MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ಬಿಗ್ ಬಾಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Cine World
  • ನಾಗಬಾಬು ಕೂಡ ನನ್ನ ಸಹೋದರನೇ.. ಆದರೂ ಪವನ್ ಕಲ್ಯಾಣ್ ಮೇಲಿನ ವಿಶೇಷ ಪ್ರೀತಿಯನ್ನು ರಿವೀಲ್ ಮಾಡಿದ ಚಿರಂಜೀವಿ!

ನಾಗಬಾಬು ಕೂಡ ನನ್ನ ಸಹೋದರನೇ.. ಆದರೂ ಪವನ್ ಕಲ್ಯಾಣ್ ಮೇಲಿನ ವಿಶೇಷ ಪ್ರೀತಿಯನ್ನು ರಿವೀಲ್ ಮಾಡಿದ ಚಿರಂಜೀವಿ!

ಒಂದು ಕಾಲದಲ್ಲಿ ಮೆಗಾಸ್ಟಾರ್ ತಮ್ಮನಾಗಿ ಸಿನಿಮಾರಂಗಕ್ಕೆ ಕಾಲಿಟ್ಟ ಪವನ್ ಕಲ್ಯಾಣ್.. ಆ ನಂತರ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದ್ದು, ಇಂದು ಆಂಧ್ರಪ್ರದೇಶದಲ್ಲಿ ಡಿಸಿಎಂ ಹುದ್ದೆಗೆ ಏರಿದ್ದಾರೆ.

2 Min read
Govindaraj S
Published : Sep 25 2024, 08:10 PM IST
Share this Photo Gallery
  • FB
  • TW
  • Linkdin
  • Whatsapp
16

ಯಾವುದೇ ಹಿನ್ನೆಲೆ ಇಲ್ಲದೆ ತಮ್ಮ ಪ್ರತಿಭೆಯನ್ನೇ ನಂಬಿ ಸಿನಿ  ರಂಗದಲ್ಲಿ ಮೆಗಾಸ್ಟಾರ್ ಆಗಿ ಬೆಳೆದವರು ಚಿರಂಜೀವಿ. ಅವರ ಹಾದಿಯಲ್ಲೇ ಪ್ರಯಾಣ ಬೆಳೆಸಿದ ಸಹೋದರ ಪವನ್ ಕಲ್ಯಾಣ್ ಸಹ ಅದೇ ರೀತಿ ಅಭಿಮಾನಿಗಳನ್ನುಗಳಿಸಿದರು. ಚಿರಂಜೀವಿ  ಸಹೋದರನಾಗಿ ಮಾತ್ರವಲ್ಲದೆ ಪವರ್ ಸ್ಟಾರ್ ಆಗಿ ತಮ್ಮದೇ ಆದ ಛಾಪು ಮೂಡಿಸಿದರು. ಇಷ್ಟೇ ಅಲ್ಲ ಇಂದು ಆಂಧ್ರಪ್ರದೇಶದಲ್ಲಿ ಡಿಸಿಎಂ ಹುದ್ದೆಗೆ ಏರಿದ್ದಾರೆ. ಅವರು ಸ್ಥಾಪಿಸಿದ ಜನಸೇನಾ ಪಕ್ಷವನ್ನು ಎಲ್ಲೆಡೆ ಗೆಲ್ಲಿಸಿದ್ದಾರೆ. ಸಿನಿಮಾ ಮತ್ತು ರಾಜಕೀಯ ಎರಡರಲ್ಲೂ ಪವನ್ ಕಲ್ಯಾಣ್ ಪವರ್ ಸ್ಟಾರ್ ಎನಿಸಿಕೊಂಡಿದ್ದಾರೆ. 

 

26

ಚಿರಂಜೀವಿ ಮತ್ತು ಪವನ್ ನಡುವಿನ ಬಾಂಧವ್ಯ ನೋಡಿದರೆ ಎಲ್ಲರಿಗೂ ರಾಮ, ಲಕ್ಷ್ಮಣರ ನೆನಪಾಗುತ್ತದೆ. ಚಿರಂಜೀವಿ ಬಗ್ಗೆ ಒಂದು ಮಾತು ಆಡಲು ಬಿಡುವುದಿಲ್ಲ ಪವನ್ ಕಲ್ಯಾಣ್. ಅದೇ ರೀತಿ ಪವನ್ ಕಲ್ಯಾಣ್ ಮೇಲೆ ವಿಶೇಷವಾದ ಪ್ರೀತಿ ತೋರಿಸುತ್ತಾರೆ ಚಿರಂಜೀವಿ. ಪವನ್ ಬಗ್ಗೆ ಮಾತನಾಡುವಾಗ ಚಿರಂಜೀವಿ ಕಣ್ಣಲ್ಲಿ ವಿಶೇಷವಾದ ಪ್ರೀತಿ, ಆರ್ದ್ರತೆ ಕಾಣಿಸುತ್ತದೆ. ರಾಮ್ ಚರಣ್ ಬಗ್ಗೆ ಮಾತನಾಡುವಾಗ ಅವರ ಕಣ್ಣಲ್ಲಿ ಹೇಗೆ ಮಿಂಚು ಕಾಣಿಸುತ್ತದೆಯೋ ಅದೇ ರೀತಿ ಪವನ್ ಬಗ್ಗೆ ಮಾತನಾಡುವಾಗಲೂ ಕಾಣಿಸುತ್ತದೆ ಎಂದು ನೋಡಿದವರು ಹೇಳುತ್ತಾರೆ. ಅದೇ ರೀತಿ ನಾಗಬಾಬು ಇದ್ದರೂ ಪವನ್ ಬಗ್ಗೆ ಹೆಚ್ಚು ಮಾತನಾಡುತ್ತಾರೆ ಚಿರಂಜೀವಿ. 

36

ಇದೇ ವಿಷಯವನ್ನು ಒಂದು ಶೋನಲ್ಲಿ ಚಿರಂಜೀವಿ ಅವರನ್ನೇ ನೇರವಾಗಿ ಪ್ರಶ್ನಿಸಲಾಯಿತು. ನಾಗಬಾಬು ಕೂಡ ನಿಮ್ಮ ಸಹೋದರನೇ ಆದರೂ  ಪವನ್ ಮೇಲೆ ಯಾಕೆ ವಿಶೇಷವಾದ ಪ್ರೀತಿ ಎಂದು ಕೇಳಲಾಯಿತು. ಅದಕ್ಕೆ ಚಿರಂಜೀವಿ ಪ್ರತಿಕ್ರಿಯಿಸುತ್ತಾ ನಾನು ಸಿನಿಮಾ ರಂಗಕ್ಕೆ ಬರುವಾಗ ಪವನ್ ಕಲ್ಯಾಣ್ ತುಂಬಾ ಪುಟ್ಟ ಹುಡುಗ. ನಮ್ಮ ಮದುವೆಯಾದಾಗ ಅವನು ಐದನೇ ತರಗತಿಯಲ್ಲಿ ಓದುತ್ತಿದ್ದ. ಆ ವಯಸ್ಸಿನಲ್ಲಿ ಅವನು ನಮ್ಮ ಜೊತೆ ಹೆಚ್ಚು ಇರುತ್ತಿದ್ದ. ನಮ್ಮ ಜೊತೆ ಓದಿಕೊಂಡ. ಮದ್ರಾಸ್‌ನಲ್ಲಿ ಕೆಲವು ದಿನ ನಮ್ಮ ಮನೆಯಲ್ಲೇ ಇದ್ದ.

46

ನಂತರ ನೆಲ್ಲೂರಿಗೆ ಹೋದ. ಹಾಗಾಗಿ ನನಗೆ ಅವನು ನಮ್ಮ ಮನೆಯ ಮಗುವಿನಂತೆ ಅನಿಸುತ್ತಾನೆ. ಅಂದರೆ ನನ್ನ ಮೊದಲ ಮಗುವಿನಂತೆ ಇರುತ್ತಾನೆ ಎಂದರು ಚಿರಂಜೀವಿ. ಮುಖ್ಯವಾಗಿ ನಾನು, ನಾಗಬಾಬು, ಮತ್ತು ನಮ್ಮ ಅಕ್ಕ ಕೆಲವು ದಿನ ಒಟ್ಟಿಗೆ ಇದ್ದೆವು. ಆದರೆ, ಉಳಿದ ಇಬ್ಬರು ಮಾಧವಿ, ಕಲ್ಯಾಣ್ ಹುಟ್ಟುವ ಹೊತ್ತಿಗೆ ನಾನು ಬೇರೆ ಕಡೆ ಓದುತ್ತಿದ್ದೆ. ರಜೆಯಲ್ಲಿ ಮಾತ್ರ ಅವರನ್ನು ನೋಡುತ್ತಿದ್ದೆ. ಅವರನ್ನು ಮಿಸ್ ಮಾಡಿಕೊಂಡ ಫೀಲಿಂಗ್ ನನಗೆ. ಅದಕ್ಕೇ ನನಗೆ ಪವನ್ ಕಲ್ಯಾಣ್ ಅಂದರೆ ತುಂಬಾ ಇಷ್ಟ ಎಂದು ಹೇಳಿಕೊಂಡರು. 

56

ಪವನ್ ಕಲ್ಯಾಣ್ ಯಾವುದೇ ವಿಷಯದ ಬಗ್ಗೆ ಪ್ರತಿಕ್ರಿಯಿಸಿದರೂ ಅದು ಸರಿ ಅನಿಸುತ್ತದೆ ಎಂದು ಮೆಗಾಸ್ಟಾರ್ ಹೇಳಿದ್ದಾರೆ. ಪವನ್ ಕಲ್ಯಾಣ್ ಯಾವಾಗಲೂ ನ್ಯಾಯಕ್ಕಾಗಿ ಹೋರಾಡುತ್ತಾನೆ ಎಂದು ಚಿರಂಜೀವಿ ಹೇಳಿದ್ದಾರೆ. ನಾನು ಕೂಡ ಅದೇ ನ್ಯಾಯಕ್ಕಾಗಿ ಮಾತನಾಡುತ್ತೇನೆ. ನಮ್ಮ ತಾಳ್ಮೆ, ಪ್ರಾಮಾಣಿಕತೆ, ಸಂಯಮ ನಮಗೆ ಯಶಸ್ಸನ್ನು ತಂದುಕೊಡುತ್ತದೆ ಎಂದು ಚಿರಂಜೀವಿ ಹೇಳಿದ್ದಾರೆ. 
 

66

ಪವನ್ ಕಲ್ಯಾಣ್.. ತಮ್ಮ ಅಣ್ಣ ಚಿರಂಜೀವಿ ಮೇಲಿನ ಅಭಿಮಾನ, ಪ್ರೀತಿ ಬಗ್ಗೆ ಸಂದರ್ಭ ಬಂದಾಗಲೆಲ್ಲ ಹೇಳುತ್ತಲೇ ಇರುತ್ತಾರೆ. ತಮ್ಮ ಅಣ್ಣನಿಂದಲೇ ತಾನು ಈ ಸ್ಥಾನದಲ್ಲಿ ಇದ್ದೇನೆ ಎಂದು ಬಹಿರಂಗವಾಗಿಯೇ ಹಲವು ಬಾರಿ ಹೇಳಿದ್ದಾರೆ. ಅಸಲಿಗೆ ತಮಗೆ ಹೀರೋ ಆಗಬೇಕೆಂಬ ಆಲೋಚನೆ ಮೊದಲಿಂದಲೂ ಇರಲಿಲ್ಲ, ಆದರೆ ಅಣ್ಣನಿಗೋಸ್ಕರ ನಟನೆ ಶುರು ಮಾಡಿದೆ ಎಂದೂ ಹೇಳಿದ್ದಾರೆ. ಒಂದು ಕಾಲದಲ್ಲಿ ಮೆಗಾಸ್ಟಾರ್ ತಮ್ಮನಾಗಿ ಸಿನಿಮಾರಂಗಕ್ಕೆ ಕಾಲಿಟ್ಟ ಪವನ್.. ಆ ನಂತರ ತಮ್ಮದೇ ಶೈಲಿಯಲ್ಲಿ ಅಭಿಮಾನಿಗಳನ್ನು ಸಂಪಾದಿಸಿದರು. ಈಗ ಎಲ್ಲೆಡೆ ಪವನ್ ಅಭಿಮಾನಿಗಳೇ.  

About the Author

GS
Govindaraj S
ಏಷ್ಯಾನೆಟ್ ಸುವರ್ಣ ಡಿಜಿಟಲ್ ಕನ್ನಡ ವಿಭಾಗದಲ್ಲಿ ಉಪ ಸಂಪಾದಕ. ಕಳೆದ 8 ವರ್ಷಗಳಿಂದ ಮಾಧ್ಯಮ ಪ್ರಪಂಚದಲ್ಲಿದ್ದೇನೆ. ಹುಟ್ಟಿ ಬೆಳೆದಿದ್ದು ಬೆಂಗಳೂರಿನಲ್ಲಿ. ಸ್ನಾತಕೋತ್ತರ ಪದವಿಯನ್ನು ಬೆಂಗಳೂರು ವಿಶ್ವವಿದ್ಯಾಲಯದಿಂದ ಪಡೆದಿದ್ದೇನೆ. ದೂರದರ್ಶನದಲ್ಲಿ ಇಂಟರ್ನ್‌ಶಿಪ್ ನಿರ್ವಹಣೆ. ಪ್ರಜಾವಾಣಿ ಮತ್ತು ಉದಯವಾಣಿ ಡಿಜಿಟಲ್ ವಿಭಾಗದಲ್ಲಿ ಬರಹಗಾರ ಹಾಗೂ ಕಂಟೆಂಟ್ ಡೆವಲಪರ್ ಆಗಿ ಕೆಲಸ ಮಾಡಿದ್ದೇನೆ. ಮನರಂಜನೆ ಸುದ್ದಿಗಳ ಬಗ್ಗೆ ತುಂಬಾ ಆಸಕ್ತಿ. ಸಿನಿಮಾ ವೀಕ್ಷಿಸುವುದು, ಸಂಗೀತ ಕೇಳುವುದು ಮತ್ತು ಕ್ರೀಡೆ ನೆಚ್ಚಿನ ಹವ್ಯಾಸಗಳು.
ಚಿರಂಜೀವಿ
ಪವನ್ ಕಲ್ಯಾಣ್
ಟಾಲಿವುಡ್
Latest Videos
Recommended Stories
Related Stories
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved