MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Bigg Bossಗೆ ಹೊರಟ ದತ್ತನನ್ನೇ ಸಾಯಿಸಿಬಿಟ್ಟಳಾ ಶರಾವತಿ? ಪ್ಲಾಸ್ಟಿಕ್​ ಸರ್ಜರಿ ಜೊತೆ Drishti Bottuಗೆ ಬರ್ತಾನಾ?

Bigg Bossಗೆ ಹೊರಟ ದತ್ತನನ್ನೇ ಸಾಯಿಸಿಬಿಟ್ಟಳಾ ಶರಾವತಿ? ಪ್ಲಾಸ್ಟಿಕ್​ ಸರ್ಜರಿ ಜೊತೆ Drishti Bottuಗೆ ಬರ್ತಾನಾ?

ದೃಷ್ಟಿಬೊಟ್ಟು ಸೀರಿಯಲ್​ನಲ್ಲಿ ಸದ್ಯ ನಾಯಕ ದತ್ತಾ ನಾಪತ್ತೆಯಾಗಿದ್ದು, ದೃಷ್ಟಿ ಆತನಿಗಾಗಿ ಹುಡುಕುತ್ತಿದ್ದಾಳೆ. ಅವನನ್ನು ಮುಗಿಸಿರುವುದಾಗಿ ಶರಾವತಿ ಹೇಳಿದ್ದಾಳೆ. ಹಾಗಿದ್ರೆ ಬಿಗ್​ಬಾಸ್​​ಗೆ ಹೊರಟ ದತ್ತಾನನ್ನೇ ಫಿನಿಷ್​ ಮಾಡಿದ್ರಾ? ಏನಿದು ಟ್ವಿಸ್ಟ್​? 

2 Min read
Suchethana D
Published : Sep 09 2025, 05:34 PM IST
Share this Photo Gallery
  • FB
  • TW
  • Linkdin
  • Whatsapp
17
ಬಿಗ್​ಬಾಸ್​ಗೆ ಕ್ಷಣ ಗಣನೆ...
Image Credit : colors kannada instagram

ಬಿಗ್​ಬಾಸ್​ಗೆ ಕ್ಷಣ ಗಣನೆ...

Bigg Boss Seaon 12 ಇನ್ನೇನು ಕೆಲವೇ ದಿನಗಳಲ್ಲಿ ಆರಂಭವಾಗಲಿದೆ. ಸೆಪ್ಟೆಂಬರ್​ 28ರಿಂದ ಈ ಷೋ ಆರಂಭವಾಗಲಿದ್ದು, ಈ ಷೋನಲ್ಲಿ ಕಾಣಿಸಿಕೊಳ್ಳುವ ಕೆಲವು ಸ್ಪರ್ಧಿಗಳ ಲಿಸ್ಟ್​ ಇದಾಗಲೇ ಔಟ್​ ಆಗಿದೆ. ಅದರಲ್ಲಿ ಒಂದು ಹೆಸರು ದೃಷ್ಟಿಬೊಟ್ಟು (Drishti Bottu) ಸೀರಿಯಲ್​ನಲ್ಲಿ ದತ್ತಾಭಾಯಿ ರೋಲ್​ ಮಾಡ್ತಿರೋ ನಟ ವಿಜಯ ಸೂರ್ಯ.

27
ಹೊರಕ್ಕೆ ಬಂದ್ರಾ ನಟ?
Image Credit : colors kannada instagram

ಹೊರಕ್ಕೆ ಬಂದ್ರಾ ನಟ?

ಇದಾಗಲೇ ವಿಜಯ ಸೂರ್ಯ (Vijay Suriya) ಅವರು ದೃಷ್ಟಿ ಬೊಟ್ಟು ಸೀರಿಯಲ್​ನಿಂದ ಹೊರಕ್ಕೆ ಬಂದಿದ್ದಾರೆ ಎನ್ನುವ ಬಗ್ಗೆ ಸೋಷಿಯಲ್​ ಮೀಡಿಯಾದಲ್ಲಿ ಸಕತ್​ ಸುದ್ದಿಯಾಗುತ್ತಿದೆ. ಅಷ್ಟಕ್ಕೂ ಸೀರಿಯಲ್​ನಲ್ಲಿ ಇದಾಗಲೇ ಮಸಿ ಬಳೆದುಕೊಂಡಿದ್ದ ದೃಷ್ಟಿ ತನ್ನ ನಿಜ ರೂಪವನ್ನು ತೋರಿಸಿದ್ದಾಳೆ. ಇವರಿಬ್ಬರ ನಡುವೆ ಬಣ್ಣದ ವಿಷಯವನ್ನೇ ಇಟ್ಟುಕೊಂಡು ಬೆಂಕಿ ಹಚ್ಚುವ ಪ್ಲ್ಯಾನ್​ ಮಾಡಿದ್ದ ದತ್ತನ ಅತ್ತಿಗೆಗೆ ಸೋಲಾಗಿದೆ.

Related Articles

Related image1
Bigg Boss ಕುರಿತು ಬಿಗ್​ ಅಪ್​ಡೇಟ್​ ಕೊಟ್ಟ ಆ್ಯಂಕರ್​ ಅನುಪಮಾ: ವೀಕ್ಷಕರು ಕುಣಿದು ಕುಪ್ಪಳಿಸೋ ಸುದ್ದಿ ಇದು!
Related image2
Bigg Bossನಿಂದ ಸ್ನೇಹಿತ್​ಗೆ 20 ಲಕ್ಷ ಸಂಭಾವನೆ ಸಿಕ್ತಾ? ಈ ಬಗ್ಗೆ ನಟ ಹೇಳಿದ್ದೇನು? ​
37
ಲವ್ ಶುರುವಾಗುವ ಹೊತ್ತಲ್ಲೇ ಟ್ವಿಸ್ಟ್​
Image Credit : Asianet News

ಲವ್ ಶುರುವಾಗುವ ಹೊತ್ತಲ್ಲೇ ಟ್ವಿಸ್ಟ್​

ದತ್ತ ಮತ್ತು ದೃಷ್ಟಿ ನಡುವೆ ಲವ್ ಶುರುವಾಗುವ ಹೊತ್ತಿನಲ್ಲಿಯೇ ಬಿಗ್​ಬಾಸ್​ (Bigg Boss Kannada 12) ಶುರುವಾಗಲಿರುವ ಕಾರಣ, ವಿಜಯ ಸೂರ್ಯ ಅವರು ಸೀರಿಯಲ್​ ಬಿಡುತ್ತಿದ್ದಾರೆ ಎಂದು ಕೆಲವರು, ಇನ್ನು ಕೆಲವರು ದೃಷ್ಟಿಬೊಟ್ಟು ಸೀರಿಯಲ್ಲೇ ಮುಕ್ತಾಯವಾಗಲಿದೆ ಎಂದೆಲ್ಲಾ ಸುದ್ದಿ ಮಾಡುತ್ತಿದ್ದಾರೆ. ಆದರೆ ಈ ಬಗ್ಗೆ ವಾಹಿನಿ ಯಾವುದೇ ಅಧಿಕೃತ ಮಾಹಿತಿ ಕೊಟ್ಟಿಲ್ಲ.

47
ಕಾಣೆಯಾದ ದತ್ತಾಭಾಯ್​
Image Credit : Instagram

ಕಾಣೆಯಾದ ದತ್ತಾಭಾಯ್​

ಇಂದು ಬಿಡುಗಡೆಯಾಗಿರುವ ಪ್ರೊಮೋದಲ್ಲಿ ದತ್ತಭಾಯ್​ ಕಾಣೆಯಾಗಿದ್ದಾನೆ. ಅವನು ಸಿಗದೇ ದೃಷ್ಟಿ ಚಡಪಡಿಸುತ್ತಿದ್ದಾಳೆ. ಅದೇ ಇನ್ನೊಂದೆಡೆ ಶರಾವತಿ ದತ್ತನನ್ನು ಮುಗಿಸಿರುವುದಾಗಿ ಮಾತನಾಡುತ್ತಿದ್ದಾಳೆ. ಇಬ್ಬರನ್ನೂ ಬೇರೆ ಮಾಡಲು ಸಾಧ್ಯವಾಗದ ಕಾರಣ, ದತ್ತನನ್ನೇ ಮುಗಿಸಿರುವುದಾಗಿ ಹೇಳಿದ್ದಾಳೆ.

57
ದತ್ತನ ರೋಲ್​ಗೆ ಪ್ಲಾಸ್ಟಿಕ್​ ಸರ್ಜರಿ?
Image Credit : Instagram

ದತ್ತನ ರೋಲ್​ಗೆ ಪ್ಲಾಸ್ಟಿಕ್​ ಸರ್ಜರಿ?

ಇದರ ಅರ್ಥ ದೃಷ್ಟಿಬೊಟ್ಟು ಸೀರಿಯಲ್​ ಸದ್ಯ ಮುಗಿಯುವುದಿಲ್ಲ. ದತ್ತನ ರೋಲ್​ ಚೇಂಜ್​ ಆಗುವ ಸಾಧ್ಯತೆ ನಿಚ್ಚಳವಾಗಿದೆ. ವಿಜಯ ಸೂರ್ಯ ಅವರು ಬದಲಾಗುವ ಎಲ್ಲಾ ಸೂಚನೆಗಳೂ ಕಾಣುತ್ತಿವೆ. ದತ್ತನ ರೋಲೇ ಚೇಂಜ್​ ಮಾಡ್ತಾರಾ ಅಥವಾ ದತ್ತನಿಗೇ ಪ್ಲಾಸ್ಟಿಕ್​ ಸರ್ಜರಿ ಮಾಡಿದಂತೆ ಮಾಡಿ ಕಥೆಗೆ ಬೇರೆ ರೂಪ ಕೊಡುತ್ತಾರಾ ಎಂದು ಕಾಯಬೇಕಿದೆ.

67
ಈ ಹಿಂದೆಯೂ ಆಗಿತ್ತು...
Image Credit : Instagram

ಈ ಹಿಂದೆಯೂ ಆಗಿತ್ತು...

ಈ ಹಿಂದೆ ಜೊತೆ ಜೊತೆಯಲಿ ಸೀರಿಯಲ್​ನಲ್ಲಿ ನಾಯಕನ ರೋಲ್​ ಮಾಡುತ್ತಿದ್ದ ಅನಿರುದ್ಧ್​ ಅವರು ಬಿಟ್ಟುಹೋದಾಗ ಪ್ಲಾಸ್ಟಿಕ್​ ಸರ್ಜರಿ ಮಾಡಿದಂತೆ ಮಾಡುವ ಮೂಲಕ ಹೊಸ ನಾಯಕನನ್ನು ಪರಿಚಯಿಸಲಾಗಿತ್ತು. ಇಲ್ಲಿಯೂ ಅದೇ ರೀತಿ ಆದರೂ ಅಚ್ಚರಿಯಿಲ್ಲ. ಆದರೆ ಇದನ್ನು ವೀಕ್ಷಕರು ಹೇಗೆ ಅರಗಿಸಿಕೊಳ್ಳುತ್ತಾರೆ ಎನ್ನವುದೇ ಈಗಿರುವ ಪ್ರಶ್ನೆ.

77
ನಾಯಕನಿಗೆ ಪ್ಲಾಸ್ಟಿಕ್​ ಸರ್ಜರಿ
Image Credit : Instagram

ನಾಯಕನಿಗೆ ಪ್ಲಾಸ್ಟಿಕ್​ ಸರ್ಜರಿ

ಪ್ಲಾಸ್ಟಿಕ್ ಸರ್ಜರಿ ಮಾಡಲಿ, ಅಥವಾ ದತ್ತಾ ರೋಲ್​ ಅನ್ನು ಚೇಂಜ್​ ಮಾಡಲಿ ಒಟ್ಟಿನಲ್ಲಿ ವೀಕ್ಷಕರಿಗೆ ಒಂದಷ್ಟು ದಿನ ಅದನ್ನು ಅರಗಿಸಿಕೊಳ್ಳುವುದು ಕಷ್ಟ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಕೆಲವು ವರದಿಗಳ ಪ್ರಕಾರ ಈ ಸೀರಿಯಲ್​ಗೆ ಅಷ್ಟೊಂದು ಟಿಆರ್​ಪಿ ಇಲ್ಲದ ಕಾರಣ ಅದರ ಟೈಮಿಂಗ್​ ಬದಲು ಮಾಡಲಾಗಿತ್ತು ಎನ್ನಲಾಗಿದೆ. ಈಗ ಹೊಸ ಟ್ವಿಸ್ಟ್​ ಕೊಟ್ಟು ಜನರನ್ನು ಆಕರ್ಷಿಸಬಹುದಾ, ಅಥವಾ ಸೀರಿಯಲ್​ ಮುಗಿಸ್ತಾರಾ ಎನ್ನುವುದು ಇನ್ನಷ್ಟೇ ಗೊತ್ತಾಗಬೇಕಿದೆ.

 
 
 
 
View this post on Instagram
 
 
 
 
 
 
 
 
 
 
 

A post shared by Colors Kannada Official (@colorskannadaofficial)

About the Author

SD
Suchethana D
Suchetana ಮಲೆನಾಡಿನ ಹೆಬ್ಬಾಗಿಲು ಶಿರಸಿಯವಳು. ಓದಿದ್ದು LLB, ಒಲಿದದ್ದು ಪತ್ರಿಕೋದ್ಯಮ, ಪ್ರಜಾವಾಣಿಯಲ್ಲಿ 15 ವರ್ಷಗಳ ಅನುಭವ. ಇದರಲ್ಲಿ 10 ವರ್ಷ ನ್ಯಾಯಾಂಗ ವರದಿಗಾರಿಕೆ. ಕಾನೂನು ಮತ್ತು ಮಹಿಳಾ ಸಂವೇದನೆಗೆ ಸಂಬಂಧಿಸಿದ ಲೇಖನಗಳಿಗೆ ಕರ್ನಾಟಕ ಮಾಧ್ಯಮ ಅಕಾಡೆಮಿ, ಮುಂಬೈನ ಲಾಡ್ಲಿ ಮೀಡಿಯಾ ಅವಾರ್ಡ್​, ರೋಟರಿ ಎಕ್ಸಲೆನ್ಸ್​ ಅವಾರ್ಡ್​ ಸೇರಿದಂತೆ ಕೆಲವು ಪ್ರಶಸ್ತಿಗಳು ಲಭಿಸಿವೆ. ಚೀನಾದಲ್ಲಿ ನಡೆದ ಭಾರತ ಮಟ್ಟದ ಯುವ ನಿಯೋಗದಲ್ಲಿ ಮಾಧ್ಯಮ ಕ್ಷೇತ್ರದಿಂದ ಪ್ರತಿನಿಧಿಯಾಗಿ ಆಯ್ಕೆ. ವಿಜಯವಾಣಿಯಲ್ಲಿ ಕೆಲಸ ಮಾಡಿ ಈಗ ದೂರದರ್ಶನ ಚಂದನದಲ್ಲಿ ಮತ್ತು ಏಷ್ಯಾನೆಟ್​ ಸುವರ್ಣದಲ್ಲಿ ಫ್ರೀಲ್ಯಾನ್ಸರ್​ ಆಗಿ ಕೆಲಸ ನಿರ್ವಹಣೆ.
ದೃಷ್ಟಿ ಬೊಟ್ಟು ಧಾರಾವಾಹಿ
ಕಲರ್ಸ್ ಕನ್ನಡ
ಕನ್ನಡ ಧಾರಾವಾಹಿ
ಬಿಗ್ ಬಾಸ್
ಬಿಗ್ ಬಾಸ್ ಕನ್ನಡ

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved