- Home
- Karnataka Districts
- Karnataka Rains: ದೀರ್ಘ ಬರಗಾಲದ ಬಳಿಕ ರಾಜ್ಯದಲ್ಲಿ ವ್ಯಾಪಕ ಮಳೆ; ಈ ಪ್ರದೇಶಗಳಲ್ಲಿ ಗಂಟೆಗೆ 60KM ವೇಗದಲ್ಲಿ ಗಾಳೆ, ಮಳೆಯ ಎಚ್ಚರಿಕೆ
Karnataka Rains: ದೀರ್ಘ ಬರಗಾಲದ ಬಳಿಕ ರಾಜ್ಯದಲ್ಲಿ ವ್ಯಾಪಕ ಮಳೆ; ಈ ಪ್ರದೇಶಗಳಲ್ಲಿ ಗಂಟೆಗೆ 60KM ವೇಗದಲ್ಲಿ ಗಾಳೆ, ಮಳೆಯ ಎಚ್ಚರಿಕೆ
ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ಮುಂಬರುವ 24 ಗಂಟೆಯಲ್ಲಿ ಗುಡುಗು, ಭಾರೀ ಗಾಳಿಯೊಂದಿಗೆ ಕುಡಿದ ಮಳೆಯಾಗುವ ನಿರೀಕ್ಷೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ. ಪ್ರಮುಖವಾಗಿ ಕೇರಳ ಮತ್ತು ಲಕ್ಷದ್ವೀಪಗಳಲ್ಲಿ ಭಾರೀ ಪ್ರಮಾಣದಲ್ಲಿ ಮಳೆಯಾಗುವ ನಿರೀಕ್ಷೆ ಇದೆ.

ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ
ಉತ್ತರ ಬಂಗಾಳಕೊಲ್ಲಿಯಲ್ಲಿ ಹಾಗೂ ತೀರ ಪ್ರದೇಶದಲ್ಲಿ ಗಂಟೆಗೆ ಸುಮಾರು 40-50 ಕಿಲೋ ಮೀಟರ್ ವೇಗದಲ್ಲಿ ಗಾಳಿ ಬೀಸುವ ಎಚ್ಚರಿಕೆಯನ್ನು ಐಎಂಡಿ ನೀಡಿದ್ದು, ಕೆಲವು ಪ್ರದೇಶಗಳಲ್ಲಿ ಗಾಳಿಯ ವೇಗ ಗಂಟೆಗೆ 60 ಕಿಲೋ ಮೀಟರ್ ವೇಗದಲ್ಲಿ ಬೀಸುವ ಎಚ್ಚರಿಕೆ ನೀಡಲಾಗಿದೆ. ಸಮುದದಲ್ಲಿ ಅಲೆಗಳ ಪ್ರಮಾಣ ಭಾರೀ ಪ್ರಮಾಣದಲ್ಲಿ ಇರಲಿದ್ದು, ಮೀನುಗಾರರು ಸಮುದ್ರಕ್ಕೆ ಇಳಿಯದಂತೆ ಎಚ್ಚರಿಕೆ ನೀಡಲಾಗಿದೆ.
ಆಗಸ್ಟ್ 22ರ ವರೆಗೂ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆ
ರಾಜ್ಯದ ಧಾರವಾಡ, ಹಾವೇರಿ, ಕಲಬುರಗಿ, ಯಾದಗಿರಿ, ಕೊಡಗು, ಹಾಸನ, ಚಿಕ್ಕಮಗಳೂರು, ಶಿವಮೊಗ್ಗ ಸೇರಿದಂತೆ ಕರಾವಳಿಯ ಮೂರು ಜಿಲ್ಲೆ, ಮಲೆನಾಡಿನ ಮೂರು ಜಿಲ್ಲೆ ಸೇರಿದಂತೆ ಬೆಂಗಳೂರಿನಲ್ಲಿ ಮುಂದಿನ 24 ಗಂಟೆಯಲ್ಲಿ ಮಳೆಯಾಗಿದೆ. ಆಗಸ್ಟ್ 22ರ ವರೆಗೂ ಕರ್ನಾಟಕದಲ್ಲಿ ಮಳೆಯಾಗುವ ಮುನ್ಸೂಚನೆಯನ್ನು ಐಎಂಡಿ ಬೆಂಗಳೂರು ಕೇಂದ್ರ ನೀಡಿದೆ.
ಉಡುಪಿಯ ಕುಂಜಾಲು ಪ್ರದೇಶದಲ್ಲಿ 107.5 ಮೀ ಮೀ ಮಳೆ
ರಾಜ್ಯದಲ್ಲಿ ಕಳೆದ 12 ದಿನಗಳ ಬಳಿಕ ಬುಧವಾರ ವ್ಯಾಪಕ ಮಳೆಯಾಗಿದೆ. ಕಳೆದ 24 ಗಂಟೆಗಳಲ್ಲಿ ರಾಜ್ಯದ ಯಾವುದೇ ಭಾಗದಲ್ಲಿ ಭಾರೀ ಮಲೆಯಾಗಿಲ್ಲವಾದರೂ, ಶೇಕಡಾ 65 ರಷ್ಟು ಪ್ರದೇಶದಲ್ಲಿ ಮಧ್ಯಮ ಪ್ರಮಾಣದಲ್ಲಿ ಮಳೆಯಾಗಿದೆ. ಉಡುಪಿಯ ಕುಂಜಾಲು ಪ್ರದೇಶದಲ್ಲಿ 107.5 ಮೀ ಮೀ ಮಳೆಯಾಗಿದ್ದು, ನೀಲಾವರದಲ್ಲಿ 97 ಮೀಮೀ ಮಳೆಯಾಗಿದೆ. ದಕ್ಷಿಣ ಕನ್ನಡ ಬೆಳಂದೂರಿನಲ್ಲಿ 89.5 ಮೀಮೀ ಮಳೆಯಾಗಿದೆ.
ಬಹುತೇಕ ಭರ್ತಿಯ ಹಂತಕ್ಕೆ ಜಲಾಶಯ
ಇನ್ನು ಮಹಾರಾಷ್ಟ್ರದ ಪಶ್ಚಿಮ ಘಟ್ಟದಲ್ಲಿ ಭಾರೀ ಮಳೆಯಾಗಿರುವ ಪರಿಣಾಮ ಕೃಷ್ಣಾ ನದಿಯ ಅರಿವು ಹೆಚ್ಚಾಗಿದ್ದು, ಆಲಮಟ್ಟಿ ಜಲಾಶಯದ ಒಳಹರಿವಿನಲ್ಲಿ ಹೆಚ್ಚಾಗಿದೆ. ಆಗಸ್ಟ್ 19ರಂದು ಜಲಾಶಯದ ನೀರಿನ ಸಂಗ್ರಹ ಮಟ್ಟ 122.30 ಅಡಿ ಇದ್ದು, ಬಹುತೇಕ ಭರ್ತಿಯ ಹಂತಕ್ಕೆ ತಲುಪಿದೆ. ಅಲಮಟ್ಟಿಯಿಂದ ನಾರಾಯಣಪುರ ಜಲಾಶಯಕ್ಕೆ 50 ಸಾವಿರ ಕ್ಯೂಸೆಕ್ ನೀರು ಹರಿಸಲಾಗಿದೆ. ಬಸವ ಸಾಗರ ಜಲಾಶಯ ಸಹ 32.84 ಅಡಿಗೆ ತಲುಪಿದ್ದು, ಭರ್ತಿಗೆ ಒಂದು ಅಡಿ ಮಾತ್ರ ಬಾಕಿ ಇದೆ.
ಕಾವೇರಿ ಜಲಾಶಯಗಳಿಂದ 20 ಸಾವಿರ ಕ್ಯೂಸೆಕ್ ನೀರು ಹೊರಕ್ಕೆ
ಕಾವೇರಿ ಜಲಾಯನ ಪ್ರದೇಶದ ನಾಲ್ಕು ಜಲಾಶಯದಗಳಿಂದ 20,094 ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಅಣೆಕಟ್ಟುಗಳಿಗೆ ಒಳಹರಿವು 12,733 ಕ್ಯೂಸೆಕ್ ಇದೆ. ತುಂಗಾಭದ್ರ ಅಣೆಕಟ್ಟಿನ ಜಲಾನಯನ ಪ್ರದೇಶದಲ್ಲಿ ಮಳೆ ಕಡಿಮೆ ಇದ್ದರೂ, ಒಳಹರಿವು ಮುಂದುವರೆದಿದ್ದು, ಹೊಸಪೇಟೆ ಬಳಿಯ ಅಣೆಕಟ್ಟಿನ ಸಂಗ್ರಹ 94 ಟಿಎಂಸಿ ಅಡಿ ತುಂಬಿದ್ದು, ಶೇಕಡಾ 89ರಷ್ಟು ಭರ್ತಿಯಾಗಿದೆ.
ಮಾನ್ಸೂನ್ ಮಾರುತಗಳ ವಿಸ್ತರಣೆ
ಉಳಿದಂತೆ ಪೂರ್ವ ಭಾರತ, ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶಗಳಲ್ಲಿ ಮಳೆಯ ಪ್ರಮಾಣ ಹೆಚ್ಚಾಗಿದೆ. ಜೂನ್ 01ರಿಂದ ಆಗಸ್ಟ್ 18ರ ನಡುವೆ ಭಾರತದಲ್ಲಿ ಸಾಮಾನ್ಯಕ್ಕಿಂತ ಶೇಕಡಾ 13ರಷ್ಟು ಕಡಿಮೆ ದಾಖಲಾಗಿದೆ. ಕೆಲವು ಪ್ರದೇಶಗಳಲ್ಲಿ ಭಾರೀ ಮಳೆಯಾಗಿದ್ದರೆ, ಕೆಲವು ಪ್ರದೇಶದಲ್ಲಿ ಮಳೆಯ ಪ್ರಮಾಣ ಭಾರೀ ಕಡಿಮೆಯಾಗಿ ಬರದ ಛಾಯೆ ಆವರಿಸಿದೆ. ಇದರೊಂದಿಗೆ ಕುಡಿಯುವ ನೀರಿನ ಸಮಸ್ಯೆ, ಕೃಷಿಗೆ ನೀರಿನ ಕೊರತೆ ಎದುರಾಗಲಿದೆ. ಮಾನ್ಸೂನ್ ಮಾರುತಗಳ ವಿಸ್ತರಣೆಯಲ್ಲಿ ಎದುರಾದ ಅಸಮಾನತೆಯೇ ಬರಕ್ಕೆ ಪ್ರಮುಖ ಕಾರಣ ಎಂದು ಐಎಂಡಿ ಹೇಳಿದೆ.
ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತ
ಎನ್ ನಿನೋ ಎಫೆಕ್ಟ್ ಎಷ್ಟಿದೆ? ಭಾರತದಲ್ಲಿ ಮಳೆಯ ಪ್ರಮಾಣದ ಕೊರತೆ 13 ರಷ್ಟು ಕಡಿಮೆ ದಾಖಲಾಗಿದ್ದು, ಜೂನ್ನಲ್ಲಿ ಎದುರಾದ ತೀವ್ರ ಮಳೆಯ ಕೊರತೆ, ಆ ಬಳಿಕ ಜುಲೈ, ಆಗಸ್ಟ್ನಲ್ಲಿ ಅಸ್ಥಿರ ಮಳೆಯೇ ಕಾರಣವಾಗಿದೆ. ಮತ್ತೊಮ್ಮೆ ಎಲ್ ನಿನೋ ಬಲಗೊಂಡರೆ ಮಾನ್ಸೂನ್ ಮಾರುತಗಳು ಬಲಹೀನಾಗೊಂಡು, ಸೆಪ್ಟೆಂಬರ್ನಲ್ಲಿ ಮಳೆಯ ಪ್ರಮಾಣ ಕಡಿಮೆಯಾಗಲಿದೆ. ಆದ್ದರಿಂದ ಮುಂದಿನ 3-4 ವಾರಗಳ ವಾತಾವರಣ ಪ್ರಮುಖವಾಗಲಿದೆ. ಬಂಗಾಳಕೊಲ್ಲಿಯಲ್ಲಿ ವಾಯಭಾರ ಕುಸಿತದಿಂದ ಸೆಪ್ಟೆಂಬರ್ನಲ್ಲಿ ಉತ್ತಮ ಮಳೆಯಾದರೆ ನೀರಿನ ಸಮಸ್ಯೆಗೆ ಬ್ರೇಕ್ ಬೀಳಲಿದೆ. ಒಂದೊಂಮ್ಮೆ ಮಾನ್ಸೂನ್ ಮಾರುತಗಳು ಬಲಹೀನವಾದರೆ ಈ ಸೀಸನ್ನಲ್ಲಿ ಮಳೆ ಮತ್ತಷ್ಟು ಕಡಿಮೆಯಾಗಬಹುದು.

