MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಮಹಾನಟಿ ಗ್ರ್ಯಾಂಡ್ ಫಿನಾಲೆ ಸಿಂಹಾಸನ ಏರಿದ ಫೈನಲಿಸ್ಟ್‌’ಗಳು : ಬಿಂದು ಹೊನ್ನಾಳಿಗೆ ಮೋಸ ಅಂತಿದ್ದಾರೆ ಅಭಿಮಾನಿಗಳು

ಮಹಾನಟಿ ಗ್ರ್ಯಾಂಡ್ ಫಿನಾಲೆ ಸಿಂಹಾಸನ ಏರಿದ ಫೈನಲಿಸ್ಟ್‌’ಗಳು : ಬಿಂದು ಹೊನ್ನಾಳಿಗೆ ಮೋಸ ಅಂತಿದ್ದಾರೆ ಅಭಿಮಾನಿಗಳು

ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ ಸೆಮಿ ಫಿನಾಲೆಯಲ್ಲಿ ಐವರು ಸ್ಪರ್ಧಿಗಳು ಫಿನಾಲೆ ಸಿಂಹಾಸನ ಏರಿದ್ದು, ಬಿಂದು ಹೊನ್ನಾಳಿ ಫೈನಲ್ ಗೆ ಪ್ರವೇಶ ಪಡೆಯದ್ದು ನೋಡಿ ಅಭಿಮಾನಿಗಳು ನಿರಾಸರಾಗಿದ್ದಾರೆ.  

2 Min read
Author : Pavna Das
| Updated : Jul 08 2024, 03:43 PM IST
Share this Photo Gallery
  • FB
  • TW
  • Linkdin
  • Whatsapp
18

ಕಳೆದ ಮೂರು ತಿಂಗಳಿಂದ ಕನ್ನಡ ಪ್ರೇಕ್ಷಕರಿಗೆ ಭರ್ಜರಿ ಮನರಂಜನೆ ನೀಡುತ್ತಾ ಬಂದಿರುವ ಝೀ ಕನ್ನಡದ ಜನಪ್ರಿಯ ರಿಯಾಲಿಟಿ ಶೋ ಮಹಾನಟಿ (Mahanati reality show) ಇದೀಗ ಕೊನೆಯ ಹಂತ ತಲುಪಿದೆ. ರಮೇಶ್ ಅರವಿಂದ್ ಸಾರಥ್ಯದಲ್ಲಿ, ನಟಿ ಪ್ರೇಮಾ, ನಿಶ್ವಿಕಾ ನಾಯ್ಡು ಮತ್ತು ನಿರ್ದೇಶಕ ತರುಣ್ ಸುಧೀರ್ ತೀರ್ಪುಗಾರರಾಗಿ ಹಾಗೂ ಅನುಶ್ರೀ ನಿರೂಪಣೆಯಲ್ಲಿ ಈ ರಿಯಾಲಿಟಿ ಶೋ ಅದ್ಭುತವಾಗಿ ಮೂಡಿ ಬಂದಿತ್ತು.

28

ಮಹಾ ನಟಿ ಸೆಮಿ ಫಿನಾಲೆ ಈಗಷ್ಟೇ ಮುಗಿದಿದ್ದು, ಫಿನಾಲೆಗೆ ಕ್ಷಣಗಣನೆ ಆರಂಭವಾಗಲಿದೆ. ಈ ನಡುವೆ  ಪ್ರಿಯಾಂಕ, ಗಗನ, ಆರಾಧನಾ ಭಟ್, ಶ್ವೇತಾ ಭಟ್ ಮತ್ತು ಧನ್ಯಶ್ರೀ ಫಿನಾಲೆ ಟಿಕೆಟ್ ಪಡೆದು, ಸಿಂಹಾಸನವೇರಿದ್ದು, ಗ್ರಾಮೀಣ ಪ್ರತಿಭೆಯಾದ ಬಿಂದು ಹೊನ್ನಾಳಿ ಫಿನಾಲೆ ಟಿಕೆಟ್ ಪಡೆಯದ್ದಕ್ಕೆ ಅಭಿಮಾನಿಗಳು ಸಿಕ್ಕಾಪಟ್ಟೆ ನಿರಾಶರಾಗಿದ್ದಾರೆ. ಕಾಮೆಂಟ್ ಗಳ ಮೂಲಕ ತಮ್ಮ ನೋವು ತೋರಿಸಿಕೊಂಡಿದ್ದು, ಬಿಂದು ಟೀಚರ್ ಗೆ ಮೋಸ ಆಗಿದೆ ಎಂದಿದ್ದಾರೆ. 
 

38

ಫಿನಾಲೆ ಟಿಕೆಟ್ ಪಡೆದ ಐದು ಜನ ಸ್ಪರ್ಧಿಗಳು ಸಹ ಇಲ್ಲಿವರೆಗೆ ಅದ್ಭುತ ಪ್ರದರ್ಶನ ನೀಡಿ, ಪ್ರತಿಸ್ಪರ್ಧಿಗಳಿಗೆ ಪೈಪೋಟಿ ನೀಡಿ ಫಿನಾಲೆ ಸಿಂಹಾಸನ ಏರಿದ್ದಾರೆ. ಆದರೆ ವೀಕ್ಷಕರಿಗೆ ಮಾತ್ರ ಅದ್ಭುತ ನಟಿಯಾಗಿರುವ ಬಿಂದು ಹೊನ್ನಾಳಿ ಫಿನಾಲೆ ಬಾರದಿದ್ದುದು ಬೇಸರ ತಂದಿದೆ. ಬಿಂದು ಮೋಸ್ಟ್ ಡಿಸರ್ವ್ ಕ್ಯಾಂಡಿಡೇಟ್ ಎಂದು ಹೇಳ್ತಿದ್ದಾರೆ ಜನ. 
 

48

ಮೂರು ಬಾರಿ ಗೋಲ್ಡನ್ ಬಜಾರ್ ತಗೊಂಡು, ಒಂದು ಸಾರಿನು ಡೇಂಜರ್ ಝೋನ್ ಗೆ ಹೋಗದೆ ಮತ್ತೆ ವೋಟಿಂಗ್ ಅಲ್ಲಿ ಕೂಡ ಹೆಚ್ಚು ವೋಟ್ ಪಡೆದ್ರೂ, ಆದ್ರೆ ಝೀ ಅವರು ಬಿಂದು (Bindu Honnali) ಅವರಿಗೆ ಫಿನಾಲೆಗೆ ಅವಕಾಶ ಕೊಟ್ಟಿಲ್ಲ, ನಿಜವಾದ ವಿನ್ನರ್ ಬಿಂದು ಅವರು ಎಂದಿದ್ದಾರೆ. ಅಷ್ಟೇ ಅಲ್ಲದೇ ಬಿಂದು ಹೊನ್ನಾಳಿ ನಮ್ಮ ಮನಸನ್ನು ಗೆದ್ದಿದೀಯ ಅಷ್ಟು ಸಾಕು ಬಿಡಿ ಮೇಡಂ ಎಂದು ಸಮಾಧಾನ ಕೂಡ ಮಾಡಿದ್ದಾರೆ. 
 

58

ಮತ್ತೊಬ್ಬರು ಕಾಮೆಂಟ್ ಮಾಡಿ ಈ ಐವರಲ್ಲಿ ಗಗನಳಿಗೆ ಬ್ಲಾಕ್‌ಬಸ್ಟರ್ ಪರ್ಫಾರ್ಮೆನ್ಸ್ ಬಂದಿಲ್ಲ. ಆದ್ರೆ ಬಿಂದು ಹೊನ್ನಾಳಿಗೆ 3 ಸಲ‌ ಬಂದಿದೆ ಹಾಗು ಅಭಿನಯದಲ್ಲಿ ಗಗನಳಿಗಿಂತ ಬಿಂದು ಹೊನ್ನಾಳಿನೇ ಒಂದು ಕೈ ಮೇಲೆ ಅಂತ ನನ್ನ ಅನಿಸಿಕೆ. ಮಹಾನಟಿ ಕಾರ್ಯಕ್ರಮ ಅಭಿನಯಕ್ಕೆ ಪ್ರಾಮುಖ್ಯತೆ ಕೋಡೋದಿದ್ರೆ ಬಿಂದೂಳನ್ನ ಆಯ್ಕೆ ಮಾಡ್ಬೇಕಿತ್ತು ಎಂದಿದ್ದಾರೆ. 
 

68

ಇನ್ನೊಬ್ಬರು ಮೋಸ ಇದು ಎಲ್ಲ ಶ್ರೀಮಂತರಿಗೆ ಮಾತ್ರ ಸೆಲೆಕ್ಟ್ ಮಾಡ್ತಾರೆ. ಪಾಪ ಬಿಂದು ಹೊನ್ನಳಿ ಅವರನ್ನ ಯಾಕೆ ಸೆಲೆಕ್ಟ್ ಮಾಡಿಲ್ಲ. ಮುಖ ನೋಡಿ ಸೆಲೆಕ್ಟ್ ಮಾಡಬೇಡಿ. ಅಭಿನಯ ನೋಡಿ ಇದು ಮೋಸ ಗುರು ಅಂದ್ರೆ ಇನ್ನೊಬ್ಬರು ಇದು ಮ್ಯಾಚ್ ಫಿಕ್ಸಿಂಗ್. ಅಲ್ಲದೇ ಬಿಂದು ಮತ್ತು ಚಂದನ ಗೌಡ ಇಬ್ಬರು ಅಮೋಘ ಪ್ರತಿಭೆಯುಳ್ಳವರು. ಐದು ಮಹಾನಟಿಯರಲ್ಲಿ ನೀವು ಇಬ್ಬರು ನಮ್ಮ ಪ್ರಕಾರ ಇದಿರಾ. ನಿಮ್ಮ ಪ್ರತಿಭೆಯನ್ನ ಮೆಚ್ಚಿದಂತಹ ಜನಸ್ತೋಮ ನಿಮ್ಮ ಬೆನ್ನ ಹಿಂದೆ ಇದೆ. ನಿಮಿಬ್ಬರಿಗೂ ಮುಂದೊಂದು ದಿನ‌ ದೊಡ್ಡ ವೇದಿಕೆಯೊಂದು ಕೈ‌ ಬೀಸಿ ಕರೆಯುತ್ತೆ ಎಂದು ಹಾರೈಸಿದ್ದಾರೆ. 
 

78

ಇನ್ನೂ ಕೆಲವರು ಕಾಮೆಂಟ್ ಮಾಡಿ ವಾಹಿನಿ ಕೇವಲ‌ ಹಣಕ್ಕೆ ಪ್ರಾಮುಖ್ಯತೆ ಕೊಟ್ಟಿದೆ. ಹಣ ಇವತ್ತು ಇರುತ್ತೆ ನಾಳೆ‌ ಹೋಗುತ್ತೆ. ಆದರೆ ವಾಹಿನಿ ಟಿ ಆರ್ ಪಿ(TRP) ಕಾರಣಕ್ಕೆ ಹಣಕ್ಕೆ ಬೆಲೆ ಕೊಡುವ ಬದಲು ಬಿಂದು ಪ್ರತಿಭೆಗೆ ಬೆಲೆ ಕೊಡ ಬೇಕಿತ್ತು. ಅವಳ ಪ್ರತಿಭೆಯನ್ನು ಮೆಚ್ಚಿದಂತಹ ಕರ್ನಾಟಕದ ಜನಸ್ತೋಮವೇ ಅವಳ ಬೆಂಬಲವಾಗಿ ನಿಂತಿದೆ. ಒಬ್ಬ ನಟಿಗೆ ಇದಕ್ಕಿಂತ ಇನ್ನೇನು ಬೇಕು. ಈ ಕಲಾ ಕ್ಷೇತ್ರದಲ್ಲೂ ರಾಜಕಾರಣ, ಭ್ರಷ್ಟಾಚಾರ ಎದ್ದು ಕಾಣುತ್ತದೆ ಎಂದು ವಾಹಿನಿ ಮೇಲೆಯೇ ಕೋಪ ತೋಡಿ ಕೊಂಡಿದ್ದಾರೆ. 
 

88

ಜನರನ್ನ ಸೆಳೆಯೋಕೆ ಮತ್ತು ಟಿಆರ್ ಪಿ ಹೆಚ್ಚಿಸಿಕೊಳ್ಳೋಕೆ ಚಾನೆಲ್ ಗಳು ಗ್ರಾಮೀಣ ಜನರನ್ನು ಮತ್ತು ಗ್ರಾಮೀಣ ವಿಷಯಗಳನ್ನ ಆಯ್ಕೆ ಮಾಡಿಕೊಳ್ಳುತ್ತೆ. ಆದ್ರೆ ಕೊನೆಗೆ ಫಿನಾಲೆ ಬರುವಾಗ ಬೇರೆ ವ್ಯಕ್ತಿಗಳನ್ನ ಆಯ್ಕೆ ಮಾಡ್ತಾರೆ. ಫಿನಾಲೆಗೆ ಆಯ್ಕೆ ಮಾಡಿದ್ರೂ ಸಹ, ಅವರನ್ನ ವಿನ್ನರ್ ಮಾಡೋದೇ ಇಲ್ಲ. ಇದೇ ಆಗಿರೋದು ಬಿಂದು ಜೊತೆಗೂ ಎಂದು ಇನ್ನೊಬ್ರು ಕಾಮೆಂಟ್ ಮಾಡಿದ್ದಾರೆ. 
 

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

PD
Pavna Das
ಮೂಲತಃ ಮಂಗಳೂರಿನವಳು. ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮದ ಸ್ನಾತಕೋತ್ತರ ಪದವಿ . ಕಳೆದ 12 ವರ್ಷಗಳಿಂದ ಪತ್ರಿಕೆ ಹಾಗೂ ಡಿಜಿಟಲ್ ಮಾಧ್ಯಮಗಳಲ್ಲಿ ಕೆಲಸ . ಸುದ್ದಿ ಬಿಡುಗಡೆ, ಗಲ್ಫ್ ಕನ್ನಡಿಗ, ಈ ಟಿವಿ ಭಾರತ್, ಕನ್ನಡ ನ್ಯೂಸ್ ನೌ, ವಿಜಯಕರ್ನಾಟಕದಲ್ಲಿ ಕೆಲಸ ಮಾಡಿದ ಅನುಭವ. ಈಗ ಏಷ್ಯಾನೆಟ್ ಸುವರ್ಣದಲ್ಲಿ ಫ್ರೀಲಾನ್ಸರ್ . ಮನೋರಂಜನೆ, ಲೈಫ್ ಸ್ಟೈಲ್, ಟ್ರಾವೆಲ್ ಬರವಣಿಗೆ ಇಷ್ಟ.
ರಿಯಾಲಿಟಿ ಶೋ

Latest Videos
Recommended Stories
Recommended image1
ಜೈಲಿಗೆ ಬಂದ ಆರೋಗ್ಯ ಸಚಿವ! ಕೇಸ್​ನಲ್ಲಿ ಫಿಕ್ಸ್​- ಭ್ರಷ್ಟ ರಾಜಕಾರಣಿಗಳ ಬಟಾ ಬಯಲು ಮಾಡ್ತಿದ್ಯಾ Karna Serial?
Recommended image2
ನಲ್ಲಿಮೂಳೆ ಸ್ಟಾರ್​​​​​ ವಿರುದ್ದ ತಿರುಗಿಬಿದ್ದ ರಘು? ಗಿಲ್ಲಿಯನ್ನ ಫ್ರೆಂಡ್ಸ್​ ಗ್ರೂಪ್​​​ ನಿಂದ ಹೊರಗಿಟ್ಟ ರಘು..!
Recommended image3
ಈ ಸಾಫ್ಟ್​ವೇರ್​ ಎಂಜಿನಿಯರ್​ಗೆ ಅತಿಮಾನುಷ ಶಕ್ತಿ ಬಂದಿದ್ಹೇಗೆ? Naa Ninna Bidalaare ಶಂಭು ವಿಡಿಯೋ ವೈರಲ್​
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved