MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
India Iran Relationship
Karnataka Cabinet Meeting Today
Abhinandan Varthaman
Today's Horoscope in Kannada
Dharmasthala Sangha Employee
Ramanagara Fake Currency Racket
AI Micro Data Centre Chamarajanagar
Belagavi Cantonment Merger
US-Iran Tensions
Vijayapura Airport
Ram Mandir New CEO
Minister Basavaraj Rayareddy
  • Home
  • Karnataka Districts
  • Kodagu: ಮಳೆ ಕೊರತೆಯಿಂದ ಕೊಳೆರೋಗದ ಕರಾಳ ಛಾಯೆ; ಆತಂಕದಲ್ಲಿ ಕಾಫಿ ಬೆಳೆಗಾರರು, ಪರಿಹಾರಕ್ಕಾಗಿ ಆಗ್ರಹ

Kodagu: ಮಳೆ ಕೊರತೆಯಿಂದ ಕೊಳೆರೋಗದ ಕರಾಳ ಛಾಯೆ; ಆತಂಕದಲ್ಲಿ ಕಾಫಿ ಬೆಳೆಗಾರರು, ಪರಿಹಾರಕ್ಕಾಗಿ ಆಗ್ರಹ

ಕೊಡಗಿನಲ್ಲಿ ಈ ಬಾರಿ ವಾಡಿಕೆಗಿಂತ ಕಡಿಮೆ ಮಳೆಯಾಗಿದ್ದರೂ, ಕಾಫಿ ಬೆಳೆಗೆ ಕೊಳೆರೋಗ ವ್ಯಾಪಕವಾಗಿ ಹರಡಿದೆ. ಇದರಿಂದ ಕಾಫಿ ಕಾಯಿಗಳು ಕೊಳೆತು ಉದುರುತ್ತಿದೆ. ಈ ಅನಿರೀಕ್ಷಿತ ರೋಗದಿಂದ ಶೇ. 40-50ರಷ್ಟು ಬೆಳೆ ನಷ್ಟ ಅನುಭವಿಸುತ್ತಿರುವ ಕಾಫಿ ಬೆಳೆಗಾರರು ಸರ್ಕಾರದ ಪರಿಹಾರಕ್ಕಾಗಿ ಆಗ್ರಹಿಸುತ್ತಿದ್ದಾರೆ.

2 Min read
Author : Sumanth SN
Published : Sep 03 2026, 03:26 PM IST
Share this Photo Gallery
  • FB
  • TW
  • Linkdin
  • Whatsapp
16
ಕಾಫಿನಾಡಲ್ಲಿ ಕೊಳೆರೋಗದ ಕರಾಳ ಛಾಯೆ
Image Credit : Asianet News

ಕಾಫಿನಾಡಲ್ಲಿ ಕೊಳೆರೋಗದ ಕರಾಳ ಛಾಯೆ

ಕೊಡಗು: ವಾಣಿಜ್ಯ ಬೆಳೆಯಾಗಿರುವ ಕಾಫಿಗೆ ಉತ್ತಮವಾದ ಮಳೆ ಬೇಕು ಎನ್ನುವುದೇನೋ ಸರಿ. ಆದರೆ ಎಲ್ ನಿನೋದಿಂದಾಗಿ ರಾಜ್ಯದಲ್ಲಿ ಅಷ್ಟೇ ಅಲ್ಲ, ಕೊಡಗು ಜಿಲ್ಲೆಯಲ್ಲೂ ಮಳೆಯ ತೀವ್ರ ಕೊರತೆ ಎದುರಾಯಿತು. ಮಳೆ ಅಷ್ಟು ಕೊರತೆ ಆದರೂ ಕೂಡ ಎತ್ತೇಚ್ಛವಾಗಿ ಮಳೆ ಸುರಿದಾಗ ಕಾಫಿಗೆ ಎದುರಾಗುವ ಕೊಳೆರೋಗ ಈ ಬಾರಿಯೂ ಬಾಧಿಸುತ್ತಿದೆ. ಇದು ಕೊಡಗಿನ ಕಾಫಿ ಬೆಳೆಗಾರರಿಗೆ ಸಂಕಷ್ಟ ತಂದೊಡ್ಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಜಿಲ್ಲೆಯಲ್ಲಿ ಕೇವಲ 1420 ಮಿಮೀ ಮಳೆ
Image Credit : Asianet News

ಜಿಲ್ಲೆಯಲ್ಲಿ ಕೇವಲ 1420 ಮಿಮೀ ಮಳೆ

ಹೌದು ಕೊಡಗು ಜಿಲ್ಲೆಯಲ್ಲಿ ಪ್ರತಿ ವರ್ಷ ಸಾಮಾನ್ಯವಾಗಿ ಆಗಸ್ಟ್ ಅಂತ್ಯ ಅಥವಾ ಸೆಪ್ಟೆಂಬರ್ ಮೊದಲ ವಾರದೊಳಗೆ 2600 ಮಿಲಿ ಮೀಟರ್ ವರೆಗೆ ಮಳೆ ಸುರಿಯುತಿತ್ತು. ಆದರೂ ಕಾಫಿಗೆ ಅಷ್ಟೊಂದು ಕೊಳೆರೋಗ ಬಾಧಿಸಿರಲಿಲ್ಲ. ಈ ಬಾರಿ ಇದುವರೆಗೆ ಜಿಲ್ಲೆಯಲ್ಲಿ ಮಳೆ ಸುರಿದಿದ್ದೇ ಕೇವಲ 1420 ಮಿಲಿ ಮೀಟರ್ ಮಳೆ ಅಷ್ಟೇ. ಅದಾಗಲೇ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಕಾಫಿಗೆ ಕೊಳೆರೋಗ ಬಾಧಿಸುತ್ತಿದೆ. ಅದರಲ್ಲೂ ಮಡಿಕೇರಿ, ಸೋಮವಾರಪೇಟೆ ತಾಲ್ಲೂಕಿನ ಬಹುತೇಕ ಭಾಗಗಳಲ್ಲಿ ವಿರಾಜಪೇಟೆ ತಾಲ್ಲೂಕಿನ ಕೆಲಭಾಗಗಳಲ್ಲಿ ಕಾಫಿಗೆ ಕೊಳೆರೋಗ ಎದುರಾಗಿದೆ.

Related Articles

Related image1
Gadaga: ಮಧ್ಯರಾತ್ರಿ, ಬಸ್‌ನಲ್ಲಿ ಸಿಕ್ತು ಕಂತೆ ಕಂತೆ ನೋಟು; ಮಾಲೀಕರಿಗೆ ಹಣ ಹಿಂದಿರುಗಿಸಿ ಸಾರಿಗೆ ಸಿಬ್ಬಂದಿ ಪ್ರಮಾಣಿಕತೆ
Related image2
Bengaluru: 14 ವರ್ಷಗಳ ಕಾಯುವಿಕೆ ಅಂತ್ಯ, ಉದ್ಘಾಟನೆಗೆ ಸಿದ್ದವಾಯಿತು ಜಕ್ಕೂರು ರೈಲ್ವೆ ಮೇಲ್ಸೇತುವೆ!
36
ಕಾಫಿ ಗಿಡಗಳೇ ಒಣಗುತ್ತಿವೆ
Image Credit : Asianet News

ಕಾಫಿ ಗಿಡಗಳೇ ಒಣಗುತ್ತಿವೆ

ಪ್ರತಿ ವರ್ಷದ ಮಳೆಗಿಂತ ಅರ್ಧದಷ್ಟು ಮಳೆಗೆ ಕಾಫಿ ಕೊಳೆರೋಗ ಬಂದಿರುವುದು ಬೆಳೆಗಾರರಿಗೆ ಅಚ್ಚರಿ ಮತ್ತು ಆತಂಕ ಮೂಡಿಸಿದೆ. ಕಾಫಿ ಬೀಜಗಳು ಇನ್ನೂ ಬಲಿಯುವ ಮುನ್ನವೇ ಗಿಡಗಳಲ್ಲಿಯೇ ಕೊಳೆತು ಉದುರಲಾಂಭಿಸಿದೆ. ಬಹುತೇಕ ಗಿಡಗಳಲ್ಲಿ ಕಾಫಿ ಉದುರಿ ಹೋಗಿ ಬರೀ ಗಿಡಗಳಷ್ಟೇ ಉಳಿದಿವೆ. ಇನ್ನು ಕೆಲವು ಗಿಡಗಳಲ್ಲಿ ಎಲೆಗಳ ಸಹಿತ ಉದುರಿ ಹೋಗಿ ಗಿಡಗಳೇ ಒಣಗಿ ಹೋಗುತ್ತಿವೆ. ಶೇಕಡ 40 ರಿಂದ 50 ರಷ್ಟು ಕಾಫಿ ಕಾಯಿಗಳು ಕರಗಿ ಉದುರಿ ಹೋಗಿದ್ದು ಬೆಳೆಗಾರರು ತೀವ್ರ ನಷ್ಟ ಅನುಭವಿಸುವಂತೆ ಆಗಿದೆ.

46
ಕಾಫಿ ಬೆಳೆಗಾರರಿಗೆ ಭಾರೀ ನಷ್ಟ!
Image Credit : Asianet News

ಕಾಫಿ ಬೆಳೆಗಾರರಿಗೆ ಭಾರೀ ನಷ್ಟ!

ಜಿಲ್ಲೆಯ ಮಡಿಕೇರಿ, ಸೋಮವಾರಪೇಟೆ ಹಾಗೂ ವಿರಾಜಪೇಟೆ ತಾಲ್ಲೂಕುಗಳಲ್ಲಿ ಇಂದಿಗೂ ಬಿಟ್ಟು ಬಿಟ್ಟು ಮಳೆ ಸುರಿಯುತ್ತಲೇ ಇದೆ. ಇದರಿಂದ ಕಾಫಿ ಕಾಯಿ ಇನ್ನಷ್ಟು ಉದುರಲು ಕಾರಣವಾಗುತ್ತಿದೆ. ಇದೇ ರೀತಿ ಕಾಫಿ ಉದುರಿರುವುದರಿಂದ ಎಕರೆಗೆ 15 ರಿಂದ 20 ಚೀಲ ನಷ್ಟವಾಗುವ ಆತಂಕ ಎದುರಾಗಿದೆ. ಇದೇ ಆದರೆ ಬೆಳೆಗಾರರು ದೊಡ್ಡ ನಷ್ಟ ಅನುಭವಿಸಿ ಕಾರ್ಮಿಕರಿಗೆ ಕೂಲಿ ಕೊಡುವುದಕ್ಕೂ ಸಾಧ್ಯವಾಗದಂತಹ ಪರಿಸ್ಥಿತಿ ಎದುರಾಗಲಿದೆ.

56
'ಕಾಫಿ ಬೆಳೆಗಾರರಿಗೆ ಕೂಡಲೇ ಪರಿಹಾರ ಕೊಡಿ'
Image Credit : Asianet News

'ಕಾಫಿ ಬೆಳೆಗಾರರಿಗೆ ಕೂಡಲೇ ಪರಿಹಾರ ಕೊಡಿ'

ಮತ್ತೊಂದೆಡೆ ಕಾಫಿ ಗಿಡಗಳೇ ಒಣಗಿ ಹೋಗುತ್ತಿದ್ದು, 15 ರಿಂದ 20 ವರ್ಷಗಳಿಂದ ಬೆಳೆದಿದ್ದ ಗಿಡಗಳು ಒಣಗಿ ಹೋದಲ್ಲಿ ಮತ್ತೆ ಹೊಸದಾಗಿ ಗಿಡನೆಟ್ಟು ಬೆಳೆಯಬೇಕಾದರೆ ಮೂರರಿಂದ ನಾಲ್ಕು ವರ್ಷಗಳೇ ಹಿಡಿಯಲಿವೆ. ಇಷ್ಟೆಲ್ಲಾ ಸಮಸ್ಯೆ ಎದುರಾಗಿದ್ದು ಸರ್ಕಾರಗಳು ಮಾತ್ರ ಯಾವುದೇ ಪರಿಹಾರ ಒದಿಗಿಸುವ ನಿಟ್ಟಿನಲ್ಲಿ ಮುಂದಾಗಿಲ್ಲ ಎಂದು ಕಾಫಿ ಬೆಳೆಗಾರ ಎ.ಎಸ್. ಟಾಟು ಮೊಣ್ಣಪ್ಪ ಅಸಮಾಧಾನ ಹೊರಹಾಕಿದ್ದಾರೆ.

66
ಕೂಡಲೇ ಕಾಫಿ ಮಂಡಳಿ ಮೂಲಕ ಸರ್ವೆ ಮಾಡಿಸಿ
Image Credit : Asianet News

ಕೂಡಲೇ ಕಾಫಿ ಮಂಡಳಿ ಮೂಲಕ ಸರ್ವೆ ಮಾಡಿಸಿ

ಜೂನ್ ತಿಂಗಳಲ್ಲಿಯೇ ಆರಂಭವಾಗಬೇಕಾಗಿದ್ದ ಮಳೆ, ಜುಲೈ ತಿಂಗಳ ಮಧ್ಯಭಾಗದಲ್ಲಿ ಆರಂಭವಾಯಿತು. ಇಷ್ಟೊಂದು ತಡವಾಗಿ ಮಳೆ ಆರಂಭವಾಗಿದ್ದರಿಂದಲೋ ಏನೋ ನಂತರ ಸುರಿದ ಮಳೆಯನ್ನು ತಡೆಯಲಾರದೆ ಕಾಫಿ ಕೊಳೆರೋಗ ಬಂದು ಹಾಳಾಗುತ್ತಿದೆ. ಕೂಡಲೇ ಕೇಂದ್ರ ಸರ್ಕಾರ ಕಾಫಿ ಮಂಡಳಿ ಮೂಲಕ ಸರ್ವೆ ಮಾಡಿಸಿ ಬೆಳೆಗಾರರಿಗೆ ಪರಿಹಾರ ನೀಡಬೇಕು ಎಂದು ಮತ್ತೊಬ್ಬ ಬೆಳೆಗಾರ ಮಂದ್ರೀರ ಮೋಹನ್ ದಾಸ್ ಆಗ್ರಹಿಸಿದ್ದಾರೆ. (ವರದಿ: ರವಿ ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು)

About the Author

SS
Sumanth SN
ಕಳೆದ 09 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಊರು ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲುಕಿನ ಸೀಕಲ್ಲು ಎಂಬ ಗ್ರಾಮ. ಪತ್ರಿಕೋದ್ಯಮ ಸ್ನಾತಕೋತ್ತರ ಪದವಿ ಪಡೆದು, ಪಬ್ಲಿಕ್ ಟಿವಿ, ನ್ಯೂಸ್ ಫಸ್ಟ್, ನ್ಯೂಸ್18 ಕನ್ನಡದಲ್ಲಿ ಕಾರ್ಯನಿರ್ವಹಿಸಿದ ಅನುಭವವಿದೆ. ಈಗ ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಲೀಡ್-ಲೋಕಲ್ ಕೋಆರ್ಡಿನೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದೇನೆ. ರಾಷ್ಟ್ರೀಯ, ರಾಜಕೀಯ, ಸ್ಪೋರ್ಟ್ಸ್, ಕೃಷಿ ನನ್ನ ಆಸಕ್ತಿಯ ಕ್ಷೇತ್ರಗಳು.
ಕೊಡಗು
ಚಿಕ್ಕಮಗಳೂರು
ಕಾಫಿ

Latest Videos
Recommended Stories
Recommended image1
16281/16282: ಮೈಸೂರು-ಅಜ್ಮೀರ್ ನಡುವೆ ಹೊಸ ಸಾಪ್ತಾಹಿಕ ಎಕ್ಸ್‌ಪ್ರೆಸ್ ರೈಲು ಆರಂಭ
Recommended image2
Bengaluru: ಶ್ರೀರಾಮನಿಗಿಂತ ಸೀತೆಯ ವ್ಯಕ್ತಿತ್ವ ಬಹಳ ದೊಡ್ಡದು; ಸಿಎಂ ಡಿಕೆ ಶಿವಕುಮಾರ್
Recommended image3
ಮುಳ್ಳು ಚುಚ್ಚಿದ್ರೂ ಹೇಳುತ್ತಿದ್ದ ಮಗಳು, ಈಗ 3 ಅಡಿ ಕಿಟಕಿಯಲ್ಲಿ ಹೆಣವಾಗಿದ್ದಾಳೆ; ನ್ಯಾಯ ಕೇಳಿದ ಅಪ್ಪ!
Related Stories
Recommended image1
Gadaga: ಮಧ್ಯರಾತ್ರಿ, ಬಸ್‌ನಲ್ಲಿ ಸಿಕ್ತು ಕಂತೆ ಕಂತೆ ನೋಟು; ಮಾಲೀಕರಿಗೆ ಹಣ ಹಿಂದಿರುಗಿಸಿ ಸಾರಿಗೆ ಸಿಬ್ಬಂದಿ ಪ್ರಮಾಣಿಕತೆ
Recommended image2
Bengaluru: 14 ವರ್ಷಗಳ ಕಾಯುವಿಕೆ ಅಂತ್ಯ, ಉದ್ಘಾಟನೆಗೆ ಸಿದ್ದವಾಯಿತು ಜಕ್ಕೂರು ರೈಲ್ವೆ ಮೇಲ್ಸೇತುವೆ!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved