ ತಾವೇ ನಾಮಿನೇಟ್ ಆಗಿದ್ದರು. ಇಷ್ಟೆಲ್ಲ ಮಾಡಿದರೂ ಕೂಡ ಚೈತ್ರಾ ಶಿಶಿರ್‌ ಗೆ ಮೋಸ ಮಾಡಿದ್ದಾರೆ. 

57


‘ನಾಮಿನೇಷನ್​ ಸಮಯದಲ್ಲಿ ಅಯ್ಯೋ, ಅಮ್ಮಾ ಅನ್ನೋದು. 12 ವರ್ಷ ಮಣ್ಣು ಹೊತ್ತಿರುವ ನಾವು ಆ್ಯಕ್ಟರ್ ಅಲ್ಲ. ಇಲ್ಲಿ ಇದ್ದಾರೆ ನೋಡಿ ದೊಡ್ಡ ಆ್ಯಕ್ಟರ್​’ ಎಂದು ಚೈತ್ರಾ ಮೇಲೆ ಶಿಶಿರ್​ ಹರಿಹಾಯ್ದಿದ್ದಾರೆ. ಮಿಕ್ಕಂತೆ ಐಶ್ವರ್ಯಾ ಅವರು ಧರ್ಮ ಅವರ ಜೊತೆಗೆ ಆಡುತ್ತೇನೆ ಎಂದು ಬಿಗ್‌ಬಾಸ್‌ ನ ಆಫರ್‌ ತಿರಸ್ಕರಿಸಿದರು. 
 

67

ಬಿಗ್‌ಬಾಸ್‌ ಕೊಟ್ಟ ಈ ಟ್ವಿಸ್ಟ್ ನಲ್ಲಿ ಐಶ್ವರ್ಯಾ ಮಾತ್ರ ಬದಲು ಮಾಡಿಕೊಳ್ಳಲಿಲ್ಲ. ಮಿಕ್ಕಂತೆ ಎಲ್ಲಾ ಜೋಡಿಗಳಿಗೆ ಬಿಗ್‌ಬಾಸ್‌ ಕೊಟ್ಟ ಆಫರ್‌ ಅನ್ನು ಹೆಣ್ಣು ಮಕ್ಕಳು ಸ್ವೀಕರಿಸಿ ವಿಕ್ರಮ್‌ ಬಂದರೆ ಒಳಿತು ಎಂದರು. ಆದರೆ ಕೊನೆಗೆ ಟ್ವಿಸ್ಟ್ ಇಟ್ಟ ಬಿಗ್‌ಬಾಸ್‌ ತ್ರಿವಿಕ್ರಮ್‌  ಅವರಲ್ಲಿ ಯಾರು ಬೇಕು ಎಂದು ಕೇಳಿದಾಗ ಭವ್ಯ ಅವರನ್ನು ಆಯ್ಕೆ ಮಾಡಿಕೊಂಡರು. ಮಂಜು ಅವರು ಯಾವುದೇ ಟಾಸ್ಕ್ ಆಡುವಂತಿಲ್ಲ.

77


ಭವ್ಯಾ ಟೀಂ ಬದಲಾವಣೆ ಮಾಡಿದ್ದಕ್ಕೆ ಮಂಜು ಕೂಡ ಹರಿಹಾಯ್ದರು. ಶಿಶಿರ್ ಮತ್ತು ಮಂಜು ನಾಳಿನ ಸಂಚಿಕೆಯಲ್ಲಿ ಏನಾಗಲಿದೆ ಕಾದು ನೀಡಬೇಕಿದೆ.
  

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಬಿಗ್ ಬಾಸ್ ಕನ್ನಡ
Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved