MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Life
  • Health
  • ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ

ಈ ಗಿಡಮೂಲಿಕೆ ಬಳಸಿದ್ರೆ 5 ನಿಮಿಷಗಳಲ್ಲಿ ನಿದ್ರೆ ಬರುತ್ತೆ! ಟ್ರೈ ಮಾಡಿ ನೋಡಿ

ನಿದ್ರಾಹೀನತೆ ಗಂಭೀರವಾದ ಸಮಸ್ಯೆಯಾಗಿದೆ. ಆದರೆ ಇಂದಿನ ದಿನಗಳಲ್ಲಿ ಈ ಸಮಸ್ಯೆ ತುಂಬಾ ಸಾಮಾನ್ಯವಾಗುತ್ತಿದೆ. ನಿದ್ರಾಹೀನತೆಯು ಹಠಾತ್ ಆಗಿ ಬರುವಂತಹ ಸಮಸ್ಯೆಯಲ್ಲ, ಇದು ನಿಮ್ಮ ಅಕಾಲಿಕ ನಿದ್ರೆ, ಕಳಪೆ ಆಹಾರ ಪದ್ಧತಿ, ಅತಿಯಾದ ಆತಂಕ, ಜಡ ದಿನಚರಿಯ ಪರಿಣಾಮವಾಗಿದೆ. ನಿಮ್ಮ ಲೈಫ್ ಸ್ಟೈಲ್ ಸರಿಯಾಗಿ ಇರದೇ ಇದ್ದರೆ, ನೀದ್ರಾಹೀನತೆ ಸಮಸ್ಯೆ ಹೆಚ್ಚಾಗಿ ಕಾಡುತ್ತೆ. ಈ ಸಮಸ್ಯೆ ನಿವಾರಿಸಲು ಏನು ಮಾಡಬೇಕು ಅನ್ನೋದರ ಬಗ್ಗೆ ನಾವಿಲ್ಲಿ ಮಾಹಿತಿ ನೀಡುತ್ತೇವೆ. 

2 Min read
Author : Suvarna News
Published : Oct 21 2022, 03:11 PM IST
Share this Photo Gallery
  • FB
  • TW
  • Linkdin
  • Whatsapp
17

ನಿದ್ರಾಹೀನತೆ(Sleeplessness) ಅಥವಾ ಕಳಪೆ ನಿದ್ರೆಯಿಂದಾಗಿ  ಉಂಟಾಗುವ ಅತ್ಯಂತ ಗಂಭೀರ ಸಮಸ್ಯೆಗಳೆಂದರೆ ಹೈ ಬಿಪಿ, ಮಧುಮೇಹ, ಹೃದಯಾಘಾತ, ಹೃದಯ ವೈಫಲ್ಯ ಅಥವಾ ಪಾರ್ಶ್ವವಾಯು ಸಂಭವ ಹೆಚ್ಚು. ಇದಲ್ಲದೆ, ಬೊಜ್ಜು, ಖಿನ್ನತೆ, ದುರ್ಬಲ ರೋಗನಿರೋಧಕ ಶಕ್ತಿ ಮತ್ತು ಕಡಿಮೆ ಸೆಕ್ಸ್ ಡ್ರೈವ್ ನ ಅಪಾಯವೂ ಇದೆ. ಹಾಗಾಗಿ, ನಿದ್ರಾಹೀನತೆಯ ಸಮಸ್ಯೆಗೆ ಸಮಯಕ್ಕೆ ಸರಿಯಾಗಿ ಚಿಕಿತ್ಸೆ ನೀಡೋದು ಅತ್ಯಗತ್ಯ.

27

ನಿದ್ರಾಹೀನತೆಯನ್ನು ಗುಣಪಡಿಸಲು, ಯೋಗಾಸನ ಮತ್ತು ಪರಿಣಾಮಕಾರಿ ಗಿಡಮೂಲಿಕೆಗಳನ್ನು ಆಯುರ್ವೇದದಲ್ಲಿ ಹೇಳಲಾಗಿದೆ, ಇದನ್ನು ಟ್ರೈ ಮಾಡಿದ್ರೆ ಕೆಲವೇ ದಿನಗಳಲ್ಲಿ ಮಲಗಿದ ತಕ್ಷಣ ನಿಮಗೆ ಬೇಗ ನಿದ್ರೆ ಬರಲು ಕಾರಣವಾಗುತ್ತೆ. ಚೆನ್ನಾಗಿ ನಿದ್ರೆ(Sleep) ಮಾಡಲು ಆಯುರ್ವೇದ ಔಷಧಿಗಳು ಯಾವುವು ಎಂದು ತಿಳಿಯೋಣ.

37

ಪ್ರತಿದಿನ ಎಷ್ಟು ಗಂಟೆಗಳ ನಿದ್ರೆ ಅವಶ್ಯಕ?
ವ್ಯಕ್ತಿಯ ವಯಸ್ಸಿಗೆ ಅನುಗುಣವಾಗಿ ನಿದ್ರೆಯ ಅಗತ್ಯವು ಬದಲಾಗುತ್ತೆ. ಹಾಗಾಗಿ, ನವಜಾತ ಶಿಶುಗಳಿಗೆ 1 ವರ್ಷದವರೆಗೆ 12-16 ಗಂಟೆಗಳ ನಿದ್ರೆಯ ಅಗತ್ಯವಿದೆ. ಇದಲ್ಲದೆ, 1-2 ವರ್ಷದ ಮಗುವಿಗೆ 11-14 ಗಂಟೆಗಳ ನಿದ್ರೆಯ ಅಗತ್ಯವಿದೆ, 3-5 ವರ್ಷಗಳ ಮಗುವಿಗೆ 10-13 ಗಂಟೆಗಳ ನಿದ್ರೆಯ ಅಗತ್ಯವಿದೆ. 

47

6-12 ವರ್ಷಗಳ ಮಗುವಿಗೆ 9-12 ಗಂಟೆಗಳ ನಿದ್ರೆ ಬೇಕು, 13-18 ವರ್ಷದವರಿಗೆ 8-10 ಗಂಟೆಗಳ ನಿದ್ರೆಯ ಅಗತ್ಯವಿದೆ, ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟ ವಯಸ್ಕರಿಗೆ 7-8 ಗಂಟೆಗಳ ನಿದ್ರೆಯ ಅಗತ್ಯವಿದೆ. ನಿಮಗೆ ನಿಮ್ಮ ವಯಸ್ಸಿಗೆ ಸರಿಯಾದ ನಿದ್ರೆ ಬಾರದೇ ಇದ್ದರೆ, ನೀವು ಆಯುರ್ವೇಡ ಗಿಡಮೂಲಿಕೆಗಳನ್ನು ಬಳಕೆ ಮಾಡಬಹುದು. ಅದಕ್ಕಾಗಿ ಯಾವೆಲ್ಲಾ ಆಯುರ್ವೇದ ಔಷಧಿ(Ayurvedic medicine) ಬಳಕೆ ಮಾಡಬಹುದು ನೋಡೋಣ.

57

ನಿದ್ರಾಹೀನತೆಯಲ್ಲಿ ಶಂಖಪುಷ್ಪ(Shankha pushpa) ಪ್ರಯೋಜನಕಾರಿ
ಶಂಖಪುಷ್ಪ ತನ್ನ ವಾತ ಸಮತೋಲನ ಮತ್ತು ಮೇಧಾ ಗುಣಲಕ್ಷಣಗಳಿಂದಾಗಿ ಮನಸ್ಸನ್ನು ಶಾಂತಗೊಳಿಸುವ ಕೆಲಸ ಮಾಡುತ್ತೆ. ಇದು ನಿದ್ರಾಹೀನತೆಯನ್ನು ಗುಣಪಡಿಸುವ ಸಾಮರ್ಥ್ಯವನ್ನು ಸಹ ಹೊಂದಿದೆ. ಹಾಗಾಗಿ ಶಂಖಪುಷ್ಪದ ಟೀ ಮಾಡಿ ಸೇವಿಸೋದ್ರಿಂದ ನಿದ್ರಾ ಹೀನತೆಯನ್ನು ಸರಿಪಡಿಸಿಕೊಳ್ಳಬಹುದು.    

67

ನೀವು ನಿದ್ರೆ ಮಾಡದಿದ್ದಾಗ ಬ್ರಾಹ್ಮಿ(Bramhi) ತಿನ್ನಿ
ಉತ್ತಮ ರಾತ್ರಿಯ ನಿದ್ರೆಯನ್ನು ಪಡೆಯಲು ಬ್ರಾಹ್ಮಿ ಉತ್ತಮ ಮೂಲಿಕೆಯಾಗಿದೆ. ಇದು ವಿಶ್ರಾಂತಿಯ ನಿದ್ರೆಯನ್ನು ಉತ್ತೇಜಿಸೋದು ಮಾತ್ರವಲ್ಲದೆ ಮನಸ್ಸನ್ನು ಶಾಂತಗೊಳಿಸಲು ಸಹಾಯ ಮಾಡುತ್ತೆ ಮತ್ತು ನಿಮ್ಮ ಏಕಾಗ್ರತೆ, ಜಾಗರೂಕತೆಯನ್ನು ಸುಧಾರಿಸುವ  ಕೆಲಸ ಸಹ ಮಾಡುತ್ತೆ. ಆಯುರ್ವೇದದಲ್ಲಿ ಬ್ರಾಹ್ಮಿಯನ್ನು ಮೆದುಳಿನ ಟಾನಿಕ್ ಎಂದು ಪರಿಗಣಿಸಲಾಗಿದೆ.

77

ಜಟಮಾಂಸಿ(Jatamansi) ನಿದ್ರಾಹೀನತೆಗೆ ಆಯುರ್ವೇದ ಔಷಧಿಯಾಗಿದೆ
ನಿದ್ರಾಹೀನತೆಗೆ ಚಿಕಿತ್ಸೆ ನೀಡುವಲ್ಲಿ ಜಟಮಾಂಸಿ ಪರಿಣಾಮಕಾರಿ ಎಂದು ಹಲವಾರು ಅಧ್ಯಯನಗಳು ತೋರಿಸಿವೆ. ಈ ಮೂಲಿಕೆ ಮನಸ್ಸು ಮತ್ತು ದೇಹವನ್ನು ಶಾಂತಗೊಳಿಸುತ್ತೆ. ಇದು ನಿದ್ರೆಯ ಗುಣಮಟ್ಟವನ್ನು ಸುಧಾರಿಸುತ್ತೆ. ಖಿನ್ನತೆಯ ಲಕ್ಷಣಗಳನ್ನು ಕಡಿಮೆ ಮಾಡಲು ಸಹ  ಜಟಮಾಂಸಿಯನ್ನು ಬಳಸಲಾಗುತ್ತೆ.

ಆರೋಗ್ಯ, ಸೌಂದರ್ಯ, ಫಿಟ್‌ನೆಸ್, ಕಿಚನ್ ಟಿಪ್ಸ್‌, ಸಂಬಂಧ, ಫ್ಯಾಷನ್, ರೆಸಿಪಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

About the Author

SN
Suvarna News
ಆರೋಗ್ಯ

Latest Videos
Recommended Stories
Recommended image1
ಲೈಂಗಿಕ ರೋಗವಿದ್ರೆ ಬಣ್ಣ ಬದಲಿಸುತ್ತೆ ಈ ಕಾ0ಡೋಮ್, ವಿದ್ಯಾರ್ಥಿಗಳ ಆವಿಷ್ಕಾರಕ್ಕೆ ದಂಗಾದ ಜಗತ್ತು
Recommended image2
ಪುರುಷರೇ ಎಚ್ಚರ, ಹೃದಯಾಘಾತದ ಲಕ್ಷಣಗಳು ಇವು
Recommended image3
ಮನಿ ಪ್ಲಾಂಟ್ ನಿಂದ ದುಡ್ಡು ಬರುತ್ತೋ ಬಿಡುತ್ತೋ ಬಿಟ್ಟಾಕಿ, ಮಲಗುವ ಕೋಣೆಯಲ್ಲಿ 5 ಅಡಿ ದೂರದಲ್ಲಿಟ್ರೆ ಮಾತ್ರ....!
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved