MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
TRENDING :
Yash Dharmasthala Visit
NICE Land Row
BJP vs Minister B Nagendra
Mangaluru Railway Division
Viral UPSC Interview Question
Airport Privatisation India
Doddaballapur-Dabaspet Kwin City
Indian Space Sector
Gurmeet Ram Rahim
Karnataka Assembly Speaker
India Sugar Prices
Government KPS Schools
Central Government Jobs
Karnataka SIR 2026
  • Home
  • Karnataka Districts
  • Bengaluru Urban
  • ಬೆಂಗಳೂರು ಟ್ರಾಫಿಕ್ ಸಾವಾಸ ಬೇಡ ಅಂತ ದುಬೈನಲ್ಲಿ ಸೆಟ್ಲ್ ಆಗಿರೋ ರಾಬಿನ್ ಉತ್ತಪ್ಪರಿಂದ ಸಿಎಂ ಡಿಕೆಶಿ ಬಳಿ ಅಚ್ಚರಿ ಬೇಡಿಕೆ..!

ಬೆಂಗಳೂರು ಟ್ರಾಫಿಕ್ ಸಾವಾಸ ಬೇಡ ಅಂತ ದುಬೈನಲ್ಲಿ ಸೆಟ್ಲ್ ಆಗಿರೋ ರಾಬಿನ್ ಉತ್ತಪ್ಪರಿಂದ ಸಿಎಂ ಡಿಕೆಶಿ ಬಳಿ ಅಚ್ಚರಿ ಬೇಡಿಕೆ..!

ಬೆಂಗಳೂರು: ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ, ಕೊಡಗಿನ ಕುವರ ರಾಬಿನ್ ಉತ್ತಪ್ಪ, ಇಂದು ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ ಅಚ್ಚರಿಯ ಬೇಡಿಕೆಯಿಟ್ಟಿದ್ದಾರೆ. ಅಷ್ಟಕ್ಕೂ ರಾಬಿನ್ ಉತ್ತಪ್ಪ ಬೇಡಿಕೆ ಏನು ಎನ್ನುವುದನ್ನು ನೋಡೋಣ ಬನ್ನಿ.

2 Min read
Author : Naveen Kodase
Published : Aug 25 2026, 06:54 PM IST
Share this Photo Gallery
  • FB
  • TW
  • Linkdin
  • Whatsapp
16
ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ
Image Credit : Getty

ಭಾರತದ ಮಾಜಿ ಕ್ರಿಕೆಟಿಗ ರಾಬಿನ್ ಉತ್ತಪ್ಪ

ತಮ್ಮ ಅದ್ಭುತ ಬ್ಯಾಟಿಂಗ್ ಸ್ಕಿಲ್ ಹಾಗೂ ಡಿಫರೆಂಟ್ ಬ್ಯಾಟಿಂಗ್ ಸ್ಟ್ಯಾನ್ಸ್ ಮೂಲಕ ಗಮನ ಸೆಳೆದಿದ್ದ ಕನ್ನಡಿಗ ರಾಬಿನ್ ಉತ್ತಪ್ಪ, ಕರ್ನಾಟಕ ಹಾಗೂ ಭಾರತ ತಂಡದ ಪರ ಹಲವಾರು ಪಂದ್ಯಗಳಲ್ಲಿ ತಂಡಕ್ಕೆ ಏಕಾಂಗಿಯಾಗಿ ಗೆಲುವು ತಂದುಕೊಟ್ಟಿದ್ದಾರೆ. ಭಾರತ ತಂಡವನ್ನು ಪ್ರತಿನಿಧಿಸಿದ ಅದ್ಭುತ ಕ್ರಿಕೆಟಿಗರ ಪೈಕಿ ರಾಬಿನ್ ಉತ್ತಪ್ಪ ಕೂಡಾ ಒಬ್ಬರು. ಇದಷ್ಟೇ ಅಲ್ಲದೇ 2007ರ ಐಸಿಸಿ ಏಕದಿನ ವಿಶ್ವಕಪ್ ವಿಜೇತ ಭಾರತ ತಂಡದ ಸದಸ್ಯರಲ್ಲಿ ರಾಬಿನ್ ಉತ್ತಪ್ಪ ಕೂಡಾ ಒಬ್ಬರಾಗಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
26
ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಉತ್ತಪ್ಪ
Image Credit : fb

ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿರುವ ಉತ್ತಪ್ಪ

ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ ಬಳಿಕ, ಕ್ರಿಕೆಟ್ ಕಾಮೆಂಟ್ರಿ ಮೂಲಕ ಸಕ್ರಿಯವಾಗಿರುವ ರಾಬಿನ್ ಉತ್ತಪ್ಪ, ಬೆಂಗಳೂರಿನ ಟ್ರಾಫಿಕ್ ಕಿರಿಕಿರಿಯಿಂದ ಬೇಸತ್ತು, ದುಬೈಗೆ ಸ್ಥಳಾಂತರವಾಗಿದ್ದಾರೆ. ತಮ್ಮ ಮಕ್ಕಳು ಹಾಗೂ ಕುಟುಂಬ ಬೆಂಗಳೂರಿನ ಈ ಭಯಂಕರ ಟ್ರಾಫಿಕ್ ಕಿರಿಕಿರಿಯಿಂದ ನರಳುವುದು ಬೇಡ ಎನ್ನುವ ನಿರ್ಧಾರಕ್ಕೆ ಬಂದು ತಾವು ದುಬೈಗೆ ಸ್ಥಳಾಂತರವಾಗುತ್ತಿರುವುದಾಗಿ ಈ ಹಿಂದೆ ರಾಬಿನ್ ಉತ್ತಪ್ಪ ಹೇಳಿದ್ದರು.

Related Articles

Related image1
ಹುಡುಗಿಯರ ಬಗ್ಗೆ ಎಚ್ಚರ, ಆ ಇಬ್ಬರಂತೆ ಆಗಬೇಡ -ಸೂರ್ಯವಂಶಿಗೆ ರಾಬಿನ್ ಉತ್ತಪ್ಪ ವಾರ್ನಿಂಗ್
Related image2
2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಸೆಲೆಕ್ಟ್ ಮಾಡಿದ ರಾಬಿನ್ ಉತ್ತಪ್ಪ..! ಅರ್‌ಸಿಬಿಯಿಂದ ಇಬ್ಬರು, ಏಕೈಕ ಕನ್ನಡಿಗನಿಗೆ ಸ್ಥಾನ
36
ಬೆಂಗಳೂರು ಟ್ರಾಫಿಕ್‌ ಕಿರಿಕಿರಿಯಿಂದ ಬೆಂಗಳೂರು ತೊರೆದ ಉತ್ತಪ್ಪ
Image Credit : our own

ಬೆಂಗಳೂರು ಟ್ರಾಫಿಕ್‌ ಕಿರಿಕಿರಿಯಿಂದ ಬೆಂಗಳೂರು ತೊರೆದ ಉತ್ತಪ್ಪ

ಗಾರ್ಡನ್ ಸಿಟಿ, ಸಿಲಿಕಾನ್ ಸಿಟಿ ಎಂದೇ ಖ್ಯಾತವಾಗಿರುವ ಬೆಂಗಳೂರು ಇತ್ತೀಚಿಗಿನ ವರ್ಷಗಳಲ್ಲಿ ಹೆಚ್ಚು ಟ್ರಾಫಿಕ್ ಸಿಟಿ ಎನ್ನುವ ಕುಖ್ಯಾತಿಗೆ ಒಳಗಾಗಿದೆ. ಈ ವಿಚಾರವಾಗಿ ಪಾಡ್‌ಕಾಸ್ಟ್‌ವೊಂದರಲ್ಲಿ ಮಾತನಾಡಿದ್ದ ಉತ್ತಪ್ಪ, ನಾನು ನನ್ನ ಪ್ರೀತಿಯ ಬೆಂಗಳೂರನ್ನು ತೊರೆಯುತ್ತಿದ್ದೇನೆ. ಯಾಕಂದ್ರೆ ನನ್ನ ಮಕ್ಕಳು ಬೆಂಗಳೂರಿನ ಟ್ರಾಫಿಕ್‌ನಲ್ಲಿ ಅರ್ಧ ಆಯಸ್ಸು ಕಳೆಯುವುದನ್ನು ನಾನು ಬಯಸುವುದಿಲ್ಲ. ಇದೇ ನಾನು ಬೆಂಗಳೂರು ಬಿಟ್ಟು ಸ್ಥಳಾಂತರವಾಗಲು ಇರುವ ನೈಜ ಕಾರಣ ಎಂದಿದ್ದರು.

46
ಬಿಡಿಎ ಸೈಟ್‌ಗೆ ಉತ್ತಪ್ಪ ಮನವಿ
Image Credit : A S Ponnanna Social Media

ಬಿಡಿಎ ಸೈಟ್‌ಗೆ ಉತ್ತಪ್ಪ ಮನವಿ

ಇದು ಬೆಂಗಳೂರು ಟ್ರಾಫಿಕ್ ಬಗ್ಗೆ ಮತ್ತೊಮ್ಮೆ ಸೋಷಿಯಲ್ ಮೀಡಿಯಾಗಳಲ್ಲಿ ಚರ್ಚೆಯನ್ನು ಹುಟ್ಟುಹಾಕಿತ್ತು. ಇದೆಲ್ಲದರ ನಡುವೆ ಇಂದು ಕ್ರಿಕೆಟಿಗ ರಾಬಿನ್ ಉತ್ತಪ್ಪ, ಕರ್ನಾಟಕ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರನ್ನು ಭೇಟಿ ಮಾಡಿ, ತಮಗೆ ಬಿಡಿಎನಲ್ಲಿ ನಿವೇಶನ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

56
ಮಾಹಿತಿ ಹಂಚಿಕೊಂಡ ಎ ಎಸ್ ಪೊನ್ನಣ್ಣ
Image Credit : A S Ponnanna Social Media

ಮಾಹಿತಿ ಹಂಚಿಕೊಂಡ ಎ ಎಸ್ ಪೊನ್ನಣ್ಣ

ಈ ವಿಚಾರವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ ಎಸ್ಬ ಪೊನ್ನಣ್ಣ ಅವರು ತಮ್ಮ ಅಧಿಕೃತ ಎಕ್ಸ್‌ ಖಾತೆಯಲ್ಲಿ ಬರೆದುಕೊಂಡಿದ್ದಾರೆ. ರಾಬಿನ್ ಉತ್ತಪ್ಪನವರನ್ನು ಮಾನ್ಯ ಮುಖ್ಯಮಂತ್ರಿಗಳಾದ ಶ್ರೀ ಡಿಕೆ ಶಿವಕುಮಾರ್ ಅವರೊಂದಿಗೆ ಭೇಟಿ ಮಾಡಿಸಿದ ಸಂದರ್ಭ. ಈ ಸಂದರ್ಭದಲ್ಲಿ ಮಾಜಿ ಕ್ರಿಕೆಟಿಗ ತನಗೆ ಬಿಡಿಎ ನಿವೇಶನ ನೀಡುವಂತೆ ಮಾನ್ಯ ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿದಲಾಯಿತು ಎಂದು ಫೋಟೋ ಹಂಚಿಕೊಂಡಿದ್ದಾರೆ.

66
2006ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ರಾಬಿನ್ ಉತ್ತಪ್ಪ
Image Credit : Getty

2006ರಲ್ಲಿ ಟೀಂ ಇಂಡಿಯಾಗೆ ಪಾದಾರ್ಪಣೆ ಮಾಡಿದ್ದ ರಾಬಿನ್ ಉತ್ತಪ್ಪ

2006ರ ಏಪ್ರಿಲ್‌ನಲ್ಲಿ ಇಂಗ್ಲೆಂಡ್ ವಿರುದ್ದ ಭಾರತ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ರಾಬಿನ್ ಉತ್ತಪ್ಪ, ತಾವಾಡಿದ ಚೊಚ್ಚಲ ಅಂತಾರಾಷ್ಟ್ರೀಯ ಪಂದ್ಯದಲ್ಲೇ 86 ರನ್ ಸಿಡಿಸಿ ಗಮನ ಸೆಳೆದಿದ್ದರು. ಭಾರತ 2007ರ ಟಿ20 ವಿಶ್ವಕಪ್ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಉತ್ತಪ್ಪ, 2022ರ ಸೆಪ್ಟೆಂಬರ್‌ನಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದರು.

About the Author

NK
Naveen Kodase
ನವೀನ್ ಕೊಡಸೆ ಏಷ್ಯಾನೆಟ್ ಕನ್ನಡದಲ್ಲಿ ಮುಖ್ಯ ಉಪಸಂಪಾದಕ. ಕಳೆದ 9 ವರ್ಷಗಳಿಂದಲೂ ಮಾಧ್ಯಮ ಜಗತ್ತಿನಲ್ಲಿದ್ದೇನೆ. ಅಪ್ಪಟ ಮಲೆನಾಡಿನ ಹುಡುಗ. ಕುವೆಂಪು ವಿವಿಯ ಪತ್ರಿಕೋದ್ಯಮ ಪದವಿ ಇದೆ. ರಾಜ್‌ ನ್ಯೂಸ್‌ ಮೂಲಕ ಮಾಧ್ಯಮ ಲೋಕಕ್ಕೆ ಕಾಲಿಟ್ಟವನು. ಡಿಜಿಟಲ್‌ ಮಾಧ್ಯಮ ಲೋಕದಲ್ಲಿ ಪಳಗಿದರೂ, ಕಲಿಯೋದಿದೆ ಅಪಾರ. ಕ್ರೀಡೆ, ರಾಜಕೀಯ, ಸಾಹಿತ್ಯದಲ್ಲಿದೆ ಆಸಕ್ತಿ. ಕ್ರೀಡಾ ಸುದ್ದಿಯೇ ನನ್ನ ಜೀವಾಳ.
ಕ್ರಿಕೆಟ್
ಡಿ.ಕೆ. ಶಿವಕುಮಾರ್
ಟೀಮ್ ಇಂಡಿಯಾ

Latest Videos
Recommended Stories
Recommended image1
"ಆ ಒಂದು ರಾತ್ರಿ ನನ್ನನ್ನು ಬಿಕಾರಿಯನ್ನಾಗಿ ಮಾಡ್ತು!": 1.8 ಲಕ್ಷ ಸಂಬಳ ಪಡೆಯುವ ಬೆಂಗಳೂರು ಟೆಕ್ಕಿಯ ಕಣ್ಣೀರಿನ ಕಥೆ!
Recommended image2
ಅತ್ತಿಗೆ ಕಸಗುಡಿಸಿ ಬಂದಾಗ ಮನೇಲಿ ಮೈದುನ ಇಲ್ಲ, ₹10 ಲಕ್ಷ ಒಡವೆ ಇಲ್ಲ! ತಮ್ಮನ ಕೃತ್ಯ ಕೇಳಿ ಅಣ್ಣನೂ ಶಾಕ್!
Recommended image3
ಬರೋಬ್ಬರಿ ಈ 75 ದಿನ KSR ಬೆಂಗಳೂರು ನಿಲ್ದಾಣಕ್ಕೆ ಬರಲ್ಲ ಮೇಮು ರೈಲು; ಭಾಗಶಃ ರದ್ದು
Related Stories
Recommended image1
ಹುಡುಗಿಯರ ಬಗ್ಗೆ ಎಚ್ಚರ, ಆ ಇಬ್ಬರಂತೆ ಆಗಬೇಡ -ಸೂರ್ಯವಂಶಿಗೆ ರಾಬಿನ್ ಉತ್ತಪ್ಪ ವಾರ್ನಿಂಗ್
Recommended image2
2027ರ ಏಕದಿನ ವಿಶ್ವಕಪ್‌ಗೆ ಬಲಿಷ್ಠ ಟೀಂ ಇಂಡಿಯಾ ಸೆಲೆಕ್ಟ್ ಮಾಡಿದ ರಾಬಿನ್ ಉತ್ತಪ್ಪ..! ಅರ್‌ಸಿಬಿಯಿಂದ ಇಬ್ಬರು, ಏಕೈಕ ಕನ್ನಡಿಗನಿಗೆ ಸ್ಥಾನ
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved