MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Earthquake Survival Guide: ಭೂಕಂಪದ ಅವಶೇಷಗಳಡಿ ಸಿಲುಕಿದಾಗ ಯಾಕೆ ಕಿರುಚಾಡಬಾರದು? ಏನಾಗುತ್ತೆ?

Earthquake Survival Guide: ಭೂಕಂಪದ ಅವಶೇಷಗಳಡಿ ಸಿಲುಕಿದಾಗ ಯಾಕೆ ಕಿರುಚಾಡಬಾರದು? ಏನಾಗುತ್ತೆ?

Earthquake Survival Guide: Earthquake Survival Guide ಭೂಕಂಪದ ಅವಶೇಷಗಳಡಿ ಸಿಲುಕಿಕೊಂಡರೆ, ಜೋರಾಗಿ ಕಿರುಚುವುದು ನಿಮಗೇ ಅಪಾಯ ತರಬಹುದು. ಇದು ಯಾಕೆ ಅಪಾಯಕಾರಿ ಮತ್ತು ರಕ್ಷಣಾ ತಜ್ಞರು ಹೇಳುವ ಸೇಫ್ಟಿ ಟಿಪ್ಸ್ ಏನು ಅಂತ ತಿಳಿಯಿರಿ.

2 Min read
Author : Ravi Janekal
Published : Jun 27 2026, 02:26 PM IST
Share this Photo Gallery
  • FB
  • TW
  • Linkdin
  • Whatsapp
13
ವೆನೆಜುವೆಲಾ ಭೂಕಂಪ: ಅವಶೇಷಗಳಡಿ ಸಿಲುಕಿದಾಗ ಯಾಕೆ ಕಿರುಚಬಾರದು?
Image Credit : Asianet News

ವೆನೆಜುವೆಲಾ ಭೂಕಂಪ: ಅವಶೇಷಗಳಡಿ ಸಿಲುಕಿದಾಗ ಯಾಕೆ ಕಿರುಚಬಾರದು?

ವೆನೆಜುವೆಲಾದಲ್ಲಿ ಸಂಭವಿಸಿದ ವಿನಾಶಕಾರಿ ಭೂಕಂಪದಿಂದಾಗಿ ಹಲವು ನಗರಗಳಲ್ಲಿ ಭಾರಿ ಅನಾಹುತ ಸೃಷ್ಟಿಸಿದೆ. ಮೊದಲಿಗೆ 7.2 ತೀವ್ರತೆಯಲ್ಲಿ ಭೂಮಿ ನಡುಗಿತು. ಬಳಿಕ ಕೆಲವೇ ಸೆಕೆಂಡುಗಳಲ್ಲಿ 7.5 ತೀವ್ರತೆಯ ಭೂಕಂಪ ಸಂಭವಿಸಿತು. ಭೂಕಂಪನದ ತೀವ್ರತೆಗೆ ಅನೇಕ ಕಟ್ಟಡಗಳು ಕುಸಿದುಬಿದ್ದವು. ನೂರಾರು ಜನರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.

ವೆನೆಜುವೆಲಾ ಭೂಕಂಪ: ಸಾವಿನ ಸಂಖ್ಯೆ ಒಂದು ಲಕ್ಷಕ್ಕೆ ಏರಿಕೆ?

ಅಮೆರಿಕದ ಜಿಯೋಲಾಜಿಕಲ್ ಸರ್ವೆ (USGS) ಪ್ರಕಾರ, ಇಲ್ಲಿ 1 ಲಕ್ಷಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಳ್ಳುವ ಸಾಧ್ಯತೆ 30% ಇದೆ ಎಂದು ಅಂದಾಜಿಸಲಾಗಿದೆ. ಈಗಾಗಲೇ ಹಲವು ಕಟ್ಟಡಗಳು ನೆಲಸಮವಾಗಿದ್ದು, 500ಕ್ಕೂ ಹೆಚ್ಚು ರಕ್ಷಣಾ ಸಿಬ್ಬಂದಿ ಅವಶೇಷಗಳಡಿ ಸಿಲುಕಿಕೊಂಡವರಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
23
ಭೂಕಂಪದ ಸಮಯದಲ್ಲಿ ಯಾಕೆ ಕಿರುಚಬಾರದು?
Image Credit : Asianet News

ಭೂಕಂಪದ ಸಮಯದಲ್ಲಿ ಯಾಕೆ ಕಿರುಚಬಾರದು?

ಭೂಕಂಪದ ಸಮಯದಲ್ಲಿ ಜೋರಾಗಿ ಕಿರುಚಿದರೆ ಸಹಾಯ ಸಿಗುತ್ತದೆಯೇ?

ಭೂಕಂಪ, ಭೂಕುಸಿತದಂತಹ ದುರಂತದ ಸಮಯದಲ್ಲಿ ಸಂತ್ರಸ್ತರು ಜೋರಾಗಿ ಕಿರುಚಿದರೆ ಬೇಗ ಸಹಾಯ ಸಿಗುತ್ತದೆ ಎಂದು ಎಲ್ಲರೂ ಭಾವಿಸುತ್ತಾರೆ. ಆದರೆ ರಕ್ಷಣಾ ತಜ್ಞರು ಹೇಳೋದೇ ಬೇರೆ. ಕೆಲವು ಸಲ ಈ ಪ್ರಯತ್ನವೇ ಇನ್ನಷ್ಟು ಅನಾಹುತಕ್ಕೆ ಕಾರಣವಾಗಬಹುದು. ಹಾಗಾದರೆ ಭೂಕಂಪದ ನಂತರ ಅವಶೇಷಗಳಡಿ ಸಿಲುಕಿದಾಗ ಕಿರುಚುವುದು ಯಾಕೆ ಅಪಾಯಕಾರಿ? ನಿಮ್ಮನ್ನು ನೀವು ರಕ್ಷಿಸಿಕೊಳ್ಳುವ ಸರಿಯಾದ ಮಾರ್ಗ ಯಾವುದು? ಇಲ್ಲಿದೆ ಮಾಹಿತಿ ಅವಶೇಷಗಳಡಿ ಸಿಲುಕಿದಾಗ ಕಿರುಚುವುದು ಯಾಕೆ ದೊಡ್ಡ ಅಪಾಯ?

1. ಶ್ವಾಸಕೋಶಕ್ಕೆ ವಿಷಕಾರಿ ಧೂಳು ಸೇರುತ್ತದೆ

ಕಟ್ಟಡದ ಅವಶೇಷಗಳಡಿ ಸಿಲುಕಿದಾಗ ಗಾಬರಿಯಿಂದ ಕಿರುಚುವುದು ಸಹಜ. ಆದರೆ ರಕ್ಷಣಾ ತಜ್ಞರು ಇದರ ಹಿಂದಿರುವ 3 ದೊಡ್ಡ ಅಪಾಯಗಳನ್ನು ವಿವರಿಸುತ್ತಾರೆ. ಮೊದಲನೆಯದು, ವಿಷಕಾರಿ ಧೂಳು ಶ್ವಾಸಕೋಶ ಸೇರುವುದು. ಕಟ್ಟಡ ಕುಸಿದಾಗ, ಸಿಮೆಂಟ್, ಕಾಂಕ್ರೀಟ್ ಮತ್ತು ಇಟ್ಟಿಗೆಯ ಸಣ್ಣ ಕಣಗಳು ಗಾಳಿಯಲ್ಲಿ ದಟ್ಟವಾದ ಧೂಳನ್ನು ಸೃಷ್ಟಿಸುತ್ತವೆ. ನೀವು ಕಿರುಚಲು ದೀರ್ಘವಾಗಿ ಉಸಿರು ಎಳೆದಾಗ, ಈ ವಿಷಕಾರಿ ಧೂಳು ನೇರವಾಗಿ ನಿಮ್ಮ ಶ್ವಾಸಕೋಶಕ್ಕೆ ಹೋಗುತ್ತದೆ. ಇದರಿಂದ ಉಸಿರುಗಟ್ಟುವ ಅಪಾಯ ಹೆಚ್ಚಾಗುತ್ತದೆ.

2. ಆಕ್ಸಿಜನ್ ವ್ಯರ್ಥವಾಗುತ್ತದೆ

ಅವಶೇಷಗಳ ಕೆಳಗೆ ಗಾಳಿ (ಆಕ್ಸಿಜನ್) ಮೊದಲೇ ಸೀಮಿತ ಪ್ರಮಾಣದಲ್ಲಿರುತ್ತದೆ. ನೀವು ಕಿರುಚಾಡಿದರೆ ಅಥವಾ ಗಾಬರಿಗೊಂಡರೆ ನಿಮ್ಮ ದೇಹ ಹೆಚ್ಚು ಆಕ್ಸಿಜನ್ ಬಳಸಿಕೊಳ್ಳುತ್ತದೆ. ಇದರಿಂದಾಗಿ ಅಲ್ಲಿ ಉಳಿದಿರುವ ಗಾಳಿ ಬೇಗನೆ ಖಾಲಿಯಾಗಬಹುದು.

3. ಗಂಟಲು ಒಣಗಿ ಶಕ್ತಿ ಖಾಲಿಯಾಗುತ್ತದೆ

ಭಯ ಆತಂಕದಿಂದ ಸಹಾಯಕ್ಕಾಗಿ ಒಂದೇ ಸಮನೇ ಕಿರುಚುತ್ತಿದ್ದರೆ ಕೆಲವೇ ನಿಮಿಷಗಳಲ್ಲಿ ನಿಮ್ಮ ಗಂಟಲು ಸಂಪೂರ್ಣವಾಗಿ ಒಣಗಿ ಹೋಗುತ್ತದೆ. ದೇಹದ ಶಕ್ತಿಯೂ ಖಾಲಿಯಾಗುತ್ತದೆ. ಒಂದು ವೇಳೆ ರಕ್ಷಣಾ ತಂಡ ನಿಮ್ಮ ಹತ್ತಿರ ಬಂದಾಗ ನಿಮಗೆ ಕೂಗಿ ಕರೆಯಲು ಶಕ್ತಿಯೇ ಇಲ್ಲದಂತಾಗಬಹುದು!

ಹಾಗಾದರೆ ಏನು ಮಾಡಬೇಕು?

ಬಾಯಿ ಮತ್ತು ಮೂಗನ್ನು ಮುಚ್ಚಿಕೊಳ್ಳಿ!

ಕಿರುಚುವ ಬದಲು, ನಿಮ್ಮನ್ನು ಸುರಕ್ಷಿತವಾಗಿರಿಸಲು ಮತ್ತು ರಕ್ಷಣಾ ತಂಡಕ್ಕೆ ನಿಮ್ಮ ಇರುವಿಕೆಯನ್ನು ತಿಳಿಸಲು ತಜ್ಞರು ಮೂರು ವಿಧಾನಗಳನ್ನು ಅನುಸರಿಸಲು ಸಲಹೆ ನೀಡುತ್ತಾರೆ. ಮೊದಲನೆಯದಾಗಿ, ನಿಮ್ಮ ಬಳಿ ಇರುವ ಬಟ್ಟೆ, ಕರವಸ್ತ್ರ ಅಥವಾ ಶರ್ಟ್‌ನಿಂದ ನಿಮ್ಮ ಬಾಯಿ ಮತ್ತು ಮೂಗನ್ನು ಚೆನ್ನಾಗಿ ಮುಚ್ಚಿಕೊಳ್ಳಿ. ಇದರಿಂದ ಧೂಳು ಶ್ವಾಸಕೋಶಕ್ಕೆ ಹೋಗುವುದನ್ನು ತಡೆಯಬಹುದು.

ತಟ್ಟುವ (Tapping) ವಿಧಾನ ಬಳಸಿ

ಕಿರುಚುವ ಬದಲು, ನಿಮ್ಮ ಕೈಗೆ ಸಿಕ್ಕ ಕಲ್ಲು ಅಥವಾ ಕಬ್ಬಿಣದ ತುಂಡಿನಿಂದ ಅಲ್ಲಿರುವ ಪೈಪ್ ಅಥವಾ ಕಾಂಕ್ರೀಟ್ ಮೇಲೆ ಪದೇ ಪದೇ ತಟ್ಟಿ. ಲೋಹ ಅಥವಾ ಕಾಂಕ್ರೀಟ್ ಮೇಲೆ ತಟ್ಟಿದಾಗ ಉಂಟಾಗುವ ಶಬ್ದವು ಅವಶೇಷಗಳ ಮೂಲಕ ಬಹಳ ದೂರದವರೆಗೆ ತಲುಪುತ್ತದೆ. ರಕ್ಷಣಾ ತಂಡದ ಉಪಕರಣಗಳು ಈ ಶಬ್ದವನ್ನು ಸುಲಭವಾಗಿ ಪತ್ತೆಹಚ್ಚುತ್ತವೆ.

Related Articles

Related image1
Now Playing
Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
Related image2
Breaking: ಫಿಲಿಪೈನ್ಸ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಆತಂಕ, ಎಚ್ಚರಿಕೆ ಸಂದೇಶ
33
Earthquake Survival Guide: ಈ ತಂತ್ರ ಬಳಸಿ
Image Credit : Asianet News

Earthquake Survival Guide: ಈ ತಂತ್ರ ಬಳಸಿ

ಶಾಂತವಾಗಿ ಆಲಿಸಿ

ಮಧ್ಯೆ ಮಧ್ಯೆ ಸ್ವಲ್ಪ ಹೊತ್ತು ಸುಮ್ಮನಿದ್ದು, ಹೊರಗಿನಿಂದ ಬರುವ ಶಬ್ದಗಳನ್ನು ಕೇಳಿಸಿಕೊಳ್ಳಲು ಪ್ರಯತ್ನಿಸಿ. ವೆನೆಜುವೆಲಾದ ಚಾಕಾವೊ ನಗರದಲ್ಲಿ ಇದೇ ರೀತಿ ಬುದ್ಧಿವಂತಿಕೆ ಬಳಸಿ, ಇಲ್ಲಿಯವರೆಗೆ 18 ಜನರನ್ನು ಅವಶೇಷಗಳಿಂದ ಸುರಕ್ಷಿತವಾಗಿ ಹೊರತೆಗೆಯಲಾಗಿದೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

RJ
Ravi Janekal
ಪ್ರಸ್ತುತ, ಏಷಿಯಾನೆಟ್ ಸುವರ್ಣನ್ಯೂಸ್‌ನಲ್ಲಿ ಉಪ ಸಂಪಾದಕ. ಪತ್ರಿಕೋದ್ಯಮದಲ್ಲಿ 8 ವರ್ಷಗಳ ಅನುಭವ. ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯಲ್ಲಿ ನ್ಯೂಸ್ ಮಾನಿಟರಿಂಗ್ ಆಗಿ ಹಲವು ವರ್ಷಗಳ ಸೇವೆ, ಕೊರೊನಾ ವಾರಿಯರ್ಸ್ ಅವಾರ್ಡ್, ಮೂಲತಃ ರಾಯಚೂರು ಜಿಲ್ಲೆಯ ಜಾನೇಕಲ್ ಗ್ರಾಮದವರಾದ ಇವರು ಓದು, ಬರೆವಣಿಗೆ ಮತ್ತು ಸಾಹಿತ್ಯಾಸಕ್ತರು.
ಭೂಕಂಪ
ವೆನೆಜುವೆಲಾ
ಸುದ್ದಿ

Latest Videos
Recommended Stories
Recommended image1
ಅದೃಷ್ಟ ಅಂದ್ರೆ ಇದು! ಕೇವಲ ₹13,000 ಖರ್ಚು ಮಾಡಿ ದುಬೈನಲ್ಲಿ ಐಷಾರಾಮಿ ಮನೆ ಗೆದ್ದ ಕೇರಳದ ಮಹಿಳೆ
Recommended image2
3ನೇ ಮದ್ವೆ ಆಗಿ ಹೋಗಿದೆ ಎನ್ನುತ್ತಲೇ ಫ್ಯಾನ್ಸ್​ಗೆ ಬಿಗ್​ ಸರ್​ಪ್ರೈಸ್​ ಕೊಟ್ಟ ನಟ ಆಮೀರ್​ ಖಾನ್​
Recommended image3
ಎಷ್ಟೇ ವಿಶಲ್ ಕೂಗಿಸಿದ್ರೂ ಮಾಂಸ ರಬ್ಬರ್‌ನಂತಿದ್ರೆ ಬೆಣ್ಣೆಯಂತೆ ಮೃದುವಾಗಲು ಅಜ್ಜಿಯರು ಹೀಗೆ ಮಾಡ್ತಿದ್ರಂತೆ!
Related Stories
Recommended image1
Now Playing
Natural Disasters: ಭೂಕಂಪ.. ಜಲ ಪ್ರಳಯ.. ಸರ್ವನಾಶದ ಹೊಸ್ತಿಲಲ್ಲಿ ಭೂಮಂಡಲ! ವಿನಾಶದ ಮುನ್ಸೂಚನೆನಾ?
Recommended image2
Breaking: ಫಿಲಿಪೈನ್ಸ್‌ನಲ್ಲಿ 7.7 ತೀವ್ರತೆಯ ಪ್ರಬಲ ಭೂಕಂಪ : ಸುನಾಮಿ ಆತಂಕ, ಎಚ್ಚರಿಕೆ ಸಂದೇಶ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved